Shuru
Apke Nagar Ki App…
ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೆ ಸೇ 17ಕ್ಕೆ ಕಲಬುರ್ಗಿಗೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ
Jk ಕನ್ನಡ news
ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೆ ಸೇ 17ಕ್ಕೆ ಕಲಬುರ್ಗಿಗೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ
More news from ಕರ್ನಾಟಕ and nearby areas
- ವಿದ್ಯುತ್ ತಂತಿಗೆ ಮೇವು ತಾಗಿ ಶಾರ್ಟ್ ಸರ್ಕ್ಯೂಟ್: ಟ್ಯಾಕ್ಟರ್ನ ಮೇವಿಗೆ ಬೆಂಕಿ1
- ಜಗತ್ತಿಗೆ ಪ್ರಜಾಪ್ರಭುತ್ವ ಕೊಟ್ಟಿದ್ದು ನಮ್ಮ ಬೀದರ್ ನೆಲ: ಸಚಿವ ಈಶ್ವರ ಖಂಡ್ರೆ ಹೇಳಿಕೆ ಬೀದರ್: ಜಗತ್ತಿಗೆ ಪ್ರಜಾಪ್ರಭುತ್ವ ಕೊಟ್ಟಿದ್ದು ನಮ್ಮ ಬೀದರ್ ನೆಲ ಎಂದು ನಗರದಲ್ಲಿ ಸಚಿವ ಈಶ್ವರ ಖಂಡ್ರೆ ಹೇಳಿದರು1
- OTD: 'ಬೌಲ್-ಔಟ್'ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ರೋಚಕ ಜಯ 2007ರ ಟಿ20 ವಿಶ್ವಕಪ್ನಲ್ಲಿ ಇದೇ ದಿನ ನಡೆದ ಭಾರತ & ಪಾಕಿಸ್ತಾನ ನಡುವಿನ ಪಂದ್ಯವು ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಮುಖಾಮುಖಿಗಳಲ್ಲಿ ಒಂದಾಗಿದೆ. ಪಂದ್ಯದ ಸ್ಕೋರ್ ಸಮನಾದಾಗ, ವಿಜೇತರನ್ನು ನಿರ್ಧರಿಸಲು 'ಬೌಲ್-ಔಟ್' ನಡೆಸಲಾಯಿತು. ಭಾರತೀಯ ಆಟಗಾರರಾದ ಸೆಹ್ವಾಗ್, ಹರ್ಭಜನ್ ಮತ್ತು ಉತ್ತಪ್ಪ ಯಶಸ್ವಿಯಾಗಿ ಸ್ಟಂಪ್ಗಳಿಗೆ ಚೆಂಡನ್ನು ಬಡಿದರೆ, ಪಾಕಿಸ್ತಾನದ ಮೂವರು ಬೌಲರ್ಗಳು ಗುರಿ ತಪ್ಪಿದರು. ಪರಿಣಾಮವಾಗಿ, ಭಾರತವು 3-0 ಅಂತರದ ಭರ್ಜರಿ ಜಯವನ್ನು ಸಾಧಿಸಿತ್ತು. 2007ರ ಟಿ20 ವಿಶ್ವಕಪ್ ನೆನಪು: 'ಬೌಲ್-ಔಟ್'ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಇದೇ ದಿನ1
- ಚಿಂಚೋಳಿ & ಕಾಳಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು ಚಿಂಚೋಳಿ : ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಚಿಂಚೋಳಿ ಮಂಡಲ ವತಿಯಿಂದ ಕಾಳಗಿ ಪಟ್ಟಣದ ಮುಖ್ಯ ಬಜಾರ್ ಇಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಚಿಂಚೋಳಿ- ಕಲಬುರಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕರಾದ ಡಾಕ್ಟರ್ ಅವಿನಾಶ್ ಜಾದವ್ ಅವರು ಮಾತನಾಡಿ ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮಳೆಯ ಅಭಾವದಿಂದ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿದ್ದು, ರೈತರು ಹಾಕಿರುವ ಬಂಡವಾಳವೇ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶರಣಪ್ಪ ತಳವಾರ.ಮಂಡಲ ಅಧ್ಯಕ್ಷ ಕುಮಾರ ಚೇಂಗಟ್ಟಿ. ಪ್ರಶಾಂತ ಕದಮ್.ರೇವಣಸಿದ್ಧ ಬಡಾ.ರಾಜಶೇಖರ್ ಗುಡ್ಡದಾ.ಸದ್ದಾಮ್ ವಜೀರಗಾವ.ಜಗದೀಶ ಪಾಟೀಲ.ಮಲ್ಲಿನಾಥ್ ಪಾಟೀಲ.ಭೀಮರಾಯ ಮಲಘಣ. ಶಿವರಾಜ ಪಾಟೀಲ. ಜಗನಾಥ ತೇಲಿ.ಶಶಿಕಲಾ ಟೆಂಗಳಿ.ಮಲ್ಲು ಮರಗುತ್ತಿ.ಗೋಪಾಲರಾವ ಕಟೀಮನಿ.ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.4
- ಕಾಳಗಿಯಲ್ಲಿ ಬರಗಾಲ ಘೋಷಣೆಗೆ ಆಗ್ರಹಿಸಿ ಬಿಜೆಪಿ,ಯಿಂದ ಪ್ರತಿಭಟನೆ ಕಾಳಗಿ : ಪಟ್ಟಣದಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ಬರಗಾಲ ಘೋಷಣೆ ಮಾಡುವಂತೆ ಶಾಸಕ ಡಾ ಅವಿನಾಶ್ ಜಾಧವ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ರೈತರು ಬೃಹತ್ ಪ್ರತಿಭಟನೆ ಮಾಡಿದರು. ಕಾಳಗಿ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ಚಿಂಚೋಳಿ- ಕಾಳಗಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.1
- ಕಲಬುರಗಿ:ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ-ಹೆಚ್ ಡಿಕೆ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು ಬಿಡದಿ ವಿಚಾರ ಡೈವಟ್೯ ಮಾಡೋಕೆ ಜೈಲು ರೈಡ್ ಮಾಡಿಲ್ಲ ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ ಎಂದು ಹೆಚ್ ಡಿಕೆ ಹೇಳಿಕೆಗೆ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ನೀಡಿದ್ದಾರೆ. ರಾಜ್ಯದ ಹಲವು ಜೈಲುಗಳ ಮೇಲೆ ರೇಡ್ ಮಾಡಿದ್ದೆವೆ. ಅದನ್ನ ನಾವು ಮಾಡಬಾರದ? ಪ್ರಜ್ವಲ್ ನಿರಂತರವಾಗಿ ಪೋನ್ ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲಾ ಮಾತನಾಡೋರು ಯಾಕೆ ಮಾಹಿತಿ ನೀಡಿಲ್ಲ. ಕುಟುಂಬದವರ ಜೊತೆ ತಾನೇ ಆತ ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಅದರ ಬಗ್ಗೆ ಒಂದು ಭಾರಿಯಾದ್ರು ಮಾತನಾಡಿದ್ದಾರಾ..? ಮೊದಲು ಆ ಕುಟುಂಬಗಳಿಗೆ ಕ್ಷೆಮೆ ಕೇಳಬೇಕು. ಆ ನೊಂದ ಹೆಣ್ಮಕ್ಕಳ ಕ್ಷೇಮೆ ಕೇಳಲಿ. ವಿಜಯದಶಮಿಯಿಂದ ಯುದ್ದ ಸ್ಟಾಟ್೯ ಎಂದ ಹೆಚ್ ಡಿಕೆ ಹೇಳಿಕೆ ವಿಚಾರ. ಮಾತನಾಡಿದ ಅವರು ಅಲ್ಲೋಲ ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ ಅಂತ ವ್ಯಂಗ್ಯವಾಡಿದ ಪ್ರಿಯಾಂಕ್. ನಮ್ಮ ಕುಟುಂಬವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನೋ ಹೆಚ್ ಡಿಕೆ ಹೇಳಿಕೆ ಯಾರು ಪ್ರಯತ್ನ ಮಾಡ್ತಿದ್ದಾರೆ. ನಾವ್ಯಕೆ ಅದನ್ನ ಮಾಡೋಣ ಟಿ.ನರಸಿಪುರ ಇನ್ಸಪೆಕ್ಟರ್ ವಿರದ್ದು ಹಳೇ ಕೇಸ್ ವಿಚಾರ.ಅವರ ಮೇಲೆ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಇದಕ್ಕೂ ಏನ್ ಸಂಬಂಧ. ಗಣೇಶ ವಿಚಾರವಾಗಿ ಅವರ ಇಲಾಖೆಯ ಎಸ್ ಓಪಿ ಹೇಳಬಾರದಾ..? ಅವರ ಮೇಲೆ ಆರೋಪ ಇದ್ರೆ ದೂರು ಕೊಡಲಿ. ನಾವೇ ತನೀಖೆ ಮಾಡ್ತೆವೆ. ಅದು ಬಿಟ್ಟು ಆ ಮಾಜಿ ಸಂಸದರು ಏನಾದ್ರು ಮಾಡಿದ್ರೆ ನಡಿಯುತ್ತಾ..? ನಮ್ಮ ಸಂಭ್ರಮ ಬೇರೆಯವರಿಗೆ ಆತಂಕ ಆಗಬಾರದು. ಎಲ್ಲರೂ ವಿಜೃಂಭ್ರಣೆಯಿಂದ ಹಬ್ಬ ಮಾಡಿ. ಇವರಿಗೆ ಬೆಂಕಿ ಹಚ್ಚೋದೆ ಕೆಲಸ ಎಂದು ಕಿಡಿಕಾರಿದರು ಉಮರ ಖಾಲಿದ್ ಅವರನ್ನ ರಾಷ್ಟ್ರೀಯವಾದಿ ಅಂತ ಹರಿಪ್ರಸಾದ್ ಬಿಂಬಿಸೋ ವಿಚಾರಯು ಮಾತನಾಡಿದ ಅವರು ಉಮರ್ ಖಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ. ಯಾಕೆ ಕೇಂದ್ರ ಸರ್ಕಾರ ಟ್ರಯಲ್ ಮಾಡ್ತಿಲ್ಲ, ಟ್ರಯಲ್ ಮಾಡಿ ಕೋಟ್೯ ಘೋಷಣೆ ಮಾಡಲಿ. ಅವಾಗ ಎಲ್ಲರೂ ಆತ ಅಪರಾಧಿ ಅಂತ ಒಪ್ಪಕೊಳ್ಳುತ್ತಾರೆ. ಬಿಜೆಪಿ ಹೇಳಿದ್ರೆ ನಾವು ಒಪ್ಕೊಳ್ಳಬೇಕಾ.? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು1
- ಗುರುಮಠಕಲ್ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ನೆರೆದ ಸಾವಿರಾರು ನೋಡುಗರ ಮನ ಸೆಳೆಯಿತು. ಗುರುಮಠಕಲ್ನಲ್ಲಿ ಭಕ್ತಿಭಾವದ ಆಂಜನೇಯ ಸ್ವಾಮಿ ಉತ್ಸವ ಪಲ್ಲಕ್ಕಿ ಮೆರವಣಿಗೆ, ವಿಶೇಷ ಪೂಜೆ; ಕೈಕುಸ್ತಿ ಪಂದ್ಯಾವಳಿ ಕಣ್ತುಂಬಿಕೊಂಡ ಸಾವಿರಾರು ಜನ ಗುರುಮಠಕಲ್: ಶ್ರಾವಣ ಮಾಸದ ಕೊನೆಯ ದಿನವಾದ ಬೆನಕನ ಅಮಾವಾಸ್ಯೆ ಅಂಗವಾಗಿ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆದ ಉತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಬೆಳಿಗ್ಗೆ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ ಹಾಗೂ ಮೆರವಣಿಗೆ ನಡೆಯಿತು. ಭಜನಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಕೈಕುಸ್ತಿ ಪಂದ್ಯಾವಳಿಗೆ ಕಳೆ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಜನರು ಸೇರಿದ್ದು, ನೆರೆದಿದ್ದ ನೋಡುಗರ ಮನರಂಜಿಸಿತು. ಸುತ್ತಮುತ್ತಲಿನ ಗ್ರಾಮಗಳ ಜನರು ಮಾತ್ರವಲ್ಲದೆ ತೆಲಂಗಾಣ ರಾಜ್ಯದಿಂದಲೂ ಭಕ್ತರು ಆಗಮಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದು, ಬಳಿಕ ಕೈಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದರು. ಇದರಿಂದ ದೇವಸ್ಥಾನ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರಿಗೆ ಅನ್ನದಾಸೋಹ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ದೇವಸ್ಥಾನದ ಕಮಿಟಿ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಪ್ರಸಾದ ಸ್ವೀಕರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ವೇಳೆ ಪಟ್ಟಣದ ಪಂಚಾಯತ್ ಮೊಹಲ್ಲಾ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ಉತ್ಸವವು ಏಳು ದಿನಗಳ ಅಖಂಡ ಸಪ್ತ ಭಜನೆಯ ಮೂಲಕ ಭಕ್ತಿಭಾವದಿಂದ ಸಂಪನ್ನಗೊಂಡಿತು.3
- ನಾಳೆ ನಡೆಯಲಿರುವ BSSK ಬಚಾವ್ ಹೋರಾಟಕ್ಕೆ DMSS ಸಂಘಟನೆಯ ಬೆಂಬಲ ಇದೆ : ತಾಲೂಕು ಅಧ್ಯಕ್ಷ ಪಪ್ಪುರಾಜ ಚತುರೆ1