Shuru
Apke Nagar Ki App…
ಬಾಗಲಕೋಟ:ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಕಾಳಜಿ ವಹಿಸಲಿ: ಸಿದ್ದು ಸವದಿ ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
PKBagalkot
ಬಾಗಲಕೋಟ:ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಕಾಳಜಿ ವಹಿಸಲಿ: ಸಿದ್ದು ಸವದಿ ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
More news from ಕರ್ನಾಟಕ and nearby areas
- ಗುಳೇದಗುಡ್ಡ: ನಮ್ಮ ಮುಂದಿನ ಪೀಳಿಗೆಗೆ ಮತಾಂತರ, ಭಯೋತ್ಪಾದನೆ, ಆಂತರಿಕ ಕಚ್ಛಾಟಗಳಿಂದ ಮುಕ್ತಗೊಳಿಸಿ ಸಶಕ್ತ ಸದೃಢ ಭಾರತವನ್ನು ಕಟ್ಟಲು ಹಿಂದೂ ಸಮ್ಮೇಳನದ ಉದ್ದೇಶವಾಗಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ವತಿಯಿಂದ ಮಾ.15ರಂದು ಬೃಹತ್ ಶೋಭಾಯಾತ್ರೆ ಹಾಗೂ ಹಿಂದೂ ಸಮ್ಮೇಳನ ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮ್ಮೇಳನದ ಸಂಚಲನಾ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದ್ದು, ಪಟ್ಟಣದ ಎಲ್ಲ ಸಮಾಜಭಾಂದವರು ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಹಿಂದೂ ಮುಖಂಡ ವಿಠ್ಠಲ ಪತ್ತಾರ ಮಾತನಾಡಿ, ಹಿಂದೂ ಸಮ್ಮೇಳನದ ಅಂಗವಾಗಿ ಮಾ. 15ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಬಾದಾಮಿ ನಾಕಾ ಹತ್ತಿರದ ಶ್ರೀ ಅಕ್ಕಲಕೋಟಿ ಚಿಕ್ಕರೇವಣಸಿದ್ಧೇಶ್ವರ ಮಠದಿಂದ ಬೃಹತ್ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಬೃಹತ್ ಶೋಭಾಯಾತ್ರೆಯಲ್ಲಿ ಶೋಭಾಯಾತ್ರೆಯಲ್ಲಿ ಕುಂಭಹೊತ್ತ ಮಹಿಳೆಯರು, ಗೊಂಬೆಗಳು, ಕರಡಿಮಜಲು, ಡೊಳ್ಳು ಕುಣಿತ, ಹಲಗಿ ಮಜಲು ಸೇರಿದಂತೆ ವಿವಿಧ ವಾಧ್ಯಮೇಳಗಳು ಭಾಗವಹಿಸಲಿವೆ. ಸಂಜೆ 6 ಗಂಟೆಗೆ ಭಂಡಾರಿ ಕಾಲೇಜನ ಆವರಣದಲ್ಲಿ ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಪಟ್ಟಣದ ವಿವಿಧ ಮಠಾಧೀಶರು ಸಾನಿಧ್ಯ ವಹಿಸುವರು. ಆರ್ಎಸ್ಎಸ್ನ ಬಳ್ಳಾರಿ ಪ್ರಾಂತ ಕಾರ್ಯಕಾರಣಿ ಸದಸ್ಯ ಗೋಪಿ ಜಿ. ಅವರು ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಎಲ್ಲಾ ಸಮಾಜ, ಸಂಘಸಂಸ್ಥೆಗಳಿಗೆ ಭೇಟಿ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದು, ಸಮಾರು ಹತ್ತುಸಾವಿರ ಜನರು ಹಿಂದೂ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಪತ್ತಕುಮಾರ್ ರಾಠಿ, ಅಮಾತೆಪ್ಪ ಕೊಪ್ಪಳ, ಪಿ.ಎನ್. ಪವಾರ, ಸಂಜು ಕಾರಕೂನ, ಪ್ರಭು ತಟ್ಟಿಮಠ, ಭುವನೇಶ ಪೂಜಾರ, ವಿಠ್ಠಲ ಶಿರೂರು, ಶಿವಾನಂದ ಬಾದವಾಡಗಿ, ಆದಪ್ಪ ಕಲಬುರ್ಗಿ, ಮಹೇಶ ಸೂಳೇಭಾವಿ, ಈರಣ್ಣ ಬಂಡಿ, ಶಿವಾನಂದ ಬಡಿಗೇರ ಮತ್ತಿತರರು.1
- Post by @april14news1
- ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಬೆಂಗಳೂರ ಜಿಲ್ಲಾ ಘಟಕ ವಿಜಯಪುರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ಶ್ರೀ ಮಧು ಎಸ್ ಬಂಗಾರಪ್ಪನವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಮನವಿ ಸಲ್ಲಿಸಿದರು.1
- ವಿಜಯಪುರದಲ್ಲಿ ಹುಡುಗರ ಕಳ್ಳರು ಹಾವಳಿ...1
- ಯರಗಟ್ಟಿ ಬ್ರೇಕಿಂಗ್ ಯರಗಟ್ಟಿ ಪ್ರತಿಷ್ಠಿತ ಪವಿತ್ರ ಕೆರೆ ಈಗ ಹಾಳು ಕೊಂಪೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಸ್ ವೀಕ್ಷಕರೇ ಯರಗಟ್ಟಿ ಪಟ್ಟಣದಲ್ಲಿ ಬಹಳ ವರ್ಷಗಳ ಹಿಂದೆ ನಮ್ಮ ಯರಗಟ್ಟಿಯ ಈ ಕೆರೆ ಜನರ ಬದುಕಿನ ಜೀವನಕ್ಕೆ ತುಂಬಾ ಮುಖ್ಯ ಭಾಗವಾಗಿತ್ತು ಊರಿನ ಹಲವಾರು ಜನರು ಇಲ್ಲಿಂದಲೇ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದರು ಪಶುಗಳಿಗೆ ನೀರು ರೈತರಿಗೆ ನೆರವು ಮತ್ತು ಗ್ರಾಮಕ್ಕೆ ಶುದ್ಧ ವಾತಾವರಣ ನೀಡುತ್ತಿದ್ದ ಈ ಕೆರೆ ನಮ್ಮ ಊರಿನ ಹೆಮ್ಮೆ ಆಗಿತ್ತು ಆದರೆ ಸಮಯ ಕಳೆದಂತೆ ನಿರ್ಲಕ್ಷ್ಯದಿಂದ ಈ ಕೆರೆ ಕಸದ ತಾಣವಾಗಿ ಮಾರ್ಪಟ್ಟಿದ್ದು ನೋವು ತಂದಿದೆ ಅಧಿಕಾರಿಗಳನ್ನು ಕೇಳಿದರೆ ಈಗ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದ್ದು ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಅಂತಾ ಬಹಳದಿನಗಳಿಂದ ಹೇಳುತ್ತಾ ಬಂದಿರುತ್ತಾರೆ ಅದಷ್ಟು ಬೇಗ ಶಾಸಕರು ಅಧಿಕಾರಿ ವರ್ಗ ಕಾಮಗಾರಿ ಪ್ರಾರಂಭ ಮಾಡಲು ಯರಗಟ್ಟಿ ಜನರ ಆಗ್ರಹವಾಗಿದೆ ಮತ್ತೆ ಈ ಕೆರೆ ಸ್ವಚ್ಛವಾಗಿ ಸುಂದರವಾಗಿ ರೂಪುಗೊಂಡು ನಮ್ಮ ಯರಗಟ್ಟಿಗೆ ಹೊಸ ಸೌಂದರ್ಯ ತರುತ್ತದೆ ಎಂಬ ನಂಬಿಕೆ ನಮ್ಮೆಲ್ಲರದಲ್ಲಿದೆ 💧🌿 ವರದಿ ರಫೀಕ್ ಡಿಕೆ2
- ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ;ಮನ್ಮಥನ ಪ್ರೇಮಕ್ಕೆ ಜೀವ ಕಳೆದುಕೊಂಡ ಪ್ರೇಯಸಿ ಅಥಣಿ:ಮಹಿಳೆಯರು ಹುಚ್ಚು ಪ್ರೀತಿಗೆ ಬಿದ್ದು ಅದೆಷ್ಟು ಮೋಸ ಹೋಗ್ತಾರೆ ಅಂದ್ರೆ ಒಂದು ಹಂತಕ್ಕೆ ಮನೆ ಮಕ್ಕಳು ಗಂಡನನ್ನೇ ಬಿಟ್ಟು ಓಡಿ ಹೋಗ್ತಾರೆ. ಹಿಂತಹ ಪ್ರೇಮ ಪ್ರಸಂಗಕ್ಕೆ ಮಹಿಳೆಯೋಬ್ಬಳ ಬರ್ಬರ ಹತ್ಯ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರದೀಪ ಗುಂಡಾ ಎಂಬುವವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಜಾತ ತೇಜು ಪವಾರ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತನಿಖೆ ಕೈಗೊಂಡ ಅಥಣಿ ಪೊಲೀಸ್ ರು ಮಹಿಳೆ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೃತ ಸುಜಾತ ಹಾರೋಗೇರಿ ಪಟ್ಟಣದ ನಿವಾಸಿಯನ್ನ ಮದುವೆಯಾಗಿದ್ದಳು. ವಿವಾದ ಹಿನ್ನೆಲೆ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಇವಳಿಗೆ ಕುಮಾರ ಕಲ್ಲಪ್ಪ ಹವಾಲ್ದಾರ ಪರಿಚಯ, ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆ ಕುಮಾರ ಸುಜಾತಾಳಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ. ಮಾರ್ಚ್ 05 ರಂದು ಮನೆಯಿಂದ ಬೈಕ್ ಮೇಲೆ ಕರೋದೋಯ್ದ ಕುಮಾರ ಹವಾಲ್ದಾರ್ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಟ್ಟೆಯಿಂದ ಕುತ್ತಿಗೆ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.2
- ಬೆಂಗಳೂರು: ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಚೇರಿಗಳಿಗೆ ಬರುವ ನಾಗರಿಕರನ್ನು ಹಲವೆಡೆ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪರಿಷತ್ ಸದಸ್ಯ ಪಿ.ಹೆಚ್. ಪೂಜಾರ್ ಅವರು ವಿಧಾನ ಪರಿಷತ್ನಲ್ಲಿ ಸರ್ಕಾರದ ಗಮನಕ್ಕೆ ತಂದರು. ಒಂದು ಇ-ಖಾತಾ ಪಡೆಯುವುದಕ್ಕೂ ಜನರು ಹಲವಾರು ಬಾರಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಜನರು ತಮ್ಮ ಚಪ್ಪಲಿ ಸವೆಸುವವರೆಗೆ ಅಧಿಕಾರಿಗಳ ಹಿಂದೆ ತಿರುಗಬೇಕಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರಿ ಸೇವೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.1
- ವಿಜಯಪುರ ನಗರದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ, ಏಪ್ರಿಲ್ 10,14, 2026 ಸ್ಥಳ ದರ್ಬಾರ್ ಹೈಸ್ಕೂಲ್ ಮೈದಾನ, ಸ್ಟೇಶನ್ ರಸ್ತೆ, ವಿಜಯಪುರ1
- ವಿಜಯಪುರ ಆಟುವರು ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದು ಹೇಳಿದ್ದಾರೆ ಎಲ್ಪಿಜಿ ಗ್ಯಾಸ್ ಗೋಸ್ಕರ1