Shuru
Apke Nagar Ki App…
ದೇವನಹಳ್ಳಿಯಲ್ಲಿ ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಬೆಂಗಳೂರು:ಕೋಲಾರ ಶಾಸಕರಿಗೆ ಮಂತ್ರಿಸ್ಥಾನ ಸಿಗದಿದಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಮೇಲೆ ಶಾಸಕರು ಆರೋಪ ಮಾಡಿದ್ದಾರೆ.ನಮಗೆ ಮಂತ್ರಿಸ್ಥಾನ ಸಿಗದೆ ಇರಲು ನಮ್ಮ ಮಾಜಿ ಸಂಸದ ಪಾತ್ರ ಇದೆ ಎಂದು ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಕೊಟ್ಟಿದ್ದಾರೆ.ಅವರು ನನ್ನ ಬಂದು ಕೇಳಿಲ್ಲ, ಒಂದು ವೇಳೆ ಕೇಳಿದ್ರೆ ಹೈಕಮಾಂಡ್ ಬಳಿ ಮಾತಾಡ್ತಿದ್ದೆ,ಮುಖ್ಯಮಂತ್ರಿಗಳ ಬಳಿ, ಸಿದ್ರಾಮಣ್ಣ ಬಳಿ, ಹರಿಪ್ರಸಾದ್ ಬಳಿ ಹೇಳಬಹುದಾಗಿತ್ತು.ಯಾಕೆ ಅವ್ರು ಈಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಕೇಳಿದ್ರೆ ನನ್ನ ಕರ್ತವ್ಯವಿತ್ತು,ನಾನು ಅವರನ್ನೆಲ್ಲಾ ಕರ್ಕೊಂಡು ಹೋಗಿ ಸೀನಿಯರ್ಸ್ ಇದ್ದಾರೆ, ಕೆಲಸ ಮಾಡಿದ್ದಾರೆ, ಕೊಡ್ಬೇಕು ಅಂತ ಒತ್ತಾಯ ಮಾಡ್ತಿದ್ದೆ,ಅವರ ಹತ್ತಿರ ಮಾತಾಡ್ತೀನಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಡಿಸಿ ಆಫೀಸ್ ಬಳಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿ ಹೊರಟರು.
ಶಿವನಿ
ದೇವನಹಳ್ಳಿಯಲ್ಲಿ ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಬೆಂಗಳೂರು:ಕೋಲಾರ ಶಾಸಕರಿಗೆ ಮಂತ್ರಿಸ್ಥಾನ ಸಿಗದಿದಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಮೇಲೆ ಶಾಸಕರು ಆರೋಪ ಮಾಡಿದ್ದಾರೆ.ನಮಗೆ ಮಂತ್ರಿಸ್ಥಾನ ಸಿಗದೆ ಇರಲು ನಮ್ಮ ಮಾಜಿ ಸಂಸದ ಪಾತ್ರ ಇದೆ ಎಂದು ಕೋಲಾರದ ಶಾಸಕರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಿರುಗೇಟು ಕೊಟ್ಟಿದ್ದಾರೆ.ಅವರು ನನ್ನ ಬಂದು ಕೇಳಿಲ್ಲ, ಒಂದು ವೇಳೆ ಕೇಳಿದ್ರೆ ಹೈಕಮಾಂಡ್ ಬಳಿ ಮಾತಾಡ್ತಿದ್ದೆ,ಮುಖ್ಯಮಂತ್ರಿಗಳ ಬಳಿ, ಸಿದ್ರಾಮಣ್ಣ ಬಳಿ, ಹರಿಪ್ರಸಾದ್ ಬಳಿ ಹೇಳಬಹುದಾಗಿತ್ತು.ಯಾಕೆ ಅವ್ರು ಈಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಕೇಳಿದ್ರೆ ನನ್ನ ಕರ್ತವ್ಯವಿತ್ತು,ನಾನು ಅವರನ್ನೆಲ್ಲಾ ಕರ್ಕೊಂಡು ಹೋಗಿ ಸೀನಿಯರ್ಸ್ ಇದ್ದಾರೆ, ಕೆಲಸ ಮಾಡಿದ್ದಾರೆ, ಕೊಡ್ಬೇಕು ಅಂತ ಒತ್ತಾಯ ಮಾಡ್ತಿದ್ದೆ,ಅವರ ಹತ್ತಿರ ಮಾತಾಡ್ತೀನಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಡಿಸಿ ಆಫೀಸ್ ಬಳಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿ ಹೊರಟರು.
More news from ಕರ್ನಾಟಕ and nearby areas
- ಕಾಂಪೌಂಡ್ ಇಂದ ಹೊರಗಡೆ ಇರುವುದು ಎಲ್ಲಾ ಬೆಸ್ಕಾಂ ಸಿಬ್ಬಂದಿಗಳಿಗೆ ಸಂಬಂಧಿಸಿರೋದು ಎಂದ ಕೆಪಿಟಿಸಿಎಲ್ ಕಾಂಪೌಂಡ್ ಇಂದ ಹೊರಗಡೆ ಇರುವುದು ಎಲ್ಲಾ ಬೆಸ್ಕಾಂ ಸಿಬ್ಬಂದಿಗಳಿಗೆ ಸಂಬಂಧಿಸಿರೋದು ಎಂದ ಕೆಪಿಟಿಸಿಎಲ್1
- ಪಕ್ಷದ ಹೈಕಮಾಂಡ್ ನೀಡಿದ್ದ ಭರವಸೆಯನ್ನು ನೆನಪಿಸಿಕೊಂಡ ಈ.ತುಕಾರಾಂ! ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಈ.ತುಕಾರಾಂ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಪಕ್ಷದ ಹೈಕಮಾಂಡ್ ನೀಡಿದ್ದ ಭರವಸೆಯನ್ನು ನೆನಪಿಸಿಕೊಂಡ ಅವರು,ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಉಂಟಾಗಿರುವ ಅಸಮಾಧಾನ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. #ETukaram #KarnatakaPolitics #Congress #CabinetExpansion #HighCommand #MinisterPost #PoliticalNews #BreakingNews #KarnatakaNews #ASNNews24Kannada #BallariNews #Siddaramaiah #DKShivakumar #TrendingNews #KannadaNewsLive1
- *ವರುಣನ ಆರ್ಭಟ : ಶುಚಿಗೊಂಡ ಲಕ್ಷ್ಮೀಸಾಗರದ ಶ್ರೀ ಚಾಮುಂಡೇಶ್ವರಿ ದೇವಾಲಯ* ಕೋಲಾರ:ಅನಾದಿಕಾಲದಿಂದಲೂ ಪ್ರತಿವರ್ಷವೂ ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಜನ್ಮದಿನೋತ್ಸವದ ಮರುದಿನ ವರುಣನ ಕೃಪೆಯಿಂದ ಮಳೆ ಸುರಿದು ದೇವಾಲಯ ಸುತ್ತಲೂ ಸ್ವಚ್ಛ ಗೊಳಿಸುವ ಕೆಲಸ ಆಗುತ್ತದೆ ಎಂದು ದೇವಾಲಯದ ಧರ್ಮಾಧಿಕಾರಿಗಳಾದ ಚಂದ್ರು ತಿಳಿಸಿದ್ದಾರೆ. ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ದೇವಾಲಯದ ಸುತ್ತಲೂ ಕಸ ಕಡ್ಡಿ,ಊಟ ತಿಂದ ಗಲೀಜು,ಊಟದ ತಟ್ಟೆಗಳಿಂದ ಮೈಲಿಗೆ ಆಗುತ್ತದೆ ಆದರೆ ದೇವಿಯ ಕೃಪೆಯಿಂದ ವರುಣ ದೇವರ ಆಶೀರ್ವಾದದಿಂದ ಪ್ರತಿ ವರ್ಷ ಯಾರಿಗೂ ಕಷ್ಟ ಆಗದಂತೆ ತನ್ನ ದೇವಾಲಯ ಸುಚಿಗೊಳಿಸುವ ಕೆಲಸವನ್ನು ಆ ಮಹಾತಾಯಿ ಚಾಮುಂಡೇಶ್ವರಿ ಮಾಡುತ್ತಾಳೆ ಎಂದು ವಿವರಿಸಿದರು.2
- 🔴 ಶಿಡ್ಲಘಟ್ಟದಲ್ಲಿ ಜಾಂಭವ ಯುವ ಸೇನೆಯ ಬೃಹತ್ ಪ್ರತಿಭಟನೆ ಶಿಡ್ಲಘಟ್ಟ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಾಂಭವ ಯುವ ಸೇನೆಯ ವತಿಯಿಂದ ಶಿಡ್ಲಘಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶಿಡ್ಲಘಟ್ಟ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಾಂಭವ ಯುವ ಸೇನೆಯ ವತಿಯಿಂದ ಶಿಡ್ಲಘಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪರಿವೀಕ್ಷಣಾ ಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜಾಂಭವ ಯುವ ಸೇನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ.ರಮೇಶ್ ಚಕ್ರವರ್ತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಮುದಾಯ ಭವನ ನಿರ್ಮಾಣ, ಸ್ಮಶಾನ ಭೂಮಿ ಮಂಜೂರು, 94ಸಿ ಅಡಿಯಲ್ಲಿ ಹಕ್ಕುಪತ್ರಗಳ ವಿತರಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಚಕ್ರವರ್ತಿ ಅವರು, ತಾಲೂಕಿನ ಹಲವು ಸಮುದಾಯಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ, ದಲಿತರ ಜಮೀನುಗಳಿಗೆ ಸಂಬಂಧಿಸಿದ ಅಕ್ರಮ ಕಬಳಿಕೆ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮುಂದಿನ 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ಹಂತದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ ಅವರು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು. ನಂತರ ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಗಗನ್ ಸಿಂಧು ಅವರು, ಬೇಡಿಕೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಾಂಭವ ಯುವ ಸೇನೆಯ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಗೌರವ ಅಧ್ಯಕ್ಷ ಕಾಚಹಳ್ಳಿ ಮುನಿಯಪ್ಪ, ಶಿಡ್ಲಘಟ್ಟ ನಗರ ಅಧ್ಯಕ್ಷ ನರೇಂದ್ರ, ಕಾರ್ಮಿಕ ಘಟಕದ ಅಧ್ಯಕ್ಷ ದೇವಪ್ಪ, ತಾಲೂಕು ಗೌರವ ಅಧ್ಯಕ್ಷ ಸತೀಶ್, ಡಿ. ಕುಮಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. 15 ದಿನಗಳ ಗಡುವು ನೀಡಿರುವ ಜಾಂಭವ ಯುವ ಸೇನೆಯ ಮುಂದಿನ ನಡೆ ಏನು ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇದು ನಿಮ್ಮ – ಜನಪರ ಸುದ್ದಿ. ಸುದ್ದಿಗಳಿಗಾಗಿ ನಮ್ಮ ಚಾನೆಲ್ನ್ನು ಸಬ್ಸ್ಕ್ರೈಬ್ ಮಾಡಿ, ವಿಡಿಯೋವನ್ನು ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.1
- ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ನಾಳೆ ಬಂಗಾರಪೇಟೆ ಬಂದ್ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿಯೇ ಇಡೀ ಕ್ಷೇತ್ರದ ಜನತೆ ತೀವ್ರವಾಗಿ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ವಿರುದ್ಧವಾಗಿ ಕ್ಷೇತ್ರದ ವಿವಿಧ ದಲಿತ ಸಂಘಟನೆಗಳ, ರೈತ ಸಂಘ, ವರ್ತಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಆ. 6 ರಂದು ಗುರುವಾರ ಬಂಗಾರಪೇಟೆ ಬಂದ್ ಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿದ ಅವರು, ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರಿಗೆ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಆಕೊ??ಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಡೆ ಬಂಗಾರಪೇಟೆ ಬಂದ್ ಮಾಡಲು ಮುಖಂಡರು ಅಭಿ ಮಾನಿಗಳು ಸರ್ವಾನುಮತದಿಂದ ನಿರ್ಧಾರ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಉತ್ತಮ ನಿರ್ಧಾರ ಕೈಗೊಳ್ಳಲು ಆಗ್ರಹಿಸಲು ಬಂಗಾರಪೇಟೆ ಬಂದ್ ಮಾಡಲಾಗುತ್ತಿದೆ ಎಂದರು.1
- ಕುಣಿಗಲ್ :ತಾಲೂಕು ಜೋಡಿ ಹೊಸಹಳ್ಳಿ ಗ್ರಾಮದ ಲಕ್ಷ್ಮೀ ದೇವರ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಮಾಗಡಿ ವಿಧಾನ ಸಭಾಕ್ಷೇತ್ರ ಹೆಚ್ ಸಿ ಬಾಲಕೃಷ್ಣ ಮತ್ತು ಕುಣಿಗಲ್ ವಿಧಾನ ಸಭಾ ಕ್ಷೇತ್ರ ಹೆಚ್. ಡಿ. ರಂಗನಾಥ್ ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಜೋಡಿ ಹೊಸಹಳ್ಳಿ ಗ್ರಾಮದ ಲಕ್ಷ್ಮೀ ದೇವರ ದೇವಾಲಯಕ್ಕೆ ಭೇಟಿ ನೀಡಿ ಅವರು ಲಿಂಕ್ ಕೆನಾಲ್ ಕಾಮಗಾರಿ ಮಾಡೇ ಮಾಡ್ತೀವಿ ಎಂದು ಹೇಳಿದರು1
- ನೀವೆ 300 ರೂಪಾಯಿ ತಗೊಂಡು ಕಾರ್ಪೊರೇಷನ್ ಅಗ್ರಿಮೆಂಟ್ ಮಾಡ್ಕೊಟ್ರಿ ನೀವೆ 300 ರೂಪಾಯಿ ತಗೊಂಡು ಕಾರ್ಪೊರೇಷನ್ ಅಗ್ರಿಮೆಂಟ್ ಮಾಡ್ಕೊಟ್ರಿ1
- ನೆಲಮಂಗಲದಲ್ಲಿ ಬಿಕ್ಷುಕನಿಗೆ ಕಾಲಿನಲ್ಲಿ ಒದ್ದು ದರ್ಪ ತೋರಿದ ಬಿಎಂಟಿಸಿ ಕಂಡಕ್ಟರ್ ಬೆಂಗಳೂರು:ಬಿಕ್ಷುಕನಿಗೆ ಕಾಲಿನಲ್ಲಿ ಒದ್ದು ಬಿಎಂಟಿಸಿ ಕಂಡಕ್ಟರ್ ದರ್ಪ ತೋರಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆ KSRTC ಡಿಪೋ ಬಳಿ ನಡೆದಿದೆ,ಬಸ್ ಹತ್ತಲು ಹೋಗಿದ್ದ ಬಿಕ್ಷುಕನನ್ನ ಕಾಲಿನಿಂದ ಒದ್ದು ಧೋರಣೆ ತೋರಿರುವ ದೃಶ್ಯ ಬೈಕ್ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ,ಘಟನೆ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು,ಕಂಡಕ್ಟರ್ ದರ್ಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ..1