Shuru
Apke Nagar Ki App…
ಬೀಳಗಿ ಬೆಚ್ಚಿಬೀಳಿಸಿದ ಮಣ್ಣು ದಂಧೆ!– ಅಧಿಕಾರಿಗಳು ಮೌನ! ಮಣ್ಣು ಮಾಫಿಯಾ ಬೀಳಗಿ ತಾಲೂಕಿನಲ್ಲಿ ಮತ್ತೆ ಅಕ್ರಮ ಬಯಲಾಗಿದೆ! ಸುನಗ ಮತ್ತು ಹೊನ್ನಿಯಾಳ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಮಣ್ಣು ದಂಧೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಅನುಮತಿ ಪಡೆಯದೆ ಟಿಪ್ಪರ್ ವಾಹನಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ 4 ಅಡಿಗಿಂತ ಹೆಚ್ಚು ಆಳದಲ್ಲಿ ಮಣ್ಣು ತೆಗೆದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ಥಳೀಯರು ಹಲವು ಬಾರಿ ದೂರು ನೀಡಿದರೂ… ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಆತಂಕಕಾರಿ ವಿಷಯ ಏನೆಂದರೆ… ಪೊಲೀಸರು ಸಹ ಮಣ್ಣು ಸಾಗಿಸುತ್ತಿರುವ ವಾಹನಗಳನ್ನು ಪರಿಶೀಲಿಸದೇ ಬಿಟ್ಟು ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
Bhimahejje News
ಬೀಳಗಿ ಬೆಚ್ಚಿಬೀಳಿಸಿದ ಮಣ್ಣು ದಂಧೆ!– ಅಧಿಕಾರಿಗಳು ಮೌನ! ಮಣ್ಣು ಮಾಫಿಯಾ ಬೀಳಗಿ ತಾಲೂಕಿನಲ್ಲಿ ಮತ್ತೆ ಅಕ್ರಮ ಬಯಲಾಗಿದೆ! ಸುನಗ ಮತ್ತು ಹೊನ್ನಿಯಾಳ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಮಣ್ಣು ದಂಧೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಅನುಮತಿ ಪಡೆಯದೆ ಟಿಪ್ಪರ್ ವಾಹನಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ 4 ಅಡಿಗಿಂತ ಹೆಚ್ಚು ಆಳದಲ್ಲಿ ಮಣ್ಣು ತೆಗೆದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ಥಳೀಯರು ಹಲವು ಬಾರಿ ದೂರು ನೀಡಿದರೂ… ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಆತಂಕಕಾರಿ ವಿಷಯ ಏನೆಂದರೆ… ಪೊಲೀಸರು ಸಹ ಮಣ್ಣು ಸಾಗಿಸುತ್ತಿರುವ ವಾಹನಗಳನ್ನು ಪರಿಶೀಲಿಸದೇ ಬಿಟ್ಟು ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
More news from ಕರ್ನಾಟಕ and nearby areas
- ಬೀಳಗಿ ತಾಲೂಕಿನಲ್ಲಿ ಮತ್ತೆ ಅಕ್ರಮ ಬಯಲಾಗಿದೆ! ಸುನಗ ಮತ್ತು ಹೊನ್ನಿಯಾಳ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಮಣ್ಣು ದಂಧೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಅನುಮತಿ ಪಡೆಯದೆ ಟಿಪ್ಪರ್ ವಾಹನಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ 4 ಅಡಿಗಿಂತ ಹೆಚ್ಚು ಆಳದಲ್ಲಿ ಮಣ್ಣು ತೆಗೆದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ಥಳೀಯರು ಹಲವು ಬಾರಿ ದೂರು ನೀಡಿದರೂ… ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಆತಂಕಕಾರಿ ವಿಷಯ ಏನೆಂದರೆ… ಪೊಲೀಸರು ಸಹ ಮಣ್ಣು ಸಾಗಿಸುತ್ತಿರುವ ವಾಹನಗಳನ್ನು ಪರಿಶೀಲಿಸದೇ ಬಿಟ್ಟು ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.1
- ಗುಳೇದಗುಡ್ಡ: ಜೈನ್ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜೈನ್ರ 24ನೇ ತೀರ್ಥಂಕರಾದ ಭಗವಾನ ಮಹಾವೀರರು ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾಪುರುಷರು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು ಎಂದು ಉಪತಹಶೀಲ್ದಾರ ಜಿ.ವಿ ರಜಪೂತ್ ಹೇಳಿದರು. ಅವರು ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ ನೇ 2625 ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ ವರ್ದಮಾನ ಶ್ವೇತಾಂಬರ ಸ್ಥಾನಿಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಮಾತನಾಡಿ, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷರು. ಅಹಿಂಸೆ ಹಾಗೂ ಬದುಕು, ಬದುಕಲು ಬಿಡು ಎಂಬ ತತ್ವದ ಮೇಲೆ ನಿಂತಿರುವ ಜೈನ ಧರ್ಮದ ತತ್ವಸಿದ್ದಾಂತಗಳನ್ನು ಬೋಧಿಸಿದರು. ಮಹಾವೀರರ ಸತ್ಯ, ಅಹಿಂಸೆ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ, ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು. ಈ ಸಂದರ್ಭದಲ್ಲಿ ಮಹಾವೀರ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ನರೇಂದ್ರ ಗುಗಲೇ, ಸುರೇಶ ಕಠಾರಿಯಾ, ರಿಷಬ್ ಕಠಾರಿಯಾ, ವಿನಯ ಕಠಾರಿಯಾ, ವಿಕ್ರಮ ಕಠಾರಿಯಾ, ಜೈಮಲ್ ಶ್ರಮನಿ ಸಂಘದ ಅಧ್ಯಕ್ಷೆ ಪ್ರತಿಭಾ ಕಠಾರಿಯಾ, ಆಶಾ ಗುಂದೇಚಾ, ಸುನೀತಾ ಕಠಾರಿಯಾ, ನಂಬ್ರತಾ ಕಠಾರಿಯಾ, ವೀನಾಬಾಯಿ ಕಠಾರಿಯಾ, ಶಾಲು ಕಠಾರಿಯಾ, ಸಂಗೀತಾ ಗುಗಳೇ, ಸಿಬ್ಬಂದಿ ಎಂ.ಎಂ. ತುಪ್ಪದ ಮತ್ತಿತರರು ಇದ್ದರು.2
- ಡೆಡ್ಲಿ ಆರ್ಟ್ಸ್ ಬ್ಯಾನರಡಿಯಲ್ಲಿ ಡೆಡ್ಲಿಸೋಮ, ಮಾದೇಶ ಖ್ಯಾತಿ ರವಿ ಶ್ರೀವತ್ಸ್ ನಿರ್ಮಾಣಮತ್ತು ನಿರ್ದೇಶನದ ಗ್ಯಾಂಗ್ಸ್ ಆಫ್ ಯುಕೆ ಚಿತ್ರ ಎಪ್ರಿಲ್ ೧೦ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ರವಿ ಶ್ರೀವತ್ಸ್ ಹೇಳಿದರು. ಬಾಗಲಕೋ ಜಿಲ್ಲೆಯ ಇಳಕಲ್ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಭಾಷೆಯಲ್ಲಿ ಮತ್ತು ಉತ್ತರಕರ್ನಾಟಕ ಕಲಾವಿದರನ್ನು ಬಳಿಸಿಕೊಂಡು ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದಲ್ಲಿಯೇ ಚಿತ್ರೀಕರಣಗೊಂಡಿರುವ ಗ್ಯಾಗ್ಸ್ ಆಫ್ ಯುಕೆ ಚಿತ್ರವನ್ನು ಮಾಡಲಾಗಿದ್ದು. ಎಲ್ಲಾ ಉತ್ತರ ಕರ್ನಾಟಕ ಜನರು ಚಿತ್ರವನ್ನು ಯಶಸ್ವಿಗೊಳಿಸಬೇಕುಎಂದು ಮನವಿಮಾಡಿದರು.1
- ಡೆಡ್ಲಿ ಆರ್ಟ್ಸ್ ಬ್ಯಾನರಡಿಯಲ್ಲಿ ಡೆಡ್ಡಿ, ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ನಿರ್ಮಾಣ ಮತ್ತು ನಿರ್ದೇಶನದ 'ಗ್ಯಾಂಗ್ಸ್ ಆಫ್ ಯುಕೆ ' ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ರವಿ ಶ್ರೀವತ್ಸ ಹೇಳಿದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರವು ಬಾಗಲಕೋಟ, ಹರಕಲ್, ಶಿರೂರ, ಹುನಗುಂದ, ಇಳಕಲ್ಲ ಸುತ್ತಮುತ್ತ, ಬೆಂಗಳೂರನಲ್ಲಿ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಂತ ಶಿಶುನಾಳ ಶರೀಫರ ಗೀತೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ರಕ್ತಕ್ಕೆ ರಕ್ತವೇ ಮಜ್ಜನ, ಜಿದ್ದು ಒಬ್ಬರಿಂದ ಒಬ್ಬರಿಗೆ ಹೇಗೆ ವರ್ಗಾಯಿಸಿಕೊಂಡು ಹೋಗುತ್ತದೆ ಎನ್ನುವ ವಿಷಯ ಈ ಚಿತ್ರದಲ್ಲಿದೆ, ತಾರಾಗಣದಲ್ಲಿ ಒರಟ ಪ್ರಶಾಂತ್, ಕಿಂಗ್ ಮುನಿ, ಸೋನು ಉಪಾಧ್ಯ, ಪೃಥ್ವಿ ಸುಬ್ಬಯ್ಯ, ಕೆ.ಆರ್ ಅಮೋಘ, ಸತ್ಯ, ಕೋಟೆ ಪ್ರಭಾಕರ, ಬಿ.ನವೀನ ಕೃಷ್ಣ, ಜೋತಿಷ್ ಶೆಟ್ಟಿ, ಪದ್ಮವಾಸಂತಿ, ಉಗ್ರಂ ರಡ್ಡಿ, ವಿಕಾಸ ಮದಕರಿ, ಕಿರಣ, ದಿಲ್ಲನ್ ಚೆಂಗಪ್ಪ ಗಜೇಂದ್ರಗಡ, ಮಹಾಂತೇಶ ಹಳ್ಳೂರ, ಅಮ್ಮತ್ ಹಿರಣ್ಯ, ಗುರುರಾಜ ಗೌಡ, ನಂಜು ಸಿದ್ದಪ್ಪ, ರಮೇಶ ಮದಗುಂದ, ಸಕ್ಕರೆನಾಡು ಉಮೇಶ್ ಠಂಕಸಾಲಿ ಉಮೇಶ್ ಅಲ್ಲದೆ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರನ್ನೂ ಇದರಲ್ಲಿ ಬಳಸಿಕೊಳ್ಳಲಾಗಿದೆ ಎಂದರು. ತಾಂತ್ರಿಕ ವರ್ಗದಲ್ಲಿ - ಛಾಯಾಗ್ರಹಣ ಆರ್.ಗಿರಿ, ಸಂಭಾಷಣೆ ಎಂ.ಎಸ್.ರಮೇಶ, ಸಂಗೀತ ಸುಕುಮಾರ, ಸಂಕಲನ ಎಲ್.ಎನ್.ರೆಡ್ಡಿ, ಸಾಹಸ ಥಿಲ್ಲರ್ ಮಂಜು, ಪ್ರಸಾಧನ ರಾಜೇಶ್, ವಸ್ತ್ರವಿನ್ಯಾಸ ಪುಟ್ಟರಾಜು, ಡಬ್ಬಿಂಗ್ ಆನಂದ, ಎಫೆಕ್ಸ್ ಸೇತು, ಪಿಆರ್ ಓ ನಾಗೇಂದ್ರ, ಡಾ.ಪುಭು ಗಂಜಿಹಾಳ,ಡಾ.ವೀರೇಶ, ಸಹಾಯಕ ನಿರ್ದೇಶನ ರಾವಣ ಅವರದಿದ್ದು, ಡಡ್ಡಿ ಸೋಮ್, ಮಾದೇಶ ಚಲನಚಿತ್ರಗಳ ಖ್ಯಾತಿಯ ನಿರ್ದೇಶಕ ರವಿಶ್ರೀವತ್ಸ ಅವರ ನಿರ್ದೇಶನ ಚಿತ್ರಕ್ಕಿದ್ದು, ನಿರ್ಮಾಪಕರು ರಂಗನಾಥ ರವೀಂದ್ರನಾಥ, ಲಕ್ಷ್ಮೀ ನಾರಾಯಣ ರೆಡ್ಡಿ ಆಗಿದ್ದಾರೆ. 'ಗ್ಯಾಂಗ್ಸ್ ಆಫ್ ಯುಕೆ' ಚಿತ್ರದ ಟೀಸರ್ ಈಗ ಯೂಟ್ಯೂಬ್ ದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಈ ಚಿತ್ರವನ್ನು ಕರ್ನಾಟಕದ ಜನತೆ ಖಂಡಿತ ಗೆಲ್ಲಿಸುತ್ತಾರೆ ಎಂದು ಭರವಸೆ ಇಟ್ಟುಕೊಂಡಿರುವದಾಗಿ ನಿರ್ದೇಶಕ ರವಿಶ್ರೀವತ್ಸ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಹಾಂತೇಶ್ ಹಳ್ಳೂರ್ ಉಮೇಶ ಟೆಂಕಸಾಲಿ ಮಹಂತೇಶ ಗಜೇಂದ್ರಗಡ ಡಗಲಚಂದ ಪವಾರ ಇದ್ದರು.3
- ಮದ್ಯೇಬಿಹಾಳದ.. ಇಂದಿರಾ ನಗರ ದಲ್ಲಿ ಆಂಜನೇಯ ಜಾತ್ರಾ ಜಯಂತೋತ್ಸವ ಅಂಗವಾಗಿ 2 .4 2026 ರಿಂದ ವಿಜೃಮಣಿಯಿಂದ ನಡೆಯಲ್ಲಿದೆ ಗುರುವಾರ ಪಿಲೇಕಮ್ಮ ದೇವಸ್ತಾನದಿಂದ ಕಂಭ ಮೇಳ ನಡೆಯಲಿದೆ ಅಂದೆ ಆಂಜನೇಯದಲ್ಲಿ ಅನ್ನ ಪ್ರಸಾದ ಇರಲಿದೆ ಅಂಜನೇಯ ಅಬಿಷೇಕ ನಡೆಯಲ್ಲಿ ಮತ್ತು ಗೋಪಾಲ ಹೋಗಾರ ಹಾಗು ಗೋಪಾಲ ಇಂಚಗೇರಿ ಇವರ ನೇತೃತ್ವದಲ್ಲಿ 10 30 ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ದೇವಸ್ತಾನ ಅಧ್ಯಕ್ಷ ರಾಮು ದಳವಾಯಿ ಉಪದ್ಯಾಕ್ಷರು ಸಿದ್ದು ತಳ್ಳಹಳ್ಳಿ ಹಾಗು ಮಾಜಿ ಅಧ್ಯಕ್ಷ ಶಿವು ಶಿವಪೂರ ಬಸವರಾಜ ಗುಂಡಕರ್ಚಿಗಿ ತಿಳಿಸಿದ್ದರು1
- Post by @april14news1
- Post by Anand malled1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1