logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಕಡು ಬಡತನದ ಬಡವರ ಅಕ್ರಮ ಮನೆಗಳನ್ನು,ಸಕ್ರಮ ಮನೆಗಳನ್ನಾಗಿ ಪಟ್ಟಾ ನೀಡುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದಾಗ ಶಾಸಕ ಯಾಸೀರ್ ಖಾನ್ ಪಠಾಣ ಈ ಹಿಂದೆ ಅಧಿಕಾರದಲ್ಲಿದ್ದವರು ಸುಮಾರ 4 ಸಾವಿರ ಅರ್ಜಿಗಳನ್ನು ತಿರಸ್ಕರಿಸಿದ್ದು ಅದರಲ್ಲಿ ತಾವು ಶಾಸಕರಾಗಿ ಆಯ್ಕೆಯಾದ ನಂತರ 41 ಫಲಾನುಭವಿಗಳಿಗೆ ಪಟ್ಟಾ ನೀಡಲು ಅರ್ಹರಾಗಿರುತ್ತಾರೆ ಎಂದು ಅಧಿಕಾರಿಗಳಿಗೆ ತಾಕಿತ್ತು ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತೆ ಅಧಿಕಾರಿಗಳು ಪ್ರಾಮಾಣಿಕ ಕೆಲಸವನ್ನು ನಿರ್ವಹಿಸಬೇಕೆಂದು ಶಾಸಕರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಉಭಯ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಫಲಾನುಭವಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು,

18 hrs ago
user_H M ಹರಕುಣಿ
H M ಹರಕುಣಿ
ಶಿಗ್ಗಾಂವ್, ಹಾವೇರಿ, ಕರ್ನಾಟಕ•
18 hrs ago

ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಕಡು ಬಡತನದ ಬಡವರ ಅಕ್ರಮ ಮನೆಗಳನ್ನು,ಸಕ್ರಮ ಮನೆಗಳನ್ನಾಗಿ ಪಟ್ಟಾ ನೀಡುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದಾಗ ಶಾಸಕ ಯಾಸೀರ್ ಖಾನ್ ಪಠಾಣ ಈ ಹಿಂದೆ ಅಧಿಕಾರದಲ್ಲಿದ್ದವರು ಸುಮಾರ 4 ಸಾವಿರ ಅರ್ಜಿಗಳನ್ನು ತಿರಸ್ಕರಿಸಿದ್ದು ಅದರಲ್ಲಿ ತಾವು ಶಾಸಕರಾಗಿ ಆಯ್ಕೆಯಾದ ನಂತರ 41 ಫಲಾನುಭವಿಗಳಿಗೆ ಪಟ್ಟಾ ನೀಡಲು ಅರ್ಹರಾಗಿರುತ್ತಾರೆ ಎಂದು ಅಧಿಕಾರಿಗಳಿಗೆ ತಾಕಿತ್ತು ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತೆ ಅಧಿಕಾರಿಗಳು ಪ್ರಾಮಾಣಿಕ ಕೆಲಸವನ್ನು ನಿರ್ವಹಿಸಬೇಕೆಂದು ಶಾಸಕರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಉಭಯ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಫಲಾನುಭವಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು,

More news from ಕರ್ನಾಟಕ and nearby areas
  • *ಉತ್ತರ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ರೈಲು ಹೋರಾಟ ಸಮಿತಿ ಮನವಿ.! ರೈಲ್ವೆ ಅಧಿಕಾರಿಗಳ ನಡೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೇಸರ* *ಬಾಗಲಕೋಟೆ* : ಹುಬ್ಬಳ್ಳಿ ನಗರದಲ್ಲಿರುವ ಚಾಲುಕ್ಯ ರೈಲ್ವೆ ಇನಸ್ಟಿಟ್ಯೂಟ್ ಸಭಾಭವನದಲ್ಲಿ ಮಂಗಳವಾರ ಸೌತ್ ವೆಸ್ಟರ್ನ್ ರೈಲ್ವೆಸ್ ನ 25ನೇ ವಲಯ ರೈಲ್ವೆ ಬಳಕೆದಾರರ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು . ಈ ಸಭೆಯಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿಯವರು ಪಾಲ್ಗೊಂಡು ಉತ್ತರ ಕರ್ನಾಟಕದ ವಿವಿಧ ರೈಲ್ವೆ ಬೇಡಿಕೆ ಹಾಗೂ ನೂತನ ರೈಲ್ವೆ ಮಾರ್ಗಗಳ ಕುರಿತು ಮಾನ್ಯ ಮಹಾ ವ್ಯವಸ್ಥಾಪಕರಾದ ಪಿ ಅನಂತ ಅವರಿಗೆ ಮನವಿ ಸಲ್ಲಿಸಿದರು. ಬಹು ದಿನಗಳ ಬೇಡಿಕೆಯಾದ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಬೇಕು, ಬಸವ ಎಕ್ಸಪ್ರೆಸ್ ರೈಲನ್ನು ಲೋಕಾಪೂರವರೆಗೆ ವಿಸ್ತರಿಸಬೇಕು , ವಿಜಯಪುರ- ಬಾಗಲಕೋಟೆ ಮಾರ್ಗದಲ್ಲಿ ತಿರುಪತಿಗೆ ನೂತನ ರೈಲು ಪ್ರಾರಂಭಿಸಬೇಕು, ವಿಜಯಪುರದಿಂದ ಬಾಗಲಕೋಟೆ ಗದಗ ಹೊಸಪೇಠ ಬಳ್ಳಾರಿ ಮಾರ್ಗವಾಗಿ ಗುಂಠಕಲ್ಲವರೆಗೆ ನೂತನ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು, ಹುಬ್ಬಳ್ಳಿ - ಹ.ನಿಜಾಮುದ್ದೀನ್ ಎಕ್ಸಪ್ರೆಸ್, ಮೈಸೂರು-ಸಾಯಿನಗರ (ಶಿರಡಿ) , ಯಶ್ವಂತಪುರ - ಬಿಕಾನೇರ ಈ ರೈಲುಗಳನ್ನು ದಿನನಿತ್ಯ ಸಂಚರಿಸುವಂತೆ ಮಾಡಬೇಕು, ರಾಯಚೂರು - ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಹೈದರಾಬಾದ್-ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಮುಂಬೈ - ಬೆಂಗಳೂರು ಸೂಪರ್ ಫಾಸ್ಟ್ ರೈಲನ್ನು ವಿಜಯಪುರ-ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಬಾಗಲಕೋಟೆ-ಕುಡಚಿ ಕಾಮಗಾರಿಯು ಲೋಕಾಪೂರವರೆಗೆ ಮುಕ್ತಾಯವಾಗಿದ್ದು ಭದ್ರತಾ ಸಮೀಕ್ಷೆಯು ಸಹ ಆಗಿದೆ. ಆದರೆ ಇಲ್ಲಿ ರೈಲುಗಳ ಸಂಚಾರವಿಲ್ಲದೆ ನಿಲ್ದಾಣಗಳು ಹಾಳಾಗುತ್ತಿರುವುದರಿಂದ ಬಾಗಲಕೋಟೆ-ಲೋಕಾಪೂರ ವರೆಗೆ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕೆಂದು ಕುತ್ಬುದ್ದಿನ್ ಕಾಜಿಯವರು ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದಾಗ ಅಧಿಕಾರಿಗಳು ಅಲ್ಲಿನ ಜನರು ರೈಲು ಹತ್ತಲ್ಲವೆಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲು ಪ್ರಯತ್ನಿಸಿದಾಗ ಮಾನ್ಯ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ರೈಲ್ವೆ ಅಧಿಕಾರಿಗಳ ನಡೆಗೆ ಗರಂ ಆಗಿ ನೀವು ಆ ಭಾಗದಲ್ಲಿ ಇನ್ನೂ ರೈಲು ಪ್ರಾರಂಭಿಸಿಯೇ ಇಲ್ಲ. ಮತ್ತೆ ಜನರು ರೈಲು ಹತ್ತಲ್ಲವೆಂದು ಹೇಗೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಬಾಬಾಜಾನ್ ಮುಧೋಳ್, ಮಹೇಂದ್ರ ಸಿಂಗವಿ , ಸುಭಾಸ ಶಿರ್ಬುರ, ರಾಜಶೇಖರ ಮೇಣಶಿನಕಾಯಿ, ಮೈನುದ್ದಿನ್ ಖಾಜಿ, ಎಂ ಕೆ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    2
    *ಉತ್ತರ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ರೈಲು ಹೋರಾಟ ಸಮಿತಿ ಮನವಿ.! ರೈಲ್ವೆ ಅಧಿಕಾರಿಗಳ ನಡೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೇಸರ*
*ಬಾಗಲಕೋಟೆ* :  ಹುಬ್ಬಳ್ಳಿ ನಗರದಲ್ಲಿರುವ ಚಾಲುಕ್ಯ ರೈಲ್ವೆ ಇನಸ್ಟಿಟ್ಯೂಟ್ ಸಭಾಭವನದಲ್ಲಿ ಮಂಗಳವಾರ ಸೌತ್ ವೆಸ್ಟರ್ನ್ ರೈಲ್ವೆಸ್ ನ  25ನೇ ವಲಯ ರೈಲ್ವೆ ಬಳಕೆದಾರರ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು . ಈ ಸಭೆಯಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿಯವರು ಪಾಲ್ಗೊಂಡು ಉತ್ತರ ಕರ್ನಾಟಕದ ವಿವಿಧ ರೈಲ್ವೆ ಬೇಡಿಕೆ ಹಾಗೂ ನೂತನ ರೈಲ್ವೆ ಮಾರ್ಗಗಳ ಕುರಿತು ಮಾನ್ಯ ಮಹಾ ವ್ಯವಸ್ಥಾಪಕರಾದ ಪಿ ಅನಂತ ಅವರಿಗೆ ಮನವಿ ಸಲ್ಲಿಸಿದರು. 
ಬಹು ದಿನಗಳ ಬೇಡಿಕೆಯಾದ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಬೇಕು, ಬಸವ ಎಕ್ಸಪ್ರೆಸ್ ರೈಲನ್ನು ಲೋಕಾಪೂರವರೆಗೆ ವಿಸ್ತರಿಸಬೇಕು  , ವಿಜಯಪುರ- ಬಾಗಲಕೋಟೆ ಮಾರ್ಗದಲ್ಲಿ ತಿರುಪತಿಗೆ ನೂತನ ರೈಲು ಪ್ರಾರಂಭಿಸಬೇಕು, ವಿಜಯಪುರದಿಂದ ಬಾಗಲಕೋಟೆ ಗದಗ ಹೊಸಪೇಠ ಬಳ್ಳಾರಿ ಮಾರ್ಗವಾಗಿ ಗುಂಠಕಲ್ಲವರೆಗೆ ನೂತನ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು, ಹುಬ್ಬಳ್ಳಿ - ಹ.ನಿಜಾಮುದ್ದೀನ್ ಎಕ್ಸಪ್ರೆಸ್,  ಮೈಸೂರು-ಸಾಯಿನಗರ (ಶಿರಡಿ) , ಯಶ್ವಂತಪುರ - ಬಿಕಾನೇರ  ಈ ರೈಲುಗಳನ್ನು ದಿನನಿತ್ಯ ಸಂಚರಿಸುವಂತೆ ಮಾಡಬೇಕು, ರಾಯಚೂರು - ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಹೈದರಾಬಾದ್-ವಿಜಯಪುರ ರೈಲನ್ನು  ಗದಗ ವರೆಗೆ ವಿಸ್ತರಿಸಬೇಕು, ಮುಂಬೈ - ಬೆಂಗಳೂರು ಸೂಪರ್ ಫಾಸ್ಟ್ ರೈಲನ್ನು ವಿಜಯಪುರ-ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 
ಇನ್ನೂ ಬಾಗಲಕೋಟೆ-ಕುಡಚಿ ಕಾಮಗಾರಿಯು ಲೋಕಾಪೂರವರೆಗೆ ಮುಕ್ತಾಯವಾಗಿದ್ದು ಭದ್ರತಾ ಸಮೀಕ್ಷೆಯು ಸಹ ಆಗಿದೆ. ಆದರೆ ಇಲ್ಲಿ ರೈಲುಗಳ ಸಂಚಾರವಿಲ್ಲದೆ ನಿಲ್ದಾಣಗಳು ಹಾಳಾಗುತ್ತಿರುವುದರಿಂದ ಬಾಗಲಕೋಟೆ-ಲೋಕಾಪೂರ ವರೆಗೆ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕೆಂದು ಕುತ್ಬುದ್ದಿನ್ ಕಾಜಿಯವರು ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದಾಗ ಅಧಿಕಾರಿಗಳು ಅಲ್ಲಿನ ಜನರು ರೈಲು ಹತ್ತಲ್ಲವೆಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲು ಪ್ರಯತ್ನಿಸಿದಾಗ ಮಾನ್ಯ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ರೈಲ್ವೆ ಅಧಿಕಾರಿಗಳ ನಡೆಗೆ ಗರಂ ಆಗಿ ನೀವು ಆ ಭಾಗದಲ್ಲಿ ಇನ್ನೂ ರೈಲು ಪ್ರಾರಂಭಿಸಿಯೇ ಇಲ್ಲ. ಮತ್ತೆ ಜನರು ರೈಲು ಹತ್ತಲ್ಲವೆಂದು ಹೇಗೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಬಾಬಾಜಾನ್ ಮುಧೋಳ್, ಮಹೇಂದ್ರ ಸಿಂಗವಿ , ಸುಭಾಸ ಶಿರ್ಬುರ, ರಾಜಶೇಖರ ಮೇಣಶಿನಕಾಯಿ, ಮೈನುದ್ದಿನ್ ಖಾಜಿ, ಎಂ ಕೆ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    user_Yusuf Bepari
    Yusuf Bepari
    Hotel ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    17 hrs ago
  • ಆಕಾಶದಲ್ಲಿ ಪತನ
    1
    ಆಕಾಶದಲ್ಲಿ ಪತನ
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    20 hrs ago
  • ದಾವಣಗೆರೆ: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ದ ಜೋರಾಗಿದ್ದು, ಇರಾನ್ ಕುಸ್ತಿಪಟುಗಳು ದಾವಣಗೆರೆಗೆ ಬಂದು ಕುಸ್ತಿ ಆಡಿದರು.ನಗರದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳು ಮಾತ್ರವಲ್ಲದೇ ಇರಾನ್ ದೇಶದಿಂದಲೂ ಕುಸ್ತಿಪಟುಗಳು ಭಾಗವಹಿಸಿದ್ದರು.‌ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನಿಂದ ಆಗಮಿಸಿದ್ದ ಕುಸ್ತಿಪಟುಗಳು ಗಮನ ಸೆಳೆದರು. ಫೈನಲ್‌ ಪಂದ್ಯದಲ್ಲಿ ಇರಾನ್‌ನ ಮಿರ್ಜಾ -ಹಾಗೂ ಮಹಾರಾಷ್ಟ್ರದ ರವಿರಾಜ್ ಸೆಣಸಾಡಿಸಿದರು. 43 ನಿಮಿಷ ಸೆಣಸಾಡಿದರೂ ಫಲಿತಾಂಶ ಬಾರದ ಕಾರಣ ಪಂದ್ಯ ಸಮಬಲವಾಯಿತು. ಇಬ್ಬರಿಗೂ ತಲಾ ರೂ. 1 ಲಕ್ಷ ನಗದು ನೀಡಲಾಯಿತು. ಬೆಳ್ಳಿ ಗದೆ ಆಯೋಜಕರ ಬಳಿಯೇ ಉಳಿಯಿತು. . ಎರಡನೇ ಅತಿ ಮುಖ್ಯ ಪಂದ್ಯದಲ್ಲಿ ಇರಾನ್‌ನ ಜಲಾಲ್ ಹಾಗೂ ಭಾರತದ ಲಕ್ಕಿ ಕೊಯ್ಲಿ ಅವರ ನಡುವೆ ಪಂದ್ಯ ನಡೆಯಿತು. ಈ ಪಂದ್ಯವೂ ಫಲಿತಾಂಶ ಸಿಗದೇ ಸಮಬಲದಲ್ಲಿ ಮುಕ್ತಾಯವಾಯಿತು.
    1
    ದಾವಣಗೆರೆ: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ದ ಜೋರಾಗಿದ್ದು, ಇರಾನ್ ಕುಸ್ತಿಪಟುಗಳು ದಾವಣಗೆರೆಗೆ ಬಂದು ಕುಸ್ತಿ ಆಡಿದರು.ನಗರದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳು ಮಾತ್ರವಲ್ಲದೇ ಇರಾನ್ ದೇಶದಿಂದಲೂ ಕುಸ್ತಿಪಟುಗಳು ಭಾಗವಹಿಸಿದ್ದರು.‌
ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನಿಂದ ಆಗಮಿಸಿದ್ದ ಕುಸ್ತಿಪಟುಗಳು ಗಮನ ಸೆಳೆದರು. ಫೈನಲ್‌ ಪಂದ್ಯದಲ್ಲಿ ಇರಾನ್‌ನ ಮಿರ್ಜಾ -ಹಾಗೂ ಮಹಾರಾಷ್ಟ್ರದ ರವಿರಾಜ್ ಸೆಣಸಾಡಿಸಿದರು. 43 ನಿಮಿಷ ಸೆಣಸಾಡಿದರೂ ಫಲಿತಾಂಶ ಬಾರದ ಕಾರಣ ಪಂದ್ಯ ಸಮಬಲವಾಯಿತು. ಇಬ್ಬರಿಗೂ ತಲಾ ರೂ. 1 ಲಕ್ಷ ನಗದು ನೀಡಲಾಯಿತು. ಬೆಳ್ಳಿ ಗದೆ ಆಯೋಜಕರ ಬಳಿಯೇ ಉಳಿಯಿತು. .
ಎರಡನೇ ಅತಿ ಮುಖ್ಯ ಪಂದ್ಯದಲ್ಲಿ ಇರಾನ್‌ನ ಜಲಾಲ್ ಹಾಗೂ ಭಾರತದ ಲಕ್ಕಿ ಕೊಯ್ಲಿ ಅವರ ನಡುವೆ ಪಂದ್ಯ ನಡೆಯಿತು. ಈ ಪಂದ್ಯವೂ ಫಲಿತಾಂಶ ಸಿಗದೇ ಸಮಬಲದಲ್ಲಿ ಮುಕ್ತಾಯವಾಯಿತು.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    19 hrs ago
  • ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ಕುಂಟೋಜಿ ಎಂಬ ಗ್ರಾಮ ಕುಡಿಯುವ ನೀರು ಹೊಲಸು ವಾಸ್ನೆ ನಾರ್ತಾ ಇದೆ
    1
    ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ಕುಂಟೋಜಿ ಎಂಬ ಗ್ರಾಮ ಕುಡಿಯುವ ನೀರು ಹೊಲಸು ವಾಸ್ನೆ ನಾರ್ತಾ ಇದೆ
    user_Sharanu sunkad
    Sharanu sunkad
    ಕೊಪ್ಪಳ, ಕೊಪ್ಪಳ, ಕರ್ನಾಟಕ•
    23 hrs ago
  • ಬೆಳಗಾವಿ ಬ್ರೇಕಿಂಗ್ ಬೆಳಗಾವಿ ಜಿಲ್ಲಾ ಕೋರ್ಟ್ ಗೆ ಬಾಂಬ್ ಬೆದರಿಕೆ ಬೆಳಗಾವಿ ಡಿಸಿಪಿ ನಾರಾಯಣ್ ಭರಮನಿ ಹೇಳಿಕೆ ಡಿಸ್ಟ್ರಿಕ್ಟ್ ಕೋರ್ಟ್ ಗೆ ಬಾಂಬ್ ಕರೆ ಬಂದಿರೋದು ನಿಜ ಇಮೇಲ್ ಮೂಲಕ ಬಾಂಬ್ ಕರೆ ಬಂದಿದೆ ನಮ್ಮ ಸಿಬ್ಬಂದಿಗಳು ಈಗಾಗಲೇ ಭೇಟಿ, ನೀಡಿ ಪರಿಶೀಲನೆ ಮಾಡ್ತಿದ್ದಾರೆ ಯಾರು ಮಾಡಿದ್ದಾರೆ ಅನೋದರ ಬಗ್ಗೆ ಪರಿಶೀಲನೆ ಮಾಡುತ್ತೇವೆ
    3
    ಬೆಳಗಾವಿ ಬ್ರೇಕಿಂಗ್
ಬೆಳಗಾವಿ ಜಿಲ್ಲಾ ಕೋರ್ಟ್ ಗೆ ಬಾಂಬ್ ಬೆದರಿಕೆ
ಬೆಳಗಾವಿ ಡಿಸಿಪಿ ನಾರಾಯಣ್ ಭರಮನಿ ಹೇಳಿಕೆ
ಡಿಸ್ಟ್ರಿಕ್ಟ್ ಕೋರ್ಟ್ ಗೆ ಬಾಂಬ್ ಕರೆ ಬಂದಿರೋದು ನಿಜ
ಇಮೇಲ್ ಮೂಲಕ ಬಾಂಬ್ ಕರೆ ಬಂದಿದೆ
ನಮ್ಮ ಸಿಬ್ಬಂದಿಗಳು ಈಗಾಗಲೇ ಭೇಟಿ, ನೀಡಿ ಪರಿಶೀಲನೆ ಮಾಡ್ತಿದ್ದಾರೆ
ಯಾರು ಮಾಡಿದ್ದಾರೆ ಅನೋದರ ಬಗ್ಗೆ ಪರಿಶೀಲನೆ ಮಾಡುತ್ತೇವೆ
    user_SIDDU PATIL
    SIDDU PATIL
    Report ಬೆಳಗಾವಿ, ಬೆಳಗಾವಿ, ಕರ್ನಾಟಕ•
    1 hr ago
  • ಬಾಲಕೋಟ್ ಮತ್ತು ಬಿಯಾಂಡ್, ಟೆಹ್ರಾನ್ ನಂತಹ ವೆಬ್ ಸರಣಿಗಳಲ್ಲಿ ನಟಿಸಿರುವ ಇರಾನಿನ ನಟಿ ಎಲ್ನಾಜ್ ನೊರೌಜಿ, ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ನಟಿ ಖಮೇನಿ ಸಾವಿನ ಬಗ್ಗೆ 'ಧನ್ಯವಾದಗಳು' ಎಂದು ಶೀರ್ಷಿಕೆ ನೀಡಿ ಸುದ್ದಿ ವರದಿಯನ್ನು ಹಂಚಿಕೊಂಡಿದ್ದು, 'ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ, 47 ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೆವು' ಎಂದು ಹೇಳಿದ್ದಾರೆ.
    1
    ಬಾಲಕೋಟ್ ಮತ್ತು ಬಿಯಾಂಡ್, ಟೆಹ್ರಾನ್ ನಂತಹ ವೆಬ್ ಸರಣಿಗಳಲ್ಲಿ ನಟಿಸಿರುವ ಇರಾನಿನ ನಟಿ ಎಲ್ನಾಜ್ ನೊರೌಜಿ, ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ನಟಿ ಖಮೇನಿ ಸಾವಿನ ಬಗ್ಗೆ 'ಧನ್ಯವಾದಗಳು' ಎಂದು ಶೀರ್ಷಿಕೆ ನೀಡಿ ಸುದ್ದಿ ವರದಿಯನ್ನು ಹಂಚಿಕೊಂಡಿದ್ದು, 'ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ, 47 ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೆವು' ಎಂದು ಹೇಳಿದ್ದಾರೆ.
    user_YSRmedia vijayanagaraupsates
    YSRmedia vijayanagaraupsates
    Photographer ಹೊಸಪೇಟೆ, ವಿಜಯನಗರ, ಕರ್ನಾಟಕ•
    17 hrs ago
  • ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು
    1
    ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ  ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    17 hrs ago
  • ಬಾಗಲಕೋಟೆ ನಗರದಲ್ಲಿ ಭೀಮ ಆರ್ಮಿ ಸಂಘಟನೆಯ ವತಿಯಿಂದ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಜಿಲ್ಲಾಧ್ಯಕ್ಷರಾದ ಬಸವರಾಜ ನೀಲನಾಯಕ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘಟನೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕರವರು ಸಂಘಟನೆಯ ಉದ್ದೇಶಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು.
    1
    ಬಾಗಲಕೋಟೆ ನಗರದಲ್ಲಿ ಭೀಮ ಆರ್ಮಿ ಸಂಘಟನೆಯ ವತಿಯಿಂದ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಜಿಲ್ಲಾಧ್ಯಕ್ಷರಾದ ಬಸವರಾಜ ನೀಲನಾಯಕ್ ಅವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘಟನೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕರವರು ಸಂಘಟನೆಯ ಉದ್ದೇಶಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು.
    user_Bhimahejje News
    Bhimahejje News
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    4 hrs ago
  • ರಬಕವಿ: ಹನಗಂಡಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಪ್ರತಿಷ್ಠಾಪಿಸಲು 150 ಕೆಜಿ ಪಂಚಲೋಹ ಗಂಟೆ ತಯಾರಿಸಲಾಗಿದೆ. ನಾಳೆ ಬೆಳಿಗ್ಗೆ 11–12 ಗಂಟೆ ನಡುವೆ ಪಾದಯಾತ್ರೆಯ ಮೂಲಕ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಪ್ರವೇಶಿಸಿ, ವಿದ್ಯಾಗಿರಿ ಮಾರ್ಗವಾಗಿ ತೆಗ್ಗಿ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತರಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರತಿಯೊಂದಿಗೆ ಸ್ವಾಗತಿಸಬೇಕೆಂದು ಕೋರಲಾಗಿದೆ.
    1
    ರಬಕವಿ: ಹನಗಂಡಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಪ್ರತಿಷ್ಠಾಪಿಸಲು 150 ಕೆಜಿ ಪಂಚಲೋಹ ಗಂಟೆ ತಯಾರಿಸಲಾಗಿದೆ.
ನಾಳೆ ಬೆಳಿಗ್ಗೆ 11–12 ಗಂಟೆ ನಡುವೆ ಪಾದಯಾತ್ರೆಯ ಮೂಲಕ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಪ್ರವೇಶಿಸಿ, ವಿದ್ಯಾಗಿರಿ ಮಾರ್ಗವಾಗಿ ತೆಗ್ಗಿ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತರಲಾಗುತ್ತದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರತಿಯೊಂದಿಗೆ ಸ್ವಾಗತಿಸಬೇಕೆಂದು ಕೋರಲಾಗಿದೆ.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.