ರೈಲು ಪ್ರಯಾಣದಲ್ಲಿ ಕಂಡ ಒಂದು ದೃಶ್ಯ… ಮನಸ್ಸನ್ನು ಮುಟ್ಟದೇ ಇರದು! ರೈಲು ಪ್ರಯಾಣವೆಂದರೆ ನೂರಾರು ಮುಖಗಳು… ಅಷ್ಟೇ ಸಂಖ್ಯೆಯ ಅಪರಿಚಿತ ಕಥೆಗಳು… ಆದರೆ ಕೆಲವೊಂದು ಮುಖಗಳು ಮತ್ತು ಕೆಲವೊಂದು ಘಟನೆಗಳು ಪ್ರಯಾಣ ಮುಗಿದ ಮೇಲೂ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಪ್ರಯಾಣಿಕರಿಂದ ತುಂಬಿದ್ದ ರೈಲಿನ ಬೋಗಿಯೊಂದಕ್ಕೆ ಎಂದಿನಂತೆ ಹಣ ಕೇಳುತ್ತಾ ಟ್ರಾನ್ಸ್ಜೆಂಡರ್ ಮಹಿಳೆಯೊಬ್ಬರು ಬಂದಿದ್ದರು. ಅದೇ ಸಮಯದಲ್ಲಿ ಬೋಗಿಯ ಮೂಲೆಯಲ್ಲಿ ಒಬ್ಬ ಯುವಕ ತೀವ್ರ ನಿರಾಶೆ ಮತ್ತು ದುಃಖದಿಂದ ಕುಳಿತಿರುವುದು ಅವರ ಗಮನಕ್ಕೆ ಬಂತು. ಅವನ ಬಳಿ ಹಣವೇ ಇರಲಿಲ್ಲ… ಕೊಡಲು ಸಾಧ್ಯವಾಗದ ಅಸಹಾಯಕತೆಯಲ್ಲಿದ್ದ. ಆಕೆ ಹಣ ಕೇಳಿದರೆ ಏನಾದರೂ ಗಲಾಟೆಯಾಗಬಹುದು ಎಂದು ಕೆಲವರು ಭಾವಿಸಿದ್ದಿರಬಹುದು… ಆದರೆ… ನಡೆದದ್ದು ಮಾತ್ರ ಎಲ್ಲರ ನಿರೀಕ್ಷೆಗೂ ಮೀರಿದ್ದು. ಯಾವುದೇ ಪ್ರಶ್ನೆ ಕೇಳಲಿಲ್ಲ… ಯಾವುದೇ ವಾಗ್ವಾದ ಮಾಡಲಿಲ್ಲ… ಯಾವುದೇ ಪ್ರತಿಫಲ ಬಯಸಲಿಲ್ಲ… ತಾನು ದಿನವಿಡೀ ಕಷ್ಟಪಟ್ಟು ಸಂಪಾದಿಸಿದ್ದ ಹಣದಲ್ಲಿ ಅರ್ಧದಷ್ಟನ್ನು ಆ ಯುವಕನ ಕೈಗೆ ಇಟ್ಟರು. ನಂತರ ಒಂದು ಸಣ್ಣ ಮುಗುಳ್ನಗೆಯೊಂದಿಗೆ ಅಲ್ಲಿಂದ ಮುಂದೆ ಸಾಗಿದರು…! ಆ ಕ್ಷಣದಲ್ಲಿ ಆ ಬೋಗಿಯಲ್ಲಿದ್ದವರಿಗೆ ಬಹುಶಃ ಒಂದು ಸತ್ಯ ಅರ್ಥವಾಗಿರಬಹುದು— ಹಣ ಇರುವವನೇ ಶ್ರೀಮಂತನಲ್ಲ… ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಂಡು ತನ್ನಲ್ಲಿರುವುದನ್ನು ಹಂಚಿಕೊಳ್ಳುವ ಹೃದಯವಂತನೇ ನಿಜವಾದ ಶ್ರೀಮಂತ. ನಾವು ಕೆಲವೊಮ್ಮೆ ಮಾನವೀಯತೆಯನ್ನು ದೊಡ್ಡ ದೊಡ್ಡ ಮಾತುಗಳಲ್ಲಿ ಹುಡುಕುತ್ತೇವೆ. ಆದರೆ ಅದು ಕೆಲವೊಮ್ಮೆ… ಒಬ್ಬ ಅಪರಿಚಿತನ ಕೈಯಲ್ಲಿ, ಒಂದು ಸಣ್ಣ ಸಹಾಯದಲ್ಲಿ, ಒಂದು ಮುಗುಳ್ನಗೆಯಲ್ಲಿ, ಯಾರಿಗೂ ಗೊತ್ತಾಗದ ಒಂದು ಒಳ್ಳೆಯ ಕಾರ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಆಕೆ ಕೊಟ್ಟದ್ದು ಕೇವಲ ಹಣವಲ್ಲ… ಆ ಕ್ಷಣದಲ್ಲಿ ಆ ಯುವಕನಿಗೆ ಬೇಕಾಗಿದ್ದ ಒಂದು ಭರವಸೆ. ಮನುಷ್ಯನನ್ನು ದೊಡ್ಡವನನ್ನಾಗಿಸುವುದು ಅವನ ಬಳಿ ಇರುವ ಹಣವಲ್ಲ… ಅವನ ಹೃದಯದಲ್ಲಿರುವ ಮಾನವೀಯತೆ. ಇಂತಹ ಮಾನವೀಯ ಹೃದಯಗಳಿಗೆ ಒಂದು ಲೈಕ್ ಕೊಡಿ
ರೈಲು ಪ್ರಯಾಣದಲ್ಲಿ ಕಂಡ ಒಂದು ದೃಶ್ಯ… ಮನಸ್ಸನ್ನು ಮುಟ್ಟದೇ ಇರದು! ರೈಲು ಪ್ರಯಾಣವೆಂದರೆ ನೂರಾರು ಮುಖಗಳು… ಅಷ್ಟೇ ಸಂಖ್ಯೆಯ ಅಪರಿಚಿತ ಕಥೆಗಳು… ಆದರೆ ಕೆಲವೊಂದು ಮುಖಗಳು ಮತ್ತು ಕೆಲವೊಂದು ಘಟನೆಗಳು ಪ್ರಯಾಣ ಮುಗಿದ ಮೇಲೂ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಪ್ರಯಾಣಿಕರಿಂದ ತುಂಬಿದ್ದ ರೈಲಿನ ಬೋಗಿಯೊಂದಕ್ಕೆ ಎಂದಿನಂತೆ ಹಣ ಕೇಳುತ್ತಾ ಟ್ರಾನ್ಸ್ಜೆಂಡರ್ ಮಹಿಳೆಯೊಬ್ಬರು ಬಂದಿದ್ದರು. ಅದೇ ಸಮಯದಲ್ಲಿ ಬೋಗಿಯ ಮೂಲೆಯಲ್ಲಿ ಒಬ್ಬ ಯುವಕ ತೀವ್ರ ನಿರಾಶೆ ಮತ್ತು ದುಃಖದಿಂದ ಕುಳಿತಿರುವುದು ಅವರ ಗಮನಕ್ಕೆ ಬಂತು. ಅವನ ಬಳಿ ಹಣವೇ ಇರಲಿಲ್ಲ… ಕೊಡಲು ಸಾಧ್ಯವಾಗದ ಅಸಹಾಯಕತೆಯಲ್ಲಿದ್ದ. ಆಕೆ ಹಣ ಕೇಳಿದರೆ ಏನಾದರೂ ಗಲಾಟೆಯಾಗಬಹುದು ಎಂದು ಕೆಲವರು ಭಾವಿಸಿದ್ದಿರಬಹುದು… ಆದರೆ… ನಡೆದದ್ದು ಮಾತ್ರ ಎಲ್ಲರ ನಿರೀಕ್ಷೆಗೂ ಮೀರಿದ್ದು. ಯಾವುದೇ ಪ್ರಶ್ನೆ ಕೇಳಲಿಲ್ಲ… ಯಾವುದೇ ವಾಗ್ವಾದ ಮಾಡಲಿಲ್ಲ… ಯಾವುದೇ ಪ್ರತಿಫಲ ಬಯಸಲಿಲ್ಲ… ತಾನು ದಿನವಿಡೀ ಕಷ್ಟಪಟ್ಟು ಸಂಪಾದಿಸಿದ್ದ ಹಣದಲ್ಲಿ ಅರ್ಧದಷ್ಟನ್ನು ಆ ಯುವಕನ ಕೈಗೆ ಇಟ್ಟರು. ನಂತರ ಒಂದು ಸಣ್ಣ ಮುಗುಳ್ನಗೆಯೊಂದಿಗೆ ಅಲ್ಲಿಂದ ಮುಂದೆ ಸಾಗಿದರು…! ಆ ಕ್ಷಣದಲ್ಲಿ ಆ ಬೋಗಿಯಲ್ಲಿದ್ದವರಿಗೆ ಬಹುಶಃ ಒಂದು ಸತ್ಯ ಅರ್ಥವಾಗಿರಬಹುದು— ಹಣ ಇರುವವನೇ ಶ್ರೀಮಂತನಲ್ಲ… ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಂಡು ತನ್ನಲ್ಲಿರುವುದನ್ನು ಹಂಚಿಕೊಳ್ಳುವ ಹೃದಯವಂತನೇ ನಿಜವಾದ ಶ್ರೀಮಂತ. ನಾವು ಕೆಲವೊಮ್ಮೆ ಮಾನವೀಯತೆಯನ್ನು ದೊಡ್ಡ ದೊಡ್ಡ ಮಾತುಗಳಲ್ಲಿ ಹುಡುಕುತ್ತೇವೆ. ಆದರೆ ಅದು ಕೆಲವೊಮ್ಮೆ… ಒಬ್ಬ ಅಪರಿಚಿತನ ಕೈಯಲ್ಲಿ, ಒಂದು ಸಣ್ಣ ಸಹಾಯದಲ್ಲಿ, ಒಂದು ಮುಗುಳ್ನಗೆಯಲ್ಲಿ, ಯಾರಿಗೂ ಗೊತ್ತಾಗದ ಒಂದು ಒಳ್ಳೆಯ ಕಾರ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಆಕೆ ಕೊಟ್ಟದ್ದು ಕೇವಲ ಹಣವಲ್ಲ… ಆ ಕ್ಷಣದಲ್ಲಿ ಆ ಯುವಕನಿಗೆ ಬೇಕಾಗಿದ್ದ ಒಂದು ಭರವಸೆ. ಮನುಷ್ಯನನ್ನು ದೊಡ್ಡವನನ್ನಾಗಿಸುವುದು ಅವನ ಬಳಿ ಇರುವ ಹಣವಲ್ಲ… ಅವನ ಹೃದಯದಲ್ಲಿರುವ ಮಾನವೀಯತೆ. ಇಂತಹ ಮಾನವೀಯ ಹೃದಯಗಳಿಗೆ ಒಂದು ಲೈಕ್ ಕೊಡಿ
- ಚಿಂಚೋಳಿ & ಕಾಳಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು ಚಿಂಚೋಳಿ : ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಚಿಂಚೋಳಿ ಮಂಡಲ ವತಿಯಿಂದ ಕಾಳಗಿ ಪಟ್ಟಣದ ಮುಖ್ಯ ಬಜಾರ್ ಇಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಚಿಂಚೋಳಿ- ಕಲಬುರಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕರಾದ ಡಾಕ್ಟರ್ ಅವಿನಾಶ್ ಜಾದವ್ ಅವರು ಮಾತನಾಡಿ ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮಳೆಯ ಅಭಾವದಿಂದ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿದ್ದು, ರೈತರು ಹಾಕಿರುವ ಬಂಡವಾಳವೇ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶರಣಪ್ಪ ತಳವಾರ.ಮಂಡಲ ಅಧ್ಯಕ್ಷ ಕುಮಾರ ಚೇಂಗಟ್ಟಿ. ಪ್ರಶಾಂತ ಕದಮ್.ರೇವಣಸಿದ್ಧ ಬಡಾ.ರಾಜಶೇಖರ್ ಗುಡ್ಡದಾ.ಸದ್ದಾಮ್ ವಜೀರಗಾವ.ಜಗದೀಶ ಪಾಟೀಲ.ಮಲ್ಲಿನಾಥ್ ಪಾಟೀಲ.ಭೀಮರಾಯ ಮಲಘಣ. ಶಿವರಾಜ ಪಾಟೀಲ. ಜಗನಾಥ ತೇಲಿ.ಶಶಿಕಲಾ ಟೆಂಗಳಿ.ಮಲ್ಲು ಮರಗುತ್ತಿ.ಗೋಪಾಲರಾವ ಕಟೀಮನಿ.ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.4
- ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು. ಲಿಂಗಸುಗೂರು : ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.1
- ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಗಣ್ಯರು ಚಾಲನೆ ನೀಡಿದರು. ವಾರ್ಡಿನ ಮುಖಂಡರಾದ ಅಯ್ಯಪ್ಪ ವಕೀಲರು ಎಕ್ಸ್ಪರ್ಟ್ ಸ್ಕೂಲಿನ ಮುಖ್ಯಸ್ಥರಾದ ನಾಗರೆಡ್ಡಿ ಅವರು ಮಾತನಾಡಿ ವಾರ್ಡಿನ ಯುವಕರು ಗಣೇಶ್ ಮಂಡಳಿಗೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತ ಬಂದಿದ್ದಾರೆ ಇಂತಹ ಯುವಕ ಮಂಡಳಿ ಸದಸ್ಯರಿಗೆ ವಾರ್ಡಿನ ಪ್ರತಿಯೊಬ್ಬರು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಗಣೇಶೋತ್ಸವವನ್ನು ಆಚರಣೆ ಮಾಡಲು ಸರ್ಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತ ಸಿದ್ದನಗೌಡ ಪಾಟೀಲ್ ಮಾತನಾಡಿದರು. ಗಣೇಶ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಹಾಗು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಮಹಿಳೆಯರಿಗೆ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ವೇದಿಕೆ ಮೇಲೆ ಸಂಗನಗೌಡ ಆರ್ ಎಸ್ ಗೌಡ ಪ್ರಭುಸ್ವಾಮಿ ಕುಪ್ಪಣ್ಣ ಸೇರಿದಂತೆ ಗಣೇಶ್ ಮಂಡಳಿಯ ಸದಸ್ಯರು ವಾರ್ಡಿನ ಗುರುಹಿರಿಯರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಸವರಾಜ್ ಹಿರೇಮಠ ನಡೆಸಿಕೊಟ್ಟರು.4
- *ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ...* 500 ಮನೆಗಳ ಕಾರ್ಯಾದೇಶ ತಡೆಹಿಡಿದಿರುವುದನ್ನು ಖಂಡಿಸಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ. #ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ... 500 ಮನೆಗಳ ಕಾರ್ಯಾದೇಶ ತಡೆಹಿಡಿದಿರುವುದನ್ನು ಖಂಡಿಸಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ.1
- ಬಡವರಿಗೆ ಅನ್ಯಾಯ ಮಾಡುತ್ತಿರುವ ಶಾಸಕ ಸುಪುತ್ರರ ಅಧಿಕಾರದ ಕಾಲ ಅಂತ್ಯಕ್ಕೆ ಬಂದಿದೆ-ಸಿದ್ದು ದೇವತ್ಕಲ ವಾಗ್ದಾಳಿ ಬಡವರಿಗೆ ಅನ್ಯಾಯ ಮಾಡುತ್ತಿರುವ ಶಾಸಕ ಸುಪುತ್ರರ ಅಧಿಕಾರದ ಕಾಲ ಅಂತ್ಯಕ್ಕೆ ಬಂದಿದೆ-ಸಿದ್ದು ದೇವತ್ಕಲ ವಾಗ್ದಾಳಿ1
- #ತಳವಾರ್ ಸಮಾಜಕ್ಕೆ ಸೆ. 17ರಂದು ನ್ಯಾಯ ಸಿಗದಿದ್ದರೆ. ಅಕ್ಟೋಬರ್ 2ಕ್ಕೆ ಪ್ರಿಯಾಂಕ ಖರ್ಗೆ ಅವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ : ಶಿವಕುಮಾರ್ ನಾಟಿಕಾರ್. #ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ತಳವಾರ ಸಮಾಜದ ಹಕ್ಕಿಗಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ! ⚫ #ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ಹಾಗೂ ಸಿಂಧುತ್ವದ ವಿಚಾರದಲ್ಲಿ ನ್ಯಾಯ ಸಿಗದಿದ್ದರೆ, ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. “#ಸೆಪ್ಟೆಂಬರ್ 17ರ ಕಪ್ಪು ಬಾವುಟದ ಹೋರಾಟದ ನಂತರವೂ ಸರ್ಕಾರ ನ್ಯಾಯ ನೀಡದೆ ನಿರ್ಲಕ್ಷ್ಯ ಮಾಡಿದರೆ, ಅಕ್ಟೋಬರ್ 02ರಂದು ಗೃಹ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.” #ತಳವಾರ್ ಸಮಾಜಕ್ಕೆ ಸೆ. 17ರಂದು ನ್ಯಾಯ ಸಿಗದಿದ್ದರೆ. ಅಕ್ಟೋಬರ್ 2ಕ್ಕೆ ಪ್ರಿಯಾಂಕ ಖರ್ಗೆ ಅವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ : ಶಿವಕುಮಾರ್ ನಾಟಿಕಾರ್. #ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ತಳವಾರ ಸಮಾಜದ ಹಕ್ಕಿಗಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ! ⚫ #ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ಹಾಗೂ ಸಿಂಧುತ್ವದ ವಿಚಾರದಲ್ಲಿ ನ್ಯಾಯ ಸಿಗದಿದ್ದರೆ, ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. “#ಸೆಪ್ಟೆಂಬರ್ 17ರ ಕಪ್ಪು ಬಾವುಟದ ಹೋರಾಟದ ನಂತರವೂ ಸರ್ಕಾರ ನ್ಯಾಯ ನೀಡದೆ ನಿರ್ಲಕ್ಷ್ಯ ಮಾಡಿದರೆ, ಅಕ್ಟೋಬರ್ 02ರಂದು ಗೃಹ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.”1
- ಕಲಬುರಗಿ:ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ-ಹೆಚ್ ಡಿಕೆ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು ಬಿಡದಿ ವಿಚಾರ ಡೈವಟ್೯ ಮಾಡೋಕೆ ಜೈಲು ರೈಡ್ ಮಾಡಿಲ್ಲ ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ ಎಂದು ಹೆಚ್ ಡಿಕೆ ಹೇಳಿಕೆಗೆ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ನೀಡಿದ್ದಾರೆ. ರಾಜ್ಯದ ಹಲವು ಜೈಲುಗಳ ಮೇಲೆ ರೇಡ್ ಮಾಡಿದ್ದೆವೆ. ಅದನ್ನ ನಾವು ಮಾಡಬಾರದ? ಪ್ರಜ್ವಲ್ ನಿರಂತರವಾಗಿ ಪೋನ್ ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲಾ ಮಾತನಾಡೋರು ಯಾಕೆ ಮಾಹಿತಿ ನೀಡಿಲ್ಲ. ಕುಟುಂಬದವರ ಜೊತೆ ತಾನೇ ಆತ ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಅದರ ಬಗ್ಗೆ ಒಂದು ಭಾರಿಯಾದ್ರು ಮಾತನಾಡಿದ್ದಾರಾ..? ಮೊದಲು ಆ ಕುಟುಂಬಗಳಿಗೆ ಕ್ಷೆಮೆ ಕೇಳಬೇಕು. ಆ ನೊಂದ ಹೆಣ್ಮಕ್ಕಳ ಕ್ಷೇಮೆ ಕೇಳಲಿ. ವಿಜಯದಶಮಿಯಿಂದ ಯುದ್ದ ಸ್ಟಾಟ್೯ ಎಂದ ಹೆಚ್ ಡಿಕೆ ಹೇಳಿಕೆ ವಿಚಾರ. ಮಾತನಾಡಿದ ಅವರು ಅಲ್ಲೋಲ ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ ಅಂತ ವ್ಯಂಗ್ಯವಾಡಿದ ಪ್ರಿಯಾಂಕ್. ನಮ್ಮ ಕುಟುಂಬವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನೋ ಹೆಚ್ ಡಿಕೆ ಹೇಳಿಕೆ ಯಾರು ಪ್ರಯತ್ನ ಮಾಡ್ತಿದ್ದಾರೆ. ನಾವ್ಯಕೆ ಅದನ್ನ ಮಾಡೋಣ ಟಿ.ನರಸಿಪುರ ಇನ್ಸಪೆಕ್ಟರ್ ವಿರದ್ದು ಹಳೇ ಕೇಸ್ ವಿಚಾರ.ಅವರ ಮೇಲೆ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಇದಕ್ಕೂ ಏನ್ ಸಂಬಂಧ. ಗಣೇಶ ವಿಚಾರವಾಗಿ ಅವರ ಇಲಾಖೆಯ ಎಸ್ ಓಪಿ ಹೇಳಬಾರದಾ..? ಅವರ ಮೇಲೆ ಆರೋಪ ಇದ್ರೆ ದೂರು ಕೊಡಲಿ. ನಾವೇ ತನೀಖೆ ಮಾಡ್ತೆವೆ. ಅದು ಬಿಟ್ಟು ಆ ಮಾಜಿ ಸಂಸದರು ಏನಾದ್ರು ಮಾಡಿದ್ರೆ ನಡಿಯುತ್ತಾ..? ನಮ್ಮ ಸಂಭ್ರಮ ಬೇರೆಯವರಿಗೆ ಆತಂಕ ಆಗಬಾರದು. ಎಲ್ಲರೂ ವಿಜೃಂಭ್ರಣೆಯಿಂದ ಹಬ್ಬ ಮಾಡಿ. ಇವರಿಗೆ ಬೆಂಕಿ ಹಚ್ಚೋದೆ ಕೆಲಸ ಎಂದು ಕಿಡಿಕಾರಿದರು ಉಮರ ಖಾಲಿದ್ ಅವರನ್ನ ರಾಷ್ಟ್ರೀಯವಾದಿ ಅಂತ ಹರಿಪ್ರಸಾದ್ ಬಿಂಬಿಸೋ ವಿಚಾರಯು ಮಾತನಾಡಿದ ಅವರು ಉಮರ್ ಖಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ. ಯಾಕೆ ಕೇಂದ್ರ ಸರ್ಕಾರ ಟ್ರಯಲ್ ಮಾಡ್ತಿಲ್ಲ, ಟ್ರಯಲ್ ಮಾಡಿ ಕೋಟ್೯ ಘೋಷಣೆ ಮಾಡಲಿ. ಅವಾಗ ಎಲ್ಲರೂ ಆತ ಅಪರಾಧಿ ಅಂತ ಒಪ್ಪಕೊಳ್ಳುತ್ತಾರೆ. ಬಿಜೆಪಿ ಹೇಳಿದ್ರೆ ನಾವು ಒಪ್ಕೊಳ್ಳಬೇಕಾ.? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು1
- ಚಿಂಚೋಳಿ : ವಂದೇಮಾತರಂ ಗಾಯನದ ಮೂಲಕ ದೇಶಭಕ್ತಿ ಸಾರಿದ ಗ್ರಾಮಸ್ಥರು ಗಣೇಶ ಚತುರ್ಥಿ ಅಂಗವಾಗಿ ಮಿರಿಯಾಣದಲ್ಲಿ ಗ್ರಾಮದೇವತೆ ಯುವಕ ಸಂಘದ ವತಿಯಿಂದ ವಂದೇಮಾತರಂ ಗೀತೆಯ ರಚನೆಯ 150ನೇ ವರ್ಷದ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ನಡೆಯಿತು. ಪಾಪನಾಶ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿಗಳು, ಯುವಕರು ಹಾಗೂ ಗ್ರಾಮಸ್ಥರು ಸಾಮೂಹಿಕವಾಗಿ ವಂದೇಮಾತರಂ ಗಾಯನ ಮಾಡುವ ಮೂಲಕ ದೇಶಭಕ್ತಿಯ ಸಂದೇಶ ಸಾರಿದರು. ಕಾಶಿನಾಥ ಮಡಿವಾಳ ವಿಶೇಷ ಉಪನ್ಯಾಸಕರು ಮಾತನಾಡಿ ವಂದೇಮಾತರಂ ದೇಶಭಕ್ತಿಯ ಜಾಗೃತಿ ಮೂಡಿಸಿದ ರಾಷ್ಟ್ರೀಯ ಚೇತನೆಯ ಸಂಕೇತವಾಗಿದೆ. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಆನಂದಮಠ ಕಾದಂಬರಿಯಲ್ಲಿ ಈ ಗೀತೆಯ ಉಲ್ಲೇಖವಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತರಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು. ವಂದೇಮಾತರಂ ಮಾತೃಭೂಮಿಗೆ ಸಲ್ಲಿಸುವ ಗೌರವದ ಸಂಕೇತವಾಗಿದ್ದು, ದೇಶಪ್ರೇಮ, ಸ್ವಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸಬೇಕು ಎಂದರು. ವಿಶ್ವಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ಧ ಮೊಘ ಮಾತನಾಡಿ, ಯುವಪೀಳಿಗೆ ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಅರಿಯಬೇಕು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಾಮೂಹಿಕ ಗಾಯನ ದೇಶಭಕ್ತಿಯ ಭಾವನೆಗೆ ಮತ್ತಷ್ಟು ಬಲ ನೀಡಿದೆ ಎಂದರು. ಗಣೇಶೋತ್ಸವವು ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಯುವಜನರಲ್ಲಿ ದೇಶಭಕ್ತಿ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ್ ಕಲ್ಲೂರ್, ಅರವಿಂದ್ ಚಂದಿಮನಿ, ನರೇಶ್ ಗೌಡ, ರತ್ನಾಕರ್ ರೆಡ್ಡಿ, ರವಿ ಗೌಡ, ಮಹೇಶ್ ಪೂಜಾರಿ, ಸತೀಶ್ ಶರ್ಮ,ಆಂಜನೇಯಲು ಗೌಡ, ಮಹೇಶ್ ಯಾದವ್, ಶಿವು ಯಂಪಳ್ಳಿ, ಸಾಯಿ ಗಣೇಶ, ಸೋಮನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.3
- ಸೆ.17ರ ಕಪ್ಪು ಬಾವುಟದ ಹೋರಾಟದ ನಂತರವೂ ಸರ್ಕಾರ ನ್ಯಾಯ ನೀಡದೆ ನಿರ್ಲಕ್ಷ್ಯ ಮಾಡಿದರೆ, ಅಕ್ಟೋಬರ್ 02ರಂದು ಗೃಹ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು:ಶಿವಕುಮಾರ ನಾಟಿಕಾರ.! ಸೆ.17ರ ಕಪ್ಪು ಬಾವುಟದ ಹೋರಾಟದ ನಂತರವೂ ಸರ್ಕಾರ ನ್ಯಾಯ ನೀಡದೆ ನಿರ್ಲಕ್ಷ್ಯ ಮಾಡಿದರೆ, ಅಕ್ಟೋಬರ್ 02ರಂದು ಗೃಹ ಸಚಿವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು:ಶಿವಕುಮಾರ ನಾಟಿಕಾರ.!1