Shuru
Apke Nagar Ki App…
ರಾಯಚೂರು ಟುಡೆ ನ್ಯೂಜ್ ದೇವದುರ್ಗ ಕರ್ನಾಟಕದ ಎಲ್ಲ ಎಂಎಲ್ಎ ಗಳ ಒಟ್ಟು ಆಸ್ತಿ
Hasan Anjal
ರಾಯಚೂರು ಟುಡೆ ನ್ಯೂಜ್ ದೇವದುರ್ಗ ಕರ್ನಾಟಕದ ಎಲ್ಲ ಎಂಎಲ್ಎ ಗಳ ಒಟ್ಟು ಆಸ್ತಿ
More news from ಕರ್ನಾಟಕ and nearby areas
- ರಾಯಚೂರು ಟುಡೆ ನ್ಯೂಜ್ ದೇವದುರ್ಗ ಕರ್ನಾಟಕದ ಎಲ್ಲ ಎಂಎಲ್ಎ ಗಳ ಒಟ್ಟು ಆಸ್ತಿ1
- ರಕ್ಷಾ ಬಂಧನದ ಪವಿತ್ರ ಹಬ್ಬದ ಅಂಗವಾಗಿ ದಿನಾಂಕ 28/08/2026 ರಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ ಕೆಂಭಾವಿ, ಆ. 28: ರಕ್ಷಾ ಬಂಧನದ ಪವಿತ್ರ ಹಬ್ಬದ ಅಂಗವಾಗಿ ದಿನಾಂಕ 28/08/2026 ರಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳದ ಸಂಘದ ಸೋದರಿಯರು ಕೆಂಭಾವಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸಮಾಜದ ರಕ್ಷಣೆ ಹಾಗೂ ಸೇವೆಯಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಯವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿಯವರ ಸೇವೆಯನ್ನು ಸ್ಮರಿಸಿ, ಅವರ ಕರ್ತವ್ಯ ನಿಷ್ಠೆ ಮತ್ತು ಸಮಾಜದ ಸುರಕ್ಷತೆಗಾಗಿ ಸಲ್ಲಿಸುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ರಕ್ಷಾ ಬಂಧನದ ಮೂಲಕ ಸಹೋದರತ್ವ, ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರಿದ ಧರ್ಮಸ್ಥಳದ ಸಂಘದ ಸೋದರಿಯರ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದ ರಕ್ಷಕರಿಗೆ ರಾಖಿ ಕಟ್ಟುವ ಮೂಲಕ ಆಚರಿಸಿದ ಈ ರಕ್ಷಾ ಬಂಧನ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.1
- ಲೋಕಕಲ್ಯಾಣಾರ್ಥವಾಗಿ ದೇವಪುರ ಗ್ರಾಮದಿಂದ ತಿಂಥಣಿ ಗ್ರಾಮದವರೆಗೆ ಪಾದಯಾತ್ರೆಯನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸುಕ್ಷೇತ್ರ ದಕ್ಷಿಣಕಾಶಿ ತಿಂತಣಿ ಮೌನೇಶ್ವರ ದೇವಸ್ಥಾನಕ್ಕೆ ಇಂದು ದೇವಪುರ ಗ್ರಾಮದಿಂದ ಶ್ರೀ ಅಮರಣ್ಣ ಮುತ್ಯ ಮಲ್ಲಣ್ಣ ಮುತ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಗೂ ಆಲಾಯಿ ಪರಂಪರೆಯ ಅಲೈಕುದುರೆಕಾರರು ಲೋಕಕಲ್ಯಾಣಾರ್ಥವಾಗಿ ದೇವಪುರ ಗ್ರಾಮದಿಂದ ತಿಂಥಣಿ ಗ್ರಾಮದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು ಶ್ರೀ ರವಿ ಮುತ್ಯಾ ಕಲಿಕೇರಿ ದೇವಾಪುರ ಹಾಗೂ ಶ್ರೀ ನಾಗರಾಜ್ ಮುತ್ಯ ದೇವಾಪುರ ಅವರ ನೇತೃತ್ವದಲ್ಲಿ ಹಾಗೂ ಅಲೈ ಪರಂಪರೆಯ ಎಲ್ಲಾ ಕುದುರೆ ಕಾರರು ಮತ್ತು ದೇವಪುರ ಗ್ರಾಮದ ಸುತ್ತಮುತ್ತ ಹಾಗೂ ಸುರಪುರ ತಾಲೂಕಿನ ಕೆಲವೊಂದು ಗ್ರಾಮಗಳಿಂದ ಸುಮಾರು 2500 ಯಿಂದ 3000 ಜನಸಂಖ್ಯೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು ದೇವಾಪುರ ಗ್ರಾಮದೇವತೆಯಿಂದ ಪಾದಯಾತ್ರೆ ಪ್ರಾರಂಭಗೊಂಡು ದೇವಾಪುರ ಹಾಗೂ ಅರಳಳ್ಳಿ ಹಾಗೂ ದಾದಲಾಪುರ ತಿಂಥಣಿ ಗ್ರಾಮಗಳಲ್ಲಿ ಅದ್ದೂರಿಯಾಗಿ ಗ್ರಾಮಸ್ಥರು ಸ್ವಾಗತಿಸಿದರು ಎಲ್ಲಾ ಕುದುರೆ ಕಾರರಿಗೆ ನೀರಿನ ಅಭಿಷೇಕ ಹಾಗೂ ಆರತಿ ಎತ್ತಿ ಬೆಳಗುವ ಮುಖಾಂತರ ಸ್ವಾಗತಿಸಿದ್ದು ವಿಶೇಷವಾಗಿತ್ತು ತಿಂಥಣಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಧ್ಯಾಹ್ನ 1 ಗಂಟೆಗೆ ಇಡೀ ಗ್ರಾಮಸ್ಥರು, ಬಾಜಾ ಭಜಂತ್ರಿ ಸಮೇತ ಸ್ವಾಗತಿ ದೇವಸ್ಥಾನದವರಿಗೆ ಎಲ್ಲಾ ಸ್ವಾಮಿಗಳನ್ನು ಕರೆದೊಯ್ಯಲಾಯಿತು ನಂತರ ವೇದಿಕೆಯಲ್ಲಿ ಸಮಾವೇಶಗೊಂಡು ಹಲವಾರು ಸ್ವಾಮಿಗಳು ಮಾತನಾಡಿದರು ಶ್ರೀ ರವಿ ಮುತ್ಯ ಮಾತನಾಡುತ್ತಾ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆ ರೈತರಿಗೆ ಸಕಲ ಸಮೃದ್ಧಿಯನ್ನು ಭಗವಂತನು ಕರುಣಿಸಲಿ ಇಡೀ ವಿಶ್ವದಲ್ಲಿ ಮಾನವರು ಸುಖ ನೆಮ್ಮದಿಯಿಂದ ಬಾಳಲಿ ಮತ್ತು ಭಗವಂತನು ಎಲ್ಲ ರೀತಿಯ ಅನುಕೂಲವನ್ನು ಕರುಣಿಸಲಿ ಎಂದು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು ಈ ಸಂದರ್ಭದಲ್ಲಿ ಗ್ರಾಮದ ಶ್ರೀ ಗಂಗಾಧರ ನಾಯಕ ತಿಂತಣಿ ಹಾಗೂ ಶ್ರೀ ಭೀಮಣ್ಣ ಕವಲದಾರ್ ಹಾಗೂ ಶ್ರೀ ಫಕ್ರುದ್ದೀನ್ ಹವಾಲ್ದಾರ್ ಶ್ರೀ ಸಲೀಂ ಸಾಬ್ ಮಾಜಿ ಸದಸ್ಯರು ಹಾಗೂ ಮಹಮ್ಮದ್ ಅಲಿ ಗೋಡಿಹಾಳ್ ಶ್ರೀ ಶರಣಗೌಡ ಬಂಡೊಳ್ಳಿ ಶ್ರೀ ಬಸವರಾಜ್ ತಿಂಥಣಿ ಬ್ರಿಜ್ ಶ್ರೀ ಬಸನಗೌಡ ಪಾಟೀಲ್ ಚಿಂಚೋಡಿ ಶ್ರೀ ರಂಗಣ್ಣ ಮಾಸ್ಟರ್ ಬಂಕಲ್ ದೊಡ್ಡಿ ಶ್ರೀ ಸಂಜೀವ್ ನಾಯಕ್ ಶ್ರೀ ದೇವರಾಜ್ ನಾಯಕ್ ಗಿರಣಿ ಶ್ರೀ ಮಾನಪ್ಪ ಹೊಸಪೇಟಿ ಶ್ರೀ ಹನುಮಂತ ಹೊಸಪೇಟೆ ಶ್ರೀ ಬಸವರಾಜ್ ಕವಲ್ದಾರ್ ಎಲ್ಲರೂ ಉಪಸ್ಥಿತರಿದ್ದರು ಬಂದಿರುವಂತಹ ಪಾದಯಾತ್ರಿಕರಿಗೆ ಹಾಗೂ ಎಲ್ಲಾ ಭಕ್ತಾದಿಗಳಿಗೆ *ಶ್ರೀ ಅಮರಣ್ಣ ಮುತ್ಯ ಮಲ್ಲಣ್ಣ ಮುತ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಾಸೋಹ* ವ್ಯವಸ್ಥೆಯನ್ನು ಮಾಡಲಾಗಿತ್ತು1
- ಹೊಕ್ರಾಣಿ ಘಟನೆ; ಸಂತ್ರಸ್ತ ಅಶ್ವಿನಿ ಕುಟಂಬಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ- ಗೃಹ ಇಲಾಖೆ ವೈಫಲ್ಯ ಆರೋಪ ಹೊಕ್ರಾಣಿ ಘಟನೆ; ಸಂತ್ರಸ್ತ ಅಶ್ವಿನಿ ಕುಟಂಬಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ- ಗೃಹ ಇಲಾಖೆ ವೈಫಲ್ಯ ಆರೋಪ3
- YADGIR NEWS||ಗೃಹ ಗ್ಯಾಸ್ನಲ್ಲೂ ಕಳ್ಳತನ ದಂಧೆ;15 ಕೆ.ಜಿ. ಸಿಲಿಂಡರ್ನಿಂದ 3 ಕೆ.ಜಿ. ಮಾಯ! ಶಹಾಪುರ: ತಾಲೂಕಿನ ಸಗರ ಬಿ ಗ್ರಾಮದಲ್ಲಿ ಗ್ರಾಹಕರಿಗೆ ವಿತರಿಸುವ ಗ್ಯಾಸ್ ಸಿಲಿಂಡರ್ಗಳಿಂದಲೇ ಗ್ಯಾಸ್ ಕಳವು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 15 ಕೆ.ಜಿ. ತೂಕದ ತುಂಬಿದ ಸಿಲಿಂಡರ್ನಿಂದ ಸುಮಾರು 3 ಕೆ.ಜಿ. ಗ್ಯಾಸ್ ತೆಗೆದು ಖಾಲಿ ಸಿಲಿಂಡರ್ಗೆ ತುಂಬುತ್ತಿರುವ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದೆ. ಈ ಅಕ್ರಮ ದಂಧೆ ಸುಬೇದಾರ್ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧಿಕಾರಿಗೆ ದೂರು ನೀಡಿ, ಸಮಗ್ರ ತನಿಖೆ ನಡೆಸಿ ಏಜೆನ್ಸಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.1
- ಯಾದಗಿರಿ ನಗರದ ಗಾಂಧಿ ಚೌಕಿನಲ್ಲಿ ರಾಖಿಯ ಅಂಗಡಿಗಳು ಎಲ್ಲಿ ಮಕ್ಕಳು ಮತ್ತು ಮಹಿಳೆಯರು ರಾಖಿಯನ್ನು ಕರಿಸಲು ದೃಶ್ಯ1
- ಯಾದಗಿರಿ ಜಿಲ್ಲೆ ಸಂಪೂರ್ಣ ಬರ ಘೋಷಣೆ ಮಾಡದೇ ಶಹಾಪೂರ ತಾಲೂಕ ಒಂದೇ ಬರ ಷೋಷಣೆ ಮಾಡಿರುವುದು ಸರ್ಕಾರ ಮಲತಾಯಿ ದೋರಣೆ ಕಂಡುಬರುತ್ತಿದೆ ಯಾದಗಿರಿ ಜಿಲ್ಲೆ ಸಂಪೂರ್ಣ ಬರ ಘೋಷಣೆ ಮಾಡದೇ ಶಹಾಪೂರ ತಾಲೂಕ ಒಂದೇ ಬರ ಷೋಷಣೆ ಮಾಡಿರುವುದು ಸರ್ಕಾರ ಮಲತಾಯಿ ದೋರಣೆ ಕಂಡುಬರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕ ವೊಂದನ್ನೇ ಬರ ಪೀಡಿತ ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರದ ಮಲತಾಯಿ ದೋರಣೆ ಮೇಲ್ನೋಟ್ಟಕ್ಕೆ ಎಂದು ಕಾಣುತ್ತಿದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಬಿಸಿಲಿನ ಪ್ರದೇಶ ಎಂದರೆ ಯಾದಗಿರಿ ಜಿಲ್ಲೆ ಮಾತ್ರ ಇನ್ನುಳಿದ ತಾಲೂಕಗಳ ಬರ ಘೊಷಣೆ ಮಾಡದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ರಾಜ್ಯ ಸರ್ಕಾರ ಪರುಪರೀಶಿಲನೇ ಮಾಡಿ ಆಗಿರುವ ಅನ್ಯಾಯ ಸರಿಪಡಿಸಬೇಕು ನಮ್ಮ ಜಿಲ್ಲೆಯ ರೈತರು ಜನಜಾನುವಾರುಗಳಿಗೆ ಕುಡಿಯುವ ನೀರು ಮೇವು ಒದಗಿಸಲು ಮುಂದಾಗಬೇಕೆAದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಸಿದ್ದಾರೆ. ರೈತರ ಜಮೀನು ಮತ್ತು ಕೆರೆ ಕುಂಟಿಗಳು ಧನ ಕರಗಳು ಕುರಿಗಳ ಮೇಯಿತ್ತಿರುವ ಸ್ಥಳಕ್ಕೆ ಬೇಟಿ ನೀಡಿ ಪರಿಶಿಲಿಸಿದ ನಂತರ ಮಾತನಾಡಿದ ಅವರು ಮಂಡ್ಯ ಮೈಸೂರು ಬೆಂಗಳೂರು ಭಾಗಗಳಲ್ಲಿ ಬರ ಘೊಷಣೆ ಮಾಡಿದರಿ ಬಿಸಿಲ ನಾಡು ಎಂದು ಕರೆಯವ ಯಾದಗಿರಿ ಜಿಲ್ಲೆಯನ್ನು ಸಂಪೂರ್ಣ ಕೈ ಬಿಟ್ಟು ಕೇವಲ ಶಹಾಪೂರ ತಾಲೂಕವನ್ನು ಬರ ಪೀಡಿತ ಎಂದು ಘೋಷಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿರುವುದು ರಾಜ್ಯ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ರೈತರ ಸಮ್ಮುಖದಲ್ಲೇ ವಿನೂತನ ಹೋರಾಟದ ರೂಪರೇಷಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಮುಂಗಾರು ಸಮಯದಲ್ಲಿ ಜಿಲ್ಲೆಯ ಎಲ್ಲ ರೈತರು ಹೆಸರು, ಹತ್ತಿ ಮುಂತಾದ ಬೆಳೆಗಳನ್ನು ಬಿತ್ತಿ ಬೆಳೆ ಕೈಗೆ ಬರದ ಕಾರಣ ಮೊಳಕೆ ಬಾರದೇ ಒಣಗಿ ಹೋದ ಬೆಳೆಯನ್ನು ಆಳಾಗಿರುವುದು ಅಧಿಕಾರಿಗಳ ಗಮನಕ್ಕೆ ಇದ್ದರು ಕೂಡ ನಮ್ಮ ಜಿಲ್ಲೆಗೆ ಆಗಿರು ಗೋರ ಅನ್ಯಾವನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳು ಮರು ಪರಿಶಿಲನೆಗೆ ಮುಂದಾಗಬೇಕೆAದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಎಚ್ಚರಿಸಿದರು.4
- ಯಾದಗಿರಿ. ನ್ಯಾಯಬೆಲೆ ಅಂಗಡಿ ಏವೂರ ಸರ್ವರ್ ಬಿಜಿ ಇದ್ದ ಕಾರಣ ಅಂಗಡಿಯಲ್ಲಿ ಗಲಾಟೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಸಮೀಪದ ಏವೂರ ಗ್ರಾಮದನ್ಯಾಯಬೆಲೆ ಅಂಗಡಿಗಳಲ್ಲಿ (Ration Shop) ಸರ್ವರ್ ಡೌನ್ ಅಥವಾ ಬಿಜಿ ಇರುವುದು ತಾಂತ್ರಿಕ ಸಮಸ್ಯೆಯಾಗಿದೆ. ಇದರಿಂದಾಗಿ ಗ್ರಾಹಕರಿಗೆ ಬಯೋಮೆಟ್ರಿಕ್ (ಹೆಬ್ಬೆರಳು ಗುರುತು) ನೀಡಲು ತೊಂದರೆಯಾಗುತ್ತದೆ1