logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಾರ್ಚ್ 28 ರಿಂದ ಏಳು ದಿನಗಳ ಕಾಲ ಶ್ರೀರಾಮ ಕೋಟಿ ಸಪ್ತಾಹ ಕಾರ್ಯಕ್ರಮ ಚಿಕ್ಕಬಳ್ಳಾಪುರ :    ಇಲ್ಲಿನ ಶ್ರೀರಾಮ ಕೋಟಿ ಜಪ ಯಜ್ಞ ತಂಡದ ವತಿಯಿಂದ ಲೋಕಕಲ್ಯಾಣಾರ್ಥವಾಗಿ  ಮಾ. 28ರಿಂದ ಏಳು ದಿನಗಳ ಕಾಲ  ಅರ್ಥಪೂರ್ಣವಾಗಿ  ಶ್ರೀರಾಮಕೋಟಿ ಸಪ್ತಾಹ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ ಎಂದು  ಶ್ರೀರಾಮ ಕೋಟಿ ಜಪಯಜ್ಞ  ತಂಡದ ಅಧ್ಯಕ್ಷ  ಪುರದಗದ್ದೆ ಪಿ. ಎನ.ಕೃಷ್ಣಪ್ಪ ತಿಳಿಸಿದರು.  ಅವರು ನಗರದ ಸಾಧು ಮಠ ಸಭಾಂಗಣದಲ್ಲಿ ಶ್ರೀರಾಮಕೋಟಿ ಸಪ್ತಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,  ಶ್ರೀರಾಮ ಕೋಟಿ ಎನ್ನುವುದು ಶ್ರೀರಾಮನ ಹೆಸರನ್ನು ಒಂದು ಕೋಟಿ ಬಾರಿ ಬರೆಯುವ ಭಕ್ತಿಯ ಲಿಖಿತ ಜಪವಾಗಿದೆ. ಈ ಅಭ್ಯಾಸದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಈ ಭಾಗದ  ಹೆಚ್ಚಿನ ಜನ  ಭಾಗವಹಿಸುವಂತೆ ಮಾಡಲು ಎಲ್ಲ ರೀತಿಯ  ಪ್ರಚಾರ ಕೈಗೊಳ್ಳಬೇಕು ಎಂದರು. ತಂಡದ ಉಪಾಧ್ಯಕ್ಷ ಅಂಕಣಗೊಂಡಿ ರಂಗಪ್ಪ ಮಾತನಾಡಿ, ಶ್ರೀ ರಾಮಕೋಟಿ ಸಪ್ತಹದಲ್ಲಿ ಪ್ರತಿಯೊಬ್ಬರು ಪವಿತ್ರವಾಗಿ, ಶುದ್ಧ ಮನಸ್ಸಿನಿಂದ ಮಾಡುವ ದಿಸೆಯಲ್ಲಿ  ಜಾಗೃತಿ ಮೂಡಿಸಬೇಕು ಎಂದರು. ಗೌರವಾಧ್ಯಕ್ಷ ಬಿ. ಎನ್. ನಾಗಭೂಷಣ್   ಈ ಬಾರಿಯ ಏಳು ದಿನಗಳ ಶ್ರೀರಾಮ ಕೋಟಿ ಸಪ್ತಾಹವು 10ನೇ ವರ್ಷದ  ವಾರ್ಷಿಕೋತ್ಸವವಾಗಿ  ನೆರವೇರಿಸುತ್ತಿದ್ದು  ಇಂತಹ  ಅರ್ಥಪೂರ್ಣವಾದ  ಸಪ್ತಾಹದಲ್ಲಿ  ಪ್ರತಿಯೊಬ್ಬರನ್ನ  ಸಕ್ರಿಯವಾಗಿ ಪಾಲ್ಗೊಳಿಸುವ ನಿಟ್ಟಿನಲ್ಲಿ  ನಾವೆಲ್ಲ  ಕಾರ್ಯ ರೂಪಿಸಬೇಕು ಎಂದು ಸಲಹೆ ನೀಡಿದರು.  ಪೂರ್ವಭಾವಿಯ ಈ ಸಭೆಯಲ್ಲಿ ಶ್ರೀರಾಮಕೋಟಿ ಜಪ ಯಜ್ಞ ತಂಡ  ಸದಸ್ಯರುಗಳಾದ  ವಿ. ಕೃಷ್ಣಮೂರ್ತಿ, ಶಾಂತಮೂರ್ತಿ, ಗೋಪಾಲಾಚಾರಿ, ಡಿ ಮುನಿಯಪ್ಪದಾಸ್,  ನಾರಾಯಸ್ವಾಮಿ, ನರಸಿಂಹಯ್ಯ,  ಸುದರ್ಶನ್, ನಾಯನಹಳ್ಳಿ ಬಿ.ಸಿ.ನಾರಾಯಣಸ್ವಾಮಿ, ತಾಳಹಳ್ಳಿ ಮುನಿಯಪ್ಪ ಸೇರಿದಂತೆ ಇತರರು ಇದ್ದರು.

on 17 February
user_Venkey Manu
Venkey Manu
ಪ್ರಕರ್ತರು ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
on 17 February
683e8ac7-42ad-4f95-8c36-a54289ef56ce

ಮಾರ್ಚ್ 28 ರಿಂದ ಏಳು ದಿನಗಳ ಕಾಲ ಶ್ರೀರಾಮ ಕೋಟಿ ಸಪ್ತಾಹ ಕಾರ್ಯಕ್ರಮ ಚಿಕ್ಕಬಳ್ಳಾಪುರ :    ಇಲ್ಲಿನ ಶ್ರೀರಾಮ ಕೋಟಿ ಜಪ ಯಜ್ಞ ತಂಡದ ವತಿಯಿಂದ ಲೋಕಕಲ್ಯಾಣಾರ್ಥವಾಗಿ  ಮಾ. 28ರಿಂದ ಏಳು ದಿನಗಳ ಕಾಲ  ಅರ್ಥಪೂರ್ಣವಾಗಿ  ಶ್ರೀರಾಮಕೋಟಿ ಸಪ್ತಾಹ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ ಎಂದು  ಶ್ರೀರಾಮ ಕೋಟಿ ಜಪಯಜ್ಞ  ತಂಡದ ಅಧ್ಯಕ್ಷ  ಪುರದಗದ್ದೆ ಪಿ. ಎನ.ಕೃಷ್ಣಪ್ಪ ತಿಳಿಸಿದರು.  ಅವರು ನಗರದ ಸಾಧು ಮಠ ಸಭಾಂಗಣದಲ್ಲಿ ಶ್ರೀರಾಮಕೋಟಿ ಸಪ್ತಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,  ಶ್ರೀರಾಮ ಕೋಟಿ ಎನ್ನುವುದು ಶ್ರೀರಾಮನ ಹೆಸರನ್ನು ಒಂದು ಕೋಟಿ ಬಾರಿ ಬರೆಯುವ ಭಕ್ತಿಯ ಲಿಖಿತ ಜಪವಾಗಿದೆ. ಈ ಅಭ್ಯಾಸದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಈ ಭಾಗದ  ಹೆಚ್ಚಿನ ಜನ  ಭಾಗವಹಿಸುವಂತೆ ಮಾಡಲು ಎಲ್ಲ ರೀತಿಯ  ಪ್ರಚಾರ ಕೈಗೊಳ್ಳಬೇಕು ಎಂದರು. ತಂಡದ ಉಪಾಧ್ಯಕ್ಷ ಅಂಕಣಗೊಂಡಿ ರಂಗಪ್ಪ ಮಾತನಾಡಿ, ಶ್ರೀ ರಾಮಕೋಟಿ ಸಪ್ತಹದಲ್ಲಿ ಪ್ರತಿಯೊಬ್ಬರು ಪವಿತ್ರವಾಗಿ, ಶುದ್ಧ ಮನಸ್ಸಿನಿಂದ ಮಾಡುವ ದಿಸೆಯಲ್ಲಿ  ಜಾಗೃತಿ ಮೂಡಿಸಬೇಕು ಎಂದರು. ಗೌರವಾಧ್ಯಕ್ಷ ಬಿ. ಎನ್. ನಾಗಭೂಷಣ್   ಈ ಬಾರಿಯ ಏಳು ದಿನಗಳ ಶ್ರೀರಾಮ ಕೋಟಿ ಸಪ್ತಾಹವು 10ನೇ ವರ್ಷದ  ವಾರ್ಷಿಕೋತ್ಸವವಾಗಿ  ನೆರವೇರಿಸುತ್ತಿದ್ದು  ಇಂತಹ  ಅರ್ಥಪೂರ್ಣವಾದ  ಸಪ್ತಾಹದಲ್ಲಿ  ಪ್ರತಿಯೊಬ್ಬರನ್ನ  ಸಕ್ರಿಯವಾಗಿ ಪಾಲ್ಗೊಳಿಸುವ ನಿಟ್ಟಿನಲ್ಲಿ  ನಾವೆಲ್ಲ  ಕಾರ್ಯ ರೂಪಿಸಬೇಕು ಎಂದು ಸಲಹೆ ನೀಡಿದರು.  ಪೂರ್ವಭಾವಿಯ ಈ ಸಭೆಯಲ್ಲಿ ಶ್ರೀರಾಮಕೋಟಿ ಜಪ ಯಜ್ಞ ತಂಡ  ಸದಸ್ಯರುಗಳಾದ  ವಿ. ಕೃಷ್ಣಮೂರ್ತಿ, ಶಾಂತಮೂರ್ತಿ, ಗೋಪಾಲಾಚಾರಿ, ಡಿ ಮುನಿಯಪ್ಪದಾಸ್,  ನಾರಾಯಸ್ವಾಮಿ, ನರಸಿಂಹಯ್ಯ,  ಸುದರ್ಶನ್, ನಾಯನಹಳ್ಳಿ ಬಿ.ಸಿ.ನಾರಾಯಣಸ್ವಾಮಿ, ತಾಳಹಳ್ಳಿ ಮುನಿಯಪ್ಪ ಸೇರಿದಂತೆ ಇತರರು ಇದ್ದರು.

More news from ಕರ್ನಾಟಕ and nearby areas
  • ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ವಂಚನೆಗೊಳಗಾದ ಗ್ರಾಹಕರಿಂದ 2ನೇ ದಿನದ ಅನಿರ್ದಿಷ್ಟ ಧರಣಿ ಗೌರಿಬಿದನೂರು ನಗರದ ಉಪ-ಅಂಚೆ ಕಚೇರಿ ಪೇದೆ ರಮ್ಯಾ ಎಂಬುವವರು ಹಾಲಗಾನಹಳ್ಳಿ ಗ್ರಾಮದ ಅಂಚೆ ಕಛೇರಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡುವುದಾಗಿ ಹೇಳಿ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೋಟ್ಯಂತರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವ ವಿರುದ್ದ ಕಾನೂನು ಜರುಗಿಸಬೇಕೆಂದು ಹಣ ಕಳೆದುಕೊಂಡ ಗ್ರಾಹಕರು ಅನಿರ್ದಿಷ್ಟ ಧರಣಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 3ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು, ನಮಗೆ ನ್ಯಾಯ ದೊರಕಿಸಿಕೊಡಬೇಕು ಅಥವಾ ಹಣ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 12 ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ, ಈ ಕೃತ್ಯ ಎಸಗಿದ್ದಾಳೆ. ಗ್ರಾಹಕರು ಠೇವಣಿ, ಎಸ್.ಬಿ. ಸೇರಿದಂತೆ ವಿವಿಧ ಖಾತೆಗಳಲ್ಲಿ ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ರಮ್ಯ ಹೆರಿಗೆ ಸುದೀರ್ಘ ರಜೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ, ಕಚೇರಿಯಲ್ಲಿ 1,200 ಖಾತೆದಾರರಿದ್ದು, ಸುಮಾರು 200ಗ್ರಾಹಕರಿಗೆ 1.30 ಕೋಟಿ ರೂ. ವಂಚನೆಯಾಗಿದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಪೊಲೀಸರೊಂದಿಗೆ ಮಾತಿನ ಚಕಮಕಿ: ಪೋಸ್ಟ್ ಆಫೀಸ್ ಕಛೇರಿಯಲ್ಲಿ ಹಣ ಕಳೆದುಕೊಂಡು ಗ್ರಾಹಕರು ಅನಿರ್ದಿಷ್ಟ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದರೂ ಅಂಚೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ, ಅಂಚೆ ಇಲಾಖೆಯವರಿಗೆ ಪೊಲೀಸರು ಕಾವಲು ಇದ್ದಾರೆಂದು ಪೊಲೀಸರನ್ನು ನಿಂದಿಸುವ ಮೂಲಕ ಮಾತಿನ ಚಕಮಕಿ ನಡೆಯಿತು. ನಮಗೆ ನೆಡದಿರುವ ಅನ್ಯಾಯವನ್ನು
    1
    ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ವಂಚನೆಗೊಳಗಾದ ಗ್ರಾಹಕರಿಂದ 2ನೇ ದಿನದ ಅನಿರ್ದಿಷ್ಟ ಧರಣಿ ಗೌರಿಬಿದನೂರು ನಗರದ ಉಪ-ಅಂಚೆ ಕಚೇರಿ ಪೇದೆ ರಮ್ಯಾ ಎಂಬುವವರು ಹಾಲಗಾನಹಳ್ಳಿ ಗ್ರಾಮದ ಅಂಚೆ ಕಛೇರಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡುವುದಾಗಿ ಹೇಳಿ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೋಟ್ಯಂತರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವ ವಿರುದ್ದ ಕಾನೂನು ಜರುಗಿಸಬೇಕೆಂದು ಹಣ ಕಳೆದುಕೊಂಡ ಗ್ರಾಹಕರು ಅನಿರ್ದಿಷ್ಟ ಧರಣಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
3ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು, ನಮಗೆ ನ್ಯಾಯ ದೊರಕಿಸಿಕೊಡಬೇಕು ಅಥವಾ ಹಣ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ.
ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 12 ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ, ಈ ಕೃತ್ಯ ಎಸಗಿದ್ದಾಳೆ. ಗ್ರಾಹಕರು ಠೇವಣಿ, ಎಸ್.ಬಿ. ಸೇರಿದಂತೆ ವಿವಿಧ ಖಾತೆಗಳಲ್ಲಿ ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ರಮ್ಯ ಹೆರಿಗೆ ಸುದೀರ್ಘ ರಜೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ,
ಕಚೇರಿಯಲ್ಲಿ 1,200 ಖಾತೆದಾರರಿದ್ದು, ಸುಮಾರು 200ಗ್ರಾಹಕರಿಗೆ 1.30 ಕೋಟಿ ರೂ. ವಂಚನೆಯಾಗಿದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ
ಪೊಲೀಸರೊಂದಿಗೆ ಮಾತಿನ ಚಕಮಕಿ: ಪೋಸ್ಟ್ ಆಫೀಸ್ ಕಛೇರಿಯಲ್ಲಿ ಹಣ ಕಳೆದುಕೊಂಡು ಗ್ರಾಹಕರು ಅನಿರ್ದಿಷ್ಟ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದರೂ ಅಂಚೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ, ಅಂಚೆ ಇಲಾಖೆಯವರಿಗೆ ಪೊಲೀಸರು ಕಾವಲು ಇದ್ದಾರೆಂದು ಪೊಲೀಸರನ್ನು ನಿಂದಿಸುವ ಮೂಲಕ ಮಾತಿನ ಚಕಮಕಿ ನಡೆಯಿತು.
ನಮಗೆ ನೆಡದಿರುವ ಅನ್ಯಾಯವನ್ನು
    user_ಸುಪ್ರಿಯಾ
    ಸುಪ್ರಿಯಾ
    ಗೌರಿಬಿದನೂರು, ಚಿಕ್ಕಬಳ್ಳಾಪುರ, ಕರ್ನಾಟಕ•
    22 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • KOLAR.........KOLAR KI.AWAAZ KOUSAR NEWS
    1
    KOLAR.........KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    4 hrs ago
  • ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಸಂಪನ್ನ ದೇವಿಗೆ ಪೂಜೆ ಸಲ್ಲಿಸಿದ ಅಪಾರ ಭಕ್ತರು ಹಲಗೂರು: ಗುಂಡಾಪುರದ ಬೆಟ್ಟ ದರಸಮ್ಮನ ದೊಡ್ಡ ಜಾತ್ರೆ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಮಾ. 4ನೇ ಬುದುವಾರದಿಂದ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ದಿನನಿತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಂಗಳವಾರ ದೊಡ್ಡ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯದ್ಯಂತ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಂಗಳವಾರ ಸಾಯಂಕಾಲ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ನಡೆಸಿದ ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಹೊತ್ತು ಗ್ರಾಮದ ಮನೆಗಳಿಗೆ ಹೋದಾಗ ಗೃಹಿಣಿಯರು ಹೆಬ್ಬಾರೆಗೆ ಪೂಜೆ ಸಲ್ಲಿಸಿ, ಅಚ್ಛಂದ ನೀಡುವುದು ವಾಡಿಕೆ ಅದನ್ನು ಪಡೆದ ದೇವರಗುಡ್ಡರು ಮತ್ತೆ ದೇವಸ್ಥಾನಕ್ಕೆ ಹೆಬ್ಬಾರೆಯನ್ನು ಹೊತ್ತು ಬರುತ್ತಾರೆ. ದೇವಿಗೆ ಪರದೇಶಿ ಕುಣಿತ ಎಂದರೆ ಬಹು ಅಚ್ಚುಮೆಚ್ಚು, ಬಾಳೆವನ್ನಿಗ ಗ್ರಾಮಸ್ಥರು ಅರಿದ ಬಟ್ಟೆಗಳನ್ನು ತೊಟ್ಟು ಗೋಣಿಚೀಲದಿಂದ ಬಟ್ಟೆಗಳನ್ನು ಮಾಡಿಕೊಂಡು ಕರಡಿ, ಹುಲಿ, ಹೆಣ್ಣಿನ ವೇಷಗಳನ್ನು ತೊಟ್ಟು ತೆಂಗಿನ ಗುದ್ದಮಟ್ಟೆಯಿಂದ ತಯಾರಿಸಿದ ಬಂದೂಕವನ್ನು ಹಿಡಿದು ಜೊತೆಯಲ್ಲಿ ಬೇವಿನಸೊಪ್ಪನ್ನು ಹಿಡಿದುಕೊಂಡು ಕುಣಿದು ಕುಪ್ಪಳಿಸಿಕೊಂಡು ದೇವಸ್ಥಾನದ ಹತ್ತಿರ ಬಂದಾಗ ಅರ್ಚಕರು ಅವರಿಗೆ ತೀರ್ಥ ಹಾಕಿ ಬರಮಾಡಿಕೊಳ್ಳುತ್ತಾರೆ ನಂತರ ಬೆಟ್ಟದರಸಮ್ಮನ ದೇವರ ಕರಗವನ್ನು ಹೊತ್ತ ಅರ್ಚಕರಾದ ವೀರಭದ್ರಪ್ಪ ಮಡಿವಾಳ ಹಾಸಿದ ಮಡಿಯ ಮೇಲೆ ನಡೆಯುವಾಗ ಜೊತೆಯಲ್ಲಿ ಕಳಸ ಹೊತ್ತ ಮುತ್ತೈದೆಯರು ಹರಕೆ ಹೊತ್ತುಕೊಂಡಿದ್ದ ಬಾಯಿ ಬೀಗದವರು ಬೇವಿನ ಸೊಪ್ಪು, ಗಂಧದಕಡ್ಡಿ ಹಿಡಿದು ದೇವರ ಜೊತೆಯಲ್ಲಿ ಮೂರು ಬಸಪ್ಪಗಳು ನಡುವೆ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳ ನಡುವೆ ಸಂಜೆ ಆರು ಗಂಟೆಯ ನಂತರ ದೇವಸ್ಥಾನ ತಲುಪಿತು. ಅಲ್ಲಿ ಮತ್ತೆ ಪೂಜೆ ಪುನಸ್ಕಾರಗಳು ನಡೆಸಿದ ನಂತರ ಅದೇ ದಿನ ರಾತ್ರಿ ಮತ್ತೆ ಕರಗವನ್ನು ಹೊತ್ತು ಗ್ರಾಮದ ಕರಗದ ಮನೆಗೆ ದೇವರ ಕರಗವನ್ನು ತರುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಎತ್ತಿ ಪೂಜೆ ಸಲ್ಲಿಸಿದ ಮೇಲೆ ದೇವರು ಕರಗದ ಮನೆಗೆ ಕರಗವನ್ನು ಕೊಂಡಯಾಲಾಯಿತು. ಈ ಸಂದರ್ಭದಲ್ಲಿ ಭಕ್ತರು ಪಂಜಿನ ಸೇವೆ ಹಾಗೂ ತಮ್ಮ ದನಕರುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುವ ಕಾರ್ಯಕ್ರಮಗಳು ಬಹು ಸೊಗಸಾಗಿ ನಡೆಯಿತು. ಹಲಗೂರು, ಗುಂಡಾಪುರ, ಕೆಂಪಯ್ಯನ ದೊಡ್ಡಿ, ನಂದಿಪುರ, ಹೆಚ್.ಬಸಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ದಿವಸ ಭಕ್ತಾದಿಗಳು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪವನ್ನು ನೀಗಿಸಲು ಹರಕೆ ಹೊತ್ತುಕೊಂಡ ಭಕ್ತರು ಹಂಚುತ್ತಾರೆ.ಹಾಗೂ ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಹೆಸರುಬೇಳೆ, ಪಾನಕ ನೀಡಿದರು. ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಮಂಗಳವಾರ ಗುಂಡಾಪುರದ ಜಾತ್ರೆಯ ದಿನವಾದ ಮಂಗಳವಾರ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು.. ಅರ್ಚಕರಾದ ವೀರತಪ್ಪ ಮಾತನಾಡಿ ನಮ್ಮ ಗ್ರಾಮದ ದೇವತೆಯಾದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರಗಳ ಕಾಲ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ದೊಡ್ಡ ಜಾತ್ರೆಯ ಮಂಗಳವಾರ ಸಾಯಂಕಾಲ ಕರಗದ ಮನೆಯಿಂದ ದೇವರು ಮೂಲ ಸನ್ನಿಧಿಗೆ ದೇವರ ಕರಗವನ್ನು ತರಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರೆ. ಗುಂಡಾಪುರ ಸೇರಿದಂತೆ ಒಂಬತ್ತು ಹಳ್ಳಿಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಯಾವುದೇ ವಿಘ್ನವಿಲ್ಲದೆ ಜಾತ್ರೆ ಮಹೋತ್ಸವ ನಡೆದಿರುತ್ತದೆ ಎಂದು ಅರ್ಚಕರಾದ ವೀರ ತಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರುಗಳಾದ ರಮೇಶ್, ಮಹಾದೇವಪ್ಪ, ಪುಟ್ಟಮಲ್ಲಪ್ಪ, ಚಂದ್ರು ಸೇರಿದಂತೆ ಇತರರು ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾಗ್ರತೆಯ ಕ್ರಮವಾಗಿ ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಬಿಗಿ ಬಂದೂಬಸ್ತ್ ಏರ್ಪಡಿಸಿದ್ದರು. 10 hgr1 ಬೆಟ್ಟದ ತಪ್ಪಲ್ಲಿನ ದೇವಸ್ಥಾನಕ್ಕೆ ದೇವರು ಬರುತ್ತಿರುವುದು. 10hgr2 ದೇವರಿಗೆ ಪ್ರಿಯವಾದ ಪರದೇಶಿ ಕುಣಿತದಲ್ಲಿ ಬಾಳೆಹೂನ್ನಿಗ ಗ್ರಾಮಸ್ಥರು ತೊಡಗಿರುವುದು. 10hgr3 ದೇವರ ಮೆರವಣಿಗೆ ಬರುವುದನ್ನು ನೋಡಲು ಕಾದು ಕೋಳಿತ ಭಕ್ತರು. 10hgr4
    1
    ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಸಂಪನ್ನ ದೇವಿಗೆ ಪೂಜೆ ಸಲ್ಲಿಸಿದ  ಅಪಾರ ಭಕ್ತರು
ಹಲಗೂರು: ಗುಂಡಾಪುರದ ಬೆಟ್ಟ ದರಸಮ್ಮನ ದೊಡ್ಡ ಜಾತ್ರೆ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಮಾ. 4ನೇ ಬುದುವಾರದಿಂದ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ದಿನನಿತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಂಗಳವಾರ ದೊಡ್ಡ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯದ್ಯಂತ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಮಂಗಳವಾರ ಸಾಯಂಕಾಲ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ  ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ನಡೆಸಿದ ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಹೊತ್ತು
ಗ್ರಾಮದ ಮನೆಗಳಿಗೆ ಹೋದಾಗ ಗೃಹಿಣಿಯರು ಹೆಬ್ಬಾರೆಗೆ ಪೂಜೆ ಸಲ್ಲಿಸಿ, ಅಚ್ಛಂದ ನೀಡುವುದು ವಾಡಿಕೆ ಅದನ್ನು ಪಡೆದ ದೇವರಗುಡ್ಡರು ಮತ್ತೆ ದೇವಸ್ಥಾನಕ್ಕೆ ಹೆಬ್ಬಾರೆಯನ್ನು ಹೊತ್ತು ಬರುತ್ತಾರೆ. 
ದೇವಿಗೆ ಪರದೇಶಿ ಕುಣಿತ ಎಂದರೆ ಬಹು ಅಚ್ಚುಮೆಚ್ಚು, ಬಾಳೆವನ್ನಿಗ ಗ್ರಾಮಸ್ಥರು ಅರಿದ ಬಟ್ಟೆಗಳನ್ನು ತೊಟ್ಟು ಗೋಣಿಚೀಲದಿಂದ ಬಟ್ಟೆಗಳನ್ನು ಮಾಡಿಕೊಂಡು ಕರಡಿ,  ಹುಲಿ, ಹೆಣ್ಣಿನ ವೇಷಗಳನ್ನು ತೊಟ್ಟು ತೆಂಗಿನ ಗುದ್ದಮಟ್ಟೆಯಿಂದ ತಯಾರಿಸಿದ ಬಂದೂಕವನ್ನು ಹಿಡಿದು ಜೊತೆಯಲ್ಲಿ ಬೇವಿನಸೊಪ್ಪನ್ನು ಹಿಡಿದುಕೊಂಡು ಕುಣಿದು ಕುಪ್ಪಳಿಸಿಕೊಂಡು ದೇವಸ್ಥಾನದ ಹತ್ತಿರ ಬಂದಾಗ ಅರ್ಚಕರು ಅವರಿಗೆ ತೀರ್ಥ ಹಾಕಿ ಬರಮಾಡಿಕೊಳ್ಳುತ್ತಾರೆ ನಂತರ ಬೆಟ್ಟದರಸಮ್ಮನ ದೇವರ ಕರಗವನ್ನು ಹೊತ್ತ ಅರ್ಚಕರಾದ ವೀರಭದ್ರಪ್ಪ  ಮಡಿವಾಳ ಹಾಸಿದ ಮಡಿಯ ಮೇಲೆ ನಡೆಯುವಾಗ ಜೊತೆಯಲ್ಲಿ ಕಳಸ ಹೊತ್ತ ಮುತ್ತೈದೆಯರು ಹರಕೆ ಹೊತ್ತುಕೊಂಡಿದ್ದ ಬಾಯಿ ಬೀಗದವರು ಬೇವಿನ ಸೊಪ್ಪು, ಗಂಧದಕಡ್ಡಿ ಹಿಡಿದು ದೇವರ ಜೊತೆಯಲ್ಲಿ ಮೂರು ಬಸಪ್ಪಗಳು  ನಡುವೆ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳ ನಡುವೆ ಸಂಜೆ ಆರು ಗಂಟೆಯ ನಂತರ ದೇವಸ್ಥಾನ ತಲುಪಿತು. ಅಲ್ಲಿ ಮತ್ತೆ ಪೂಜೆ ಪುನಸ್ಕಾರಗಳು ನಡೆಸಿದ ನಂತರ ಅದೇ ದಿನ ರಾತ್ರಿ ಮತ್ತೆ ಕರಗವನ್ನು ಹೊತ್ತು ಗ್ರಾಮದ ಕರಗದ ಮನೆಗೆ ದೇವರ ಕರಗವನ್ನು ತರುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಎತ್ತಿ ಪೂಜೆ ಸಲ್ಲಿಸಿದ ಮೇಲೆ ದೇವರು ಕರಗದ ಮನೆಗೆ ಕರಗವನ್ನು ಕೊಂಡಯಾಲಾಯಿತು. 
ಈ ಸಂದರ್ಭದಲ್ಲಿ ಭಕ್ತರು ಪಂಜಿನ ಸೇವೆ ಹಾಗೂ ತಮ್ಮ ದನಕರುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುವ ಕಾರ್ಯಕ್ರಮಗಳು ಬಹು ಸೊಗಸಾಗಿ ನಡೆಯಿತು. 
ಹಲಗೂರು,
ಗುಂಡಾಪುರ,  ಕೆಂಪಯ್ಯನ ದೊಡ್ಡಿ, ನಂದಿಪುರ, ಹೆಚ್.ಬಸಾಪುರ, ದಳವಾಯಿ ಕೋಡಿಹಳ್ಳಿ,  ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾತ್ರೆಯ ದಿವಸ ಭಕ್ತಾದಿಗಳು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪವನ್ನು ನೀಗಿಸಲು ಹರಕೆ ಹೊತ್ತುಕೊಂಡ ಭಕ್ತರು ಹಂಚುತ್ತಾರೆ.ಹಾಗೂ ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಹೆಸರುಬೇಳೆ, ಪಾನಕ ನೀಡಿದರು.
ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಮಂಗಳವಾರ ಗುಂಡಾಪುರದ  ಜಾತ್ರೆಯ ದಿನವಾದ ಮಂಗಳವಾರ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು.. 
ಅರ್ಚಕರಾದ ವೀರತಪ್ಪ ಮಾತನಾಡಿ ನಮ್ಮ ಗ್ರಾಮದ ದೇವತೆಯಾದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರಗಳ ಕಾಲ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ದೊಡ್ಡ ಜಾತ್ರೆಯ ಮಂಗಳವಾರ ಸಾಯಂಕಾಲ ಕರಗದ ಮನೆಯಿಂದ ದೇವರು ಮೂಲ ಸನ್ನಿಧಿಗೆ ದೇವರ ಕರಗವನ್ನು ತರಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಳಿಗ್ಗೆಯಿಂದಲೇ  ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರೆ. ಗುಂಡಾಪುರ ಸೇರಿದಂತೆ ಒಂಬತ್ತು ಹಳ್ಳಿಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಯಾವುದೇ ವಿಘ್ನವಿಲ್ಲದೆ ಜಾತ್ರೆ  ಮಹೋತ್ಸವ ನಡೆದಿರುತ್ತದೆ ಎಂದು ಅರ್ಚಕರಾದ ವೀರ ತಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕರುಗಳಾದ ರಮೇಶ್, ಮಹಾದೇವಪ್ಪ, ಪುಟ್ಟಮಲ್ಲಪ್ಪ, ಚಂದ್ರು ಸೇರಿದಂತೆ ಇತರರು ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮುಂಜಾಗ್ರತೆಯ ಕ್ರಮವಾಗಿ ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಬಿಗಿ ಬಂದೂಬಸ್ತ್ ಏರ್ಪಡಿಸಿದ್ದರು.
10 hgr1 ಬೆಟ್ಟದ ತಪ್ಪಲ್ಲಿನ ದೇವಸ್ಥಾನಕ್ಕೆ ದೇವರು  ಬರುತ್ತಿರುವುದು.
10hgr2 ದೇವರಿಗೆ ಪ್ರಿಯವಾದ ಪರದೇಶಿ ಕುಣಿತದಲ್ಲಿ ಬಾಳೆಹೂನ್ನಿಗ ಗ್ರಾಮಸ್ಥರು ತೊಡಗಿರುವುದು.
10hgr3 ದೇವರ ಮೆರವಣಿಗೆ ಬರುವುದನ್ನು ನೋಡಲು ಕಾದು ಕೋಳಿತ ಭಕ್ತರು.
10hgr4
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    19 hrs ago
  • 82 ಲಕ್ಷದ ಪುಣ್ಯಕೋಟಿ ಗೋಶಾಲೆ – ನೀರು, ನೆರಳು, ಮೇವು ಕೊರತೆಯಿಂದ ಸೊರಗುತ್ತಿರುವ ಜಾನುವಾರುಗಳು ಹೌದು ಇದು ಚಳ್ಳಕೆರೆ ನಗರದ ಹೊರವಲಯದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಸುಮಾರು 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಪುಣ್ಯಕೋಟಿ ಗೋಶಾಲೆ’ಯಲ್ಲಿ ಜಾನುವಾರುಗಳು ನೀರು, ನೆರಳು ಮತ್ತು ಮೇವು ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ. 100 ಗೋವುಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಇಲ್ಲಿ ಸುಸಜ್ಜಿತ ಶೆಡ್, ಆಡಳಿತ ಕಚೇರಿ, ಎರಡು ವಸತಿ ಗೃಹ ಹಾಗೂ ಮೇವಿನ ಗೋದಾಮು ನಿರ್ಮಿಸಲಾಗಿದೆ. ಆದರೆ ಪ್ರಸ್ತುತ ಗೋಶಾಲೆಯಲ್ಲಿ ಇರುವ ಜಾನುವಾರುಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಗೋಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಜಾನುವಾರುಗಳು ಇದ್ದು, ಈಗಾಗಲೇ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ನೀರು, ನೆರಳು ಮತ್ತು ಮೇವು ಸಾಕಾಗುತ್ತಿಲ್ಲ. ಇದರಿಂದ ಜಾನುವಾರುಗಳು ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಸಾಧ್ಯತೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಗೋಶಾಲೆಗೆ ಮೇವು ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿ ಒಂದು ತಿಂಗಳು ಕಳೆದರೂ ಇನ್ನೂ ಅಂತಿಮಗೊಳ್ಳದ ಕಾರಣ ಮೇವು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಗೋಶಾಲೆಯ ಮೇವಿನ ಗೋದಾಮಿನಲ್ಲಿ ಇರುವ ಮೇವು ಇನ್ನೂ ಒಂದೆರಡು ದಿನಗಳಲ್ಲಿ ಖಾಲಿಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ. ಇಲ್ಲಿ ವಿಶಾಲವಾದ ಜಾಗ ಇರುವುದರಿಂದ ಭೂಮಿಯನ್ನು ಸಮತಟ್ಟು ಮಾಡಿ ನೀರಿನ ಸೌಲಭ್ಯ ಒದಗಿಸಿದರೆ ಸ್ಥಳೀಯ ಪಶುಪಾಲಕರು ತಾವೇ ಮೇವು ಬೆಳೆಸಲು ಸಿದ್ಧರಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪುಣ್ಯಕೋಟಿ ಗೋಶಾಲೆಯ ಜಾನುವಾರುಗಳಿಗೆ ನೀರು, ನೆರಳು ಹಾಗೂ ಸಮರ್ಪಕ ಮೇವು ಒದಗಿಸಿ ತಮ್ಮ ಕರ್ತವ್ಯ ನಿರ್ವಹಿಸುವರೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈಗಲಾದರೂ ಅಧಿಕಾರಿಗಳು ಗಮನಹರಿಸಿ ಗೋಶಾಲೆಯ ಜಾನುವಾರುಗಳ ಸಂಕಷ್ಟ ನಿವಾರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    1
    82 ಲಕ್ಷದ ಪುಣ್ಯಕೋಟಿ ಗೋಶಾಲೆ – ನೀರು, ನೆರಳು, ಮೇವು ಕೊರತೆಯಿಂದ ಸೊರಗುತ್ತಿರುವ ಜಾನುವಾರುಗಳು
ಹೌದು ಇದು ಚಳ್ಳಕೆರೆ ನಗರದ ಹೊರವಲಯದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಸುಮಾರು 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಪುಣ್ಯಕೋಟಿ ಗೋಶಾಲೆ’ಯಲ್ಲಿ ಜಾನುವಾರುಗಳು ನೀರು, ನೆರಳು ಮತ್ತು ಮೇವು ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ.
100 ಗೋವುಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಇಲ್ಲಿ ಸುಸಜ್ಜಿತ ಶೆಡ್, ಆಡಳಿತ ಕಚೇರಿ, ಎರಡು ವಸತಿ ಗೃಹ ಹಾಗೂ ಮೇವಿನ ಗೋದಾಮು ನಿರ್ಮಿಸಲಾಗಿದೆ. ಆದರೆ ಪ್ರಸ್ತುತ ಗೋಶಾಲೆಯಲ್ಲಿ ಇರುವ ಜಾನುವಾರುಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಸ್ತುತ ಗೋಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಜಾನುವಾರುಗಳು ಇದ್ದು, ಈಗಾಗಲೇ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ನೀರು, ನೆರಳು ಮತ್ತು ಮೇವು ಸಾಕಾಗುತ್ತಿಲ್ಲ. ಇದರಿಂದ ಜಾನುವಾರುಗಳು ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಸಾಧ್ಯತೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗೋಶಾಲೆಗೆ ಮೇವು ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿ ಒಂದು ತಿಂಗಳು ಕಳೆದರೂ ಇನ್ನೂ ಅಂತಿಮಗೊಳ್ಳದ ಕಾರಣ ಮೇವು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಗೋಶಾಲೆಯ ಮೇವಿನ ಗೋದಾಮಿನಲ್ಲಿ ಇರುವ ಮೇವು ಇನ್ನೂ ಒಂದೆರಡು ದಿನಗಳಲ್ಲಿ ಖಾಲಿಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿ ವಿಶಾಲವಾದ ಜಾಗ ಇರುವುದರಿಂದ ಭೂಮಿಯನ್ನು ಸಮತಟ್ಟು ಮಾಡಿ ನೀರಿನ ಸೌಲಭ್ಯ ಒದಗಿಸಿದರೆ ಸ್ಥಳೀಯ ಪಶುಪಾಲಕರು ತಾವೇ ಮೇವು ಬೆಳೆಸಲು ಸಿದ್ಧರಾಗಿದ್ದೇವೆ ಎಂದು ಹೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪುಣ್ಯಕೋಟಿ ಗೋಶಾಲೆಯ ಜಾನುವಾರುಗಳಿಗೆ ನೀರು, ನೆರಳು ಹಾಗೂ ಸಮರ್ಪಕ ಮೇವು ಒದಗಿಸಿ ತಮ್ಮ ಕರ್ತವ್ಯ ನಿರ್ವಹಿಸುವರೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈಗಲಾದರೂ ಅಧಿಕಾರಿಗಳು ಗಮನಹರಿಸಿ ಗೋಶಾಲೆಯ ಜಾನುವಾರುಗಳ ಸಂಕಷ್ಟ ನಿವಾರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    6 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ವಂಚನೆಗೊಳಗಾದ ಗ್ರಾಹಕರಿಂದ 2ನೇ ದಿನದ ಅನಿರ್ದಿಷ್ಟ ಧರಣಿ ಗೌರಿಬಿದನೂರು ನಗರದ ಉಪ-ಅಂಚೆ ಕಚೇರಿ ಪೇದೆ ರಮ್ಯಾ ಎಂಬುವವರು ಹಾಲಗಾನಹಳ್ಳಿ ಗ್ರಾಮದ ಅಂಚೆ ಕಛೇರಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡುವುದಾಗಿ ಹೇಳಿ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೋಟ್ಯಂತರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವ ವಿರುದ್ದ ಕಾನೂನು ಜರುಗಿಸಬೇಕೆಂದು ಹಣ ಕಳೆದುಕೊಂಡ ಗ್ರಾಹಕರು ಅನಿರ್ದಿಷ್ಟ ಧರಣಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 3ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು, ನಮಗೆ ನ್ಯಾಯ ದೊರಕಿಸಿಕೊಡಬೇಕು ಅಥವಾ ಹಣ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 12 ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ, ಈ ಕೃತ್ಯ ಎಸಗಿದ್ದಾಳೆ. ಗ್ರಾಹಕರು ಠೇವಣಿ, ಎಸ್.ಬಿ. ಸೇರಿದಂತೆ ವಿವಿಧ ಖಾತೆಗಳಲ್ಲಿ ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ರಮ್ಯ ಹೆರಿಗೆ ಸುದೀರ್ಘ ರಜೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ, ಕಚೇರಿಯಲ್ಲಿ 1,200 ಖಾತೆದಾರರಿದ್ದು, ಸುಮಾರು 200ಗ್ರಾಹಕರಿಗೆ 1.30 ಕೋಟಿ ರೂ. ವಂಚನೆಯಾಗಿದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಪೊಲೀಸರೊಂದಿಗೆ ಮಾತಿನ ಚಕಮಕಿ: ಪೋಸ್ಟ್ ಆಫೀಸ್ ಕಛೇರಿಯಲ್ಲಿ ಹಣ ಕಳೆದುಕೊಂಡು ಗ್ರಾಹಕರು ಅನಿರ್ದಿಷ್ಟ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದರೂ ಅಂಚೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ, ಅಂಚೆ ಇಲಾಖೆಯವರಿಗೆ ಪೊಲೀಸರು ಕಾವಲು ಇದ್ದಾರೆಂದು ಪೊಲೀಸರನ್ನು ನಿಂದಿಸುವ ಮೂಲಕ ಮಾತಿನ ಚಕಮಕಿ ನಡೆಯಿತು.
    1
    ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ವಂಚನೆಗೊಳಗಾದ ಗ್ರಾಹಕರಿಂದ 2ನೇ ದಿನದ ಅನಿರ್ದಿಷ್ಟ ಧರಣಿ ಗೌರಿಬಿದನೂರು ನಗರದ ಉಪ-ಅಂಚೆ ಕಚೇರಿ ಪೇದೆ ರಮ್ಯಾ ಎಂಬುವವರು ಹಾಲಗಾನಹಳ್ಳಿ ಗ್ರಾಮದ ಅಂಚೆ ಕಛೇರಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡುವುದಾಗಿ ಹೇಳಿ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೋಟ್ಯಂತರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವ ವಿರುದ್ದ ಕಾನೂನು ಜರುಗಿಸಬೇಕೆಂದು ಹಣ ಕಳೆದುಕೊಂಡ ಗ್ರಾಹಕರು ಅನಿರ್ದಿಷ್ಟ ಧರಣಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
3ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು, ನಮಗೆ ನ್ಯಾಯ ದೊರಕಿಸಿಕೊಡಬೇಕು ಅಥವಾ ಹಣ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ.
ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 12 ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ, ಈ ಕೃತ್ಯ ಎಸಗಿದ್ದಾಳೆ. ಗ್ರಾಹಕರು ಠೇವಣಿ, ಎಸ್.ಬಿ. ಸೇರಿದಂತೆ ವಿವಿಧ ಖಾತೆಗಳಲ್ಲಿ ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ರಮ್ಯ ಹೆರಿಗೆ ಸುದೀರ್ಘ ರಜೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ,
ಕಚೇರಿಯಲ್ಲಿ 1,200 ಖಾತೆದಾರರಿದ್ದು, ಸುಮಾರು 200ಗ್ರಾಹಕರಿಗೆ 1.30 ಕೋಟಿ ರೂ. ವಂಚನೆಯಾಗಿದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ
ಪೊಲೀಸರೊಂದಿಗೆ ಮಾತಿನ ಚಕಮಕಿ: ಪೋಸ್ಟ್ ಆಫೀಸ್ ಕಛೇರಿಯಲ್ಲಿ ಹಣ ಕಳೆದುಕೊಂಡು ಗ್ರಾಹಕರು ಅನಿರ್ದಿಷ್ಟ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದರೂ ಅಂಚೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ, ಅಂಚೆ ಇಲಾಖೆಯವರಿಗೆ ಪೊಲೀಸರು ಕಾವಲು ಇದ್ದಾರೆಂದು ಪೊಲೀಸರನ್ನು ನಿಂದಿಸುವ ಮೂಲಕ ಮಾತಿನ ಚಕಮಕಿ ನಡೆಯಿತು.
    user_ಸುಪ್ರಿಯಾ
    ಸುಪ್ರಿಯಾ
    ಗೌರಿಬಿದನೂರು, ಚಿಕ್ಕಬಳ್ಳಾಪುರ, ಕರ್ನಾಟಕ•
    22 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
  • ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.
    1
    ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ.
ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.