Shuru
Apke Nagar Ki App…
ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಮೇ ತಿಂಗಳು ಜೂನ್ ತಿಂಗಳಲ್ಲಿ ಜನರು ಹೊರಗೆ ಹೋಗಬಾರದು ಅವಶ್ಯ ಇದ್ರೆ ಮಾತ್ರ ಹೊರಗಡೆ ಹೋಗಬೇಕು ಡಾ ಶಸ್ತ್ರ ಚಿಕಿತ್ಸೆ ವೈದ್ಯರು ಹೇಳಿದ್ದಾರೆ
Sharanugouda Patil
ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಮೇ ತಿಂಗಳು ಜೂನ್ ತಿಂಗಳಲ್ಲಿ ಜನರು ಹೊರಗೆ ಹೋಗಬಾರದು ಅವಶ್ಯ ಇದ್ರೆ ಮಾತ್ರ ಹೊರಗಡೆ ಹೋಗಬೇಕು ಡಾ ಶಸ್ತ್ರ ಚಿಕಿತ್ಸೆ ವೈದ್ಯರು ಹೇಳಿದ್ದಾರೆ
More news from Vijayapura and nearby areas
- ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಮೇ ತಿಂಗಳು ಜೂನ್ ತಿಂಗಳಲ್ಲಿ ಜನರು ಹೊರಗೆ ಹೋಗಬಾರದು ಅವಶ್ಯ ಇದ್ರೆ ಮಾತ್ರ ಹೊರಗಡೆ ಹೋಗಬೇಕು ಡಾ ಶಸ್ತ್ರ ಚಿಕಿತ್ಸೆ ವೈದ್ಯರು ಹೇಳಿದ್ದಾರೆ1
- Post by Iranna Tarnal1
- ಗುಳೇದಗುಡ್ಡ : ಸಮೀಪದ ತೆಗ್ಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳಾದ ದ್ಯಾಮವ್ವಮ್ಮ ಮತ್ತು ದುರ್ಗವ್ವಮ್ಮರ ಜಾತ್ರೆ ಬುಧವಾರ ಸಂಭ್ರಮ ಸಡಗರದಿಂದ ನಡೆಯಿತು. ಬೆಳಿಗ್ಗೆ ರಥದ ಕಳಸ ಹಾಗೂ ಹಗ್ಗದ ಮೆರವಣಿಗೆ ಗ್ರಾಮದಲ್ಲಿ ನಡೆಯಿತು, ಬಳಿಕ ಮಧ್ಯಾಹ್ನ 12 ಗಂಟೆಗೆ ಗ್ರಾಮದೇವತೆಗಳನ್ನು ರಥದಲ್ಲಿ ಕೂರಿಸಿ, ವಿವಿಧ ವಾಧ್ಯಮೇಳಗಳೊಂದಿಗೆ ಭಕ್ತರ ಹಷೋದ್ಘಾರಗಳ ನಡುವೆ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ತೆಗ್ಗಿ, ರಾಘಾಪೂರು, ತಿಮ್ಮಸಾಗರ, ಕೆಲವಡಿ, ನಿಂಗಾಪೂರ, ತೋಗಣಸಿ, ಹಂಸನೂರು, ಹಿರೇಬೂದಿಹಾಳ, ರೈಲ್ವೆ ಸ್ಟೇಶನ್ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಹಾಗೂ ಗೋವಾ ರಾಜ್ಯ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.2
- ಇಳಕಲ್ ನಗರದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿಗೆ ಆಕಳಿನ ಕರುವಿನ ಮೇಲೆ ದಾಳಿ ಮಾಡಿದ್ದರಿಂದ ಕರು ತೀವ್ರವಾಗಿ ಗಾಯಗೊಂಡು ಬುಧವಾರ ಮೃತಪಟ್ಟಿದೆ. ನಗರದ ಶ್ರೀರಾಮ ಮಂದಿರ ಸಮೀಪ ಬಜಾರದಲ್ಲಿ ಬೀದಿ ನಾಯಿಗಳು ಕರುವಿನ ಮೇಲೆ ದಾಳಿ ಮಾಡಿ ಹೊಟ್ಟೆ ಮತ್ತು ಕವಿಯನ್ನು ತಿಂದ್ದು ಹಾಕಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿ ಮೀರಿ ಹೋಗಿದೆ, ನಗರಸಭೆ ಅಧಿಕಾರಿಗಳು ನಾಯಿಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಿದರೂ ಕೂಡ ಬೀದಿ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ. ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಿಡಿಯುವ ಕಾರ್ಯಾಚರಣೆಯನ್ನು ಮಾಡಬೇಕು. ಶಾಲೆಗಳು ರಜೆ ಇರುವದ್ದರಿಂದ ಮನೆಯ ಮುಂದೆ ಮಕ್ಕಳು ಆಟ ಆಡುವ ಸಂದರ್ಭದಲ್ಲಿ ಬೀದಿ ನಾಯಿಗಳು ಯಾವಾಗ ದಾಳಿ ಮಾಡುತ್ತಾವೋ ಗೊತ್ತಿಲ್ಲ, ಅಧಿಕಾರಿಗಳು ಬೇಗನೆ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.1
- ಬಾಗಲಕೋಟೆ:625ಕ್ಕೆ 621 ಅಂಕಗಳಿಸಿದ ಬಾಗಲಕೋಟೆಯ ಸಮೃದ್ಧಿ ಗುರುಕುಲ ಶಾಲೆಯ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ಅದ್ಭುತ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು. ಶಾಲೆಯ ಶಿಕ್ಷಕರು ವಿದ್ಯಾರ್ಥಿಯ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಶಿಸ್ತುಬದ್ಧ ಜೀವನ ಶೈಲಿಯೇ ಈ ಯಶಸ್ಸಿನ ಗುಟ್ಟು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರು, ತಮ್ಮ ಯಶಸ್ಸಿಗೆ ತಂದೆ-ತಾಯಿ ಹಾಗೂ ಗುರುಗಳ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲು ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಮೂಡಿಸಿದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ.1
- ವಿಜಯಪುರ: ಏಪ್ರಿಲ್ 26ರಂದು ಅಹಿಂದ ವಿಚಾರಣಾ ಸಂಕೀರ್ಣ ವಿಜಯಪುರದಲ್ಲಿ ಬುಧವಾರದಂದು ಮಾಜಿ ಶಾಸಕ ರಾಜು ಅಲಗೂರು ಅವರು ಹೇಳಿಕೆ ನೀಡಿದಂತೆ, ಏಪ್ರಿಲ್ 26ರಂದು ಹುಬ್ಬಳ್ಳಿ ನಗರದಲ್ಲಿ ರಾಜ್ಯಮಟ್ಟದ ಅಹಿಂದ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಅಹಿಂದ ಸಂಘಟನೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ನಾಯಕರು ಹಾಗೂ ಮುಖಂಡರು ಭಾಗವಹಿಸುವಂತೆ ಅವರು ಮನವಿ ಮಾಡಿದರು.1
- ಸಮಾಜ ಘಾತಕ ಡ್ರಗ್ಸ್ ಬಳಕೆ ದಂಡನೀಯ ಅಪರಾಧ. ಆರೋಗ್ಯಕರ ಸಮಾಜಕ್ಕಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಅತ್ಯಗತ್ಯ. ಮಾದಕ ವ್ಯಸನದಿಂದ ದೂರವಿದ್ದು ಸುರಕ್ಷಿತ ಜೀವನ ಸಾಗಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯ" ಎಂದುಮುಧೋಳ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಚನ್ನವೀರ ಚಲವಾದಿ ಹೇಳಿದರು ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಕಾಲೇಜ್ ರಸ್ತೆಯಲ್ಲಿ ಮಂಗಳವಾರ ಅವರು ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಹಾಗೂ ಜೀವನದ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ನಂತರ ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಿ"ಪದವಿ ಶಿಕ್ಷಣವು ನಿಮ್ಮ ಜೀವನದ ಕೊನೆಯ ಘಟ್ಟ ಮತ್ತು ಭವಿಷ್ಯದ ಬುನಾದಿ. ಈ ಹಂತದಲ್ಲಿ ನೀವು ಮಾಡುವ ಕಠಿಣ ಪರಿಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಂದೆ-ತಾಯಿಗಳು ತಮ್ಮ ತುತ್ತನ್ನು ಮಾರಿ ನಿಮಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅವರ ಕಣ್ಣಲ್ಲಿ ನೀರು ಬರಿಸದಂತೆ, ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ದಕ್ಕೆ ತರದಂತೆ ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ, ಮಾದಕ ವ್ಯಸನದ ಬಗ್ಗೆ ದೂರು ನೀಡಲು ಇಲಾಖೆಯ ಸಹಾಯವಾಣಿ '1933' ಮತ್ತು ತುರ್ತು ಪರಿಸ್ಥಿತಿಗೆ '112' ಸಂಖ್ಯೆಯನ್ನು ಬಳಸುವಂತೆ ಮನವರಿಕೆ ಮಾಡಿಕೊಟ್ಟರು. 'ಬ್ರೇಕ್ ದಿ ಚೈನ್ - ಸೇ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಹಾಗೂ ಎಸ್ ಅರ್.ಕಂಠಿ ಕಾಲೇಜು ಪದವಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.2
- ಉತ್ತರ ಕರ್ನಾಟಕದಲ್ಲಿ ಬಡವರ ರೇಸನ ಬಿಸಿಲಿನ ತಾಪ ಮಾನಕ್ಕೆ ಜನರಿಗೆ ತೊಂದರೆ ಯಾಗಬಾರದಂದು (3) ತಿಂಗಳ ರೇಸನ್ ಏಕಕಾಲಕ್ಕೆ ಕೂಡಬೇಕು೦ದು ಸರಕಾರ ಹೇಳಿದೆ ದಯವಿಟು ( 3 ) ತಿಂಗಳ ರೇಸನ್ ಸಿಬ್ಬಂದಿ ಹಂಚಬೇಕು ಸಿಬ್ಬಂದಿ ಕೂಡಲ್ಲ ಅಂದರೆ ಹೆಲ್ಪ ಲೈನ್ (1967) ಕಾಲ ಮಾಡಿ.1