ಮೆದುಳಿನ ಆರೋಗ್ಯಕ್ಕೆ ಉತ್ತಮ ಜೀವನಶೈಲಿ ಅಗತ್ಯ : ಡಾ. ಎಂ.ಬಿ ಪಾಟೀಲ ಗುಳೇದಗುಡ್ಡ: ಮೆದುಳು ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನಿರ್ವಹಿಸಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಹೇಳಿದರು. ಪಟ್ಟಣದ ಆರೋಗ್ಯಾಧಿಕಾರಿಗಳ ತಾಲೂಕಾ ಕಚೇರಿಯ ಸಭಾಭವನದಲ್ಲಿ ಶುಕ್ರವಾರ 'ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ'ದ ಕುರಿತು ತಾಲೂಕಾ ಮಟ್ಟದಲ್ಲಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ಬಸವರಾಜ ಹೂಗಾರ ತರಬೇತಿ ನೀಡಿ, ಮೆದುಳು ಸಂಬಂಧಿ ರೋಗಗಳಾದ ಪಾರ್ಶ ವಾಯು, ತಲೆನೋವು, ಅಪಸ್ಮಾರ ಹಾಗೂ ಮರೆವಿನ ಕಾಯಿಲೆಗಳ ಲಕ್ಷಣಗಳು ಹಾಗೂ ತಡೆಗಟ್ಟುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳಾದ ದೈಹಿಕ ಚಟುವಟಿಕೆ ಆರೋಗ್ಯಕರ ಹವ್ಯಾಸಗಳು, ಯೋಗ ಮತ್ತು ಧ್ಯಾನ, ಸಂಘ ಜೀವಿಯಾಗುವದು, ಸಾಕಷ್ಟು ನಿದ್ರೆಯಿಂದ ಮೆದುಳು ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಬಾದಾಮಿ ತಾಲೂಕಾ ಆಸ್ಪತ್ರೆ ದಂತ ತಜ್ಞ ವೈದ್ಯ ಡಾ.ಜಯಂತ ರಾಷ್ಟ್ರೀಯ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್.ಮಹಾಲಿಂಗಪುರ ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಆಶಾ ಕಿರಣ, ಸ್ವಯಂ ಗಣತಿ ಬಗ್ಗೆ ಮಾತನಾಡಿದರು. ಆಶಾ ಮೆಂಟರ್ ಲಕ್ಷ್ಮೀ ಡಬಗಲ್, ಎಲ್ ಎಚ್ ಗೋಪಾಲಗೌಡರ, ಸೇರಿದಂತೆ ಬಾದಾಮಿ ಹಾಗೂ ಗುಳೇದಗುಡ್ಡ ಹಾಜರಿದ್ದರು. ಸ್ವಾಗತಿಸಿದರು. ಎಂ.ಎಸ್. ಅಂಗಡಿ ತಾಲೂಕಾ ಆಶಾ ಕಾರ್ಯಕರ್ತೆಯರು ಆರ್.ಬಿ.ಅಂಬಿಗರ ವಂದಿಸಿದರು.
ಮೆದುಳಿನ ಆರೋಗ್ಯಕ್ಕೆ ಉತ್ತಮ ಜೀವನಶೈಲಿ ಅಗತ್ಯ : ಡಾ. ಎಂ.ಬಿ ಪಾಟೀಲ ಗುಳೇದಗುಡ್ಡ: ಮೆದುಳು ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನಿರ್ವಹಿಸಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಹೇಳಿದರು. ಪಟ್ಟಣದ ಆರೋಗ್ಯಾಧಿಕಾರಿಗಳ ತಾಲೂಕಾ ಕಚೇರಿಯ ಸಭಾಭವನದಲ್ಲಿ ಶುಕ್ರವಾರ 'ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ'ದ ಕುರಿತು ತಾಲೂಕಾ ಮಟ್ಟದಲ್ಲಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ಬಸವರಾಜ ಹೂಗಾರ ತರಬೇತಿ ನೀಡಿ, ಮೆದುಳು ಸಂಬಂಧಿ ರೋಗಗಳಾದ ಪಾರ್ಶ ವಾಯು, ತಲೆನೋವು, ಅಪಸ್ಮಾರ ಹಾಗೂ ಮರೆವಿನ ಕಾಯಿಲೆಗಳ ಲಕ್ಷಣಗಳು ಹಾಗೂ ತಡೆಗಟ್ಟುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ
ಹಾಗೂ ಮುಂಜಾಗ್ರತಾ ಕ್ರಮಗಳಾದ ದೈಹಿಕ ಚಟುವಟಿಕೆ ಆರೋಗ್ಯಕರ ಹವ್ಯಾಸಗಳು, ಯೋಗ ಮತ್ತು ಧ್ಯಾನ, ಸಂಘ ಜೀವಿಯಾಗುವದು, ಸಾಕಷ್ಟು ನಿದ್ರೆಯಿಂದ ಮೆದುಳು ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಬಾದಾಮಿ ತಾಲೂಕಾ ಆಸ್ಪತ್ರೆ ದಂತ ತಜ್ಞ ವೈದ್ಯ ಡಾ.ಜಯಂತ ರಾಷ್ಟ್ರೀಯ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್.ಮಹಾಲಿಂಗಪುರ ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಆಶಾ ಕಿರಣ, ಸ್ವಯಂ ಗಣತಿ ಬಗ್ಗೆ ಮಾತನಾಡಿದರು. ಆಶಾ ಮೆಂಟರ್ ಲಕ್ಷ್ಮೀ ಡಬಗಲ್, ಎಲ್ ಎಚ್ ಗೋಪಾಲಗೌಡರ, ಸೇರಿದಂತೆ ಬಾದಾಮಿ ಹಾಗೂ ಗುಳೇದಗುಡ್ಡ ಹಾಜರಿದ್ದರು. ಸ್ವಾಗತಿಸಿದರು. ಎಂ.ಎಸ್. ಅಂಗಡಿ ತಾಲೂಕಾ ಆಶಾ ಕಾರ್ಯಕರ್ತೆಯರು ಆರ್.ಬಿ.ಅಂಬಿಗರ ವಂದಿಸಿದರು.
- ಬಸ್ ನಿಲ್ದಾಣದ ಹತ್ತಿರ ತಂಪಾದ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ್ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವದ ನಿಮಿತ್ತವಾಗಿ ಸತತ 10ನೇ ವರ್ಷದಿಂದ ಸೇವೆ ಮಾಡುತ್ತಿರುವ ನಗರದ ಸಮಾಜಸೇವಕ ರಿಯಾಜ್ ಮಕಾಂದರ ಸೇವೆಯ ಕುಡಿಯುವ ನೀರಿನ ಅರವಟ್ಟಿಗೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು.1
- ಇಳಕಲ್ಲ : ಇಲ್ಲಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ ನೇ ಜಯಂತ್ಯೋತ್ಸವ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರ ಆಚರಿಸಲಾಯಿತು. ಅಂಬೇಡ್ಕರ ಭಾವಚಿತ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಪುಷ್ಪನಮನ ಸಲ್ಲಿಸಿದರು. ಮಾತನಾಡಿದ ಅವರು ಶಿಕ್ಷಣ ಪಡೆಯಿರಿ ಸಂಘಟಿತರಾಗಿ, ಹೋರಾಟ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಈ ಮಂತ್ರವನ್ನು ಪಾಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಮಯದಲ್ಲಿ ಸಮಾಜದ ಮುಖಂಡರು,ಹಿರಿಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು,ಹಿರಿಯರು ಕಾರ್ಯಕರ್ತರು ಇದ್ದರು.1
- Post by Sharanugouda Patil1
- Post by @april14news1
- ನಾಗಠಾಣ: ಗುಂಡು ಹಾರಿಸಿ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದಲ್ಲಿ ಮೊದಲು ಥಾರ್ ವಾಹನಕ್ಕೆ ಟಿಪ್ಪರ್ ಮೂಲಕ ಡಿಕ್ಕಿ ಹೊಡೆದು, ಬಳಿಕ ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ರಾಜು ಕರೆ ಎಂಬುವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಾರಿನ ಬಾಗಿಲು ತೆರೆಯದಿದ್ದಾಗ ಕಲ್ಲು ಎಸೆದು ಹಂತಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ರಾಜು ಕರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 'ಕೆಲವು ದುಷ್ಕರ್ಮಿಗಳು ನನ್ನ ಮಗನ ಮೇಲೆ ಗುಂಡಿನ ದಾಳಿಮಾಡಿ ಹತ್ಯೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ನನ್ನ ಮಗನ ಸಾವಿಗೆ ನ್ಯಾಯ ನೀಡಬೇಕು' ಎಂದು ಕುಟುಂಬಸ್ಥರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.1
- Post by Onlinetv24x71
- ಇಳಕಲ್ಲ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ೧೩೫ ನೇ ಜಯಂತ್ಯೋತ್ಸವ ನಿಮಿತ್ಯ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಧ್ವಜಾರೋಹಣವನ್ನು ಮಾಡುವ ಮೂಲಕ ಬೈಕ್ ರ್ಯಾಲಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಮಂಗಳವಾರ ಚಾಲನೆ ನೀಡಿ ತೆರೆದ ವಾಹನ ರ್ಯಾಲಿಯಲ್ಲಿ ಭಾಗಿಯಾದರು. ಅಂಬೇಡ್ಕರ ವೃತ್ತದಿಂದ ಆರಂಭವಾದ ಮೆರವಣಿಗೆ, ಕಂಠಿ ಸರ್ಕಲ್, ಬಸ್ ನಿಲ್ದಾಣ, ಮಹಾಂತ ಗಂಗೋತ್ರಿ, ಪ್ರವಾಸಿ ಮಂದಿರ ಮಾರ್ಗವಾಗಿ ಬಸವೇಶ್ವರ ಸರ್ಕಲ್ಗೆ ಆಗಮಿಸಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮರಳಿ ಕಂಠಿ ಸರ್ಕಲ್ಗೆ ಆಗಮಿಸಿ ಎಸ್.ಆರ್.ಕಂಠಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಎಸ್.ಆರ್.ಕೆ ವೃತ್ತವಾಗಿ ಮಾರ್ಗವಾಗಿ ಮರಳಿ ಅಂಬೇಡ್ಕರ ವೃತ್ತವನ್ನು ತಲುಪಿತು. ಮೆರವಣಿಗೆಯಲ್ಲಿ ದಲಿತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶರಣಪ್ಪ ಆಮದಿಹಾಳ, ಯಮನೂರ ಚಲವಾದಿ, ಆನಂದ ಚಲವಾದಿ, ಸುರೇಶ ಜಂಗ್ಲಿ, ಅಂಬಣ್ಣ ಚಲವಾದಿ, ಅಶೋಕ ಚಲವಾದಿ, ಪವಾಡೆಪ್ಪ ಚಲವಾದಿ, ಸವಿತಾ ಚಲವಾದಿ, ದೀಲೀಪ ಕಲ್ಮನಿ, ಪ್ರವೀಣ ಹೊಳಿ, ಸಿದ್ದಾರ್ಥ ಚಲವಾದಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಮೌಲೇಶ ಬಂಡಿವಡ್ಡರ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.1
- Post by Iranna Tarnal1
- ಮೈಸೂರಿನ ಜ್ಞಾನ ಪ್ರಕಾಶ್ ಸ್ವಾಮಿಗಳು ಬೀದರ್ ನಲ್ಲಿ ನಡೆದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಮಾತನಾಡಿದರು1