Shuru
Apke Nagar Ki App…
ವಿಜಯಪುರ: ಹೆಂಡತಿ ಹತ್ಯೆ ಮಾಡಿದಾಗ ಗಂಡನನ್ನು ಬಂಧಿಸಲಾಗಿದೆ ಎಸ್ಪಿ ವಿಜಯಪುರದಲ್ಲಿ ಗುರುವಾರದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಂತೆ, ಹೆಂಡತಿಯನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಸಾಲ ಮಾಡಿದ್ದರಿಂದ ಪತ್ನಿ ನಿಂದಿಸಿದಳೆಂಬ ಕಾರಣಕ್ಕೆ ಕುಪಿತಗೊಂಡ ಪತಿ, ಕಬ್ಬಿಣದ ಆಯುಧದಿಂದ ಪತ್ನಿಯನ್ನು ಹೊಡೆದು ಹತ್ಯೆಗೈದು ಮನೆಯ ಕಾಂಪೌಂಡಿನಲ್ಲಿ ಹೂತು ಹಾಕಿದ್ದಾನೆ. ಸುಮಾರು 20 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವ್ಯಕ್ತಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ವಿಜಯಪುರ: ಹೆಂಡತಿ ಹತ್ಯೆ ಮಾಡಿದಾಗ ಗಂಡನನ್ನು ಬಂಧಿಸಲಾಗಿದೆ ಎಸ್ಪಿ ವಿಜಯಪುರದಲ್ಲಿ ಗುರುವಾರದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಂತೆ, ಹೆಂಡತಿಯನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಸಾಲ ಮಾಡಿದ್ದರಿಂದ ಪತ್ನಿ ನಿಂದಿಸಿದಳೆಂಬ ಕಾರಣಕ್ಕೆ ಕುಪಿತಗೊಂಡ ಪತಿ, ಕಬ್ಬಿಣದ ಆಯುಧದಿಂದ ಪತ್ನಿಯನ್ನು ಹೊಡೆದು ಹತ್ಯೆಗೈದು ಮನೆಯ ಕಾಂಪೌಂಡಿನಲ್ಲಿ ಹೂತು ಹಾಕಿದ್ದಾನೆ. ಸುಮಾರು 20 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವ್ಯಕ್ತಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
More news from ಕರ್ನಾಟಕ and nearby areas
- ಸಿಂದಗಿ: ಪೊಲೀಸರ ಕಾರ್ಯಾಚರಣೆಯಿಂದ ನಮ್ಮ ಬಂಗಾರ ನಮಗೆ ಮರಳಿ ಸಿಕ್ಕಿದೆ ವಿಜಯಪುರದಲ್ಲಿ ಗುರುವಾರದಂದು ಬಂಗಾರದ ಅಂಗಡಿಗೆ ನುಗ್ಗಿದ ದರೋಡೆಕೋರರು ಗನ್ ತೋರಿಸಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ವಿಜಯಪುರ ಪೊಲೀಸರು ತಮ್ಮ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕಳ್ಳರನ್ನು ಹಿಡಿದು, ದೋಚಿದ ಚಿನ್ನಾಭರಣವನ್ನು ಅಂಗಡಿ ಮಾಲೀಕ ಮಹಾರುದ್ರ ಅವರಿಗೆ ಮರಳಿ ನೀಡಿದ್ದಾರೆ. ಈ ಕುರಿತು ಮಹಾರುದ್ರ ಅವರು ಮಾಧ್ಯಮಕ್ಕೆ ತಿಳಿಸಿದರು.1
- #Neena_Nannaki #ನೀನ_ನನ್ನಾಕಿ #Media_Minds #Bagalkot #Vijaypur #News_Uttarkarnataka_janpad_song1
- 🎶 ಹೊಸ ಪ್ರೇಮಕಾವ್ಯ ಗೀತೆ ಬಿಡುಗಡೆಗೆ ಸಿದ್ಧ! 🎶 ಕವಿ ಎಚ್.ಎನ್. ಶೇಬಣ್ಣನವರ್ ರಚನೆಯ ಬಹುನಿರೀಕ್ಷಿತ "ನೀನ ನನ್ನಾಕಿ" ಗೀತೆ ಇದೇ ಫೆಬ್ರವರಿ 20ರಂದು ಬಿಡುಗಡೆಯಾಗಲಿದೆ. ಈ ಮನಮೋಹಕ ಗೀತೆಯಲ್ಲಿ ಪತ್ರಕರ್ತ ಸರ್ಜಾ ಸೋಮಶೇಖರ ನಾಯಕನಾಗಿ ಅಭಿನಯಿಸಿದ್ದು, ಶೃತಿ ನಾಯಕಿಯಾಗಿ ಮಿಂಚಿದ್ದಾರೆ. ಸುಂದರ ಸಾಹಿತ್ಯ, ಮನಸೂರೆಗೊಳ್ಳುವ ಸಂಗೀತ ಹಾಗೂ ವಿಭಿನ್ನ ದೃಶ್ಯ ವಿನ್ಯಾಸದೊಂದಿಗೆ ಈ ಹೊಸ ಗೀತೆ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ. ಹೊಸ ಪ್ರತಿಭೆಗಳನ್ನು ಬೆಂಬಲಿಸಿ, ಗೀತೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ತಂಡ ಮನವಿ ಮಾಡಿಕೊಂಡಿದೆ. ಬಿಡುಗಡೆಯ ದಿನ ಗೀತೆಯನ್ನು ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ! #ನೀನನನ್ನಾಕಿ #NewSongRelease #KannadaSong #EntertainmentNews #SarjaSomashekhar #Shruti #HNShebannavar #PetkarMedia1
- ಮುಧೋಳ : ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಮುಂಜಾಗ್ರತಾ ದೃಷ್ಠಿಯಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ಪಿಎಸ್ಐ ಅಜಿತ ಹೊಸಮನಿ ಅವರ ಮುಂದಾಳತ್ವದಲ್ಲಿ ನಡೆದ ಪಥಸಂಚಲನ ನಗರದ ಶಿವಾಜಿ ವೃತ್ತ, ಗಡದನ್ನವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.4
- ಇಂದು ಬಾಗಲಕೋಟೆ ನಗರದಲ್ಲಿ ಮಹತ್ವದ ಘಟನೆ ನಡೆದಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ ಸಂಘಟನೆ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ದಿನಾಂಕ ೧೮.೦೨.೨೦೨೬ ರಂದು ಬೆಳಿಗ್ಗೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಪ್ರಾಧಿಕಾರದ ಮುಖ್ಯ ದ್ವಾರದ ಎದುರು ಸೇರಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಪರಿಣಾಮವಾಗಿ ಕೆಲ ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸಾರ್ವಜನಿಕರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಇದೀಗ ಪ್ರಾಧಿಕಾರದ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.1
- Post by TUFAIL,,PASHA,,KOLAR.NEWS2
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ೧೦೦೦ ಕ್ಕೂ ಹೆಚ್ಚು ಬೈಕ್ ರ್ಯಾಲಿ ಫೆಬ್ರುವರಿ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಿತು. ಬೈಕ್ ರ್ಯಾಲಿ ಚಂದ್ರಶೇಖರ್ ಅಜಾದ್ ಸರ್ಕಲ್ದಿಂದ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳು ಮುಳುಗಿದವು. ರ್ಯಾಲಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ, ಹಿಂದೂ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ.ಆರ್.ಪಾಟೀಲ ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ವಿಜಯಪುರ: ಹೆಂಡತಿ ಹತ್ಯೆ ಮಾಡಿದಾಗ ಗಂಡನನ್ನು ಬಂಧಿಸಲಾಗಿದೆ ಎಸ್ಪಿ ವಿಜಯಪುರದಲ್ಲಿ ಗುರುವಾರದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಂತೆ, ಹೆಂಡತಿಯನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಸಾಲ ಮಾಡಿದ್ದರಿಂದ ಪತ್ನಿ ನಿಂದಿಸಿದಳೆಂಬ ಕಾರಣಕ್ಕೆ ಕುಪಿತಗೊಂಡ ಪತಿ, ಕಬ್ಬಿಣದ ಆಯುಧದಿಂದ ಪತ್ನಿಯನ್ನು ಹೊಡೆದು ಹತ್ಯೆಗೈದು ಮನೆಯ ಕಾಂಪೌಂಡಿನಲ್ಲಿ ಹೂತು ಹಾಕಿದ್ದಾನೆ. ಸುಮಾರು 20 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವ್ಯಕ್ತಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.1