Shuru
Apke Nagar Ki App…
ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!.......... ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏 ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.
Raichur News
ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!.......... ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏 ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.
More news from ಕರ್ನಾಟಕ and nearby areas
- ಈಜಲು ಹೋಗಿ ನೀರಲ್ಲಿ ಮುಳುಗಿ ಕೆ.ಬೋದೂರು ಗ್ರಾಮದ ಬಾಲಕ ಸಾವು ಕುಷ್ಟಗಿ:- ತಾಲೂಕಿನ ವಣಗೇರಿ ಸೀಮಾದಲ್ಲಿ ಸರ್ವೇ ನಂಬರ-25/1ಹಿಸ್ಸಾ 2 ಬಿ ಸೇತುಕುಮಾರ ತಂದೆ ಬಿ ಜಯರಾಮಿ ರಡ್ಡಿ ಬಿನ್ ಜಯರಾಮಿ ರಡ್ಡಿ ಎಂಬುವವರಿಗೆ ಸೇರಿದ 7 ಎಕರೆ 25 ಗುಂಟೆ ಹೊಲದಲ್ಲಿ ಇರುವ ಮರಮ್ ತೆಗೆದ ಬೃಹತ್ ಆಕಾರದ ಗುಂಡಿಯ ನಿಂತ ನೀರಿನಲ್ಲಿ ಈಜಲು ಹೋದಾಗ ಮೇಲಿಂದ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ನೆಡೆದಿದೆ. ಮೃತಪಟ್ಟ ಬಾಲಕ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ನಿವಾಸಿ ಹನಮಂತಪ್ಪ ತಂದೆ ಬಸವರಾಜ ಗೋರೆಬಾಳ ವಯಸ್ಸು (17) ಎಂದು ತಿಳಿಸಲಾಗಿದೆ. ಮೃತ ಬಾಲಕನು ತನ್ನ ಸ್ನೇಹಿತರೊಂದಿಗೆ ತನ್ನ ಗ್ರಾಮಕ್ಕೆ ಬಹಳ ಹತ್ತಿರಕ್ಕೆ ಇರುವುದರಿಂದ ಈಜಲು ತೆರಳಿದ್ದಾರೆ. ಈ ಮರಮ್ ತೆಗೆದ ಹೊಲದಲ್ಲಿ ಜೆಸಿಬಿ ಮತ್ತು ಹಿಟಾಚಿ ಮೂಲಕ ಮಣ್ಣನ್ನು ಗದಗವಾಡಿ ರೈಲ್ವೆ ಕಾಮಗಾರಿಗೆ ಬಳಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮರಮ್ ತೆಗೆದಿದ್ದರಿಂದ ಸುಮಾರು 40 ರಿಂದ 50 ಫೀಟ್ ಆಳಕ್ಕೆ ಅಗಲಾಗಿದೆ. ಬಹಳ ಆಳಕ್ಕೆ ಆಗಿದೆದ್ದರಿಂದ ಅಂತರ್ಜಲ ಹೆಚ್ಚಾಗಿ ನೀರು ಸಾಕಷ್ಟ ಪ್ರಮಾಣದಲ್ಲಿ ಸಂಗ್ರಹವಾಗಿದೆ ಬೇಸಿಗೆ ಕಾಲ ಆಗಿರೋದ್ರಿಂದ ಅತಿಯಾದ ಬಿಸಿಲು ಇರುವ ಕಾರಣ ಬಾಲಕ ಮತ್ತು ಬಾಲಕನ ಸ್ನೇಹಿತರು ಈಜಲು ಹೋಗಿದ್ದಾರೆ. ಈಸಲು ಹೋದ ಸಮಯದಲ್ಲಿ ಹನುಮಂತಪ್ಪನ ಸ್ನೇಹಿತರು ಈಜಿ ದಡ ಸೇರಿದರೆ ಬಾಲಕ ಹನಮಂತಪ್ಪನು ಮಾತ್ರ ಮಣ್ಣಿನೊಳಗೆ ಸಿಲುಕಿ ನೀರಿನಲ್ಲಿ ಹೆಸರುಗಟ್ಟಿ ಮೃತಪಟ್ಟಿದ್ದಾನೆ. ಈ ಘಟನೆ ನಿನ್ನೆ ರವಿವಾರ ಬೆಳಿಗ್ಗೆ 12 ಗಂಟೆಗೆ ನೆಡೆದಿದ್ದು ತಕ್ಷಣಾ ಮೃತಪಟ್ಟ ಬಾಲಕನ ಸ್ನೇಹಿತರು ಕೆ.ಬೋದುರು ಗ್ರಾಮದಲ್ಲಿ ತಿಳಿಸಿದ್ದಾರೆ. ತಕ್ಷಣಾ ಕುಷ್ಟಗಿ ಪೋಲಿಸ್ ಠಾಣೆಯ ಪಿ.ಎಸ್.ಐ ಹನಮಂತಪ್ಪ ತಳವಾರ್ ಹಾಗೂ ಅಗ್ನಿಶಾಮಕ ದಳದವರು ಸೇರಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ರವಿವಾರ ಬೆಳಿಗ್ಗೆಯಿಂದ ತಡ ರಾತ್ರಿ ಆಗೋವರೆಗೂ ಶೋಧ ನಡೆಸಿದರು ಸಹ ಮೃತಪಟ್ಟ ಬಾಲಕನ ಶವ ಪತ್ತೆ ಆಗಲಿಲ್ಲ. ನಂತರ ಸೋಮವಾರ ಬೆಳಗ್ಗೆ ಮೃತಪಟ್ಟ ಬಾಲಕ ಶಾವ ಪತ್ತೆಯಾಗಿದೆ ಎಂದು ಪೊಲೀಸರ ಖಚಿತ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಹನಮಂತಪ್ಪ ತಳವಾರ, ಎ.ಎಸ್.ಐ ತಾಯಪ್ಪ ಮತ್ತು ಅಗ್ನಿ ಶಾಮಕದಳ ಸಿಬ್ಬಂದಿಗಳು ಕಾರ್ಯಶೋದವನ್ನು ನಡೆಸಿ ಮೃತಪಟ್ಟ ಬಾಲಕನ ಶವವನ್ನು ಪತ್ತೆ ಹಚ್ಚಿ ಹೊರ ತೆಗೆಯಲು ತ ಯಶಸ್ವಿಯಾದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.2
- ರೈಲ್ವೆ ಕಾಮಗಾರಿಯ ಕಂದಕದಲ್ಲಿ ಮುಳುಗಿ 17 ವರ್ಷದ ಬಾಲಕ ಸಾವು: ಗ್ರಾಮಸ್ಥರಲ್ಲಿ ಆತಂಕ ಕುಷ್ಟಗಿ: ತಾಲೂಕಿನ ವಿವಿಧೆಡೆ ರೈಲ್ವೆ ಇಲಾಖೆಯ ಕಾಮಗಾರಿಗಾಗಿ ಮಣ್ಣು (ಮರಂ) ತೆಗೆಯಲು ನಿರ್ಮಿಸಲಾಗಿರುವ ಆಳವಾದ ಕಂದಕಗಳು ಇದೀಗ ಸಾವಿನ ಬಲೆಗಳಾಗಿ ಪರಿಣಮಿಸುತ್ತಿರುವ ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ವಣಗೇರಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ನೀರು ತುಂಬಿದ ಕಂದಕದಲ್ಲಿ ಈಜಲು ತೆರಳಿದ್ದ ಕೆ.ಬೋದೂರು ಗ್ರಾಮದ 17 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ. ವಣಗೇರಿ ಗ್ರಾಮದ ಸರ್ವೇ ನಂ. 24/1/3ರ ಜಮೀನಿನಲ್ಲಿ ರೈಲ್ವೆ ಕಾಮಗಾರಿಗಾಗಿ ಸುಮಾರು 6 ಎಕರೆ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿತ್ತು. ಇದರಿಂದ ಸುಮಾರು 45ರಿಂದ 50 ಅಡಿ ಆಳದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಮಳೆ ಹಾಗೂ ಬಸಿ ನೀರು ತುಂಬಿ ಸಂಪೂರ್ಣ ಜಲಾವೃತಗೊಂಡಿತ್ತು. ಕೆ.ಬೋದೂರು ಗ್ರಾಮದ ಹನುಮಂತಪ್ಪ ತಂದೆ ಬಸವರಾಜ ಗೊರೆಬಾಳ (17) ಹಾಗೂ ಇನ್ನೊಬ್ಬ ಬಾಲಕ ಈಜಲು ಕಂದಕದ ಬಳಿ ತೆರಳಿದ್ದ ವೇಳೆ, ಆಳದ ಅರಿವಿಲ್ಲದೆ ನೀರಿನ ಸೆಳೆತಕ್ಕೆ ಸಿಲುಕಿ ಹನುಮಂತಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಹಾಗೂ ಸಿಬ್ಬಂದಿ, ಕುಷ್ಟಗಿ ಪಿಎಸ್ಐ ಹನಮಂತಪ್ಪ ತಳವಾರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ಆರಂಭಿಸಿತು. ನಿನ್ನೆ ಆರಂಭವಾದ ನಿರಂತರ ಕಾರ್ಯಾಚರಣೆಯ ಬಳಿಕ ಇಂದು ಬೆಳಿಗ್ಗೆ ಸುಮಾರು 9.30ಕ್ಕೆ ಬಾಲಕನ ಮೃತದೇಹ ಪತ್ತೆಯಾಯಿತು. ವಣಗೇರಿ ಮಾತ್ರವಲ್ಲದೆ ತಾಲೂಕಿನ ಟೆಂಗುಂಟಿ, ಕೆ.ಹೊಸೂರು, ಕಂದಕೂರು ಹಾಗೂ ಜಿ.ಗಂಗನಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೈಲ್ವೆ ಯೋಜನೆಗಾಗಿ ಮಣ್ಣು ಮತ್ತು ಮರಳು ತೆಗೆಯಲಾಗಿದ್ದು, ಆಳವಾದ ಕಂದಕಗಳು ನಿರ್ಮಾಣಗೊಂಡಿವೆ. ಕೆಲವೆಡೆ ನೀರು ತುಂಬಿಕೊಂಡಿದ್ದು, ಇನ್ನೂ ಕೆಲವು ಸ್ಥಳಗಳಲ್ಲಿ ಅಪಾಯಕಾರಿಯಾಗಿ ತೆರೆದ ಸ್ಥಿತಿಯಲ್ಲಿವೆ. ಇದರಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಪ್ರಾಣಾಪಾಯ ಎದುರಾಗುವ ಭೀತಿ ಹೆಚ್ಚಾಗಿದೆ. ಸುರಕ್ಷತಾ ಕ್ರಮಗಳಿಲ್ಲದೆ ಕಂದಕಗಳನ್ನು ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀನಿನ ಮಾಲೀಕರು ಹಾಗೂ ರೈಲ್ವೆ ಕಾಮಗಾರಿ ನಿರ್ವಹಣೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಹಾಗೂ ರೈಲ್ವೆ ಇಲಾಖೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಲ್ಲದೆ, ಅಪಾಯಕಾರಿ ಕಂದಕಗಳ ಸುತ್ತ ತಂತಿ ಬೇಲಿ ಅಳವಡಿಸುವುದು, ಎಚ್ಚರಿಕೆ ಫಲಕಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.4
- ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.1
- ಬಳ್ಳಾರಿ: ಸಚಿವ ಡಿ. ಸುಧಾಕರ್ ನಿಧನ: "ಎಲ್ಲವೂ ವಿಧಿಯಾಟ'' ಎಂದು ಭಾವುಕರಾದ ಸಚಿವ ಜಮೀರ್ ಅಹಮದ್! ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಚಳ್ಳಕೆರೆಯಲ್ಲಿ ಸೋಮವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಯಾರು ಯಾವಾಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ತಿಳಿಯುವುದಿಲ್ಲ, ಎಲ್ಲವೂ ವಿಧಿಯಾಟ' ಎಂದು ಅವರು ಭಾವುಕರಾಗಿ ನುಡಿದರು. ಕೇವಲ ಮಂಡಿ ನೋವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕರ್ ಅವರಿಗೆ ನಂತರ ಶ್ವಾಸಕೋಶದ ಸಮಸ್ಯ ೆ ಕಾಣಿಸಿಕೊಂಡಿತ್ತು. ಸದಾ ಹಸನ್ಮುಖಿಯಾಗಿದ್ದ ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಜಮೀರ್ ಸ್ಮರಿಸಿದರು. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.1
- ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿ ಗೌರವಿಸಿದರು. ಈ ಸ್ನೇಹ ಸಮ್ಮೇಳನದಲ್ಲಿ ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಅವರು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ.1
- ಮದುವೆ ಮನೆಯವರ ವೈಯಕ್ತಿಕ ದ್ವೇಷದಿಂದ ವಿಜಯಪುರ ಜಿಲ್ಲೆಯ ಬಸ್ತಿಹಾಳದ ಬಸವೇಶ್ವರ ದೇವಸ್ಥಾನದ ಮುಖ್ಯ ಬಾಗಿಲನ್ನು ಲಾಕ್ ಮಾಡಲಾಗಿದೆ. ಇದರಿಂದಾಗಿ ಭಕ್ತರು ದೇವಸ್ಥಾನ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.5
- ಹುನಗುಂದ ಸಮೀಪದ ಟೋಲ್ ಬಳಿ ಧಗ ಧಗ ಹೊತ್ತಿ ಉರಿದ ಭತ್ತ ಹೊತ್ತ ಲಾರಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಮಧ್ಯದ ಟೋಲ್ ನಾಕಾ ಬಳಿ ಭತ್ತ ಹೊತ್ತ ಬರುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದ ಘಟನೆ ಮೇ ೧೦ ರಾತ್ರಿ ಸಮಯದಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ಲಾರಿ ಭತ್ತವನ್ನು ಹೊತ್ತುಕೊಂಡ ಹುನಗುಂದ ಮಾರ್ಗವಾಗಿ ತೆರಳಬೇಕಾಗಿದ್ದ ಲಾರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಲಾರಿ ಬಾಲಕಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ ಹತ್ತಿದ ಬೆಂಕಿ ಮುಂಜಾನೆಯವರೆಗೂ ಉರಿಯುತ್ತಿದ್ದರೂ,ಅಗ್ನಿಶಾಮಕ ದಳದ ಸಿಬ್ಬಂದಿಯಾಗಲಿ ಅಥವಾ ಟೋಲ್ ನಾಕಾ ಸಿಬ್ಬಂದಿಯಾಗಲಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಹುನಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮೇ 10ರಂದು ತಾಯಿ ದಿನವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಿರಿಯ ಸಾಹಿತಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ತಮ್ಮ ತಾಯಂದಿರನ್ನು ಗೌರವಿಸಿ, ಸಿಹಿ ಹಂಚಿ ವಂದಿಸಿದರು. ಈ ದಿನ ತಾಯಿಯ ಆದರ್ಶ ಗುಣಗಳನ್ನು ಸ್ಮರಿಸಿ, ಪೋಷಕರನ್ನು ಪೂಜಿಸುವುದರ ಮಹತ್ವವನ್ನು ಸಾರಲಾಯಿತು.4
- ಮುಂಚೆ ಇರುವ ಸಿದ್ದರಾಮಯ್ಯ ಅವರು ಈಗಿಲ್ಲ, ಅಧಿಕಾರಕ್ಕಾಗಿ ಏನೆಲ್ಲಾ ಸರ್ಕಸ್1