ಪರಿಸರವನ್ನು ಸುಧಾರಿಸಲು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಹಸಿರು ಹೆಚ್ಚುತ್ತದೆ ಸೊರಬ: ಅರಣ್ಯ ನಾಡಿನ ಸಂಪತ್ತು, ಕಾಡು ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ ಎಂದು ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಬಿ. ಈಶ್ವರ ಹೇಳಿದರು. ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಗ್ರಾಮ ಸಲಹಾ ಸಮಿತಿ ನೇತೃತ್ವದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡ ಹಸಿರೀಕರಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಪರಿಸರವನ್ನು ಸುಧಾರಿಸಲು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಹಸಿರು ಹೆಚ್ಚುತ್ತದೆ. ಜೊತೆಗೆ ಉತ್ತಮ ಗಾಳಿ ದೊರೆಯುತ್ತದೆ. ವನ್ಯ ಜೀವಿಗಳು ಕಾಡಿನಲ್ಲಿ ಆಹಾರ ದೊರೆಯದೇ ನಾಡಿನಡೆ ವಲಸೆ ಬಂದು ಸಾವನ್ನಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಇದಲ್ಲದೇ, ರೈತರು ಬೆಳೆದ ಮಾವು, ಹಲಸು, ಅಡಕೆ, ತೆಂಗು, ಬಾಳೆ, ಜೋಳ ಸೇರಿದಂತೆ ಇತರೆ ಬೆಳೆಗಳ ಮೇಲೆ ಲಗ್ಗೆ ಇಡುತ್ತಿವೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರತಿ ವರ್ಷ ಐದು ನೂರು ಹಣ್ಣು ಬಿಡುವ ಸಸಿಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ. ಈ ಮೂಲಕ ವನ್ಯ ಸಂಪತ್ತನ್ನು ಹೆಚ್ಚಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು. ಉಪವಲಯ ಅರಣ್ಯಾಧಿಕಾರಿ ಜಿ. ರವೀಂದ್ರ ಮಾತನಾಡಿ, ಕಾಡಿನ ರಕ್ಷಣೆ ಮತ್ತು ವೃದ್ಧಿಗೆ ಸರ್ಕಾರ ಕೋಟ್ಯಂತರ ರೂ., ವ್ಯಯಿಸುತ್ತಿದೆ. ಇದರ ನಡುವೆ ಕೆರೆಕೊಪ್ಪ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸಸಿ ನೆಡಲು ಮುಂದೆ ಬಂದಿರುವುದು ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಪ್ರತಿ ಗ್ರಾಮದಲ್ಲಿ ನಡೆದರೆ ಉತ್ತಮ ಬೆಳವಣಿಗೆಯಾಗುತ್ತದೆ. ಮುಂದಿನ ಪೀಳಿಗೆಗೆ ಕಾಡನ್ನು ಉಳಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು. ಗ್ರಾಮ ಸಲಹಾ ಸಮಿತಿ ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷ ಮೂಡಿ ಕೃಷ್ಣಪ್ಪ, ಖಜಾಂಚಿ ಸಿದ್ದಪ್ಪ, ಅರಣ್ಯ ಸಮಿತಿ ಅಧ್ಯಕ್ಷ ಓಂಕಾರಪ್ಪ ಬೆಳ್ಳಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಶಾಂತಪ್ಪ, ಜೆ.ಎಸ್. ಸುರೇಶ್, ಪರಶುರಾಮ್, ಟೋಪಯ್ಯ, ದೇವೇಂದ್ರಪ್ಪ, ಯಂಕರಾಜ್, ಬಂಗಾರಪ್ಪ, ಶ್ರೀಕಾಂತ್, ಕೆ. ನಾಗೇಶ್, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜ್ ಸೇರಿದಂತೆ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
ಪರಿಸರವನ್ನು ಸುಧಾರಿಸಲು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಹಸಿರು ಹೆಚ್ಚುತ್ತದೆ ಸೊರಬ: ಅರಣ್ಯ ನಾಡಿನ ಸಂಪತ್ತು, ಕಾಡು ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ ಎಂದು ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಬಿ. ಈಶ್ವರ ಹೇಳಿದರು. ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಗ್ರಾಮ ಸಲಹಾ ಸಮಿತಿ ನೇತೃತ್ವದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡ ಹಸಿರೀಕರಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಪರಿಸರವನ್ನು ಸುಧಾರಿಸಲು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಹಸಿರು ಹೆಚ್ಚುತ್ತದೆ. ಜೊತೆಗೆ ಉತ್ತಮ ಗಾಳಿ ದೊರೆಯುತ್ತದೆ. ವನ್ಯ ಜೀವಿಗಳು ಕಾಡಿನಲ್ಲಿ ಆಹಾರ ದೊರೆಯದೇ ನಾಡಿನಡೆ ವಲಸೆ ಬಂದು ಸಾವನ್ನಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಇದಲ್ಲದೇ, ರೈತರು ಬೆಳೆದ ಮಾವು, ಹಲಸು, ಅಡಕೆ, ತೆಂಗು, ಬಾಳೆ, ಜೋಳ ಸೇರಿದಂತೆ ಇತರೆ ಬೆಳೆಗಳ ಮೇಲೆ ಲಗ್ಗೆ ಇಡುತ್ತಿವೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರತಿ ವರ್ಷ ಐದು ನೂರು ಹಣ್ಣು ಬಿಡುವ ಸಸಿಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ. ಈ ಮೂಲಕ ವನ್ಯ ಸಂಪತ್ತನ್ನು ಹೆಚ್ಚಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು. ಉಪವಲಯ ಅರಣ್ಯಾಧಿಕಾರಿ ಜಿ. ರವೀಂದ್ರ ಮಾತನಾಡಿ, ಕಾಡಿನ ರಕ್ಷಣೆ ಮತ್ತು ವೃದ್ಧಿಗೆ ಸರ್ಕಾರ ಕೋಟ್ಯಂತರ ರೂ., ವ್ಯಯಿಸುತ್ತಿದೆ. ಇದರ ನಡುವೆ ಕೆರೆಕೊಪ್ಪ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸಸಿ ನೆಡಲು ಮುಂದೆ ಬಂದಿರುವುದು ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಪ್ರತಿ ಗ್ರಾಮದಲ್ಲಿ ನಡೆದರೆ ಉತ್ತಮ ಬೆಳವಣಿಗೆಯಾಗುತ್ತದೆ. ಮುಂದಿನ ಪೀಳಿಗೆಗೆ ಕಾಡನ್ನು ಉಳಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು. ಗ್ರಾಮ ಸಲಹಾ ಸಮಿತಿ ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷ ಮೂಡಿ ಕೃಷ್ಣಪ್ಪ, ಖಜಾಂಚಿ ಸಿದ್ದಪ್ಪ, ಅರಣ್ಯ ಸಮಿತಿ ಅಧ್ಯಕ್ಷ ಓಂಕಾರಪ್ಪ ಬೆಳ್ಳಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಶಾಂತಪ್ಪ, ಜೆ.ಎಸ್. ಸುರೇಶ್, ಪರಶುರಾಮ್, ಟೋಪಯ್ಯ, ದೇವೇಂದ್ರಪ್ಪ, ಯಂಕರಾಜ್, ಬಂಗಾರಪ್ಪ, ಶ್ರೀಕಾಂತ್, ಕೆ. ನಾಗೇಶ್, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜ್ ಸೇರಿದಂತೆ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
- ಈದ್ ಮಿಲಾದ್ ಪ್ರಯುಕ್ತ ಸೂಳೆಬೈಲ್ನಲ್ಲಿ ಧಾರ್ಮಿಕ ಕಾರ್ಯಕ್ರಮ: ಮಕ್ಕಳಿಂದ ಕುರಾನ್ ಪಠಣ ಎ.ಪಿ.ಜೆ. ಅಬ್ದುಲ್ ಕಲಾಂ ನಗರದಲ್ಲಿ ಈದ್ ಮಿಲಾದ್ ಸಂಭ್ರಮ: ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಾಗಿ1
- ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು ಪ್ರಧಾನಿ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು1
- ಭದ್ರಾವತಿ : ಲಾಠಿ ಹಿಡಿಯುತ್ತಿದ್ದ ಕೈ ತುಂಬಾ ರಾಖಿಪ್ರಾಂಶುಪಾಲೆ ರೇಷ್ಮಾ ನೇತೃತ್ವದಲ್ಲಿ ಹಬ್ಬ ಆರಕ್ಷಕರ ಪಾದ ಸ್ಪರ್ಶಿಸುವ ಮೂಲಕ ಗೌರವ ನೀಡಿದ ಮಕ್ಕಳು ....... ಖಾಕಿ ಜತೆ ಟೈಮ್ಸ್ ಮಕ್ಕಳ ರಾಖಿ ... ಹೈಲೈಟ್ಸ್ * ,* ಪೆರೆಡೇ ಗ್ರೌಂಡ್ ನಲ್ಲಿ ರಕ್ಷಾ ಬಂಧನ *ಡಿವೈಎಸ್ಪಿ ರಾಥೋಡ್ ಗೆ ರಾಖಿ ಕಟ್ಟುವ ಮೂಲಕ ಚಾಲನೆ ..... ನಂದೀಶ್ ಭದ್ರಾವತಿ, ಶಿವಮೊಗ್ಗ ಅಲ್ಲಿ ಖಾಕಿ ಪಡೆ ನೆರೆದಿತ್ತು, ಪುಟ್ಟ ಮಕ್ಕಳು ತಾವೇ ತಯಾರಿಸಿದ ರಾಖಿ ಕಟ್ಟಿ, ಪಾದ ಸ್ಪರ್ಶಿಸುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಹೌದು..ನಗರದ ಮಿಲ್ಟ್ರೀ ಕ್ಯಾಂಪನ್ ಮಕ್ಕಳ ಜತೆ ಟೈಮ್ಸ್ ಶಾಲೆಯ ಮಕ್ಕಳು ಪ್ರಾಶುಂಪಾಲೆ ರೇಷ್ಮಾ ನೇತೃತ್ವದಲ್ಲಿ ನೆರೆದಿದ್ದವರಿಗೆ ರಾಖಿ ಕಟ್ಟಿದರು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ಟೈಮ್ಸ್ ಶಾಲೆ ಮುಖ್ಯ ಶಿಕ್ಷಕಿ ರೇಷ್ಮಾ ಆರತಿ ಎತ್ತಿ ರಾಖಿ ಕಟ್ಟುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳು ಇತರೆ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಆರ್ಶೀವಾದ ಪಡೆದರು. ಪ್ರಾಂಶುಪಾಲೆ ರೇಷ್ಮಾ ಮಾತನಾಡಿ, ರಾಖಿ ಹಬ್ಬ ವಿಶೇಷವಾದದ್ದು. ಇದು ಸಹೋದರಿಯರು ತಮ್ಮ ಸಹೋದರರಿಂದ ರಕ್ಷಣೆ ಬಯಸುವಂತಹ ಅರ್ಥಪೂರ್ಣವಾದ ದಿನ. ಪ್ರತಿ ದಿನ ಪೊಲೀಸರು ಹಾಗೂ ಯೋಧರು ಕರ್ತವ್ಯದಲ್ಲಿರುತ್ತಾರೆ. ಅವರು ಸಮಾಜದ ಹಾಗೂ ನಮ್ಮ ರಕ್ಷಣೆಗಾಗಿ ತ್ಯಾಗ ಮಾಡುತ್ತಾರೆ. ಎಂತಹ ಕಷ್ಟದ ಸನ್ನಿವೇಶದಲ್ಲಿಯೂ ಅವರು ರಕ್ಷಣೆ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಖಿ ಕಟ್ಟಿ ಸಹೋದರಿಯ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಆ ಮೂಲಕ ಕರ್ತವ್ಯವನ್ನೂ ನೆನಪಿಸಿದ್ದೇವೆ. ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಳವಾದ ಗೌರವವನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. "ನಮ್ಮ ಪೊಲೀಸ್ ಅಧಿಕಾರಿಗಳಿಗೆ ರಾಖಿಗಳನ್ನು ಕಟ್ಟುವ ಮೂಲಕ, ಪ್ರತಿದಿನ ನಮಗೆ ಗುರಾಣಿಯಾಗಿ ನಿಲ್ಲುವ, ತಮ್ಮ ಜೀವವನ್ನು ಪಣಕ್ಕಿಡುವ ನಮ್ಮ ಸಮಾಜದ ರಕ್ಷಕರನ್ನು ನಾವು ಗೌರವಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಡಿವೈಎಸ್ಪಿ ರಾಥೋಡ್ ಮಾತನಾಡಿ, ಟೈಮ್ಸ್ ಶಾಲೆ ಮಕ್ಕಳು ಈ ರೀತಿ ರಕ್ಷಾ ಬಂಧನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸಹೋದರ ಸಹೋದರಿಯರ ನಡುವೆ ಇರುವ ಸಂಬಂಧವನ್ನು ಈ ಹಬ್ಬ ಗಟ್ಟಿಗೊಳಿಸುತ್ತದೆ. ಒಂದು ಬಂಧವನ್ನು ರಾಖಿ ಬೆಸೆಯುತ್ತದೆ. ನಾವು ಆರಕ್ಷಕರಾಗಿದ್ದು, ಸಮಾಜದ ಎಲ್ಲ ಸಹೋದರಿಯರ ರಕ್ಷಣೆಗೆ ಕಟಿಬದ್ದವಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ರಾಖಿ ಹಬ್ಬ ಪೊಲೀಸರೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ... ಬಾಕ್ಸ್ ಮಕ್ಕಳೇ ತಯಾರಿಸಿದ ರಾಖಿ ರಕ್ಷಾ ಬಂಧನದ ನಿಮಿತ್ತ ಮಕ್ಕಳೇ ಮನೆಯಲ್ಲಿ ರಾಖಿ ತಯಾರಿ ಮಾಡಿದ್ದರು. ಪುಟ್ಟ ಕೈಗಳಿಂದ ಮಾಡಿದ ರಾಖಿ ಆರಕ್ಷಕರ ಕೈ ಸೇರಿದಾಗ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ..ಇನ್ನು ಆಕ್ಷಕರು ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಒಂದಿಷ್ಟು ಸಂತೋಷ ಪಟ್ಟರು. ... ಕಾಲಿಗೆ ಬಿದ್ದ ಮಕ್ಕಳು ಮೊದಲಿಗೆ ಪ್ರಾಂಶುಪಾಲೆ ರೇಷ್ಮಾ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದರು. ನಂತರ ಮಕ್ಕಳು ಕೂಡ ಪೊಲೀಸರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದರು. .... ಮಕ್ಕಳಿಂದ ತುಂಬಿದ ಪೆರೇಡ್ ಮೈದಾನ ಇಡೀ ಮೈದಾನ ಮಕ್ಕಳಿಂದ ತುಂಬಿತ್ತು.. ಆರಕ್ಷಕರು ಅವರನ್ನು ಎತ್ತಿಕೊಂಡು ಮುದ್ದಾಡಿದರು..ಚೆನ್ನಾಗಿ ಓದಬೇಕು, ನಮ್ಮ ಪೊಲೀಸ್ ಆಗಬೇಕೆಂದು ಹಿತನುಡಿಗಳನ್ನಾಡಿದರು. ಕೆಲವರು ಸೆಲ್ಫಿ ತೆಗೆಸಿಕೊಂಡು ತಮ್ಮ ಡಿಪಿಗೆ ಹಾಕಿಕೊಂಡರು. ... ಮಹಿಳಾ ಪೊಲೀಸ್ ಗೂ ರಾಖಿ ಕಟ್ಟಿದ ಮಕ್ಕಳು ಪೆರೆಡ್ ಮೈದಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ, ಮಕ್ಕಳು ಅವರಿಗೂ ರಾಖಿ ಕಟ್ಟಿದರು. ಅವರು ಕೂಡ ಮಕ್ಕಳಿಗೆ ಆರ್ಶೀವಾದ ನೀಡಿದರು.1
- ಮೊಳಕಾಲ್ಮೂರು ಶಾಸಕರ ವಿರುದ್ಧ ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ವಾಗ್ದಾಳಿ ಮೊಳಕಾಲ್ಮೂರು ಶಾಸಕರ ವಿರುದ್ಧ ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಹರಿಹಾಯ್ದಿದ್ದಾರೆ. ನಾಯಕನಹಟ್ಟಿ ಪಟ್ಟಣದಲ್ಲಿ ಅವರು ಮಾತನಾಡಿದ್ದು ನಾಯಕನಹಟ್ಟಿ ಸಂಡೂರು, ಮೊಳಕಾಲ್ಮೂರು ,ಕೂಡ್ಲಿಗಿ, ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಮೀಸಲಿಡಿ ಹಾಗೂ ಎಲ್ಲಾ ಕೆರೆಗಳಿಗೆ ನೀರು ತರುವಂತಹ ಕೆಲಸ ಕೆಲಸ ಮಾಡಿ ಹಾಗೂ ದನ ಕರೆಗಳಿಗೆ ಮೇವು ಕೊಡುವಂತ ಕೆಲಸ ಮಾಡಿ ಮಾಜಿ ಶಾಸಕ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬಹುದಾಗಿತ್ತಲ್ಲ ಯಾಕೆ ಬರಪಿಡಿತ ಪ್ರದೇಶ ಒಂದು ಘೋಷಣೆ ಮಾಡಲಿಲ್ಲ ಕಾಂಗ್ರೆಸ್ನವರು ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಆರೋಪ ಮಾಡಿದರು. ಮೊಳಕಾಲ್ಮೂರು ಶಾಸಕ ಗೋಪಾಲಕೃಷ್ಣರವರೆ ರಾಜ್ಯದಲ್ಲಿ ನಿಮ್ಮ ಸರ್ಕಾರ ಇದೆ ಯಲ್ಲ ಯಾಕೆ ಬರಗಾಲ ಪ್ರದೇಶವೆಂದು ಘೋಷಣೆ ಮಾಡಲಿಲ್ಲ. ಮೊಳಕಾಲ್ಮೂರು ಕ್ಷೇತ್ರವನ್ನು ಬರಪಿಡಿತ ಪ್ರದೇಶ ಒಂದು ಘೋಷಣೆ ಮಾಡದೆ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದಂತ ಕ್ಷೇತ್ರವಾಗಿದೆ ರೈತರು ತೀರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಅದೇಗೆಟ್ಟಿದೆ ಬೆಳೆ ಕೈಗೆ ಸಿಗುವುದು ಅನುಮಾನವಾಗಿದ್ದು ಈ ಹಿನ್ನೆಲೆ ಶಾಸಕರು ಆದಷ್ಟು ಬೇಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡುವಂತೆ ಆಗ್ರಹ ಮಾಡಿದ್ದಾರೆ.1
- ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ನಂದಿನಿ ಸಂಸ್ಥೆಯು ನೂರಾರು ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿಯೂ ರೈತರು ಹೈನುಗಾರಿಕೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಹಾಲಿನ ಮಹತ್ವ ಹಾಗೂ ಪೌಷ್ಟಿಕಾಂಶದ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ವಿತರಿಸುತ್ತಿದೆ. ನಂದಿನಿ ಉತ್ಪನ್ನಗಳ ಬಳಕೆ ಹೆಚ್ಚಿದಂತೆ ಹೈನುಗಾರಿಕೆ ಅವಲಂಬಿಸಿರುವ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ನಗರದ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಹೈನುಗಾರಿಕೆಯಿಂದ ಜೀವನೋಪಾಯ’ ವಿಷಯದ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಾತನಾಡಿ ಶಿವಮೊಗ್ಗ ಹಾಲು ಒಕ್ಕೂಟದ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಂದಿನಿ ಉತ್ಪನ್ನಗಳ ಪರಿಚಯ ಮಾಡಿಸುವುದು, ಹೈನುಗಾರಿಕೆಯಿಂದ ರೈತರಿಗೆ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದು ಹಾಗೂ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ವೇದಿಕೆ ಕಲ್ಪಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.ಇಂದು ಗ್ರಾಮೀಣ ಭಾಗದ ಅನೇಕ ರೈತ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಹಲವರಿಗೆ ಇದು ಪ್ರಮುಖ ಜೀವನೋಪಾಯವಾಗಿದೆ. ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ನಂದಿನಿ ಸಂಸ್ಥೆಯು ನೂರಾರು ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿಯೂ ರೈತರು ಹೈನುಗಾರಿಕೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಹಾಲಿನ ಮಹತ್ವ ಹಾಗೂ ಪೌಷ್ಟಿಕಾಂಶದ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ವಿತರಿಸುತ್ತಿದೆ. ನಂದಿನಿ ಉತ್ಪನ್ನಗಳ ಬಳಕೆ ಹೆಚ್ಚಿದಂತೆ ಹೈನುಗಾರಿಕೆ ಅವಲಂಬಿಸಿರುವ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು. ಚಿತ್ರಕಲಾ ಸ್ಪರ್ಧೆಯಲ್ಲಿ ಗ್ರಾಮಾಂತರ ಪ್ರೌಢಶಾಲೆ, ಪರಶುರಾಂಪುರದ ಈಶ್ವರಮ್ಮ ಜೆ. ಪ್ರಥಮ, ಆದರ್ಶ ಶಾಲೆಯ ದ್ರಾಕ್ಷಾಯಿಣಿ ಎಲ್. ದ್ವಿತೀಯ ಹಾಗೂ ಸಾಗರ್ ಎಂ.ಡಿ. ತೃತೀಯ ಸ್ಥಾನ ಪಡೆದು ಬಹುಮಾನ ಗಳಿಸಿದರು. .1
- ಸಂಜೆ 4:30 ಯಿಂದ ರಾತ್ರಿ 9:30ರ ವರೆಗೆ ನೂರಾರು ಲಾರಿಗಳು ರಸ್ತೆಗೆ ಅಡ್ಡ ದಿಡ್ಡಿ ನಿಲ್ಲಿಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳ ವಾಹನಗಳಿಗೆ ತೊಂದರೆ ಮಾಡಿದ್ದಾರೆ. ಸಂಜೆ 4:30 ಯಿಂದ ರಾತ್ರಿ 9:30ರ ವರೆಗೆ ನೂರಾರು ಲಾರಿಗಳು ರಸ್ತೆಗೆ ಅಡ್ಡ ದಿಡ್ಡಿ ನಿಲ್ಲಿಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳ ವಾಹನಗಳಿಗೆ ತೊಂದರೆ ಮಾಡಿದ್ದಾರೆ. ಪೊಲೀಸರು ಎಷ್ಟು ಬಾರಿ ಈ ರೀತಿ ರಸ್ತೆ ಅಡ್ಡ ಮಾಡಬೇಡಿ ಎಂದು ಹೇಳಿದರೂ ಸಹ ಲಾರಿ ಚಾಲಕರು ಇದೇ ರೀತಿಯ ಕಾನೂನು ಬಾಹಿರ ಕೃತ್ಯಗಳನ್ನು ಮಾಡಿಕೊಂಡೇ ಬರುತ್ತಿದ್ದಾರೆ. ಅಚಾತುರ್ಯ ಎಂದರೆ ನಾನು ಈಗ ಇಲ್ಲಿಯೇ ಸಾಯುತ್ತೇನೆಂದು ದೇಹದ ಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚುವ ನಾಟಕದ ಕೃತ್ಯ ಅಚ್ಚರಿ ಎನಿಸಿತು. ಸ್ಥಳದಲ್ಲಿರುವ ಪೊಲೀಸರು ಮತ್ತು ಸಾರ್ವಜನಿಕರ ಮೇಲೆ ಡೀಸೆಲ್ ಎರಚಿದರು. ಸ್ಥಳಕ್ಕೆ ಬಾಲಚಂದ್ರ ನಾಯಕ್ (ಸರ್ಕಲ್ ಇನ್ಸ್ಪೆಕ್ಟರ್) ಮತ್ತು ತಂಡ ಆಗಮಿಸಿ ಲಾರಿ ಚಾಲಕರನ್ನು ಅಲ್ಲಿಂದ ಖಾಲಿ ಮಾಡಿಸಿದರು. ರೈತರು ರೈಲ್ವೆ ಅಂಡರ್ ಪಾಸ್ ನಿಂದ ತಮ್ಮ ಪ್ರತಿಭಟನಾ ಸ್ಥಳಕ್ಕೆ ತೆರಳಿದರು. ಜನರು ಕಾಲಿ ಆಗುತ್ತಿದ್ದಂತೆ ಲಾರಿ ಚಾಲಕರು ಊರಿನ ಒಳಗಡೆ ಬರಲು ಪ್ರಾರಂಭಿಸಿದರು. ಆದರೆ ಗ್ರಾಮಸ್ಥರು ಲಾರಿಗಳನ್ನು ತಡೆದು ಕೇಂದ್ರ ಸರ್ಕಾರದ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನೀವುಗಳು ಜನ ವಸತಿ ಇರುವ ಹಳ್ಳಿಗಳ ರಸ್ತೆಯಲ್ಲಿ ಅದಿರು ತುಂಬಿದ ಲಾರಿಗಳು ಸಂಚಾರ ಮಾಡುವಂತಿಲ್ಲ ಎಂದು ಶಾಂತಿಯುತವಾಗಿ ಪ್ರತಿಭಟನಾ ಸ್ಥಳದಲ್ಲಿ ಕುಳಿತರು.1
- ಜಗಳೂರು ತಾಲ್ಲೂಕು ಬರಪಟ್ಟಿಗೆ ಸೇರಿಸಿ :ಬಿಜೆಪಿಯಿಂದ ಪ್ರತಿಭಟಿಸಿ ತಹಶಿಲ್ದಾರರಿಗೆ ಮನವಿ. ಜಗಳೂರು ತಾಲ್ಲೂಕು ಬರಪಟ್ಟಿಗೆ ಸೇರಿಸಿ : ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸರಕಾರಕ್ಕೆ ಆಗ್ರಹ. ಜಗಳೂರು ತಾಲ್ಲೂಕು ಅತೀ ಹಿಂದುಳಿದ ಪ್ರದೇಶವೆಂದು ಡಾ.ನಂಜುಡಪ್ಪ ಅವರ ವರಧಿಯಲ್ಲಿ ಇದೇ ಇದನ್ನು ಅರಿತಾದರೂ ಸರಕಾರದ ಅಧಿಕಾರಿಗಳು ಸ್ಥಳೀಯ ಶಾಸಕರು ಮೊದಲನೇ ಪಟ್ಟಿಯಲ್ಲಿ ಜಗಳೂರು ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಯಾಗಬೇಕಾಗಿತ್ತು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಶಾಸಕರಿಗೆ ಆಗ್ರಹ ಮಾಡಿದರು. ಜಗಳೂರು ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಹೋರಾಟ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಮತ್ತು ಸ್ಥಳೀಯ ಶಾಸಕರ ವಿರುದ್ಧವಾಗಿ ಹೇಳಿಕೆಗಳನ್ನು ಕೂಗೂತ್ತಾ ಸಾಗಿದ ಪ್ರತಿಭಟನೆಕಾರಾರು ಮಹಾತ್ಮಗಾಂಧಿ ವೃತ್ತದಿಂದ ರಸ್ತೆಯ ಮೂಲಕ ಸರಕಾರ ವಿರುದ್ಧ ಮತ್ತು ಸಚಿವರ ವಿರುದ್ಧ ಘೋಷಣೆಕೂಗಿದ ಕಾರ್ಯಕರ್ತರು ಮಹಾತ್ಮಗಾಂಧಿ ಬಸ್ ನಿಲ್ದಾಣದ ಹತ್ತಿರ ಟೈರಿಗೆ ಬೆಂಕಿ ಹಚ್ವಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಾಗಿದ ಪ್ರತಿಭಟನಾ ಮೆರವಣಿಗೆ ನೇರವಾಗಿತಹಶೀಲ್ದಾರ್ ಕಛೇರಿಗೆ ತೆರಳಿ ಸರಕಾರದ ವಿರುದ್ಧ ಕೆಲಕಾಲ ಘೋಷಣೆ ಕೂಗಿದರು. ಪ್ರತಿಭಟನೆಯನ್ನು ಉದ್ದೇಶಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಅತೀ ಹಿಂದುಳಿದ ತಾಲ್ಲೂಕು ಎಂದರೆ ಪ್ರಥಮವಾಗಿ ಜಗಳೂರು ತಾಲ್ಲೂಕಿಗೆ ಮೊದಲ ಆಧ್ಯತೆಯನ್ನು ನೀಡಬೇಕಾಗಿತ್ತು ಆದರೆ ಇಲ್ಲಿ ಅಧಿಕಾರಿಗಳ ಬೇಜವಬ್ದಾರಿ ತನವೊ ಅಥಾವ ಶಾಸಕರಿಗೆ ಮಾಹಿತಿಯಿಲ್ಲದಿರುವುದೊ ಗೊತ್ತಿಲ್ಲ ನಮ್ಮ ತಾಲ್ಲೂಕು ಪ್ರಥಮ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿರುವುದು ದುರಂತವೇ ಸರಿ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ರಾಜ್ಯ ವಿರೋಧ ಪಕ್ಷದ ನಾಯಕರನ್ನು ಕರೆಯಿಸಿ ಬರ ಅಧ್ಯಾಯನ ಮಾಡಿಸಿ ಶಾಸಕರು ಮಾಡುವ ಕೆಲಸ ವಿರೋಧ ಪಕ್ಷದವರು ಮಾಡಿದ್ದೇವೆ ಅಧಿಕಾರಿಗಳು ವರಧಿ ಕೊಡುವ ಮುಂಚೆಯೇ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರಾಜ್ಯ ಸರಕಾರಕ್ಕೆ ವರದಿ ನೀಡಿದ್ದರು ಎಂದರು. ರೈತ ಮುಖಂಡ ಸಿದ್ಧಯ್ಯನಕೋಟೆ ಭೀಮಣ್ಣ ಮಾತನಾಡಿ ರೈತರ ಬಗ್ಗೆ ಕಾಳಜಿ ಇರದ ತಹಶಿಲ್ದಾರರು ತಿಂಗಳಿಗೊಮ್ಮೆ ಸರಕಾರದ ಸಭೆಗೆ ಹಾಜರಾಗುತ್ತಿರಲ್ಲ ಅಂದು ಜಗಳೂರು ತಾಲ್ಲೂಕು ಮಳೆ ಮತ್ತುಬೆಳೆಯ ಬಗ್ಗೆ ವಿವರಣೆ ನೀಡುವುದಿಲ್ಲವೇ ಎಂದು ತಹಶಿಲ್ದಾರರ್ ರವರನ್ನು ಪ್ರಶ್ನೆಮಾಡಿದರು. ನಿಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ವಿ.ಎ.ಗಳು ಮತ್ತು ತೋಟಗಾರಿಕೆ,ಕೃಷಿ ಇಲಾಖೆ ಹಾಗೂ ಇನ್ನಿತರೆ ಮಳೆ ಮಾಪನ ಕೇಂದ್ರದವರು ಮಾಹಿತಿಯನ್ನು ನೀಡುವುದಿಲ್ಲವೇ ಎಂದು ಹೇರು ಧ್ವನಿಯಲ್ಲಿ ಪ್ರಶ್ನೆಮಾಡಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಂಡಲ ಅಧ್ಯಕ್ಷ ಎ.ಎಂ.ಮರುಳರಾಧ್ಯ ಮಾತನಾಡಿ ರಾಜ್ಯ ಸರಕಾರ ನಿನ್ನೆ ಬಿಡುಗಡೆ ಮಾಡಿದ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ನೋಡಿ ನಮ್ಮ ತಾಲ್ಲೂಕು ಪ್ರಥಮ ಪಟ್ಟಿಯಲ್ಲು ಇಲ್ಲ ಎಂದು ಅಸಮಧಾನ ಗೊಂಡು ದೂರವಾಣಿ ಮೂಲಕ ಮಾನ್ಯಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಜಗಳೂರು ತಾಲ್ಲೂಕು ಬರಪಟ್ಟಿಯಲ್ಲಿ ಇಲ್ಲ ಎಂದು ಪ್ರಶ್ನೆ ಮಾಡಿದೆ ? ಅದಕ್ಕೆ ಬಂದ ಉತ್ತರ ನಿಮ್ಮ ತಾಲ್ಲೂಕಿನಲ್ಲಿ ತೇವಾಂಶ ಹೆಚ್ಚಾಗಿ ಕಂಡು ಬಂದಿದೆ ಇದು ನಾವು ಮಾಡಿದ್ದಲ್ಲ ಸೆಟುಲೈಟ್ ಆಧಾರವಾಗಿಟ್ಟು ಕೊಂಡು ವರದಿಯನ್ನು ತಯಾರಿಸಲಾಗಿದೆ ಎಂಬ ಉತ್ತರವನ್ನು ನೀಡಿದರು. ಜಗಳೂರು ತಹಸೀಲ್ದಾರ್ ರವರಿಗೆ ವಿಚಾರಣೆ ಮಾಡಿದಾಗ ಅದೇ ಉತ್ತರ ಮುಂದುವರೆದಿದ್ದು ಇದಕ್ಕೆ ಬೇಸರಗೊಂಡ ನಾನು ನಮ್ಮ ತಾಲ್ಲೂಕಿನಲ್ಲಿ ಸೇವೆ ಮಾಡುವುದಕ್ಕೆ ಇಷ್ಟವಿಲ್ಲವೆಂದು ಬೇರೆಕಡೆ ಹೋಗಿ ಎಂದು ದೂರವಾಣಿಯಲ್ಲೇ ಉತ್ತರಿಸಿದೆ ಎಂದು. ಈ ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿಬಾಬು, ಬಿದರಕೆರೆ ರವಿ, ಜೆ.ವಿ.ನಾಗರಾಜ್, ಮರೇನಹಳ್ಳಿ ಕಾರ್ತಿಕ್, ರಘ ಜಾಗ್ವಾರ್ , ಲ್ಯಾಬ್ ಶಿವು, ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.2
- ಹಿಡಿಯಲು ಹರಸಾಹಸ, ಆದರೂ ಕೈಗೆ ಸಿಗದ ಮಂಗ!..., .................. ಬೈಕ್ ಸವಾರನಿಗೆ ಕಚ್ಚಿದ್ದ ಮಂಗನ ಅಟ್ಟಹಾಸ: ಹಳೆ ಮಂಡ್ಲಿಯಲ್ಲಿ ಮುಂದುವರಿದ ಆತಂಕ1