logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

21 ಅಡಿ ಎತ್ತರದ ಕಂಚಿನ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ ಅಂಬೇಡ್ಕರ್‌ ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ 21 ಅಡಿ ಎತ್ತರದ ಕಂಚಿನ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ ಅಂಬೇಡ್ಕರ್‌ ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಕೋಲಾರ: 21 ಅಡಿ ಎತ್ತರದ ಅಂಬೇಡ್ಕರ್‌ ಕಂಚಿನ ಭವ್ಯ ಪ್ರತಿಮೆ ನಿರ್ಮಿಸಲು ಭೂಮಿಪೂಜೆ ಸಲ್ಲಿಸಿದ್ದು, ಕೋಲಾರ ಜಿಲ್ಲೆಯ ಪಾಲಿಗೆ ಇದು ಚಾರಿತ್ರಿಕ ದಿನ. ಅಂಬೇಡ್ಕರ್ ಒಂದು ಜಾತಿಗೆ‌ ಸೀಮಿತವಾದವರಲ್ಲ; ಅವರು ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಬಣ್ಣಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌ದೇಶದಲ್ಲಿ ನಾವೆಲ್ಲಾ ನೆಮ್ಮದಿಯಾಗಿ ಇರಲು ಕಾರಣ ‌ಅಂಬೇಡ್ಕರ್. ಹಿಂದೆ ಬ್ರಿಟಿಷರ ದಬ್ಬಾಳಿಕೆಯಲ್ಲಿ ನೋವುಂಡು ಬದುಕಿದ್ದೆವು. ಅಂಬೇಡ್ಕರ್ ಕಾರಣ‌ ಈಗ ನಾವೆಲ್ಲಾ ಆರಾಮವಾಗಿ ಬದುಕುತ್ತಿದ್ದೇವೆ ಎಂದರು. ಮೊದಲಿಗೆ ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಸಂಪನ್ಮೂಲ ಕ್ರೋಡೀಕರಿಸಿ ಪ್ರತಿಮೆ ನಿರ್ಮಿಸುವ ಉದ್ದೇಶವಿತ್ತು. ಇದಕ್ಕೆ ಸಂಪನ್ಮೂಲ ಹೊಂದಿಸುವುದೂ ಅಷ್ಟ ಕಷ್ಟವಲ್ಲ. ನಾನೇ ಪೂರ್ಣ ಹಣ ಕೊಡುತ್ತಿದ್ದೆ. ಆದರೆ, ಇದು ಅಂಬೇಡ್ಕರ್‌ ಕಾರ್ಯಕ್ರಮವಾಗಿದ್ದು, ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಹೀಗಾಗಿ, ನಗರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದಲೂ ಹಣ ಕ್ರೋಡೀಕರಿಸಲಾಗುತ್ತಿದೆ. ಸಾರ್ವಜನಿಕರು ಒಂದೊಂದು ಇಟ್ಟಿಗೆ ಕೊಡಿ. ನಾಲ್ಕೈದು ಜನ ಸೇರಿ ಒಂದು ಸಿಮೆಂಟ್ ಮೂಟೆ ತಂದುಕೊಡಿ ಎಂದು ಮನವಿ ಮಾಡಿದರು. ಜಿಲ್ಲಾಡಳಿತ ಕಚೇರಿ‌ ಕಟ್ಟಡ ನಿರ್ಮಿಸಲು ಈ ಜಾಗ ಗುರುತಿಸಿದ್ದೇ ನಾನು. ರಿಯಲ್ ಎಸ್ಟೇಟ್ ಉದ್ದೇಶವಿದೆ ಎಂದು‌ ಕೆಲವರು ಆಗ ಪ್ರತಿಭಟನೆ ಮಾಡಿದರು. ಆದರೆ, ಕೋಲಾರ ತಾಲ್ಲೂಕಿನಲ್ಲಿ ಒಂದಿಂಚೂ ಸ್ವಂತ ಜಮೀನು ಇಲ್ಲ. ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಗೆಸ್ಟ್ ಹೌಸ್ ನನ್ನ ಅಣ್ಣನದ್ದು ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್ ಕುಮಾರ್ ಮಾತನಾಡಿ, ‘ಇದು ನಮ್ಮೆಲ್ಲರ ಪಾಲಿಗೆ ಐತಿಹಾಸಿಕ ದಿನವಿದು. ನಾವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದೇವೆ. ಅಂಬೇಡ್ಕರ್‌ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ತುಮಕೂರಿನಲ್ಲಿ 12 ಅಡಿ ಪ್ರತಿಮೆ ಇದೆ. ನಮ್ಮಲ್ಲಿ 21 ಅಡಿ ಪ್ರತಿಮೆ ನಿರ್ಮಾಣವಾಗಲಿದ್ದು, ಸುಮಾರು 1,200 ಕೆ.ಜಿ ತೂಕ ಇರಲಿದೆ. ಬರೀ ಪ್ರತಿಮೆಗೆ ಸುಮಾರು ₹ 1.20 ಕೋಟಿ ವೆಚ್ಚ ಹಿಡಿಯುತ್ತದೆ‌. ಈ ಸ್ಥಳ ಸೌಂದರ್ಯೀಕರಣಕ್ಕೆ ಉಳಿದ ಹಣ ವ್ಯಯಿಸಲಾಗುತ್ತದೆ‌. ಇನ್ನೂ ಹೆಚ್ಚು ಹಣ ಬೇಕಾಗಬಹುದು’ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ನೇರ ಹಣ ಬಳಸುವಂತಿಲ್ಲ. ಹೀಗಾಗಿ, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಡೀಕರಿಸಲಾಗಿದೆ. ಶಾಸಕ ಕೊತ್ತೂರು ತಮ್ಮ ಅನುದಾನದಲ್ಲಿ ₹ 25 ಲಕ್ಷ ಅನುದಾನ ಕೊಡುತ್ತಿದ್ದಾರೆ ನನ್ನ ಅನುದಾನದಲ್ಲಿ ₹ 25 ಲಕ್ಷ ಕೊಡುತ್ತೇನೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ₹ 12 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯಿತಿಗಳಿಂದ ₹ 25 ಲಕ್ಷ ಸಿಗಲಿದೆ,‌ ಕೋಲಾರ ನಗರಸಭೆ ₹ 30 ಲಕ್ಷ ನೀಡಲಿದೆ. ಹಾಲು ಒಕ್ಕೂಟದಿಂದ ₹ 15ಲಕ್ಷ ಸಿಗಲಿದೆ. ‘ಕುಡಾ’ದಿಂದಲೂ ₹ 20 ಲಕ್ಷ ‌ಸಿಗಲಿದೆ ಎಂದು ಮಾಹಿತಿ ನೀಡಿದರು. ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಬೇಕು. ಜಿಲ್ಲಾಧಿಕಾರಿ ರವಿ ಇಲ್ಲಿರುವಂತೇ ಉದ್ಘಾಟನೆ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಅನಾವರಣ ಕಾರ್ಯಕ್ರಮಕ್ಕೆ ಕರೆಸೋಣ ಎಂದರು. ಇದಲ್ಲದೇ, ಸಮಾಜ ಕಲ್ಯಾಣ ಇಲಾಖೆಯಿಂದ ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಉದ್ಘಾಟಿಸಲು ಸಮಾಜ‌ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ದಿನಾಂಕ ಕೇಳಲಾಗಿದೆ. ₹ 1 ಕೋಟಿ ವೆಚ್ಚದಲ್ಲಿ ನಚಿಕೇತ ನಿಲಯಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಟಿ.ಚನ್ನಯ್ಯ ವಸತಿ ಶಾಲೆ ನಿರ್ಮಿಸುವ ಯೋಜನೆ ಇದೆ. 300 ಮಕ್ಕಳು ಇರುವ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು. ಕೋಲಾರ ತಾಲ್ಲೂಕಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಐದು ಎಕರೆ ಜಾಗ ಮಂಜೂರು ಮಾಡಿಕೊಡಬೇಕಿದೆ‌. ನನ್ನ ಅನುದಾನದಲ್ಲಿ ₹ 1ಕೋಟಿ ಕೊಡುತ್ತೇನೆ. ಶಾಸಕರೂ ಕೊಡುತ್ತಾರೆ. ಇದಕ್ಕೆ ಸರ್ಕಾರದಿಂದಲೂ ಅನುದಾನ ತರಬಹುದು ಎಂದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಶಕ್ತಿ ಕೇಂದ್ರದಲ್ಲಿ ಶಕ್ತಿ ದೇವರಾಗಿ ಅಂಬೇಡ್ಕರ್ ಇರಲಿದ್ದಾರೆ‌. ಹೀಗಾಗಿ, ಅವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲಾಗುತ್ತದೆ. ಸಂವಿಧಾನ ಹಾಗೂ ಸಮಾನತೆಗೆ ಸಂದ ಗೌರವವಿದು. ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರಷ್ಟು ಚರ್ಚೆ, ವಿಮರ್ಶೆ. ಪರಾಮರ್ಶೆಗೆ ಒಳಗಾದ ‌ಮತ್ತೊಬ್ಬ ರಾಜಕೀಯ ನಾಯಕರಿಲ್ಲ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲರಿಗೂ ಸೇರಿದ ಸರ್ವಶ್ರೇಷ್ಠ ನಾಯಕ’ ಎಂದು ಹೇಳಿದರು. ಜನರ ಪ್ರೀತಿಯಿಂದಾಗಿ ₹ 1ಕೋಟಿಯನ್ನು ಕುಳಿತಲ್ಲಿಯೇ ಸಂಗ್ರಹ ಮಾಡಲಾಯಿತು. ಹೀಗಾಗಿ, ಸಂಪನ್ಮೂಲದ‌ ಕೊರತೆ ಬೀಳಲಿಲ್ಲ. ಪ್ರತಿಮೆ ನಿರ್ಮಿಸಲು ಸರ್ಕಾರದ ಅನುಮತಿ ಸಿಕ್ಕಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು ಹಾಗೂ ಸಮುದಾಯದ ಮುಖಂಡರು ಬೆಂಬಲ ನೀಡಿದ್ದಾರೆ ಎಂದರು. ಅಂಬೇಡ್ಕರ್‌ ಜೀವನ, ಸಾಧನೆ ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಸಂಬಂಧ ಕೋಲಾರ ತಾಲ್ಲೂಕಿನ ಈಕಂಬಳ್ಳಿಯಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ.‌ ಸದ್ಯದಲ್ಲೇ ಮಂಜೂರು ‌ಮಾಡಲಾಗುವುದು. ಬುದ್ಧ ವಿಹಾರಕ್ಕೆ ಮಂಗಸಂದ್ರ ಬಳಿ ಎರಡು ಎಕರೆ ಜಾಗ ಗುರುತಿಸಲಾಗಿದೆ ಎಂದು ನುಡಿದರು. ಸಮಾಜ ಕಲ್ಯಾಣ‌ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ,‌ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ನಗರಸಭೆ ಆಯುಕ್ತ ನವೀನ್ ಚಂದ್ರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ‘ಕುಡಾ’ ಅಧ್ಯಕ್ಷ ಮೊಹಮದ್ ಹನಿಫ್, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಚಂದ್ರಶೇಖರ್, ‌ಲಕ್ಷ್ಮಿದೇವಮ್ಮ, ವೆಂಕಟಚಲಪತಿ, ವರದೇನಹಳ್ಳಿ ವೆಂಕಟೇಶ್, ಮೇಡಹಾಳ ಮುನಿಅಂಜಿನಪ್ಪ, ಮಂಜುಳಾ, ಗೋವಿಂದರಾಜು, ಹಾರೋಹಳ್ಳಿ ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಪಾಲ್ಗೊಂಡಿದ್ದರು. ಕೋಲಾರ: 21 ಅಡಿ ಎತ್ತರದ ಅಂಬೇಡ್ಕರ್‌ ಕಂಚಿನ ಭವ್ಯ ಪ್ರತಿಮೆ ನಿರ್ಮಿಸಲು ಭೂಮಿಪೂಜೆ ಸಲ್ಲಿಸಿದ್ದು, ಕೋಲಾರ ಜಿಲ್ಲೆಯ ಪಾಲಿಗೆ ಇದು ಚಾರಿತ್ರಿಕ ದಿನ. ಅಂಬೇಡ್ಕರ್ ಒಂದು ಜಾತಿಗೆ‌ ಸೀಮಿತವಾದವರಲ್ಲ; ಅವರು ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಬಣ್ಣಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌ದೇಶದಲ್ಲಿ ನಾವೆಲ್ಲಾ ನೆಮ್ಮದಿಯಾಗಿ ಇರಲು ಕಾರಣ ‌ಅಂಬೇಡ್ಕರ್. ಹಿಂದೆ ಬ್ರಿಟಿಷರ ದಬ್ಬಾಳಿಕೆಯಲ್ಲಿ ನೋವುಂಡು ಬದುಕಿದ್ದೆವು. ಅಂಬೇಡ್ಕರ್ ಕಾರಣ‌ ಈಗ ನಾವೆಲ್ಲಾ ಆರಾಮವಾಗಿ ಬದುಕುತ್ತಿದ್ದೇವೆ ಎಂದರು. ಮೊದಲಿಗೆ ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಸಂಪನ್ಮೂಲ ಕ್ರೋಡೀಕರಿಸಿ ಪ್ರತಿಮೆ ನಿರ್ಮಿಸುವ ಉದ್ದೇಶವಿತ್ತು. ಇದಕ್ಕೆ ಸಂಪನ್ಮೂಲ ಹೊಂದಿಸುವುದೂ ಅಷ್ಟ ಕಷ್ಟವಲ್ಲ. ನಾನೇ ಪೂರ್ಣ ಹಣ ಕೊಡುತ್ತಿದ್ದೆ. ಆದರೆ, ಇದು ಅಂಬೇಡ್ಕರ್‌ ಕಾರ್ಯಕ್ರಮವಾಗಿದ್ದು, ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಹೀಗಾಗಿ, ನಗರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದಲೂ ಹಣ ಕ್ರೋಡೀಕರಿಸಲಾಗುತ್ತಿದೆ. ಸಾರ್ವಜನಿಕರು ಒಂದೊಂದು ಇಟ್ಟಿಗೆ ಕೊಡಿ. ನಾಲ್ಕೈದು ಜನ ಸೇರಿ ಒಂದು ಸಿಮೆಂಟ್ ಮೂಟೆ ತಂದುಕೊಡಿ ಎಂದು ಮನವಿ ಮಾಡಿದರು. ಜಿಲ್ಲಾಡಳಿತ ಕಚೇರಿ‌ ಕಟ್ಟಡ ನಿರ್ಮಿಸಲು ಈ ಜಾಗ ಗುರುತಿಸಿದ್ದೇ ನಾನು. ರಿಯಲ್ ಎಸ್ಟೇಟ್ ಉದ್ದೇಶವಿದೆ ಎಂದು‌ ಕೆಲವರು ಆಗ ಪ್ರತಿಭಟನೆ ಮಾಡಿದರು. ಆದರೆ, ಕೋಲಾರ ತಾಲ್ಲೂಕಿನಲ್ಲಿ ಒಂದಿಂಚೂ ಸ್ವಂತ ಜಮೀನು ಇಲ್ಲ. ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಗೆಸ್ಟ್ ಹೌಸ್ ನನ್ನ ಅಣ್ಣನದ್ದು ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್ ಕುಮಾರ್ ಮಾತನಾಡಿ, ‘ಇದು ನಮ್ಮೆಲ್ಲರ ಪಾಲಿಗೆ ಐತಿಹಾಸಿಕ ದಿನವಿದು. ನಾವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದೇವೆ. ಅಂಬೇಡ್ಕರ್‌ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ತುಮಕೂರಿನಲ್ಲಿ 12 ಅಡಿ ಪ್ರತಿಮೆ ಇದೆ. ನಮ್ಮಲ್ಲಿ 21 ಅಡಿ ಪ್ರತಿಮೆ ನಿರ್ಮಾಣವಾಗಲಿದ್ದು, ಸುಮಾರು 1,200 ಕೆ.ಜಿ ತೂಕ ಇರಲಿದೆ. ಬರೀ ಪ್ರತಿಮೆಗೆ ಸುಮಾರು ₹ 1.20 ಕೋಟಿ ವೆಚ್ಚ ಹಿಡಿಯುತ್ತದೆ‌. ಈ ಸ್ಥಳ ಸೌಂದರ್ಯೀಕರಣಕ್ಕೆ ಉಳಿದ ಹಣ ವ್ಯಯಿಸಲಾಗುತ್ತದೆ‌. ಇನ್ನೂ ಹೆಚ್ಚು ಹಣ ಬೇಕಾಗಬಹುದು’ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ನೇರ ಹಣ ಬಳಸುವಂತಿಲ್ಲ. ಹೀಗಾಗಿ, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಡೀಕರಿಸಲಾಗಿದೆ. ಶಾಸಕ ಕೊತ್ತೂರು ತಮ್ಮ ಅನುದಾನದಲ್ಲಿ ₹ 25 ಲಕ್ಷ ಅನುದಾನ ಕೊಡುತ್ತಿದ್ದಾರೆ ನನ್ನ ಅನುದಾನದಲ್ಲಿ ₹ 25 ಲಕ್ಷ ಕೊಡುತ್ತೇನೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ₹ 12 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯಿತಿಗಳಿಂದ ₹ 25 ಲಕ್ಷ ಸಿಗಲಿದೆ,‌ ಕೋಲಾರ ನಗರಸಭೆ ₹ 30 ಲಕ್ಷ ನೀಡಲಿದೆ. ಹಾಲು ಒಕ್ಕೂಟದಿಂದ ₹ 15ಲಕ್ಷ ಸಿಗಲಿದೆ. ‘ಕುಡಾ’ದಿಂದಲೂ ₹ 20 ಲಕ್ಷ ‌ಸಿಗಲಿದೆ ಎಂದು ಮಾಹಿತಿ ನೀಡಿದರು. ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಬೇಕು. ಜಿಲ್ಲಾಧಿಕಾರಿ ರವಿ ಇಲ್ಲಿರುವಂತೇ ಉದ್ಘಾಟನೆ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಅನಾವರಣ ಕಾರ್ಯಕ್ರಮಕ್ಕೆ ಕರೆಸೋಣ ಎಂದರು. ಇದಲ್ಲದೇ, ಸಮಾಜ ಕಲ್ಯಾಣ ಇಲಾಖೆಯಿಂದ ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಉದ್ಘಾಟಿಸಲು ಸಮಾಜ‌ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ದಿನಾಂಕ ಕೇಳಲಾಗಿದೆ. ₹ 1 ಕೋಟಿ ವೆಚ್ಚದಲ್ಲಿ ನಚಿಕೇತ ನಿಲಯಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಟಿ.ಚನ್ನಯ್ಯ ವಸತಿ ಶಾಲೆ ನಿರ್ಮಿಸುವ ಯೋಜನೆ ಇದೆ. 300 ಮಕ್ಕಳು ಇರುವ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು. ಕೋಲಾರ ತಾಲ್ಲೂಕಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಐದು ಎಕರೆ ಜಾಗ ಮಂಜೂರು ಮಾಡಿಕೊಡಬೇಕಿದೆ‌. ನನ್ನ ಅನುದಾನದಲ್ಲಿ ₹ 1ಕೋಟಿ ಕೊಡುತ್ತೇನೆ. ಶಾಸಕರೂ ಕೊಡುತ್ತಾರೆ. ಇದಕ್ಕೆ ಸರ್ಕಾರದಿಂದಲೂ ಅನುದಾನ ತರಬಹುದು ಎಂದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಶಕ್ತಿ ಕೇಂದ್ರದಲ್ಲಿ ಶಕ್ತಿ ದೇವರಾಗಿ ಅಂಬೇಡ್ಕರ್ ಇರಲಿದ್ದಾರೆ‌. ಹೀಗಾಗಿ, ಅವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲಾಗುತ್ತದೆ. ಸಂವಿಧಾನ ಹಾಗೂ ಸಮಾನತೆಗೆ ಸಂದ ಗೌರವವಿದು. ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರಷ್ಟು ಚರ್ಚೆ, ವಿಮರ್ಶೆ. ಪರಾಮರ್ಶೆಗೆ ಒಳಗಾದ ‌ಮತ್ತೊಬ್ಬ ರಾಜಕೀಯ ನಾಯಕರಿಲ್ಲ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲರಿಗೂ ಸೇರಿದ ಸರ್ವಶ್ರೇಷ್ಠ ನಾಯಕ’ ಎಂದು ಹೇಳಿದರು. ಜನರ ಪ್ರೀತಿಯಿಂದಾಗಿ ₹ 1ಕೋಟಿಯನ್ನು ಕುಳಿತಲ್ಲಿಯೇ ಸಂಗ್ರಹ ಮಾಡಲಾಯಿತು. ಹೀಗಾಗಿ, ಸಂಪನ್ಮೂಲದ‌ ಕೊರತೆ ಬೀಳಲಿಲ್ಲ. ಪ್ರತಿಮೆ ನಿರ್ಮಿಸಲು ಸರ್ಕಾರದ ಅನುಮತಿ ಸಿಕ್ಕಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು ಹಾಗೂ ಸಮುದಾಯದ ಮುಖಂಡರು ಬೆಂಬಲ ನೀಡಿದ್ದಾರೆ ಎಂದರು. ಅಂಬೇಡ್ಕರ್‌ ಜೀವನ, ಸಾಧನೆ ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಸಂಬಂಧ ಕೋಲಾರ ತಾಲ್ಲೂಕಿನ ಈಕಂಬಳ್ಳಿಯಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ.‌ ಸದ್ಯದಲ್ಲೇ ಮಂಜೂರು ‌ಮಾಡಲಾಗುವುದು. ಬುದ್ಧ ವಿಹಾರಕ್ಕೆ ಮಂಗಸಂದ್ರ ಬಳಿ ಎರಡು ಎಕರೆ ಜಾಗ ಗುರುತಿಸಲಾಗಿದೆ ಎಂದು ನುಡಿದರು. ಸಮಾಜ ಕಲ್ಯಾಣ‌ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ,‌ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ನಗರಸಭೆ ಆಯುಕ್ತ ನವೀನ್ ಚಂದ್ರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ‘ಕುಡಾ’ ಅಧ್ಯಕ್ಷ ಮೊಹಮದ್ ಹನಿಫ್, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಚಂದ್ರಶೇಖರ್, ‌ಲಕ್ಷ್ಮಿದೇವಮ್ಮ, ವೆಂಕಟಚಲಪತಿ, ವರದೇನಹಳ್ಳಿ ವೆಂಕಟೇಶ್, ಮೇಡಹಾಳ ಮುನಿಅಂಜಿನಪ್ಪ, ಮಂಜುಳಾ, ಗೋವಿಂದರಾಜು, ಹಾರೋಹಳ್ಳಿ ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಪಾಲ್ಗೊಂಡಿದ್ದರು.

18 hrs ago
user_Rownak Ali khan
Rownak Ali khan
Local News Reporter ಕೋಲಾರ, ಕೋಲಾರ, ಕರ್ನಾಟಕ•
18 hrs ago

21 ಅಡಿ ಎತ್ತರದ ಕಂಚಿನ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ ಅಂಬೇಡ್ಕರ್‌ ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ 21 ಅಡಿ ಎತ್ತರದ ಕಂಚಿನ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ ಅಂಬೇಡ್ಕರ್‌ ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಕೋಲಾರ: 21 ಅಡಿ ಎತ್ತರದ ಅಂಬೇಡ್ಕರ್‌ ಕಂಚಿನ ಭವ್ಯ ಪ್ರತಿಮೆ ನಿರ್ಮಿಸಲು ಭೂಮಿಪೂಜೆ ಸಲ್ಲಿಸಿದ್ದು, ಕೋಲಾರ ಜಿಲ್ಲೆಯ ಪಾಲಿಗೆ ಇದು ಚಾರಿತ್ರಿಕ ದಿನ. ಅಂಬೇಡ್ಕರ್ ಒಂದು ಜಾತಿಗೆ‌ ಸೀಮಿತವಾದವರಲ್ಲ; ಅವರು ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಬಣ್ಣಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌ದೇಶದಲ್ಲಿ ನಾವೆಲ್ಲಾ ನೆಮ್ಮದಿಯಾಗಿ ಇರಲು ಕಾರಣ ‌ಅಂಬೇಡ್ಕರ್. ಹಿಂದೆ ಬ್ರಿಟಿಷರ ದಬ್ಬಾಳಿಕೆಯಲ್ಲಿ ನೋವುಂಡು ಬದುಕಿದ್ದೆವು. ಅಂಬೇಡ್ಕರ್ ಕಾರಣ‌ ಈಗ ನಾವೆಲ್ಲಾ ಆರಾಮವಾಗಿ ಬದುಕುತ್ತಿದ್ದೇವೆ ಎಂದರು. ಮೊದಲಿಗೆ ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಸಂಪನ್ಮೂಲ ಕ್ರೋಡೀಕರಿಸಿ ಪ್ರತಿಮೆ ನಿರ್ಮಿಸುವ ಉದ್ದೇಶವಿತ್ತು. ಇದಕ್ಕೆ ಸಂಪನ್ಮೂಲ ಹೊಂದಿಸುವುದೂ ಅಷ್ಟ ಕಷ್ಟವಲ್ಲ. ನಾನೇ ಪೂರ್ಣ ಹಣ ಕೊಡುತ್ತಿದ್ದೆ. ಆದರೆ, ಇದು ಅಂಬೇಡ್ಕರ್‌ ಕಾರ್ಯಕ್ರಮವಾಗಿದ್ದು, ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಹೀಗಾಗಿ, ನಗರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದಲೂ ಹಣ ಕ್ರೋಡೀಕರಿಸಲಾಗುತ್ತಿದೆ. ಸಾರ್ವಜನಿಕರು ಒಂದೊಂದು ಇಟ್ಟಿಗೆ ಕೊಡಿ. ನಾಲ್ಕೈದು ಜನ ಸೇರಿ ಒಂದು ಸಿಮೆಂಟ್ ಮೂಟೆ ತಂದುಕೊಡಿ ಎಂದು ಮನವಿ ಮಾಡಿದರು. ಜಿಲ್ಲಾಡಳಿತ ಕಚೇರಿ‌ ಕಟ್ಟಡ ನಿರ್ಮಿಸಲು ಈ ಜಾಗ ಗುರುತಿಸಿದ್ದೇ ನಾನು. ರಿಯಲ್ ಎಸ್ಟೇಟ್ ಉದ್ದೇಶವಿದೆ ಎಂದು‌ ಕೆಲವರು ಆಗ ಪ್ರತಿಭಟನೆ ಮಾಡಿದರು. ಆದರೆ, ಕೋಲಾರ ತಾಲ್ಲೂಕಿನಲ್ಲಿ ಒಂದಿಂಚೂ ಸ್ವಂತ ಜಮೀನು ಇಲ್ಲ. ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಗೆಸ್ಟ್ ಹೌಸ್ ನನ್ನ ಅಣ್ಣನದ್ದು ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್ ಕುಮಾರ್ ಮಾತನಾಡಿ, ‘ಇದು ನಮ್ಮೆಲ್ಲರ ಪಾಲಿಗೆ ಐತಿಹಾಸಿಕ ದಿನವಿದು. ನಾವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದೇವೆ. ಅಂಬೇಡ್ಕರ್‌ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ತುಮಕೂರಿನಲ್ಲಿ 12 ಅಡಿ ಪ್ರತಿಮೆ ಇದೆ. ನಮ್ಮಲ್ಲಿ 21 ಅಡಿ ಪ್ರತಿಮೆ ನಿರ್ಮಾಣವಾಗಲಿದ್ದು, ಸುಮಾರು 1,200 ಕೆ.ಜಿ ತೂಕ ಇರಲಿದೆ. ಬರೀ ಪ್ರತಿಮೆಗೆ ಸುಮಾರು ₹ 1.20 ಕೋಟಿ ವೆಚ್ಚ ಹಿಡಿಯುತ್ತದೆ‌. ಈ ಸ್ಥಳ ಸೌಂದರ್ಯೀಕರಣಕ್ಕೆ ಉಳಿದ ಹಣ ವ್ಯಯಿಸಲಾಗುತ್ತದೆ‌. ಇನ್ನೂ ಹೆಚ್ಚು ಹಣ ಬೇಕಾಗಬಹುದು’ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ನೇರ ಹಣ ಬಳಸುವಂತಿಲ್ಲ. ಹೀಗಾಗಿ, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಡೀಕರಿಸಲಾಗಿದೆ. ಶಾಸಕ ಕೊತ್ತೂರು ತಮ್ಮ ಅನುದಾನದಲ್ಲಿ ₹ 25 ಲಕ್ಷ ಅನುದಾನ ಕೊಡುತ್ತಿದ್ದಾರೆ ನನ್ನ ಅನುದಾನದಲ್ಲಿ ₹ 25 ಲಕ್ಷ ಕೊಡುತ್ತೇನೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ₹ 12 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯಿತಿಗಳಿಂದ ₹ 25 ಲಕ್ಷ ಸಿಗಲಿದೆ,‌ ಕೋಲಾರ ನಗರಸಭೆ ₹ 30 ಲಕ್ಷ ನೀಡಲಿದೆ. ಹಾಲು ಒಕ್ಕೂಟದಿಂದ ₹ 15ಲಕ್ಷ ಸಿಗಲಿದೆ. ‘ಕುಡಾ’ದಿಂದಲೂ ₹ 20 ಲಕ್ಷ ‌ಸಿಗಲಿದೆ ಎಂದು ಮಾಹಿತಿ ನೀಡಿದರು. ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಬೇಕು. ಜಿಲ್ಲಾಧಿಕಾರಿ ರವಿ ಇಲ್ಲಿರುವಂತೇ ಉದ್ಘಾಟನೆ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಅನಾವರಣ ಕಾರ್ಯಕ್ರಮಕ್ಕೆ ಕರೆಸೋಣ ಎಂದರು. ಇದಲ್ಲದೇ, ಸಮಾಜ ಕಲ್ಯಾಣ ಇಲಾಖೆಯಿಂದ ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಉದ್ಘಾಟಿಸಲು ಸಮಾಜ‌ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ದಿನಾಂಕ ಕೇಳಲಾಗಿದೆ. ₹ 1 ಕೋಟಿ ವೆಚ್ಚದಲ್ಲಿ ನಚಿಕೇತ ನಿಲಯಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಟಿ.ಚನ್ನಯ್ಯ ವಸತಿ ಶಾಲೆ ನಿರ್ಮಿಸುವ ಯೋಜನೆ ಇದೆ. 300 ಮಕ್ಕಳು ಇರುವ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು. ಕೋಲಾರ ತಾಲ್ಲೂಕಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಐದು ಎಕರೆ ಜಾಗ ಮಂಜೂರು ಮಾಡಿಕೊಡಬೇಕಿದೆ‌. ನನ್ನ ಅನುದಾನದಲ್ಲಿ ₹ 1ಕೋಟಿ ಕೊಡುತ್ತೇನೆ. ಶಾಸಕರೂ ಕೊಡುತ್ತಾರೆ. ಇದಕ್ಕೆ ಸರ್ಕಾರದಿಂದಲೂ ಅನುದಾನ ತರಬಹುದು ಎಂದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಶಕ್ತಿ ಕೇಂದ್ರದಲ್ಲಿ ಶಕ್ತಿ ದೇವರಾಗಿ ಅಂಬೇಡ್ಕರ್ ಇರಲಿದ್ದಾರೆ‌. ಹೀಗಾಗಿ, ಅವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲಾಗುತ್ತದೆ. ಸಂವಿಧಾನ ಹಾಗೂ ಸಮಾನತೆಗೆ ಸಂದ ಗೌರವವಿದು. ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರಷ್ಟು ಚರ್ಚೆ, ವಿಮರ್ಶೆ. ಪರಾಮರ್ಶೆಗೆ ಒಳಗಾದ ‌ಮತ್ತೊಬ್ಬ ರಾಜಕೀಯ ನಾಯಕರಿಲ್ಲ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲರಿಗೂ ಸೇರಿದ ಸರ್ವಶ್ರೇಷ್ಠ ನಾಯಕ’ ಎಂದು ಹೇಳಿದರು. ಜನರ ಪ್ರೀತಿಯಿಂದಾಗಿ ₹ 1ಕೋಟಿಯನ್ನು ಕುಳಿತಲ್ಲಿಯೇ ಸಂಗ್ರಹ ಮಾಡಲಾಯಿತು. ಹೀಗಾಗಿ, ಸಂಪನ್ಮೂಲದ‌ ಕೊರತೆ ಬೀಳಲಿಲ್ಲ. ಪ್ರತಿಮೆ ನಿರ್ಮಿಸಲು ಸರ್ಕಾರದ ಅನುಮತಿ ಸಿಕ್ಕಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು ಹಾಗೂ ಸಮುದಾಯದ ಮುಖಂಡರು ಬೆಂಬಲ ನೀಡಿದ್ದಾರೆ ಎಂದರು. ಅಂಬೇಡ್ಕರ್‌ ಜೀವನ, ಸಾಧನೆ ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಸಂಬಂಧ ಕೋಲಾರ ತಾಲ್ಲೂಕಿನ ಈಕಂಬಳ್ಳಿಯಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ.‌ ಸದ್ಯದಲ್ಲೇ ಮಂಜೂರು ‌ಮಾಡಲಾಗುವುದು. ಬುದ್ಧ ವಿಹಾರಕ್ಕೆ ಮಂಗಸಂದ್ರ ಬಳಿ ಎರಡು ಎಕರೆ ಜಾಗ ಗುರುತಿಸಲಾಗಿದೆ ಎಂದು ನುಡಿದರು. ಸಮಾಜ ಕಲ್ಯಾಣ‌ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ,‌ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ನಗರಸಭೆ ಆಯುಕ್ತ ನವೀನ್ ಚಂದ್ರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ‘ಕುಡಾ’ ಅಧ್ಯಕ್ಷ ಮೊಹಮದ್ ಹನಿಫ್, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಚಂದ್ರಶೇಖರ್, ‌ಲಕ್ಷ್ಮಿದೇವಮ್ಮ, ವೆಂಕಟಚಲಪತಿ, ವರದೇನಹಳ್ಳಿ ವೆಂಕಟೇಶ್, ಮೇಡಹಾಳ ಮುನಿಅಂಜಿನಪ್ಪ, ಮಂಜುಳಾ, ಗೋವಿಂದರಾಜು, ಹಾರೋಹಳ್ಳಿ ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಪಾಲ್ಗೊಂಡಿದ್ದರು. ಕೋಲಾರ: 21 ಅಡಿ ಎತ್ತರದ ಅಂಬೇಡ್ಕರ್‌ ಕಂಚಿನ ಭವ್ಯ ಪ್ರತಿಮೆ ನಿರ್ಮಿಸಲು ಭೂಮಿಪೂಜೆ ಸಲ್ಲಿಸಿದ್ದು, ಕೋಲಾರ ಜಿಲ್ಲೆಯ ಪಾಲಿಗೆ ಇದು ಚಾರಿತ್ರಿಕ ದಿನ. ಅಂಬೇಡ್ಕರ್ ಒಂದು ಜಾತಿಗೆ‌ ಸೀಮಿತವಾದವರಲ್ಲ; ಅವರು ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಬಣ್ಣಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌ದೇಶದಲ್ಲಿ ನಾವೆಲ್ಲಾ ನೆಮ್ಮದಿಯಾಗಿ ಇರಲು ಕಾರಣ ‌ಅಂಬೇಡ್ಕರ್. ಹಿಂದೆ ಬ್ರಿಟಿಷರ ದಬ್ಬಾಳಿಕೆಯಲ್ಲಿ ನೋವುಂಡು ಬದುಕಿದ್ದೆವು. ಅಂಬೇಡ್ಕರ್ ಕಾರಣ‌ ಈಗ ನಾವೆಲ್ಲಾ ಆರಾಮವಾಗಿ ಬದುಕುತ್ತಿದ್ದೇವೆ ಎಂದರು. ಮೊದಲಿಗೆ ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಸಂಪನ್ಮೂಲ ಕ್ರೋಡೀಕರಿಸಿ ಪ್ರತಿಮೆ ನಿರ್ಮಿಸುವ ಉದ್ದೇಶವಿತ್ತು. ಇದಕ್ಕೆ ಸಂಪನ್ಮೂಲ ಹೊಂದಿಸುವುದೂ ಅಷ್ಟ ಕಷ್ಟವಲ್ಲ. ನಾನೇ ಪೂರ್ಣ ಹಣ ಕೊಡುತ್ತಿದ್ದೆ. ಆದರೆ, ಇದು ಅಂಬೇಡ್ಕರ್‌ ಕಾರ್ಯಕ್ರಮವಾಗಿದ್ದು, ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಹೀಗಾಗಿ, ನಗರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದಲೂ ಹಣ ಕ್ರೋಡೀಕರಿಸಲಾಗುತ್ತಿದೆ. ಸಾರ್ವಜನಿಕರು ಒಂದೊಂದು ಇಟ್ಟಿಗೆ ಕೊಡಿ. ನಾಲ್ಕೈದು ಜನ ಸೇರಿ ಒಂದು ಸಿಮೆಂಟ್ ಮೂಟೆ ತಂದುಕೊಡಿ ಎಂದು ಮನವಿ ಮಾಡಿದರು. ಜಿಲ್ಲಾಡಳಿತ ಕಚೇರಿ‌ ಕಟ್ಟಡ ನಿರ್ಮಿಸಲು ಈ ಜಾಗ ಗುರುತಿಸಿದ್ದೇ ನಾನು. ರಿಯಲ್ ಎಸ್ಟೇಟ್ ಉದ್ದೇಶವಿದೆ ಎಂದು‌ ಕೆಲವರು ಆಗ ಪ್ರತಿಭಟನೆ ಮಾಡಿದರು. ಆದರೆ, ಕೋಲಾರ ತಾಲ್ಲೂಕಿನಲ್ಲಿ ಒಂದಿಂಚೂ ಸ್ವಂತ ಜಮೀನು ಇಲ್ಲ. ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಗೆಸ್ಟ್ ಹೌಸ್ ನನ್ನ ಅಣ್ಣನದ್ದು ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್ ಕುಮಾರ್ ಮಾತನಾಡಿ, ‘ಇದು ನಮ್ಮೆಲ್ಲರ ಪಾಲಿಗೆ ಐತಿಹಾಸಿಕ ದಿನವಿದು. ನಾವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದೇವೆ. ಅಂಬೇಡ್ಕರ್‌ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ತುಮಕೂರಿನಲ್ಲಿ 12 ಅಡಿ ಪ್ರತಿಮೆ ಇದೆ. ನಮ್ಮಲ್ಲಿ 21 ಅಡಿ ಪ್ರತಿಮೆ ನಿರ್ಮಾಣವಾಗಲಿದ್ದು, ಸುಮಾರು 1,200 ಕೆ.ಜಿ ತೂಕ ಇರಲಿದೆ. ಬರೀ ಪ್ರತಿಮೆಗೆ ಸುಮಾರು ₹ 1.20 ಕೋಟಿ ವೆಚ್ಚ ಹಿಡಿಯುತ್ತದೆ‌. ಈ ಸ್ಥಳ ಸೌಂದರ್ಯೀಕರಣಕ್ಕೆ ಉಳಿದ ಹಣ ವ್ಯಯಿಸಲಾಗುತ್ತದೆ‌. ಇನ್ನೂ ಹೆಚ್ಚು ಹಣ ಬೇಕಾಗಬಹುದು’ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ನೇರ ಹಣ ಬಳಸುವಂತಿಲ್ಲ. ಹೀಗಾಗಿ, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಡೀಕರಿಸಲಾಗಿದೆ. ಶಾಸಕ ಕೊತ್ತೂರು ತಮ್ಮ ಅನುದಾನದಲ್ಲಿ ₹ 25 ಲಕ್ಷ ಅನುದಾನ ಕೊಡುತ್ತಿದ್ದಾರೆ ನನ್ನ ಅನುದಾನದಲ್ಲಿ ₹ 25 ಲಕ್ಷ ಕೊಡುತ್ತೇನೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ₹ 12 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯಿತಿಗಳಿಂದ ₹ 25 ಲಕ್ಷ ಸಿಗಲಿದೆ,‌ ಕೋಲಾರ ನಗರಸಭೆ ₹ 30 ಲಕ್ಷ ನೀಡಲಿದೆ. ಹಾಲು ಒಕ್ಕೂಟದಿಂದ ₹ 15ಲಕ್ಷ ಸಿಗಲಿದೆ. ‘ಕುಡಾ’ದಿಂದಲೂ ₹ 20 ಲಕ್ಷ ‌ಸಿಗಲಿದೆ ಎಂದು ಮಾಹಿತಿ ನೀಡಿದರು. ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಬೇಕು. ಜಿಲ್ಲಾಧಿಕಾರಿ ರವಿ ಇಲ್ಲಿರುವಂತೇ ಉದ್ಘಾಟನೆ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಅನಾವರಣ ಕಾರ್ಯಕ್ರಮಕ್ಕೆ ಕರೆಸೋಣ ಎಂದರು. ಇದಲ್ಲದೇ, ಸಮಾಜ ಕಲ್ಯಾಣ ಇಲಾಖೆಯಿಂದ ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಉದ್ಘಾಟಿಸಲು ಸಮಾಜ‌ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ದಿನಾಂಕ ಕೇಳಲಾಗಿದೆ. ₹ 1 ಕೋಟಿ ವೆಚ್ಚದಲ್ಲಿ ನಚಿಕೇತ ನಿಲಯಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಟಿ.ಚನ್ನಯ್ಯ ವಸತಿ ಶಾಲೆ ನಿರ್ಮಿಸುವ ಯೋಜನೆ ಇದೆ. 300 ಮಕ್ಕಳು ಇರುವ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು. ಕೋಲಾರ ತಾಲ್ಲೂಕಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಐದು ಎಕರೆ ಜಾಗ ಮಂಜೂರು ಮಾಡಿಕೊಡಬೇಕಿದೆ‌. ನನ್ನ ಅನುದಾನದಲ್ಲಿ ₹ 1ಕೋಟಿ ಕೊಡುತ್ತೇನೆ. ಶಾಸಕರೂ ಕೊಡುತ್ತಾರೆ. ಇದಕ್ಕೆ ಸರ್ಕಾರದಿಂದಲೂ ಅನುದಾನ ತರಬಹುದು ಎಂದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಶಕ್ತಿ ಕೇಂದ್ರದಲ್ಲಿ ಶಕ್ತಿ ದೇವರಾಗಿ ಅಂಬೇಡ್ಕರ್ ಇರಲಿದ್ದಾರೆ‌. ಹೀಗಾಗಿ, ಅವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲಾಗುತ್ತದೆ. ಸಂವಿಧಾನ ಹಾಗೂ ಸಮಾನತೆಗೆ ಸಂದ ಗೌರವವಿದು. ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರಷ್ಟು ಚರ್ಚೆ, ವಿಮರ್ಶೆ. ಪರಾಮರ್ಶೆಗೆ ಒಳಗಾದ ‌ಮತ್ತೊಬ್ಬ ರಾಜಕೀಯ ನಾಯಕರಿಲ್ಲ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲರಿಗೂ ಸೇರಿದ ಸರ್ವಶ್ರೇಷ್ಠ ನಾಯಕ’ ಎಂದು ಹೇಳಿದರು. ಜನರ ಪ್ರೀತಿಯಿಂದಾಗಿ ₹ 1ಕೋಟಿಯನ್ನು ಕುಳಿತಲ್ಲಿಯೇ ಸಂಗ್ರಹ ಮಾಡಲಾಯಿತು. ಹೀಗಾಗಿ, ಸಂಪನ್ಮೂಲದ‌ ಕೊರತೆ ಬೀಳಲಿಲ್ಲ. ಪ್ರತಿಮೆ ನಿರ್ಮಿಸಲು ಸರ್ಕಾರದ ಅನುಮತಿ ಸಿಕ್ಕಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು ಹಾಗೂ ಸಮುದಾಯದ ಮುಖಂಡರು ಬೆಂಬಲ ನೀಡಿದ್ದಾರೆ ಎಂದರು. ಅಂಬೇಡ್ಕರ್‌ ಜೀವನ, ಸಾಧನೆ ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಸಂಬಂಧ ಕೋಲಾರ ತಾಲ್ಲೂಕಿನ ಈಕಂಬಳ್ಳಿಯಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ.‌ ಸದ್ಯದಲ್ಲೇ ಮಂಜೂರು ‌ಮಾಡಲಾಗುವುದು. ಬುದ್ಧ ವಿಹಾರಕ್ಕೆ ಮಂಗಸಂದ್ರ ಬಳಿ ಎರಡು ಎಕರೆ ಜಾಗ ಗುರುತಿಸಲಾಗಿದೆ ಎಂದು ನುಡಿದರು. ಸಮಾಜ ಕಲ್ಯಾಣ‌ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ,‌ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ನಗರಸಭೆ ಆಯುಕ್ತ ನವೀನ್ ಚಂದ್ರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ‘ಕುಡಾ’ ಅಧ್ಯಕ್ಷ ಮೊಹಮದ್ ಹನಿಫ್, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಚಂದ್ರಶೇಖರ್, ‌ಲಕ್ಷ್ಮಿದೇವಮ್ಮ, ವೆಂಕಟಚಲಪತಿ, ವರದೇನಹಳ್ಳಿ ವೆಂಕಟೇಶ್, ಮೇಡಹಾಳ ಮುನಿಅಂಜಿನಪ್ಪ, ಮಂಜುಳಾ, ಗೋವಿಂದರಾಜು, ಹಾರೋಹಳ್ಳಿ ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಪಾಲ್ಗೊಂಡಿದ್ದರು.

More news from Karnataka and nearby areas
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    4 hrs ago
  • sehar kolar me 2 wheeler par sawar karnye waloon ku sakt kanoon k zarye chalaan kata jaye ga
    1
    sehar kolar me 2 wheeler par sawar karnye waloon ku sakt kanoon k zarye chalaan kata jaye ga
    user_True news kolar Ayub Pasha
    True news kolar Ayub Pasha
    Auto Rickshaw Driver Kolar, Karnataka•
    15 hrs ago
  • ಚಿಂತಾಮಣಿ ಗ್ರಾಮಾಂತರ ಠಾಣೆಯ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಕರ್ತವ್ಯಕ್ಕೆ ಹೋಗುವ ವೇಳೆ ಅಪಘಾತ ಸಂಭವಿಸಿದೆ..!!
    1
    ಚಿಂತಾಮಣಿ ಗ್ರಾಮಾಂತರ ಠಾಣೆಯ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಕರ್ತವ್ಯಕ್ಕೆ ಹೋಗುವ ವೇಳೆ ಅಪಘಾತ ಸಂಭವಿಸಿದೆ..!!
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    3 hrs ago
  • good
    1
    good
    user_Gulam Muhammad
    Gulam Muhammad
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    7 hrs ago
  • ಪೋಲೀಸರಿಂದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್
    1
    ಪೋಲೀಸರಿಂದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    2 hrs ago
  • ದೇವನಹಳ್ಳಿ ಆಂಜನೇಯ ಸ್ವಾಮಿ ದೇಗುಲಕ್ಕಾಗಿ ಎರಡು ಗುಂಪುಗಳ ನಡುವೆ ಫೈಟ್. ಅಭಯಾ ವಿರಾಂಜನೇಯಸ್ವಾಮಿ ದೇಗುಲ ವಿಚಾರದಲ್ಲಿ ವಿವಾದ. ಎರಡು ಗುಂಪುಗಳ ನಡುವೆ ದೇಗುಲದ ಅಸ್ತಿತ್ವಕ್ಕಾಗಿ ಗುಂಪು ಘರ್ಷಣೆ. ಎರಡು ಕಡೆ ಗುಂಪು ಘರ್ಷಣೆ ಹಿನ್ನಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ. ದೇವನಹಳ್ಳಿ ತಾಲೂಕಿನ ವಿಜಯಪುರದ ಟೋಲ್ ಗೇಟ್ ಬಳಿ ಇರುವ ಅಭಯಾಂಜನೇಯ ದೇಗುಲ. ಅರ್ಚಕ ಲೋಕನಾಥಚಾರಿ ದೇವಾಲಯದ ನಿರ್ಮಾತೃ ಪ್ರಕಾಶ್ ಕಡೆಯವರ ನಡುವೆ ವಿವಾದ. ವಿಜಯಪುರ ಪಟ್ಟಣ ಪೊಲೀಸರಿಂದ ಪರಿಸ್ಥಿತಿ ತಿಳಿಗೊಳಿಸಲು ಲಘು ಲಾಠಿ ಪ್ರಹಾರ. ಲಾಠಿ ಬೀಸಿ ಗುಂಪುಗಳನ್ನ ಚದುರಿಸಿದ ವಿಜಯಪುರ ಇನ್ಸ್ ಪೆಕ್ಟರ್ ಪ್ರಶಾಂತ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ
    2
    ದೇವನಹಳ್ಳಿ
ಆಂಜನೇಯ ಸ್ವಾಮಿ ದೇಗುಲಕ್ಕಾಗಿ ಎರಡು ಗುಂಪುಗಳ ನಡುವೆ ಫೈಟ್.
ಅಭಯಾ ವಿರಾಂಜನೇಯಸ್ವಾಮಿ ದೇಗುಲ ವಿಚಾರದಲ್ಲಿ ವಿವಾದ.
ಎರಡು ಗುಂಪುಗಳ ನಡುವೆ ದೇಗುಲದ ಅಸ್ತಿತ್ವಕ್ಕಾಗಿ ಗುಂಪು ಘರ್ಷಣೆ.
ಎರಡು ಕಡೆ ಗುಂಪು ಘರ್ಷಣೆ ಹಿನ್ನಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ.
ದೇವನಹಳ್ಳಿ ತಾಲೂಕಿನ ವಿಜಯಪುರದ ಟೋಲ್ ಗೇಟ್ ಬಳಿ ಇರುವ ಅಭಯಾಂಜನೇಯ ದೇಗುಲ.
ಅರ್ಚಕ ಲೋಕನಾಥಚಾರಿ ದೇವಾಲಯದ ನಿರ್ಮಾತೃ ಪ್ರಕಾಶ್ ಕಡೆಯವರ ನಡುವೆ ವಿವಾದ.
ವಿಜಯಪುರ ಪಟ್ಟಣ ಪೊಲೀಸರಿಂದ ಪರಿಸ್ಥಿತಿ ತಿಳಿಗೊಳಿಸಲು ಲಘು ಲಾಠಿ ಪ್ರಹಾರ.
ಲಾಠಿ ಬೀಸಿ ಗುಂಪುಗಳನ್ನ ಚದುರಿಸಿದ ವಿಜಯಪುರ ಇನ್ಸ್ ಪೆಕ್ಟರ್ ಪ್ರಶಾಂತ್.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    19 hrs ago
  • ಕಾಫಿ ಶಾಪ್ ಬಳಿ ಡ್ರಗ್ಸ್ ಗಲಾಟೆ ಸಿಬ್ಬಂದಿ-ಯುವಕರ ನಡುವೆ ಹಲ್ಲೆ ಪ್ರಕರಣಮಂಗಳವಾರ ರಾತ್ರಿ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್ ಬಳಿ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ಗಲಾಟೆ ನಡೆದ ಘಟನೆ ಆತಂಕ ಮೂಡಿಸಿದೆ. ಹೋಟೆಲ್ ಬಳಿ ಕೆಲ ಯುವಕರು ಸಿರಿಂಜ್ ಮೂಲಕ ಮಾದಕ ದ್ರವ್ಯ ಸೇವಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಅವರನ್ನು ಪ್ರಶ್ನಿಸಿ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಯುವಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಸಿಬ್ಬಂದಿಯೂ ಹಲ್ಲೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    1
    ಕಾಫಿ ಶಾಪ್ ಬಳಿ ಡ್ರಗ್ಸ್ ಗಲಾಟೆ
ಸಿಬ್ಬಂದಿ-ಯುವಕರ ನಡುವೆ ಹಲ್ಲೆ ಪ್ರಕರಣಮಂಗಳವಾರ ರಾತ್ರಿ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್ ಬಳಿ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ಗಲಾಟೆ ನಡೆದ ಘಟನೆ ಆತಂಕ ಮೂಡಿಸಿದೆ. ಹೋಟೆಲ್ ಬಳಿ ಕೆಲ ಯುವಕರು ಸಿರಿಂಜ್ ಮೂಲಕ ಮಾದಕ ದ್ರವ್ಯ ಸೇವಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಅವರನ್ನು ಪ್ರಶ್ನಿಸಿ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಯುವಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಸಿಬ್ಬಂದಿಯೂ ಹಲ್ಲೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • kolar old middle school aek zamanye ki bahtreen school kaun is school me taleem hasil ki hai comment kar k bataye
    1
    kolar old middle school aek zamanye ki bahtreen school kaun is school me taleem hasil ki hai comment kar k bataye
    user_True news kolar Ayub Pasha
    True news kolar Ayub Pasha
    Auto Rickshaw Driver Kolar, Karnataka•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.