ಮಾರ್ಚ್ 28 ರಿಂದ ಏಳು ದಿನಗಳ ಕಾಲ ಶ್ರೀರಾಮ ಕೋಟಿ ಸಪ್ತಾಹ ಕಾರ್ಯಕ್ರಮ ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀರಾಮ ಕೋಟಿ ಜಪ ಯಜ್ಞ ತಂಡದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಮಾ. 28ರಿಂದ ಏಳು ದಿನಗಳ ಕಾಲ ಅರ್ಥಪೂರ್ಣವಾಗಿ ಶ್ರೀರಾಮಕೋಟಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಕೋಟಿ ಜಪಯಜ್ಞ ತಂಡದ ಅಧ್ಯಕ್ಷ ಪುರದಗದ್ದೆ ಪಿ. ಎನ.ಕೃಷ್ಣಪ್ಪ ತಿಳಿಸಿದರು. ಅವರು ನಗರದ ಸಾಧು ಮಠ ಸಭಾಂಗಣದಲ್ಲಿ ಶ್ರೀರಾಮಕೋಟಿ ಸಪ್ತಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶ್ರೀರಾಮ ಕೋಟಿ ಎನ್ನುವುದು ಶ್ರೀರಾಮನ ಹೆಸರನ್ನು ಒಂದು ಕೋಟಿ ಬಾರಿ ಬರೆಯುವ ಭಕ್ತಿಯ ಲಿಖಿತ ಜಪವಾಗಿದೆ. ಈ ಅಭ್ಯಾಸದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಈ ಭಾಗದ ಹೆಚ್ಚಿನ ಜನ ಭಾಗವಹಿಸುವಂತೆ ಮಾಡಲು ಎಲ್ಲ ರೀತಿಯ ಪ್ರಚಾರ ಕೈಗೊಳ್ಳಬೇಕು ಎಂದರು. ತಂಡದ ಉಪಾಧ್ಯಕ್ಷ ಅಂಕಣಗೊಂಡಿ ರಂಗಪ್ಪ ಮಾತನಾಡಿ, ಶ್ರೀ ರಾಮಕೋಟಿ ಸಪ್ತಹದಲ್ಲಿ ಪ್ರತಿಯೊಬ್ಬರು ಪವಿತ್ರವಾಗಿ, ಶುದ್ಧ ಮನಸ್ಸಿನಿಂದ ಮಾಡುವ ದಿಸೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಗೌರವಾಧ್ಯಕ್ಷ ಬಿ. ಎನ್. ನಾಗಭೂಷಣ್ ಈ ಬಾರಿಯ ಏಳು ದಿನಗಳ ಶ್ರೀರಾಮ ಕೋಟಿ ಸಪ್ತಾಹವು 10ನೇ ವರ್ಷದ ವಾರ್ಷಿಕೋತ್ಸವವಾಗಿ ನೆರವೇರಿಸುತ್ತಿದ್ದು ಇಂತಹ ಅರ್ಥಪೂರ್ಣವಾದ ಸಪ್ತಾಹದಲ್ಲಿ ಪ್ರತಿಯೊಬ್ಬರನ್ನ ಸಕ್ರಿಯವಾಗಿ ಪಾಲ್ಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ರೂಪಿಸಬೇಕು ಎಂದು ಸಲಹೆ ನೀಡಿದರು. ಪೂರ್ವಭಾವಿಯ ಈ ಸಭೆಯಲ್ಲಿ ಶ್ರೀರಾಮಕೋಟಿ ಜಪ ಯಜ್ಞ ತಂಡ ಸದಸ್ಯರುಗಳಾದ ವಿ. ಕೃಷ್ಣಮೂರ್ತಿ, ಶಾಂತಮೂರ್ತಿ, ಗೋಪಾಲಾಚಾರಿ, ಡಿ ಮುನಿಯಪ್ಪದಾಸ್, ನಾರಾಯಸ್ವಾಮಿ, ನರಸಿಂಹಯ್ಯ, ಸುದರ್ಶನ್, ನಾಯನಹಳ್ಳಿ ಬಿ.ಸಿ.ನಾರಾಯಣಸ್ವಾಮಿ, ತಾಳಹಳ್ಳಿ ಮುನಿಯಪ್ಪ ಸೇರಿದಂತೆ ಇತರರು ಇದ್ದರು.
ಮಾರ್ಚ್ 28 ರಿಂದ ಏಳು ದಿನಗಳ ಕಾಲ ಶ್ರೀರಾಮ ಕೋಟಿ ಸಪ್ತಾಹ ಕಾರ್ಯಕ್ರಮ ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀರಾಮ ಕೋಟಿ ಜಪ ಯಜ್ಞ ತಂಡದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಮಾ. 28ರಿಂದ ಏಳು ದಿನಗಳ ಕಾಲ ಅರ್ಥಪೂರ್ಣವಾಗಿ ಶ್ರೀರಾಮಕೋಟಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಕೋಟಿ ಜಪಯಜ್ಞ ತಂಡದ ಅಧ್ಯಕ್ಷ ಪುರದಗದ್ದೆ ಪಿ. ಎನ.ಕೃಷ್ಣಪ್ಪ ತಿಳಿಸಿದರು. ಅವರು ನಗರದ ಸಾಧು ಮಠ ಸಭಾಂಗಣದಲ್ಲಿ ಶ್ರೀರಾಮಕೋಟಿ ಸಪ್ತಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶ್ರೀರಾಮ ಕೋಟಿ ಎನ್ನುವುದು ಶ್ರೀರಾಮನ ಹೆಸರನ್ನು ಒಂದು ಕೋಟಿ ಬಾರಿ ಬರೆಯುವ ಭಕ್ತಿಯ ಲಿಖಿತ ಜಪವಾಗಿದೆ. ಈ ಅಭ್ಯಾಸದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಈ ಭಾಗದ ಹೆಚ್ಚಿನ ಜನ ಭಾಗವಹಿಸುವಂತೆ ಮಾಡಲು ಎಲ್ಲ ರೀತಿಯ ಪ್ರಚಾರ ಕೈಗೊಳ್ಳಬೇಕು ಎಂದರು. ತಂಡದ ಉಪಾಧ್ಯಕ್ಷ ಅಂಕಣಗೊಂಡಿ ರಂಗಪ್ಪ ಮಾತನಾಡಿ, ಶ್ರೀ ರಾಮಕೋಟಿ ಸಪ್ತಹದಲ್ಲಿ ಪ್ರತಿಯೊಬ್ಬರು ಪವಿತ್ರವಾಗಿ, ಶುದ್ಧ ಮನಸ್ಸಿನಿಂದ ಮಾಡುವ ದಿಸೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಗೌರವಾಧ್ಯಕ್ಷ ಬಿ. ಎನ್. ನಾಗಭೂಷಣ್ ಈ ಬಾರಿಯ ಏಳು ದಿನಗಳ ಶ್ರೀರಾಮ ಕೋಟಿ ಸಪ್ತಾಹವು 10ನೇ ವರ್ಷದ ವಾರ್ಷಿಕೋತ್ಸವವಾಗಿ ನೆರವೇರಿಸುತ್ತಿದ್ದು ಇಂತಹ ಅರ್ಥಪೂರ್ಣವಾದ ಸಪ್ತಾಹದಲ್ಲಿ ಪ್ರತಿಯೊಬ್ಬರನ್ನ ಸಕ್ರಿಯವಾಗಿ ಪಾಲ್ಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ರೂಪಿಸಬೇಕು ಎಂದು ಸಲಹೆ ನೀಡಿದರು. ಪೂರ್ವಭಾವಿಯ ಈ ಸಭೆಯಲ್ಲಿ ಶ್ರೀರಾಮಕೋಟಿ ಜಪ ಯಜ್ಞ ತಂಡ ಸದಸ್ಯರುಗಳಾದ ವಿ. ಕೃಷ್ಣಮೂರ್ತಿ, ಶಾಂತಮೂರ್ತಿ, ಗೋಪಾಲಾಚಾರಿ, ಡಿ ಮುನಿಯಪ್ಪದಾಸ್, ನಾರಾಯಸ್ವಾಮಿ, ನರಸಿಂಹಯ್ಯ, ಸುದರ್ಶನ್, ನಾಯನಹಳ್ಳಿ ಬಿ.ಸಿ.ನಾರಾಯಣಸ್ವಾಮಿ, ತಾಳಹಳ್ಳಿ ಮುನಿಯಪ್ಪ ಸೇರಿದಂತೆ ಇತರರು ಇದ್ದರು.
- बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत। बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।1
- ದೊಡ್ಡಬಳ್ಳಾಪುರ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು. ಸರ್ಜಾಪುರ ಮೂಲದ ನಯನ (19 ) ಮೃತ ವಿದ್ಯಾರ್ಥಿನಿ. ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ. ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು. ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ1
- ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ ಮುಂದೆ ಪ್ರತಿಭಟನೆ ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ ಕಚೇರಿಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಬಾಜಾನ್ ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ ಕಮ್ಯುನಿಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯ್ಕೆ ಮಾಡಿ ಅರ್ಹರಿಗೆ ಅವಕಾಶ ಕಲ್ಪಿಸಬೇಕು. 18 ಸಾವಿರ ರೂ.ಗಳ ಸಂಬಳವಿರುವ ಈ ಕಮ್ಯುನೀಟಿ ಮೊಬಿಲೈಸರ್ ಸಮುದಾಯ ಸ್ವಚ್ಚಗೊಳಿಸುವರ ಒಟ್ಟು 5 ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು ಹಾಸ್ಯಾಸ್ಪದವಾಗಿದೆ ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂದರು. ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪಟ್ಟಣದ ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು ಗೂಳೂರು ರಸ್ತೆ ಪಕ್ಕದಲ್ಲಿ ಪುರಸಭೆವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು 15 ವರ್ಷಗಳಿಂದ ಬಾಡಿಗೆಗೆ ನೀಡದೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವುದರಿಂದ ಪುರಸಭೆಗೆ ಆದಾಯ ಇಲ್ಲದೆ ಲಕ್ಷಾಂತರ ರೂ.ಗಳ ನಷ್ಠ ಉಂಟಾಗುತ್ತಿದೆ ಎಂದು ಆರೋಪಿಸಿದರು. ಖಾಲಿ ಇರುವ ವಾಣಿಜ್ಯ ಮಳಿಗೆಗಳನ್ನು ತಕ್ಷಣ ಬಾಡಿಗೆಗೆ ನೀಡಿ ಪುರಸಭೆ ಆದಾಯ ತರುವಂತೆ ಹಾಗೂ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಆವರಣವನ್ನು ಸ್ವಚ್ಚಗೊಳಿಸಿ ಭವನಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗದ ಅಗತ್ಯವಿದೆ ಎಂದ ಅವರು ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್ಗಳ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ ಇತ್ಯಾಧಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ಪ್ರತಿಭಟನಕಾರರು ಪುರಸಭೆಯ ಕಂದಾಯ ಅಧಿಕಾರಿ ಅತಾವುಲ್ಲಾ ರವರಿಗೆ ಮನವಿ ಪತ್ರವನ್ನುವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಆರ್.ರವೀಂದ್ರ,ಸೂರ್ಯನಾರಾಯಣ ರೆಡ್ಡಿ, ತಟ್ಟಹಳ್ಳಿ ಗಂಗರೆಡ್ಡಿ, ಶಿವಕುಮಾರ್, ಹರೀಶ್, ಸಮೀವುಲ್ಲಾ ಜಿ.ವಿ.ವೆಂಕಟಶಿವಪ್ಪ, ನಾಗಿರೆಡ್ಡಿ, ರಫೀಕ್, ಸಲೀಂ, ಗಂಗಾಧರ, ಇಂದ್ರ, ಸುಹೇಲ್, ಮಂಜುನಾಥ್ , ಗಣೇಶ್ ಮತ್ತಿತರರು ಇದ್ದರು.1
- ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಅವರ ಶಾಸಕರ ಸ್ಥಾನ ಹೈಕೋರ್ಟಿನಲ್ಲಿ ಅಸಿಂಧು ಆಗಿರೋದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಾಮ್ರಾಚರಣೆ ಮಾಡಿದರು1
- KOLAR KI.AWAAZ1
- ಕರ್ನಾಟಕದ ಸಲೂನ್ ಒಂದರಲ್ಲಿ ಸಿಬ್ಬಂದಿ ಮತ್ತು ಗ್ರಾಹಕನ ನಡುವೆ ಭಾಷೆಯ ವಿಚಾರವಾಗಿ ನಡೆದ ವಾಗ್ವಾದ ಭಾರಿ ಚರ್ಚೆಗೆ ಕಾರಣವಾಗಿದೆ. ಸಲೂನ್ನಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ ಇದ್ದಾರೆಯೇ ಎಂದು ಕೇಳಿದ್ದಕ್ಕೆ, ಹಿಂದಿ ಮಾತನಾಡುತ್ತಿದ್ದ ಮಹಿಳಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿದೆ. ಈ ಘಟನೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ, ಮತ್ತೊಂದು ವೀಡಿಯೋ ಪ್ರಕಟವಾಗಿದ್ದು ಅದರಲ್ಲಿ ಆ ಮಹಿಳೆ ಸ್ಥಳೀಯರ ಕ್ಷಮೆಯಾಚಿಸಿದ್ದಾರೆ. ಭಾಷಾ ಗೌರವದ ವಿಚಾರವಾಗಿ ಈ ಘಟನೆ ಇಂಟರ್ನೆಟ್ನಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.1
- कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।1
- ಬೆಂಗಳೂರು ಗ್ರಾಮಾಂತರ ಕಾಂಬೋಡಿಯಾ ದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋಬಾಲ್ ಪಂದ್ಯದಲ್ಲಿ ಭಾಗವಹಿಸಿ ಭರ್ಜರಿ ಜಯಗಳಿಸಿದ ಭಾರತದ ಕ್ರೀಡಾಪಟುಗಳಿಗೆ ದೇವನಹಳ್ಳಿ ಏರ್ ಪೋರ್ಟಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ ಭರ್ಜರಿ ಪೈಪೋಟಿ ನೀಡಿ ಗೆದ್ದು ಬೀಗಿದೆ. ಕಪ್ ಗೆದ್ದು ತವರಿಗೆ ಬಂದಂತಹ ಎಂಡೇವರ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸೇರಿ ಇಡೀ ತಂಡವನ್ನ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಇತರೆ ಗಣ್ಯರು ಅತ್ಮೀಯವಾಗಿ ಬರಮಾಡಿಕೊಂಡರು. ಜಯಶಾಲಿಗಳಾಗಿ ಬಂದಂತಹ ಕ್ರೀಡಾಪಟುಗಳಿಗೆ ಶಾಲಾ ಚೇರ್ಮನ್ ಎಂ.ಎಲ್.ಶಿವಶಂಕರ್, ಪೋಷಕರು, ಅಭಿಮಾನಿಗಳು ಅಭಿನಂದಿಸಿ ಗೌರವಿಸಿದ್ದಾರೆ. ನಂತರ ಮಾತನಾಡಿದ ಶಿವಶಂಕರ್ ದೇಶಕ್ಕೆ ಗೌರವ ತಂದುಕೊಟ್ಟ ಕ್ರೀಡಾಪಟುಗಳಿಗೆ ಮೊದಲು ನಾನು ಅಭಿನಂದಿಸುತ್ತೇನೆ, ಅದರಲ್ಲೂ ನಮ್ಮ ಶಾಲಾ ಮಕ್ಕಳು ಹಾಗೂ ಮಜಿಳಾ ತಂಡದ ಕೋಚ್ ಭಾಗವಹಿಸಿ ಟ್ರೋಫಿ ಗೆದ್ದಿರುವುದು ಬಹಳ ಖುಷಿ ತಂದುಕೊಟ್ಟಿದೆ, ಇದು ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ ಗೌರವ ಸಿಕ್ಕಂತಾಗಿದೆ, ನಮ್ಮ ಶಾಲೆಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.1