logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

7 hrs ago
PC
Public Coorg
Electrician Kushalanagar, Kodagu•
7 hrs ago
cab30abb-0741-4e9e-9d9f-2f37fc95eaf2
825964d1-bc86-4fc5-9cde-8348b54311db
c5438740-b27a-4eaa-873f-ed9274bc73fb
73bf0d67-1be4-4dca-8172-daf5fd6b0a5f

More news from Kodagu and nearby areas
  • 🙏🏻 ನಮ್ಮಲ್ಲಿ ಸೋಲಾರ್ ಹಾಟ್ ವಾಟರ್. UPS ಬೆಟ್ಟರಿ. ಸೋಲಾರ್ UPS. ಹೋಂ ಸೋಲಾರ್. ಕರೆಂಟ್ ಗಿಜಾರ್. ಗ್ಯಾಸ್ ಗಿಜಾರ್. ಸೋಲಾರ್ ಸ್ಟ್ರೀಟ್ ಲೈಟ್. ಚಿಮಣಿ. ಎಲ್ಲ ವನ್ನು ಸರ್ವಿಸ್ ಮಾಡಿ ಕೊಡಲಾಗುತದೆ. phone :-8088959949
    4
    🙏🏻 ನಮ್ಮಲ್ಲಿ   ಸೋಲಾರ್ ಹಾಟ್ ವಾಟರ್. UPS ಬೆಟ್ಟರಿ. ಸೋಲಾರ್ UPS. ಹೋಂ ಸೋಲಾರ್. ಕರೆಂಟ್ ಗಿಜಾರ್. ಗ್ಯಾಸ್ ಗಿಜಾರ್. ಸೋಲಾರ್ ಸ್ಟ್ರೀಟ್ ಲೈಟ್. ಚಿಮಣಿ. ಎಲ್ಲ ವನ್ನು ಸರ್ವಿಸ್ ಮಾಡಿ ಕೊಡಲಾಗುತದೆ.  phone :-8088959949
    PC
    Public Coorg
    Electrician Kushalanagar, Kodagu•
    17 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    3 hrs ago
  • STOP CONSUMING DRUGS AND SAVE OUR YOUNG GENERATION ITS NECESSARY
    1
    STOP CONSUMING DRUGS AND SAVE OUR YOUNG GENERATION ITS NECESSARY
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru, Karnataka•
    6 hrs ago
  • ಮಳವಳ್ಳಿ ಸುತ್ತೂರು ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳ ಅಗಮನ-ಪಟ್ಟಣಕ್ಕೆ ಸುತ್ತೂರು ಶ್ರೀಗಳ ಬೇಟಿ -ವೇದಿಕೆ ನಿರ್ಮಾಣದ ಅದಿಕಾರಿಗಳೊಂದಿಗೆ ಚರ್ಚೆ ಮಳವಳ್ಳಿ ಪಟ್ಟಣದಲ್ಲಿ ಡಿ.೧೬ ರಿಂದ ಡಿ .೨೨ ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ ನೇ ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳು ಅಗಮಿಸುವ ಹಿನ್ನೆಲೆಯಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ಪಟ್ಟಣಕ್ಕೆ ಅಗಮಿಸಿ ವೇದಿಕೆ ನಿರ್ಮಾಣದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು . ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದಲ್ಲಿರುವ ೩೩ ಎಕರೆ ಪುರಸಭೆ ಜಾಗದಲ್ಲಿ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು,ಈ ಜಯಂತಿ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಆಗಮಿಸುವುದರಿಂದ ವೇದಿಕೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಮೈಸೂರಿನ ಶರೀಫ್ ಮತ್ತು ಇಂಜಿನಿಯರ್ ತಂಡದೊAದಿಗೆ ಶ್ರೀಗಳು ವೇದಿಕೆ ನಿರ್ಮಾಣದ ನಕ್ಷೆ ವೀಕ್ಷಣೆ ಮಾಡಿ,ವೇದಿಕೆ ನಿರ್ಮಾಣದ ಬಗ್ಗೆ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಜಯಂತಿ ಮಹೋತ್ಸವದ ಸಂಚಾಲಕರಾದ ಪಿ.ಎಂ ಮಹದೇವವಸ್ವಾಮಿ ಮಾತನಾಡಿ ಡಿ.೧೬ ರಿಂದ ಡಿ ೨೨ ರವರೆಗೆ ಸುತ್ತೂರು ಜಯಂತಿ ಮಹೋತ್ಸವ ಜರುಗಲಿದೆ,ಜಯಂತಿ ಮಹೋತ್ಸವಕ್ಕೆ ಮಠಾಧೀಶರುಗಳು,ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು,ಕೇAದ್ರ ಸಚಿವರುಗಳು,ರಾಜ್ಯದ ಸಚಿವರುಗಳು,ಶಾಸಕರು, ಗಣ್ಯ ವ್ಯಕ್ತಿಗಳು ಅಗಮಿಸುವರು,ಡಿ. ೧೭ರಂದು ಬೆಳಗ್ಗೆ ೧೦:೩೦ ಗಂಟೆಗೆ ರಾಷ್ಟ್ರಪತಿಗಳು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು ಈ ಸಂದರ್ಭದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳು,ಆಲಮಟ್ಟಿ ಶ್ರೀಗಳು, ಜೆ ಎಸ್ ಎಸ್ ವಿದ್ಯಾ ಪೀಠದ ಕಾರ್ಯದರ್ಶಿಗಳಾದ ಎಸ್ ಮಂಜುನಾಥಸ್ವಾಮಿ, ಹಂಗ್ರಾಪುರ ಸ್ವಾಮೀಜಿಗಳು, ಪುರಸಭೆ ಮುಖ್ಯಾಧಿಕಾರಿ ನಾಗರತ್ನ,ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿದ್ಯಾಪೀಠದ ಅಧಿಕಾರಿಗಳು, ತಾಲೂಕಿನ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು
    1
    ಮಳವಳ್ಳಿ ಸುತ್ತೂರು ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳ ಅಗಮನ-ಪಟ್ಟಣಕ್ಕೆ ಸುತ್ತೂರು ಶ್ರೀಗಳ ಬೇಟಿ -ವೇದಿಕೆ ನಿರ್ಮಾಣದ ಅದಿಕಾರಿಗಳೊಂದಿಗೆ ಚರ್ಚೆ
ಮಳವಳ್ಳಿ ಪಟ್ಟಣದಲ್ಲಿ ಡಿ.೧೬ ರಿಂದ ಡಿ .೨೨ ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ ನೇ ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳು ಅಗಮಿಸುವ ಹಿನ್ನೆಲೆಯಲ್ಲಿ  ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ಪಟ್ಟಣಕ್ಕೆ ಅಗಮಿಸಿ ವೇದಿಕೆ ನಿರ್ಮಾಣದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು .
ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದಲ್ಲಿರುವ ೩೩ ಎಕರೆ ಪುರಸಭೆ ಜಾಗದಲ್ಲಿ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು,ಈ ಜಯಂತಿ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಆಗಮಿಸುವುದರಿಂದ ವೇದಿಕೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಮೈಸೂರಿನ ಶರೀಫ್ ಮತ್ತು ಇಂಜಿನಿಯರ್ ತಂಡದೊAದಿಗೆ ಶ್ರೀಗಳು ವೇದಿಕೆ ನಿರ್ಮಾಣದ ನಕ್ಷೆ ವೀಕ್ಷಣೆ ಮಾಡಿ,ವೇದಿಕೆ ನಿರ್ಮಾಣದ ಬಗ್ಗೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಜಯಂತಿ ಮಹೋತ್ಸವದ ಸಂಚಾಲಕರಾದ ಪಿ.ಎಂ ಮಹದೇವವಸ್ವಾಮಿ  ಮಾತನಾಡಿ ಡಿ.೧೬ ರಿಂದ ಡಿ ೨೨ ರವರೆಗೆ ಸುತ್ತೂರು ಜಯಂತಿ ಮಹೋತ್ಸವ ಜರುಗಲಿದೆ,ಜಯಂತಿ ಮಹೋತ್ಸವಕ್ಕೆ ಮಠಾಧೀಶರುಗಳು,ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು,ಕೇAದ್ರ ಸಚಿವರುಗಳು,ರಾಜ್ಯದ ಸಚಿವರುಗಳು,ಶಾಸಕರು, ಗಣ್ಯ ವ್ಯಕ್ತಿಗಳು ಅಗಮಿಸುವರು,ಡಿ. ೧೭ರಂದು ಬೆಳಗ್ಗೆ ೧೦:೩೦ ಗಂಟೆಗೆ ರಾಷ್ಟ್ರಪತಿಗಳು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು
ಈ ಸಂದರ್ಭದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳು,ಆಲಮಟ್ಟಿ ಶ್ರೀಗಳು, ಜೆ ಎಸ್ ಎಸ್ ವಿದ್ಯಾ ಪೀಠದ ಕಾರ್ಯದರ್ಶಿಗಳಾದ ಎಸ್ ಮಂಜುನಾಥಸ್ವಾಮಿ, ಹಂಗ್ರಾಪುರ ಸ್ವಾಮೀಜಿಗಳು, ಪುರಸಭೆ ಮುಖ್ಯಾಧಿಕಾರಿ ನಾಗರತ್ನ,ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿದ್ಯಾಪೀಠದ ಅಧಿಕಾರಿಗಳು, ತಾಲೂಕಿನ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    21 hrs ago
  • ಹನೂರು ಶಾಸಕರಾದ ಎಂ ಎಂ. ಆರ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಶಿಲ್ಪನಾಗ್ ಜೊತೆಗೂಡಿ ಕೊಳ್ಳೇಗಾಲ ತಾಲೂಕಿನ ನರೀಪುರ -ಸತ್ತೇಗಾಲ ಗ್ರಾಮಗಳ ಮಾರ್ಗ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 948 ರ ರಸ್ತೆ ಕಾಮಗಾರಿ ಹಾಗೂ ಮದ್ಯರಂಗನಾಥ ದೇವಾಲಯ ಜೀರ್ಣೋದ್ದಾರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಜರುಗುತ್ತಿದೆ, ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ನಡೆದಿಲ್ಲ ರಸ್ತೆ ಕಾಮಗಾರಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಾಮಗಾರಿ ನಡೆಸಿಲ್ಲ ನಾಲ್ಕು ರಸ್ತೆ ಕೂಡುವ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ರಸ್ತೆ ನರೀಪುರ ಮಹದೇಶ್ವರ ಬೆಟ್ಟ ಬೈಪಾಸ್ ಗಳಲ್ಲಿ ಸರ್ಕಲ್ ಹಾಗೂ ಸರ್ವಿಸ್ ರಸ್ತೆಗಳಿಗೆ ಅಂಡರ್ ಪಾಸ್ ಗಳನ್ನು ನಿರ್ಮಿಸಿದೆ ಕಾಮಗಾರಿಗಳನ್ನು ಮುಗಿಸಲಾಗಿದೆ ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ ಆದ್ದರಿಂದ ಟೆಂಡರ್ ಪಡೆದ ಕನ್ಸ್ಟ್ರಕ್ಷನ್ ನವರು ಇಂಜಿನಿಯರ್ ಗಳು ಜವಾಬ್ದಾರಿವಹಿಸಿ ಸುರಕ್ಷಿತ ಅಂಡರ್ ಪಾಸ್ ಗಳು ಹಾಗೂ ಸರ್ಕಲ್ ಗಳನ್ನು ನಿರ್ಮಿಸಬೇಕು ಮೂರು ರಸ್ತೆಗಳು ಕೂಡುವ ಕಡೆ ಸರ್ಕಲ್ ಗಳನ್ನು ನಿರ್ಮಿಸಿಲ್ಲ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಿಸದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗಿದೆ, ಆದ್ದರಿಂದ ಅಪಘಾತ ಸಂಭವಿಸುತ್ತಿವೆ ಆದ್ದರಿಂದ ಇದನ್ನು ತಡೆಗಟ್ಟಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು. ಇದೆ ವೇಳೆ ಸತ್ತೇಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತ ಮುಖಂಡರುಗಳ ಮನವಿಯಂತೆ ಹೆದ್ದಾರಿಗಳಲ್ಲಿ ವಿದ್ಯುತ್ ಲೈಟ್ ಗಳು, ಅಪಘಾತಗಳು ಜರುಗುವ ಸ್ಥಳಗಳಲ್ಲಿ ರೋಡ್ ಹಮ್ಸ್ ನಿರ್ಮಿಸಿ ಕೊಡಲಾಗುವುದು ಮತ್ತು ಈ ಮಾರ್ಗವಾಗಿ ಸ್ಥಳೀಯರ ರಸ್ತೆ ಸಂಚಾರಕ್ಕೆ ಅವಕಾಶವಾಗಲೆಂದು ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಸತ್ತೇಗಾಲ ಬೈಪಾಸ್ ಸೇತುವೆಯಿಂದ ಅಂಡರ್ ಪಾಸ್ ರಸ್ತೆ ನಿರ್ಮಿಸಿ ಉಗನಿಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಂಡರ್ ಪಾಸ್ ಸೇತುವೆ ನಿರ್ಮಾಣ ಮಾಡಲಾಗುವುದು. ಮತ್ತು ಹೆದ್ದಾರಿ ಉದ್ದಕ್ಕೂ, ವಿದ್ಯುತ್ ಬಲ್ಪ್ ಗಳನ್ನು ಅಳವಡಿಸಲು ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ಶಿಲ್ಪಾನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಹೆಚ್ ಚಾರುಲತಾ ಜೈನ್, ವಿಶ್ವ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಸತ್ತೇಗಾಲದ ಗ್ರಾಮಸ್ಥರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
    2
    ಹನೂರು ಶಾಸಕರಾದ ಎಂ ಎಂ. ಆರ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಶಿಲ್ಪನಾಗ್ ಜೊತೆಗೂಡಿ ಕೊಳ್ಳೇಗಾಲ ತಾಲೂಕಿನ ನರೀಪುರ -ಸತ್ತೇಗಾಲ ಗ್ರಾಮಗಳ ಮಾರ್ಗ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 948 ರ ರಸ್ತೆ ಕಾಮಗಾರಿ ಹಾಗೂ ಮದ್ಯರಂಗನಾಥ ದೇವಾಲಯ ಜೀರ್ಣೋದ್ದಾರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, 
ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಜರುಗುತ್ತಿದೆ, ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ನಡೆದಿಲ್ಲ ರಸ್ತೆ ಕಾಮಗಾರಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಾಮಗಾರಿ ನಡೆಸಿಲ್ಲ ನಾಲ್ಕು ರಸ್ತೆ ಕೂಡುವ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ರಸ್ತೆ ನರೀಪುರ ಮಹದೇಶ್ವರ ಬೆಟ್ಟ ಬೈಪಾಸ್ ಗಳಲ್ಲಿ ಸರ್ಕಲ್ ಹಾಗೂ ಸರ್ವಿಸ್ ರಸ್ತೆಗಳಿಗೆ ಅಂಡರ್ ಪಾಸ್ ಗಳನ್ನು ನಿರ್ಮಿಸಿದೆ ಕಾಮಗಾರಿಗಳನ್ನು ಮುಗಿಸಲಾಗಿದೆ ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ ಆದ್ದರಿಂದ ಟೆಂಡರ್ ಪಡೆದ ಕನ್ಸ್ಟ್ರಕ್ಷನ್ ನವರು ಇಂಜಿನಿಯರ್ ಗಳು ಜವಾಬ್ದಾರಿವಹಿಸಿ  ಸುರಕ್ಷಿತ ಅಂಡರ್ ಪಾಸ್ ಗಳು ಹಾಗೂ ಸರ್ಕಲ್ ಗಳನ್ನು ನಿರ್ಮಿಸಬೇಕು 
ಮೂರು ರಸ್ತೆಗಳು ಕೂಡುವ ಕಡೆ ಸರ್ಕಲ್ ಗಳನ್ನು ನಿರ್ಮಿಸಿಲ್ಲ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಿಸದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗಿದೆ, ಆದ್ದರಿಂದ ಅಪಘಾತ ಸಂಭವಿಸುತ್ತಿವೆ ಆದ್ದರಿಂದ  ಇದನ್ನು ತಡೆಗಟ್ಟಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು.
ಇದೆ ವೇಳೆ ಸತ್ತೇಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತ ಮುಖಂಡರುಗಳ ಮನವಿಯಂತೆ ಹೆದ್ದಾರಿಗಳಲ್ಲಿ ವಿದ್ಯುತ್ ಲೈಟ್ ಗಳು, ಅಪಘಾತಗಳು ಜರುಗುವ ಸ್ಥಳಗಳಲ್ಲಿ ರೋಡ್ ಹಮ್ಸ್ ನಿರ್ಮಿಸಿ ಕೊಡಲಾಗುವುದು ಮತ್ತು ಈ ಮಾರ್ಗವಾಗಿ ಸ್ಥಳೀಯರ ರಸ್ತೆ ಸಂಚಾರಕ್ಕೆ ಅವಕಾಶವಾಗಲೆಂದು ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಸತ್ತೇಗಾಲ ಬೈಪಾಸ್ ಸೇತುವೆಯಿಂದ ಅಂಡರ್ ಪಾಸ್ ರಸ್ತೆ ನಿರ್ಮಿಸಿ ಉಗನಿಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಂಡರ್ ಪಾಸ್ ಸೇತುವೆ ನಿರ್ಮಾಣ ಮಾಡಲಾಗುವುದು. ಮತ್ತು ಹೆದ್ದಾರಿ ಉದ್ದಕ್ಕೂ, ವಿದ್ಯುತ್ ಬಲ್ಪ್ ಗಳನ್ನು ಅಳವಡಿಸಲು ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ಶಿಲ್ಪಾನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಹೆಚ್ ಚಾರುಲತಾ ಜೈನ್, ವಿಶ್ವ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಸತ್ತೇಗಾಲದ ಗ್ರಾಮಸ್ಥರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
    user_ಎನ್. ನಟರಾಜ್
    ಎನ್. ನಟರಾಜ್
    Chamarajanagar, Chamarajanagara•
    20 hrs ago
  • ಹೂಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಮುಂದಾದ ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಡಾ. ಹೆಚ್. ಎಂ. ರಾಮಚಂದ್ರ (ಹೂಡಿ ಚಿನ್ನಿ) ರವರ ಮೇಲೆ ಹಲ್ಲೆ ನಡೆದಿರುವ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಮಾಹಿತಿಯ ಪ್ರಕಾರ, ಹೂಡಿ ಭಾಗದಲ್ಲಿ ಕೆಲ ಬಲಾಢ್ಯ ವ್ಯಕ್ತಿಗಳು ಸಾರ್ವಜನಿಕರಿಗೆ ನೀಡಲಾಗಿದ್ದ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ತಮ್ಮ ಖಾಸಗಿ ಜಾಗಗಳಂತೆ ಬಳಸಿಕೊಳ್ಳುತ್ತಿದ್ದು, ವ್ಯಾಪಾರಿಗಳನ್ನು ಹೊರಹಾಕುತ್ತಿದ್ದರೆಂದು ತಿಳಿದು ಬಂದಿದೆ. ಈ ಅನ್ಯಾಯವನ್ನು ಪ್ರಶ್ನಿಸಲು ಚಿನ್ನಿ ರವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಉಮಾಶಂಕರ್ ಎಂಬ ವ್ಯಕ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ. ಈ ಕುರಿತಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಚಿನ್ನಿ ರವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯ ನಂತರ ಹೂಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳು ಹಾಗೂ ಸ್ಥಳೀಯರು ಚಿನ್ನಿ ರವರಿಗೆ ಬೆಂಬಲ ಸೂಚಿಸಿದ್ದಾರೆ.
    1
    ಹೂಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಮುಂದಾದ
ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಡಾ. ಹೆಚ್. ಎಂ. ರಾಮಚಂದ್ರ (ಹೂಡಿ ಚಿನ್ನಿ) ರವರ ಮೇಲೆ ಹಲ್ಲೆ ನಡೆದಿರುವ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.
ಮಾಹಿತಿಯ ಪ್ರಕಾರ, ಹೂಡಿ ಭಾಗದಲ್ಲಿ ಕೆಲ ಬಲಾಢ್ಯ ವ್ಯಕ್ತಿಗಳು ಸಾರ್ವಜನಿಕರಿಗೆ ನೀಡಲಾಗಿದ್ದ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ತಮ್ಮ ಖಾಸಗಿ ಜಾಗಗಳಂತೆ ಬಳಸಿಕೊಳ್ಳುತ್ತಿದ್ದು, ವ್ಯಾಪಾರಿಗಳನ್ನು ಹೊರಹಾಕುತ್ತಿದ್ದರೆಂದು ತಿಳಿದು ಬಂದಿದೆ. ಈ ಅನ್ಯಾಯವನ್ನು ಪ್ರಶ್ನಿಸಲು ಚಿನ್ನಿ ರವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಉಮಾಶಂಕರ್ ಎಂಬ ವ್ಯಕ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಈ ಕುರಿತಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಚಿನ್ನಿ ರವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆಯ ನಂತರ ಹೂಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳು ಹಾಗೂ ಸ್ಥಳೀಯರು ಚಿನ್ನಿ ರವರಿಗೆ ಬೆಂಬಲ ಸೂಚಿಸಿದ್ದಾರೆ.
    user_SSK ಜನಪರ ಸುದ್ದಿ
    SSK ಜನಪರ ಸುದ್ದಿ
    Journalist Kolar, Karnataka•
    19 hrs ago
  • Post by Shiva Prasad
    1
    Post by Shiva Prasad
    user_Shiva Prasad
    Shiva Prasad
    Psychologist Hubballi, Dharwad•
    1 hr ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.