Shuru
Apke Nagar Ki App…
ಹನೂರು ತಾಲೂಕಿನ ಶೀರಗೂಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ವಿಶೇಷ ಪೂಜೆ ಹಾಗೂ ಆಚರಣೆಗಳು ನೆರವೇರಿದವು. ಚಿಕ್ಕಮಾಲಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೀರಗೂಡು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯವು ಬಣ್ಣ ಬಣ್ಣದ ಹೂವಿನ ಅಲಂಕಾರ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೇವರಿಗೆ ಬಗಲಿಗೆ ಪುಷ್ಪಾಲಂಕಾರಗಳನ್ನು ಮಾಡಿ ಸಂಭ್ರಮದಿಂದ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ಏಕಾದಶಿಯ ಸಂಭ್ರಮ ಜೋರಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ವೆಂಕಟರಮಣಸ್ವಾಮಿಯ ದರ್ಶನ ಪಡೆದು ಪುನೀತರಾದರು. .
ಹನೂರು ನ್ಯೂಸ್ ಅಡ್ಡ
ಹನೂರು ತಾಲೂಕಿನ ಶೀರಗೂಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ವಿಶೇಷ ಪೂಜೆ ಹಾಗೂ ಆಚರಣೆಗಳು ನೆರವೇರಿದವು. ಚಿಕ್ಕಮಾಲಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೀರಗೂಡು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯವು ಬಣ್ಣ ಬಣ್ಣದ ಹೂವಿನ ಅಲಂಕಾರ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೇವರಿಗೆ ಬಗಲಿಗೆ ಪುಷ್ಪಾಲಂಕಾರಗಳನ್ನು ಮಾಡಿ ಸಂಭ್ರಮದಿಂದ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ಏಕಾದಶಿಯ ಸಂಭ್ರಮ ಜೋರಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ವೆಂಕಟರಮಣಸ್ವಾಮಿಯ ದರ್ಶನ ಪಡೆದು ಪುನೀತರಾದರು. .
More news from ಕರ್ನಾಟಕ and nearby areas
- ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬೃಹತ್ ಡ್ರಗ್ಸ್ ಜಾಲವನ್ನು ಬಯಲು ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗಳು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ವ್ಯಾಪಕತೆಯನ್ನು ಎತ್ತಿ ತೋರಿಸಿದ್ದು, ಇದು ಸ್ಥಳೀಯ ಪೊಲೀಸರ ವೈಫಲ್ಯದ ಬಗ್ಗೆ ಪ್ರಶ್ನೆಗಳು ಉಲ್ಬಣಿಸುವಂತೆ ಮಾಡಿದೆ. ಈ ಕುರಿತು ಹನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಸುಧಾಕರ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ಬಗ್ಗೆ ಸಮರ್ಪಕ ನಿಗಾವಹಿಸಲು ವಿಫಲವಾಗಿದೆ ಎಂದು ಆರೋಪಿಸಿದ ಅವರು, ಹೊರರಾಜ್ಯದ ಪೊಲೀಸರು ಬಂದು ಇಲ್ಲಿ ಕಾರ್ಯಾಚರಣೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು. ಡ್ರಗ್ಸ್ ಮಾಫಿಯಾ ರಾಜ್ಯದ ಪ್ರಮುಖ ನಗರಗಳಲ್ಲಿ ಅಬ್ಬರವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಂತಿದೆ ಎಂದು ಟೀಕಿಸಿದ ಸುಧಾಕರ್, ಯುವಜನರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ತಕ್ಷಣವೇ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.1
- ಗ್ಯಾರೆಂಟಿ ಯೋಜನೆಗಳ ಸಂವಾದ ಕಾರ್ಯಕ್ರಮ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಮಾಂಬಳ್ಳಿ ಹಿಂಡಿ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂವಾದ ಕಾರ್ಯಕ್ರಮ ಆ ಯೋಜನೆ ಮಾಡಲಾಗಿತ್ತು , ಈ ಸಂದರ್ಭದಲ್ಲಿ ಯಳಂದೂರು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಉಮೇಶ್ ಮಾತನಾಡಿ ಪಂಚ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಪಂಚ ಯೋಜನೆ ಪ್ರತಿ ಜಿಲ್ಲೆಯಲ್ಲಿ ಸುಮಾರು ಮೀಟಿಂಗ್ ಮಾಡಲಾಯ್ತು ನಂತರ ಜಿಲ್ಲಾ ಮಟ್ಟ ತಾಲೂಕು ಮಟ್ಟ ,ಅಧ್ಯಕ್ಷರು ಸದಸ್ಯರ ಸುಮಾರು ಹತ್ತು ಸಭೆ ಮಾಡಲಾಗಿದೆ ಐದನೆಯ ಸಭೆಯಲ್ಲಿ ಚರ್ಚೆ ಮಾಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ಸಂವಾದ ಕಾರ್ಯ ಕಾರ್ಯಕ್ರಮ ಮಾಡಿ ಸವಲತ್ತು ಸರಿಯಾಗಿ ತಲುಪಿತ್ತುದಿಯೇ ಎಂದು ಎಲ್ಲರ ಸಮ್ಮುಖದಲ್ಲಿ ಕುಂದು ಕೊರತೆ ಬಗ್ಗೆ ಚರ್ಚೆ ಮಾಡಿ ಫಲಾನುಭವಿಗಳು ಚರ್ಚೆ ಮಾಡಲು ಸೇರಿದ್ದೇವೆ ಎಂದು ಹೇಳಿದರು. ನಂತರ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರು ಚಂದ್ರು ಮಾತನಾಡಿ ಸಂವಾದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅಭಿನಂದಿಸಿ ಪರಾಮರ್ಶೆ ಸಮಿತಿ ಜಿಲ್ಲಾ ಕಮಿಟಿ ತಾಲೂಕು ಮಟ್ಟದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇದರಲ್ಲಿ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಸಿಡಿಪಿಓ ಅವರು ಕೈ ಜೋಡಿಸಿ ಸ್ಥಳೀಯ ಮಟ್ಟದಲ್ಲಿ ಏನಾದ್ರು ಲೋಪದೋಷಗಳಿದ್ದರೆ ಸರಿಪಡಿಸಿ ಫಲಾನುಭವಿಗಳಿಗೆ ಅನುಕೂಲವಾಗುವಂತೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಕೊಡುತ್ತಿದ್ದಾರೆ ಆ ಕೀರ್ತಿ ಅವರಿಗೆ ಸಲ್ಲುತ್ತದೆ, ಮಹಿಳೆಯರು ಉಚಿತ ಅಕ್ಕಿ ಹಸಿವಿನಿಂದ ಬಳಲಬಾರದು ಎಂದು ಬಡವರ ಕಷ್ಟ ಬಗೆಹರಿಸಲು ಸಾಧ್ಯ ಎಂದರು ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆಯ ಹಣವು ಕಂತಿನ ಲೆಕ್ಕ ಇದು ಬರುತ್ತದೆ ತಿಂಗಳ ಲೆಕ್ಕದಲ್ಲಿ ಅಲ್ಲ, ಮುಂದಿನ ದಿನಗಳಲ್ಲಿ ಮುಂದಿನ ಎಲ್ಲಾ ಕತ್ತಿನ ಹಣ ನಿಮ್ಮ ಖಾತೆಗೆ ನೇರವಾಗಿ ಜಮವಾಗಲಿದೆ ಎಂದು ಆಶ್ವಾಸನೆ ನೀಡಿದರು. ಗೃಹ ಜ್ಯೋತಿ ಉಚಿತ ವಿದ್ಯುತ್ ಬಗ್ಗೆ ಮಾತನಾಡಿ ನಂತರ ಅನ್ನ ಭಾಗ್ಯ ಅದರ ಬಗ್ಗೆ ಮಾತನಾಡಿ ಯಾರು ಸಿವಿನಿಂದ ಬಳಲಬಾರದು ಎಂದು ಈ ಯೋಜನೆ ನಮ್ಮ ಸಿದ್ದರಾಮಯ್ಯನವರು ತಂದಿದ್ದಾರೆ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು ಶಕ್ತಿ ಯೋಜನೆ ಮೂಲಕ ಕೆಎಸ್ಆರ್ಟಿಸಿ ಫ್ರೀ ಆಗಿ ಸರ್ಕಾರಿ ಬಸ್ಸುಗಳಲ್ಲಿ ಸ್ವಾಭಿಮಾನವಾಗಿ ಓಡಾಡಲು ಮಾಡಿಕೊಟ್ಟಿದ್ದಾರೆ, ಇದೆಲ್ಲ ಯೋಜನೆಗಳು ಸ್ವಾಭಿಮಾನದ ಬದುಕು ಮಹಿಳೆಯರು ಕಟ್ಟಿಕೊಳ್ಳಲು ಮಾಡಲಾಗಿದೆ ಎಂದರು. ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಫಲಾನುಭವಿಗಳ ಜೊತೆ ಸಂವಾದ ನಡೆಸಿ ಅವರ ಕುಂದು ಕೊರತೆಗಳನ್ನು ಪರಿಶೀಲನೆ ಮಾಡಿ ಆದಷ್ಟು ಕುಂದುಕೊರತೆಗಳನ್ನು ಸ್ಥಳದಲ್ಲೇ ಸರಿಪಡಿಸಿಕೊಟ್ಟರು ಉಳಿದಂತಹ ಕುಂದು ಕೊರತೆಗಳು ಮುಂದಿನ ದಿನಗಳಲ್ಲಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೂ ಮೊದಲು ಯಳಂದೂರು ತಾಲೂಕು ಗ್ಯಾರೆಂಟ್ ಅಧ್ಯಕ್ಷರು ಪ್ರಭು ಪ್ರಸಾದ್ ಮಾತನಾಡಿ ಪಂಚ ಗೌರೆಂಟಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದಾಗೆ ಇದು ಅಸಾಧ್ಯ ಎಂದಿದ್ದರು ಕೆಲವಲ ,35 ದಿನದಲ್ಲಿ ಮಹಿಳೆಯಈಗೆ ಸಬಲೀಕರಣ ಹಾಗು ಸ್ವಲಂಬಿ ಯೋಜನೆಗಳನ್ನು ಜಾರಿಗೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದರು ಎಂದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನಗಳ ಅಧ್ಯಕ್ಷ ಚಂದ್ರು, ಬೆಳಂದೂರು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪ್ರಭು ಪ್ರಸಾದ್,ಮಾಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಲ್ಲೇಶ್ , ಗ್ರಾಮ ಪಂಚಾಯಿತಿ ಸದಸ್ಯರು ಅಗರ ಮಾಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಗರ ಮಾಂಬಳ್ಳಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.4
- ಮೌನಂ ಸಾಮರ್ಥ್ಯ ಚಿತ್ರದ ನಾಯಕ ನಟರಾದ ಬಾಲಾಜಿ ಶರ್ಮ ಅವರು ಕೂಡ ಯುವ ನಿರ್ದೇಶಕ ಕಾರ್ತಿಕ್ ಸೂರ್ಯ ಅವರಿಗೆ ಶುಭ ಕೋರಿದರು. ನಿಮ್ಮ ಪವರ್ ಪಬ್ಲಿಕ್ ಕನ್ನಡ1
- ಮಳವಳ್ಳಿಯಲ್ಲಿ ಜ.೧೫ರಿಂದ ಜ.೨೦ರವರೆಗೆ ಸುತ್ತೂರು ಜಾತ್ರಾ ಮಹೋತ್ಸ- ಪ್ರಚಾರ ರಥಕ್ಕೆ ವೀಶೇಷ ಪೂಜೆ • ಶಾಂತಿ ಸೌಹರ್ಧತೆಯ ಸಂಕೇತ-ಸುತ್ತೂರು ಜಾತ್ರೆ-ಶ್ರೀಬಸವಲಿಂಗದೇಶಿಕೇAದ್ರಸ್ವಾ ಮಿ ಹೇಳಿಕೆ ಮಳವಳ್ಳಿ:ಸರ್ವ ದರ್ಮಗಳ ಶಾಂತಿ ಸೌಹರ್ಧತೆಯ ಸಂಕೇತವಾಗಿರುವ ಸುತ್ತೂರು ಜಾತ್ರಾ ಮಹೋತ್ಸವ ಜ.೧೫ ರಿಂದ ಜ.೨೬ ರವರೆಗೆ ನಡೆಯಲಿದ್ದು, ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ಹಂಗ್ರಾಪುರ ಶ್ರೀ ಸೂರ್ಯಸಿಂಹಾಸನ ಮಠದ ಶ್ರೀಶ್ರೀಬಸವಲಿಂಗದೇಶಿಕೇAದ್ರಸ್ವಾಮಿ ತಿಳಿಸಿದರು. ಪಟ್ಟಣದ ಬಸ್ ನಿಲ್ದಾಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡು ಮಾತನಾಡಿದ ಅವರು ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ತಮ್ಮ ದಿವ್ಯ ತಪಸ್ಸಿನಿಂದ ಸುತ್ತೂರು ಶ್ರೀಕ್ಷೇತ್ರವನ್ನು ಸಂಸ್ಥಾಪಿಸಿ ಬೆಳಗಿದ ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸುವುದೆ ನಮ್ಮೆಲ್ಲರ ಪುಣ್ಯವಾಗಿದೆ ಎಂದರು. ವಿಶೇಷ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಮೊದಲಾದವುಗಳು ಜರುಗುತ್ತವೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ. ಮಠಾದೀಶರುಗಳ ಗಣ್ಯರ ಅಗಮನ:ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ಸಚಿವರುಗಳು, ಸಂಸದರು, ಶಾಸಕರು, ಕಲಾವಿದರು, ಪ್ರಗತಿಪರ ರೈತರು ಹಾಗೂ ಗಣ್ಯರನ್ನು ಬಾಗವಹಿಸಲಿದ್ದಾರೆಂದರು. ಈ ಸಂದರ್ಭದಲ್ಲಿ ದ್ಯಾವಪಟ್ಟಣದ ಸಪ್ಪೆಸ್ವಾಮಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳು ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸಲಿದ್ದು, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳಿಗೆ ಶ್ರೀಕ್ಷೇತ್ರದಲ್ಲಿ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ದೇಸಿ ಆಟಗಳು:ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ ಮತ್ತು ರಾಗಿಬೀಸುವ ಸ್ಪರ್ಧೆಗಳನ್ನು ಅಯೋಜನೆ ಮಾಡಲಾಗಿದ್ದು ಸರ್ವ ಸಮುದಾಯದ ಜನರು ಬಾಗವಹಿಸುವಂತೆ ಕರೆ ನೀಡಿದರು. ನಂತರ ಸುತತೂರು ಜಾತೃಆ ಮಹೋತ್ಸವದ ಪ್ರಚಾರ ರಥವು ಭಾರತಿನಗರ,ಮದ್ದೂರು ತಾಲೂಕಿಗೆ ತೆರಳಿತು. ಈ ಸಂದರ್ಭದಲ್ಲಿ ಕುಂದೂರು ದೊಡ್ಡಮಠದ ಶ್ರೀ ಬಸವರಾಜೇಂದ್ರ ಶಿವಚಾರ್ಯಸ್ವಾಮೀಜಿಗಳು,ಸರ್ವ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಜನರು ಬಾಗವಹಿಸಿದ್ದರು. ಚಿತ್ರ-೨೯-೧ ಮಳವಳ್ಳಿ ಪಟ್ಟಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ವಿಸೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.1
- *ಭಾರತ ನಲ್ಲಿ ವೈರಲ್*1
- Post by JAYASIMHA.M.K{JAISEE}1
- ಶಿಡ್ಲಘಟ್ಟ: ಬೆಳ್ಳೂಟಿ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವೈಕುಂಠ ಏಕಾದಶಿ ಪ್ರಯುಕ್ತ ಸಪ್ತದ್ವಾರ ದರ್ಶನ!1
- ವೈಕುಂಠ ಏಕಾದಶಿ ಹಿನ್ನಲೆ ಶ್ರೀರಂಗಂ ಗೆ ತೆರಳುತ್ತಿದ್ದ ಚಿಕ್ಕಬಳಾಪುರ ಸಂಸದ ಸುಧಕಾರ್ ಮಾದ್ಯಮಗಳ ಜೊತೆ ಮಾತನಾಡಿ ವೈಕಂಠದ ಏಕದಶಿಯ ಮಹತ್ವವನ್ನು ಅದರ ಪೂಜಾ ವಿಧಿ ವಿಧಾನಗಳನ್ನು ಮಾಧ್ಯಮಗಳ ಮುಖಾಂತರ ಹಂಚಿಕೊಂಡರು1