ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾವು ಸದಾ ಚಿರಋಣಿ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತಿಂದ್ರ ಸಿದ್ದರಾಮಯ್ಯ ಮೈಸೂರ್ ತಾಲೂಕು ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ಮೆಲ್ಲಹಳ್ಳಿ ಗ್ರಾಮದ ವರುಣ ಹೋಬಳಿಯ ಬಗರ್ ಹುಕುಂ ಸಮಿತಿ ಸದಸ್ಯರಾದ ಎಂ ಪ್ರಸಾದ್ ರವರ ಡೈರಿ ಫಾರ್ಮ್ ಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅವರನ್ನು ವರುಣ ಹೋಬಳಿಯ ಬಗರ್ ಹುಕುಂ ಸಮಿತಿಯ ಸದಸ್ಯರಾದ ಎಂ ಪ್ರಸಾದ್ ರವರು ಸನ್ಮಾನಿ ಗೌರವಿಸಿದರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ ಪ್ರಸಾದ್ ರವರು ರಾಜಕೀಯ ಜೊತೆಗೆ ಉಪ ಕಸಬಾಗಿ ಹೈನುಗಾರಿಕೆ ಮಾಡಿಕೊಂಡು ಅವರ ಈ ಡೈರಿ ಫಾರ್ಮಲ್ಲಿ ಗ್ರಾಮದ ಹಲವಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವುದು ಬಹಳ ಸಂತೋಷವಾಯಿತು ಎಂದು ಅವರ ಕಾರ್ಯ ವೈಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಅಲ್ಲದೆ ಪ್ರಸಾದ್ ರವರ ಈ ಹೈನುಗಾರಿಕೆ ಇನ್ನು ಯುವಕರಿಗೆ ಪ್ರೇರಣೆಯಾಗಬೇಕು ಯುವಕರು ಇಂತಹ ಸ್ವಾ ಉದ್ಯೋಗದಲ್ಲಿ ತೊಡಗಿದರೆ ಜೀವನದಲ್ಲಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂಟಿ ರವಿಕುಮಾರ್ ಮಂಜುಳಾ ಮಂಜುನಾಥ್ ಬಗರ್ ಹುಕುಂ ಸಮಿತಿಯ ಸದಸ್ಯ ಎಂ ಪ್ರಸಾದ್ ಮತ್ತು ಅವರ ಕುಟುಂಬದವರು ಆನಂದ್ ಚಿಕ್ಕಳ್ಳಿ ವೆಂಕಟೇಶ್ ದೇವರಾಜು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು
ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾವು ಸದಾ ಚಿರಋಣಿ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತಿಂದ್ರ ಸಿದ್ದರಾಮಯ್ಯ ಮೈಸೂರ್ ತಾಲೂಕು ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ಮೆಲ್ಲಹಳ್ಳಿ ಗ್ರಾಮದ ವರುಣ ಹೋಬಳಿಯ ಬಗರ್ ಹುಕುಂ ಸಮಿತಿ ಸದಸ್ಯರಾದ ಎಂ ಪ್ರಸಾದ್ ರವರ ಡೈರಿ ಫಾರ್ಮ್ ಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅವರನ್ನು ವರುಣ ಹೋಬಳಿಯ ಬಗರ್ ಹುಕುಂ ಸಮಿತಿಯ ಸದಸ್ಯರಾದ ಎಂ ಪ್ರಸಾದ್ ರವರು ಸನ್ಮಾನಿ ಗೌರವಿಸಿದರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ ಪ್ರಸಾದ್ ರವರು ರಾಜಕೀಯ ಜೊತೆಗೆ ಉಪ ಕಸಬಾಗಿ ಹೈನುಗಾರಿಕೆ ಮಾಡಿಕೊಂಡು ಅವರ ಈ ಡೈರಿ ಫಾರ್ಮಲ್ಲಿ ಗ್ರಾಮದ ಹಲವಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವುದು ಬಹಳ ಸಂತೋಷವಾಯಿತು ಎಂದು ಅವರ ಕಾರ್ಯ ವೈಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಅಲ್ಲದೆ ಪ್ರಸಾದ್ ರವರ ಈ ಹೈನುಗಾರಿಕೆ ಇನ್ನು ಯುವಕರಿಗೆ ಪ್ರೇರಣೆಯಾಗಬೇಕು ಯುವಕರು ಇಂತಹ ಸ್ವಾ ಉದ್ಯೋಗದಲ್ಲಿ ತೊಡಗಿದರೆ ಜೀವನದಲ್ಲಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂಟಿ ರವಿಕುಮಾರ್ ಮಂಜುಳಾ ಮಂಜುನಾಥ್ ಬಗರ್ ಹುಕುಂ ಸಮಿತಿಯ ಸದಸ್ಯ ಎಂ ಪ್ರಸಾದ್ ಮತ್ತು ಅವರ ಕುಟುಂಬದವರು ಆನಂದ್ ಚಿಕ್ಕಳ್ಳಿ ವೆಂಕಟೇಶ್ ದೇವರಾಜು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು
- *ಮಾಜಿ ಸಂಸದರು ಶ್ರೀ ದಿ. ಆರ್. ಧ್ರುವನಾರಾಯಣ ಅವರ 3ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಇಂದು ಚಾಮರಾಜನಗರ ಜಿಲ್ಲೆಯ ನಮ್ಮ ಸ್ವಗ್ರಾಮ ಹೆಗ್ಗವಾಡಿಯಲ್ಲಿ ನಂಜನಗೂಡು ಕ್ಷೇತ್ರದ ಜನಪ್ರಿಯ ಯುವಕ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಮತ್ತು ಸಹೋದರ ಧೀರೆನ್ ಧ್ರುವನಾರಾಯಣ್ ಅವರು ಕುಟುಂಬಸ್ಥರೊಂದಿಗೆ ಸ್ಮಾರಕಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನಗಳನ್ನು ಅರ್ಪಿಸಿದ ಕ್ಷಣಗಳು.*1
- *ಭಾರತ ನಲ್ಲಿ ವೈರಲ್*1
- ಬುಧವಾರ ಮಧ್ಯಾಹ್ನ 12 ಗಂಟೆಯ ವೇಳೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಕೆಯ ನಂತರ ಚಿಕ್ಕಬಾಯಿ ಬೀಗ ಪ್ರಾರಂಭವಾಯಿತು. ಸಂಜೆ 4:00 ವರೆಗೆ 3 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಚಿಕ್ಕಬಾಯಿ ಬೀಗ ಹಾಕಿಸಿಕೊಂಡು ತಮ್ಮ ಹರಕೆ ಸಮರ್ಪಿಸಿದರು. 80ಕ್ಕೂ ಹೆಚ್ಚು ಅಧಿಕ ಭಕ್ತರು ಕಳೆದ ಒಂದು ವಾರಗಳಿಂದ ಮಾಲೆ ಹಾಕಿಸಿಕೊಂಡು ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆಯ ವೇಳೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಬುಧವಾರ ಬೆಳಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ಉಪವಾಸವಿದ್ದು 30 ಅಡಿ ಉದ್ದದ ಬಾಯಿ ಬೀಗ ಹಾಕಿಸಿಕೊಂಡಿದ್ದರು ಈ ಪೈಕಿ 69 ಮಂದಿ ಪುರುಷರು ಹಾಗೂ 17 ಮಹಿಳೆಯರು ದೊಡ್ಡ ಬಾಯಿ ಬೀಗ ಹಾಕಿಸಿಕೊಂಡಿದ್ದದ್ದು ಆಚ್ಚರಿ ಮೂಡಿಸಿತು. ದೊಡ್ಡ ಬಾಯಿ ಬೀಗವನ್ನು ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು . ಭಕ್ತಾದಿಗಳು ಕಿಲೋಮೀಟರ್ ಗಟ್ಟಲೆ ಮೆರವಣಿಗೆ ನಡೆಸಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಗೆ ನಮಸ್ಕರಿಸಿ ತಮ್ಮ ಸೇವೆಯನ್ನು ಸಂಪನ್ನಗೊಳಿಸಿದರು.4
- ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್ಕುಮಾರ್ ಹೇಳಿಕೆ • ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ ಮಳವಳ್ಳಿ:ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು-ಕೊರತೆ ಸಭೆ ಬುದವಾರ ಜರುಗಿತು. ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ದೂರು ಸ್ವೀಕಾರ ಸಭೆಯ ನಂತರ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಮಾತನಾಡಿ ಈ ದಿನ ತಹಶೀಲ್ದಾರ್ ಕಛೇರಿಯ ೧೬,ಸರ್ವೆ ಇಲಾಖೆಯ ೬, ಅರಣ್ಯ ಇಲಾಖೆ ೨,ಗ್ರಾ.ಪಂ ಪಿಡಿಓ ೨, ಬಿ.ಎಸ್.ಎನ್.ಎಲ್ ಕಛೇರಿಯ ೧, ಉಪವಿಭಾಗಾದಿಕಾರಿಗಳ ಕಚೇರಿಯ ೧,ಜಿ.ಪಂ.ಸಿಇಓ ಕಚೇರಿಯ ೧ ದೂರು ಸೇರಿದಂತೆ ಒಟ್ಟು ೨೯ ದೂರುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಕ್ರಮವಹಿಸಲಾಗಿದೆ ಎಂದ ಅವರು ತಳಗವಾದಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ದವಿಲ್ಲದ ನೀರು ಸರಬರಾಜು ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ,ಗ್ರಾಮದ ಜನರ ಅರೋಗ್ಯಕ್ಕೆ ಅನೂಕೂಲವಾದ ನೀರು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಅಧಿಕಾರಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಜವಬ್ದಾರಿಯಿಲ್ಲ ಸಾಮಾಜಿಕ ಕಾರ್ಯಕರ್ತರ ಎಂ.ವಿಜಯ್ ಅಕ್ರೋಶ ಈ ಸಂದರ್ಭದಲ್ಲಿ ದೂರು ಕೊಡಲು ಬಂದ ಸಾಮಾಜಿಕ ಕಾರ್ಯಕರ್ತ ಎಂ.ವಿಜಯ್ ಮಾಮರ ನ್ಯೂಸ್ ನೊಂದಿಗೆ ಮಾತನಾಡಿ ನಾನು ಆರ ಟಿ ಸಿಯಲ್ಲಿನ ಹೆಸರು ತಿದ್ದುಪಡಿಗೆ ಅರ್ಜಿ ನೀಡಿ ಕಳೆದ ವರ್ಷ ೨೦೨೪ ರಲ್ಲಿ ನೀಡಿದ್ದೆನೆ.ಇಲ್ಲಿಯವರೆಗೆ ಏನು ಕ್ರಮವಹಿಸಲ್ಲ,ಈಗ ಹಿಂಬರಹ ನೀಡಿ ಮೇಲ್ಮನವಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.ಇದನ್ನು ಮನವಿ ನೀಡಿದಾಗಲೇ ತಿಳಿಸಬಹುದಿತ್ತು.ತಿಳಿಸಿಲ್ಲ. ೧ ವರ್ಷ ಅಲೆಸಿ ಈಗ ಅದು ನಾವು ಕೇಳಿದಾಗ ಮಾತ್ರ ಹಿಂಬರಹ ನೀಡಿದ್ದಾರೆ ಇದು ತಾಲೂಕು ಕಛೇರಿಯ ಆಢಳಿತ ವ್ಯವಸ್ಥೆಯ ಭ್ರಷ್ಠಾಚಾರ ಮತ್ತು ನಿರ್ಲಕ್ಷತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಹಕ್ಕು ಖುಲಾಸೆಗೆ ೧ ವರ್ಷ ಬೇಕು ಯುವ ಮುಖಂಡ ಟಿ.ರಾಜೇಶ್ ಅರೋಪ ಈ ಸಂಭAದ ಲೋಕಾಯುಕ್ತರ ಬಂದಿದ್ದಾರೆAದು ದೂರು ನೀಡಲು ಬಂದ ಟಿ.ರಾಜೇಶ್ ಎಂಬುವರನ್ನು ಮಾಮರ ನ್ಯೂಸ್ ಪ್ರತಿನಿಧಿ ಪ್ರಶ್ನಿಸಿದಾಗ ವ್ಯವಸ್ಥೆಯ ವಿರುದ್ದ ಅಕ್ರೋಶ ವ್ಯಕ್ತವಾಯಿತು. ಕಛೇರಿಯ ಸಿಬಬಂದಿಗಳಿಗೆ ದಪ್ಪ ಚರ್ಮ,ಇವರಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ.ನನ್ನ ಪತ್ನಿಯ ಹೆಸರಿನಲ್ಲಿರುವ ಆರ್ಟಿಸಿಯಲ್ಲಿ ಸಹಕಾರ ಸಂಘದ ನಮೂದಾಗಿದ್ದು,ಸಾಲದ ಹಕ್ಕು ಖುಲಾಸೆ ಮಾಡುವಂತೆ ಅರ್ಜಿ ಅದಕ್ಕೆ ಸಂಭAದಿಸಿದAತೆ ಸಬ್ ರಿಜಿಸ್ಟರ್ ಕಛೇರಿಯ ಸಾಲ ಖುಲಾಸೆ ದೃಢೀಕರಣ ನೀಡಿ ವರ್ಷವಾಗಿದೆ,ಅದು ಇನ್ನು ಅಗಿಲ್ಲ.ಬಂದು ಕೇಳಿದರೆ ಆಢಳಿತ ತಹಸೀಲ್ದಾರ್ ಗುರುಪ್ರಸಾದ್ ಹೇಳುತ್ತಾರೆ ,ಆರ್ ಅರ್ ಟಿ ವಿಭಾಗದಲ್ಲಿ ಅನೇಕರು ಬದಲಾವಣೆಯಾಗಿದ್ದಾರೆ.ದಾಖಲಾತಿ ಸಿಗುತ್ತಿಲ್ಲ.ದಯವಿಟ್ಟು ಅದರ ಇನ್ನೊಂದು ಪ್ರತಿ ತಂದು ಕೊಡಿ ಮಾಡುತ್ತವೆ ಎಂದು ಪ್ರತಿಕ್ರಿಯಿಸುತ್ತಾರೆ. ಜನರ ಮನವಿಗಳಿಗೆ,ದೂರುಗಳಿಗೆ ಇಲ್ಲಿ ಬೆಲೆ ಇಲ್ಲದಾಗಿದೆ.ಈಗ ಪುನ: ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಕಲಿ ಪ್ರತಿ ತಗೆದುಕೊಂಡು ಸಲ್ಲಿಸಿದ್ದೆನೆ. ಇನ್ನು ಎಷ್ಟು ತಿಂಗಳು ಅಗುತ್ತದೋ ಗೊತ್ತಿಲ್ಲ.ಕಾನೂನು ಬದ್ದ ಒಂದು ಸಣ್ಣ ಕೆಲಸಕ್ಕೆ ೧ ವರ್ಷವಾದರೂ ಅಗಿಲ್ಲ,ಇದು ಆಢಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅರ್ಜಿ ನೀಡಿ ೨ ತಿಂಗಳಾದರೂ ಜಮೀನಿನ ದಾಖಲಾತಿ ನೀಡಿಲ್ಲ: ಈ ಸಂದರ್ಬದಲ್ಲಿ ಮುಖಂಡ ಕಾಂತರಾಜು ಮಾತನಾಡಿ ನನ್ನ ಸಂಬAಧಿಕರ ಜಮೀನಿನ ದಾಖಲಾತಿಗಾಗಿ ಅರ್ಜಿ ನೀಡಿ ೨ ತಿಂಗಳು ಕಳೆದಿದೆ,ಇನ್ನು ರೇಕಾರ್ಡು ರೂಮಿನ ಸಿಬ್ಬಂದಿಗಳು ದಾಖಲಾತಿ ನೀಡಿಲ್ಲ,ಇದಕ್ಕೆ ಸಂಭAದಿಸಿದAತೆ ತಹಶೀಲ್ದಾರ್ ಮತ್ತು ಆಢಳಿತ ಶಿರಸ್ತದಾರ್ ಗಮನಕ್ಕೆ ತಂದರೂ ಅವರು ಸೂಚನೆ ನೀಡಿದರೂ ಅವರ ಮಾತಿಗೂ ಕಿಮ್ಮತ್ತಿಲ್ಲ.ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಜನರು ದಿನನಿತ್ಯ ಅಲೆಯುವಂತಾಗಿದೆ ಎಂದು ತಾಲೂಕು ಕಛೇರಿಯ ಅವ್ಯವಸ್ಥೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ದರಕಾಸ್ತು ಜಮೀನು ಖಾತೆ ಮಾಡಿಕೊಡಲು ೪—೫ ವರ್ಷ ಅಲೆದಾಟ-ಅಲೆದು ಮೃತಪಟ್ಟ ತಂದೆ: ಕಾನೂನು ಬದ್ದವಾಗಿ ಸರ್ಕಾರ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಎಲ್ಲ ಅಗತ್ಯ ಪೂರಕ ದಾಖಲಾತಿಗಳು ನೀಡಿ ಮನವಿ ಮಾಡಿದರೂ ಕಳೆದ ೪-೫ ವರ್ಷದಿಂದ ಖಾತೆ ಮಾಡಿಕೊಟ್ಟಿಲ್ಲ ಇದಕ್ಕಾಗಿ ಅಲೆದು ಅಲೆದು ನಮ್ಮ ತಂದೆ ಸಾವನ್ನಪ್ಪಿದರೆಂದು ದೂರುದಾರ ಬಸವೇಶ್ ಬೇಸರ ವ್ಯಕ್ತಪಡಿಸಿದರು. ಕಳೆದ ೧ ವರ್ಷದಿಂದ ಖಾತೆ ಮಾಡಿಕೊಡುವಂತೆ ಎಲ್ಲ ಕಾನೂನುಬದ್ದವಾಗಿ ದಾಖಲಾತಿಗಳು ಸಲ್ಲಿಸಿದ್ದೆನೆ.ಅದರೂ ಖಾತೆ ಮಾಡಿಕೊಡುವಲ್ಲಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.ಇದೇ ರೀತಿಯ ೯೦ಕ್ಕೂ ಹೆಚ್ಚು ಪ್ರಕರಣಗಳು ವರ್ಷಾನುಗಟ್ಟಲೆಗಳಿಂದ ನೆನೆಗುದಿಗೆ ಬಿದ್ದಿವೆ,.ಕೇಳಿದರೆ ಅನ್ಲೈನ್ ಸಮಸ್ಯೆ ಎಂದು ಹೇಳುತ್ತಾರೆ.ಈ ಬಗ್ಗೆ ಅಪರ ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ದೂರು ನೀಡಿದೆವು, ಅವರು ಸಹ ಕಡಿತ ಪರಿಶೀಲಿಸಿ ಕೂಡಲೇ ಖಾತೆ ಮಾಡಿಕೊಡುವಂತೆ ಸೂಚಿಸಿದರು ಅವರ ಸೂಚನೆಗೂ ಬೆಲೆ-ಕಿಮ್ಮತ್ತಿಲವಾಗಿದೆ.ನಮ್ಮ ಕಡಿತ ಹಾಗೆಯ ಕೊಳೆಯುತ್ತಿದೆ. ಸರ್ಕಾರಗಳು ಜನರಿಗೆ ಅನೂಕೂಲವಾಗಲೆಂದು ಏನೇ ಯೋಜನೆ ಕಾನೂನು ತಂದರೂ ಅನುಷ್ಟಾನ ಮಾಡುವ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಬ್ದಾರಿತನದಿಂದ ಅಲೆಯಬೇಕಿದೆ ಎಂದು ತಮ್ಮ ಅಳನ್ನು ಈ ಸಂದರ್ಭದಲ್ಲಿ ತೊಡಿಕೊಂಡರು. ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸೆಪೆಕ್ಟರ್ ರವಿಕುಮಾರ್,ತಹಶೀಲ್ದಾರ್ ಡಾ.ಎಸ್.ವಿ.ಲೋಕೆಶ್ ಸೇರಿದಮತೆ ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಿತ್ರ-೧೧-೩ ಮಳವಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ತಂಡ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಲಹೆ ಸೂಚನೆ ನೀಡಿದರು. \1
- Post by Sunil Sunil1
- ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಕ್ರೋಧಗೊಂಡ ಒಳ ಮೀಸಲಾತಿ ಹೋರಾಟಗಾರರು ಇದೀಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ....1
- ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದ ಬಂಗಾರಪ್ಪ ಕಾಲೋನಿಯಲ್ಲಿ ಚರಂಡಿ ಯ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಬಂಗಾರಪ್ಪ ಕಾಲೋನಿ ನಿವಾಸಿ ಗಳ ದೇಹ ಸೇರುತ್ತಿದೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ ಮನವಿ ಸಲ್ಲಿಸಿದ ನಂತರವೂ ಯಾವುದೇ ಕೆಲಸ ಆಗಿಲ್ಲ ಎಂದು ಬಂಗಾರಪ್ಪ ಕಾಲೋನಿ ನಿವಾಸಿಗಳ ಅಳಲು ಅಲ್ಲದೆ ಚರಂಡಿ ಕೂಡ ಸ್ವಚ್ಛತೆ ಮಾಡುವ ಕಾರ್ಯ ಮಾಡಿಲ್ಲ , ಸ್ಥಳೀಯ ನಿವಾಸಿಗಳು ಮಕ್ಕಳು ಅನಾರೋಗ್ಯ ಪೀಡಿತ ರಾಗುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿದ್ದಾರೆ.4
- *ಭಾರತ ನಲ್ಲಿ ವೈರಲ್*1