ಅಳ್ನಾವರದ ಸೇಂಟ್ ತೆರೇಜಾ ಹಿರಿಯ ಪ್ರಾಥಮಿಕ ಶಾಲೆಯ ೭ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೂಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ೭ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೂಡುಗೆ ನಿರಂತರ ಅಧ್ಯಯನ, ಆತ್ಮವಿಶ್ವಾಸ ರೂಡಿಸಿಕೊಳ್ಳಬೇಕು ಅಳ್ನಾವರ(ಧಾರವಾಡ): ವಿದ್ಯಾರ್ಥಿ ಜೀವನದ ಪ್ರಥಮ ಹಂತದ ಮಹತ್ವದ ಘಟ್ಟದಲ್ಲಿ ಸತತ ಓದುವ ಹವ್ಯಾಸ್, ಆತ್ಮವಿಶ್ವಾಸ್, ಶಿಸ್ತು ಪಾಲನೆ ಮೂಲಕ ನಿಮ್ಮ ಗುರಿ ತಲುಪಲು ಶ್ರಮಿಸಬೇಕು ಎಂದು ಗುಂಡೊಳ್ಳಿ ಚರ್ಚನ ಧರ್ಮಗುರು ಫಾದರ್. ಜೊಸೆಫ್ ಡಿಸೋಜಾ ಹೇಳಿದರು. ಇಲ್ಲಿನ ಸೇಂಟ್ ತೆರೇಜಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ೭ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡ ಬೀಳ್ಕೂಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿ, ತಪ್ಪನ್ನು ಅರಿತು ತಿದ್ದುಕೊಂಡು ಮುನ್ನುಗ್ಗಬೇಕು. ಕಷ್ಟ, ಸಮಸ್ಯೆ ಎದುರಿಸುವ ಶಕ್ತಿ ಹೊಂದಬೇಕು. ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನದಿಂದ ದೂರ ಸರಿಯಬಾರದು. ಸಂಸ್ಕಾರ್, ನೀತಿ, ನಿಯಮ, ಶೈಕಣಿಕ ಮೌಲ್ಯ ಸದಾ ಬಕುಕಲ್ಲಿ ರೂಡಿಸಿಕೊಂಡು ಮುಂದೆ ಸಾಗಬೇಕು ಎಂದರು. ಸAತ್ ಅನ್ನಮ್ಮ ಚರ್ಚನ ಧರ್ಮಗುರು ಫಾದರ್, ಜೊಸೇಫ್ ಲೋಪಿಸ್, ಮುಖ್ಯ ಶಿಕ್ಷಕಿ ಜೀನಾ ಪಾಯಸ್, ಲೀನಾ ಡಿಸೋಜಾ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶಾಲೆಟ ಬೆರೆಟ್ಟೊ, ಅಶೋಕ ಜೋಡಟ್ಟಿ, ಮುಕ್ತಾ ಕಾತರಕಿ, ಪುಂಡಲಿಕ ಪಾರ್ದಿ, ಪ್ರೀತಮ್ ಪಾಟೀಲ, ಶಾಹನೂರ ಇದ್ದರು. ಪ್ರಾರ್ಥನೆ ನೃತ್ಯ ಸೊಗಸಾಗಿ ಮೂಡಿ ಬಂತು. ಸರ್ವಧರ್ಮ ಪ್ರಾರ್ಥನೆ ನಡೆಯಿತು. ದೀಪದಾನ ಮಾಡಲಾಯಿತು. ಲಿನೇಟ್ ಸ್ವಾಗತಿಸಿದರು. ಶಾಲೆಗೆ ನೆನಪಿನ ಕಾಣಿಕೆ ನೀಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊAಡರು. ಮಂಗಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜಲಿನ್ ವಂದಿಸಿದರು. ವಿದಾಯ ಗೀತೆ ಹಾಡಲಾಯಿತು.
ಅಳ್ನಾವರದ ಸೇಂಟ್ ತೆರೇಜಾ ಹಿರಿಯ ಪ್ರಾಥಮಿಕ ಶಾಲೆಯ ೭ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೂಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ೭ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೂಡುಗೆ ನಿರಂತರ ಅಧ್ಯಯನ, ಆತ್ಮವಿಶ್ವಾಸ ರೂಡಿಸಿಕೊಳ್ಳಬೇಕು ಅಳ್ನಾವರ(ಧಾರವಾಡ): ವಿದ್ಯಾರ್ಥಿ ಜೀವನದ ಪ್ರಥಮ ಹಂತದ ಮಹತ್ವದ ಘಟ್ಟದಲ್ಲಿ ಸತತ ಓದುವ ಹವ್ಯಾಸ್, ಆತ್ಮವಿಶ್ವಾಸ್, ಶಿಸ್ತು ಪಾಲನೆ ಮೂಲಕ ನಿಮ್ಮ ಗುರಿ ತಲುಪಲು ಶ್ರಮಿಸಬೇಕು ಎಂದು ಗುಂಡೊಳ್ಳಿ ಚರ್ಚನ ಧರ್ಮಗುರು ಫಾದರ್. ಜೊಸೆಫ್ ಡಿಸೋಜಾ ಹೇಳಿದರು. ಇಲ್ಲಿನ ಸೇಂಟ್ ತೆರೇಜಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ೭ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡ ಬೀಳ್ಕೂಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿ, ತಪ್ಪನ್ನು ಅರಿತು ತಿದ್ದುಕೊಂಡು ಮುನ್ನುಗ್ಗಬೇಕು. ಕಷ್ಟ, ಸಮಸ್ಯೆ ಎದುರಿಸುವ ಶಕ್ತಿ ಹೊಂದಬೇಕು. ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನದಿಂದ ದೂರ ಸರಿಯಬಾರದು. ಸಂಸ್ಕಾರ್, ನೀತಿ, ನಿಯಮ, ಶೈಕಣಿಕ ಮೌಲ್ಯ ಸದಾ ಬಕುಕಲ್ಲಿ ರೂಡಿಸಿಕೊಂಡು ಮುಂದೆ ಸಾಗಬೇಕು ಎಂದರು. ಸAತ್ ಅನ್ನಮ್ಮ ಚರ್ಚನ ಧರ್ಮಗುರು ಫಾದರ್, ಜೊಸೇಫ್ ಲೋಪಿಸ್, ಮುಖ್ಯ ಶಿಕ್ಷಕಿ ಜೀನಾ ಪಾಯಸ್, ಲೀನಾ ಡಿಸೋಜಾ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶಾಲೆಟ ಬೆರೆಟ್ಟೊ, ಅಶೋಕ ಜೋಡಟ್ಟಿ, ಮುಕ್ತಾ ಕಾತರಕಿ, ಪುಂಡಲಿಕ ಪಾರ್ದಿ, ಪ್ರೀತಮ್ ಪಾಟೀಲ, ಶಾಹನೂರ ಇದ್ದರು. ಪ್ರಾರ್ಥನೆ ನೃತ್ಯ ಸೊಗಸಾಗಿ ಮೂಡಿ ಬಂತು. ಸರ್ವಧರ್ಮ ಪ್ರಾರ್ಥನೆ ನಡೆಯಿತು. ದೀಪದಾನ ಮಾಡಲಾಯಿತು. ಲಿನೇಟ್ ಸ್ವಾಗತಿಸಿದರು. ಶಾಲೆಗೆ ನೆನಪಿನ ಕಾಣಿಕೆ ನೀಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊAಡರು. ಮಂಗಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜಲಿನ್ ವಂದಿಸಿದರು. ವಿದಾಯ ಗೀತೆ ಹಾಡಲಾಯಿತು.
- ಬೇಸಿಗೆ ಬಿಸಿ: ಮಾಗಡಿಯ 56 ಗ್ರಾಮಗಳಿಗೆ ತಪ್ಪಲಿದೆ ನೀರಡಿಕೆ; ಕುಡಿಯುವ ನೀರಿಗಾಗಿ ಸರ್ಕಾರದ ಮಾಸ್ಟರ್ ಪ್ಲಾನ್! #JB_News_Kannada1
- Post by Rahuldev singh1
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಿನ್ನಲೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಪಾಲ್ಗೊಳ್ಳಲಿದ್ದು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದ್ದು. ಸಾಯಂಕಾಲ ಎಸ್.ಆರ್.ಕಂಠಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಮುಖಂಡರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದ್ದಾರೆ. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ1
- ವಿಜಯಪುರ: ಕಾಂಗ್ರೆಸ ವಿರುದ್ಧ ಕಿಡಿಕಾರಿದ ಬಿಜೆಪಿವಕ್ತಾರ ಎನ. ಚಂದ್ರಶೇಖರ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಸುಳಿಯಲ್ಲಿ ತಳ್ಳಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ ಎಂದರು. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದರು.1
- ಗದಗ ಮುಂಡರಗಿಯಲ್ಲಿ ಹಗಲು ಹೊತ್ತಿನಲ್ಲೇ ಮನೆ ಕಳ್ಳತನ ಬ್ಯಾಂಕ್ ಮ್ಯಾನೇಜರ್ ರಾಘವೇಂದ್ರಕುಮಾರ ಮನೆ ಟಾರ್ಗೆಟ್ ಮಾಡಿದ ಕಳ್ಳರು ಜನನೀಬೀಡ ಪ್ರದೇಶದ ಮನೆಯಲ್ಲಿ ಘಟನೆ ಮಧ್ಯಾಹ್ನ 3.20 ರಿಂದ 4.40ರೊಳಗೆ ಕಳ್ಳತನ ಮನೆಯ ಬಾಗಿಲಿನ ಕೀಲಿಮುರಿದು ಒಳನುಗ್ಗಿದ ದುಷ್ಕರ್ಮಿಗಳು ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳ ಕಳ್ಳತನ ಮನೆ ಖಾಲಿ ಇದ್ದ ವೇಳೆ ಪಕ್ಕಾ ಪ್ಲ್ಯಾನ್ನೊಂದಿಗೆ ಕಳ್ಳರ ಕೃತ್ಯ ವಿದ್ಯಾನಗರ ಕಳ್ಳತನ ಪ್ರಕರಣದ ನಂತರ ಮತ್ತೊಂದು ಘಟನೆ ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ, ಪರಿಶೀಲನೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ತನಿಖೆ ಆರಂಭ ಕಳ್ಳರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಕೆ1
- ಪವಿತ್ರ ರಂಜಾನ್ ಮಾಸದ ಅಂಗವಾಗಿ Rise of Humanity Trust ವತಿಯಿಂದ ಬಳ್ಳಾರಿ ನಗರದ Kaul Bazaar ಪ್ರದೇಶದ Babu Chowk ನಲ್ಲಿ ಇರುವ ಟ್ರಸ್ಟ್ ಕಚೇರಿಯಲ್ಲಿ ಭರ್ಜರಿ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಉಪವಾಸ ಮುಗಿಸಿದ ನಂತರ ಪ್ರಾರ್ಥನೆ ಸಲ್ಲಿಸಿದರು. ಟ್ರಸ್ಟ್ ಅಧ್ಯಕ್ಷ N. M. D. Asif ಮಾತನಾಡಿ, ರಂಜಾನ್ ಮಾಸವು ಸಹನೆ, ತ್ಯಾಗ, ದಾನ ಧರ್ಮ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಪವಿತ್ರ ಸಮಯವಾಗಿದೆ ಎಂದು ಹೇಳಿದರು. ಇಫ್ತಾರ್ ಕೂಟದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ)ದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಘನಶ್ಯಾಮ ಭಾಂಡಗೆ ಗಂಭೀರ ಆರೋಪ ಮಾಡಿದ್ದಾರೆ. ಇ-ಖಾತಾ ಆನ್ಲೈನ್ ಸಮಸ್ಯೆಯಿಂದ ಸಾವಿರಾರು ಮುಳುಗಡೆ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.1
- 📱 ಪೊಲೀಸರು ನಿಮ್ಮ WhatsApp ಚಾಟ್ಗಳನ್ನು ನೋಡಬಹುದಾ? ಸಾಮಾನ್ಯವಾಗಿ: ❌ ಪೊಲೀಸರು ನಿಮ್ಮ WhatsApp ಚಾಟ್ಗಳನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ⚖️ ಯಾವಾಗ ನೋಡಬಹುದು? ನ್ಯಾಯಾಲಯದ ಆದೇಶ (Court Order) ಇದ್ದರೆ ತನಿಖೆ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ 📜 ಸಂಬಂಧಿತ ಕಾನೂನು Bharatiya Nagarik Suraksha Sanhita (BNSS) Section 94 ಪ್ರಕಾರ: ಪೊಲೀಸ್ ಅಧಿಕಾರಿಗಳು ತನಿಖೆಗೆ ಸಂಬಂಧಿಸಿದ ದಾಖಲೆಗಳು / ಡಿಜಿಟಲ್ ಸಾಧನಗಳನ್ನು (ಮೊಬೈಲ್, ಲ್ಯಾಪ್ಟಾಪ್ ಇತ್ಯಾದಿ) ಜಪ್ತಿ (Seize) ಮಾಡಬಹುದು. 🔍 ಆದರೆ ಮುಖ್ಯ ವಿಷಯ ಮೊಬೈಲ್ ಜಪ್ತಿ ಮಾಡಿದರೂ ಚಾಟ್ ಓದಲು ಕಾನೂನು ಪ್ರಕ್ರಿಯೆ ಅಗತ್ಯ. ಕೋರ್ಟ್ ಆದೇಶ ಅಥವಾ ಕಾನೂನುಬದ್ಧ ತನಿಖೆ ಇದ್ದಾಗ ಮಾತ್ರ ಪರಿಶೀಲಿಸಬಹುದು. ⚖️ ನಿಮ್ಮ ಹಕ್ಕು ನಿಮ್ಮ ಖಾಸಗಿ ಮಾಹಿತಿಗೆ (Privacy) ಕಾನೂನು ರಕ್ಷಣೆ ಇದೆ. ಪೊಲೀಸರು ಯಾವುದೇ ಕಾರಣವಿಲ್ಲದೆ ನಿಮ್ಮ ಫೋನ್ ಅಥವಾ ಚಾಟ್ ಪರಿಶೀಲಿಸಲು ಸಾಧ್ಯವಿಲ್ಲ.1
- ಕಲಬುರಗಿ: ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಠಾಣೆಗೆ ತಂದು ಒಪ್ಪಿಸಿದ ಹಿಂದೂ ಕಾರ್ಯಕರ್ತರು ಕಲಬುರ್ಗಿಯ ಶರಣಸಿರಸಗಿ ಗ್ರಾಮದಲ್ಲಿ ಕ್ರಿಶ್ಚಿಯನ್ ಧರ್ಮದ ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರ ಮೂರ್ತಿ, ಫೋಟೋಗಳನ್ನು ಮನೆಯಿಂದ ಹೊರಗೆಸೆಯಿರಿ ನಿಮಗಾಗಿ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು 20-30 ಜನರ ತಂದ ಧರ್ಮ ಪರಿವರ್ತನಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಜರಂಗದಳ ಕಾರ್ಯಕರ್ತನ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಕಾರ್ಯಕರ್ತೆ ದಿವ್ಯಾ ನೇತೃತ್ವದಲ್ಲಿ ತಂಡವನ್ನು ಸಬ್ ಅರ್ಬನ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಸರ್ಕಲ್ ಇನ್ಸೆಕ್ಟರ್ ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮತಾಂತರ ತಡೆಗೆ ಕಠಿಣ ಕ್ರಮಕ್ಕಾಗಿ ಆಗ್ರಹ ಕೇಳಿಬಂದಿದೆ.2