logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹುಣಸೂರು ತಾಲೂಕಿನ ಹನಗೂಡು ಬಿ.ಆರ್. ಕಾವಲು ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಕೊಲೆ ಯತ್ನ ನಡೆದಿದ್ದು, ತಂದೆ ಮತ್ತು ಮಗ ಮಚ್ಚಿನಿಂದ ಮಹಿಳೆಯ ಕೈ ಕಡಿದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಬಿ.ಆರ್. ಕಾವಲು ಗ್ರಾಮದ ನಿವಾಸಿ ಸುಬ್ರಮಣಿ ಅವರು ಹಾಲು ತೆಗೆದುಕೊಂಡು ಡೈರಿಗೆ ಹೋಗುತ್ತಿದ್ದಾಗ, ಅದೇ ಊರಿನ ಮಂಜುನಾಥನು ಬಿ.ಆರ್. ಕಾವಲು ಸರ್ಕಲ್ ಬಳಿ ಅವರ ಬೈಕ್ ಅನ್ನು ಅಡ್ಡಗಟ್ಟಿ ತಡೆದಿದ್ದಾನೆ. "ನೀನು ನನ್ನ ಹೆಂಡತಿಯ ಫೋನ್ ನಂಬರ್ ಏಕೆ ಕೇಳಿದೆ" ಎಂದು ಪ್ರಶ್ನಿಸಿ, ಸುಬ್ರಮಣಿ ಅವರನ್ನು ಜಾತಿ ನಿಂದನೆ ಮಾಡಿ "ಸೂಳೆಮಕ್ಕಳೇ, ನೀವೆಲಿ ವ*** ಸೂ***ಮಕ್ಕಳು" ಎಂದು ಬೈದಿದ್ದಾನೆ. ಈ ವೇಳೆ ತಮ್ಮ ಮನೆಯ ಮುಂದೆ ನಿಂತಿದ್ದ ಸುಬ್ರಮಣಿ ಅವರ ಪತ್ನಿ ಜಗಳದ ಸ್ಥಳಕ್ಕೆ ಬಂದಾಗ, ಮಂಜುನಾಥನು ಮತ್ತಷ್ಟು ಕಟುವಾಗಿ ಬೈದಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಗೆ, ಮಂಜುನಾಥನು ತನ್ನ ಮಗ ನಂದನ್‌ಗೆ "ಮಚ್ಚು ತೆಗೆದುಕೊಂಡು ಬಾ ಇವರನ್ನು ಕತ್ತರಿಸಿ ಹಾಕದ" ಎಂದು ಹೇಳಿದ್ದಾನೆ. ಕೂಡಲೇ ನಂದನ್ ಮನೆಯೊಳಗಿಂದ ಕಬ್ಬಿಣದ ಮಚ್ಚು ತಂದು, "ನಿಮ್ಮನ್ನು ಬಿಡುವುದಿಲ್ಲ, ಕೊಲೆ ಮಾಡಿ ಮುಗಿಸುತ್ತೇವೆ" ಎಂದು ಬೆದರಿಸಿ, ತನ್ನ ತಂದೆಯ ಉದ್ದೇಶದಂತೆ ಸುಬ್ರಮಣಿ ಅವರಿಗೆ ಬೀಸಲು ಬಂದಿದ್ದಾನೆ. ಈ ವೇಳೆ ಅವರ ಪತ್ನಿ ತಕ್ಷಣ ಕೈ ಅಡ್ಡ ಬಂದಾಗ, ಮಚ್ಚಿನ ಏಟು ಅವರ ಎಡಗೈ ಮಣಿಕಟ್ಟಿಗೆ ಬಿದ್ದು ಬಲವಾದ ಗಾಯವಾಗಿ ರಕ್ತ ಸುರಿಯಲು ಶುರುವಾಗಿದೆ. ಅಲ್ಲಿದ್ದ ಚೆಲುವರಾಜು, ಪಂಚವಳ್ಳಿ ಮತ್ತು ಬಿ.ಆರ್. ಕಾವಲು ಗ್ರಾಮದ ರಾಜು ಜಗಳ ಬಿಡಿಸಿ ಅವರನ್ನು ರಕ್ಷಿಸಿದ್ದಾರೆ. ಘಟನೆಯ ನಂತರವೂ ಮಂಜುನಾಥ ಮತ್ತು ನಂದನ್ ಇಬ್ಬರೂ "ಮಕ್ಕಳಾ ಇವತ್ತು ಬದುಕಿಕೊಂಡಿರಿ, ಮುಂದೆ ಸಿಕ್ಕಿ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲ" ಎಂದು ಕೊಲೆ ಬೆದರಿಕೆ ಹಾಕಿ, ನಂದನ್‌ನ ಕೈಯಲ್ಲಿದ್ದ ಮಚ್ಚಿನ ಸಮೇತ ಹೊರಟು ಹೋಗಿದ್ದಾರೆ. ಗಾಯಗೊಂಡ ಮಹಿಳೆಯನ್ನು ಅವರ ಗಂಡ ಸುಬ್ರಮಣಿ ಬೈಕಿನಲ್ಲಿ ಹನಗೋಡಿನ ಜೋಗೇಂದ್ರನಾಥ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಮೌರ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಮಂಜುನಾಥ ಮತ್ತು ನಂದನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ಮನವಿ ಮಾಡಿದ್ದಾರೆ.

15 hrs ago
user_Ravikumar
Ravikumar
Local News Reporter ಹುಣಸೂರು, ಮೈಸೂರು, ಕರ್ನಾಟಕ•
15 hrs ago

ಹುಣಸೂರು ತಾಲೂಕಿನ ಹನಗೂಡು ಬಿ.ಆರ್. ಕಾವಲು ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಕೊಲೆ ಯತ್ನ ನಡೆದಿದ್ದು, ತಂದೆ ಮತ್ತು ಮಗ ಮಚ್ಚಿನಿಂದ ಮಹಿಳೆಯ ಕೈ ಕಡಿದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಬಿ.ಆರ್. ಕಾವಲು ಗ್ರಾಮದ ನಿವಾಸಿ ಸುಬ್ರಮಣಿ ಅವರು ಹಾಲು ತೆಗೆದುಕೊಂಡು ಡೈರಿಗೆ ಹೋಗುತ್ತಿದ್ದಾಗ, ಅದೇ ಊರಿನ ಮಂಜುನಾಥನು ಬಿ.ಆರ್. ಕಾವಲು ಸರ್ಕಲ್ ಬಳಿ ಅವರ ಬೈಕ್ ಅನ್ನು ಅಡ್ಡಗಟ್ಟಿ ತಡೆದಿದ್ದಾನೆ. "ನೀನು ನನ್ನ ಹೆಂಡತಿಯ ಫೋನ್ ನಂಬರ್ ಏಕೆ ಕೇಳಿದೆ" ಎಂದು ಪ್ರಶ್ನಿಸಿ, ಸುಬ್ರಮಣಿ ಅವರನ್ನು ಜಾತಿ ನಿಂದನೆ ಮಾಡಿ "ಸೂಳೆಮಕ್ಕಳೇ, ನೀವೆಲಿ ವ*** ಸೂ***ಮಕ್ಕಳು" ಎಂದು ಬೈದಿದ್ದಾನೆ. ಈ ವೇಳೆ ತಮ್ಮ ಮನೆಯ ಮುಂದೆ ನಿಂತಿದ್ದ ಸುಬ್ರಮಣಿ ಅವರ ಪತ್ನಿ ಜಗಳದ ಸ್ಥಳಕ್ಕೆ ಬಂದಾಗ, ಮಂಜುನಾಥನು ಮತ್ತಷ್ಟು ಕಟುವಾಗಿ ಬೈದಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಗೆ, ಮಂಜುನಾಥನು ತನ್ನ ಮಗ ನಂದನ್‌ಗೆ "ಮಚ್ಚು ತೆಗೆದುಕೊಂಡು ಬಾ ಇವರನ್ನು ಕತ್ತರಿಸಿ ಹಾಕದ" ಎಂದು ಹೇಳಿದ್ದಾನೆ. ಕೂಡಲೇ ನಂದನ್ ಮನೆಯೊಳಗಿಂದ ಕಬ್ಬಿಣದ ಮಚ್ಚು ತಂದು, "ನಿಮ್ಮನ್ನು ಬಿಡುವುದಿಲ್ಲ, ಕೊಲೆ ಮಾಡಿ ಮುಗಿಸುತ್ತೇವೆ" ಎಂದು ಬೆದರಿಸಿ, ತನ್ನ ತಂದೆಯ ಉದ್ದೇಶದಂತೆ ಸುಬ್ರಮಣಿ ಅವರಿಗೆ ಬೀಸಲು ಬಂದಿದ್ದಾನೆ. ಈ ವೇಳೆ ಅವರ ಪತ್ನಿ ತಕ್ಷಣ ಕೈ ಅಡ್ಡ ಬಂದಾಗ, ಮಚ್ಚಿನ ಏಟು ಅವರ ಎಡಗೈ ಮಣಿಕಟ್ಟಿಗೆ ಬಿದ್ದು ಬಲವಾದ ಗಾಯವಾಗಿ ರಕ್ತ ಸುರಿಯಲು ಶುರುವಾಗಿದೆ. ಅಲ್ಲಿದ್ದ ಚೆಲುವರಾಜು, ಪಂಚವಳ್ಳಿ ಮತ್ತು ಬಿ.ಆರ್. ಕಾವಲು ಗ್ರಾಮದ ರಾಜು ಜಗಳ ಬಿಡಿಸಿ ಅವರನ್ನು ರಕ್ಷಿಸಿದ್ದಾರೆ. ಘಟನೆಯ ನಂತರವೂ ಮಂಜುನಾಥ ಮತ್ತು ನಂದನ್ ಇಬ್ಬರೂ "ಮಕ್ಕಳಾ ಇವತ್ತು ಬದುಕಿಕೊಂಡಿರಿ, ಮುಂದೆ ಸಿಕ್ಕಿ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲ" ಎಂದು ಕೊಲೆ ಬೆದರಿಕೆ ಹಾಕಿ, ನಂದನ್‌ನ ಕೈಯಲ್ಲಿದ್ದ ಮಚ್ಚಿನ ಸಮೇತ ಹೊರಟು ಹೋಗಿದ್ದಾರೆ. ಗಾಯಗೊಂಡ ಮಹಿಳೆಯನ್ನು ಅವರ ಗಂಡ ಸುಬ್ರಮಣಿ ಬೈಕಿನಲ್ಲಿ ಹನಗೋಡಿನ ಜೋಗೇಂದ್ರನಾಥ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಮೌರ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಮಂಜುನಾಥ ಮತ್ತು ನಂದನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ಮನವಿ ಮಾಡಿದ್ದಾರೆ.

More news from ಕರ್ನಾಟಕ and nearby areas
  • ವಿಧಾನ ಪರಿಷತ್ ಚುನಾವಣೆಯಲ್ಲಿ ತಾನು ಚಲಾಯಿಸಿದ ಮತ ಅಸಿಂಧು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಸ್ಪಷ್ಟನೆ ನೀಡಿದ್ದಾರೆ. ತನ್ನ ಮತ ಅಸಿಂಧು ಎಂದು ಹಬ್ಬಿಸಲಾದ ಸುಳ್ಳು ವದಂತಿಯನ್ನು ವ್ಯವಸ್ಥಿತ ಷಡ್ಯಂತ್ರ ಎಂದು ಅವರು ಖಂಡಿಸಿದ್ದಾರೆ. ತಾನು ಮತ ಚಲಾಯಿಸಲು ಅಪ್ರಬುದ್ಧನಲ್ಲ, ಬದಲಾಗಿ ವಿವೇಚನೆಯಿಂದ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದ ಶ್ರೀವತ್ಸ, ತನ್ನ ಮತ ಅಸಿಂಧು ಎಂದು ಯಾರು ಹೇಳಿದರು ಮತ್ತು ಚುನಾವಣಾ ಆಯೋಗ ಈ ಬಗ್ಗೆ ಏನಾದರೂ ತಿಳಿಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದೊಂದು ಗೌಪ್ಯ ಮತದಾನ ಎಂಬುದನ್ನು ಅವರು ಒತ್ತಿಹೇಳಿದ್ದಾರೆ. ತನ್ನ ವಿರುದ್ಧ ಸ್ವತಃ ತನ್ನ ಪಕ್ಷದವರೇ ಪಿತೂರಿ ನಡೆಸಿದ್ದಾರೆ ಎಂದು ಶಾಸಕ ಶ್ರೀವತ್ಸ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕೆಯೊಂದಕ್ಕೂ ತನ್ನ ಬಗ್ಗೆ ಇದೇ ರೀತಿ ಬರೆಯಿರಿ ಎಂದು ಹೇಳಿ ಬರೆಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ. ಅಡ್ಡ ಮತದಾನ ನಡೆದಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ ಎಂದು ಶ್ರೀವತ್ಸ ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ಎಲ್ಲಾ ವಿಷಯಗಳು ಬಹಿರಂಗ ಆಗಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
    1
    ವಿಧಾನ ಪರಿಷತ್ ಚುನಾವಣೆಯಲ್ಲಿ ತಾನು ಚಲಾಯಿಸಿದ ಮತ ಅಸಿಂಧು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಸ್ಪಷ್ಟನೆ ನೀಡಿದ್ದಾರೆ. ತನ್ನ ಮತ ಅಸಿಂಧು ಎಂದು ಹಬ್ಬಿಸಲಾದ ಸುಳ್ಳು ವದಂತಿಯನ್ನು ವ್ಯವಸ್ಥಿತ ಷಡ್ಯಂತ್ರ ಎಂದು ಅವರು ಖಂಡಿಸಿದ್ದಾರೆ. ತಾನು ಮತ ಚಲಾಯಿಸಲು ಅಪ್ರಬುದ್ಧನಲ್ಲ, ಬದಲಾಗಿ ವಿವೇಚನೆಯಿಂದ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದ ಶ್ರೀವತ್ಸ, ತನ್ನ ಮತ ಅಸಿಂಧು ಎಂದು ಯಾರು ಹೇಳಿದರು ಮತ್ತು ಚುನಾವಣಾ ಆಯೋಗ ಈ ಬಗ್ಗೆ ಏನಾದರೂ ತಿಳಿಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದೊಂದು ಗೌಪ್ಯ ಮತದಾನ ಎಂಬುದನ್ನು ಅವರು ಒತ್ತಿಹೇಳಿದ್ದಾರೆ.

ತನ್ನ ವಿರುದ್ಧ ಸ್ವತಃ ತನ್ನ ಪಕ್ಷದವರೇ ಪಿತೂರಿ ನಡೆಸಿದ್ದಾರೆ ಎಂದು ಶಾಸಕ ಶ್ರೀವತ್ಸ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕೆಯೊಂದಕ್ಕೂ ತನ್ನ ಬಗ್ಗೆ ಇದೇ ರೀತಿ ಬರೆಯಿರಿ ಎಂದು ಹೇಳಿ ಬರೆಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ. ಅಡ್ಡ ಮತದಾನ ನಡೆದಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ ಎಂದು ಶ್ರೀವತ್ಸ ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ಎಲ್ಲಾ ವಿಷಯಗಳು ಬಹಿರಂಗ ಆಗಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
    user_Ravikumar
    Ravikumar
    Local News Reporter ಹುಣಸೂರು, ಮೈಸೂರು, ಕರ್ನಾಟಕ•
    14 hrs ago
  • ಮೈಸೂರು ಜನರಿಗೆ ಉತ್ತಮ ನಿದ್ರೆಗಾಗಿ ಆರಾಮದಾಯಕ ಮ್ಯಾಟ್ರೆಸ್ ಹುಡುಕುತ್ತಿರುವವರಿಗೆ ಒಂದು ವಿಶೇಷ ಸಿಹಿಸುದ್ದಿ ಇಲ್ಲಿದೆ. ಮೈಸೂರಿನ 'AR ಡೈಮಂಡ್ ಮ್ಯಾಟ್ರೆಸ್' ಈಗ ಭರ್ಜರಿ ಆಫರ್‌ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇಲ್ಲಿ ಕಿಂಗ್ ಸೈಜ್ ಅಥವಾ ಕ್ವೀನ್ ಸೈಜ್ ಮ್ಯಾಟ್ರೆಸ್ ಖರೀದಿಸುವವರಿಗೆ ಎರಡು ಮೆಮೊರಿ ಫೋಮ್ ಪಿಲ್ಲೋಗಳು ಸಂಪೂರ್ಣ ಉಚಿತವಾಗಿ ಸಿಗಲಿವೆ. 'AR ಡೈಮಂಡ್ ಮ್ಯಾಟ್ರೆಸ್' 4 ಇಂಚಿನಿಂದ 10 ಇಂಚಿನವರೆಗಿನ ವಿವಿಧ ಗಾತ್ರ ಮತ್ತು ಎತ್ತರದ ಮ್ಯಾಟ್ರೆಸ್‌ಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ದಿವಾನ ಕಾಟ್ ಅಥವಾ ಸಾಮಾನ್ಯ ಮಂಚಕ್ಕೂ ಬೇಕಾದ ಹಾಸಿಗೆಗಳನ್ನು ಇಲ್ಲಿ ಆಯ್ಕೆ ಮಾಡಬಹುದು. ಹೆಚ್ಚಿನ ಮಾಹಿತಿ ಅಥವಾ ಅಂಗಡಿಯ ವಿಳಾಸಕ್ಕಾಗಿ 9886734233 ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಮನೆಯಲ್ಲಿ ನಿದ್ರೆಯ ಗುಣಮಟ್ಟವನ್ನು ಇಂದೇ ಹೆಚ್ಚಿಸಿಕೊಳ್ಳಬಹುದು.
    1
    ಮೈಸೂರು ಜನರಿಗೆ ಉತ್ತಮ ನಿದ್ರೆಗಾಗಿ ಆರಾಮದಾಯಕ ಮ್ಯಾಟ್ರೆಸ್ ಹುಡುಕುತ್ತಿರುವವರಿಗೆ ಒಂದು ವಿಶೇಷ ಸಿಹಿಸುದ್ದಿ ಇಲ್ಲಿದೆ. ಮೈಸೂರಿನ 'AR ಡೈಮಂಡ್ ಮ್ಯಾಟ್ರೆಸ್' ಈಗ ಭರ್ಜರಿ ಆಫರ್‌ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇಲ್ಲಿ ಕಿಂಗ್ ಸೈಜ್ ಅಥವಾ ಕ್ವೀನ್ ಸೈಜ್ ಮ್ಯಾಟ್ರೆಸ್ ಖರೀದಿಸುವವರಿಗೆ ಎರಡು ಮೆಮೊರಿ ಫೋಮ್ ಪಿಲ್ಲೋಗಳು ಸಂಪೂರ್ಣ ಉಚಿತವಾಗಿ ಸಿಗಲಿವೆ. 'AR ಡೈಮಂಡ್ ಮ್ಯಾಟ್ರೆಸ್' 4 ಇಂಚಿನಿಂದ 10 ಇಂಚಿನವರೆಗಿನ ವಿವಿಧ ಗಾತ್ರ ಮತ್ತು ಎತ್ತರದ ಮ್ಯಾಟ್ರೆಸ್‌ಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ದಿವಾನ ಕಾಟ್ ಅಥವಾ ಸಾಮಾನ್ಯ ಮಂಚಕ್ಕೂ ಬೇಕಾದ ಹಾಸಿಗೆಗಳನ್ನು ಇಲ್ಲಿ ಆಯ್ಕೆ ಮಾಡಬಹುದು. ಹೆಚ್ಚಿನ ಮಾಹಿತಿ ಅಥವಾ ಅಂಗಡಿಯ ವಿಳಾಸಕ್ಕಾಗಿ 9886734233 ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಮನೆಯಲ್ಲಿ ನಿದ್ರೆಯ ಗುಣಮಟ್ಟವನ್ನು ಇಂದೇ ಹೆಚ್ಚಿಸಿಕೊಳ್ಳಬಹುದು.
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    36 min ago
  • ಭಾರತದಲ್ಲಿ ವೈರಲ್ ಆಗಿರುವ ಒಂದು ವಿಷಯದ ಪ್ರಕಾರ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕೃತ ದಾಖಲೆಗಳಲ್ಲಿನ ಎಲ್ಲಾ ರೀತಿಯ ಅಕ್ರಮಗಳನ್ನು ಕಡೆಗಣಿಸುವುದರಿಂದ, ಸಮುದಾಯದ ಜನರು ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
    1
    ಭಾರತದಲ್ಲಿ ವೈರಲ್ ಆಗಿರುವ ಒಂದು ವಿಷಯದ ಪ್ರಕಾರ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕೃತ ದಾಖಲೆಗಳಲ್ಲಿನ ಎಲ್ಲಾ ರೀತಿಯ ಅಕ್ರಮಗಳನ್ನು ಕಡೆಗಣಿಸುವುದರಿಂದ, ಸಮುದಾಯದ ಜನರು ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಮಳವಳ್ಳಿಯ ಬಾಚನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಮಹೇಂದ್ರರವರು ದಿಢೀರ್ ಭೇಟಿ ನೀಡಿ ಶಾಲೆಯ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ವಸತಿ ಶಾಲೆಯಲ್ಲಿನ ಅವ್ಯವಸ್ಥೆಗಳನ್ನು ಗಮನಿಸಿದ ಅವರು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಪ್ರಾಂಶುಪಾಲರು ಮತ್ತು ವಾರ್ಡನ್‌ಗೆ ಖಡಕ್ ಸೂಚನೆ ನೀಡಿದ್ದಾರೆ. ಪರಿಶೀಲನೆ ವೇಳೆ, ವಸತಿ ಶಾಲೆಯಲ್ಲಿ ವಾರ್ಡನ್, ಪ್ರಾಂಶುಪಾಲರು ಹಾಗೂ ಕೆಲವು ಶಿಕ್ಷಕರು ವಾಸ್ತವ್ಯ ಮಾಡದೆ ತಮ್ಮ ಮನೆಗಳಿಗೆ ತೆರಳುತ್ತಿರುವ ದೂರುಗಳು ಕೇಳಿಬಂದಿವೆ. ಅಲ್ಲದೆ, ವಸತಿ ಶಾಲೆಯ ಊಟದ ವ್ಯವಸ್ಥೆಯು ದಿನಚರಿ ಪ್ರಕಾರ ನಡೆಯದೆ ಅವರ ಇಷ್ಟ ಬಂದ ಹಾಗೆ ಮಕ್ಕಳಿಗೆ ಊಟ ನೀಡಲಾಗುತ್ತಿದೆ ಎಂಬುದನ್ನು ನ್ಯಾಯಾಧೀಶರು ಪತ್ತೆ ಹಚ್ಚಿದರು. ಇದರಿಂದ ಕೆಂಡಮಂಡಲರಾದ ನ್ಯಾಯಾಧೀಶರು ಶಾಲೆಯ ಹಿರಿಯ ಶಿಕ್ಷಕರನ್ನು ಹಾಗೂ ಅಡುಗೆ ತಯಾರಿಕರನ್ನು ತರಾಟೆಗೆ ತೆಗೆದುಕೊಂಡರು. ಅವರು, ಊಟದ ಚಾರ್ಟ್ ಕೇವಲ ಗೋಡೆಯ ಮೇಲೆ ನಾಮಕಾವಸ್ತೆಗಿದ್ದು, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಿಗೆ ಸರಿಯಾದ ಪೋಷಕಾಂಶ ಮತ್ತು ಪ್ರಮಾಣದ ಆಹಾರ ನೀಡದಿರುವುದು ಅವರ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಸರ್ಕಾರ ವೈಜ್ಞಾನಿಕ ಕ್ರಮದಲ್ಲಿ ಆಹಾರ ಚಾರ್ಟ್ ತಯಾರಿಸಿದ್ದು, ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶದ ಆಹಾರ ದೊರಕಬೇಕು, ಅದಕ್ಕೆ ನೀವು ಅಡ್ಡಿಪಡಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರೆದರೆ ಶಿಸ್ತು ಕ್ರಮ ಜರುಗಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನ್ಯಾಯಾಧೀಶರು, ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಎಲ್ಲಾ ಶಿಕ್ಷಕರು, ವಾರ್ಡನ್ ಹಾಗೂ ಪ್ರಾಂಶುಪಾಲರು ವಾಸ್ತವ್ಯ ಇರಲೇಬೇಕು ಎಂದು ಸೂಚಿಸಿದರು. ವಾಸ್ತವ್ಯ ಇರದೆ ಮನೆಗಳಿಗೆ ತೆರಳಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದ ಅವರು, ವಾಸ್ತವ್ಯ ಇರದ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕ್ಕೆ ತಿಳಿಸಿದರು. ಇದೇ ವೇಳೆ, ಶಾಲಾ ಮಕ್ಕಳು ಆಟೋಪಕರಣಗಳು ಹಾಗೂ ಆಟ ಆಡುವ ಮೈದಾನ ಸರಿಯಾಗಿಲ್ಲ ಎಂದು ಅನೇಕ ಸಮಸ್ಯೆಗಳನ್ನು ಹೇಳಿಕೊಂಡರು. ಮಕ್ಕಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಲ್ಲಿರುವ ಶಿಕ್ಷಕರಿಗೆ ತಾಕೀತು ಮಾಡಿದರು. ಈ ದಿಢೀರ್ ಭೇಟಿ ಸಂದರ್ಭದಲ್ಲಿ ತಾಲೂಕು ಕಾನೂನು ಸಮಿತಿಯ ಸದಸ್ಯರು, ವಕೀಲರ ಸಂಘದ ಉಪಾಧ್ಯಕ್ಷ ವಿ. ಎಂ. ಮಲ್ಲಪ್ಪ, ಕಾರ್ಯದರ್ಶಿ ಸಿ. ಎಂ. ನಟೇಶ್, ವಕೀಲ ರಾಜೇಂದ್ರ ಕುಮಾರ್ ಹಾಗೂ ಅಪರ ಸರ್ಕಾರಿ ವಕೀಲ ಶ್ರೀಕಂಠ ಸ್ವಾಮಿ ಉಪಸ್ಥಿತರಿದ್ದರು.
    1
    ಮಳವಳ್ಳಿಯ ಬಾಚನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಮಹೇಂದ್ರರವರು ದಿಢೀರ್ ಭೇಟಿ ನೀಡಿ ಶಾಲೆಯ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ವಸತಿ ಶಾಲೆಯಲ್ಲಿನ ಅವ್ಯವಸ್ಥೆಗಳನ್ನು ಗಮನಿಸಿದ ಅವರು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಪ್ರಾಂಶುಪಾಲರು ಮತ್ತು ವಾರ್ಡನ್‌ಗೆ ಖಡಕ್ ಸೂಚನೆ ನೀಡಿದ್ದಾರೆ.

ಪರಿಶೀಲನೆ ವೇಳೆ, ವಸತಿ ಶಾಲೆಯಲ್ಲಿ ವಾರ್ಡನ್, ಪ್ರಾಂಶುಪಾಲರು ಹಾಗೂ ಕೆಲವು ಶಿಕ್ಷಕರು ವಾಸ್ತವ್ಯ ಮಾಡದೆ ತಮ್ಮ ಮನೆಗಳಿಗೆ ತೆರಳುತ್ತಿರುವ ದೂರುಗಳು ಕೇಳಿಬಂದಿವೆ. ಅಲ್ಲದೆ, ವಸತಿ ಶಾಲೆಯ ಊಟದ ವ್ಯವಸ್ಥೆಯು ದಿನಚರಿ ಪ್ರಕಾರ ನಡೆಯದೆ ಅವರ ಇಷ್ಟ ಬಂದ ಹಾಗೆ ಮಕ್ಕಳಿಗೆ ಊಟ ನೀಡಲಾಗುತ್ತಿದೆ ಎಂಬುದನ್ನು ನ್ಯಾಯಾಧೀಶರು ಪತ್ತೆ ಹಚ್ಚಿದರು. ಇದರಿಂದ ಕೆಂಡಮಂಡಲರಾದ ನ್ಯಾಯಾಧೀಶರು ಶಾಲೆಯ ಹಿರಿಯ ಶಿಕ್ಷಕರನ್ನು ಹಾಗೂ ಅಡುಗೆ ತಯಾರಿಕರನ್ನು ತರಾಟೆಗೆ ತೆಗೆದುಕೊಂಡರು. ಅವರು, ಊಟದ ಚಾರ್ಟ್ ಕೇವಲ ಗೋಡೆಯ ಮೇಲೆ ನಾಮಕಾವಸ್ತೆಗಿದ್ದು, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಿಗೆ ಸರಿಯಾದ ಪೋಷಕಾಂಶ ಮತ್ತು ಪ್ರಮಾಣದ ಆಹಾರ ನೀಡದಿರುವುದು ಅವರ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಸರ್ಕಾರ ವೈಜ್ಞಾನಿಕ ಕ್ರಮದಲ್ಲಿ ಆಹಾರ ಚಾರ್ಟ್ ತಯಾರಿಸಿದ್ದು, ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶದ ಆಹಾರ ದೊರಕಬೇಕು, ಅದಕ್ಕೆ ನೀವು ಅಡ್ಡಿಪಡಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರೆದರೆ ಶಿಸ್ತು ಕ್ರಮ ಜರುಗಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನ್ಯಾಯಾಧೀಶರು, ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಎಲ್ಲಾ ಶಿಕ್ಷಕರು, ವಾರ್ಡನ್ ಹಾಗೂ ಪ್ರಾಂಶುಪಾಲರು ವಾಸ್ತವ್ಯ ಇರಲೇಬೇಕು ಎಂದು ಸೂಚಿಸಿದರು. ವಾಸ್ತವ್ಯ ಇರದೆ ಮನೆಗಳಿಗೆ ತೆರಳಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದ ಅವರು, ವಾಸ್ತವ್ಯ ಇರದ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕ್ಕೆ ತಿಳಿಸಿದರು. ಇದೇ ವೇಳೆ, ಶಾಲಾ ಮಕ್ಕಳು ಆಟೋಪಕರಣಗಳು ಹಾಗೂ ಆಟ ಆಡುವ ಮೈದಾನ ಸರಿಯಾಗಿಲ್ಲ ಎಂದು ಅನೇಕ ಸಮಸ್ಯೆಗಳನ್ನು ಹೇಳಿಕೊಂಡರು. ಮಕ್ಕಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಲ್ಲಿರುವ ಶಿಕ್ಷಕರಿಗೆ ತಾಕೀತು ಮಾಡಿದರು.

ಈ ದಿಢೀರ್ ಭೇಟಿ ಸಂದರ್ಭದಲ್ಲಿ ತಾಲೂಕು ಕಾನೂನು ಸಮಿತಿಯ ಸದಸ್ಯರು, ವಕೀಲರ ಸಂಘದ ಉಪಾಧ್ಯಕ್ಷ ವಿ. ಎಂ. ಮಲ್ಲಪ್ಪ, ಕಾರ್ಯದರ್ಶಿ ಸಿ. ಎಂ. ನಟೇಶ್, ವಕೀಲ ರಾಜೇಂದ್ರ ಕುಮಾರ್ ಹಾಗೂ ಅಪರ ಸರ್ಕಾರಿ ವಕೀಲ ಶ್ರೀಕಂಠ ಸ್ವಾಮಿ ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    31 min ago
  • ಚಾಮರಾಜನಗರ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನ ಹಾಗೂ ಯೋಗ ನಿರತ ಸಂಘ ಸಂಸ್ಥೆಗಳ ಸಹಯೋಗದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ದಿನನಿತ್ಯದ ಜೀವನದಲ್ಲಿ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವು ಗಣನೀಯವಾಗಿ ವೃದ್ಧಿಸುತ್ತದೆ ಎಂದು ತಿಳಿಸಿದರು. 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಯೋಗದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದ ಶ್ರೀರೂಪ, ಯೋಗ ಎಂದರೆ ಕೇವಲ ದೈಹಿಕ ಕಸರತ್ತು ಅಥವಾ ಆಸನಗಳಲ್ಲ, ಬದಲಿಗೆ ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯುವ ಅದ್ಭುತ ಕಲೆ ಎಂದರು. ಇದು ನಮ್ಮ ಭಾರತದ ಪ್ರಾಚೀನ ಋಷಿ-ಮುನಿಗಳು ನಮಗೆ ನೀಡಿರುವ ಅಮೂಲ್ಯ ಕೊಡುಗೆಯಾಗಿದ್ದು, ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಮಾತನಾಡಿ, ಯೋಗ ಅಭ್ಯಾಸದಿಂದ ಮಾನಸಿಕ ಆರೋಗ್ಯ ಸದೃಢವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಿಎಒ ಸತೀಶ್ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಎಎಸ್‍ಪಿ ಶಶಿಧರ್, ನಗರಸಭಾ ಪೌರಾಯುಕ್ತ ಪರಶುರಾಮ ಛಲವಾದಿ, ಡಿಡಿಪಿಐ ಚಂದ್ರಪಾಟೀಲ್, ಯೋಗ ವೈದ್ಯರಾದ ಡಾ. ಗಗನ್, ಮನೋಜ್, ಪುನೀತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಘ-ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
    1
    ಚಾಮರಾಜನಗರ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನ ಹಾಗೂ ಯೋಗ ನಿರತ ಸಂಘ ಸಂಸ್ಥೆಗಳ ಸಹಯೋಗದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ದಿನನಿತ್ಯದ ಜೀವನದಲ್ಲಿ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವು ಗಣನೀಯವಾಗಿ ವೃದ್ಧಿಸುತ್ತದೆ ಎಂದು ತಿಳಿಸಿದರು. 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಯೋಗದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದ ಶ್ರೀರೂಪ, ಯೋಗ ಎಂದರೆ ಕೇವಲ ದೈಹಿಕ ಕಸರತ್ತು ಅಥವಾ ಆಸನಗಳಲ್ಲ, ಬದಲಿಗೆ ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯುವ ಅದ್ಭುತ ಕಲೆ ಎಂದರು. ಇದು ನಮ್ಮ ಭಾರತದ ಪ್ರಾಚೀನ ಋಷಿ-ಮುನಿಗಳು ನಮಗೆ ನೀಡಿರುವ ಅಮೂಲ್ಯ ಕೊಡುಗೆಯಾಗಿದ್ದು, ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಮಾತನಾಡಿ, ಯೋಗ ಅಭ್ಯಾಸದಿಂದ ಮಾನಸಿಕ ಆರೋಗ್ಯ ಸದೃಢವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಎಒ ಸತೀಶ್ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಎಎಸ್‍ಪಿ ಶಶಿಧರ್, ನಗರಸಭಾ ಪೌರಾಯುಕ್ತ ಪರಶುರಾಮ ಛಲವಾದಿ, ಡಿಡಿಪಿಐ ಚಂದ್ರಪಾಟೀಲ್, ಯೋಗ ವೈದ್ಯರಾದ ಡಾ. ಗಗನ್, ಮನೋಜ್, ಪುನೀತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಘ-ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    10 hrs ago
  • ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಒಂದು ಚಿರತೆ ಬೋನಿಗೆ ಬಿದ್ದಿದೆ.
    1
    ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಒಂದು ಚಿರತೆ ಬೋನಿಗೆ ಬಿದ್ದಿದೆ.
    user_Saloon@3
    Saloon@3
    Make-up artist ತಿಪಟೂರು, ತುಮಕೂರು, ಕರ್ನಾಟಕ•
    7 hrs ago
  • ಹುಣಸೂರು ತಾಲೂಕಿನ ಹನಗೂಡು ಬಿ.ಆರ್. ಕಾವಲು ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಕೊಲೆ ಯತ್ನ ನಡೆದಿದ್ದು, ತಂದೆ ಮತ್ತು ಮಗ ಮಚ್ಚಿನಿಂದ ಮಹಿಳೆಯ ಕೈ ಕಡಿದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಬಿ.ಆರ್. ಕಾವಲು ಗ್ರಾಮದ ನಿವಾಸಿ ಸುಬ್ರಮಣಿ ಅವರು ಹಾಲು ತೆಗೆದುಕೊಂಡು ಡೈರಿಗೆ ಹೋಗುತ್ತಿದ್ದಾಗ, ಅದೇ ಊರಿನ ಮಂಜುನಾಥನು ಬಿ.ಆರ್. ಕಾವಲು ಸರ್ಕಲ್ ಬಳಿ ಅವರ ಬೈಕ್ ಅನ್ನು ಅಡ್ಡಗಟ್ಟಿ ತಡೆದಿದ್ದಾನೆ. "ನೀನು ನನ್ನ ಹೆಂಡತಿಯ ಫೋನ್ ನಂಬರ್ ಏಕೆ ಕೇಳಿದೆ" ಎಂದು ಪ್ರಶ್ನಿಸಿ, ಸುಬ್ರಮಣಿ ಅವರನ್ನು ಜಾತಿ ನಿಂದನೆ ಮಾಡಿ "ಸೂಳೆಮಕ್ಕಳೇ, ನೀವೆಲಿ ವ*** ಸೂ***ಮಕ್ಕಳು" ಎಂದು ಬೈದಿದ್ದಾನೆ. ಈ ವೇಳೆ ತಮ್ಮ ಮನೆಯ ಮುಂದೆ ನಿಂತಿದ್ದ ಸುಬ್ರಮಣಿ ಅವರ ಪತ್ನಿ ಜಗಳದ ಸ್ಥಳಕ್ಕೆ ಬಂದಾಗ, ಮಂಜುನಾಥನು ಮತ್ತಷ್ಟು ಕಟುವಾಗಿ ಬೈದಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಗೆ, ಮಂಜುನಾಥನು ತನ್ನ ಮಗ ನಂದನ್‌ಗೆ "ಮಚ್ಚು ತೆಗೆದುಕೊಂಡು ಬಾ ಇವರನ್ನು ಕತ್ತರಿಸಿ ಹಾಕದ" ಎಂದು ಹೇಳಿದ್ದಾನೆ. ಕೂಡಲೇ ನಂದನ್ ಮನೆಯೊಳಗಿಂದ ಕಬ್ಬಿಣದ ಮಚ್ಚು ತಂದು, "ನಿಮ್ಮನ್ನು ಬಿಡುವುದಿಲ್ಲ, ಕೊಲೆ ಮಾಡಿ ಮುಗಿಸುತ್ತೇವೆ" ಎಂದು ಬೆದರಿಸಿ, ತನ್ನ ತಂದೆಯ ಉದ್ದೇಶದಂತೆ ಸುಬ್ರಮಣಿ ಅವರಿಗೆ ಬೀಸಲು ಬಂದಿದ್ದಾನೆ. ಈ ವೇಳೆ ಅವರ ಪತ್ನಿ ತಕ್ಷಣ ಕೈ ಅಡ್ಡ ಬಂದಾಗ, ಮಚ್ಚಿನ ಏಟು ಅವರ ಎಡಗೈ ಮಣಿಕಟ್ಟಿಗೆ ಬಿದ್ದು ಬಲವಾದ ಗಾಯವಾಗಿ ರಕ್ತ ಸುರಿಯಲು ಶುರುವಾಗಿದೆ. ಅಲ್ಲಿದ್ದ ಚೆಲುವರಾಜು, ಪಂಚವಳ್ಳಿ ಮತ್ತು ಬಿ.ಆರ್. ಕಾವಲು ಗ್ರಾಮದ ರಾಜು ಜಗಳ ಬಿಡಿಸಿ ಅವರನ್ನು ರಕ್ಷಿಸಿದ್ದಾರೆ. ಘಟನೆಯ ನಂತರವೂ ಮಂಜುನಾಥ ಮತ್ತು ನಂದನ್ ಇಬ್ಬರೂ "ಮಕ್ಕಳಾ ಇವತ್ತು ಬದುಕಿಕೊಂಡಿರಿ, ಮುಂದೆ ಸಿಕ್ಕಿ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲ" ಎಂದು ಕೊಲೆ ಬೆದರಿಕೆ ಹಾಕಿ, ನಂದನ್‌ನ ಕೈಯಲ್ಲಿದ್ದ ಮಚ್ಚಿನ ಸಮೇತ ಹೊರಟು ಹೋಗಿದ್ದಾರೆ. ಗಾಯಗೊಂಡ ಮಹಿಳೆಯನ್ನು ಅವರ ಗಂಡ ಸುಬ್ರಮಣಿ ಬೈಕಿನಲ್ಲಿ ಹನಗೋಡಿನ ಜೋಗೇಂದ್ರನಾಥ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಮೌರ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಮಂಜುನಾಥ ಮತ್ತು ನಂದನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ಮನವಿ ಮಾಡಿದ್ದಾರೆ.
    1
    ಹುಣಸೂರು ತಾಲೂಕಿನ ಹನಗೂಡು ಬಿ.ಆರ್. ಕಾವಲು ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಕೊಲೆ ಯತ್ನ ನಡೆದಿದ್ದು, ತಂದೆ ಮತ್ತು ಮಗ ಮಚ್ಚಿನಿಂದ ಮಹಿಳೆಯ ಕೈ ಕಡಿದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಬಿ.ಆರ್. ಕಾವಲು ಗ್ರಾಮದ ನಿವಾಸಿ ಸುಬ್ರಮಣಿ ಅವರು ಹಾಲು ತೆಗೆದುಕೊಂಡು ಡೈರಿಗೆ ಹೋಗುತ್ತಿದ್ದಾಗ, ಅದೇ ಊರಿನ ಮಂಜುನಾಥನು ಬಿ.ಆರ್. ಕಾವಲು ಸರ್ಕಲ್ ಬಳಿ ಅವರ ಬೈಕ್ ಅನ್ನು ಅಡ್ಡಗಟ್ಟಿ ತಡೆದಿದ್ದಾನೆ. "ನೀನು ನನ್ನ ಹೆಂಡತಿಯ ಫೋನ್ ನಂಬರ್ ಏಕೆ ಕೇಳಿದೆ" ಎಂದು ಪ್ರಶ್ನಿಸಿ, ಸುಬ್ರಮಣಿ ಅವರನ್ನು ಜಾತಿ ನಿಂದನೆ ಮಾಡಿ "ಸೂಳೆಮಕ್ಕಳೇ, ನೀವೆಲಿ ವ*** ಸೂ***ಮಕ್ಕಳು" ಎಂದು ಬೈದಿದ್ದಾನೆ.

ಈ ವೇಳೆ ತಮ್ಮ ಮನೆಯ ಮುಂದೆ ನಿಂತಿದ್ದ ಸುಬ್ರಮಣಿ ಅವರ ಪತ್ನಿ ಜಗಳದ ಸ್ಥಳಕ್ಕೆ ಬಂದಾಗ, ಮಂಜುನಾಥನು ಮತ್ತಷ್ಟು ಕಟುವಾಗಿ ಬೈದಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಗೆ, ಮಂಜುನಾಥನು ತನ್ನ ಮಗ ನಂದನ್‌ಗೆ "ಮಚ್ಚು ತೆಗೆದುಕೊಂಡು ಬಾ ಇವರನ್ನು ಕತ್ತರಿಸಿ ಹಾಕದ" ಎಂದು ಹೇಳಿದ್ದಾನೆ. ಕೂಡಲೇ ನಂದನ್ ಮನೆಯೊಳಗಿಂದ ಕಬ್ಬಿಣದ ಮಚ್ಚು ತಂದು, "ನಿಮ್ಮನ್ನು ಬಿಡುವುದಿಲ್ಲ, ಕೊಲೆ ಮಾಡಿ ಮುಗಿಸುತ್ತೇವೆ" ಎಂದು ಬೆದರಿಸಿ, ತನ್ನ ತಂದೆಯ ಉದ್ದೇಶದಂತೆ ಸುಬ್ರಮಣಿ ಅವರಿಗೆ ಬೀಸಲು ಬಂದಿದ್ದಾನೆ. ಈ ವೇಳೆ ಅವರ ಪತ್ನಿ ತಕ್ಷಣ ಕೈ ಅಡ್ಡ ಬಂದಾಗ, ಮಚ್ಚಿನ ಏಟು ಅವರ ಎಡಗೈ ಮಣಿಕಟ್ಟಿಗೆ ಬಿದ್ದು ಬಲವಾದ ಗಾಯವಾಗಿ ರಕ್ತ ಸುರಿಯಲು ಶುರುವಾಗಿದೆ. ಅಲ್ಲಿದ್ದ ಚೆಲುವರಾಜು, ಪಂಚವಳ್ಳಿ ಮತ್ತು ಬಿ.ಆರ್. ಕಾವಲು ಗ್ರಾಮದ ರಾಜು ಜಗಳ ಬಿಡಿಸಿ ಅವರನ್ನು ರಕ್ಷಿಸಿದ್ದಾರೆ.

ಘಟನೆಯ ನಂತರವೂ ಮಂಜುನಾಥ ಮತ್ತು ನಂದನ್ ಇಬ್ಬರೂ "ಮಕ್ಕಳಾ ಇವತ್ತು ಬದುಕಿಕೊಂಡಿರಿ, ಮುಂದೆ ಸಿಕ್ಕಿ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲ" ಎಂದು ಕೊಲೆ ಬೆದರಿಕೆ ಹಾಕಿ, ನಂದನ್‌ನ ಕೈಯಲ್ಲಿದ್ದ ಮಚ್ಚಿನ ಸಮೇತ ಹೊರಟು ಹೋಗಿದ್ದಾರೆ. ಗಾಯಗೊಂಡ ಮಹಿಳೆಯನ್ನು ಅವರ ಗಂಡ ಸುಬ್ರಮಣಿ ಬೈಕಿನಲ್ಲಿ ಹನಗೋಡಿನ ಜೋಗೇಂದ್ರನಾಥ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಮೌರ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಮಂಜುನಾಥ ಮತ್ತು ನಂದನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ಮನವಿ ಮಾಡಿದ್ದಾರೆ.
    user_Ravikumar
    Ravikumar
    Local News Reporter ಹುಣಸೂರು, ಮೈಸೂರು, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.