ಯುಗಾದಿ ಹಬ್ಬ ಇಳಕಲ್ಲ ಕಿಲ್ಲಾ ಓಣಿಯ ಹನುಮಾನ ಹೊಂಡದಲ್ಲಿ ಮಿಂದೆದ್ದ ಯುವಕರು ಇಳಕಲ್ಲ : ಯುಗಾದಿ ಹಬ್ಬದಂದು ನಗರದ ಕಿಲ್ಲಾ ಓಣಿಯ ಮಾರುತೇಶ್ವರ ಎದುರಿನ ಹೊಂಡದಲ್ಲಿ ಯುವಕರು ಮಿಂದೆದ್ದ ಹೊಸ ವರ್ಷ ಯುಗಾದಿ ಹಬ್ಬವನ್ನು ಗುರುವಾರ ಸ್ವಾಗತಿಸಿಕೊಂಡರು. ಸಾಯಂಕಾಲ ಮಾರುತೇಶ್ವರನಿಗೆ ವಿಶೇಷ ಪೂಜೆ ಜರುಗಿದ ನಂತರ, ಮಾದರ ಓಣಿಯ ದುರ್ಗಾದೇವಿ ದೇವಸ್ಥಾನದಿಂದ ಮಾರುತೇಶ್ವರನ ಪಾದರಕ್ಷೆಗಳನ್ನು ಹೊತ್ತುಕೊಂಡು ತಂದು ಹೊಂಡವನ್ನು ಸುತ್ತುವರೆದು ಪೂಜೆ ಸಲ್ಲಿಸಿದರು. ಎಂ.ಎಸ್.ಪಾಟೀಲ ಮನೆಯಿಂದ ಪೂಜಾ ಸಾಮಗ್ರಿಗಳನ್ನು ತಂದು ಹೊಂಡಗೆ ಪೂಜೆ ಸಲ್ಲಿಸಿ, ಬೇನಿನ ತಪ್ಪಲ್ಲ, ಮತ್ತು ಕೊಂಬರಿಯನ್ನು ಜಗ್ಗುವ ಮೂಲಕ ಯುವಕರು ತುಳುಕವ ಹೊಂಡದಲ್ಲಿ ಜಿಗಿದು ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದರು. ಹೊಂಡದ ಹತ್ತಿರ ಇರುವ ಯುವಕರನ್ನು ಎಳೆದು ತಂದು ಹೊಂಡದಲ್ಲಿ ಹಾಕಿ ಹೊಂಡದಲ್ಲಿ ಮಿಂದೆದ್ದು ಸಂಭ್ರಮವನ್ನು ಪಟ್ಟರು. ನೇತೃತ್ವವನ್ನು ಮ್ಯಾಳದಮನಿ ಹಾಗೂ ಮಾರುತಿ ಟ್ರಸ್ಟ್ ಅಧ್ಯಕ್ಷ ಮಹೇಶ ಪಾಟೀಲ, ಉಪಾಧ್ಯಕ್ಷ ಮಹಾಂತೇಶ ಮಡಿವಾಳರ, ಸಂಗಣ್ಣ ಮಾಗಿ, ಮಲ್ಲು ಭಮ್ಮಸಾಗರ, ವಿಜಯ ಪಾಟೀಲ, ಎಂ.ಬಿ.ಪಾಟೀಲ, ಮಲ್ಲು ಗದ್ದಿ, ಶಂಕರ ತೋಟದ ವಹಿಸಿದ್ದರು. ಈ ಸಮಯದಲ್ಲಿ ಕಿಲ್ಲಾ ಓಣಿಯ ಎಲ್ಲಾ ಸಮಾಜದ ಹಿರಿಯರು ಮುಖಂಡರು, ಯುವಕರು, ಮಹಿಳೆಯರು ಇದ್ದರು. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ
ಯುಗಾದಿ ಹಬ್ಬ ಇಳಕಲ್ಲ ಕಿಲ್ಲಾ ಓಣಿಯ ಹನುಮಾನ ಹೊಂಡದಲ್ಲಿ ಮಿಂದೆದ್ದ ಯುವಕರು ಇಳಕಲ್ಲ : ಯುಗಾದಿ ಹಬ್ಬದಂದು ನಗರದ ಕಿಲ್ಲಾ ಓಣಿಯ ಮಾರುತೇಶ್ವರ ಎದುರಿನ ಹೊಂಡದಲ್ಲಿ ಯುವಕರು ಮಿಂದೆದ್ದ ಹೊಸ ವರ್ಷ ಯುಗಾದಿ ಹಬ್ಬವನ್ನು ಗುರುವಾರ ಸ್ವಾಗತಿಸಿಕೊಂಡರು. ಸಾಯಂಕಾಲ ಮಾರುತೇಶ್ವರನಿಗೆ ವಿಶೇಷ ಪೂಜೆ ಜರುಗಿದ ನಂತರ, ಮಾದರ ಓಣಿಯ ದುರ್ಗಾದೇವಿ ದೇವಸ್ಥಾನದಿಂದ ಮಾರುತೇಶ್ವರನ ಪಾದರಕ್ಷೆಗಳನ್ನು ಹೊತ್ತುಕೊಂಡು ತಂದು ಹೊಂಡವನ್ನು ಸುತ್ತುವರೆದು ಪೂಜೆ ಸಲ್ಲಿಸಿದರು. ಎಂ.ಎಸ್.ಪಾಟೀಲ ಮನೆಯಿಂದ ಪೂಜಾ ಸಾಮಗ್ರಿಗಳನ್ನು ತಂದು ಹೊಂಡಗೆ ಪೂಜೆ ಸಲ್ಲಿಸಿ, ಬೇನಿನ ತಪ್ಪಲ್ಲ, ಮತ್ತು ಕೊಂಬರಿಯನ್ನು ಜಗ್ಗುವ ಮೂಲಕ ಯುವಕರು ತುಳುಕವ ಹೊಂಡದಲ್ಲಿ ಜಿಗಿದು ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದರು. ಹೊಂಡದ ಹತ್ತಿರ ಇರುವ ಯುವಕರನ್ನು ಎಳೆದು ತಂದು ಹೊಂಡದಲ್ಲಿ ಹಾಕಿ ಹೊಂಡದಲ್ಲಿ ಮಿಂದೆದ್ದು ಸಂಭ್ರಮವನ್ನು ಪಟ್ಟರು. ನೇತೃತ್ವವನ್ನು ಮ್ಯಾಳದಮನಿ ಹಾಗೂ ಮಾರುತಿ ಟ್ರಸ್ಟ್ ಅಧ್ಯಕ್ಷ ಮಹೇಶ ಪಾಟೀಲ, ಉಪಾಧ್ಯಕ್ಷ ಮಹಾಂತೇಶ ಮಡಿವಾಳರ, ಸಂಗಣ್ಣ ಮಾಗಿ, ಮಲ್ಲು ಭಮ್ಮಸಾಗರ, ವಿಜಯ ಪಾಟೀಲ, ಎಂ.ಬಿ.ಪಾಟೀಲ, ಮಲ್ಲು ಗದ್ದಿ, ಶಂಕರ ತೋಟದ ವಹಿಸಿದ್ದರು. ಈ ಸಮಯದಲ್ಲಿ ಕಿಲ್ಲಾ ಓಣಿಯ ಎಲ್ಲಾ ಸಮಾಜದ ಹಿರಿಯರು ಮುಖಂಡರು, ಯುವಕರು, ಮಹಿಳೆಯರು ಇದ್ದರು. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ
- ಬಾಗಲಕೋಟೆ ಉಪಚುನಾವಣೆಯ ನಿಮಿತ್ಯ ಬಂಜಾರ ಸಮುದಾಯದ 50 ಕ್ಕೂ ಹೆಚ್ಚು ತಾಯಂದಿರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರ ಕಾರ್ಯವನ್ನು ಮೆಚ್ಚಿ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು... ಈ ಸಂದರ್ಭದಲ್ಲಿ ಅಮಿನಗಡ ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು...2
- ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು. ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.1
- ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ ಜನ ಸೇರ್ತಾರೆ ಎಂದು ಹೇಳಿದರು1
- ಗುಳೇದಗುಡ್ಡ : ಏ.7 ರಂದು ನಡೆಯಲಿರುವ ಕೂಡಲಸಂಗಮದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ನಡೆಯಲಿರುವ ಹುಚ್ಚಯ್ಯ ರಥದ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ಭಜನೆಯೊಂದಿಗೆ ನಗರದ ರೇವಣಸಿದ್ದಪ್ಪ ದೇವರಮನಿ ಅವರ ಮನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೂಡಲಸಂಗಮಕ್ಕೆ ಶನಿವಾರ ಪಾದಯಾತ್ರೆಯ ಮೂಲಕ ತೆರಳಿತು. ಇದಕ್ಕೂ ಮೊದಲು ಕಳಸಕ್ಕೆ ಅಭಿಷೇಕ, ಪೂಜೆ ನಡೆಯಿತು. ಮೆರವಣಿಗೆಯಲ್ಲಿ ರೇವಣಸಿದ್ದಪ್ಪ ದೇವರಮನಿ, ಮುತ್ತಣ್ಣ ದೇವರಮನಿ, ವೀರುಪಾಕ್ಷ ದೇವರಮನಿ, ಈರಪ್ಪ ಗಡ್ಡಿ, ಶಿವಪ್ಪ ಶ್ಯಾವಿ, ಶೇಖರಪ್ಪ ರಂಜನಗಿ, ಬಿ.ಎನ್.ಪಾಗಿ, ಶರಣಪ್ಪ ಖಂಡಿ, ಈರಪ್ಪ ಬೆಟಗೇರಿ, ಮಹಾಗುಂಡಪ್ಪ ದೇವರಮನಿ, ಶ್ರೀನಿವಾಸ ರಂಜನಗಿ, ಸಂಗಮೇಶ ರಂಜನಗಿ, ಮಹೇಶ ಶ್ಯಾವಿ, ಈರಪ್ಪ ಗಂಜಾಳ, ಈರಣ್ಣ ಸುರಪುರ, ವಿಜಯ ಕಣವಿ, ಮೇಘರಾಜ ಸುರಪುರ, ಬಸವರಾಜ ಬುದರಿ, ಪ್ರಭುಕುಮಾರ ಬುದರಿ, ಬಸಪ್ಪ ಕೊಪ್ಪದ, ಅಮರೇಶ ಗೊಡನ್ನವರ, ಅಶ್ವೀನಿ ದೇವರಮನಿ, ಕೂಡ್ಲೆವ್ವ ರಂಜನಗಿ, ಗಿರಿಜಾ ರಂಜನಗಿ, ಅನ್ನವ್ವ ರಂಜನಗಿ, ಸಂಗಮ್ಮ ಕುಂಟೋಜಿ, ನೀಲಮ್ಮ ಕಲಕೇರಿ, ಶೋಭಾ ಹದ್ಲಿ ಮತ್ತಿತರರು ಇದ್ದರು.3
- ರಾಜ್ಯದಲ್ಲಿ ಭಾರೀ ಬಿಸಿಗಾಳಿ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ 29 ರಿಂದ ಮೇ 12 ರವರೆಗೆ ತಾಪಮಾನವು 45°C ರಿಂದ 55°C ವರೆಗೆ ಏರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅತ್ಯಾವಶ್ಯಕವಲ್ಲದ ಹೊರಗಿನ ಚಟುವಟಿಕೆಗಳನ್ನು ತಪ್ಪಿಸಿ. ಮುಖ್ಯ ಎಚ್ಚರಿಕೆಗಳು: ಉಸಿರಾಟ ತೊಂದರೆ / ತಲೆ ಸುತ್ತು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕಾರಿನಲ್ಲಿ ಲೈಟರ್, ಬ್ಯಾಟರಿ, ಪಾನೀಯಗಳು ಇಡಬೇಡಿ ಗ್ಯಾಸ್ ಸಿಲಿಂಡರ್ ಬಿಸಿಲಿನಲ್ಲಿ ಇರಿಸಬೇಡಿ ಸಾಕಷ್ಟು ನೀರು, ಮಜ್ಜಿಗೆ, ತಂಪು ಪಾನೀಯಗಳನ್ನು ಸೇವಿಸಿ ಹೆಚ್ಚುವರಿ ಎಚ್ಚರಿಕೆ: ಬಿಸಿಯಿಂದ ಹಾವು-ಚೇಳುಗಳು ಮನೆಗೆ ಬರಬಹುದಾದ ಸಾಧ್ಯತೆ ಇದೆ — ಜಾಗರೂಕರಾಗಿರಿ AC ಅನ್ನು 24–25°C ನಲ್ಲಿ ಇರಿಸಿ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ ಈ ಮಾಹಿತಿ ಬಹಳ ಮುಖ್ಯ! ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಕ್ಷಣ ಹಂಚಿಕೊಳ್ಳಿ1
- Snake rauf 99164034481
- ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.1
- ಇಳಕಲ್ಲ : ಗ್ಯಾಸ್ ಸಿಲಿಂಡರಗಾಗಿ ೧ ಮೀಟರ್ ಉದಕ್ಕೂ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ನಗರದ ಎಚ್.ಪಿ.ಗ್ಯಾಸ್ ಗೋಡಾನ್ ಮುಂದೆ ಶನಿವಾರ ಕಂಡು ಬಂದಿತು. ಅಮೇರಿಕಾ , ಇರಾನ್ , ಇಸ್ರೇಲ್ ದೇಶದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್ಪಿಜಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವದ್ದರಿAದ ರಾಜ್ಯದ ಜನರು ಹೈರಾಣಾಗಿದ್ದಾರೆ. ಎಲ್ಪಿಜಿ ಗ್ಯಾಸ್ ಅಭಾವದಿಂದಾಗಿ ಜನರು ಗ್ಯಾಸ್ ಗೋಡಾನ್ ಹತ್ತಿರ ದಿನನಿತ್ಯ ಸುಡುವ ಬಿಸಲಿನಲ್ಲಿ ನಿಂತು ಗ್ಯಾಸ್ ಗಾಗಿ ಕಾಯುತ್ತಿರುವ ಸನ್ನಿವೇಶ ನೋಡಿದರೇ ಹೃದಯ ಚುರು ಎನ್ನುತ್ತಿದೆ, ಸುಡುವ ಬಿಸಿನಲಿನಲ್ಲಿಯೇ ವಯೋವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಒಂದು ದಿನದ ಕೆಲಸವನ್ನು ಬಿಟ್ಟು ಸಿಲಿಂಡರ್ ಗಾಗಿಯೇ ಒಂದು ದಿನ ಕಾಯ್ದು ತೆಗೆದುಕೊಂಡು ಹೋಗುವಂತಹÀ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಹೊಡೆತದಿಂದ ಮುಚ್ಚುತ್ತಿರುವ ಹೋಟೆಲ್: ನಗರದಲ್ಲಿನ ದೊಡ್ಡ ದೊಡ್ಡ ಹೋಟೆಲ್ಗಳಿಗು ಗ್ಯಾಸ್ ಬಿಸಿ ತಟ್ಟಿದ್ದರಿಂದ ಕೆಲವೊಂದಿಷ್ಟು ಹೋಟೇಲ್ಗಳಲ್ಲಿ ತಿಂಡಿಗಳು ಸಿಗುತ್ತಿಲ್ಲ, ಕೆಲವೊಂದಿಷ್ಟು ಹೋಟೆಲ್ ಗಳು ಬಂದಾದರೇ, ಇನ್ನೋ ಕೆಲವೊಂದಿಷ್ಟು ಹೋಟೆಲನಲ್ಲಿ ಗ್ಯಾಸ್ ತೆಗೆದು ಸೌದ ಒಲೆಯಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. * ಇಂತಹ ಸುಡುವ ಬಿಸಲಿನಲ್ಲಿಯೇ ಗ್ಯಾಸ್ ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಗ್ಯಾಸ್ ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ವರ್ಗದವರು ಮಾಡಿಲ್ಲ - ಮಹಾಂತೇಶ ವಕಲಕುಂಟಿ, ಕರವೇ ಗೌರವಾಧ್ಯಕ್ಷ ಇಳಕಲ್ಲ.1