Shuru
Apke Nagar Ki App…
ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs
Onlinetv24x7
ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs
More news from ಕರ್ನಾಟಕ and nearby areas
- ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs1
- "ಬ್ರೇಕಿಂಗ್ ನ್ಯೂಸ್... ಬ್ರೇಕಿಂಗ್ ನ್ಯೂಸ್... ವಿದ್ಯಾಗಿರಿ ಧಾರವಾಡದ ಜನತೆಯಲ್ಲಿ ಇಂದು ಬೆಳಗ್ಗೆಯಿಂದಲೇ ಭೀತಿ ಆವರಿಸಿದೆ!" "ಹೌದು, ಧಾರವಾಡದ ಪ್ರಮುಖ ಪ್ರದೇಶವಾದ ವಿದ್ಯಾಗಿರಿ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೀದಿ ಬೀದಿಗಳಲ್ಲಿ ಎಲ್ಲಿ ನೋಡಿದರೂ ಕಣ್ಣು ಕಾಣಿಸದಷ್ಟು ಹೊಗೆಯ ಅಬ್ಬರ ಜೋರಾಗಿದೆ." "ಈ ದೃಶ್ಯಗಳನ್ನು ಗಮನಿಸಿ... ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿ ಕಾಣದಷ್ಟು ಪರಿಸ್ಥಿತಿ ಹದಗೆಟ್ಟಿದೆ. ವಾಹನ ಸವಾರರು ದಾರಿ ಕಾಣದೆ ತತ್ತರಿಸುತ್ತಿದ್ದಾರೆ. ಕಣ್ಣು ಉರಿ ಮತ್ತು ಉಸಿರಾಟದ ತೊಂದರೆಯಿಂದ ಜನರು ಹೈರಾಣಾಗಿದ್ದಾರೆ." "ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರುವ ವಿದ್ಯಗಿರಿಯಲ್ಲಿ ಈ ರೀತಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಸದ ರಾಶಿಗೆ ಬಿದ್ದ ಬೆಂಕಿಯೋ ಅಥವಾ ಯಾವುದೋ ಅನಾಹುತವೋ? ಇನ್ನೂ ಸ್ಪಷ್ಟವಾಗಿಲ್ಲ." "ಸದ್ಯಕ್ಕೆ ಈ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಹೆಚ್ಚಿನ ಅಪ್ಡೇಟ್ಗಳಿಗಾಗಿ ನೋಡ್ತಾ ಇರಿ ಸಿಟಿ ನೆಕ್ಸ್ಟ್ ನ್ಯೂಸ್ 24/7." ಧಾರವಾಡ ಸುದ್ದಿ, ವಿದ್ಯಾಗಿರಿ ಧಾರವಾಡ, ವಿದ್ಯಾಗಿರಿ ರಸ್ತೆಯಲ್ಲಿ ಹೊಗೆ, ಧಾರವಾಡ ಬೆಂಕಿ ಅನಾಹುತ, ಹುಬ್ಬಳ್ಳಿ ಧಾರವಾಡ ಇಂದಿನ ಸುದ್ದಿ, ಧಾರವಾಡ ವಿದ್ಯಾರ್ಥಿಗಳು, ಧಾರವಾಡ ಪರಿಸರ, ದಟ್ಟ ಹೊಗೆ, ಬ್ರೇಕಿಂಗ್ ನ್ಯೂಸ್ ಧಾರವಾಡ, ಕರ್ನಾಟಕ ಸ್ಥಳೀಯ ಸುದ್ದಿ, ಸಿಟಿ ನೆಕ್ಸ್ಟ್ ನ್ಯೂಸ್, Dharwad local news, Vidyagiri smoke incident, Dharwad students, Vidyagiri road condition, Air quality Dharwad, Smoke pollution Dharwad, Fire in Dharwad today, City Next News Dharwad.#Dharwad #DharwadNews #VidyagiriDharwad #BreakingNewsDharwad #HubliDharwad #DharwadSmoke #AirPollutionDharwad #DharwadKarnataka #CityNextNews24x7 #KarnatakaNews #LocalNewsDharwad #SmokeAlarm #EnvironmentAlert #VidyagiriRoad #StudyPointDharwad1
- ಧಾರವಾಡ ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಬಿಳುತ್ತಿರುವ ಬೆಂಕಿಯಿಂದಾಗಿ ಧಾರವಾಡದ ಜನ ವಿಷಯುಕ್ತ ಗಾಳಿ ಸೇವಿಸಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಧಾರವಾಡ ಹೊಸಯಲ್ಲಾಪುರ, ಗಾಂಧಿನಗರ, ಟೋಲನಾಕಾ ಪ್ರದೇಶದಲ್ಲಿನ ಜನ ಹುಬ್ಬಳ್ಳಿ ಧಾರವಾಡ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೊಸಯಲ್ಲಾಪುರದಲ್ಲಿರುವ ಕಸದ ಗುಡ್ಡಕ್ಕೆ ಸೋಮವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಇದರಿಂದ ಹೊರಹೊಮ್ಮಿದ ವಿಷಯುಕ್ತ ದಟ್ಟ ಹೊಗೆ ಟೋಲನಾಕಾ, ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳನ್ನು ಆವರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಬೆಳಿಗ್ಗೆಯಿಂದಲೂ ದಟ್ಟ ಹೊಗೆಯಲ್ಲಿ ಉಸಿರಾಟ ನಡೆಸುವಂತಾದ ಟೋಲನಾಕಾ ನಿವಾಸಿಗಳು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಟೋಲನಾಕಾ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವಿಷಯುಕ್ತ ಹೊಗೆಯಿಂದ ತೀವ್ರ ತೊಂದರೆಗೊಳಗಾದ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದಾಗಿ ಟೋಲನಾಕಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.1
- ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.1
- Post by ನಾಗರಾಜ3
- ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕು ಕುಠುನ್ಕೇರಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ಜಮೀನಿನ ಬರುತ್ತಿರುವ ರೈತನೊಬ್ಬ ಅಡ್ಡರಾಗಿ ಬಂದು ಬೈಕ್ ಆಕ್ಸಿಡೆಂಟ್ ಆಗಿದೆ ತಳದಲ್ಲಿ ಒಂದು ಸಾವು ಸತ್ತವನು ಬಸವರಾಜ್ ಕಂಬಾರ ಊರು ಕಟಾಪುರ್ ಬಿಡದಗುಡ್ಡ ತಾಲ್ಲೂಕು ಬಸವರಾಜ್ ಬೇರಾಳ ಎಂಬ ವ್ಯಕ್ತಿಗೆ ಗಾಯಗೊಂಡಿದ್ದಾನೆ1
- ಬಾಗಲಕೋಟೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಕೆ ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಅವರು “ನಾ ಡ್ರೈವರ” ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ ಅವರು, ವೇದಿಕೆಯಲ್ಲಿ ಹರ್ಷಭರಿತ ವಾತಾವರಣ ನಿರ್ಮಿಸಿದರು. ಅವರ ನೃತ್ಯವನ್ನು ಕಂಡು ಮಹಿಳೆಯರು ಕೈತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.1
- ಮಹಿಳೆಯರು ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ತಿಳಿಸಿದರು. ಧಾರವಾಡ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಡಾ.ಎಸ್.ಎಸ್ ಅಧೋನಿ, ಶ್ರುತಿ ಯಾವಗಲಮಠ, ಅನಿಸ್ ಫಾತಿಮಾ ತೋರ್ಗಲ್, ಸಯ್ಯದ್ ತಾಜುನಿಸಾ, ಎನ್.ಬಿ ನಲ್ವತಾಡ್ ಸೇರಿದಂತೆ ಇತರರಿದ್ದರು.1