Shuru
Apke Nagar Ki App…
ನನ್ನ ಜೀವನದಲ್ಲಿ ಹೆದರೋ ಮಾತೇ ಇಲ್ಲ ಆಂದೋಲಶ್ರೀ, ಕಟಕಟೆ ವಿಶೇಷ ಸರಣಿ ಸಂಚಿಕೆ
Kalyan karanataka news channel
ನನ್ನ ಜೀವನದಲ್ಲಿ ಹೆದರೋ ಮಾತೇ ಇಲ್ಲ ಆಂದೋಲಶ್ರೀ, ಕಟಕಟೆ ವಿಶೇಷ ಸರಣಿ ಸಂಚಿಕೆ
More news from ಕರ್ನಾಟಕ and nearby areas
- Post by Sharanugouda Patil1
- ರಾಯಚೂರಿನ ಎಲ್ಪಿಜಿ ಬಂಕ್ಗೆ ಟ್ಯಾಂಕರ್ ಲೋಡ್ ಬಂದಿದ್ದರಿಂದ ಆಟೋ ಚಾಲಕರಲ್ಲಿ ಸಂತಸ ಮೂಡಿದರೂ, ಬೆಲೆ ಏರಿಕೆ ಬಿಸಿ ತಟ್ಟಿದೆ. ಲೀಟರ್ಗೆ 60 ರೂ ಇದ್ದ ಗ್ಯಾಸ್ ಈಗ 90.59 ರೂಗೆ ಮಾರಾಟವಾಗುತ್ತಿದೆ. ಟ್ಯಾಂಕರ್ನಲ್ಲಿ 6.5 ಟನ್ ಗ್ಯಾಸ್ ಬಂದಿರುವುದರಿಂದ ಒಬ್ಬರಿಗೆ 500 ರೂ ಮಿತಿ ನಿಗದಿ ಮಾಡಲಾಗಿದೆ. ಇದರಿಂದ ಅಂದಾಜು 2 ಸಾವಿರ ಆಟೋರಿಕ್ಷಾಗಳಿಗೆ ಮಾತ್ರ ಗ್ಯಾಸ್ ಸಿಗಲಿದೆ. ಗ್ಯಾಸ್ ಸಿಗದಿದ್ದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.1
- ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಹಾಗೂ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ *ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ* ಅವರು *ಬೆನಕಟ್ಟಿ*,*ಹಳ್ಳೂರ*, *ಭಗವತಿ*, ಗ್ರಾಮದಲ್ಲಿ ಹಾಗೂ *ಬಾಗಲಕೋಟೆ* ಪಟ್ಟಣದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ *ಶ್ರೀ ಉಮೇಶ್ ಮೇಟಿ* ರವರ *ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು*. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.1
- ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ ಗಣತಿಯಲ್ಲಿ ವಿವರ ದಾಖಲಿಸಬಹುದು. ಪೋರ್ಟಲ್ ಮೂಲಕ ವಿವರ ದಾಖಲಿಸಿದ ನಂತರ ಬರುವ ‘ಎಇ ಐಡಿ’ಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ, ಅದನ್ನು ತಿಳಿಸಬೇಕು ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.1
- ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಸ್ಸಿ ಎಸ್ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. “ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.1
- ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ ಜನ ಸೇರ್ತಾರೆ ಎಂದು ಹೇಳಿದರು1
- ಇಳಕಲ್ಲ: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಜಯಂತಿ ಪ್ರಯುಕ್ತ ಡಾ.ಬಾಬು ಜಗಜೀವರಾಂ ವೃತ್ತಕ್ಕೆ ಮಾದಿಗ ಸಮಾಜದ ಬಾಂಧವರು ಪೂಜೆ ಸಲ್ಲಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿಯನ್ನು ನಡೆಸಿದರು1
- ಇಲಕಲ್ಲ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಮ್ ಇವರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಿದರು.1
- ಬಾಗಲಕೋಟೆ ಜಿಲ್ಲೆಯಲ್ಲಿ ಉಪ ಚುನಾವಣೆಯ ಹವಾ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಭರ್ಜರಿ ರಾಜಕೀಯ ಪೈಪೋಟಿ ನಡೆಯುತ್ತಿದೆ. ಪಕ್ಷದ ಹಿರಿಯ ನಾಯಕರು, ಸಚಿವರು ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಮತದಾರರ ಮನ ಗೆಲ್ಲಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್ ಅವರು ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ. ಮತದಾರರ ಅಭಿಪ್ರಾಯ ಏನು? ಜನರು ಯಾರಿಗೆ ಬೆಂಬಲ ಕೊಡುತ್ತಿದ್ದಾರೆ? ಸಂಪೂರ್ಣ ವರದಿ ಈ ವಿಡಿಯೋದಲ್ಲಿ… ಬಾಗಲಕೋಟೆ ಉಪ ಚುನಾವಣೆ ರಾಜಕೀಯ ಕಾವು ತಾರಕಕ್ಕೇರಿದೆ! ಕಾಂಗ್ರೆಸ್ vs ಬಿಜೆಪಿ ನಡುವೆ ಭರ್ಜರಿ ಫೈಟ್ ನಡೆಯುತ್ತಿದ್ದು, ನಾಯಕರು ಹಳ್ಳಿಗಳಿಗೆ ದಾಳಿ ಮಾಡ್ತಿದ್ದಾರೆ… ಇದರ ನಡುವೆ ಎನ್. ಮಹೇಶ್ ಅವರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಕೇಳಿದ್ದಾರೆ! ಆದರೆ ಟ್ವಿಸ್ಟ್ ಏನು ಗೊತ್ತಾ? ಮತದಾರರ ನಿಜವಾದ ಅಭಿಪ್ರಾಯವೇ ಬೇರೆ ಆಗಿದೆ! ಜನರು ಏನು ಹೇಳ್ತಾರೆ ನೋಡಿ ಈ ವಿಡಿಯೋದಲ್ಲಿ… ಬಾಗಲಕೋಟೆ ಉಪ ಚುನಾವಣೆ 50 ಹಳ್ಳಿಗಳಲ್ಲಿ ಪ್ರಚಾರ… ಜನರ ತೀರ್ಪು ಏನು? ನೇರವಾಗಿ ಕೇಳಿದ ಮಾತುಗಳು ಈ ವಿಡಿಯೋದಲ್ಲಿ ಬಾಗಲಕೋಟೆಯಲ್ಲಿ ದೊಡ್ಡ ರಾಜಕೀಯ ಟ್ವಿಸ್ಟ್! 50 ಹಳ್ಳಿಗಳಲ್ಲಿ ಸುತ್ತಿದ ಪ್ರಚಾರದ ನಂತರ… ಮತದಾರರು ಹೇಳಿದ ಸತ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಕಾಂಗ್ರೆಸ್ ಗೆಲ್ತಾ? ಬಿಜೆಪಿ ಗೆಲ್ತಾ? ಪೂರ್ಣ ರಿಪೋರ್ಟ್ ಇಲ್ಲಿ ನೋಡಿ…1