logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ರಾಮೀಣ ಭಾಗದಿಂದ ಶಾಲಾ ಕಾಲೇಜುಗಳಿಗೆ ಹೋಗಲು ದೊಡ್ಡ ಸಮಸ್ಯೆ ಬಸ್ಸಿಲ್ಲ ನಮ್ಮೂರಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗಡಿ ಭಾಗಗಳಲ್ಲಿ ಚಿಕ್ಕರಾಂಪುರ ದೊಡ್ಡರಾಂಪುರ ತೀರ್ಥಪುರ ಆ ಭಾಗಗಳಲ್ಲಿ ಸಾರಿಗೆಗಳು ಸರಿಯಾಗಿ ಸಂಚಾರ ಮಾಡುತ್ತಿಲ್ಲ ವಿದ್ಯಾರ್ಥಿಗಳಿಗೆ ಪ್ರತಿದಿನ ತೊಂದರೆ ಆಗುತ್ತಿದೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೇ ವಿದ್ಯಾರ್ಥಿಗಳು ಪರಿಪಾಠಲು ಬೀಳುತ್ತಿದ್ದಾರೆ

6 hrs ago
user_ಪ್ರಸನ್ನ ದೊಡ್ಡಗುಣಿ
ಪ್ರಸನ್ನ ದೊಡ್ಡಗುಣಿ
ಗುಬ್ಬಿ, ತುಮಕೂರು, ಕರ್ನಾಟಕ•
6 hrs ago

ಗ್ರಾಮೀಣ ಭಾಗದಿಂದ ಶಾಲಾ ಕಾಲೇಜುಗಳಿಗೆ ಹೋಗಲು ದೊಡ್ಡ ಸಮಸ್ಯೆ ಬಸ್ಸಿಲ್ಲ ನಮ್ಮೂರಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗಡಿ ಭಾಗಗಳಲ್ಲಿ ಚಿಕ್ಕರಾಂಪುರ ದೊಡ್ಡರಾಂಪುರ ತೀರ್ಥಪುರ ಆ ಭಾಗಗಳಲ್ಲಿ ಸಾರಿಗೆಗಳು ಸರಿಯಾಗಿ ಸಂಚಾರ ಮಾಡುತ್ತಿಲ್ಲ ವಿದ್ಯಾರ್ಥಿಗಳಿಗೆ ಪ್ರತಿದಿನ ತೊಂದರೆ ಆಗುತ್ತಿದೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೇ ವಿದ್ಯಾರ್ಥಿಗಳು ಪರಿಪಾಠಲು ಬೀಳುತ್ತಿದ್ದಾರೆ

More news from ಕರ್ನಾಟಕ and nearby areas
  • ಆಡುವ ವಯಸ್ಸಿನಲ್ಲಿ ದುಡಿಯೋದಿಕ್ಕೆ ನಿಂತ ಪುಟ್ಟ ಬಾಲಕಿ ಬಡತನ ಶಾಶ್ವತವಾಗಿ ಎಂದು ನಿರ್ಮೂಲನೆ ಆಗುವುದಿಲ್ಲ
    1
    ಆಡುವ ವಯಸ್ಸಿನಲ್ಲಿ ದುಡಿಯೋದಿಕ್ಕೆ 
ನಿಂತ ಪುಟ್ಟ ಬಾಲಕಿ ಬಡತನ ಶಾಶ್ವತವಾಗಿ 
ಎಂದು ನಿರ್ಮೂಲನೆ ಆಗುವುದಿಲ್ಲ
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    12 hrs ago
  • ಹಾಡು ಹಗಲೇ ನಗರಸಭೆ ಆಸ್ತಿ ಅತಿಕ್ರಮ ಪ್ರವೇಶ,‌ಪುಟ್‌ಪಾತ್ ಒತ್ತುವರಿ ನಗರಸಭೆ ಜಾಣ ಕುರುಡು ಮಂಡ್ಯ-ಮಂಡ್ಯ ನಗರದಲ್ಲಿ ನಗರಸಭೆ ಆಸ್ತಿ ಕಂಡವರಪಾಲಾಗುತ್ತಿದೆ ಗಲ್ಲಿಗಳಿಗೆ ಬಾಗಿಲು ಬೀಗ ಹಾಕಿ ಕೊಳ್ಳುತ್ತಿದ್ದಾರೆ.ಆದ್ರೆ ನಗರಸಭೆ ಮಾತ್ರ‌ ಗಾಢ ನಿದ್ರೆಯಲ್ಲಿದೆ. ಉಳ್ಳವರು‌ಸರ್ಕಾರಿ ಆಸ್ತಿ ನುಂಗಿ ನೀರು ಕುಡಿಯುತ್ತಿದ್ದರೆ‌ ನಗರಸಭೆ ಮಾತ್ರ ನಮಗೂ ಅದಕ್ಕೂ ಸಂಬಂದ ವಿಲ್ಲ ಅನ್ನೋ ರೀತಿ ಇದೆ. ಎಲ್ಲಂದ್ರಲ್ಲಿ‌ಫುಟ್ ಪಾತ್ ಆಕ್ರಮ ವಾಗುತ್ತಿದ್ದರೂ‌ ನಗರಸಭೆ ಸಿಬ್ಬಂದಿ ಒತ್ತು ವರಿ ಮಾಡಿಕೊಂಡವರ ಬಳಿ ಹೋಗಿ ಅವರಿಗೆ‌ ಸಮಾಧಾನ ಹೇಳಿ ಬರೋ‌ಕೆಲಸ ಮಾಡುತ್ತಿದ್ದಾರೆ . ಹೆದ್ದಾರಿಯಲ್ಲಿ ಪುಟ್ ಪಾತ್ ತೆರವು ನಾಟಕ ವಾಡಿದ ನಗರಸಭೆ,ಇಲ್ಲಿ ನಿಜವಾಗಿ ಆಕ್ರಮವಾಗಿದ್ರು ತುಟಿ ಪಿಟಕ್ ಅನ್ನು ತ್ತಿಲ್ಲ ನಗರಸಭೆ ಸುಪ್ರೀಂಕ್ ಕೊರ್ಟ್ ಆದೇಶ ಬಂದಿದ್ದಕ್ಕೆ ಕಣ್ಣು ಒರೆಸುವ ತಂತ್ರ ಮಾಡ್ತಾ‌? ಗೊತ್ತಿಲ್ಲ.
    1
    ಹಾಡು ಹಗಲೇ ನಗರಸಭೆ ಆಸ್ತಿ ಅತಿಕ್ರಮ ಪ್ರವೇಶ,‌ಪುಟ್‌ಪಾತ್ ಒತ್ತುವರಿ ನಗರಸಭೆ ಜಾಣ ಕುರುಡು 
ಮಂಡ್ಯ-ಮಂಡ್ಯ ನಗರದಲ್ಲಿ ನಗರಸಭೆ ಆಸ್ತಿ ಕಂಡವರಪಾಲಾಗುತ್ತಿದೆ ಗಲ್ಲಿಗಳಿಗೆ ಬಾಗಿಲು ಬೀಗ ಹಾಕಿ ಕೊಳ್ಳುತ್ತಿದ್ದಾರೆ.ಆದ್ರೆ ನಗರಸಭೆ ಮಾತ್ರ‌ ಗಾಢ ನಿದ್ರೆಯಲ್ಲಿದೆ. ಉಳ್ಳವರು‌ಸರ್ಕಾರಿ ಆಸ್ತಿ ನುಂಗಿ ನೀರು ಕುಡಿಯುತ್ತಿದ್ದರೆ‌ ನಗರಸಭೆ ಮಾತ್ರ ನಮಗೂ ಅದಕ್ಕೂ ಸಂಬಂದ ವಿಲ್ಲ ಅನ್ನೋ ರೀತಿ ಇದೆ. ಎಲ್ಲಂದ್ರಲ್ಲಿ‌ಫುಟ್ ಪಾತ್ ಆಕ್ರಮ ವಾಗುತ್ತಿದ್ದರೂ‌ ನಗರಸಭೆ ಸಿಬ್ಬಂದಿ ಒತ್ತು ವರಿ ಮಾಡಿಕೊಂಡವರ ಬಳಿ ಹೋಗಿ ಅವರಿಗೆ‌ ಸಮಾಧಾನ ಹೇಳಿ ಬರೋ‌ಕೆಲಸ  ಮಾಡುತ್ತಿದ್ದಾರೆ . ಹೆದ್ದಾರಿಯಲ್ಲಿ ಪುಟ್ ಪಾತ್ ತೆರವು ನಾಟಕ ವಾಡಿದ ನಗರಸಭೆ,ಇಲ್ಲಿ ನಿಜವಾಗಿ  ಆಕ್ರಮವಾಗಿದ್ರು  ತುಟಿ ಪಿಟಕ್ ಅನ್ನು ತ್ತಿಲ್ಲ ನಗರಸಭೆ ಸುಪ್ರೀಂಕ್ ಕೊರ್ಟ್ ಆದೇಶ ಬಂದಿದ್ದಕ್ಕೆ ಕಣ್ಣು ಒರೆಸುವ ತಂತ್ರ ಮಾಡ್ತಾ‌? ಗೊತ್ತಿಲ್ಲ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    41 min ago
  • ಸರಕು ವಾಹನಗಳಿಂದ ₹30, ಲಾರಿಗಳಿಂದ ₹3 ಸಾವಿರ ವಸೂಲಿ ಆರೋಪ| Veega News Kannada ಸರಕು ವಾಹನಗಳಿಂದ ₹30, ಲಾರಿಗಳಿಂದ ₹3 ಸಾವಿರ ವಸೂಲಿ ಆರೋಪ
    1
    ಸರಕು ವಾಹನಗಳಿಂದ ₹30, ಲಾರಿಗಳಿಂದ 
₹3 ಸಾವಿರ ವಸೂಲಿ ಆರೋಪ| Veega News Kannada 
ಸರಕು ವಾಹನಗಳಿಂದ ₹30, ಲಾರಿಗಳಿಂದ 
₹3 ಸಾವಿರ ವಸೂಲಿ ಆರೋಪ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಉದ್ಘಾಟನೆ ಬೆಂಗಳೂರು: ಮಹಾಲಕ್ಷ್ಮೀಪುರಂನ ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉದ್ಘಾಟಿಸಿದರು. ಸೆಪ್ಟೆಂಬರ್ 2ರಂದು ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಕೆಎಂಡಬ್ಲ್ಯೂಎ ವಿದ್ಯಾನಿಕೇತನವು ತನ್ನ ಶೈಕ್ಷಣಿಕ ಪ್ರಗತಿಗೆ ದೀಕ್ಷಾ–ವೇದಾಂತು ಸಂಸ್ಥೆಯನ್ನು ಶೈಕ್ಷಣಿಕ ಪಾಲುದಾರ ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಪರಿಗಣಿಸಿದೆ. ದೀಕ್ಷಾ–ವೇದಾಂತು ಮುಖ್ಯಸ್ಥ ಡಾ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೋರ್ಡ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಸೇರಿದಂತೆ ಗಮನಾರ್ಹ ಫಲಿತಾಂಶಗಳನ್ನು ದಾಖಲಿಸಿದೆ ಎಂದು ಸಂಸ್ಥೆ ತಿಳಿಸಿದೆ. ನೂತನ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದರ ಜತೆಗೆ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಎಂಡಬ್ಲ್ಯೂಎ ವಿದ್ಯಾನಿಕೇತನದ ಗೌರವ ಅಧ್ಯಕ್ಷರಾದ ಮನೋಜ್ ಕುಮಾರ್, ಅಧ್ಯಕ್ಷ ಸುನಿಲ್ ಎಸ್., ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಿ, ಖಜಾಂಚಿ ಗಣೇಶ್ ರಾವ್ ಕೇಸರ್ಕರ್, ವ್ಯವಸ್ಥಾಪಕ ಕಾರ್ಯದರ್ಶಿ ಸುರೇಶ್ ರಾವ್, ಮೇಘಲ ವೀರೇಶ್, ಕೃಷ್ಣ, ವೀಣಾ ಮೋಹನ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    4
    ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಉದ್ಘಾಟನೆ

ಬೆಂಗಳೂರು: ಮಹಾಲಕ್ಷ್ಮೀಪುರಂನ ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉದ್ಘಾಟಿಸಿದರು.
ಸೆಪ್ಟೆಂಬರ್ 2ರಂದು ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕೆಎಂಡಬ್ಲ್ಯೂಎ ವಿದ್ಯಾನಿಕೇತನವು ತನ್ನ ಶೈಕ್ಷಣಿಕ ಪ್ರಗತಿಗೆ ದೀಕ್ಷಾ–ವೇದಾಂತು ಸಂಸ್ಥೆಯನ್ನು ಶೈಕ್ಷಣಿಕ ಪಾಲುದಾರ ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಪರಿಗಣಿಸಿದೆ. ದೀಕ್ಷಾ–ವೇದಾಂತು ಮುಖ್ಯಸ್ಥ ಡಾ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೋರ್ಡ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಸೇರಿದಂತೆ ಗಮನಾರ್ಹ ಫಲಿತಾಂಶಗಳನ್ನು ದಾಖಲಿಸಿದೆ ಎಂದು ಸಂಸ್ಥೆ ತಿಳಿಸಿದೆ.
ನೂತನ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದರ ಜತೆಗೆ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಎಂಡಬ್ಲ್ಯೂಎ ವಿದ್ಯಾನಿಕೇತನದ ಗೌರವ ಅಧ್ಯಕ್ಷರಾದ ಮನೋಜ್ ಕುಮಾರ್, ಅಧ್ಯಕ್ಷ ಸುನಿಲ್ ಎಸ್., ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಿ, ಖಜಾಂಚಿ ಗಣೇಶ್ ರಾವ್ ಕೇಸರ್ಕರ್, ವ್ಯವಸ್ಥಾಪಕ ಕಾರ್ಯದರ್ಶಿ ಸುರೇಶ್ ರಾವ್, ಮೇಘಲ ವೀರೇಶ್, ಕೃಷ್ಣ, ವೀಣಾ ಮೋಹನ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    user_Nataraj B P
    Nataraj B P
    ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪ:ಸುಳ್ಳು ಅರ್ಜಿಗಳನ್ನ ಕೊಡಿಸಿರುವ ವ್ಯಕ್ತಿಗಳಿಗೆ ದಲಿತ ನಾಯಕ ನಂದಿಗುಂದ ವೆಂಕಟೇಶ ಎಚ್ಚರಿಕೆ ಬೆಂಗಳೂರು:ಜಮೀನು ಕೊಡದ ಹಿನ್ನಲೆ ದಲಿತ ರೈತರ ಜಮೀನಿನ ಮೇಲೆ ಭೂ ಮಾಫೀಯ ಕಣ್ಣು ಬಿದ್ದಿದೆ.ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪವನ್ನ ದಲಿತ ನಾಯಕ ನಂದಿಗುಂದ ವೆಂಕಟೇಶ್ ಮಾಡಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯನಂದಿಗುಂದ ಗ್ರಾಮದ ದಲಿತ ರೈತರಿಗೆ ಸುಳ್ಳು ಅರ್ಜಿಗಳಿಂದ ಧಮ್ಕಿ.? ಹಾಕಲಾಗಿದೆ.ಗ್ರಾಮದ ಸರ್ವೇ ನಂಬರ್ 28 ಮತ್ತು 30ರ ಸುಮಾರು ಎಂಟು ಎಕರೆ ಜಮೀನಿನ ಮೇಲೆ ಕಣ್ಣು ಬಿದ್ದಿದ್ದು,ಜಮೀನು ಕಬಳಿಸಲು ನಮ್ಮ ಸಮುದಾಯದ ನಾಯಕರನ್ನ ಅರ್ಜಿ ಕೊಡಿಸಿದ್ದಾರೆ .ನಮ್ಮ ಜಮೀನಿನ ಸುತ್ತಲೂ ದಾಸರಥಿ ಎಂಬ ಬಿಲ್ಡರ್ ಜಮೀನುಗಳು ಇದ್ದಾವೆ,ನಾವು ದಾಸರಥಿ ಅವರಿಗೆ ಜಮೀನು ಕ್ರಯ ಮಾಡಲು ಒಪ್ಪಲಿಲ್ಲ,ಆಗ ನಮ್ಮ ಜಮೀನಿನ್ನು ಹೇಗಾದ್ರು ಪಡೆಯಬೇಕು ಎಂದು ಸುಳ್ಳು ಅರ್ಜಿಗಳನ್ನ ಕೊಡ್ತಿದ್ದಾರೆ,ನಾವು ನಮ್ಮ ತಂದೆಯವರ ಕಾಲದಿಂದಲೂ ಶಾಂತಿಯುತ ಸ್ವಾಧೀನದಲ್ಲಿ ಇದ್ದೇವೆ,ಈಗ ನಮ್ಮಿಂದ ಜಮೀನನ್ನು ಕಬಳಿಸಲು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ,ಸುತ್ತಮುತ್ತಲಿನ ಜಮೀನುಗಳಿಗೆ ರೈತರು ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ,ಇದು ಈಗೆ ಮುಂದುವರೆದರೆ ಪ್ರತಿಭಟನೆ ಮಾಡಲಾವುದು ಎಂದು ನಂದಿಗುಂದ ವೆಂಕಟೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
    1
    ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪ:ಸುಳ್ಳು ಅರ್ಜಿಗಳನ್ನ ಕೊಡಿಸಿರುವ ವ್ಯಕ್ತಿಗಳಿಗೆ ದಲಿತ ನಾಯಕ ನಂದಿಗುಂದ ವೆಂಕಟೇಶ ಎಚ್ಚರಿಕೆ
ಬೆಂಗಳೂರು:ಜಮೀನು ಕೊಡದ ಹಿನ್ನಲೆ ದಲಿತ ರೈತರ ಜಮೀನಿನ ಮೇಲೆ ಭೂ ಮಾಫೀಯ ಕಣ್ಣು ಬಿದ್ದಿದೆ.ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪವನ್ನ  ದಲಿತ ನಾಯಕ ನಂದಿಗುಂದ ವೆಂಕಟೇಶ್ ಮಾಡಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯನಂದಿಗುಂದ ಗ್ರಾಮದ ದಲಿತ ರೈತರಿಗೆ ಸುಳ್ಳು ಅರ್ಜಿಗಳಿಂದ ಧಮ್ಕಿ.? ಹಾಕಲಾಗಿದೆ.ಗ್ರಾಮದ ಸರ್ವೇ ನಂಬರ್ 28 ಮತ್ತು 30ರ ಸುಮಾರು ಎಂಟು ಎಕರೆ ಜಮೀನಿನ ಮೇಲೆ ಕಣ್ಣು ಬಿದ್ದಿದ್ದು,ಜಮೀನು ಕಬಳಿಸಲು ನಮ್ಮ ಸಮುದಾಯದ ನಾಯಕರನ್ನ ಅರ್ಜಿ ಕೊಡಿಸಿದ್ದಾರೆ .ನಮ್ಮ ಜಮೀನಿನ ಸುತ್ತಲೂ ದಾಸರಥಿ ಎಂಬ ಬಿಲ್ಡರ್ ಜಮೀನುಗಳು ಇದ್ದಾವೆ,ನಾವು ದಾಸರಥಿ ಅವರಿಗೆ ಜಮೀನು ಕ್ರಯ ಮಾಡಲು ಒಪ್ಪಲಿಲ್ಲ,ಆಗ ನಮ್ಮ ಜಮೀನಿನ್ನು ಹೇಗಾದ್ರು ಪಡೆಯಬೇಕು ಎಂದು ಸುಳ್ಳು ಅರ್ಜಿಗಳನ್ನ ಕೊಡ್ತಿದ್ದಾರೆ,ನಾವು ನಮ್ಮ ತಂದೆಯವರ ಕಾಲದಿಂದಲೂ ಶಾಂತಿಯುತ ಸ್ವಾಧೀನದಲ್ಲಿ ಇದ್ದೇವೆ,ಈಗ ನಮ್ಮಿಂದ ಜಮೀನನ್ನು ಕಬಳಿಸಲು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ,ಸುತ್ತಮುತ್ತಲಿನ ಜಮೀನುಗಳಿಗೆ ರೈತರು ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ,ಇದು ಈಗೆ ಮುಂದುವರೆದರೆ ಪ್ರತಿಭಟನೆ ಮಾಡಲಾವುದು ಎಂದು ನಂದಿಗುಂದ ವೆಂಕಟೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
  • ಪಿಂಕ್‌ ಲೈನ್‌ನ 7.5 ಕಿ.ಮೀ ಉದ್ದದ ಕಾಲೇನ ಅಗ್ರಹಾರ–ತಾವರೆಕೆರೆ ಮಾರ್ಗ ಪರಿಶೀಲಿಸಿದ ಸಚಿವ ಬೆಂಗಳೂರಿನ ಪಿಂಕ್‌ ಲೈನ್‌ನ 7.5 ಕಿ.ಮೀ ಉದ್ದದ ಕಾಲೇನ ಅಗ್ರಹಾರ–ತಾವರೆಕೆರೆ ಮಾರ್ಗ ಉದ್ಘಾಟನೆಗೆ ಸಂಪೂರ್ಣ ಸಿದ್ಧವಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದಿಂದ ಉದ್ಘಾಟನೆಯ ದಿನಾಂಕ ನಿಗದಿಯಾಗುವ ನಿರೀಕ್ಷೆಯಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ಎಂ. ಕೃಷ್ಣಪ್ಪ, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಸಿ. ಜಾಫರ್ ಹಾಗೂ ಅಧಿಕಾರಿಗಳೊಂದಿಗೆ ಇಂದು ಪ್ರಾಯೋಗಿಕ ಸಂಚಾರ ನಡೆಸಿ, ಮೆಟ್ರೋ ಮಾರ್ಗದ ಸಿದ್ಧತೆ ಹಾಗೂ ಉದ್ಘಾಟನೆಗೆ ಮುನ್ನ ಕೈಗೊಳ್ಳಬೇಕಿರುವ ಅಂತಿಮ ಕಾಮಗಾರಿಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.
    1
    ಪಿಂಕ್‌ ಲೈನ್‌ನ 7.5 ಕಿ.ಮೀ ಉದ್ದದ ಕಾಲೇನ ಅಗ್ರಹಾರ–ತಾವರೆಕೆರೆ ಮಾರ್ಗ ಪರಿಶೀಲಿಸಿದ ಸಚಿವ
ಬೆಂಗಳೂರಿನ ಪಿಂಕ್‌ ಲೈನ್‌ನ 7.5 ಕಿ.ಮೀ ಉದ್ದದ ಕಾಲೇನ ಅಗ್ರಹಾರ–ತಾವರೆಕೆರೆ ಮಾರ್ಗ ಉದ್ಘಾಟನೆಗೆ ಸಂಪೂರ್ಣ ಸಿದ್ಧವಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದಿಂದ ಉದ್ಘಾಟನೆಯ ದಿನಾಂಕ ನಿಗದಿಯಾಗುವ ನಿರೀಕ್ಷೆಯಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. 
ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ಎಂ. ಕೃಷ್ಣಪ್ಪ, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಸಿ. ಜಾಫರ್ ಹಾಗೂ ಅಧಿಕಾರಿಗಳೊಂದಿಗೆ ಇಂದು ಪ್ರಾಯೋಗಿಕ ಸಂಚಾರ ನಡೆಸಿ, ಮೆಟ್ರೋ ಮಾರ್ಗದ ಸಿದ್ಧತೆ ಹಾಗೂ ಉದ್ಘಾಟನೆಗೆ ಮುನ್ನ ಕೈಗೊಳ್ಳಬೇಕಿರುವ ಅಂತಿಮ ಕಾಮಗಾರಿಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    4 hrs ago
  • ತುರುವೇಕೆರೆ ತಾಲೂಕಿನ ಒಬ್ಬೆನಾಗಸಂದ್ರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್ ತುರುವೇಕೆರೆ ತಾಲೂಕಿನ ಒಬ್ಬೆನಾಗಸಂದ್ರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್ ತುರುವೇಕೆರೆ ತಾಲೂಕು ಒಬ್ಬೆನಾಗಸಂದ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
    1
    ತುರುವೇಕೆರೆ ತಾಲೂಕಿನ ಒಬ್ಬೆನಾಗಸಂದ್ರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್
ತುರುವೇಕೆರೆ ತಾಲೂಕಿನ ಒಬ್ಬೆನಾಗಸಂದ್ರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್
ತುರುವೇಕೆರೆ ತಾಲೂಕು ಒಬ್ಬೆನಾಗಸಂದ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ನುಗ್ಗಿದ ಘಟನೆ ನಡೆದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    6 hrs ago
  • ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಮಂಡ್ಯ-ಮಂಡ್ಯ ಮತ್ತು ಮದ್ದೂರು ತಾಲ್ಲೂಕಿನ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪ್ರಗತಿಯನ್ನು ಜಿಲ್ಲಾಧಿಕಾರಿ ಕುಮಾರ್ ಪರಿಶೀಲಿಸಿದರು. ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನೀರು ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಘಟಕಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಕಾಮಗಾರಿಯ ಪ್ರಸ್ತುತ ಹಂತ, ಪೂರ್ಣಗೊಳ್ಳಬೇಕಿರುವ ಕಾಮಗಾರಿಗಳು ಹಾಗೂ ಎದುರಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದಂತೆ ಅಗತ್ಯ ಕ್ರಮವಹಿಸಿ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಪ್ರಮೋದ್ ಕುಮಾರ್ ಎನ್.ಜಿ., ಸಹಾಯಕ ಅಭಿಯಂತರ ಶ್ರೀಧರ್, ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
    1
    ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ
ಮಂಡ್ಯ-ಮಂಡ್ಯ ಮತ್ತು ಮದ್ದೂರು ತಾಲ್ಲೂಕಿನ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪ್ರಗತಿಯನ್ನು ಜಿಲ್ಲಾಧಿಕಾರಿ ಕುಮಾರ್ ಪರಿಶೀಲಿಸಿದರು.
ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ  ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನೀರು ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಘಟಕಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಕಾಮಗಾರಿಯ ಪ್ರಸ್ತುತ ಹಂತ, ಪೂರ್ಣಗೊಳ್ಳಬೇಕಿರುವ ಕಾಮಗಾರಿಗಳು ಹಾಗೂ ಎದುರಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದಂತೆ ಅಗತ್ಯ ಕ್ರಮವಹಿಸಿ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ಸಿಬ್ಬಂದಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಪ್ರಮೋದ್ ಕುಮಾರ್ ಎನ್.ಜಿ., ಸಹಾಯಕ ಅಭಿಯಂತರ ಶ್ರೀಧರ್, ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    1 hr ago
  • ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್ ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್
    1
    ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ
ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್
ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ
ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.