Shuru
Apke Nagar Ki App…
"ಬಣ್ಣಗಳ ಸಂಭ್ರಮ 🔥 ಹೋಳಿ ವೈಬ್ ನಲ್ಲಿ ಬಳ್ಳಾರಿ ಯುವಕರು!ಒಂದು ದಿನದ ಫುಲ್ ಕಲರ್… ನೆನಪುಗಳು ಕಲರ್ ಫುಲ್ ಆಗಿ ಮಸ್ತ್ ಮೂಡ್ ನಲ್ಲಿ 😎 #HoliVibes" "ಬಳ್ಳಾರಿ ಬೀದಿಗಳಲ್ಲಿ ಬಣ್ಣಗಳ ಹಬ್ಬ 🎨✨" "ಒಂದು ದಿನದ ಫುಲ್ ಕಲರ್… ನೆನಪುಗಳು ಲೈಫ್ ಟೈಮ್ ❤️" "ಹೋಳಿ ಹಬ್ಬ ಅಂದ್ರೆ ನಮ್ಮ ಸ್ಟೈಲ್ ಹೀಗೆ ಇರಬೇಕು 😍🔥" "ಕೂಲ್ ಕಾರ್ನರ್ ಬಳಿ ಹೋಳಿ ಮಸ್ತಿ 🤩 "ಬಣ್ಣ ಹಚ್ಚಿಕೊಂಡು ಫುಲ್ ಜೋಷ್ 💥🎉"
ASN News24Kannada
"ಬಣ್ಣಗಳ ಸಂಭ್ರಮ 🔥 ಹೋಳಿ ವೈಬ್ ನಲ್ಲಿ ಬಳ್ಳಾರಿ ಯುವಕರು!ಒಂದು ದಿನದ ಫುಲ್ ಕಲರ್… ನೆನಪುಗಳು ಕಲರ್ ಫುಲ್ ಆಗಿ ಮಸ್ತ್ ಮೂಡ್ ನಲ್ಲಿ 😎 #HoliVibes" "ಬಳ್ಳಾರಿ ಬೀದಿಗಳಲ್ಲಿ ಬಣ್ಣಗಳ ಹಬ್ಬ 🎨✨" "ಒಂದು ದಿನದ ಫುಲ್ ಕಲರ್… ನೆನಪುಗಳು ಲೈಫ್ ಟೈಮ್ ❤️" "ಹೋಳಿ ಹಬ್ಬ ಅಂದ್ರೆ ನಮ್ಮ ಸ್ಟೈಲ್ ಹೀಗೆ ಇರಬೇಕು 😍🔥" "ಕೂಲ್ ಕಾರ್ನರ್ ಬಳಿ ಹೋಳಿ ಮಸ್ತಿ 🤩 "ಬಣ್ಣ ಹಚ್ಚಿಕೊಂಡು ಫುಲ್ ಜೋಷ್ 💥🎉"
More news from Karnataka and nearby areas
- ಕಲರ್ ಫುಲ್ ಆಗಿ ಮಸ್ತ್ ಮೂಡ್ ನಲ್ಲಿ 😎 #HoliVibes" "ಬಳ್ಳಾರಿ ಬೀದಿಗಳಲ್ಲಿ ಬಣ್ಣಗಳ ಹಬ್ಬ 🎨✨" "ಒಂದು ದಿನದ ಫುಲ್ ಕಲರ್… ನೆನಪುಗಳು ಲೈಫ್ ಟೈಮ್ ❤️" "ಹೋಳಿ ಹಬ್ಬ ಅಂದ್ರೆ ನಮ್ಮ ಸ್ಟೈಲ್ ಹೀಗೆ ಇರಬೇಕು 😍🔥" "ಕೂಲ್ ಕಾರ್ನರ್ ಬಳಿ ಹೋಳಿ ಮಸ್ತಿ 🤩 "ಬಣ್ಣ ಹಚ್ಚಿಕೊಂಡು ಫುಲ್ ಜೋಷ್ 💥🎉"1
- Post by Sharanugouda Patil1
- Post by YSRmedia vijayanagaraupsates1
- ಕೋಟೆನಾಡು ಚಿತ್ರದುರ್ಗ ನಗರದ ಮಾರ್ವಾಡಿ ಗಲ್ಲಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೋನಿ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಬಣ್ಣಗಳ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಭಾರೀ ಶಾಮಿಯಾನ ಹಾಕಿ ಮಹಿಳೆಯರು, ಯುವಕರು, ಯುವತಿಯರು ಹಾಗೂ ಪುಟಾಣಿ ಮಕ್ಕಳು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಯುವತಿಯರು ಮತ್ತು ಮಹಿಳೆಯರು ನೀರಿನಲ್ಲಿ ಮಿಂದೆದ್ದು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಖುಷಿಯನ್ನು ಹಂಚಿಕೊಂಡರು. ಒಟ್ಟಾರೆ ಮಾರ್ವಾಡಿ ಗಲ್ಲಿಯಲ್ಲಿ ಬಣ್ಣಗಳ ಜಾತ್ರೆ ನಡೆಯುತ್ತಿದ್ದಂತೆ ಕಂಡುಬಂದಿದ್ದು, ಎಲ್ಲೆಡೆ ಹೋಳಿ ಹಬ್ಬದ ಉಲ್ಲಾಸ ಕಂಗೊಳಿಸಿತು.1
- ಎಲ್ಲವನ್ನೂ ಬದಲಾಯಿಸಬಹುದಾಗಿದ್ದ ಒಂದು ಕ್ಷಣ.. ಮೃಗಾಲಯದಲ್ಲಿ, ಸಿಂಹವೊಂದು ಪಂಜರದ ಮೂಲಕ ಪುಟ್ಟ ಹುಡುಗಿಯ ಪ್ಯಾಂಟ್ ಅನ್ನು ಹಿಡಿದೆಳೆದ ದೃಶ್ಯ. ಅದೃಷ್ಟವಶಾತ್ ತಪ್ಪಿದ ಅಪಾಯ. ಕಾಡು ಪ್ರಾಣಿಗಳು ನಿಜವಾಗಿಯೂ ಎಷ್ಟು ಶಕ್ತಿಶಾಲಿ ಎಂಬುದರ ಭಯಾನಕ ಜ್ಞಾಪನೆ.1
- ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ಹಣ ನೀಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೇಡರಹಳ್ಳಿ ಬಸವ ರೆಡ್ಡಿ ಒತ್ತಾಯಿಸಿದರು. ನಗರದ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ನಂತರ ಉಪತಾಶಿಲ್ದಾರ್ ಮುನಿ ವೆಂಕಟಪ್ಪ ಇವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯುವರು ಚಿತ್ರದುರ್ಗದಲ್ಲಿ ಘೋಷಣೆ ಮಾಡಿರುವ ಭದ್ರಾಮಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗ ಹಾಗೂ ಯೋಜನೆಯಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ಸೇರ್ಪಡೆ ಮಾಡುವುದಾಗಿ ಹೇಳಿ ಈವರೆಗೂ ಒಂದು ನಯಾಪೈಸೆ ಬಿಡುಗಡೆ ಮಾಡದೆ ಕುಂಟು ನೆಪ ಹೇಳುತ್ತಾ ರಾಜಕಾರಣ ಮಾಡುತ್ತಾ ಬೊಗಳೆ ಭಾಷಣ ಮಾಡುತ್ತಿದ್ದಾರೆ. ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಚಲವಾದಿ ನಾರಾಯಣಸ್ವಾಮಿ ಬಿಜೆಪಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಇವರು ಮೋದಿ ಮಾತು ತಪ್ಪಿವಚನ ಭ್ರಷ್ಟರಾಗಿದ್ದು ಮೋದಿ ರಾಜೀನಾಮೆ ನೀಡಬೇಕು ಇಲ್ಲವೇ ಪ್ರತಿ ಹಂತದಲ್ಲೂ ರಾಜ್ಯ ಸರ್ಕಾರವನ್ನು ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಹೇಳುವ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಹಂತದಲ್ಲೂ ರಾಜೀನಾಮೆ ಕೇಳುತ್ತಿದ್ದು ಇವರಿಗೆ ನೈತಿಕತೆ ಇದ್ದರೆ ಇವರ ಪಕ್ಷದ ಪ್ರಧಾನಿ ಅಥವಾ ವಿರೋಧ ಪಕ್ಷದ ನಾಯಕರೆಲ್ಲ ಮಾತಿಗೆ ತಪ್ಪಿದ್ದು ಜನರನ್ನ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು. ಇಲ್ಲವೇ ಕೊಟ್ಟ ಮಾತಿನಂತೆ ಕೇಂದ್ರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಮೀಸಲಿಟ್ಟ 5300 ಕೋಟಿ ಹಣ ಬಿಡುಗಡೆ ಮಾಡುವಂತೆ ಒತ್ತಡ ಹೇರಿ ಹಣ ಕೊಡುವಂತೆ ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ಮಾತು ಉಳಿಸಿಕೊಳ್ಳಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.. ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರೈತರು ಇದ್ದರು.1
- ಚಳ್ಳಕೆರೆ ನಗರದ ಹೊರಹೊಲಯದ ಹಿರಿಯೂರು ರಸ್ತೆಯ ನಿಸರ್ಗ ಡಾಬಾದ ಬೆಲಿಗ ಆಕಸ್ಮಿಕ ಬೆಂಕಿ ಬಿದ್ದು ನಿಸರ್ಗ ಡಬಾದ 8 ತೆಂಗಿನ ಗರಿಗಳಿಂದ ನಿರ್ಮಾಣ ಮಾಡಲಾಗಿದ್ದ ಶೆಡ್ ಗಳು ಸುಟ್ಟಿದ್ದು ಶೆಡ್ ನಲ್ಲಿ ಇದ್ದಂತಹ ಕುರ್ಚಿ ಹಾಗೂ ಚೇರುಗಳು ಸುಟ್ಟು ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ..1
- ಚಳ್ಳಕೆರೆ: ನಗರದ ಎಸ್ ಆರ್ ಎಸ್ ಶಾಲೆಯ ಮಕ್ಕಳನ್ನು ಸಾಗಿಸುವ ಸ್ಕೂಲ್ ವಾಹನದಲ್ಲಿ ಹಿಂಬದಿಯ ಗ್ಲಾಸ್ ಇಲ್ಲದೇ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳ ಸುರಕ್ಷತೆಯಂತಹ ಸೂಕ್ಷ್ಮ ವಿಷಯದಲ್ಲಿ ಶಾಲಾ ಆಡಳಿತದ ನಿರ್ಲಕ್ಷ್ಯ ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಂದ ಹೆಚ್ಚಿನ ಶುಲ್ಕವನ್ನು ವಸೂಲಿಸಿಕೊಂಡು, ಮೂಲಭೂತ ಸುರಕ್ಷತಾ ವ್ಯವಸ್ಥೆಯನ್ನೂ ಒದಗಿಸದಿರುವುದು ಬೇಜವಾಬ್ದಾರಿತನದ ವರ್ತನೆ ಎಂದು ಪೋಷಕರು ಆರೋಪಿಸಿದ್ದಾರೆ. ಹಿಂಬದಿಯ ಗ್ಲಾಸ್ ಇಲ್ಲದೇ ವಾಹನ ಸಂಚರಿಸುವುದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುವುದಲ್ಲದೆ, ಧೂಳು, ಮಳೆ ಹಾಗೂ ಇತರೆ ಅನಾಹುತಗಳಿಂದ ಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಗೌರವಾಧ್ಯಕ್ಷ ಭೋಜರಾಜ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಶಾಲಾ ಆಡಳಿತವು ದೋಷವನ್ನು ಸರಿಪಡಿಸಿ, ವಾಹನವನ್ನು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ತಿದ್ದುಪಡಿಗೊಳಿಸಬೇಕು ಎಂದು ಒತ್ತಾಯಿಸಿದರು “ಮಕ್ಕಳ ಜೀವದ ಜೊತೆ ಯಾವುದೇ ರೀತಿಯ ಚೆಲ್ಲಾಟವನ್ನು ಸಹಿಸಲಾಗುವುದಿಲ್ಲ. ಶಾಲೆಗಳು ಶಿಕ್ಷಣ ನೀಡುವಷ್ಟೇ ಅಲ್ಲ, ಮಕ್ಕಳ ಸುರಕ್ಷತೆಯ ಹೊಣೆಗಾರಿಕೆಯನ್ನು ಕೂಡ ಸಮರ್ಪಕವಾಗಿ ನಿರ್ವಹಿಸಬೇಕು. ಸಮಸ್ಯೆ ಶೀಘ್ರದಲ್ಲೇ ಬಗೆಹರಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು. ಮಕ್ಕಳ ಸುರಕ್ಷತೆ ಎಲ್ಲಕ್ಕಿಂತ ಮೊದಲ ಆದ್ಯತೆ ಆಗಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.1