ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಸಂಚಾರಿ ಹೈಕೋರ್ಟ್ ಪೀಠಕ್ಕೆ ಸೇರಿಸಲಾಗುವುದು ಈ ಪ್ರಸ್ತಾವನೆ ವಿರೋಧ ವ್ಯಕ್ತಪಡಿಸಿ ಕಠಿಣ ಹೋರಾಟಕ್ಕೆ ಸಿದ್ಧ ವಕೀಲರ ಸಂಘದ ಅಧ್ಯಕ್ಷ ಜಿ. ಆರ್. ರಾಘವೇಂದ್ರ. ಸಾರ್ವಜನಿಕ ಮಾಹಿತಿಗಾಗಿ ಹಾಲಿ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಎಲ್ಲ ಮೇಲ್ಮನವಿಗಳನ್ನು , ಬೆಂಗಳೂರಿನ ಉಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿ ಈಗ ನಡೆಸಲಾಗುತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಸಂಚಾರಿ ಹೈ ಕೋರ್ಟ್ ಪೀಠಕ್ಕೆ ಸೇರಿಸಲಾಗುವುದು ಎನ್ನುವ ಪ್ರಸ್ತಾವನೆಗೆ ವಿರೋಧ ವ್ಯಕ್ತ ಪಡಿಸಿ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರು ಕಾರ್ಯದರ್ಶಿ, ಮತ್ತು ಜಿಲ್ಲೆಯ ಎಲ್ಲ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಮತ್ತು ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಹಾಗೂ ವಾಸವಿರುವ ಶಿವಮೊಗ್ಗ ಜಿಲ್ಲೆಯ ವಕೀಲರು ಸಭೆ ಸೇರಿ ಸಾಮೂಹಿಕವಾಗಿ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತ ಪಡಿಸ ಲಾಯಿತು, ಭೌಗೋಳಿಕವಾಗಿ ಹಾಗೂ ಸಾಮಾಜಿಕವಾಗಿ ಕಕ್ಷಿದಾರರಿಗೆ ಮತ್ತು ವಕೀಲರಿಗೆ ತೊಂದರೆಯಾಗುವ ಹಾಗೂ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿರುವ ಇಂತಹ ಅವೈಜ್ಞಾನಿಕ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂಬ ಭಾವನೆ ವ್ಯಕ್ತ ಪಡಿಸಲಾಯಿತು ಮತ್ತು ಇದನ್ನು ತಡೆಯಲು ಮುಂದಿನ ಎಂತಹ ಕಠಿಣ ಹೋರಾಟಕ್ಕೂ ನಾವು ಸಿದ್ಧ ಎಂಬ ನಿರ್ಣಯ ಕೈಗೊಳ್ಳಲಾಯಿತು.. ಶಿವಮೊಗ್ಗದ ಅಧ್ಯಕ್ಷರಾದ, ಜಿ ಆರ್ ರಾಘವೇಂದ್ರ, ಹಿರಿಯ ವಕೀಲರಾದ ಬಸಪ್ಪಗೌಡರು, ಕಾರ್ಯದರ್ಶಿಯವರು, ಶಿಕಾರಿಪುರ ಮತ್ತು ಸೊರಬ , ಭದ್ರಾವತಿ ವಕೀಲರ ಸಂಘದ ಅಧ್ಯಕ್ಷರು ಕಾರ್ಯದರ್ಶಿಯವರು, ಈ ಸಮಯದಲ್ಲಿ ಹಾಜರಿದ್ದು. ಬೆಂಗಳೂರು ವಕೀಲರ ಸಂಘದ ಹೈ ಕೋರ್ಟ್ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಚಂದ್ರಕಾಂತ ಪಾಟೀಲ ಕಾನೂರು ಗೌಡ್ರು ಶಿವಮೊಗ್ಗದ ನಿಯೋಗದೊಂದಿಗೆ , ಮಾನ್ಯ ಉಚ್ಚ ನ್ಯಾಯಾಲಯದ ಚೀಫ್ ಜಸ್ಟೀಸ್ ಅವರನ್ನು, ಆಡಳಿತಾತ್ಮಕ ನ್ಯಾಯಮೂರ್ತಿಯವರು, ಮತ್ತು ಅಡ್ವೊಕೇಟ್ ಜನರಲ್ ಅವರನ್ನು ಭೇಟಿ ಮಾಡಿಸಿ, ನಿಯೋಗಕ್ಕೆ ಅಗತ್ಯ ಸಹಕಾರ ನೀಡಿದ್ದು, ಹಿರಿಯ ವಕೀಲರಾದ ದಿವಾಕರ್ ಶಿವಮೊಗ್ಗ ವ್ಯಾಪ್ತಿಗೆ ಹೆಚ್ಚುವರಿ ಹೈ ಕೋರ್ಟ್ ಪೀಠ ನೀಡಬೇಕಾಗಿ ಪ್ರಸ್ತಾವನೆ ಸಲ್ಲಿಸಲಾಯಿತು. ಒಂದೊಮ್ಮೆ ಮಂಗಳೂರಿಗೆ ನಮ್ಮ ಶಿವಮೊಗ್ಗ ವ್ಯಾಪ್ತಿಯನ್ನು ಸೇರಿಸಿದಲ್ಲಿ ಸಾರ್ವಜನಿಕರಿಗೆ ಬಹು ದೊಡ್ಡ ಮಟ್ಟದ ಅನಾನುಕೂಲತೆ ಎದುರಾಗಿದ್ದು, ಸಣ್ಣ ಸಣ್ಣ ಪ್ರಕರಣಗಳಿಗೂ ಸಹ , ಸಂಚಾರಿ ವ್ಯವಸ್ಥೆ ಇರದ ಮತ್ತು ಆಗಾಗ್ಗೆ ರಸ್ತೆ ಯ ಸಂಚಾರವೇ ನಿಂತು ಹೋಗುವ ಘಾಟಿ ರಸ್ತೆ ಹೊಂದಿರುವ ಪ್ರದೇಶಕ್ಕೆ ಶಿವಮೊಗ್ಗದ ಪ್ರಕರಣಗಳು ವರ್ಗಾವಣೆ ಆಗಲಿದ್ದು, ಇಂತಹ ಪ್ರಯತ್ನವನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು, ಎಲ್ಲರೂ ಒಟ್ಟಾಗಿ ವಿರೋಧಿಸುವ ಪ್ರಯತ್ನ ಆಗಬೇಕಾಗುತ್ತದೆ. ಇಲ್ಲವಾದಲ್ಲಿ ಬಡವರಿಗೆ ಮದ್ಯಮ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ , ಮಂಗಳೂರಿಗೆ ಹೋಗಿ ತಮ್ಮ ಪ್ರಕರಣಗಳಲ್ಲಿ ಹಾಜರಾಗಲು ಅತೀ ಸಮಸ್ಯೆ ಎದುರಾಗಲಿದೆ.
ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಸಂಚಾರಿ ಹೈಕೋರ್ಟ್ ಪೀಠಕ್ಕೆ ಸೇರಿಸಲಾಗುವುದು ಈ ಪ್ರಸ್ತಾವನೆ ವಿರೋಧ ವ್ಯಕ್ತಪಡಿಸಿ ಕಠಿಣ ಹೋರಾಟಕ್ಕೆ ಸಿದ್ಧ ವಕೀಲರ ಸಂಘದ ಅಧ್ಯಕ್ಷ ಜಿ. ಆರ್. ರಾಘವೇಂದ್ರ. ಸಾರ್ವಜನಿಕ ಮಾಹಿತಿಗಾಗಿ ಹಾಲಿ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಎಲ್ಲ ಮೇಲ್ಮನವಿಗಳನ್ನು , ಬೆಂಗಳೂರಿನ ಉಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿ ಈಗ ನಡೆಸಲಾಗುತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಸಂಚಾರಿ ಹೈ ಕೋರ್ಟ್ ಪೀಠಕ್ಕೆ ಸೇರಿಸಲಾಗುವುದು ಎನ್ನುವ ಪ್ರಸ್ತಾವನೆಗೆ ವಿರೋಧ ವ್ಯಕ್ತ ಪಡಿಸಿ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರು ಕಾರ್ಯದರ್ಶಿ, ಮತ್ತು ಜಿಲ್ಲೆಯ ಎಲ್ಲ ತಾಲೂಕಿನ ವಕೀಲರ
ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಮತ್ತು ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಹಾಗೂ ವಾಸವಿರುವ ಶಿವಮೊಗ್ಗ ಜಿಲ್ಲೆಯ ವಕೀಲರು ಸಭೆ ಸೇರಿ ಸಾಮೂಹಿಕವಾಗಿ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತ ಪಡಿಸ ಲಾಯಿತು, ಭೌಗೋಳಿಕವಾಗಿ ಹಾಗೂ ಸಾಮಾಜಿಕವಾಗಿ ಕಕ್ಷಿದಾರರಿಗೆ ಮತ್ತು ವಕೀಲರಿಗೆ ತೊಂದರೆಯಾಗುವ ಹಾಗೂ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿರುವ ಇಂತಹ ಅವೈಜ್ಞಾನಿಕ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂಬ ಭಾವನೆ ವ್ಯಕ್ತ ಪಡಿಸಲಾಯಿತು ಮತ್ತು ಇದನ್ನು ತಡೆಯಲು ಮುಂದಿನ ಎಂತಹ ಕಠಿಣ ಹೋರಾಟಕ್ಕೂ ನಾವು ಸಿದ್ಧ ಎಂಬ ನಿರ್ಣಯ ಕೈಗೊಳ್ಳಲಾಯಿತು.. ಶಿವಮೊಗ್ಗದ ಅಧ್ಯಕ್ಷರಾದ, ಜಿ ಆರ್ ರಾಘವೇಂದ್ರ, ಹಿರಿಯ ವಕೀಲರಾದ
ಬಸಪ್ಪಗೌಡರು, ಕಾರ್ಯದರ್ಶಿಯವರು, ಶಿಕಾರಿಪುರ ಮತ್ತು ಸೊರಬ , ಭದ್ರಾವತಿ ವಕೀಲರ ಸಂಘದ ಅಧ್ಯಕ್ಷರು ಕಾರ್ಯದರ್ಶಿಯವರು, ಈ ಸಮಯದಲ್ಲಿ ಹಾಜರಿದ್ದು. ಬೆಂಗಳೂರು ವಕೀಲರ ಸಂಘದ ಹೈ ಕೋರ್ಟ್ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಚಂದ್ರಕಾಂತ ಪಾಟೀಲ ಕಾನೂರು ಗೌಡ್ರು ಶಿವಮೊಗ್ಗದ ನಿಯೋಗದೊಂದಿಗೆ , ಮಾನ್ಯ ಉಚ್ಚ ನ್ಯಾಯಾಲಯದ ಚೀಫ್ ಜಸ್ಟೀಸ್ ಅವರನ್ನು, ಆಡಳಿತಾತ್ಮಕ ನ್ಯಾಯಮೂರ್ತಿಯವರು, ಮತ್ತು ಅಡ್ವೊಕೇಟ್ ಜನರಲ್ ಅವರನ್ನು ಭೇಟಿ ಮಾಡಿಸಿ, ನಿಯೋಗಕ್ಕೆ ಅಗತ್ಯ ಸಹಕಾರ ನೀಡಿದ್ದು, ಹಿರಿಯ ವಕೀಲರಾದ ದಿವಾಕರ್ ಶಿವಮೊಗ್ಗ ವ್ಯಾಪ್ತಿಗೆ ಹೆಚ್ಚುವರಿ ಹೈ ಕೋರ್ಟ್ ಪೀಠ ನೀಡಬೇಕಾಗಿ ಪ್ರಸ್ತಾವನೆ
ಸಲ್ಲಿಸಲಾಯಿತು. ಒಂದೊಮ್ಮೆ ಮಂಗಳೂರಿಗೆ ನಮ್ಮ ಶಿವಮೊಗ್ಗ ವ್ಯಾಪ್ತಿಯನ್ನು ಸೇರಿಸಿದಲ್ಲಿ ಸಾರ್ವಜನಿಕರಿಗೆ ಬಹು ದೊಡ್ಡ ಮಟ್ಟದ ಅನಾನುಕೂಲತೆ ಎದುರಾಗಿದ್ದು, ಸಣ್ಣ ಸಣ್ಣ ಪ್ರಕರಣಗಳಿಗೂ ಸಹ , ಸಂಚಾರಿ ವ್ಯವಸ್ಥೆ ಇರದ ಮತ್ತು ಆಗಾಗ್ಗೆ ರಸ್ತೆ ಯ ಸಂಚಾರವೇ ನಿಂತು ಹೋಗುವ ಘಾಟಿ ರಸ್ತೆ ಹೊಂದಿರುವ ಪ್ರದೇಶಕ್ಕೆ ಶಿವಮೊಗ್ಗದ ಪ್ರಕರಣಗಳು ವರ್ಗಾವಣೆ ಆಗಲಿದ್ದು, ಇಂತಹ ಪ್ರಯತ್ನವನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು, ಎಲ್ಲರೂ ಒಟ್ಟಾಗಿ ವಿರೋಧಿಸುವ ಪ್ರಯತ್ನ ಆಗಬೇಕಾಗುತ್ತದೆ. ಇಲ್ಲವಾದಲ್ಲಿ ಬಡವರಿಗೆ ಮದ್ಯಮ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ , ಮಂಗಳೂರಿಗೆ ಹೋಗಿ ತಮ್ಮ ಪ್ರಕರಣಗಳಲ್ಲಿ ಹಾಜರಾಗಲು ಅತೀ ಸಮಸ್ಯೆ ಎದುರಾಗಲಿದೆ.
- ಸೊರಬ ಪಟ್ಟಣದ ಪುರದೈವ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಳೇ ರಥ ಶಿಥಿಲವಾದ ಹಿನ್ನೆಲೆ ನೂತನ ರಥ ನಿರ್ಮಾಣ ಮಾಡಲಾಗಿದ್ದು, ಶ್ರೀ ದೇವರಿಗೆ ರಥ ಸಮರ್ಪಣೆಯಾದ ತರುವಾಯ ಮೊದಲ ರಥೋತ್ಸವ ಇದಾಗಿದ್ದು, ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದರು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಂಭಾಗ ಕೊಂಚ ದೂರ ಮಾತ್ರ ರಥ ಎಳೆಯಲಾಯಿತು. ಹಳೇಸೊರಬ ಗ್ರಾಮಸ್ಥರು ಚಪ್ಪರ ಕಟ್ಟುವ ಹಾಗೂ ಹಿರೇಶಕುನ ಮತ್ತು ಸೊಪ್ಪಿನಕೇರಿ ಗ್ರಾಮಸ್ಥರು ತೇರು ಕಟ್ಟುವ ಶಾಸ್ತ್ರವನ್ನು ನೆರವೇರಿಸಿದರು. ರಥೋತ್ಸವ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ವರದಿ: ಸಂದೀಪ ಯು ಎಲ್ ಸೊರಬ3
- Post by Karibasava Balal1
- ಹಾವೇರಿ ಜಿಲ್ಲೆ ಹಾನಗಲ್1
- Post by Suresh Belagere1
- ಚಿತ್ರದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಭಗವಾನ್ ಬುದ್ದನ ಜಯಂತಿ ಹಿನ್ನೆಲೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಅವರು ಆಗಮಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಗವಾನ್ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.1
- ಕಡೂರು: ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು. ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್ ವಿರುದ್ಧ ಹೋರಾಡುತ್ತದೆ ಎಂದರು. ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.3
- #Yediyurappa50Years #BSYediyurappa #YediyurappaCelebration #BJPKarnataka #BJPChitradurga #KumaraswamyStatement #PoliticalNewsKarnataka #ChitradurgaNews #BJPStrength #KarnatakaPolitics #ಯಡಿಯೂರಪ್ಪ50ವರ್ಷ #ಯಡಿಯೂರಪ್ಪಅಭಿಮಾನೋತ್ಸವ #ಬಿಜೆಪಿಶಕ್ತಿಪ್ರದರ್ಶನ #ಚಿತ್ರದುರ್ಗಸುದ್ದಿ #ಬಿಜೆಪಿಕಾರ್ಯಕ್ರಮ #ಕುಮಾರಸ್ವಾಮಿಸ್ಪಷ್ಟನೆ #ಕರ್ನಾಟಕರಾಜಕೀಯ #ಬಿಜೆಪಿಬಲವರ್ಧನ #BreakingNews #BigStatement #PoliticalUpdate #BJPWave #PowerShow #May9Event #Election2028 #LocalElection #TrendingNow #ViralNews1
- Post by Karibasava Balal1