Shuru
Apke Nagar Ki App…
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಜ್ಜಕದಿರೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ SIR ಪ್ರಕ್ರಿಯೆ ಜಾಗೃತಿ ಅಭಿಯಾನಕ್ಕೆ ಭಾರಿ ಜನಸಾಗರವೇ ಹರಿದುಬಂದಿದೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬಂದು ಕಿಕ್ಕಿರಿದು ಸೇರಿದ್ದಾರೆ.
Venu Gopal
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಜ್ಜಕದಿರೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ SIR ಪ್ರಕ್ರಿಯೆ ಜಾಗೃತಿ ಅಭಿಯಾನಕ್ಕೆ ಭಾರಿ ಜನಸಾಗರವೇ ಹರಿದುಬಂದಿದೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬಂದು ಕಿಕ್ಕಿರಿದು ಸೇರಿದ್ದಾರೆ.
More news from ಕರ್ನಾಟಕ and nearby areas
- ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಜ್ಜಕದಿರೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ SIR ಪ್ರಕ್ರಿಯೆ ಜಾಗೃತಿ ಅಭಿಯಾನಕ್ಕೆ ಭಾರಿ ಜನಸಾಗರವೇ ಹರಿದುಬಂದಿದೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬಂದು ಕಿಕ್ಕಿರಿದು ಸೇರಿದ್ದಾರೆ.1
- ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಚಿನ್ನಾಪುರ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು 'ರಾಜಾ ಸತ್ಯವ್ರತ' ಅಥವಾ 'ಶನಿಪ್ರಭಾವ' ನಾಟಕ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಮುಖ್ಯ ರಸ್ತೆಯ ಮಾಗುಂದಿ ಕ್ರಾಸ್ನ ಗಾಟಗ ಗ್ರಾಮದ ಶ್ರೀ ಶ್ರೀ ಶಿವ ಶನೇಶ್ವರ ಸ್ವಾಮಿ ದೇವಾಲಯದ ಧರ್ಮಾಧಿಕಾರಿಗಳು ಹಾಗೂ ಪೀಠಾಧಿಪತಿಗಳಾದ ಶ್ರೀ ಮುನೇಶ್ವರ ಸ್ವಾಮಿಗಳಿಗೆ ಅದ್ದೂರಿ ಸ್ವಾಗತ ಕೋರಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಮುನೇಶ್ವರ ಸ್ವಾಮಿಗಳು, ಸರ್ವ ಜನರಿಗೂ ಶನೇಶ್ವರ ಸ್ವಾಮಿಯ ಆಶೀರ್ವಾದ ಹಾಗೂ ಸುಖ ಸಂತೋಷ ಸಿಗಲಿ ಮತ್ತು ನಾಟಕವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ನಾಟಕ ನಿರ್ದೇಶಕ ಪಿಳ್ಳಪ್ಪನವರ ನೇತೃತ್ವದಲ್ಲಿ ಇದುವರೆಗೆ 18 ಶನೇಶ್ವರ ನಾಟಕಗಳನ್ನು ಯಶಸ್ವಿಯಾಗಿ ಆಡಿಸಿರುವುದು ಹೆಮ್ಮೆಯ ವಿಷಯ ಎಂದ ಅವರು, ತಾವೂ ಸಹ ಶ್ರಾವಣ ಮಾಸದಲ್ಲಿ ಶನಿಪ್ರಭಾವ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದು, ಅದನ್ನೂ ಮೀರಿಸಿ ಚಿನ್ನಾಪುರ ಗ್ರಾಮದಲ್ಲಿ ಅತ್ಯಂತ ಅದ್ಭುತವಾಗಿ ಈ ಮಹಾತ್ಮನ ನಾಟಕ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು. ಇದೇ ವೇಳೆ, ತಾವು ಮಾಡುವ ದಾನ ಧರ್ಮಗಳು ಇನ್ನೊಂದು ಕೈಗೆ ತಿಳಿಯಬಾರದು ಎಂಬುದು ತಮ್ಮ ಭಾವನೆಯಾಗಿದ್ದು, ತಮಗೆ ಯಾವುದೇ ಹೊಗಳಿಕೆ ಸಲ್ಲದು ಹಾಗೂ ತಾವು ಏನೇ ಮಾಡಿದರೂ ಅದು ಭಕ್ತರಿಗೋಸ್ಕರ ಎಂದು ನುಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಚಲನಚಿತ್ರ ನಟರಾದ ಪಾಕರಹಳ್ಳಿ ಬುಲೆಟ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಮುದವತ್ತಿ ಎಸ್.ಕೃಷ್ಣಪ್ಪ, ವಡಗೇರಿ ರಮೇಶ್, ಜಂಗಾಲಹಳ್ಳಿ ಶ್ರೀನಿವಾಸ್, ಶೆಟ್ಟಿಗಾನಹಳ್ಳಿ ಎಸ್ಎಂಎಸ್ ಸಂತೋಷ್, ನದೀಂ ಬೇಗ್, ಟೈಲರ್ ಶಿವಕುಮಾರ್, ವಕ್ಕಲೇರಿ ಚಿರು, ಚಿನ್ನಾಪುರ ನಾರಾಯಣಸ್ವಾಮಿ, ಉಮೇಶ್ ಹಾಗೂ ಪಿಳ್ಳಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.2
- ಎಸ್. ಜಾನಕಿ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಅವರ ಅಂತ್ಯಸಂಸ್ಕಾರದ ಕಾರ್ಯಗಳು ಅತ್ಯಂತ ವಿಧಿವತ್ತಾಗಿ ನೆರವೇರಿವೆ.1
- ದೇಶಾದ್ಯಂತ ನಡೆಯುತ್ತಿರುವ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅದಾಲತ್ನಲ್ಲಿ ಒಟ್ಟು 80,687 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದ್ದು, ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಅನೇಕ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ರಾಜೀಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು. ಈ ಬಾರಿಯ ಲೋಕ ಅದಾಲತ್ನ ಪ್ರಮುಖ ಆಕರ್ಷಣೆಯೆಂದರೆ, ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನದ ಹಾದಿ ಹಿಡಿದಿದ್ದ ಆರು ದಂಪತಿಗಳು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದಾದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ಲೋಕ ಅದಾಲತ್ ಪ್ರಕ್ರಿಯೆಯನ್ನು 'ರಾಷ್ಟ್ರೀಯ ಹಬ್ಬ' ಎಂದು ಬಣ್ಣಿಸಿದರು.1
- ಕೆಜಿಎಫ್ ತಾಲೂಕಿನ ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾದೇನಹಳ್ಳಿ ಗ್ರಾಮದ ಬಡ ರೈತ ನಾರಾಯಣಸ್ವಾಮಿ ಅವರ ಜಮೀನಿನಲ್ಲಿ ಸರ್ಕಾರದ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಯಡಿ ಮಂಜೂರಾಗಿದ್ದ ಉಚಿತ ಕೊಳವೆ ಬಾವಿ ಯಶಸ್ವಿಯಾಗಿದ್ದು, ಉತ್ತಮ ಪ್ರಮಾಣದ ನೀರು ಲಭ್ಯವಾಗಿದೆ. ನೀರಿನ ಸೌಲಭ್ಯವಿಲ್ಲದೆ ಕೃಷಿ ಮಾಡಲು ತೀವ್ರ ಸಂಕಷ್ಟ ಎದುರಿಸುತ್ತಿದ್ದ ರೈತನ ಮನವಿಗೆ ತಕ್ಷಣ ಸ್ಪಂದಿಸಿ, ಉಚಿತ ಬೋರ್ವೆಲ್ ಒದಗಿಸಿಕೊಟ್ಟ ಕ್ಷೇತ್ರದ ಶಾಸಕಿ ಎಂ. ರೂಪಕಲಾ ಶಶಿಧರ್ ಅವರಿಗೆ ರೈತ ನಾರಾಯಣಸ್ವಾಮಿ ಹಾಗೂ ಮುಖಂಡರು ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಕೊಳವೆ ಬಾವಿಯಿಂದ ನೀರು ಉಕ್ಕುತ್ತಿದ್ದಂತೆ ಸ್ಥಳದಲ್ಲಿದ್ದ ರೈತರು ಜಯಘೋಷ ಕೂಗಿ, ಗಂಗಾ ಪೂಜೆ ನೆರವೇರಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಚಂದ್ರಕಾಂತ್ ಹಾಗೂ ಮುಖಂಡ ರೇಷನ್ ಸೀನಪ್ಪ, ಕೆಜಿಎಫ್ನಂತಹ ಒಣಭೂಮಿ ಪ್ರದೇಶದಲ್ಲಿ ನೀರು ದೊರಕುವುದು ಅತ್ಯಂತ ದೊಡ್ಡ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು. ಶಾಸಕಿ ರೂಪಕಲಾ ಅವರು ಕ್ಷೇತ್ರದ ರೈತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ಉಚಿತ ಕೊಳವೆ ಬಾವಿಯ ಮೂಲಕ ರೈತರಿಗೆ ಶಕ್ತಿ ತುಂಬಿದ್ದಾರೆ ಎಂದು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಂಚಾಯಿತಿ ಮುಖಂಡರು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.1
- ನಂಜನಗೂಡಿನ ಮಾದೇವಪ್ಪ ಅಲಿಯಾಸ್ ಪ್ರೇಮಳ ನಡೆಸುತ್ತಿರುವ ಸೆಕ್ಸ್ ದಂಧೆಯ ಅಸಲಿ ಕಹಾನಿ ಮತ್ತು ಅದರ ಹಿಂದಿನ ಸಂಪೂರ್ಣ ಸತ್ಯದ ವಿವರಗಳು ಇಲ್ಲಿದೆ.1
- ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೆಟ್ಟಹೊಸಪುರ ವಾರ್ಡ್ 2 ರ ಬಳಿ ಇರುವ ಆರ್.ಎಸ್. ರಾಕ್ ಸ್ಯಾಂಡ್ ಕ್ರಷರ್ ಘಟಕದಲ್ಲಿ ಭೀಕರ ಅವಘಡ ಸಂಭವಿಸಿದೆ. ಪಶ್ಚಿಮ ಬಂಗಾಳದಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದ ಟಿಪ್ಪರ್ ಚಾಲಕ ಸುಬೇದ್, ನೂರು ಅಡಿ ಆಳದ ಕಲ್ಲು ಕ್ವಾರಿಗೆ ಟಿಪ್ಪರ್ ಸಮೇತ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜುಲೈ 5 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕ್ರಷರ್ ನಿರ್ವಹಣೆಯ ಬೇಜವಾಬ್ದಾರಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಭೀಕರ ದುರಂತವನ್ನು ಮುಚ್ಚಿಹಾಕಲು ಕ್ರಷರ್ ಮಾಲೀಕರು ತೀವ್ರ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮಗಳು ಮತ್ತು ಸಂಘಟನೆಗಳಿಗೆ ವಿಷಯ ತಿಳಿಯದಂತೆ ಎರಡು ದಿನಗಳ ಕಾಲ ಕ್ರಷರ್ ಒಳಗೆ ಯಾರಿಗೂ ಪ್ರವೇಶ ನೀಡದೆ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಮೃತ ಚಾಲಕನ ಬಡ ಕುಟುಂಬಕ್ಕೆ ಹಣದ ಆಮಿಷ ಒಡ್ಡಿ ಅವರಿಂದಲೇ ದೂರು ಕೊಡಿಸಲು ಮಾಲೀಕರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ರಕ್ಷಕರೆನ್ನಿಸಿಕೊಂಡವರೇ ಭಕ್ಷಕರ ರಕ್ಷಣೆಗೆ ನಿಂತಿದ್ದಾರಾ ಎಂಬ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ನೊಂದ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಮೇಡಿಹಾಳ ಮುನಿಆಂಜಿನಪ್ಪ ಹಾಗೂ ಕಲ್ವಮಂಜಲಿ ರಾಮುಶಿವಣ್ಣ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ವೇಮಗಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿವೆ. ಕ್ರಷರ್ ಮಾಲೀಕನ ವಿರುದ್ಧ ದೂರು ದಾಖಲಿಸುವುದರ ಜೊತೆಗೆ, ಸರ್ಕಾರದ ನಿಯಮಗಳನ್ನು ಪಾಲಿಸದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿ ಜಾಣ ಕುರುಡರಂತೆ ವರ್ತಿಸುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ನಾಗನಾಳ ಶಂಕರ್, ರಾಂಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ್, ಸುಳದೇನಹಳ್ಳಿ ವೆಂಕಟರಾಜು ಮತ್ತು ವೇಮಗಲ್ ಬಹದ್ದೂರ್ ಖಾನ್ ಉಪಸ್ಥಿತರಿದ್ದರು.3
- ತನ್ನ ಹೆಂಡತಿಗೆ ಅಶ್ಲೀಲ ಪದಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಕಚಡ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾಗೌರವ ನೀಡಿದ್ದಾರೆ. ಹೆಂಡತಿಯ ಮೊಬೈಲ್ಗೆ ಅಸಭ್ಯವಾಗಿ ಸಂದೇಶ ಹಾಗೂ ವಿಡಿಯೋ ಕಳುಹಿಸುತ್ತಿದ್ದ ಈ ವ್ಯಕ್ತಿಯನ್ನು ಸಾರ್ವಜನಿಕರೇ ಸೇರಿ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಈ ಕಚಡ ವ್ಯಕ್ತಿಯ ಮುಖವನ್ನು ನೋಡಿ ಎಂದು ತೀವ್ರ ಆಕ್ರೋಶ ಹೊರಹಾಕಲಾಗಿದ್ದು, ಸಾರ್ವಜನಿಕರಿಂದ ಆತನಿಗೆ ಹೊಸದಾಗಿ ಸರಿಯಾದ ಗೂಸಾಗೌರವ ಸಿಕ್ಕಿದೆ.1