ಕಷ್ಟದ ಹಾದಿಯಿಂದ ಸೇವೆಯ ಶಿಖರವರೆಗೆ — ಎಂ. ರಾಜು ಅವರಿಗೆ ಗೌರವದ ಬೀಳ್ಕೊಡುಗೆ.. ನಿಷ್ಠೆ, ತಾಳ್ಮೆ ಮತ್ತು ಜನಸೇವೆ ಅವರ ಬದುಕಿನ ಗುರುತು ಕೊಳ್ಳೇಗಾಲ. ಇಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದ ಎಂ.ರಾಜು ಅವರು ಸನ್ಮಾನಿಸಿ ಬೀಳ್ಕೊಟ್ಟರು. ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಎಇಇ ರಾಜುರವರಿಗೆ ಇಲಾಖಾ ವತಿಯಿಂದ ಹಾರ, ಶಾಲು ಹಾಕಿ ಉಡುಗೋರೆ ನೀಡುವ ಸನ್ಮಾನಿಸಿ ಬೀಳ್ಕೊಟ್ಟರು, ಬಳಿಕ ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಬ್ಬಸ್ಸುಮ್ ಅಪ್ಜಾ ಅವರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು ಅವರ ಜೊತೆಗೆ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಅವರಲ್ಲಿರುವ ತಾಳ್ಮೆ ಮತ್ತು ಸಹನೆ ನಿಜವಾಗಿಯೂ ಮೆಚ್ಚುವಂತಹದ್ದು ಎಂದರು. ಕೊಳ್ಳೇಗಾಲದಂತಹ ಸ್ಥಳದಲ್ಲಿ ರೈತ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕರ್ತವ್ಯ ನಿರ್ವಹಿಸಿ ಇಲಾಖೆಗೂ ಒಳ್ಳೆಯ ಹೆಸರು ತಂದಿದ್ದಾರೆ ಇವರ ಅವಧಿಯಲ್ಲಿ ಎರಡು ನೂತನ ಪವರ್ ಸ್ಠಷನ್ ಆಗಿದ್ದು ಸಂತಸ. ಎಲ್ಲಾ ಕಾಲದಲ್ಲಿಯೂ ಇವರ ಹೆಸರು ಅಜರಾಮರವಾಗಿರುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಎಇಇ ಎಂ ರಾಜು ಅವರು ಮಾತನಾಡಿ, ನನಗೆ ನಿಮ್ಮೆಲ್ಲರ ಈ ಪ್ರೀತಿ ಮತ್ತು ವಿಶ್ವಾಸ ಕಂಡು ಮಾತನಾಡಲೇ ಆಗುತ್ತಿಲ್ಲ ಎಂದು ಭಾವುಕರಾದರು. ಬಡತನದಲ್ಲಿ ಬೆಳೆದ ನಾನು ತಂದೆ ತಾಯಿಗಳ ಹಾದಿಯಲ್ಲಿ ನಡೆದೆ. ಕುಟುಂಬದ ಜೊತೆಗೆ ಕರ್ತವ್ಯದಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗೆ ಇದೆ ಎಂದರು. ನಿವೃತ್ತಿ ನಂತರವೂ ಇಲಾಖೆಗೆ ಗೌರವ ತರುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತೇನೆ ಎಂದರು. ಈ ಸಂಧರ್ಭದಲ್ಲಿ ಯಳಂದೂರು ಸೆಸ್ಕ್ ಎಇಇ ಲಿಂಗರಾಜು, ಹನೂರು ಸೆಸ್ಕ್ ಎಇಇ ರಂಗಸ್ವಾಮಿ, ಸಂತೋಷ್ ಕುಮಾರ್, ಶ್ರೀನಿಧಿ, ಲೆಕ್ಕಾಧಿಕಾರಿ ವಿನೋದ್ ಕುಮಾರ್, ಆಂತರಿಕ ಲೆಕಾಧಿಕಾರಿ ಪ್ರಸನ್ನ, ನೌಕರರ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗರಾಜು ಹಾಗೂ ಎಇಇ ರಾಜು ಅವರ ತಂದೆ ಮಾದಯ್ಯ ಇನ್ನಿತರರು ಇದ್ದರು.
ಕಷ್ಟದ ಹಾದಿಯಿಂದ ಸೇವೆಯ ಶಿಖರವರೆಗೆ — ಎಂ. ರಾಜು ಅವರಿಗೆ ಗೌರವದ ಬೀಳ್ಕೊಡುಗೆ.. ನಿಷ್ಠೆ, ತಾಳ್ಮೆ ಮತ್ತು ಜನಸೇವೆ ಅವರ ಬದುಕಿನ ಗುರುತು ಕೊಳ್ಳೇಗಾಲ. ಇಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದ ಎಂ.ರಾಜು ಅವರು ಸನ್ಮಾನಿಸಿ ಬೀಳ್ಕೊಟ್ಟರು. ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಎಇಇ ರಾಜುರವರಿಗೆ ಇಲಾಖಾ ವತಿಯಿಂದ ಹಾರ, ಶಾಲು ಹಾಕಿ ಉಡುಗೋರೆ ನೀಡುವ ಸನ್ಮಾನಿಸಿ
ಬೀಳ್ಕೊಟ್ಟರು, ಬಳಿಕ ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಬ್ಬಸ್ಸುಮ್ ಅಪ್ಜಾ ಅವರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು ಅವರ ಜೊತೆಗೆ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಅವರಲ್ಲಿರುವ ತಾಳ್ಮೆ ಮತ್ತು ಸಹನೆ ನಿಜವಾಗಿಯೂ ಮೆಚ್ಚುವಂತಹದ್ದು ಎಂದರು. ಕೊಳ್ಳೇಗಾಲದಂತಹ ಸ್ಥಳದಲ್ಲಿ ರೈತ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕರ್ತವ್ಯ ನಿರ್ವಹಿಸಿ ಇಲಾಖೆಗೂ ಒಳ್ಳೆಯ
ಹೆಸರು ತಂದಿದ್ದಾರೆ ಇವರ ಅವಧಿಯಲ್ಲಿ ಎರಡು ನೂತನ ಪವರ್ ಸ್ಠಷನ್ ಆಗಿದ್ದು ಸಂತಸ. ಎಲ್ಲಾ ಕಾಲದಲ್ಲಿಯೂ ಇವರ ಹೆಸರು ಅಜರಾಮರವಾಗಿರುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಎಇಇ ಎಂ ರಾಜು ಅವರು ಮಾತನಾಡಿ, ನನಗೆ ನಿಮ್ಮೆಲ್ಲರ ಈ ಪ್ರೀತಿ ಮತ್ತು ವಿಶ್ವಾಸ ಕಂಡು ಮಾತನಾಡಲೇ ಆಗುತ್ತಿಲ್ಲ ಎಂದು ಭಾವುಕರಾದರು. ಬಡತನದಲ್ಲಿ ಬೆಳೆದ ನಾನು ತಂದೆ ತಾಯಿಗಳ ಹಾದಿಯಲ್ಲಿ ನಡೆದೆ. ಕುಟುಂಬದ ಜೊತೆಗೆ ಕರ್ತವ್ಯದಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗೆ
ಇದೆ ಎಂದರು. ನಿವೃತ್ತಿ ನಂತರವೂ ಇಲಾಖೆಗೆ ಗೌರವ ತರುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತೇನೆ ಎಂದರು. ಈ ಸಂಧರ್ಭದಲ್ಲಿ ಯಳಂದೂರು ಸೆಸ್ಕ್ ಎಇಇ ಲಿಂಗರಾಜು, ಹನೂರು ಸೆಸ್ಕ್ ಎಇಇ ರಂಗಸ್ವಾಮಿ, ಸಂತೋಷ್ ಕುಮಾರ್, ಶ್ರೀನಿಧಿ, ಲೆಕ್ಕಾಧಿಕಾರಿ ವಿನೋದ್ ಕುಮಾರ್, ಆಂತರಿಕ ಲೆಕಾಧಿಕಾರಿ ಪ್ರಸನ್ನ, ನೌಕರರ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗರಾಜು ಹಾಗೂ ಎಇಇ ರಾಜು ಅವರ ತಂದೆ ಮಾದಯ್ಯ ಇನ್ನಿತರರು ಇದ್ದರು.
- ಮಳವಳ್ಳಿ ಸಾರಥಿ ಯೋಜನೆ ಅಡಿಯಲ್ಲಿ 17 ನಿರುದ್ಯೋಗಿ ಯುವಕರಿಗೆ ಕಾರು ವಿತರಣೆ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ 22 ಮಹಿಳೆಯರಿಗೆ ಹೊಲಿಗೆ ಯಂತ್ರ 112 ಮ0ದಿಗೆ ನೇರ ಸಾಲ ಸೌಲಭ್ಯ,58 ಮಂದಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ವಿತರಣೆ ಕಾರ್ಯಕ್ರಮ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜರಗಿತು ಕಾರ್ಯಕ್ರಮವನ್ನು ಶಾಸಕರಾದ ನರೇಂದ್ರಸ್ವಾಮಿ ಉದ್ಘಾಟಿಸಿ ಸವಲತ್ತುಗಳು ಗಳನ್ನು ಇತರಿಸಿ ಮಾತನಾಡಿದರು1
- Post by Md Aleemulla Shariff1
- EID HARMONY GATHERING HELD @ MILAN FUNCTION HALL IN MYSURU Organised by jamat e Islami HIND #kvnews1
- ಖಂಡಿತ, ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ದಿನಪತ್ರಿಕೆಯ ವರದಿ ಇಲ್ಲಿದೆ: ಮಾಗಡಿ: ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಎಚ್.ಎಂ. ಕೃಷ್ಣಮೂರ್ತಿ ತೀವ್ರ ವಿರೋಧ ಮಾಗಡಿ: ಪಟ್ಟಣದ ಅಸ್ಮಿತೆಯಾಗಿರುವ ಕೆಂಪೇಗೌಡರ ಪ್ರತಿಮೆಯನ್ನು ಅಭಿವೃದ್ಧಿಯ ನೆಪದಲ್ಲಿ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಭಿವೃದ್ಧಿಯ ಹೆಸರಲ್ಲಿ ವಿನಾಶ ಸರಿಯಲ್ಲ "ಹೈಕೋರ್ಟ್ ಸೂಚನೆಯ ಮೇರೆಗೆ ಪ್ರತಿಮೆ ತೆರವುಗೊಳಿಸುವ ಬಗ್ಗೆ ಏಪ್ರಿಲ್ 4ರಂದು ಪುರಸಭೆಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನಾನು ಭಾಗವಹಿಸಿ ನನ್ನ ಖಡಕ್ ವಿರೋಧ ದಾಖಲಿಸುತ್ತೇನೆ. ಸರ್ಕಾರಿ ಆಸ್ಪತ್ರೆ ನಿರ್ಮಿಸುವ ನೆಪದಲ್ಲಿ ಉದ್ದೇಶಪೂರ್ವಕವಾಗಿ ಪ್ರತಿಮೆ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಪ್ರತಿಮೆಯಿಂದ ಅಥವಾ ಇಲ್ಲಿರುವ ನೂರಾರು ಮರಗಳಿಂದ ಅಭಿವೃದ್ಧಿಗೆ ಯಾವ ತೊಂದರೆಯಾಗಿದೆ?" ಎಂದು ಅವರು ಪ್ರಶ್ನಿಸಿದರು. ತೆರವುಗೊಳಿಸಿದ ಕಟ್ಟಡಗಳು ಎಲ್ಲಿವೆ? ಈಗಾಗಲೇ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ, ಪಶು ಇಲಾಖೆ, ಗುರುಭವನ ಹಾಗೂ ತರಕಾರಿ ಮಾರುಕಟ್ಟೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ತೆರವುಗೊಳಿಸಲಾಗಿದೆ. ಆದರೆ, ಇಷ್ಟು ದಿನಗಳಾದರೂ ಅವುಗಳನ್ನು ಮರುನಿರ್ಮಾಣ ಮಾಡಿಲ್ಲ. ಈಗ 40 ಕೋಟಿ ವೆಚ್ಚದಲ್ಲಿ ತಾಲೂಕು ಕಚೇರಿ ಒಡೆದು ಹೊಸ ಆಸ್ಪತ್ರೆ ಕಟ್ಟುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ ಅವರು, "ಈಗಿರುವ ಆಸ್ಪತ್ರೆಯಲ್ಲೇ ಸರಿಯಾದ ವೈದ್ಯರಿಲ್ಲ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ಮೊದಲು ಅದನ್ನು ಸರಿಪಡಿಸಲಿ," ಎಂದರು. ದ್ವೇಷದ ರಾಜಕಾರಣದ ಆರೋಪ "ಎಚ್.ಎಂ. ಕೃಷ್ಣಮೂರ್ತಿ ಕೆಂಪೇಗೌಡರ ಹೆಸರಿನಲ್ಲಿ ಸಮಾಜಮುಖಿ ಕೆಲಸ ಮಾಡಬಾರದು ಎಂಬ ದ್ವೇಷದಿಂದ ಈ ಪಿತೂರಿ ನಡೆಯುತ್ತಿದೆ. ಪಟ್ಟಣದ ಗಬ್ಬು ನಾರುತ್ತಿರುವ ಶೌಚಾಲಯಗಳನ್ನು ಸರಿಪಡಿಸಲಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಿ. ಅದನ್ನು ಬಿಟ್ಟು ಇತಿಹಾಸವಿರುವ ಗೌರಮ್ಮನಕೆರೆ ಅಭಿವೃದ್ಧಿಯ ಹೆಸರಲ್ಲಿ ಮಣ್ಣು ಮಾರಿಕೊಳ್ಳುವ ಕೀಳು ಮಟ್ಟಕ್ಕೆ ಇಳಿಯಬಾರದು," ಎಂದು ಶಾಸಕರ ಹೆಸರು ಪ್ರಸ್ತಾಪಿಸದೆ ಲೇವಡಿ ಮಾಡಿದರು. ದಶಕಗಳ ಸೇವೆಗೆ ಕುತ್ತು ದಲಿತ ಮುಖಂಡ ಸಿ. ಜಯರಾಮು ಮಾತನಾಡಿ, "ಕೃಷ್ಣಮೂರ್ತಿಯವರು ಕಳೆದ 23 ವರ್ಷಗಳಿಂದ ಯಾವುದೇ ಸರ್ಕಾರಿ ಸಹಾಯವಿಲ್ಲದೆ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ, ಉಚಿತ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅಂತಹ ಪ್ರತಿಮೆಯನ್ನು ತೆರವುಗೊಳಿಸಲು ಮುಂದಾಗಿರುವುದು ದ್ವೇಷದ ರಾಜಕಾರಣದ ಪರಮಾವಧಿ," ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಮರೂರು ಸಾಗರ್ ಗೌಡ, ಶಂಕ್ರಪ್ಪ, ಕನ್ನಡ ಸಂಘಟನೆಯ ರಂಗೇಶ್, ಮೋಹನ್, ಜೋಡುಗಟ್ಟೆ ರಮೇಶ್, ದೊಡ್ಡಿ ಗೋಪಿ, ಪರಿಸರ ರಕ್ಷಣಾ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.1
- ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಚಾರದ ಮಧ್ಯೆಯೇ ಪುಂಡಾಟ ಮಿತಿಮೀರಿದ ಘಟನೆ ವೈರಲ್ ಆಗಿದೆ. ಬೆಂಗಳೂರು–ನೆಲಮಂಗಲ ಮಾರ್ಗದಲ್ಲಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ನ್ನು ತೆರೆಯಿಸಿ, ಯುವಕನೊಬ್ಬ ಮೇಲಕ್ಕೆ ನಿಂತುಕೊಂಡೇ ಮದ್ಯ ಸೇವಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಇತರ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದ ರಸ್ತೆಯಲ್ಲೇ ಈ ರೀತಿಯ ಬೇಜವಾಬ್ದಾರಿತನ ಸಾರ್ವಜನಿಕರ ಜೀವಕ್ಕೂ ಅಪಾಯ ತಂದೊಡ್ಡಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆದ ತಕ್ಷಣ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಕಾರಿನ ಮಾಲೀಕ ಹಾಗೂ ಸಂಬಂಧಪಟ್ಟ ಯುವಕರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ರಾತ್ರಿ ರಸ್ತೆಗಳನ್ನು ಖಾಸಗಿ ಪಾರ್ಟಿ ಸ್ಥಳವನ್ನಾಗಿ ಮಾಡುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.1
- ನಟಿ ಪ್ರೇಮ್ ರಕ್ಷಿತಾ ಅವರು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಕುಟುಂಬಕ್ಕೆ 💐💐🎂🎂💐💐👍❤️1
- ಕುಣಿಗಲ್ ತಾಲ್ಲೂಕಿನ ಉಜ್ಜನಿ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಇಂದು ಅಗ್ನಿಕೊಂಡ ಉತ್ಸವಕ್ಕೆ ಚಾಲನೆ ನೀಡಲಾಯಿತು. ಏಷ್ಯಾದಲ್ಲಿ ಅತಿ ಎತ್ತರದ ಅಗ್ನಿಕೊಂಡ ಉತ್ಸವ ಎಂದು ಪ್ರಸಿದ್ಧಿ ಪಡೆದಿದೆ. ಈ ಅಗ್ನಿಕೊಂಡಕ್ಕೆ ಹುಲಿಯೂರುದುರ್ಗ, ಚೌಡನಕುಪ್ಪೆ, ಉಜ್ಜನಿಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡಕ್ಕೆ ಸೌದೆ ಸಮರ್ಪಿಸಿ ತಾಯಿ ಚೌಡೇಶ್ವರಿ ದೇವಿ ಯ ಕೃಪೆ ಗೆ ಪಾತ್ರರಾದರು....1
- Post by Md Aleemulla Shariff1