logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಿ.ನಾಗೇಂದ್ರ ಗೆ ಬಲಿ ಪಶು ಮಾಡಿದ್ದಾರೆ ಎಂಬ ನೋವು ಮತ್ತು ಅನುಕಂಪ ನನಗಿದೆ: ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಗಂಗಾವತಿ ಶಾಸಕ Gali Janardhana Reddy ಅವರು, 187 ಕೋಟಿ ರೂ. ಹಗರಣದಲ್ಲಿ ಶಾಸಕ B. Nagendra ಅವರನ್ನು ಕೇವಲ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. "ನಾಗೇಂದ್ರ ಕೋರ್ಟ್‌ನಲ್ಲಿ ಅಪ್ರೂವರ್ ಆಗಿ ಎಲ್ಲರ ಹೆಸರು ಬಹಿರಂಗಪಡಿಸುವ ಭಯದಿಂದಲೇ ಕಾಂಗ್ರೆಸ್ ನಾಯಕರು ಅವರನ್ನು ಒಲೈಸುತ್ತಿದ್ದಾರೆ" ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. #JanardhanaReddy #BNagendra #Bellary #Ballari #KarnatakaPolitics #Congress #BreakingNews #PoliticalNews #KarnatakaNews #ASNNews24Kannada #Gangavati #187CroreScam #MinisterPost #KannadaNews #trendingnews

18 hrs ago
user_AsnNews24Kannada
AsnNews24Kannada
Local News Reporter Ballari, Karnataka•
18 hrs ago

ಬಿ.ನಾಗೇಂದ್ರ ಗೆ ಬಲಿ ಪಶು ಮಾಡಿದ್ದಾರೆ ಎಂಬ ನೋವು ಮತ್ತು ಅನುಕಂಪ ನನಗಿದೆ: ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಗಂಗಾವತಿ ಶಾಸಕ Gali Janardhana Reddy ಅವರು, 187 ಕೋಟಿ ರೂ. ಹಗರಣದಲ್ಲಿ ಶಾಸಕ B. Nagendra ಅವರನ್ನು ಕೇವಲ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. "ನಾಗೇಂದ್ರ ಕೋರ್ಟ್‌ನಲ್ಲಿ ಅಪ್ರೂವರ್ ಆಗಿ ಎಲ್ಲರ ಹೆಸರು ಬಹಿರಂಗಪಡಿಸುವ ಭಯದಿಂದಲೇ ಕಾಂಗ್ರೆಸ್ ನಾಯಕರು ಅವರನ್ನು ಒಲೈಸುತ್ತಿದ್ದಾರೆ" ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. #JanardhanaReddy #BNagendra #Bellary #Ballari #KarnatakaPolitics #Congress #BreakingNews #PoliticalNews #KarnatakaNews #ASNNews24Kannada #Gangavati #187CroreScam #MinisterPost #KannadaNews #trendingnews

  • user_Shek shabuddin
    Shek shabuddin
    ಚನ್ನಗಿರಿ, ದಾವಣಗೆರೆ, ಕರ್ನಾಟಕ
    😡
    1 hr ago
More news from Karnataka and nearby areas
  • ಬಿ.ನಾಗೇಂದ್ರ ಗೆ ಬಲಿ ಪಶು ಮಾಡಿದ್ದಾರೆ ಎಂಬ ನೋವು ಮತ್ತು ಅನುಕಂಪ ನನಗಿದೆ: ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಗಂಗಾವತಿ ಶಾಸಕ Gali Janardhana Reddy ಅವರು, 187 ಕೋಟಿ ರೂ. ಹಗರಣದಲ್ಲಿ ಶಾಸಕ B. Nagendra ಅವರನ್ನು ಕೇವಲ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. "ನಾಗೇಂದ್ರ ಕೋರ್ಟ್‌ನಲ್ಲಿ ಅಪ್ರೂವರ್ ಆಗಿ ಎಲ್ಲರ ಹೆಸರು ಬಹಿರಂಗಪಡಿಸುವ ಭಯದಿಂದಲೇ ಕಾಂಗ್ರೆಸ್ ನಾಯಕರು ಅವರನ್ನು ಒಲೈಸುತ್ತಿದ್ದಾರೆ" ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. #JanardhanaReddy #BNagendra #Bellary #Ballari #KarnatakaPolitics #Congress #BreakingNews #PoliticalNews #KarnatakaNews #ASNNews24Kannada #Gangavati #187CroreScam #MinisterPost #KannadaNews #trendingnews
    1
    ಬಿ.ನಾಗೇಂದ್ರ ಗೆ ಬಲಿ ಪಶು ಮಾಡಿದ್ದಾರೆ ಎಂಬ ನೋವು ಮತ್ತು ಅನುಕಂಪ ನನಗಿದೆ: ಜನಾರ್ಧನ ರೆಡ್ಡಿ
ಬಳ್ಳಾರಿಯಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಗಂಗಾವತಿ ಶಾಸಕ Gali Janardhana Reddy ಅವರು, 187 ಕೋಟಿ ರೂ. ಹಗರಣದಲ್ಲಿ ಶಾಸಕ B. Nagendra ಅವರನ್ನು ಕೇವಲ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
"ನಾಗೇಂದ್ರ ಕೋರ್ಟ್‌ನಲ್ಲಿ ಅಪ್ರೂವರ್ ಆಗಿ ಎಲ್ಲರ ಹೆಸರು ಬಹಿರಂಗಪಡಿಸುವ ಭಯದಿಂದಲೇ ಕಾಂಗ್ರೆಸ್ ನಾಯಕರು ಅವರನ್ನು ಒಲೈಸುತ್ತಿದ್ದಾರೆ" ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
#JanardhanaReddy #BNagendra #Bellary #Ballari #KarnatakaPolitics #Congress #BreakingNews #PoliticalNews #KarnatakaNews #ASNNews24Kannada #Gangavati #187CroreScam #MinisterPost #KannadaNews #trendingnews
    user_AsnNews24Kannada
    AsnNews24Kannada
    Local News Reporter Ballari, Karnataka•
    18 hrs ago
  • Direct Factory से Business करो | Saree Business 2026 #highlights #jantakiawaaj #businessidea2026 #business #tranding #viralvideoシ Direct Factory से Business करो | Saree Business 2026 #highlights #jantakiawaaj #businessidea2026 #business #tranding #viralvideoシ
    1
    Direct Factory से Business करो | Saree Business 2026 #highlights #jantakiawaaj #businessidea2026 #business #tranding #viralvideoシ 
Direct Factory से Business करो | Saree Business 2026 #highlights #jantakiawaaj #businessidea2026 #business #tranding #viralvideoシ
    user_Reporter Ravinder
    Reporter Ravinder
    Business management consultant Kampli, Ballari•
    21 hrs ago
  • ಬಂಗಾರಕ್ಕನಹಳ್ಳಿ ಗಡಿ ದಾಟುವ 'ಹೋಳಿಗೆ ಅಮ್ಮ', ಆಷಾಢದಲ್ಲಿ ಆಚರಿಸಲಾಗುತ್ತೆ ಈ ವಿಶಿಷ್ಟ ಹಬ್ಬ..! ಚಿತ್ರದುರ್ಗ: ಆಷಾಢ ಮಾಸ ಬಂದರೆ ಮಧ್ಯ ಕರ್ನಾಟಕದ ಗ್ರಾಮೀಣ ಭಾಗದಲ್ಲಿ 'ಹೋಳಿಗೆ ಅಮ್ಮ' ಹಬ್ಬ ಆಚರಿಸುವ ಸಂಭ್ರಮ ಮನೆಮಾಡುತ್ತದೆ. ಜೇಷ್ಠ ಹಾಗೂ ಆಷಾಢ ಮಾಸ ರೈತಾಪಿ ಜನರಿಗೆ ಬಿತ್ತುವ ಕಾಲ. ಈ ಮಾಸದ ಮಂಗಳವಾರ ಅಥವಾ ಶುಕ್ರವಾರ ಅನುಕೂಲವಾದ ಯಾವುದಾದರೂ ಒಂದು ದಿನ ಮೀಸಲಿಟ್ಟು ಭಯ ಭಕ್ತಿಯಿಂದ 'ಹೋಳಿಗೆ ಅಮ್ಮ'ನ ಹಬ್ಬ ಆಚರಿಸುವುದು ವಾಡಿಕೆ. ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಹಾಗೂ ಇತರ ಗ್ರಾಮಗಳ ಜನ ತಮ್ಮದೇ ಆದ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಈ ಹಬ್ಬ ಆಚರಿಸುತ್ತಾರೆ. ಆಯಾ ಊರ ಮುಂದಿನ ಗಡಿ (ಎಲ್ಲೆ) ಇರುವ ಒಂದು ಬೇವಿನ ಮರದ ಕೆಳಗೆ ಹೋಳಿಗೆ ಎಡೆಯನ್ನು ಇಟ್ಟು ಅಮ್ಮನನ್ನು ಕಳಿಸಿ, ಕೈ ಮುಗಿದು ಹಿಂದಿರುಗಿ ನೋಡದಂತೆ ಬರುವುದು ಸಂಪ್ರದಾಯ. ಹಬ್ಬದ ಆಚರಣೆ ಗೊತ್ತಾದ ದಿನ ಬೆಳಗ್ಗಿನಿಂದಲೇ ಮನೆಯ ಮಹಿಳೆಯರು ಹೋಳಿಗೆ ಮಾಡಿ ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ. ಪುರುಷರು ಸ್ನಾನ ಮಾಡಿ ಪೂಜೆಗೆ ಸಜ್ಜಾಗುತ್ತಾರೆ. ಒಂದು ಪುಟ್ಟ ಮೊರದಲ್ಲಿ ಹೋಳಿಗೆ, ಕೊಬ್ಬರಿ ಬಟ್ಟಲು, ಬೇವಿನ ಸೊಪ್ಪು, ಬಾಳೆಹಣ್ಣು, ಅರಿಷಿಣ, ಕುಂಕುಮ, ಹಸಿರು ಗಾಜಿನ ಬಳೆ ಇರಿಸುತ್ತಾರೆ. ಇದನ್ನೇ 'ಹೋಳಿಗೆ ಅಮ್ಮ' ಎಂಬ ಹೆಸರಲ್ಲಿ ಪೂಜೆ ಮಾಡುತ್ತಾರೆ. ಜನರನ್ನು, ಹಾಗೂ ಜಾನುವಾರುಗಳನ್ನು ಯಾವುದೇ ಕಾಯಿಲೆ ಬರದಂತೆ ಕಾಪಾಡಮ್ಮ ಎಂದು ಬೇಡಿಕೊಂಡು ಎಲ್ಲರೂ ಆ ಮೊರಕ್ಕೆ ನಮಿಸುತ್ತಾರೆ.
    1
    ಬಂಗಾರಕ್ಕನಹಳ್ಳಿ ಗಡಿ ದಾಟುವ 'ಹೋಳಿಗೆ ಅಮ್ಮ', ಆಷಾಢದಲ್ಲಿ ಆಚರಿಸಲಾಗುತ್ತೆ ಈ ವಿಶಿಷ್ಟ ಹಬ್ಬ..!
ಚಿತ್ರದುರ್ಗ: ಆಷಾಢ ಮಾಸ ಬಂದರೆ ಮಧ್ಯ  ಕರ್ನಾಟಕದ ಗ್ರಾಮೀಣ ಭಾಗದಲ್ಲಿ 'ಹೋಳಿಗೆ ಅಮ್ಮ' ಹಬ್ಬ ಆಚರಿಸುವ ಸಂಭ್ರಮ ಮನೆಮಾಡುತ್ತದೆ. ಜೇಷ್ಠ ಹಾಗೂ ಆಷಾಢ ಮಾಸ ರೈತಾಪಿ ಜನರಿಗೆ ಬಿತ್ತುವ ಕಾಲ. ಈ ಮಾಸದ ಮಂಗಳವಾರ ಅಥವಾ ಶುಕ್ರವಾರ ಅನುಕೂಲವಾದ ಯಾವುದಾದರೂ ಒಂದು ದಿನ ಮೀಸಲಿಟ್ಟು ಭಯ ಭಕ್ತಿಯಿಂದ 'ಹೋಳಿಗೆ ಅಮ್ಮ'ನ ಹಬ್ಬ ಆಚರಿಸುವುದು ವಾಡಿಕೆ.
ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಹಾಗೂ ಇತರ ಗ್ರಾಮಗಳ ಜನ ತಮ್ಮದೇ ಆದ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಈ ಹಬ್ಬ ಆಚರಿಸುತ್ತಾರೆ. ಆಯಾ ಊರ ಮುಂದಿನ ಗಡಿ (ಎಲ್ಲೆ) ಇರುವ ಒಂದು ಬೇವಿನ ಮರದ ಕೆಳಗೆ ಹೋಳಿಗೆ ಎಡೆಯನ್ನು ಇಟ್ಟು ಅಮ್ಮನನ್ನು ಕಳಿಸಿ, ಕೈ ಮುಗಿದು ಹಿಂದಿರುಗಿ ನೋಡದಂತೆ ಬರುವುದು ಸಂಪ್ರದಾಯ.
ಹಬ್ಬದ ಆಚರಣೆ ಗೊತ್ತಾದ ದಿನ ಬೆಳಗ್ಗಿನಿಂದಲೇ ಮನೆಯ ಮಹಿಳೆಯರು ಹೋಳಿಗೆ ಮಾಡಿ ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ. ಪುರುಷರು ಸ್ನಾನ ಮಾಡಿ ಪೂಜೆಗೆ ಸಜ್ಜಾಗುತ್ತಾರೆ. ಒಂದು ಪುಟ್ಟ ಮೊರದಲ್ಲಿ ಹೋಳಿಗೆ, ಕೊಬ್ಬರಿ ಬಟ್ಟಲು, ಬೇವಿನ ಸೊಪ್ಪು, ಬಾಳೆಹಣ್ಣು, ಅರಿಷಿಣ, ಕುಂಕುಮ, ಹಸಿರು ಗಾಜಿನ ಬಳೆ ಇರಿಸುತ್ತಾರೆ. ಇದನ್ನೇ 'ಹೋಳಿಗೆ ಅಮ್ಮ' ಎಂಬ ಹೆಸರಲ್ಲಿ ಪೂಜೆ ಮಾಡುತ್ತಾರೆ. ಜನರನ್ನು, ಹಾಗೂ ಜಾನುವಾರುಗಳನ್ನು ಯಾವುದೇ ಕಾಯಿಲೆ ಬರದಂತೆ ಕಾಪಾಡಮ್ಮ ಎಂದು ಬೇಡಿಕೊಂಡು ಎಲ್ಲರೂ ಆ ಮೊರಕ್ಕೆ ನಮಿಸುತ್ತಾರೆ.
    user_ರಾಜಶೇಖರ್ GT
    ರಾಜಶೇಖರ್ GT
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    1 hr ago
  • ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ
*ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    1 hr ago
  • ಗದಗ ಜಿಲ್ಲೆಯ ಹಿರಿಯ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸಚಿವ ಸ್ಥಾನ ನೀಡಬೇಕು ಮತ್ತು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಗದಗ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಎಚ್.ಕೆ. ಪಾಟೀಲ್ ಅವರ ಕೊಡುಗೆ ಅನನ್ಯವಾದದ್ದು. ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರುವುದು ಕಾರ್ಯಕರ್ತರ ತೀವ್ರ ನಿರಾಶೆಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು
    1
    ಗದಗ ಜಿಲ್ಲೆಯ ಹಿರಿಯ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸಚಿವ ಸ್ಥಾನ ನೀಡಬೇಕು ಮತ್ತು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಗದಗ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಎಚ್.ಕೆ. ಪಾಟೀಲ್ ಅವರ ಕೊಡುಗೆ ಅನನ್ಯವಾದದ್ದು. ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರುವುದು ಕಾರ್ಯಕರ್ತರ ತೀವ್ರ ನಿರಾಶೆಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    1 hr ago
  • ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಮುಂದೆ ಧರಣಿ ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಎದುರು ನಡೆದ ಸಭೆಯನ್ನು ಉದ್ದೇಶಿಸಿ, ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಶ್ರೀ ಟಿ. ದರಪ್ಪ ನಾಯಕ ಅವರು ಮಾತನಾಡಿದರು. ಸಮಾಜದ ಹಕ್ಕು, ನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಸದಾ ಧ್ವನಿಯಾಗಿರುವ ದರಪ್ಪ ನಾಯಕ ಅವರು, ಜನರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು ಮತ್ತು ಅವರ ನ್ಯಾಯಯುತ ಹಕ್ಕುಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬ ಆಶಯವನ್ನು ವ್ಯಕ್ತಪಡಿಸಿದರು. “ಅಧಿಕಾರಕ್ಕಿಂತ ಜನರ ಹಿತ ಮುಖ್ಯ; ಹುದ್ದೆಗಿಂತ ಜನಸೇವೆ ಶ್ರೇಷ್ಠ” ಎಂಬ ಧ್ಯೇಯದೊಂದಿಗೆ ಜನರ ಮಧ್ಯೆ ನಿಂತು ಅವರ ಧ್ವನಿಗೆ ಶಕ್ತಿ ತುಂಬುತ್ತಿರುವ ಟಿ. ದರಪ್ಪ ನಾಯಕ ಅವರ ಮಾತುಗಳು ಸಭೆಯಲ್ಲಿ ನೆರೆದಿದ್ದವರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಿದವು. ಜನರೊಂದಿಗೆ… ಜನರಿಗಾಗಿ… ಜನರ ಹಕ್ಕಿಗಾಗಿ ಸದಾ ಮುಂಚೂಣಿಯಲ್ಲಿ — ಟಿ. ದರಪ್ಪ ನಾಯಕ. ಶ್ರೀ ಟಿ. ದರಪ್ಪ ನಾಯಕ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಬಳ್ಳಾರಿ ಜಿಲ್ಲಾ.
    1
    ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… 
ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಮುಂದೆ ಧರಣಿ
ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… 
ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಎದುರು ನಡೆದ ಸಭೆಯನ್ನು ಉದ್ದೇಶಿಸಿ, ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಶ್ರೀ ಟಿ. ದರಪ್ಪ ನಾಯಕ ಅವರು ಮಾತನಾಡಿದರು.
ಸಮಾಜದ ಹಕ್ಕು, ನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಸದಾ ಧ್ವನಿಯಾಗಿರುವ ದರಪ್ಪ ನಾಯಕ ಅವರು, ಜನರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು ಮತ್ತು ಅವರ ನ್ಯಾಯಯುತ ಹಕ್ಕುಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬ ಆಶಯವನ್ನು ವ್ಯಕ್ತಪಡಿಸಿದರು.
“ಅಧಿಕಾರಕ್ಕಿಂತ ಜನರ ಹಿತ ಮುಖ್ಯ; ಹುದ್ದೆಗಿಂತ ಜನಸೇವೆ ಶ್ರೇಷ್ಠ” ಎಂಬ ಧ್ಯೇಯದೊಂದಿಗೆ ಜನರ ಮಧ್ಯೆ ನಿಂತು ಅವರ ಧ್ವನಿಗೆ ಶಕ್ತಿ ತುಂಬುತ್ತಿರುವ ಟಿ. ದರಪ್ಪ ನಾಯಕ ಅವರ ಮಾತುಗಳು ಸಭೆಯಲ್ಲಿ ನೆರೆದಿದ್ದವರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಿದವು.
ಜನರೊಂದಿಗೆ… ಜನರಿಗಾಗಿ… ಜನರ ಹಕ್ಕಿಗಾಗಿ ಸದಾ ಮುಂಚೂಣಿಯಲ್ಲಿ — ಟಿ. ದರಪ್ಪ ನಾಯಕ.
ಶ್ರೀ ಟಿ. ದರಪ್ಪ ನಾಯಕ
ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರು
ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಬಳ್ಳಾರಿ ಜಿಲ್ಲಾ.
    user_ರಾಜಶೇಖರ್ GT
    ರಾಜಶೇಖರ್ GT
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    10 hrs ago
  • 7ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ. ಅಭಿಮಾನಿಗಳ ಅಗ್ರಹ. 7 ಬಾರಿ ಗೆದ್ದ ಶಾಸಕರಿಗೆ ಸಚಿವ ನೀಡದಿರವುದು ಅನ್ಯಾಯ ಅಭಿಮಾನಿಗಳ ಅಗ್ರಹ. ಮೊಳಕಾಲ್ಮುರು ಸುದ್ದಿ. ಏಳು ಬಾರಿ ಶಾಸಕರಾಗಿ ಜನರ ಅಪಾರಅನ್ಯಾಯ ಬೆಂಬಲದೊಂದಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಎನ್ ವೈ ಗೋಪಾಲ ಕೃಷ್ಣ ಅಭಿಮಾನಿಗಳ ಬಳಗ ಇಂದು ರಸ್ತೆ ತೆಡೆದು ಪ್ರತಿಭಟನೆ ನಡೆಸಿದರು. ಎನ್ ವೈ ಗೋಪಾಲ ಕೃಷ್ಣ ರವರು ಹಲವು ದಶಕಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತಾರೆ. ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸತತವಾಗಿ ಜನರ ವಿಶ್ವಾಸ ಗಳಿಸಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಹೊರಗಿಡುವುದು ನ್ಯಾಯ ಸಮ್ಮತವಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕೆ ಪಿ ಸಿಸಿ ಹಾಗಿ ಎಐಸಿಸಿಗೆ ದಿಕ್ಕಾರ ಕೂಗಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎನ್ನುವ ಮಾತುಗಳು ಕೇಳಿ ಬಂದವು. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಎನ್ ವೈ ಪಿ ಚೇತನ್ ಮಾತನಾಡಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅವರ ಅನುಭವ, ಆಡಳಿತ ಸಾಮರ್ಥ್ಯ ಹಾಗೂ ಜನಸೇವೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡುವುದರಿಂದ ರಾಜ್ಯದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರುಗಳಾದ ವಿಜಯ ಕುಮಾರ ಮಾತನಾಡಿ ನಮ್ಮ ಶಾಸಕರು 7ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ, ಅಂತಹ ಶಾಸಕರನ್ನು ಬಿಟ್ಟು ಒಂದು ಬಾರಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೀರಾ ಎನ್ನುವ ಪ್ರಶ್ನೆ ಹೈ ಕಮಾಂಡ್ ಗೆ ಹಾಕಿದರು, ಮತ್ತು ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಪಧಾಧಿಕಾರಿಗಳ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಒತ್ತಾಯಿಸಿದರು. ಒಟ್ಟಾರೆಯಾಗಿ , ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ದೊರೆಯದಿರುವ ಬಗ್ಗೆ ಅವರ ಬೆಂಬಲಿಗರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಪಕ್ಷದ ನಾಯಕತ್ವ ಈ ಬೇಡಿಕೆಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗಮನಾರ್ಹ ವಿಷಯವಾಗಿದೆ. ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷರು ನಾಗಸಮುದ್ರ ಗೋವಿಂದಪ್ಪ, ಶಾಸಕರು ಸಹಾಯಕ ಆಪ್ತರು ಶ್ರೀಕಾಂತ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ತಮ್ಮೆನಹಳ್ಳಿ ನರಸಿಂಹ ರೆಡ್ಡಿ ಸಿದ್ದ ಬಸಪ್ಪ ಸಂತೆ ಗುಡ್ಡ ಇಸ್ಮಾಯಿಲ್ ತಮ್ಮೆನಹಳ್ಳಿ ಗೋವಿಂದಪ್ಪ, ಕೊಂಡಾಪುರ ಡಿ ಎಸ್ ಎಸ್ ಪರಮೇಶ್ವರಪ್ಪ, ಕರುನಾಡ ಜಿಯಾ ಉಲ್ಲಾ, ಎರ್ಜೆನಹಳ್ಳಿ ನಾಗರಾಜ್, ಮೇಸ್ತ್ರಿ ಗೋಪಾಲ, ರಾಂಪುರ ಭಾರತ್ ಕುಮಾರ್, ದೇವಸಮುದ್ರ ಪರಮೇಶ್ವರಪ್ಪ ಲಾಯೆರ್ ಮೂರ್ತಿ ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    2
    7ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ. ಅಭಿಮಾನಿಗಳ ಅಗ್ರಹ.
7 ಬಾರಿ ಗೆದ್ದ ಶಾಸಕರಿಗೆ ಸಚಿವ ನೀಡದಿರವುದು ಅನ್ಯಾಯ ಅಭಿಮಾನಿಗಳ ಅಗ್ರಹ.
ಮೊಳಕಾಲ್ಮುರು ಸುದ್ದಿ.
ಏಳು ಬಾರಿ ಶಾಸಕರಾಗಿ ಜನರ ಅಪಾರಅನ್ಯಾಯ ಬೆಂಬಲದೊಂದಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ  ಎನ್ ವೈ ಗೋಪಾಲ ಕೃಷ್ಣ ಅಭಿಮಾನಿಗಳ ಬಳಗ ಇಂದು ರಸ್ತೆ ತೆಡೆದು ಪ್ರತಿಭಟನೆ ನಡೆಸಿದರು. 
ಎನ್ ವೈ ಗೋಪಾಲ ಕೃಷ್ಣ ರವರು ಹಲವು ದಶಕಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತಾರೆ. ಅವರು  ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸತತವಾಗಿ ಜನರ ವಿಶ್ವಾಸ ಗಳಿಸಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಹೊರಗಿಡುವುದು ನ್ಯಾಯ ಸಮ್ಮತವಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕೆ ಪಿ ಸಿಸಿ ಹಾಗಿ ಎಐಸಿಸಿಗೆ ದಿಕ್ಕಾರ ಕೂಗಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎನ್ನುವ ಮಾತುಗಳು ಕೇಳಿ ಬಂದವು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಎನ್ ವೈ ಪಿ ಚೇತನ್ ಮಾತನಾಡಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅವರ ಅನುಭವ, ಆಡಳಿತ ಸಾಮರ್ಥ್ಯ ಹಾಗೂ ಜನಸೇವೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡುವುದರಿಂದ ರಾಜ್ಯದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರುಗಳಾದ ವಿಜಯ ಕುಮಾರ ಮಾತನಾಡಿ ನಮ್ಮ ಶಾಸಕರು 7ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ, ಅಂತಹ ಶಾಸಕರನ್ನು ಬಿಟ್ಟು ಒಂದು ಬಾರಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೀರಾ ಎನ್ನುವ ಪ್ರಶ್ನೆ ಹೈ ಕಮಾಂಡ್ ಗೆ ಹಾಕಿದರು, ಮತ್ತು ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಪಧಾಧಿಕಾರಿಗಳ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಒತ್ತಾಯಿಸಿದರು.
ಒಟ್ಟಾರೆಯಾಗಿ , ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ದೊರೆಯದಿರುವ ಬಗ್ಗೆ ಅವರ ಬೆಂಬಲಿಗರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಪಕ್ಷದ ನಾಯಕತ್ವ ಈ ಬೇಡಿಕೆಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗಮನಾರ್ಹ ವಿಷಯವಾಗಿದೆ.
ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷರು ನಾಗಸಮುದ್ರ ಗೋವಿಂದಪ್ಪ, ಶಾಸಕರು ಸಹಾಯಕ ಆಪ್ತರು ಶ್ರೀಕಾಂತ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ತಮ್ಮೆನಹಳ್ಳಿ ನರಸಿಂಹ ರೆಡ್ಡಿ   ಸಿದ್ದ ಬಸಪ್ಪ ಸಂತೆ ಗುಡ್ಡ ಇಸ್ಮಾಯಿಲ್ ತಮ್ಮೆನಹಳ್ಳಿ ಗೋವಿಂದಪ್ಪ, ಕೊಂಡಾಪುರ ಡಿ ಎಸ್ ಎಸ್ ಪರಮೇಶ್ವರಪ್ಪ, ಕರುನಾಡ ಜಿಯಾ ಉಲ್ಲಾ, ಎರ್ಜೆನಹಳ್ಳಿ ನಾಗರಾಜ್, ಮೇಸ್ತ್ರಿ ಗೋಪಾಲ, ರಾಂಪುರ ಭಾರತ್ ಕುಮಾರ್, ದೇವಸಮುದ್ರ ಪರಮೇಶ್ವರಪ್ಪ  ಲಾಯೆರ್ ಮೂರ್ತಿ ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.