ಅಳ್ನಾವರ ಕಾಳಿ ನದಿ ನೀರು ಯೋಜನೆ ಸರಬರಾಜು ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಸಾರ್ವಜನಿಕರು ನೀಡಿದ ಮನವಿಯನ್ನು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು ಸ್ವೀಕರಿಸಿದರು. ಕಾಳಿ ನದಿ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಆಗ್ರಹ ಅಳ್ನಾವರ (ಧಾರವಾಡ ): ಜನರಿಗೆ ಕುಡಿಯುವ ನೀರಿನ ಮೂಲವಾದ ಕಾಳಿ ನದಿ ನೀರು ಪುರವಟೆ ವ್ಯವಸ್ಥೆಯಲ್ಲಿ ಸುದಾರಣೆ ತರಬೇಕು. ನೀರು ಬಾರದ ದಿನದಲ್ಲಿ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಬುಧವಾರ ತುಸು ಹೊತ್ತು ಪ್ರತಿಭಟನೆ ನಡೆಸಿದರು. ಪಟ್ಟಣ ಪಂಚಾಯ್ತಿ ಕಾರ್ಯಾಲಯದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಯಾವುದೇ ಮುನ್ಸೂಚನೆ ಇಲ್ಲದೆ ಮಂಗಳವಾರ ನೀರು ಪುರವಟೆ ನಿಲ್ಲಿಸಲಾಗಿದೆ. ಇದು ಬೇಸಿಗೆ ಸಮಯವಾಗಿದೆ. ಮದುವೆ ಸಮಾರಂಭಗಳು ಕೂಡಾ ಪಟ್ಟಣದಲ್ಲಿ ನಡೆದಿವೆ ಇಂತಹ ಘಳಿಗೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡದೆ ನೀರು ನಿಲ್ಲಿಸಿದ್ದು ಖಂಡನೀಯ ಎಂದು ಸಾರ್ವಜನಿಕರು ದೂರಿದರು. ಪಟ್ಟಣದ ಜನರಿಗೆ ನೀರನ್ನು ಸಮರ್ಪಕವಾಗಿ ಯಾವುದೆ ಅಡತಡೆ ಇಲ್ಲದೆ ಒದಗಿಸಬೇಕು. ಎನಾದರೂ ತೊಂದರೆ ಇದ್ದಲ್ಲಿ ಮುಂಚಿತವಾಗಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಮೂಲಕ ನೀರು ಸಂಗ್ರಹ ಮಾಡಿಟ್ಟುಕೊಳ್ಳುವಷ್ಟು ನೀರು ನೀಡಬೇಕು. ನೀರು ಸಂಗ್ರಹಕ್ಕಾಗಿ ಇನ್ನೂಂದು ಮೇಲ್ಮಟ್ಟದ ಜಲಾಗಾರ ನಿರ್ಮಿಸಬೇಕು. ತೊಂದರೆ ಆದಲ್ಲಿ ಕನಿಷ್ಟ ಒಂದು ದಿನಕ್ಕಾದರೂ ನೀರು ಸಂಗ್ರಹ ಇರಬೇಕು. ತಾಂತ್ರಿಕ ತೊಂದರೆ ನಿಗಿಸುವ ತಜ್ಷರನ್ನು ಸ್ಥಳಿಯವಾಗಿ ಸೇವೆಗೆ ಒದಗಿಸಬೇಕು. ನಿರಂತರವಾಗಿ ಸರಬರಾಜು ವ್ಯವಸ್ಥೆ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದರು. ಜಲ ಮಂಡಳಿಯ ಎಇ ಎಂ.ಎA. ಮಿಶ್ರಿಕೋಟಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿ, ದಾಂಡೇಲಿ ಬಳಿ ನೀರಿನ ಪೈಪಲೈನ್ ಒಡದು ತೊಂದರೆ ಆಗಿತ್ತು. ತಕ್ಷಣವೆ ದುರಸ್ಥಿ ಕಾರ್ಯ ಕೈಗೊಳ್ಳಲು ಸಮಯ ಬೇಕಾಯಿತು. ಬರುವ ದಿನದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಶೆ ನೀಡಿದರು. ಸಾರ್ವಜನಿಕರು ನೀಡಿದ ಮನವಿಯನ್ನು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು ಸ್ವೀಕರಿಸಿದರು. ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ ಮಾತನಾಡಿ, ಸಮರ್ಪಕವಾಗಿ ನೀರು ನೀಡಲು ಅಧಿಕಾರಿಗಳಿಗೆ ತಿಳಿಸಿದರು. ಪುಂಡಲಿಕ ಪಾರ್ದಿ, ಮಹಾದೇವ ಸಾಗರೇಕರ, ರಾಜು ಕರ್ಲೆಕರ, ಅಲೆಕ್ಸ್ ಫರ್ನಾಂಡಿಸ್. ಶಾಹು ಶಿಂದೆ. ಪ್ರವೀಣ ಪವಾರ, ಪರಶುರಾಮ ಪೆಜೊಳ್ಳಿ, ದಿನೇಶ ನಾಂದೋಳಕರ, ಮಯೂರ ಪಾಳೇಕರ, ಶ್ರೀಧರ ಸುಣಗಾರ, ರಾಮದಾಸ ಕಲ್ಯಾಣಕರ ಇದ್ದರು
ಅಳ್ನಾವರ ಕಾಳಿ ನದಿ ನೀರು ಯೋಜನೆ ಸರಬರಾಜು ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಸಾರ್ವಜನಿಕರು ನೀಡಿದ ಮನವಿಯನ್ನು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು ಸ್ವೀಕರಿಸಿದರು. ಕಾಳಿ ನದಿ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಆಗ್ರಹ ಅಳ್ನಾವರ (ಧಾರವಾಡ ): ಜನರಿಗೆ ಕುಡಿಯುವ ನೀರಿನ ಮೂಲವಾದ ಕಾಳಿ ನದಿ ನೀರು ಪುರವಟೆ ವ್ಯವಸ್ಥೆಯಲ್ಲಿ ಸುದಾರಣೆ ತರಬೇಕು. ನೀರು ಬಾರದ ದಿನದಲ್ಲಿ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಬುಧವಾರ ತುಸು ಹೊತ್ತು ಪ್ರತಿಭಟನೆ ನಡೆಸಿದರು. ಪಟ್ಟಣ ಪಂಚಾಯ್ತಿ ಕಾರ್ಯಾಲಯದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಯಾವುದೇ ಮುನ್ಸೂಚನೆ ಇಲ್ಲದೆ ಮಂಗಳವಾರ ನೀರು ಪುರವಟೆ ನಿಲ್ಲಿಸಲಾಗಿದೆ. ಇದು ಬೇಸಿಗೆ ಸಮಯವಾಗಿದೆ. ಮದುವೆ ಸಮಾರಂಭಗಳು ಕೂಡಾ ಪಟ್ಟಣದಲ್ಲಿ ನಡೆದಿವೆ ಇಂತಹ ಘಳಿಗೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡದೆ ನೀರು ನಿಲ್ಲಿಸಿದ್ದು ಖಂಡನೀಯ ಎಂದು ಸಾರ್ವಜನಿಕರು ದೂರಿದರು. ಪಟ್ಟಣದ ಜನರಿಗೆ ನೀರನ್ನು ಸಮರ್ಪಕವಾಗಿ ಯಾವುದೆ ಅಡತಡೆ ಇಲ್ಲದೆ ಒದಗಿಸಬೇಕು. ಎನಾದರೂ ತೊಂದರೆ ಇದ್ದಲ್ಲಿ ಮುಂಚಿತವಾಗಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಮೂಲಕ ನೀರು ಸಂಗ್ರಹ ಮಾಡಿಟ್ಟುಕೊಳ್ಳುವಷ್ಟು ನೀರು ನೀಡಬೇಕು. ನೀರು ಸಂಗ್ರಹಕ್ಕಾಗಿ ಇನ್ನೂಂದು ಮೇಲ್ಮಟ್ಟದ ಜಲಾಗಾರ ನಿರ್ಮಿಸಬೇಕು. ತೊಂದರೆ ಆದಲ್ಲಿ ಕನಿಷ್ಟ ಒಂದು ದಿನಕ್ಕಾದರೂ ನೀರು ಸಂಗ್ರಹ ಇರಬೇಕು. ತಾಂತ್ರಿಕ ತೊಂದರೆ ನಿಗಿಸುವ ತಜ್ಷರನ್ನು ಸ್ಥಳಿಯವಾಗಿ ಸೇವೆಗೆ ಒದಗಿಸಬೇಕು. ನಿರಂತರವಾಗಿ ಸರಬರಾಜು ವ್ಯವಸ್ಥೆ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದರು. ಜಲ ಮಂಡಳಿಯ ಎಇ ಎಂ.ಎA. ಮಿಶ್ರಿಕೋಟಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿ, ದಾಂಡೇಲಿ ಬಳಿ ನೀರಿನ ಪೈಪಲೈನ್ ಒಡದು ತೊಂದರೆ ಆಗಿತ್ತು. ತಕ್ಷಣವೆ ದುರಸ್ಥಿ ಕಾರ್ಯ ಕೈಗೊಳ್ಳಲು ಸಮಯ ಬೇಕಾಯಿತು. ಬರುವ ದಿನದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಶೆ ನೀಡಿದರು. ಸಾರ್ವಜನಿಕರು ನೀಡಿದ ಮನವಿಯನ್ನು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು ಸ್ವೀಕರಿಸಿದರು. ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ ಮಾತನಾಡಿ, ಸಮರ್ಪಕವಾಗಿ ನೀರು ನೀಡಲು ಅಧಿಕಾರಿಗಳಿಗೆ ತಿಳಿಸಿದರು. ಪುಂಡಲಿಕ ಪಾರ್ದಿ, ಮಹಾದೇವ ಸಾಗರೇಕರ, ರಾಜು ಕರ್ಲೆಕರ, ಅಲೆಕ್ಸ್ ಫರ್ನಾಂಡಿಸ್. ಶಾಹು ಶಿಂದೆ. ಪ್ರವೀಣ ಪವಾರ, ಪರಶುರಾಮ ಪೆಜೊಳ್ಳಿ, ದಿನೇಶ ನಾಂದೋಳಕರ, ಮಯೂರ ಪಾಳೇಕರ, ಶ್ರೀಧರ ಸುಣಗಾರ, ರಾಮದಾಸ ಕಲ್ಯಾಣಕರ ಇದ್ದರು
- ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 2472
- Post by Nitin 9071795156 press reporte1
- ಶಿಗ್ಗಾಂವಿ, ಮೂಡನಂಬಿಕೆ, ಲಿಂಗತಾರತಮ್ಯ, ಮೌಢ್ಯಗಳನ್ನು ವಿರೋಧಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರು ಪ್ರಮುಖರಾದವರು ಎಂದು ಶಿವಮೊಗ್ಗ ಎಸ್.ಆರ್.ಎನ್.ಎಮ್.ಎನ್ ಕಾಲೇಜ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮಣ ಕೆ. ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ನಡೆದ ಜಗದ್ಗುರು ಶ್ರೀ ವಿಶ್ವಬಂದು ಮರುಳಸಿದ್ದರ ಜಯಂತಿ ಆಚರಣೆಯಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರರ ಜೀವನದ ಕುರಿತು ಉಪನ್ಯಾಸ ನೀಡಿದರು. ರೇವಣಸಿದ್ಧರ ಶಿಷ್ಯರಾದ ಮರುಳಸಿದ್ಧರು, ಹಿಂಸಾತ್ಮಕ ಆಚರಣೆಗಳನ್ನು ಬಲವಾಗಿ ವಿರೋಧಿಸಿ, ಲೋಕದಲ್ಲಿರುವವರೆಲ್ಲರ ಬಾಳು ತರಳಾಗಲು ನಾಡಿನಾದ್ಯಂತ ಸಂಚರಿಸಿ, ತರಳಬಾಳು ಸಂಸ್ಥಾನದ ಸಂಸ್ಥಾಪಕರಾಗಿದ್ದಾರೆ ಎಂದರು. ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಾತಿ ಜಾತಿಗಳ ಮಧ್ಯೆ ಇರುವ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ವರೆಗೂ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಿಲ್ಲ. ಮರುಳಸಿದ್ಧರು ಸಮಾಜದಲ್ಲಿ ಜ್ಞಾನ ಮತ್ತು ಭಕ್ತಿ ಮಾರ್ಗವನ್ನು ಪ್ರಚುರಪಡಿಸಿ, ಮೇಲು-ಕೀಳು, ಜಾತಿ ಭೇದಗಳನ್ನು ವಿರೋಧಿಸಿ, ಮಾನವತಾವಾದದ ತತ್ವವನ್ನು ಎತ್ತಿ ಹಿಡಿದವರಲ್ಲಿ ಮರುಳಸಿದ್ಧರು ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬಸವಾದಿ ಶರಣರಂತೆ ಮರುಳಸಿದ್ಧರು ಪ್ರಮುಖರಾಗಿದ್ದಾರೆ ಆದರೆ ಎಲೆಮರೆ ಕಾಯಿಯಂತೆ ಕಣ್ಮರೆಯಾಗಿರುವುದು ಬೇಸರಿಸದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮರುಳಸಿದ್ದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಿವೃತ ಶಿಕ್ಷಕರಾದ ಕೆ.ಡಿ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕ ಬಸವರಾಜ ಬಸರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎಂ.ಮುಳಗುಂದ, ಪ್ರಭುಗೌಡ ತೆಂಬದಮನಿ, ಹಿರೇಗೌಡ ಪಾಟೀಲ, ಶಶಿಕಾಂತ ರಾಠೋಡ, ಸಿ.ಡಿ.ಯತ್ನಳ್ಳಿ, ಮಾನಪ್ಪ ಕಮ್ಮಾರ, ಬಸವರಾಜ ಬಸರಿಕಟ್ಟಿ, ಉಷಾ ಪಾಟೀಲ ಸೇರಿದಂತೆ ಇತರರಿದ್ದರು.4
- ಬಾಗಲಕೋಟೆ: ಲೋಕಾಯುಕ್ತ ಬಲೆಗೆ ಬಿದ್ದ ಕೆರೂರು ಪಿಎಸ್ಐ ಮತ್ತು ಕಾನ್ಸ್ಟೇಬಲ್! ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 1.70 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ. ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಪೇದೆ ಸಂತೋಷ ಬಿರಾದಾರ. ಇಸ್ಪೀಟ್ ಆಟದ ಸುಳ್ಳು ಆರೋಪ ಹೊರಿಸಿ, ಬೈಕ್ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಸುರೇಶರೆಡ್ಡಿ ತಂಡದಿಂದ ಭರ್ಜರಿ ಬೇಟೆ. "ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮುತ್ತಪ್ಪ ನಾಯ್ಕರ್ ಎಂಬುವವರ ಸ್ನೇಹಿತನ ಮೇಲೆ ಇಸ್ಪೀಟ್ ಆಟದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿದ್ದ ಈ ಅಧಿಕಾರಿಗಳು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಬರೋಬ್ಬರಿ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿ1
- ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.1
- Post by Mayur TV Hangal YouTube c1
- ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.1
- ಚಿಕ್ಕೋಡಿ ಬ್ರೇಕಿಂಗ್... ಹುಕ್ಕೇರಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ಖತರ್ನಾಕ್ ಕಳ್ಳರನ್ನು ಬಂಧಿಸಿ 15.45 ಲಕ್ಷ ಚಿನ್ನಾಭರಣ 9 ಬೈಕ ವಶಕ್ಕೆ ಪಡೆದ ಹುಕ್ಕೇರಿ ಪೊಲೀಸರು ಹುಕ್ಕೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯ ಮೂಲಕ ಹುಕ್ಕೇರಿ ಠಾಣೆಯ 6 ಪ್ರಕರಣಗಳು ಹಾಗೂ ಇತರ ಠಾಣಾ ವ್ಯಾಪ್ತಿಯ 9 ಪ್ರಕರಣಗಳು ಭೇದಿಸಿ ಒಟ್ಟು 15.45ಲಕ್ಷ ಮೂಲದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಸವಾರ ಮಾಡುತ್ತಿದ್ದ ಸೌಸಯಸ್ಪದ ವ್ಯಕ್ತಿ ಉಮೇಶ್ ಹನುಮಂತ ಗಾಡಿ ವಡ್ಡರ ಬಂದಿಸಿ ವಿಚಾರಣೆ ಮಾಡಿದಾಗ ಅಂತರಾಜ ಕಳ್ಳತನದ ಜಾಲ ಬೆಳಕಿಗೆ ಬಂದಿದೆ ಈತನಿಂದ ಗೋಕಾಕ ಕಾಗಲ ಸೆಂಕೇಶ್ವರ್ ಹುಕ್ಕೇರಿ ಬೆಳಗಾವಿ ಕೇ.ಎಲ್.ಇ. ಆಸ್ಪತ್ರೆ ನಿಪ್ಪಾಣಿ ಬಾಗಗಳಲ್ಲಿ ಕಳವು ಮಾಡಿದ್ ಸುಮಾರು 6ಲಕ್ಷದ ಮೌಲ್ಯದ 9 ಬೈಕಗಳನ್ನು ವಶಪಡಿಸಿಕೊಂಡ ಹಾಗೂ 1ಟ್ರಾಕ್ಟರ್ ಟ್ರೋಲಿ ವಶಕ್ಕೆ ಪಡೆಸಿಕೊಂಡರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮಗೊಂಡ ಬಸರಗಿ ಹಾಗೂ ಗೋಕಾಕ್ ಡಿ. ಎಸ್. ಪಿ.ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ನಿರೀಕ್ಷರಾದ ಮಹಾಂತೇಶ್ ಬಸ್ಸಾಪುರೆ ಅವರ್ ತಂಡದವರಾದ ಮಂಜುನಾಥ್ ಕಬ್ಬುರೆ ಅಜಿತ್ ನಾಯಿಕ್ ಅರ್ಜುನ್ ಮಸರಗುಪ್ಪಿ ಭರ್ಜರಿ ಕಾರ್ಯಾಚರಣೆ ನಡಸಿ ವಿವಿಧ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಾದ ಕೆ. ರಾಮರಾಜನ್ ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ.1