Shuru
Apke Nagar Ki App…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ವಿಶೇಷವಾದ ಹೆಲ್ಮೆಟ್ ಗಣಪತಿ ಮೂರ್ತಿ ವಿಸರ್ಜನೆ ಬೆಂಗಳೂರು:ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ಇಟ್ಟಿದ್ದ ವಿಶೇಷ ಹೆಲ್ಮೆಟ್ ಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ.ಇತ್ತಿಚೆಗೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರರ ಮರಣದ ಪ್ರಮಾಣ ಹೆಚ್ಚಳ ಹಿನ್ನೆಲೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಹೆಲ್ಮೆಟ್ ಗಣಪತಿ ಯುವಕರು ಕೂರಿಸಿದ್ದರು.ಲಕ್ಕಿ ವಿನಾಯಕ ಗೆಳೆಯರ ಬಳಗದಿಂದ ತಾಯಿ ಗೌರಮ್ಮ ಮಗ ಗಣಪನಿಗೆ ಹೆಲ್ಮೆಟ್ ನೀಡುವ ಮಾದರಿ ಗಣೇಶನ ಕೂರಿಸಿ ಜಾಗೃತಿ ಮೂಡಿಸಲಾಗಿದ್ದು,ವಿಸರ್ಜನೆಗೆ ಮುನ್ನ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಘೋಷಣೆ ಕೂಗಿ ಯುವಕರು ಗಣೇಶನನ್ನ ವಿಸರ್ಜನೆ ಮಾಡಿದರು.
ಶಿವನಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ವಿಶೇಷವಾದ ಹೆಲ್ಮೆಟ್ ಗಣಪತಿ ಮೂರ್ತಿ ವಿಸರ್ಜನೆ ಬೆಂಗಳೂರು:ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ಇಟ್ಟಿದ್ದ ವಿಶೇಷ ಹೆಲ್ಮೆಟ್ ಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ.ಇತ್ತಿಚೆಗೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರರ ಮರಣದ ಪ್ರಮಾಣ ಹೆಚ್ಚಳ ಹಿನ್ನೆಲೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಹೆಲ್ಮೆಟ್ ಗಣಪತಿ ಯುವಕರು ಕೂರಿಸಿದ್ದರು.ಲಕ್ಕಿ ವಿನಾಯಕ ಗೆಳೆಯರ ಬಳಗದಿಂದ ತಾಯಿ ಗೌರಮ್ಮ ಮಗ ಗಣಪನಿಗೆ ಹೆಲ್ಮೆಟ್ ನೀಡುವ ಮಾದರಿ ಗಣೇಶನ ಕೂರಿಸಿ ಜಾಗೃತಿ ಮೂಡಿಸಲಾಗಿದ್ದು,ವಿಸರ್ಜನೆಗೆ ಮುನ್ನ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಘೋಷಣೆ ಕೂಗಿ ಯುವಕರು ಗಣೇಶನನ್ನ ವಿಸರ್ಜನೆ ಮಾಡಿದರು.
More news from ಕರ್ನಾಟಕ and nearby areas
- ಭಟ್ಕಳದಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿ, ಮದರಸಾಗೆ ಕಲ್ಲು ತೂರಾಟ ಕಿಟಕಿ ಗಾಜುಗಳಿಗೆ ಹಾನಿ; ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಭಟ್ಕಳದಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿ, ಮದರಸಾಗೆ ಕಲ್ಲು ತೂರಾಟ ಕಿಟಕಿ ಗಾಜುಗಳಿಗೆ ಹಾನಿ; ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್1
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ವಿಶೇಷವಾದ ಹೆಲ್ಮೆಟ್ ಗಣಪತಿ ಮೂರ್ತಿ ವಿಸರ್ಜನೆ ಬೆಂಗಳೂರು:ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ಇಟ್ಟಿದ್ದ ವಿಶೇಷ ಹೆಲ್ಮೆಟ್ ಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ.ಇತ್ತಿಚೆಗೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರರ ಮರಣದ ಪ್ರಮಾಣ ಹೆಚ್ಚಳ ಹಿನ್ನೆಲೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಹೆಲ್ಮೆಟ್ ಗಣಪತಿ ಯುವಕರು ಕೂರಿಸಿದ್ದರು.ಲಕ್ಕಿ ವಿನಾಯಕ ಗೆಳೆಯರ ಬಳಗದಿಂದ ತಾಯಿ ಗೌರಮ್ಮ ಮಗ ಗಣಪನಿಗೆ ಹೆಲ್ಮೆಟ್ ನೀಡುವ ಮಾದರಿ ಗಣೇಶನ ಕೂರಿಸಿ ಜಾಗೃತಿ ಮೂಡಿಸಲಾಗಿದ್ದು,ವಿಸರ್ಜನೆಗೆ ಮುನ್ನ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಘೋಷಣೆ ಕೂಗಿ ಯುವಕರು ಗಣೇಶನನ್ನ ವಿಸರ್ಜನೆ ಮಾಡಿದರು.1
- ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ: ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಎಚ್.ವಿ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆದರ್ಶ್ ಹಾಗೂ ಖಜಾಂಚಿ ಪಿ. ಗಾಯಿತ್ರಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಅಂಬರೀಶ್, ಭಗತ್ವರ್ಮ, ಜಿ.ಕೆ. ಲೋಕೇಶ್, ಲೋಕೇಶ್ ಗೌಡ, ಕೆ. ಮಂಜುನಾಥ್ ಹಾಗೂ ಎಂ. ಸತೀಶ್ ಉಪಸ್ಥಿತರಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕನ್ನಡ ಭವನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. 2. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್ಜಿ ತರಕಾರಿ ವ್ಯಾಪಾರಿಗಳ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೆಎನ್ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಸಂತೋಷ್ ಕುಮಾರ್ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಗಳ ಕಾಲ ಆಚರಿಸಿ ಮುಕ್ತಾಯಗೊಳಿಸಲಾಗಿದೆ. ಮಳೆ, ಉತ್ತಮ ಬೆಳೆ, ಸಮೃದ್ಧಿ ಹಾಗೂ ಶಾಂತಿಗಾಗಿ ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಎಪಿಎಂಸಿ ಮುಖಂಡ ಪುಟ್ಟರಾಜು ಮಾತನಾಡಿ, ನಾಡು ಬರದ ಬೇಗೆಗೆ ಸಿಲುಕಿದ್ದು ರೈತರು ಹಾಗೂ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆಯಾಗಿ ನಾಡು ಹಸಿರು ತೊಟ್ಟು, ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ, ಮಂಜುನಾಥರೆಡ್ಡಿ, ಶಿವಾನಂದ, ಕೆ. ಅಮರೇಶ್ ಹಾಗೂ ರೆಡ್ಡೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ: ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಎಚ್.ವಿ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆದರ್ಶ್ ಹಾಗೂ ಖಜಾಂಚಿ ಪಿ. ಗಾಯಿತ್ರಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಅಂಬರೀಶ್, ಭಗತ್ವರ್ಮ, ಜಿ.ಕೆ. ಲೋಕೇಶ್, ಲೋಕೇಶ್ ಗೌಡ, ಕೆ. ಮಂಜುನಾಥ್ ಹಾಗೂ ಎಂ. ಸತೀಶ್ ಉಪಸ್ಥಿತರಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕನ್ನಡ ಭವನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. 2. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್ಜಿ ತರಕಾರಿ ವ್ಯಾಪಾರಿಗಳ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೆಎನ್ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಸಂತೋಷ್ ಕುಮಾರ್ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಗಳ ಕಾಲ ಆಚರಿಸಿ ಮುಕ್ತಾಯಗೊಳಿಸಲಾಗಿದೆ. ಮಳೆ, ಉತ್ತಮ ಬೆಳೆ, ಸಮೃದ್ಧಿ ಹಾಗೂ ಶಾಂತಿಗಾಗಿ ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಎಪಿಎಂಸಿ ಮುಖಂಡ ಪುಟ್ಟರಾಜು ಮಾತನಾಡಿ, ನಾಡು ಬರದ ಬೇಗೆಗೆ ಸಿಲುಕಿದ್ದು ರೈತರು ಹಾಗೂ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆಯಾಗಿ ನಾಡು ಹಸಿರು ತೊಟ್ಟು, ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ, ಮಂಜುನಾಥರೆಡ್ಡಿ, ಶಿವಾನಂದ, ಕೆ. ಅಮರೇಶ್ ಹಾಗೂ ರೆಡ್ಡೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- * ಟಮಕ ಕೈಗಾರಿಕಾ ಪ್ರದೇಶದಲ್ಲಿ ಮಳೆ ಸೃಷ್ಟಿಸಿದ ಅವಾಂತರ : ಕಾರ್ಖಾನೆಗಳಿಗೆ ನುಗ್ಗಿದ ಮಳೆ ನೀರು: ಸಮರ್ಪಕ ನೀರು ಹರಿಯಲು ಮೋರಿ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ * ಕೋಲಾರ : ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತವಾದ ಮೋರಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಹಲವು ಕಾರ್ಖಾನೆಗಳ ಆವರಣಕ್ಕೆ ನೀರು ನುಗ್ಗಿರುವ ಘಟನೆ ವರದಿಯಾಗಿದೆ. ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೈಗಾರಿಕಾ ಘಟಕಗಳು, ರಸ್ತೆಗಳು ಹಾಗೂ ಕಾರ್ಖಾನೆಗಳ ಆವರಣಗಳಲ್ಲಿ ನೀರು ನಿಂತು, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಕೈಗಾರಿಕಾ ಘಟಕಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗ ಇದೇ ರೀತಿಯ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಕೋಲಾರ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಮೋರಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಕೈಗಾರಿಕಾ ಪ್ರದೇಶದ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಮಳೆ ನೀರು ಕಾರ್ಖಾನೆಗಳ ಒಳಗೆ ನುಗ್ಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಮೂಲ ಭೂತಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.2
- *ವಿನೋಬಾ ಕಾಲೋನಿಯಲ್ಲಿ ಭಕ್ತಿ-ಉತ್ಸಾಹದ ಗಣೇಶೋತ್ಸವ;31 ಕೆ.ಜಿ.ಮಹಾ ಲಡ್ಡು ₹50 ಸಾವಿರಕ್ಕೆ ಹರಾಜು!* *ಭಾರಿ ಪೈಪೋಟಿಯ ನಡುವೆ 50 ಸಾವಿರ ರೂಪಾಯಿಗೆ ಗಣಪತಿಯ ಮಹಾ ಲಡ್ಡು ಪಡೆದ ಕೆ.ಎಸ್.ಕೃಷ್ಣ* ಚಿಂತಾಮಣಿ:ನಗರದ 13ನೇ ವಾರ್ಡಿನ ವಿನೋಬಾ ಕಾಲೋನಿಯಲ್ಲಿ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶ ಮೂರ್ತಿಯ ಸನ್ನಿಧಿಯಲ್ಲಿ ಭಕ್ತಿ-ಉತ್ಸಾಹಗಳ ನಡುವೆ ವಿಶೇಷ 31 ಕೆ.ಜಿ.ತೂಕದ ಮಹಾ ಲಡ್ಡು ಹರಾಜು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಶ್ರೀ ಗಣೇಶೋತ್ಸವದ ಅಂಗವಾಗಿ ಯುವಕರ ಬಳಗವು ಆಯೋಜಿಸಿದ್ದ ಈ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಹಾಗೂ ಗಣೇಶ ಭಕ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. 31 ಕೆ.ಜಿ. ತೂಕದ ಪ್ರಸಾದದ ಲಡ್ಡನ್ನು ವಿಶೇಷವಾಗಿ ಸಿದ್ಧಪಡಿಸಿ ಪೂಜೆ ಸಲ್ಲಿಸಲಾಗಿತ್ತು.ಹರಾಜಿನಲ್ಲಿ ಭಕ್ತರು ಪೈಪೋಟಿಯಿಂದ ಬಿಡ್ ಸಲ್ಲಿಸಿದರು.ಪೈಪೋಟಿಯ ನಡುವೆ ಕೆ.ಎಸ್.ಕೃಷ್ಣ ಅವರು ₹50 ಸಾವಿರ ಗೆ ಲಡ್ಡನ್ನು ತಮ್ಮದಾಗಿಸಿಕೊಂಡರು.ಲಡ್ಡು ಹರಾಜಿನಲ್ಲಿ ಗೆದ್ದ ಕೆ.ಎಸ್. ಕೃಷ್ಣ ಅವರಿಗೆ ಯುವಕರ ಬಳಗದ ವತಿಯಿಂದ ಶಾಲ ಹೊದಿಸಿ,ಮಲಾಯಿ ಹಾಕಿ ಅತ್ಯಂತ ವಿಜೃಂಭಣೆಯಿಂದ ಗೌರವಿಸಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯುವಕರ ಬಳಗದ ಪದಾಧಿಕಾರಿಗಳು ವಿನಾಯಕನ ಕೃಪೆ ಕಾಲೋನಿಯ ಹಾಗೂ ನಗರದ ಎಲ್ಲಾ ಸಾರ್ವಜನಿಕರ ಮೇಲಿರಲಿ.ಪ್ರಸಾದದ ರೂಪದ ಈ ಮಹಾ ಲಡ್ಡು ಪಡೆದ ಕೃಷ್ಣ ಅವರ ಕುಟುಂಬಕ್ಕೆ ಆ ಭಗವಂತ ಸಕಲ ಐಶ್ವರ್ಯ ಹಾಗೂ ಆರೋಗ್ಯ ಕರುಣಿಸಲಿ" ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ವಿನೋಬಾ ಕಾಲೋನಿಯ ಹಿರಿಯರಾದ ನಂಜುಂಡಪ್ಪ,ಚಂದ್ರಪ್ಪ,ರಂಗಪ್ಪ ಸುಬ್ರಮಣ್ಯಪ್ಪ,ಕ್ಲಬ್ ರಾಮಾಂಜಿ,ಜಿ ಕೆ ಕದಿರಪ್ಪ,ಬೀಡಾ ಶ್ರೀನಿವಾಸ್,ಎಂ ವಿ ವೆಂಕಟೇಶ್,ಪಿ ವಿ ರವಿ,ಶಂಕರ್, ಸಂತೋಷ್,ರಾಜು,ಮೂರ್ತಿ, ಸುನೀಲ್,ಎಸ್ ಎಂ ವೆಂಕಟೇಶ್, ಶ್ರೀಕಾಂತ್,ರಾಹುಲ್,ನವೀನ,ಕೀರ್ತಿ ಮಹೇಶ್,ಸ್ಲೋ ಸಂತೋಷ್,ಧೋನಿ,ಪವನ್,ಚಿನ್ನ,ವಿ ಜೆ ನಾಗ,ಸೇರಿದಂತೆ ಯುವಕರ ಬಳಗದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು. *ವಿನೋಬಾ ಕಾಲೋನಿಯಲ್ಲಿ ಭಕ್ತಿ-ಉತ್ಸಾಹದ ಗಣೇಶೋತ್ಸವ;31 ಕೆ.ಜಿ.ಮಹಾ ಲಡ್ಡು ₹50 ಸಾವಿರಕ್ಕೆ ಹರಾಜು!* *ಭಾರಿ ಪೈಪೋಟಿಯ ನಡುವೆ 50 ಸಾವಿರ ರೂಪಾಯಿಗೆ ಗಣಪತಿಯ ಮಹಾ ಲಡ್ಡು ಪಡೆದ ಕೆ.ಎಸ್.ಕೃಷ್ಣ* ಚಿಂತಾಮಣಿ:ನಗರದ 13ನೇ ವಾರ್ಡಿನ ವಿನೋಬಾ ಕಾಲೋನಿಯಲ್ಲಿ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶ ಮೂರ್ತಿಯ ಸನ್ನಿಧಿಯಲ್ಲಿ ಭಕ್ತಿ-ಉತ್ಸಾಹಗಳ ನಡುವೆ ವಿಶೇಷ 31 ಕೆ.ಜಿ.ತೂಕದ ಮಹಾ ಲಡ್ಡು ಹರಾಜು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಶ್ರೀ ಗಣೇಶೋತ್ಸವದ ಅಂಗವಾಗಿ ಯುವಕರ ಬಳಗವು ಆಯೋಜಿಸಿದ್ದ ಈ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಹಾಗೂ ಗಣೇಶ ಭಕ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. 31 ಕೆ.ಜಿ. ತೂಕದ ಪ್ರಸಾದದ ಲಡ್ಡನ್ನು ವಿಶೇಷವಾಗಿ ಸಿದ್ಧಪಡಿಸಿ ಪೂಜೆ ಸಲ್ಲಿಸಲಾಗಿತ್ತು.ಹರಾಜಿನಲ್ಲಿ ಭಕ್ತರು ಪೈಪೋಟಿಯಿಂದ ಬಿಡ್ ಸಲ್ಲಿಸಿದರು.ಪೈಪೋಟಿಯ ನಡುವೆ ಕೆ.ಎಸ್.ಕೃಷ್ಣ ಅವರು ₹50 ಸಾವಿರ ಗೆ ಲಡ್ಡನ್ನು ತಮ್ಮದಾಗಿಸಿಕೊಂಡರು.ಲಡ್ಡು ಹರಾಜಿನಲ್ಲಿ ಗೆದ್ದ ಕೆ.ಎಸ್. ಕೃಷ್ಣ ಅವರಿಗೆ ಯುವಕರ ಬಳಗದ ವತಿಯಿಂದ ಶಾಲ ಹೊದಿಸಿ,ಮಲಾಯಿ ಹಾಕಿ ಅತ್ಯಂತ ವಿಜೃಂಭಣೆಯಿಂದ ಗೌರವಿಸಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯುವಕರ ಬಳಗದ ಪದಾಧಿಕಾರಿಗಳು ವಿನಾಯಕನ ಕೃಪೆ ಕಾಲೋನಿಯ ಹಾಗೂ ನಗರದ ಎಲ್ಲಾ ಸಾರ್ವಜನಿಕರ ಮೇಲಿರಲಿ.ಪ್ರಸಾದದ ರೂಪದ ಈ ಮಹಾ ಲಡ್ಡು ಪಡೆದ ಕೃಷ್ಣ ಅವರ ಕುಟುಂಬಕ್ಕೆ ಆ ಭಗವಂತ ಸಕಲ ಐಶ್ವರ್ಯ ಹಾಗೂ ಆರೋಗ್ಯ ಕರುಣಿಸಲಿ" ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ವಿನೋಬಾ ಕಾಲೋನಿಯ ಹಿರಿಯರಾದ ನಂಜುಂಡಪ್ಪ,ಚಂದ್ರಪ್ಪ,ರಂಗಪ್ಪ ಸುಬ್ರಮಣ್ಯಪ್ಪ,ಕ್ಲಬ್ ರಾಮಾಂಜಿ,ಜಿ ಕೆ ಕದಿರಪ್ಪ,ಬೀಡಾ ಶ್ರೀನಿವಾಸ್,ಎಂ ವಿ ವೆಂಕಟೇಶ್,ಪಿ ವಿ ರವಿ,ಶಂಕರ್, ಸಂತೋಷ್,ರಾಜು,ಮೂರ್ತಿ, ಸುನೀಲ್,ಎಸ್ ಎಂ ವೆಂಕಟೇಶ್, ಶ್ರೀಕಾಂತ್,ರಾಹುಲ್,ನವೀನ,ಕೀರ್ತಿ ಮಹೇಶ್,ಸ್ಲೋ ಸಂತೋಷ್,ಧೋನಿ,ಪವನ್,ಚಿನ್ನ,ವಿ ಜೆ ನಾಗ,ಸೇರಿದಂತೆ ಯುವಕರ ಬಳಗದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.1
- KOLAR KI.AWAAZ KOUSAR NEWS1
- ಇಷ್ಟು ದಿನವಿಲ್ಲದ ನಿಮ್ಹಾನ್ಸ್ ಆಸ್ಪತ್ರೆ ವಿಚಾರ ಈಗ ಯಾಕೆ ಎಂಬ ಪ್ರಶ್ನೆಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಪ್ರತಿಕ್ರಿಯೆ1
- ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಯುವಕರು ಸತತ 4ನೇ ವರ್ಷವೂ ಭಾವೈಕ್ಯತೆಯ ಗಣೇಶೋತ್ಸವ ಆಚರಣೆ ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಯುವಕರು ಸತತ 4ನೇ ವರ್ಷವೂ ಭಾವೈಕ್ಯತೆಯ ಗಣೇಶೋತ್ಸವ ಆಚರಣೆ1
- ಮಾಜಿ ಕೈ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಟಾಕ್ ಫೈಟ್ ಬೆಂಗಳೂರು:ಮಾಜಿ ಕೈ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ನಡುವೆ ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಟಾಕ್ ವಾರ್ ನಡೆದಿದೆ.ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಷಣ ಮಾಡುವ ವಿಚಾರವಾಗಿ ಜಟಾಪಟಿ ನಡೆದಿದೆ.ನಾನು ಜನರಿಂದ ಆಯ್ಕೆಯಾದ ಪ್ರತಿನಿಧಿ, ನಾನು ಹೇಳಿದ ಹಾಗೆ ಕಾರ್ಯಕ್ರಮ ಆಗಬೇಕು,ಮೊದಲು ಶಾಸಕನಾಗಿ ನಾನು ಮಾತನಾಡಬೇಕು,ನೀವು ಹೇಳಿದ ಹಾಗೆ ಸಭೆ ಮಾಡಲು ಆಗೋದಿಲ್ಲ ಎಂದು ಶಾಸಕ ಧೀರಜ್ ಕಿಡಿಕಾರಿದ್ದಾರೆ.ಪ್ರೋಟೋಕಾಲ್ ಪ್ರಕಾರ ಅಧ್ಯಕ್ಷರ ಭಾಷಣ ಕೊನೆಯದಾಗಿರುತ್ತದೆ,ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು, ಪ್ರಾಧಿಕಾರದ ಅಧ್ಯಕ್ಷರು ಮೊದಲು ಮಾತನಾಡಬೇಕು,ನಂತರ ಶಾಸಕರಾದ ನೀವು ಕೊನೆಯದಾಗಿ ಅಧ್ಯಕ್ಷರ ಭಾಷಣ ಮಾಡಬೇಕು,ಹಾಗಾಗಿ ಕೊನೆ ಭಾಷಣ ನೀವು ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.ಇದರಿಂದ ಕೋಪಗೊಂಡ ಬಿಜೆಪಿ ಶಾಸಕ ಧೀರಜ್ ಮುನಿರಾಜು ಕೈ ನಾಯಕರ ಮೇಲೆ ಕಿಡಿಕಾರಿದ್ದಾರೆ.1