ಶಹಾಪುರದ ಸೃಜನಶೀಲ ಬಳಗದ ವತಿಯಿಂದ ಕವಿ ಡಾ. ಮರಿಯಪ್ಪ ನಾಟೇಕಾರ ಅವರ 'ಕಾಗೆ ಬಣ್ಣದ ಕವಿತೆ' ಕವನ ಸಂಕಲನದ ಕುರಿತು ಓದು, ಚರ್ಚೆ ಹಾಗೂ ಸಂವಾದ ಕಾರ್ಯಕ್ರಮವನ್ನು ಐಕೂರು ಗ್ರಾಮದ ಶರಣಗೌಡ ಅವರ ಹೊಲದಲ್ಲಿರುವ ಕುರಿ ಸಾಕಾಣಿಕೆ ಕೇಂದ್ರದಲ್ಲಿ ಅತ್ಯಂತ ಸರಳ, ಆತ್ಮೀಯ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಥೆಗಾರ ಆನಂದ ಗೊಬ್ಬಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ತಮ್ಮ ಭಾಗದ ಅನೇಕ ಕವಿಗಳು ಮತ್ತು ಲೇಖಕರ ಕೃತಿಗಳು ಪ್ರಕಟಗೊಂಡಿದ್ದರೂ ಅವುಗಳ ಕುರಿತು ಗಂಭೀರವಾದ ಚರ್ಚೆ, ವಿಮರ್ಶೆ ಹಾಗೂ ಸಂವಾದಗಳು ನಡೆಯುವುದು ವಿರಳವೆಂದು ವಿಷಾದ ವ್ಯಕ್ತಪಡಿಸಿದರು. ಸಾಹಿತ್ಯ ಕೃತಿಗಳ ಕುರಿತು ಓದು ಮತ್ತು ಚರ್ಚೆಯ ಸಂಸ್ಕೃತಿ ಬೆಳೆಯುವ ಅಗತ್ಯವಿದ್ದು, ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸ್ಥಳೀಯ ಕವಿಗಳ ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಪ್ರಾಂಶುಪಾಲರಾದ ಅಂಬ್ಲಯ್ಯ ಸೈದಾಪೂರ ಅವರು, ಸಾಹಿತ್ಯ ಸೃಜನಶೀಲತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ 'ಕಾಗೆ ಬಣ್ಣದ ಕವಿತೆ' ಕೃತಿಯು ಹೊಸ ಚಿಂತನೆಗಳಿಗೆ ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟರು. ಕವಿ ಡಾ. ಮರಿಯಪ್ಪ ನಾಟೇಕಾರ ಅವರು ಸಾಮಾನ್ಯ ಪಕ್ಷಿಯಾದ ಕಾಗೆಯನ್ನು ವಿಶಿಷ್ಟ ರೂಪಕವಾಗಿ ಬಳಸಿರುವುದು ಕೃತಿಯ ಪ್ರಮುಖ ವೈಶಿಷ್ಟ್ಯವಾಗಿದೆ. ಸಾಹಿತ್ಯವು ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿ, ಚಿಂತನೆಗೆ ಪ್ರೇರೇಪಿಸಿ, ಸಮಾಜದ ವಾಸ್ತವತೆಯನ್ನು ಎದುರುಗಾಣಿಸುವ ಶಕ್ತಿಯನ್ನು ಹೊಂದಿರಬೇಕು; ಅಂತಹ ಸಾಹಿತ್ಯವೇ ಸಮಾಜವನ್ನು ಮುನ್ನಡೆಸಬಲ್ಲದು ಎಂದು ಅವರು ಹೇಳಿದರು. ದೇವದುರ್ಗದ ಯುವ ಕವಿ ಅಭಿಷೇಕ್ ಬಳೆ ಮಸರಕಲ್ ಅವರು ಕೃತಿಯ ಕುರಿತು ಸಮಗ್ರವಾಗಿ ವಿಚಾರ ಮಂಡಿಸಿದರು. ಕವಿಗೆ ಕಾವ್ಯದಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ವಿಶಾಲ ಮನೋಭಾವ ಅಗತ್ಯವೆಂದು ಅವರು ಪ್ರತಿಪಾದಿಸಿದರು. ಸಾಮಾನ್ಯವಾಗಿ ಕಾಗೆಯನ್ನು ಅನಿಷ್ಟದ ಸಂಕೇತವೆಂದು ಪರಿಗಣಿಸುವ ಸಮಾಜದಲ್ಲಿದ್ದರೂ, ವಾಸ್ತವದಲ್ಲಿ ಅದು ಕಾರುಣ್ಯ, ಸಹಬಾಳ್ವೆ, ಹಂಚಿಕೊಳ್ಳುವಿಕೆ ಹಾಗೂ ಸಮೂಹ ಬದುಕಿನ ಪ್ರತೀಕವಾಗಿದೆ. ಒಂದು ಅಗಳು ಅನ್ನ ದೊರಕಿದರೂ ತನ್ನ ಸಮೂಹದೊಂದಿಗೆ ಹಂಚಿಕೊಳ್ಳುವ ಕಾಗೆಯ ಗುಣ ಮಾನವ ಸಮಾಜಕ್ಕೆ ಮಾದರಿಯಾಗಬೇಕಾದ ಮೌಲ್ಯವೆಂದು ಅಭಿಷೇಕ್ ಬಳೆ ಮಸರಕಲ್ ಅವರು ಅಭಿಪ್ರಾಯಪಟ್ಟರು. ಕವಿಯ ಕೃತಿಯಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಅವರು ವಿವರಿಸಿದರು. 'ಸರಸ್ವತಿ ನೀನೊಮ್ಮೆ ನನಗೆ ಹೆಂಡತಿಯಾಗು' ಎಂಬ ಕವಿತೆಯನ್ನು ವಿಶ್ಲೇಷಿಸಿದ ಅವರು, ಶಿಕ್ಷಣದಿಂದ ವಂಚಿತರಾದ ಶೋಷಿತ ಸಮುದಾಯಗಳ ಜ್ಞಾನ ದಾಹ, ಕಲಿಕೆಯ ಹಂಬಲ ಹಾಗೂ ಸಾಮಾಜಿಕ ಜಾಗೃತಿಯ ಆಶಯಗಳನ್ನು ಕವಿ ಅತ್ಯಂತ ಸೃಜನಶೀಲವಾಗಿ ಅಭಿವ್ಯಕ್ತಿಸಿದ್ದಾರೆ ಎಂದು ಹೇಳಿದರು. ಜ್ಞಾನಸ್ವರೂಪಿಣಿಯಾದ ಸರಸ್ವತಿಯನ್ನು ಸಂಬೋಧಿಸುವ ಮೂಲಕ ಜ್ಞಾನವೇ ಬದುಕಿನ ಸಂಗಾತಿಯಾಗಬೇಕು ಎಂಬ ಸಂದೇಶವನ್ನು ಕವಿ ನೀಡಿದ್ದು, ಚನ್ನಮಲ್ಲಿಕಾರ್ಜುನ ಮತ್ತು ಅಕ್ಕಮಹಾದೇವಿಯ ಆಧ್ಯಾತ್ಮಿಕ ಸಂಬಂಧವನ್ನು ರೂಪಕವಾಗಿ ಬಳಸಿರುವುದು ಕೃತಿಯಲ್ಲಿನ ಅಪರೂಪದ ಸಾಹಿತ್ಯಿಕ ಪ್ರಯೋಗವಾಗಿದೆ ಎಂದು ವಿಶ್ಲೇಷಿಸಿದರು. ವಿರಾಮದ ಬಳಿಕ ನಡೆದ ಚರ್ಚೆಯ ಆರಂಭಕ್ಕೂ ಮುನ್ನ ಗೌಡಪ್ಪಗೌಡ ಹುಲ್ಕಲ್ ಅವರು ತಮ್ಮ ಸ್ವರಚಿತ ಗೀತೆಯನ್ನು ಸುಮಧುರವಾಗಿ ಹಾಡಿ ಸಾಹಿತ್ಯಾಸಕ್ತರ ಮನಗೆದ್ದರು. ಚರ್ಚಾ ಕಾರ್ಯಕ್ರಮದಲ್ಲಿ ವೆಂಕಟೇಶ ಪಾಟೀಲ, ಕನಕಪ್ಪ ವಾಗಣಗೇರ, ಶರಣಗೌಡ ಚಂದಾಪೂರ, ಮಾಳಪ್ಪ ಗುಂಡಳ್ಳಿ, ನಿಂಗಣ್ಣ ಹಯ್ಯಾಳ (ಬಿ), ನಾನಾಗೌಡ ಚಂದಾಪೂರ, ಗುರಪ್ಪ ವಾರದ್ ಹಾಗೂ ಸಿದ್ದಪ್ಪ ಕೋನಹಳ್ಳಿ ಅವರು ಭಾಗವಹಿಸಿ ಕೃತಿಯ ವಿವಿಧ ಆಯಾಮಗಳು, ಸಾಮಾಜಿಕ ಆಶಯಗಳು ಮತ್ತು ಸಾಹಿತ್ಯಿಕ ಮೌಲ್ಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಾಹಿತಿಗಳ ಅವರ ಪುಸ್ತಕದ ಕುರಿತು ಕೇಳಿದ ಪ್ರಶ್ನೆಗಳಿಗೆ ಡಾ. ಮರಿಯಪ್ಪ ನಾಟೇಕರ್ ಅವರು ಉತ್ತರಿಸಿದರು. ಶಿಕ್ಷಕ ನಿಂಗಪ್ಪ ತೆಕರಾಳ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಗ್ರಾಮೀಣ ಪರಿಸರದಲ್ಲಿ ನಡೆದ ಈ ವಿಶಿಷ್ಟ ಸಾಹಿತ್ಯಿಕ ಸಂವಾದವು 'ಕಾಗೆ ಬಣ್ಣದ ಕವಿತೆ' ಕವನ ಸಂಕಲನದ ಮೂಲಕ ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ ಹಾಗೂ ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಅನಾವರಣಗೊಳಿಸುವುದರೊಂದಿಗೆ ಸಾಹಿತ್ಯಾಸಕ್ತರಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದಂತಾಯಿತು.
ಶಹಾಪುರದ ಸೃಜನಶೀಲ ಬಳಗದ ವತಿಯಿಂದ ಕವಿ ಡಾ. ಮರಿಯಪ್ಪ ನಾಟೇಕಾರ ಅವರ 'ಕಾಗೆ ಬಣ್ಣದ ಕವಿತೆ' ಕವನ ಸಂಕಲನದ ಕುರಿತು ಓದು, ಚರ್ಚೆ ಹಾಗೂ ಸಂವಾದ ಕಾರ್ಯಕ್ರಮವನ್ನು ಐಕೂರು ಗ್ರಾಮದ ಶರಣಗೌಡ ಅವರ ಹೊಲದಲ್ಲಿರುವ ಕುರಿ ಸಾಕಾಣಿಕೆ ಕೇಂದ್ರದಲ್ಲಿ ಅತ್ಯಂತ ಸರಳ, ಆತ್ಮೀಯ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಥೆಗಾರ ಆನಂದ ಗೊಬ್ಬಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ತಮ್ಮ ಭಾಗದ ಅನೇಕ ಕವಿಗಳು ಮತ್ತು ಲೇಖಕರ ಕೃತಿಗಳು ಪ್ರಕಟಗೊಂಡಿದ್ದರೂ ಅವುಗಳ ಕುರಿತು ಗಂಭೀರವಾದ ಚರ್ಚೆ, ವಿಮರ್ಶೆ ಹಾಗೂ ಸಂವಾದಗಳು ನಡೆಯುವುದು ವಿರಳವೆಂದು ವಿಷಾದ ವ್ಯಕ್ತಪಡಿಸಿದರು. ಸಾಹಿತ್ಯ ಕೃತಿಗಳ ಕುರಿತು ಓದು ಮತ್ತು ಚರ್ಚೆಯ ಸಂಸ್ಕೃತಿ ಬೆಳೆಯುವ ಅಗತ್ಯವಿದ್ದು, ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸ್ಥಳೀಯ ಕವಿಗಳ ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಪ್ರಾಂಶುಪಾಲರಾದ ಅಂಬ್ಲಯ್ಯ ಸೈದಾಪೂರ ಅವರು, ಸಾಹಿತ್ಯ ಸೃಜನಶೀಲತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ 'ಕಾಗೆ ಬಣ್ಣದ ಕವಿತೆ' ಕೃತಿಯು ಹೊಸ ಚಿಂತನೆಗಳಿಗೆ ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟರು. ಕವಿ ಡಾ. ಮರಿಯಪ್ಪ ನಾಟೇಕಾರ ಅವರು ಸಾಮಾನ್ಯ ಪಕ್ಷಿಯಾದ ಕಾಗೆಯನ್ನು ವಿಶಿಷ್ಟ ರೂಪಕವಾಗಿ ಬಳಸಿರುವುದು ಕೃತಿಯ ಪ್ರಮುಖ ವೈಶಿಷ್ಟ್ಯವಾಗಿದೆ. ಸಾಹಿತ್ಯವು ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿ, ಚಿಂತನೆಗೆ ಪ್ರೇರೇಪಿಸಿ, ಸಮಾಜದ ವಾಸ್ತವತೆಯನ್ನು ಎದುರುಗಾಣಿಸುವ ಶಕ್ತಿಯನ್ನು ಹೊಂದಿರಬೇಕು; ಅಂತಹ ಸಾಹಿತ್ಯವೇ ಸಮಾಜವನ್ನು ಮುನ್ನಡೆಸಬಲ್ಲದು ಎಂದು ಅವರು ಹೇಳಿದರು. ದೇವದುರ್ಗದ ಯುವ ಕವಿ ಅಭಿಷೇಕ್ ಬಳೆ ಮಸರಕಲ್ ಅವರು ಕೃತಿಯ ಕುರಿತು ಸಮಗ್ರವಾಗಿ ವಿಚಾರ ಮಂಡಿಸಿದರು. ಕವಿಗೆ ಕಾವ್ಯದಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ವಿಶಾಲ ಮನೋಭಾವ ಅಗತ್ಯವೆಂದು ಅವರು ಪ್ರತಿಪಾದಿಸಿದರು. ಸಾಮಾನ್ಯವಾಗಿ ಕಾಗೆಯನ್ನು ಅನಿಷ್ಟದ ಸಂಕೇತವೆಂದು ಪರಿಗಣಿಸುವ ಸಮಾಜದಲ್ಲಿದ್ದರೂ, ವಾಸ್ತವದಲ್ಲಿ ಅದು ಕಾರುಣ್ಯ, ಸಹಬಾಳ್ವೆ, ಹಂಚಿಕೊಳ್ಳುವಿಕೆ ಹಾಗೂ ಸಮೂಹ ಬದುಕಿನ ಪ್ರತೀಕವಾಗಿದೆ. ಒಂದು ಅಗಳು ಅನ್ನ ದೊರಕಿದರೂ ತನ್ನ ಸಮೂಹದೊಂದಿಗೆ ಹಂಚಿಕೊಳ್ಳುವ ಕಾಗೆಯ ಗುಣ ಮಾನವ ಸಮಾಜಕ್ಕೆ ಮಾದರಿಯಾಗಬೇಕಾದ ಮೌಲ್ಯವೆಂದು ಅಭಿಷೇಕ್ ಬಳೆ ಮಸರಕಲ್ ಅವರು ಅಭಿಪ್ರಾಯಪಟ್ಟರು. ಕವಿಯ ಕೃತಿಯಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಅವರು ವಿವರಿಸಿದರು. 'ಸರಸ್ವತಿ ನೀನೊಮ್ಮೆ ನನಗೆ ಹೆಂಡತಿಯಾಗು' ಎಂಬ ಕವಿತೆಯನ್ನು ವಿಶ್ಲೇಷಿಸಿದ ಅವರು, ಶಿಕ್ಷಣದಿಂದ ವಂಚಿತರಾದ ಶೋಷಿತ ಸಮುದಾಯಗಳ ಜ್ಞಾನ ದಾಹ, ಕಲಿಕೆಯ ಹಂಬಲ ಹಾಗೂ ಸಾಮಾಜಿಕ ಜಾಗೃತಿಯ ಆಶಯಗಳನ್ನು ಕವಿ ಅತ್ಯಂತ ಸೃಜನಶೀಲವಾಗಿ ಅಭಿವ್ಯಕ್ತಿಸಿದ್ದಾರೆ ಎಂದು ಹೇಳಿದರು. ಜ್ಞಾನಸ್ವರೂಪಿಣಿಯಾದ ಸರಸ್ವತಿಯನ್ನು ಸಂಬೋಧಿಸುವ ಮೂಲಕ ಜ್ಞಾನವೇ ಬದುಕಿನ ಸಂಗಾತಿಯಾಗಬೇಕು ಎಂಬ ಸಂದೇಶವನ್ನು ಕವಿ ನೀಡಿದ್ದು, ಚನ್ನಮಲ್ಲಿಕಾರ್ಜುನ ಮತ್ತು ಅಕ್ಕಮಹಾದೇವಿಯ ಆಧ್ಯಾತ್ಮಿಕ ಸಂಬಂಧವನ್ನು ರೂಪಕವಾಗಿ ಬಳಸಿರುವುದು ಕೃತಿಯಲ್ಲಿನ ಅಪರೂಪದ ಸಾಹಿತ್ಯಿಕ ಪ್ರಯೋಗವಾಗಿದೆ ಎಂದು ವಿಶ್ಲೇಷಿಸಿದರು. ವಿರಾಮದ ಬಳಿಕ ನಡೆದ ಚರ್ಚೆಯ ಆರಂಭಕ್ಕೂ ಮುನ್ನ ಗೌಡಪ್ಪಗೌಡ ಹುಲ್ಕಲ್ ಅವರು ತಮ್ಮ ಸ್ವರಚಿತ ಗೀತೆಯನ್ನು ಸುಮಧುರವಾಗಿ ಹಾಡಿ ಸಾಹಿತ್ಯಾಸಕ್ತರ ಮನಗೆದ್ದರು. ಚರ್ಚಾ ಕಾರ್ಯಕ್ರಮದಲ್ಲಿ ವೆಂಕಟೇಶ ಪಾಟೀಲ, ಕನಕಪ್ಪ ವಾಗಣಗೇರ, ಶರಣಗೌಡ ಚಂದಾಪೂರ, ಮಾಳಪ್ಪ ಗುಂಡಳ್ಳಿ, ನಿಂಗಣ್ಣ ಹಯ್ಯಾಳ (ಬಿ), ನಾನಾಗೌಡ ಚಂದಾಪೂರ, ಗುರಪ್ಪ ವಾರದ್ ಹಾಗೂ ಸಿದ್ದಪ್ಪ ಕೋನಹಳ್ಳಿ ಅವರು ಭಾಗವಹಿಸಿ ಕೃತಿಯ ವಿವಿಧ ಆಯಾಮಗಳು, ಸಾಮಾಜಿಕ ಆಶಯಗಳು ಮತ್ತು ಸಾಹಿತ್ಯಿಕ ಮೌಲ್ಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಾಹಿತಿಗಳ ಅವರ ಪುಸ್ತಕದ ಕುರಿತು ಕೇಳಿದ ಪ್ರಶ್ನೆಗಳಿಗೆ ಡಾ. ಮರಿಯಪ್ಪ ನಾಟೇಕರ್ ಅವರು ಉತ್ತರಿಸಿದರು. ಶಿಕ್ಷಕ ನಿಂಗಪ್ಪ ತೆಕರಾಳ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಗ್ರಾಮೀಣ ಪರಿಸರದಲ್ಲಿ ನಡೆದ ಈ ವಿಶಿಷ್ಟ ಸಾಹಿತ್ಯಿಕ ಸಂವಾದವು 'ಕಾಗೆ ಬಣ್ಣದ ಕವಿತೆ' ಕವನ ಸಂಕಲನದ ಮೂಲಕ ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ ಹಾಗೂ ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಅನಾವರಣಗೊಳಿಸುವುದರೊಂದಿಗೆ ಸಾಹಿತ್ಯಾಸಕ್ತರಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದಂತಾಯಿತು.
- ಯಾದಗಿರಿ ಜಿಲ್ಲೆಯ ಜನರು ಕೂಲಿ ಅರಸಿ ಬೆಂಗಳೂರಿಗೆ ವಲಸೆ ಹೋಗಿದ್ದು, ಈಗ ಮೊಹರಂ ಹಬ್ಬದ ನಿಮಿತ್ತ ಮತ್ತೆ ತಮ್ಮ ಜಿಲ್ಲೆಗೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲುಗಳು ಮತ್ತು ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಜನರು ಬೆಂಗಳೂರಿನಿಂದ ಯಾದಗಿರಿಗೆ ಆಗಮಿಸುವಾಗ ತೀವ್ರ ಪರದಾಟ ಎದುರಿಸುತ್ತಿದ್ದಾರೆ. ಯಾದಗಿರಿ ಹಿಂದುಳಿದ ಜಿಲ್ಲೆಯಾಗಿದ್ದು, 16 ವರ್ಷಗಳಾದರೂ ಇಲ್ಲಿನ ಜನರಿಗೆ ಕೆಲಸ ಮತ್ತು ಒಂದು ಹೊತ್ತಿನ ಊಟಕ್ಕಾಗಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಉತ್ತಮ ಕಾರ್ಖಾನೆಗಳು ಮತ್ತು ಉದ್ಯಮಿಗಳ ಕೊರತೆಯಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ದೂಷಿಸಲಾಗಿದೆ. ಬೆಂಗಳೂರಿನಿಂದ ಯಾದಗಿರಿಯ ಬಸ್ ನಿಲ್ದಾಣಕ್ಕೆ ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಕಷ್ಟಪಟ್ಟು ಆಗಮಿಸುತ್ತಿರುವ ಜನರ ದೃಶ್ಯ ಕಣ್ಣಲ್ಲಿ ನೀರು ತರಿಸುವಂತಿದೆ. ಬಸ್ಸುಗಳಲ್ಲಿ ಮತ್ತು ರೈಲುಗಳಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನಸಂದಣಿ ಕಂಡುಬರುತ್ತಿದೆ. ಸ್ಥಳೀಯ ಶಾಸಕರು ಮತ್ತು ಸಚಿವರು ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅಭಿವೃದ್ಧಿ ಶೂನ್ಯತೆಯನ್ನು ನಿವಾರಿಸಬೇಕು ಎಂದು ಆಗ್ರಹಿಸಲಾಗಿದ್ದು, ಯಾದಗಿರಿಯಲ್ಲಿ ರೈಲ್ವೆ ಸೌಲಭ್ಯಗಳನ್ನು ಹೆಚ್ಚಿಸಬೇಕು ಮತ್ತು ಹಳ್ಳಿಗಳಿಗೆ ಬಸ್ ಸೌಲಭ್ಯಗಳನ್ನು ವೃದ್ಧಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಶಾಲೆಯ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪುವ ವ್ಯವಸ್ಥೆ ಮಾಡಬೇಕೆಂದೂ ಶಾಸಕರಲ್ಲಿ ಆಗ್ರಹಿಸಲಾಗಿದೆ.1
- ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬೆಳೆಗಳು ಒಣಗಿ ಹೋಗುತ್ತಿದ್ದು, ಅನ್ನದಾತರು ತೀವ್ರ ಬರಗಾಲದ ಭೀತಿ ಎದುರಿಸುವಂತಾಗಿದೆ. ಯಾದಗಿರಿ ತಾಲೂಕಿನ ಮುದ್ನಾಳ ದೊಡ್ಡ ತಾಂಡಾದ ರೈತ ಉಮ್ಲಾ ನಾಯಕ ಅವರ ಜಮೀನಿಗೆ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ರೈತ ಉಮ್ಲಾ ನಾಯಕ ಅವರು ತಮ್ಮ ಜಮೀನಿನಲ್ಲಿ ಹೆಸರು, ತೊಗರಿ ಮತ್ತು ಹತ್ತಿ ಬೆಳೆಗಳನ್ನು ಬೆಳೆದಿದ್ದು, ಮಳೆ ಕೊರತೆಯಿಂದ ತೇವಾಂಶದ ಕೊರತೆಯಾಗಿ ಬೆಳೆಗಳು ಒಣಗುತ್ತಿವೆ. ಕೊಳವೆ ಬಾವಿಗಳ ಮೂಲಕ ನೀರು ಹರಿಸಲು ಪ್ರಯತ್ನಿಸಿದರೂ, ಜೆಸ್ಕಾಂ ಅಧಿಕಾರಿಗಳು ರೈತರ ಐಪಿ ಸೆಟ್ಗಳಿಗೆ ಸರಿಯಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ರೈತರು ಸ್ಪಿಂಕ್ಲರ್ಗಳನ್ನು ಅಳವಡಿಸಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದರೂ, ವಿದ್ಯುತ್ ಕೊರತೆಯಿಂದಾಗಿ ಅವುಗಳಿಗೂ ನೀರು ಹರಿಸಲು ಆಗುತ್ತಿಲ್ಲ. ಮಳೆ ಕೊರತೆಯಿಂದಾಗಿ ಈಗಾಗಲೇ ಒಣಗುತ್ತಿರುವ ಬೆಳೆಗಳನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಬೇಕು ಎಂಬ ಇರಾದೆಯಿಂದ ರೈತರು ಹನಿ ನೀರಾವರಿಯ ಮೊರೆ ಹೋಗುತ್ತಿದ್ದಾರೆ. ಆದರೆ, ಐಪಿ ಸೆಟ್ಗಳಿಗೆ 7 ಗಂಟೆ ವಿದ್ಯುತ್ ಕೂಡ ಸಮರ್ಪಕವಾಗಿ ಪೂರೈಕೆಯಾಗದಿರುವುದು ನೀರು ಹರಿಸಲು ಕಷ್ಟವಾಗುತ್ತಿದೆ ಎಂದು ದೂರಿದ್ದಾರೆ. ರಾಜ್ಯದಲ್ಲಿ ಬರಗಾಲ ಭೀತಿ ಎದುರಾಗಿರುವುದರಿಂದ, ಹತ್ತಿ, ತೊಗರಿ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಐಪಿ ಸೆಟ್ಗಳಿಗೆ ದಿನದ 12 ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ಮಾತ್ರ ರೈತರು ನೀರು ಹರಿಸಿಕೊಂಡು ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಆಗ್ರಹಿಸಿದ್ದಾರೆ. ಸರ್ಕಾರ ಕೂಡಲೇ 12 ಗಂಟೆಗಳ ಕಾಲ ಐಪಿ ಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡಿ ಅನ್ನದಾತರ ಹಿತವನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.1
- ದ್ವಿಚಕ್ರ ವಾಹನಗಳ ನಿರ್ವಹಣೆ ಮತ್ತು ಸರ್ವಿಸ್ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನವನ್ನು ಪರಿಚಯಿಸುವ ಗುರಿಯೊಂದಿಗೆ ಯಾದಗಿರಿಯಲ್ಲಿ ‘ಸ್ಮಾರ್ಟ್ ಗ್ಯಾರೇಜ್’ ಮಲ್ಟಿ-ಬ್ರ್ಯಾಂಡ್ ಟು-ವೀಲರ್ ಸರ್ವಿಸ್ ಸೆಂಟರ್ಗೆ ಚಾಲನೆ ನೀಡಲಾಗಿದೆ. ಎಂ.ಎಸ್. ರಾಥೋಡ್ ಆಟೋಮೊಬೈಲ್ಸ್ ವತಿಯಿಂದ ಸ್ಥಾಪಿತವಾದ ಈ ಗ್ಯಾರೇಜ್ ಅನ್ನು Franchise Development Assistant Manager ಸತ್ಯಂ ಮಿಶ್ರಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸತ್ಯಂ ಮಿಶ್ರಾ ಅವರು, ಗ್ರಾಹಕರಿಗೆ ದೇಶಾದ್ಯಂತ ಗುಣಮಟ್ಟದ ಮತ್ತು ಪಾರದರ್ಶಕ ವಾಹನ ಸೇವೆ ಒದಗಿಸುವ ಉದ್ದೇಶದಿಂದ ಸ್ಮಾರ್ಟ್ ಗ್ಯಾರೇಜ್ ಪರಿಕಲ್ಪನೆ ರೂಪಿಸಲಾಗಿದೆ ಎಂದು ತಿಳಿಸಿದರು. ಡಿಜಿಟಲ್ ತಂತ್ರಜ್ಞಾನದ ಮೂಲಕ ಗ್ರಾಹಕರು ತಮ್ಮ ವಾಹನದ ಸರ್ವಿಸ್ ಪ್ರಕ್ರಿಯೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸುವ ವ್ಯವಸ್ಥೆ ಈ ಸಂಸ್ಥೆಯ ವಿಶೇಷತೆಯಾಗಿದೆ. ಯಾದಗಿರಿ ಜಿಲ್ಲೆಯ ವಾಹನ ಸವಾರರು ಈ ಸೇವೆಯ ಪ್ರಯೋಜನ ಪಡೆಯಬೇಕು ಎಂದು ಅವರು ಕರೆ ನೀಡಿದರು. ಗ್ಯಾರೇಜ್ನಲ್ಲಿ ಬೈಕ್ ಸರ್ವಿಸ್ ₹99ರಿಂದ ಆರಂಭವಾಗಲಿದ್ದು, ವಾರ್ಷಿಕ ನಿರ್ವಹಣಾ ಒಪ್ಪಂದ (AMC) ಮೂಲಕ ಶೇ.30ಕ್ಕೂ ಹೆಚ್ಚು ವೆಚ್ಚ ಉಳಿತಾಯದ ಅವಕಾಶವಿದೆ. ಉದ್ಘಾಟನೆಯ ಪ್ರಯುಕ್ತ ಉಚಿತ ಸರ್ವಿಸ್, ಸ್ಪೇರ್ ಪಾರ್ಟ್ಸ್ಗಳ ಮೇಲೆ ಶೇ.10, ಆಕ್ಸೆಸರೀಸ್ಗಳ ಮೇಲೆ ಶೇ.20 ಹಾಗೂ AMC ಮೇಲೆ ಶೇ.10 ರಿಯಾಯಿತಿ ಕೂಪನ್ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಇಲ್ಲಿ ಪಿಕ್ & ಡ್ರಾಪ್, ಹೋಮ್ ಸರ್ವಿಸ್, ಎಕ್ಸ್ಪ್ರೆಸ್ ಸರ್ವಿಸ್, ಆನ್ಲೈನ್ ಬುಕ್ಕಿಂಗ್, 24×7 ರೋಡ್ಸೈಡ್ ಅಸಿಸ್ಟೆನ್ಸ್, ಡೀಸೆಲ್ ಮತ್ತು ಫೋಮ್ ವಾಶ್, ಬೈಕ್ ಖರೀದಿ–ಮಾರಾಟ, ರಿಫರ್ಬಿಶ್ಡ್ ಬೈಕ್, ವಿಮೆ ಹಾಗೂ ಎಕ್ಸ್ಟೆಂಡೆಡ್ ವಾರಂಟಿ ಸೇರಿದಂತೆ ಹಲವು ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಿರಲಿವೆ. ಎಂಜಿನ್ ಆಯಿಲ್, ಚೈನ್ ಸೆಟ್, ಫಿಲ್ಟರ್, ಬ್ರೇಕ್ ಶೂ ಸೇರಿದಂತೆ ವಿವಿಧ ಸ್ಪೇರ್ ಪಾರ್ಟ್ಸ್ಗಳಿಗೆ ಶೇ.100ರಷ್ಟು ಗುಣಮಟ್ಟದ ಭರವಸೆ ನೀಡಲಾಗುತ್ತಿದೆ. ಯಾದಗಿರಿಯ ಬಸವೇಶ್ವರ ನಗರ, ಎಫ್ಸಿಐ ಗೋದಾಮು ರಸ್ತೆ, ಅಮ್ಮಾ ನಿಲಯದಲ್ಲಿ ಕಾರ್ಯಾರಂಭ ಮಾಡಿರುವ ಈ ಗ್ಯಾರೇಜ್ ಅತ್ಯಾಧುನಿಕ ಉಪಕರಣಗಳು, ಪರಿಣಿತ ತಾಂತ್ರಿಕ ಸಿಬ್ಬಂದಿ ಹಾಗೂ ಪರಿಸರ ಸ್ನೇಹಿ ಮೂಲಸೌಕರ್ಯದೊಂದಿಗೆ ಸೇವೆ ಒದಗಿಸಲಿದೆ. Franchise Development Assistant Manager ಸತ್ಯಂ ಮಿಶ್ರಾ ಅವರು, ಗ್ರಾಹಕರಿಗೆ ಪಾರದರ್ಶಕ, ಗುಣಮಟ್ಟದ ಮತ್ತು ತಂತ್ರಜ್ಞಾನ ಆಧಾರಿತ ಬೈಕ್ ಸರ್ವಿಸ್ ಒದಗಿಸುವುದು ತಮ್ಮ ಪ್ರಮುಖ ಗುರಿ ಎಂದು ಹೇಳಿದ್ದಾರೆ. ಯಾದಗಿರಿ ಫ್ರಾಂಚೈಸಿ ಮಾಲೀಕ ಮೋಹನ್ ರಾಥೋಡ್ ಅವರು, ಯಾದಗಿರಿ ಜಿಲ್ಲೆಯ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆ ನೀಡುವ ಸಂಕಲ್ಪದೊಂದಿಗೆ ಈ ಗ್ಯಾರೇಜ್ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663136755, 8971115167 ಹಾಗೂ 8861893557 ಸಂಖ್ಯೆಗಳನ್ನು ಸಂಪರ್ಕಿಸಬಹುದು.1
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಜೂನ್ 21ರಂದು ಬೆಂಗಳೂರಿನ ಶ್ರೀ ಮಾರುತಿ ಪ್ರಸನ್ನ ಅಂಧರ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಅಂಧರ ಸೇವಾ ಕಲಾತಂಡ ವತಿಯಿಂದ ಸುಗಮ ಸಂಗೀತ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದ ಮೂಲಕ ಅಂಧ ಕಲಾವಿದರು ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಲಾತಂಡದ ಎಲ್ಲಾ ಕಲಾವಿದರು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹಾಲಹಳ್ಳಿ ಗ್ರಾಮದವರಾಗಿದ್ದಾರೆ. ಬೆಂಗಳೂರಿನ ಶ್ರೀ ಮಾರುತಿ ಪ್ರಸನ್ನ ಅಂಧರ ಸೇವಾ ಚಾರಿಟಬಲ್ ಟ್ರಸ್ಟ್, ಶ್ರೀ ಗುರು ಪುಟ್ಟರಾಜ ಗವಾಯಿಗಳು ಹಾಗೂ ಶ್ರೀ ಗುರು ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ದೃಷ್ಟಿಹೀನರ ಬದುಕಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಸುಮಾರು 15 ರಿಂದ 20 ಮಂದಿ ಅಂಧ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದು, ಅವರಿಗೆ ಉಚಿತ ಊಟ, ವಸತಿ, ಸಂಗೀತ ಶಿಕ್ಷಣ, ಕಂಪ್ಯೂಟರ್ ತರಬೇತಿ ಹಾಗೂ ಶಾಲಾ ಶಿಕ್ಷಣವನ್ನು ನೀಡಲಾಗುತ್ತಿದೆ. ದಾನಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಈ ಸಂಸ್ಥೆ, ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿದೆ. ಪ್ರತಿಭೆಗೆ ಕಣ್ಣಿನ ದೃಷ್ಟಿ ಅಡ್ಡಿಯಲ್ಲ ಎಂಬುದನ್ನು ಈ ಕಲಾವಿದರು ತಮ್ಮ ಪ್ರದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಸುಗಮ ಸಂಗೀತ, ಆರ್ಕೆಸ್ಟ್ರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ, ಮದುವೆ, ಗಣೇಶೋತ್ಸವ, ಶಾಲಾ-ಕಾಲೇಜು ವಾರ್ಷಿಕೋತ್ಸವ, ಗೃಹಪ್ರವೇಶ, ನಾಮಕರಣ ಹಾಗೂ ಜಾತ್ರಾ ಮಹೋತ್ಸವಗಳಂತಹ ವಿವಿಧ ಕಾರ್ಯಕ್ರಮಗಳಲ್ಲಿ ಜನಮನ ಗೆದ್ದಿದ್ದಾರೆ. ಜಾಲಹಳ್ಳಿ ಗ್ರಾಮಸ್ಥರು, ವ್ಯಾಪಾರಸ್ಥರು ಹಾಗೂ ಸಂಗೀತಾಭಿಮಾನಿಗಳು ಕಾಣಿಕೆ ಡಬ್ಬಿಗೆ ದೇಣಿಗೆ ನೀಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು. ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಕಲಾತಂಡದ ಪ್ರದರ್ಶನವನ್ನು ಮೆಚ್ಚಿದರು. ಈ ಕಲಾತಂಡದ ನೇತೃತ್ವವನ್ನು ಅಂಧ ಕಲಾವಿದ ಮಾರುತಿ ವಿ.ಸಿ. ವಹಿಸಿದ್ದರು, ಮತ್ತು ತಂಡದಲ್ಲಿ ಶಂಕರ್ ಕೆ.ಟಿ., ಆಯೇಷಾ, ಪ್ರದೀಪ್ ಹೊಸದುರ್ಗ, ಮಹೇಶ್ ಜೆ., ಮಂಜುಳಾ ಎಸ್. ಸೇರಿದಂತೆ ಹಲವಾರು ಅಂಧ ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಖುರೇಷಿ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಕಲಾವಿದರು ಸಾಬೀತುಪಡಿಸಿದ್ದಾರೆ ಎಂದು ಶ್ಲಾಘಿಸಿದರು. ಮುಖಂಡ ಹೈದರಾಲಿ ಕೊಪ್ಪರ್ ಮುಲ್ಲಾ ಅವರು, ಸಂಗೀತ ಕಲೆಯ ಮೂಲಕ ಯಾರ ಮುಂದೆಯೂ ಕೈಚಾಚದೆ ಸ್ವಂತ ಬದುಕು ಕಟ್ಟಿಕೊಂಡಿರುವ ಈ ಕಲಾವಿದರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು, ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ಬದುಕುತ್ತಿರುವ ಇವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಂಧ ಕಲಾವಿದ ಮಾರುತಿ ವಿ.ಸಿ. ಅವರು ಸಾರ್ವಜನಿಕರು ತಮ್ಮ ಮನೆ ಮತ್ತು ಸಂಸ್ಥೆಗಳ ಶುಭ ಸಮಾರಂಭಗಳಿಗೆ ಅಂಧ ಕಲಾವಿದರನ್ನು ಆಹ್ವಾನಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು, 'ಅಂಧರ ಬಾಳಿಗೆ ನೀವು ಆಶಾಕಿರಣವಾಗಿರಿ' ಎಂಬ ಸಂದೇಶದೊಂದಿಗೆ ತಮ್ಮ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಖುರೇಷಿ, ಮುಖಂಡ ಹೈದರಲಿ ಮುಲ್ಲಾ, ಬಾಬಾ ಮೆಡಿಕಲ್, ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.3
- ಗೊಡ್ರಿಹಳ್ ಗ್ರಾಮದ ಲಾಲ್ ಸಾಹೇಬ್ ಪೀರ್ (ಹಜರತ್ ಲಾಲ್ ಶಾಹ್ ಬಾಬಾ) ಅವರು ಭಾರತದಾದ್ಯಂತ ಅಪಾರ ಭಕ್ತರನ್ನು ಹೊಂದಿರುವ ಪವಿತ್ರ ಸೂಫಿ ಸಂತರಾಗಿದ್ದಾರೆ. ಇವರ ದರ್ಗಾಗಳು ಮುಂಬೈನ ಲಾಲ್ಬಾಗ್, ಗುಜರಾತ್ನ ಧೋರಾಜಿ ಮತ್ತು ರಾಜಸ್ಥಾನದ ಸಾಂಬಾರ್ ಸೇರಿದಂತೆ ಕರ್ನಾಟಕದ ಎಲ್ಲಾ ಭಾಗದ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳಲ್ಲಿವೆ. ಈ ದರ್ಗಾಗಳು ಧಾರ್ಮಿಕ ಸೌಹಾರ್ದತೆಗೆ ಪ್ರಸಿದ್ಧವಾಗಿವೆ. ಇದೀಗ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗೊಡ್ರಿಹಳ್ ಗ್ರಾಮದಲ್ಲಿ ಲಾಲ್ ಸಾಹೇಬ್ ಗಂಧ...1
- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇಡಂ ತಾಲೂಕು ಘಟಕದ ವತಿಯಿಂದ ವಿದ್ಯುತ್ ಖಾಸಗೀಕರಣದ ವಿರುದ್ಧ ಹಾಗೂ ಬೆಳೆ ವಿಮೆ ಪರಿಹಾರ ಜಮೆ ಆಗದ ಕುರಿತು ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಲಾಗಿದೆ. ರೈತ ಬಾಂಧವರ ಪ್ರಮುಖ ಬೇಡಿಕೆಗಳಾದ ವಿದ್ಯುತ್ನ ಖಾಸಗೀಕರಣವನ್ನು ವಿರೋಧಿಸುವುದು ಮತ್ತು ರೈತರಿಗೆ ದೊರೆಯಬೇಕಾದ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಜಮೆ ಮಾಡುವುದು ಈ ಮನವಿಯ ಹಿಂದಿನ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಆಮಶೆಟ್ಟಿ ಪಾಟೀಲ್ ಹೆಡ್ಡಳ್ಳಿ, ರವಿ ಪಾಟೀಲ್ ಸೂರವಾರ, ಶಾಂತಕುಮಾರ ಚನ್ನಕ್ಕಿ, ದೊಡ್ಡಪ್ಪಗೌಡ ಯಡಗಾ, ಭೀಮರಾವ್ ಮಾಲಿ ಪಾಟೀಲ್ ಮಳಖೇಡ, ಮಲ್ಲಿಕಾರ್ಜುನ ಪೂಜಾರಿ, ಮಹೇಶ್ ರೇಮಗೊಂಡ, ಮಹೇಶ್ ಗುತ್ತೇದಾರ್, ಶರಣು ಕಾಳಗಿ, ಶ್ರೀ ಚಂದ್ರಕಾಂತ ಕಲ್ಕಮ್, ಶರಣು ಕಾಳಗಿ ಸೇರಿದಂತೆ ಹಲವು ರೈತ ಬಾಂಧವರು ಪಾಲ್ಗೊಂಡಿದ್ದರು. ರೈತ ಸಂಘವು ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದೆ.1
- ರಾಯಚೂರಿನ ಸ್ಟೇಷನ್/ಐಬಿ ರಸ್ತೆಯಲ್ಲಿರುವ ಅತ್ಯುತ್ತಮ ಸ್ತ್ರೀರೋಗತಜ್ಞರೊಬ್ಬರು ಗರ್ಭಕಂಠದ ಕ್ಯಾನ್ಸರ್ ಪತ್ತೆಗೆ ತಪಾಸಣೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಈ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಹತ್ವದ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ.1
- ದಿನಾಂಕ್ 22.06.26 ಸೋಮುವಾರ ದಂದು, ರಾಜನಕೊಳ್ಳೂರಿನಲ್ಲಿ ರಕ್ಷಣಾ ವೇದಿಕೆ ಮತ್ತು ಶಾಲಾ ಮಕ್ಕಳು ಹುಣಸಗಿ-ನಾರಾಯಣಪುರ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಗೆದ್ದಲಮಾರಿ, ಕಡದ್ರಾಳ, ರಾಜವಾಳ್, ಮತ್ತು ಬೊಮಗುಡ್ಡ ಗ್ರಾಮಗಳ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲು ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಈ ರಸ್ತೆ ತಡೆ ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಇಲಾಖೆಯ ಸಹಾಯಕ ಸಂಚಾರಿ ನಿರೀಕ್ಷಕರು ಬಸ್ ಸೇವೆ ಒದಗಿಸುವುದಾಗಿ ಒಪ್ಪಿಗೆ ಪತ್ರ ನೀಡಿದರು. ಈ ಭರವಸೆಯ ನಂತರ, ರಸ್ತೆ ತಡೆಯನ್ನು ತೆರವುಗೊಳಿಸಲಾಯಿತು. ಹುಣಸಗಿ ತಾಲೂಕಾ ವರದಿಗಾರ ಮಲ್ಲಿಕಾರ್ಜುನ್ ಹುಣಸಗಿ ಈ ಕುರಿತು ವರದಿ ಮಾಡಿದ್ದಾರೆ.3