LPG Fuel Crisis: ಇಂಧನ ಬಿಕ್ಕಟ್ಟಿನಿಂದ ಲಾಕ್ಡೌನ್.. ಮೋದಿ ಸರ್ಕಾರದಿಂದಲೇ ಹೊರಬಿತ್ತು ಮಹತ್ವದ ಮಾಹಿತಿ LPG Fuel Crisis: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಭಾರತದಲ್ಲಿ ಎಲ್ಪಿಜಿ ಕೊರತೆ, ಪೆಟ್ರೋಲ್-ಡೀಸೆಲ್ ಅಲಭ್ಯತೆ ಕುರಿತ ನಿರಂತರ ವರದಿಗಳು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿವೆ. ಇಂಧನ ಬಿಕ್ಕಟ್ಟಿನಿಂದಾಗಿ ಭಾರತ ಮತ್ತೆ ಲಾಕ್ಡೌನ್ನತ್ತ ಮುಖ ಮಾಡಲಿದೆ ಎಂಬ ವದಂತಿಯಂತೂ ಜನರ ಚಿಂತೆ ಹೆಚ್ಚಿಸಿದೆ. ಏತನ್ಮಧ್ಯೆ, ಭಾರತವು ನಿಜವಾಗಿಯೂ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ? ಮತ್ತೆ ಲಾಕ್ಡೌನ್ನಂತಹ ಕಠಿಣ ದಿನಗಳತ್ತ ಮುಖಮಾಡಬೇಕಾಗುತ್ತಾ ಎಂಬ ಬಗ್ಗೆ ಮೋದಿ ಸರ್ಕಾರದಿಂದಲೇ ಮಹತ್ವದ ಮಾಹಿತಿ ಹೊರಬಿದ್ದಿದ್ದು ಊಹಾಪೋಹಗಳಿಗೆ ತೆರೆಎಳೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್.. ಭಾರತದಲ್ಲಿ ಇಂಧನ ಬಿಕ್ಕಟ್ಟು, ನಿಜವಾಗ್ಲೂ ಲಾಕ್ಡೌನ್ ಆಗುತ್ತಾ! ಮೋದಿ ಸರ್ಕಾರದಿಂದಲೇ ಹೊರಬಿತ್ತು ಮಹತ್ವದ ಮಾಹಿತಿ LPG Fuel Shortage News: ಕಳೆದ ಕೆಲವು ದಿನಗಳಿಂದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತೀಯ ಹೋಟೆಲ್ ಉದ್ಯಮ ಹಾಗೂ ಅಡುಗೆ ಮನೆಗಳ ಮೇಲೂ ಕಂಡು ಬರುತ್ತಿದೆ. ಅಲ್ಲದೆ, ಪೆಟ್ರೋಲ್-ಡೀಸಲ್ ಕೊರತೆಯಂತಹ ವರದಿಗಳ ನಡುವೆ ಭಾರತವು ಲಾಕ್ಡೌನ್ ಮೊರೆ ಹೋಗಬಹುದು ಎಂಬ ವದಂತಿಗಳು ಜನರ ನಿದ್ದೆಗೆಡಿಸಿದೆ. ಇದೀಗ ಈ ಕುರಿತಂತೆ ಮೋದಿ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದು, ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ. ʼಲಾಕ್ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳುʼ ಎನ್ನುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಭಾರತದಲ್ಲಿ ಲಾಕ್ಡೌನ್ ವದಂತಿಗಳು ಸುಳ್ಳು! ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ನಿರಂತರವಾಗಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ ಮತ್ತು ನಾವು ಸಕಾಲಿಕ, ಪೂರ್ವಭಾವಿ ಮತ್ತು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ. ಭಾರತದಲ್ಲಿ ಲಾಕ್ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳು. ಭಾರತ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇಂತಹ ವದಂತಿಗಳನ್ನು ಹರಡುವುದು, ಭೀತಿ ಸೃಷ್ಟಿಸುವ ಪ್ರಯತ್ನಗಳು ಬೇಜವಾಬ್ದಾರಿ ಮತ್ತು ಹಾನಿಕಾರಕವಾಗಿವೆ. ಅಂತಹ ಸಮಯದಲ್ಲಿ, ನಾವು ಶಾಂತವಾಗಿ, ಜವಾಬ್ದಾರಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವುದು ಮುಖ್ಯ ಎಂದವರು ಕರೆ ನೀಡಿದ್ದಾರೆ. ದೇಶೀಯ ಸಂಸ್ಕರಣಾಗಾರ ಉತ್ಪಾದನೆ 40 ಹೆಚ್ಚಳ.. ಎಲ್ಪಿಜಿ ಕೊರತೆಯಿಲ್ಲ! ಇದಕ್ಕೂ ಮೊದಲು ಗುರುವಾರ(ಮಾರ್ಚ್ 26) ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ್ದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ದೇಶದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲದ (LPG) ಕೊರತೆಯಿಲ್ಲ. ದೇಶೀಯ ಸಂಸ್ಕರಣಾಗಾರ ಉತ್ಪಾದನೆಯು ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.
LPG Fuel Crisis: ಇಂಧನ ಬಿಕ್ಕಟ್ಟಿನಿಂದ ಲಾಕ್ಡೌನ್.. ಮೋದಿ ಸರ್ಕಾರದಿಂದಲೇ ಹೊರಬಿತ್ತು ಮಹತ್ವದ ಮಾಹಿತಿ LPG Fuel Crisis: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಭಾರತದಲ್ಲಿ ಎಲ್ಪಿಜಿ ಕೊರತೆ, ಪೆಟ್ರೋಲ್-ಡೀಸೆಲ್ ಅಲಭ್ಯತೆ ಕುರಿತ ನಿರಂತರ ವರದಿಗಳು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿವೆ. ಇಂಧನ ಬಿಕ್ಕಟ್ಟಿನಿಂದಾಗಿ ಭಾರತ ಮತ್ತೆ ಲಾಕ್ಡೌನ್ನತ್ತ ಮುಖ ಮಾಡಲಿದೆ ಎಂಬ ವದಂತಿಯಂತೂ ಜನರ ಚಿಂತೆ ಹೆಚ್ಚಿಸಿದೆ. ಏತನ್ಮಧ್ಯೆ, ಭಾರತವು ನಿಜವಾಗಿಯೂ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ? ಮತ್ತೆ ಲಾಕ್ಡೌನ್ನಂತಹ ಕಠಿಣ ದಿನಗಳತ್ತ ಮುಖಮಾಡಬೇಕಾಗುತ್ತಾ ಎಂಬ ಬಗ್ಗೆ ಮೋದಿ ಸರ್ಕಾರದಿಂದಲೇ ಮಹತ್ವದ ಮಾಹಿತಿ ಹೊರಬಿದ್ದಿದ್ದು ಊಹಾಪೋಹಗಳಿಗೆ ತೆರೆಎಳೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್.. ಭಾರತದಲ್ಲಿ ಇಂಧನ ಬಿಕ್ಕಟ್ಟು, ನಿಜವಾಗ್ಲೂ ಲಾಕ್ಡೌನ್ ಆಗುತ್ತಾ! ಮೋದಿ ಸರ್ಕಾರದಿಂದಲೇ ಹೊರಬಿತ್ತು ಮಹತ್ವದ ಮಾಹಿತಿ LPG Fuel Shortage News: ಕಳೆದ ಕೆಲವು ದಿನಗಳಿಂದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತೀಯ ಹೋಟೆಲ್ ಉದ್ಯಮ ಹಾಗೂ ಅಡುಗೆ ಮನೆಗಳ ಮೇಲೂ ಕಂಡು ಬರುತ್ತಿದೆ. ಅಲ್ಲದೆ, ಪೆಟ್ರೋಲ್-ಡೀಸಲ್ ಕೊರತೆಯಂತಹ ವರದಿಗಳ ನಡುವೆ ಭಾರತವು ಲಾಕ್ಡೌನ್ ಮೊರೆ ಹೋಗಬಹುದು ಎಂಬ ವದಂತಿಗಳು ಜನರ ನಿದ್ದೆಗೆಡಿಸಿದೆ. ಇದೀಗ ಈ ಕುರಿತಂತೆ ಮೋದಿ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದು, ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ. ʼಲಾಕ್ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳುʼ ಎನ್ನುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಭಾರತದಲ್ಲಿ ಲಾಕ್ಡೌನ್ ವದಂತಿಗಳು ಸುಳ್ಳು! ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ನಿರಂತರವಾಗಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ ಮತ್ತು ನಾವು ಸಕಾಲಿಕ, ಪೂರ್ವಭಾವಿ ಮತ್ತು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ. ಭಾರತದಲ್ಲಿ ಲಾಕ್ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳು. ಭಾರತ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇಂತಹ ವದಂತಿಗಳನ್ನು ಹರಡುವುದು, ಭೀತಿ ಸೃಷ್ಟಿಸುವ ಪ್ರಯತ್ನಗಳು ಬೇಜವಾಬ್ದಾರಿ ಮತ್ತು ಹಾನಿಕಾರಕವಾಗಿವೆ. ಅಂತಹ ಸಮಯದಲ್ಲಿ, ನಾವು ಶಾಂತವಾಗಿ, ಜವಾಬ್ದಾರಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವುದು ಮುಖ್ಯ ಎಂದವರು ಕರೆ ನೀಡಿದ್ದಾರೆ. ದೇಶೀಯ ಸಂಸ್ಕರಣಾಗಾರ ಉತ್ಪಾದನೆ 40 ಹೆಚ್ಚಳ.. ಎಲ್ಪಿಜಿ ಕೊರತೆಯಿಲ್ಲ! ಇದಕ್ಕೂ ಮೊದಲು ಗುರುವಾರ(ಮಾರ್ಚ್ 26) ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ್ದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ದೇಶದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲದ (LPG) ಕೊರತೆಯಿಲ್ಲ. ದೇಶೀಯ ಸಂಸ್ಕರಣಾಗಾರ ಉತ್ಪಾದನೆಯು ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.
- ಗುಳೇದಗುಡ್ಡ: ಜೈನ್ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜೈನ್ರ 24ನೇ ತೀರ್ಥಂಕರಾದ ಭಗವಾನ ಮಹಾವೀರರು ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾಪುರುಷರು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು ಎಂದು ಉಪತಹಶೀಲ್ದಾರ ಜಿ.ವಿ ರಜಪೂತ್ ಹೇಳಿದರು. ಅವರು ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ ನೇ 2625 ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ ವರ್ದಮಾನ ಶ್ವೇತಾಂಬರ ಸ್ಥಾನಿಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಮಾತನಾಡಿ, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷರು. ಅಹಿಂಸೆ ಹಾಗೂ ಬದುಕು, ಬದುಕಲು ಬಿಡು ಎಂಬ ತತ್ವದ ಮೇಲೆ ನಿಂತಿರುವ ಜೈನ ಧರ್ಮದ ತತ್ವಸಿದ್ದಾಂತಗಳನ್ನು ಬೋಧಿಸಿದರು. ಮಹಾವೀರರ ಸತ್ಯ, ಅಹಿಂಸೆ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ, ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು. ಈ ಸಂದರ್ಭದಲ್ಲಿ ಮಹಾವೀರ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ನರೇಂದ್ರ ಗುಗಲೇ, ಸುರೇಶ ಕಠಾರಿಯಾ, ರಿಷಬ್ ಕಠಾರಿಯಾ, ವಿನಯ ಕಠಾರಿಯಾ, ವಿಕ್ರಮ ಕಠಾರಿಯಾ, ಜೈಮಲ್ ಶ್ರಮನಿ ಸಂಘದ ಅಧ್ಯಕ್ಷೆ ಪ್ರತಿಭಾ ಕಠಾರಿಯಾ, ಆಶಾ ಗುಂದೇಚಾ, ಸುನೀತಾ ಕಠಾರಿಯಾ, ನಂಬ್ರತಾ ಕಠಾರಿಯಾ, ವೀನಾಬಾಯಿ ಕಠಾರಿಯಾ, ಶಾಲು ಕಠಾರಿಯಾ, ಸಂಗೀತಾ ಗುಗಳೇ, ಸಿಬ್ಬಂದಿ ಎಂ.ಎಂ. ತುಪ್ಪದ ಮತ್ತಿತರರು ಇದ್ದರು.2
- Post by Iranna Tarnal1
- Post by @april14news1
- ಬಾಗಲಕೋಟ ಮತಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.4
- ಮುದ್ದೇಬಿಹಾಳದಲ್ಲಿ ಮಹಾವೀರ ಜಯಂತಿ ಜೈನ ಧರ್ಮದ ಎಲ್ಲಾ ಜೈನ ಮುಖಂಡರು ಮಹಾವೀರ ಸಗರಿ ಮತು ಎಲ್ಲಾ ಜೈನ ಧರ್ಮದವರು ಹಾಜರು ಇದ್ದರು.1
- ಯತ್ನಾಳ್ ನನ್ನ ಜೊತೆಗೆ ರಂಜಾನ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ರು ಎಂ ಬಿ ಪಾಟೀಲ್ ಹೇಳಿಕೆ1
- 🎤 ವರದಿಗಾರರ ನೇಮಕಾತಿ: Vande Bharat News----City Next News 24 7 ಕರ್ನಾಟಕದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವರದಿಗಾರರು (Reporters) ಬೇಕಾಗಿದ್ದಾರೆ! 📌 ಅರ್ಹತೆ: ಸುದ್ದಿ ಸಂಗ್ರಹಣೆಯಲ್ಲಿ ಆಸಕ್ತಿ. ಕನ್ನಡ ಭಾಷೆಯ ಸ್ಪಷ್ಟ ಜ್ಞಾನ. ಸ್ಮಾರ್ಟ್ಫೋನ್ ಬಳಸಿ ವರದಿ ಮಾಡುವ ಕಲೆ. 🚀 ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಲು ಇದು ಸುವರ್ಣಾವಕಾಶ! 📞 ಸಂಪರ್ಕಿಸಿ: [7411378783] 📩 WhatsApp: [7411378783] "ನೈಜ ಸುದ್ದಿಗಾಗಿ ನಮ್ಮೊಂದಿಗೆ ಕೈಜೋಡಿಸಿ" ಈ ಪಠ್ಯವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ಅಥವಾ ಫೇಸ್ಬುಕ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲು ಬಳಸಬಹುದು. ಇಲ್ಲಿ [ನಿಮ್ಮ ಫೋನ್ ಸಂಖ್ಯೆ] ಇರುವ ಜಾಗದಲ್ಲಿ ನಿಮ್ಮ ನಂಬರ್ ಹಾಕಲು ಮರೆಯಬೇಡಿ.1
- Post by Iranna Tarnal1