Shuru
Apke Nagar Ki App…
वोटर लिस्ट में अपना नाम चेक करने के लिए QR code स्कैन करें। "Scan the QR code to check your name in the voter list" #SHURULOCALNEWS #SHURUAPPTEAM #MAKKITV #INDIA
MAKKI TV NEWS
वोटर लिस्ट में अपना नाम चेक करने के लिए QR code स्कैन करें। "Scan the QR code to check your name in the voter list" #SHURULOCALNEWS #SHURUAPPTEAM #MAKKITV #INDIA
More news from ಕರ್ನಾಟಕ and nearby areas
- ಸರ್ಕಾರ ಇದ್ದರೂ ಇಲ್ಲದಿದ್ದರೂ ಗೆಲುವು ಸಾಧ್ಯ: ಜಗದೀಶ ಶೆಟ್ಟರ್ ಆತ್ಮವಿಶ್ವಾಸ ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಬಿಜೆಪಿಯ ಸಂಘಟನಾತ್ಮಕ ಸಭೆ ಜರುಗಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮದಾಗಿದ್ದರೂ ಇಲ್ಲದಿದ್ದರೂ ಬಿಜೆಪಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. #bagalkot #karnataka #bjp1
- ಶೀಘ್ರದಲ್ಲೇ ಹಿಪ್ಪರಗಿ ಜಲಾಶಯದ ಗೇಟಗಳ ದುರಸ್ತಿ ಕಾರ್ಯ ಮಾಜಿ ಶಾಸಕ ಆನಂದ ನ್ಯಾಮಗೌಡ1
- ಮದುವೆ ಮಾಡಿಲ್ಲ ಎಂದು ಹೆತ್ತ ತಂದೆಯನ್ನೇ ಕೊಂದ ಪಾಪಿ ಮಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿ ಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿ1
- ಅನ್ನವನ್ನು ನಾವು ದೇವರೆಂದೇ ಪೂಜಿಸುತ್ತೆವೆ.1
- ಗೋಕಾಕಕ್ಕೆ ಆಗಮಿಸಿದ ಬೆಳಗಾವಿ ನೂತನ ಪೋಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್,,1
- ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ 93803537101
- ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾ... ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಜನಾರ್ಧನ ರೆಡ್ಡಿ ಸಾಕ್ಷಿ ನಾಶಪಡಿಸಲು ರಾಜಶೇಖರ್ ಮೃ*ತದೇಹವನ್ನ ಹೂಳುವ ಬದಲು ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಶಾನದ ಸಿಬ್ಬಂದಿ ಮಾತನಾಡಿರೋ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ1
- ಹಿಪ್ಪರಗಿ ಡ್ಯಾಮ್ ಗೆಟ್ ನಿರ್ವಹಣೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಕಂಡು ಬಂದರೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ :ಶಾಸಕ ಲಕ್ಷ್ಮಣ ಸವದಿ ಅಥಣಿ: ಹಿಪ್ಪರಗಿ ಡ್ಯಾಮ್ ಗೆಟ್ ತುಂಡಾಗುವ ಲ್ಲಿ ಇಲಾಖೆ ಅಥವಾ ನಿರ್ವಹಣೆ ಮಾಡುವ ವರು ಸಂಭಂದಪಟ್ಟ ಅಧಿಕಾರಿಗಳು ಯಾರಾದ್ರೂ ನಿರ್ಲಕ್ಷ ವಹಿಸಿದ್ದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ತಮ್ಮ ನಿವಾಸದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ ನಾಲ್ಕು ದಿನಗಳ ಹಿಂದೆ ಅಥಣಿ ಮತ್ತು ಜಮಖಂಡಿ ತಾಲ್ಲೂಕುಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿಪ್ಪರಗಿ ಜಲಾಶಯದ ಗೇಟ್ ಮಣಿದು ತಾಂತ್ರಿಕ ದೋಷದಿಂದಾಗಿ ಕಟ್ ಆಗಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದ 22ನೇ ಸಂಖ್ಯೆಯ ಕ್ರಸ್ಟ್ ಗೇಟ್ ಮುರಿದುಬಿದ್ದು, 8ರಿಂದ 9ಸಾವಿರ ಕೂಸೆಕ್ಸ್ ನೀರು ಹೊರಗಡೆ ಹರಿದು ಹೋಗುತ್ತಿತ್ತು.ಈ ಹಿನ್ನೆಲೆಯಲ್ಲಿ ಗೆಟ್ ಹಾನಿಯಾಗಿರುವ ಪರಿಣಾಮ ನದಿ ಪಾತ್ರದ ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಜಮಖಂಡಿ, ಅಥಣಿ, ಕಾಗವಾಡ, ರಾಯಭಾಗ, ಚಿಕ್ಕೋಡಿ ಐದು ತಾಲೂಕಿನ ಸುಮಾರು 700ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಇಲ್ಲಿಂದಲೇ ಆಗುತ್ತಿತ್ತು. ಎರಡು ಬದಿಗೆ ಸಾಕಷ್ಟು ನೀರಾವರಿ ಇರುವುದರಿಂದ ಸುಮಾರು ಮೂರು ಲಕ್ಷ ಹೆಕ್ಟರ್ ಪ್ರದೇಶಕ್ಕೆ ಇಲ್ಲಿಂದ ನೀರು ಉಣಿಸಲಾಗುತ್ತಿತ್ತು. ಇದರಿಂದ ಎಲ್ಲ ರೈತರು ಬಹಳ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನಮ್ಮ ನೀರಾವರಿ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಊಟ ಕೂಡ ಮಾಡದೆ ಯುದ್ಧೋಪಾದಿ ಯಲ್ಲಿಕಾರ್ಯನಿರ್ವಹಿಸಿದ್ದಾರೆ. ಹೊಸಪೇಟೆ ಹೈದರಾಬಾದ್ ಮಹಾರಾಷ್ಟ್ರ ದಿಂದ ತಜ್ಞರನ್ನು ಕರೆಸಿ ಇಲಾಖೆಯ ಎಲ್ಲಾ ಅಭಿಯಂತರುಗಳ ನ್ನು ಕರೆಸಿಕೊಂಡು ಕೆಎನ್ಎಲ್ ನ ವ್ಯವಸ್ಥಾಪಕ ನಿರ್ದೇಶಕರು ರಾಜೇಶ್ ಅಮೀನಬಾವಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಗಲು ರಾತ್ರಿ ಕಾರ್ಯನಿರ್ವಹಿಸಿ ಎರಡೇ ದಿನದಲ್ಲಿ ಗೇಟ್ಗಳನ್ನು ಅಳವಡಿಸಿದ್ದಾರೆ. ಟಿಬಿ ಡ್ಯಾಮ್ ನದಿ ಪಕ್ಕದ ಜನರಿಗೆ ಯಾವ ರೀತಿ ಆತಂಕ ಮೂಡಿತ್ತು ಹಾಗೆ ಕೃಷ್ಣಾ ನದಿ ಅಕ್ಕ ಪಕ್ಕದ ಜನರಿಗೆ ರೈತ ಬಂಧುಗಳಿಗೆ ನೀರಿನ ಫಲಾನುಭವಿಗಳಿಗೆ ಈ ಘಟನೆ ಅತಂಕ ಮೂಡಿಸಿತ್ತು. ನಾನು ಅಭಿಯಂತರುಗಳನ್ನು ತಜ್ಞರನ್ನು, ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರನ್ನು 5 ತಾಲೂಕಿನ ರೈತ ಬಂಧುಗಳ ಪರವಾಗಿ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. ಈಗಾಗಲೇ ಗೆಟ್ ಅಳವಡಿಸಿ ಇಪ್ಪತ್ತು ಇಪ್ಪತ್ತೊಂದು ವರ್ಷ ಕಳೆದಿದೆ. ಹೀಗಾಗಿ ಗೆಟ್ ಕಾರ್ಯ ಕ್ಷಮತೆ ಪರಿಶೀಲನೆ ಮಾಡಿ ತಜ್ಞರು ವರದಿ ನೀಡಿದರೆ ಅಗತ್ಯ ಬಿದ್ದರೆ ಅವುಗಳ ಬದಲಾವಣೆ ಮಾಡಿ ಹೊಸ ಗೆಟ್ ಅಳವಡಿಸುವ ಪ್ರಯತ್ನ ಮಾಡುತ್ತೇವೆ. ಖರ್ಚು ಹೆಚ್ಚಾಗುತ್ತದೆ ಎಂದು ಬದಲಾವಣೆ ಮಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಏಕೆಂದರೆ ಇದು ಜನರ ಜೀವನಕ್ಕೆ ಸಂಭಂದ ಪಟ್ಟಿದ್ದು ಅಗತ್ಯ ಹಾಗೂ ಅವಶ್ಯಕವಾಗಿದೆ. ಮಳೆ ಬೇಗ ಬಂದು ಈ ಬಾರಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಪ್ರತಿಯೊಂದು ಗೇಟುಗಳನ್ನು ನಿರ್ವಹಣೆ ಮಾಡುತ್ತಾ ಬರುತ್ತಾ ಇರುವಾಗ ಕೊನೆಗೆ ಎರಡು ಮೂರು ಗೇಟುಗಳು ಉಳಿದಿವೆ. ಇದರಲ್ಲಿ ಅಧಿಕಾರಿಗಳ ಲೋಪ ಏನಾದ್ರೂ ಇದ್ರೆ ಅವರ ಮೇಲೆ ಶಿಸ್ತು ಕ್ರಮ ಖಂಡಿತವಾಗಿ ತೆಗೆದುಕೊಳ್ಳುತ್ತೇವೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದು ಹೇಳಿದರು. ಜನತೆ ಆತಂಕ ಒಳಗಾಗುವಾಗ ಅಗತ್ಯವಿಲ್ಲ. ಉಪಮುಖ್ಯಮಂತ್ರಿ ಹಾಗೂ ಭಾರಿ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಎರಡು ಟಿಎಂಸಿ ನೀರು ಬಿಡಿಸುವ ಬಗ್ಗೆ ಚರ್ಚಿಸುತ್ತೇವೆ. ಅಗತ್ಯಬಿದ್ದರೆ ಹಣ ನೀಡಿಯಾದರೂ ನೀರು ಬಿಡಿಸಿಕೊಂಡು ಬರುತ್ತೇವೆ. ಈ ಕುರಿತು ನಮ್ಮ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಸಿಎಂ ಅವರಿಗೆ ಕೂಡ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.1