ಹುಟ್ಟೂರಿಗೆ ಕೀರ್ತಿ ತಂದ ಡಾ.ಸುಹಾಸ್....ಈತನ ಸಾಧನೆ ಇತರರಿಗೆ ಸ್ಪೂರ್ತಿ ಕಡೂರು: ಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ.ಆರ್ಟಿಮಿಸ್-_2 ಎಂ ಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು.ಈಗಾಗಲೇ ರೀಡ್ ವೈಸ್ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ ಹಿಂದೆ ಸಾವಿರಾರು ಜನರ ಶ್ರಮವಿದೆ. ಈ ಚಂದ್ರಯಾನ ಯೋಜನೆಗೂ ನಮ್ಮ ಜಿಲ್ಲೆಯ ಕಡೂರು ತಾಲ್ಲೂಕಿನ ಮಚ್ಚೇರಿಗೂ ಒಂದು ನಂಟಿದೆ. ಮಚ್ಚೇರಿ ಮೂಲದ ಯುವ ಸಾಧಕ ಡಾ.ಸುಹಾಸ್ ಇ.ಪಿ. ಚಂದ್ರಯಾನ ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಮೂಲಕ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ. ಸುಹಾಸ್ ಅವರ ತಂದೆ ಪ್ರೊ. ಎಂ.ಇ.ಈಶ್ವರಪ್ಪ ಮಚ್ಚೇರಿಯವರು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಲ್ಲಿ ನಿರ್ದೇಶಕರಾಗಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ನಿವೃತ್ತರಾದವರು. ತಾಯಿ ಆರ್.ಪ್ರಮೀಳ ಇಸ್ರೋದಲ್ಲಿ ಅಕೌಂಟ್ಸ್ ಆಫೀಸರ್. ತಂಗಿ ಸಿಂಚನಾ ಜರ್ಮನಿಯಲ್ಲಿ ಮರ್ಸಿಡಿಸ್ ಬೆಂಜ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಡಾ.ಸುಹಾಸ್ ಎಂಜಿನಿಯರಿಂಗ್ ಪದವಿ ಪಡೆದದ್ದು ಆರ್.ವಿ.ಕಾಲೇಜಿನಲ್ಲಿ. ಚಿನ್ನದ ಪದಕದೊಂದಿಗೆ ಮೊದಲರ್ಯಾಂಕ್ ಪಡೆದರು.ನಂತರ ಅಮೇರಿಕದ ಆರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ನ್ಯಾನೋ ಮೆಟೀರಿಯಲ್ ಸೈನ್ಸ್ ನಲ್ಲಿ ಎಂ.ಎಸ್.ಪದವಿ ಪಡೆದರು.ನಂತರ ಜಾನ್ ಹಾಪ್ಕಿನ್ಸ್ ವಿ.ವಿ.ಯಿಂದ ಪಿಎಚ್ಡಿ ಪದವಿ, ಬೋಸ್ಟನ್ ನಲ್ಲಿ ಪೋಸ್ಟ್ ಡಾಕ್ ಎಂಐಟಿ ಪದವಿ ಪಡೆದು ಇದೀಗ ಯೂನುವರ್ಸಿಟಿ ಆಫ್ ಉಟಾ ದಲ್ಲಿ ಸಹಾಯಕ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಸಮಯದಲ್ಲಿ ಅವರಿಗೆ ನಾಸಾದ ಮಾನವ ಸಹಿತ ಚಂದ್ರಯಾನದ ಯೋಜನೆ ಆರ್ಟಿಮಿಸ್-_2 ನಲ್ಲಿ ರೀಸರ್ಚ್ ಸೈನ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಮಹತ್ತರ ಅವಕಾಶ ಒದಗಿಬಂದಿದೆ. ಈ ಯೋಜನೆ ಅತ್ಯಂತ ಮಹತ್ವದ್ದು. ಅದಕ್ಕೆ ಕೈಜೋಡಿಸಿರುವ ಹಲವಾರು ವಿಜ್ಞಾನಿಗಳ ಪೈಕಿ ಕನ್ನಡಿಗ ವಿಜ್ಞಾನಿ ಡಾ.ಸುಹಾಸ್ ಸಹ ಸೇರಿರುವುದು ಹೆಮ್ಮೆಯ ಸಂಗತಿ. ನಾಸಾದ ಈ ಮಹತ್ತರ ಯೋಜನೆಯಲ್ಲಿ ತಮ್ಮ ಪಾತ್ರದ ಬಗ್ಗೆ ಡಾ.ಸುಹಾಸ್ ಅವರ ನೇರ ಸಂದರ್ಶನ ಅಲ್ಲಿನ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಹಿಂದೆ ಅಂತರ್ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಗ್ಯಾಸ್ಕೆಲ್ ಪದವಿ ಪಡೆದಿರುವ ಏಕೈಕ ಭಾರತೀಯ ಡಾ.ಮಚ್ಚೇರಿ ಎಸ್.ಕೇಶವನ್ ಅವರು ಮಚ್ಚೇರಿ ಗ್ರಾಮಕ್ಕೆ ಖ್ಯಾತಿ ತಂದಿತ್ತರು. ಮಹತ್ತರ ಸಾಧನೆಯೊಂದಿಗೆ ಹುಟ್ಟೂರು ಮಚ್ಚೇರಿ ಗ್ರಾಮಕ್ಕೆ ಮತ್ತಷ್ಟು ದೊಡ್ಡ ಕೀರ್ತಿ ತಂದಿದ್ದಾರೆ ಡಾ.ಸುಹಾಸ್...
ಹುಟ್ಟೂರಿಗೆ ಕೀರ್ತಿ ತಂದ ಡಾ.ಸುಹಾಸ್....ಈತನ ಸಾಧನೆ ಇತರರಿಗೆ ಸ್ಪೂರ್ತಿ ಕಡೂರು: ಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ.ಆರ್ಟಿಮಿಸ್-_2 ಎಂ ಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು.ಈಗಾಗಲೇ ರೀಡ್ ವೈಸ್ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ ಹಿಂದೆ ಸಾವಿರಾರು ಜನರ ಶ್ರಮವಿದೆ. ಈ ಚಂದ್ರಯಾನ ಯೋಜನೆಗೂ ನಮ್ಮ ಜಿಲ್ಲೆಯ ಕಡೂರು ತಾಲ್ಲೂಕಿನ ಮಚ್ಚೇರಿಗೂ ಒಂದು ನಂಟಿದೆ. ಮಚ್ಚೇರಿ ಮೂಲದ ಯುವ ಸಾಧಕ ಡಾ.ಸುಹಾಸ್ ಇ.ಪಿ. ಚಂದ್ರಯಾನ ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಮೂಲಕ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ. ಸುಹಾಸ್ ಅವರ ತಂದೆ ಪ್ರೊ. ಎಂ.ಇ.ಈಶ್ವರಪ್ಪ ಮಚ್ಚೇರಿಯವರು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಲ್ಲಿ ನಿರ್ದೇಶಕರಾಗಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ನಿವೃತ್ತರಾದವರು. ತಾಯಿ ಆರ್.ಪ್ರಮೀಳ ಇಸ್ರೋದಲ್ಲಿ ಅಕೌಂಟ್ಸ್ ಆಫೀಸರ್. ತಂಗಿ ಸಿಂಚನಾ ಜರ್ಮನಿಯಲ್ಲಿ ಮರ್ಸಿಡಿಸ್ ಬೆಂಜ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಡಾ.ಸುಹಾಸ್ ಎಂಜಿನಿಯರಿಂಗ್ ಪದವಿ ಪಡೆದದ್ದು ಆರ್.ವಿ.ಕಾಲೇಜಿನಲ್ಲಿ. ಚಿನ್ನದ ಪದಕದೊಂದಿಗೆ ಮೊದಲರ್ಯಾಂಕ್ ಪಡೆದರು.ನಂತರ ಅಮೇರಿಕದ ಆರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ನ್ಯಾನೋ ಮೆಟೀರಿಯಲ್ ಸೈನ್ಸ್ ನಲ್ಲಿ ಎಂ.ಎಸ್.ಪದವಿ ಪಡೆದರು.ನಂತರ ಜಾನ್ ಹಾಪ್ಕಿನ್ಸ್ ವಿ.ವಿ.ಯಿಂದ ಪಿಎಚ್ಡಿ ಪದವಿ, ಬೋಸ್ಟನ್ ನಲ್ಲಿ ಪೋಸ್ಟ್ ಡಾಕ್ ಎಂಐಟಿ ಪದವಿ ಪಡೆದು ಇದೀಗ ಯೂನುವರ್ಸಿಟಿ ಆಫ್ ಉಟಾ ದಲ್ಲಿ ಸಹಾಯಕ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಸಮಯದಲ್ಲಿ ಅವರಿಗೆ ನಾಸಾದ ಮಾನವ ಸಹಿತ ಚಂದ್ರಯಾನದ ಯೋಜನೆ ಆರ್ಟಿಮಿಸ್-_2 ನಲ್ಲಿ ರೀಸರ್ಚ್ ಸೈನ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಮಹತ್ತರ ಅವಕಾಶ ಒದಗಿಬಂದಿದೆ. ಈ ಯೋಜನೆ ಅತ್ಯಂತ ಮಹತ್ವದ್ದು. ಅದಕ್ಕೆ ಕೈಜೋಡಿಸಿರುವ ಹಲವಾರು ವಿಜ್ಞಾನಿಗಳ ಪೈಕಿ ಕನ್ನಡಿಗ ವಿಜ್ಞಾನಿ ಡಾ.ಸುಹಾಸ್ ಸಹ ಸೇರಿರುವುದು ಹೆಮ್ಮೆಯ ಸಂಗತಿ. ನಾಸಾದ ಈ ಮಹತ್ತರ ಯೋಜನೆಯಲ್ಲಿ ತಮ್ಮ ಪಾತ್ರದ ಬಗ್ಗೆ ಡಾ.ಸುಹಾಸ್ ಅವರ ನೇರ ಸಂದರ್ಶನ ಅಲ್ಲಿನ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಹಿಂದೆ ಅಂತರ್ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಗ್ಯಾಸ್ಕೆಲ್ ಪದವಿ ಪಡೆದಿರುವ ಏಕೈಕ ಭಾರತೀಯ ಡಾ.ಮಚ್ಚೇರಿ ಎಸ್.ಕೇಶವನ್ ಅವರು ಮಚ್ಚೇರಿ ಗ್ರಾಮಕ್ಕೆ ಖ್ಯಾತಿ ತಂದಿತ್ತರು. ಮಹತ್ತರ ಸಾಧನೆಯೊಂದಿಗೆ ಹುಟ್ಟೂರು ಮಚ್ಚೇರಿ ಗ್ರಾಮಕ್ಕೆ ಮತ್ತಷ್ಟು ದೊಡ್ಡ ಕೀರ್ತಿ ತಂದಿದ್ದಾರೆ ಡಾ.ಸುಹಾಸ್...
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ಶಿವಮೊಗ್ಗ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ನಗರದ ಮಂಜುನಾಥ್ ರವರನ್ನು ಬೆಂಗಳೂರಿನ ಸ್ವಪ್ನ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ಈ ಪ್ರಶಸ್ತಿ ಜೀವಮಾನದ 70ನೇ ರಾಜ್ಯ ಪ್ರಶಸ್ತಿಯಾಗಿದೆ ಎಂದು ಅಪೇಕ್ಷಾ ಮಂಜುನಾಥ್ ತಿಳಿಸಿದರು.1
- ಹೊಳಲ್ಕೆರೆ ಪಟ್ಟಣದ ಇಂಡೇನ್ ಏಜೆನ್ಸಿಯ ಗ್ರಾಹಕರು ಒಂದು ತಿಂಗಳ ಹಿಂದೆ ಗ್ಯಾಸ್ ಬುಕ್ ಮಾಡಿದರು ಸಹ ಏಜೆನ್ಸಿ ಅವರು ಗ್ರಾಮಗಳಿಗೆ ತೆರಳಿ ಸಿಲಿಂಡರ್ ಗಳನ್ನು ನೀಡುತ್ತಿಲ್ಲ, ದಿನನಿತ್ಯ ಹೊಳಲ್ಕೆರೆ ತಾಲೂಕಿನ ಗಡಿಭಾಗದ ಸಾಸಲುಹಳ್ಳ, ರಾಮೇನಹಳ್ಳಿ, ತುಪ್ಪದಹಳ್ಳಿ, ರಾಮಘಟ್ಟ,ಕೆಂಚಾಪುರ,ಬಿ,ಜಿ ಹಳ್ಳಿ,ತಾಳ್ಯ, ಅಂದನೂರು, ರಾಮಗಿರಿ, ಟಿ ,ನೂಲೆನೂರು, ಲಿಂಗದಹಳ್ಳಿ, ಹೊಳಲ್ಕೆರೆ ಪಟ್ಟಣ ಹೊರಕೆದೇವಪುರ,ಎಲ್ಲಾ ಗ್ರಾಮಗಳಿಂದ ಗ್ರಾಹಕರು ಅಡುಗೆಗೆ ಸಿಲಿಂಡರ್ ಇಲ್ಲದೇ ಅಖಿಲ್ ಇಂಡಿಯನ್ ಏಜೆನ್ಸಿ ಆಫೀಸ್ ಮುಂದೆ ಬರುತ್ತಿದ್ದಾರೆ.1
- Post by Suresh Belagere1
- ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಿರುವ ಹಿನ್ನೆಲೆ, ದಾವಣಗೆರೆಯಲ್ಲಿ ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು ಸ್ಪಷ್ಟನೆ ನೀಡಿದರು. ಸ್ವಾಮೀಜಿಗಳು ಸಮಾಜದ ಹಿರಿಯರಿಗೆ ಗೌರವ ನೀಡುತ್ತಿರಲಿಲ್ಲ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದರು. ಸಮಾಜ ಸಂಘಟನೆ ಕಾರ್ಯಗಳನ್ನೂ ಅವರು ಸಮರ್ಪಕವಾಗಿ ನಡೆಸುತ್ತಿರಲಿಲ್ಲ ಎಂದು ಹೇಳಿದರು. ಇದಕ್ಕೂ ಮೊದಲು ಸ್ವಾಮೀಜಿಗಳಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಅವರು ಯಾವುದೇ ಬದಲಾವಣೆ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು. ಅವಾಚ್ಯ ಶಬ್ದಗಳನ್ನು ಬಳಸುವ ವ್ಯಕ್ತಿಯನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುವುದು ಸರಿಯಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಇದಲ್ಲದೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಈಗ ಲೆಕ್ಕ ಕೇಳುವ ನೆಪದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಾವಿ ಬೆಟ್ಟಪ್ಪ ಆರೋಪಿಸಿದರು.1
- 135 TH BIRTH ANNIVERSARY OF DR. BR AMBEDKAR SAHEB BY KARNATAKA RASHTRA SAMITI PAKSHA1
- *ಭಾರತ ನಲ್ಲಿ ವೈರಲ್*1
- ಚಳ್ಳಕೆರೆ ನಗರದಲ್ಲಿ ಕಬ್ಬಿಣದ ಅದಿರು ಸಾಗಣೆ ಲಾಲಗಳಿಂದ ಉಂಟಾಗುತ್ತಿರುವ ಧೂಳು ಮತ್ತು ರಸ್ತೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಕರ್ನಾಟಕ ರಕ್ಷಣಾ ವೇಧಿಕೆ ಚಳ್ಳಕೆರೆ ಘಟಕದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಿಂದ ಹೆಗ್ಡೆರೆ ಪಾಗದಲ್ಲಿರುವ ಕಬ್ಬಿಣದ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಸಾಗಿಸುವ ನೂರಾರು ಟಿಪ್ಪರ್ ಲಾರಿಗಳು ಪ್ರತಿದಿನ ಸಂಚಣಸುತ್ತಿವೆ. ಆದರೆ ಈ ಲಾದಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅದಿರನ್ನು ಸಾಗಿಸುತ್ತಿರುವುದರಿಂದ ನಗರದ ಬೆಂಗಳೂರು ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಂಪು ಧೂಳು ಎಳುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.1