ಮಾರ್ಚ್ 28 ರಿಂದ ಏಳು ದಿನಗಳ ಕಾಲ ಶ್ರೀರಾಮ ಕೋಟಿ ಸಪ್ತಾಹ ಕಾರ್ಯಕ್ರಮ ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀರಾಮ ಕೋಟಿ ಜಪ ಯಜ್ಞ ತಂಡದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಮಾ. 28ರಿಂದ ಏಳು ದಿನಗಳ ಕಾಲ ಅರ್ಥಪೂರ್ಣವಾಗಿ ಶ್ರೀರಾಮಕೋಟಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಕೋಟಿ ಜಪಯಜ್ಞ ತಂಡದ ಅಧ್ಯಕ್ಷ ಪುರದಗದ್ದೆ ಪಿ. ಎನ.ಕೃಷ್ಣಪ್ಪ ತಿಳಿಸಿದರು. ಅವರು ನಗರದ ಸಾಧು ಮಠ ಸಭಾಂಗಣದಲ್ಲಿ ಶ್ರೀರಾಮಕೋಟಿ ಸಪ್ತಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶ್ರೀರಾಮ ಕೋಟಿ ಎನ್ನುವುದು ಶ್ರೀರಾಮನ ಹೆಸರನ್ನು ಒಂದು ಕೋಟಿ ಬಾರಿ ಬರೆಯುವ ಭಕ್ತಿಯ ಲಿಖಿತ ಜಪವಾಗಿದೆ. ಈ ಅಭ್ಯಾಸದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಈ ಭಾಗದ ಹೆಚ್ಚಿನ ಜನ ಭಾಗವಹಿಸುವಂತೆ ಮಾಡಲು ಎಲ್ಲ ರೀತಿಯ ಪ್ರಚಾರ ಕೈಗೊಳ್ಳಬೇಕು ಎಂದರು. ತಂಡದ ಉಪಾಧ್ಯಕ್ಷ ಅಂಕಣಗೊಂಡಿ ರಂಗಪ್ಪ ಮಾತನಾಡಿ, ಶ್ರೀ ರಾಮಕೋಟಿ ಸಪ್ತಹದಲ್ಲಿ ಪ್ರತಿಯೊಬ್ಬರು ಪವಿತ್ರವಾಗಿ, ಶುದ್ಧ ಮನಸ್ಸಿನಿಂದ ಮಾಡುವ ದಿಸೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಗೌರವಾಧ್ಯಕ್ಷ ಬಿ. ಎನ್. ನಾಗಭೂಷಣ್ ಈ ಬಾರಿಯ ಏಳು ದಿನಗಳ ಶ್ರೀರಾಮ ಕೋಟಿ ಸಪ್ತಾಹವು 10ನೇ ವರ್ಷದ ವಾರ್ಷಿಕೋತ್ಸವವಾಗಿ ನೆರವೇರಿಸುತ್ತಿದ್ದು ಇಂತಹ ಅರ್ಥಪೂರ್ಣವಾದ ಸಪ್ತಾಹದಲ್ಲಿ ಪ್ರತಿಯೊಬ್ಬರನ್ನ ಸಕ್ರಿಯವಾಗಿ ಪಾಲ್ಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ರೂಪಿಸಬೇಕು ಎಂದು ಸಲಹೆ ನೀಡಿದರು. ಪೂರ್ವಭಾವಿಯ ಈ ಸಭೆಯಲ್ಲಿ ಶ್ರೀರಾಮಕೋಟಿ ಜಪ ಯಜ್ಞ ತಂಡ ಸದಸ್ಯರುಗಳಾದ ವಿ. ಕೃಷ್ಣಮೂರ್ತಿ, ಶಾಂತಮೂರ್ತಿ, ಗೋಪಾಲಾಚಾರಿ, ಡಿ ಮುನಿಯಪ್ಪದಾಸ್, ನಾರಾಯಸ್ವಾಮಿ, ನರಸಿಂಹಯ್ಯ, ಸುದರ್ಶನ್, ನಾಯನಹಳ್ಳಿ ಬಿ.ಸಿ.ನಾರಾಯಣಸ್ವಾಮಿ, ತಾಳಹಳ್ಳಿ ಮುನಿಯಪ್ಪ ಸೇರಿದಂತೆ ಇತರರು ಇದ್ದರು.
ಮಾರ್ಚ್ 28 ರಿಂದ ಏಳು ದಿನಗಳ ಕಾಲ ಶ್ರೀರಾಮ ಕೋಟಿ ಸಪ್ತಾಹ ಕಾರ್ಯಕ್ರಮ ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀರಾಮ ಕೋಟಿ ಜಪ ಯಜ್ಞ ತಂಡದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಮಾ. 28ರಿಂದ ಏಳು ದಿನಗಳ ಕಾಲ ಅರ್ಥಪೂರ್ಣವಾಗಿ ಶ್ರೀರಾಮಕೋಟಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಕೋಟಿ ಜಪಯಜ್ಞ ತಂಡದ ಅಧ್ಯಕ್ಷ ಪುರದಗದ್ದೆ ಪಿ. ಎನ.ಕೃಷ್ಣಪ್ಪ ತಿಳಿಸಿದರು. ಅವರು ನಗರದ ಸಾಧು ಮಠ ಸಭಾಂಗಣದಲ್ಲಿ ಶ್ರೀರಾಮಕೋಟಿ ಸಪ್ತಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶ್ರೀರಾಮ ಕೋಟಿ ಎನ್ನುವುದು ಶ್ರೀರಾಮನ ಹೆಸರನ್ನು ಒಂದು ಕೋಟಿ ಬಾರಿ ಬರೆಯುವ ಭಕ್ತಿಯ ಲಿಖಿತ ಜಪವಾಗಿದೆ. ಈ ಅಭ್ಯಾಸದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಈ ಭಾಗದ ಹೆಚ್ಚಿನ ಜನ ಭಾಗವಹಿಸುವಂತೆ ಮಾಡಲು ಎಲ್ಲ ರೀತಿಯ ಪ್ರಚಾರ ಕೈಗೊಳ್ಳಬೇಕು ಎಂದರು. ತಂಡದ ಉಪಾಧ್ಯಕ್ಷ ಅಂಕಣಗೊಂಡಿ ರಂಗಪ್ಪ ಮಾತನಾಡಿ, ಶ್ರೀ ರಾಮಕೋಟಿ ಸಪ್ತಹದಲ್ಲಿ ಪ್ರತಿಯೊಬ್ಬರು ಪವಿತ್ರವಾಗಿ, ಶುದ್ಧ ಮನಸ್ಸಿನಿಂದ ಮಾಡುವ ದಿಸೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಗೌರವಾಧ್ಯಕ್ಷ ಬಿ. ಎನ್. ನಾಗಭೂಷಣ್ ಈ ಬಾರಿಯ ಏಳು ದಿನಗಳ ಶ್ರೀರಾಮ ಕೋಟಿ ಸಪ್ತಾಹವು 10ನೇ ವರ್ಷದ ವಾರ್ಷಿಕೋತ್ಸವವಾಗಿ ನೆರವೇರಿಸುತ್ತಿದ್ದು ಇಂತಹ ಅರ್ಥಪೂರ್ಣವಾದ ಸಪ್ತಾಹದಲ್ಲಿ ಪ್ರತಿಯೊಬ್ಬರನ್ನ ಸಕ್ರಿಯವಾಗಿ ಪಾಲ್ಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ರೂಪಿಸಬೇಕು ಎಂದು ಸಲಹೆ ನೀಡಿದರು. ಪೂರ್ವಭಾವಿಯ ಈ ಸಭೆಯಲ್ಲಿ ಶ್ರೀರಾಮಕೋಟಿ ಜಪ ಯಜ್ಞ ತಂಡ ಸದಸ್ಯರುಗಳಾದ ವಿ. ಕೃಷ್ಣಮೂರ್ತಿ, ಶಾಂತಮೂರ್ತಿ, ಗೋಪಾಲಾಚಾರಿ, ಡಿ ಮುನಿಯಪ್ಪದಾಸ್, ನಾರಾಯಸ್ವಾಮಿ, ನರಸಿಂಹಯ್ಯ, ಸುದರ್ಶನ್, ನಾಯನಹಳ್ಳಿ ಬಿ.ಸಿ.ನಾರಾಯಣಸ್ವಾಮಿ, ತಾಳಹಳ್ಳಿ ಮುನಿಯಪ್ಪ ಸೇರಿದಂತೆ ಇತರರು ಇದ್ದರು.
- KOLAR KI.AWAAZ KOUSAR NEWS1
- ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಭೀತಿಗೆ ದುಬೈನಲ್ಲಿ ನೆಲೆಸಿದ್ದ ಭಾರತೀಯರು ಸೇರಿದಂತೆ ಬೇರೆ ರಾಷ್ಟ್ರಗಳ ಪ್ರಜೆಗಳು ಸುರಕ್ಷಿತವಾಗಿರಲು ತಮ್ಮ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದರು, ಈ ಸಂಬಂಧ ದುಬೈ ಏರ್ಪೋರ್ಟ್ ಕಿಕ್ಕಿರಿದು ತುಂಬಿತ್ತು...1
- ಹೋರಾಟದ ವೇದಿಕೆಗೆ CM Siddaramaiah ಬರದೇ ಹೋದರೆ, ಹೋರಾಟಗಾರರು ವಿಧಾನಸೌಧಕ್ಕೆ... ಜೈ ಮಾದಿಗ1
- Post by ಗೋಪನಹಳ್ಳಿಶಿವಣ್ಣ1
- ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಮುಂಜಾನೆ ಸಂಪ್ರದಾಯಬದ್ಧವಾಗಿ ಅಗ್ನಿಕುಂಡ ಪ್ರದರ್ಶನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಪಟ್ಟಣದ ಪ್ರಸಿದ್ಧ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಯು ಕಳೆದ ನಾಲ್ಕು ದಿನಗಳಿಂದ ಭಾರೀ ವಿಜೃಂಭಣೆಯಿಂದ ನಡೆಯುತ್ತಿದ್ದು, ಭಕ್ತರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಾಲ್ಕನೇ ದಿನದ ಅಂಗವಾಗಿ ಮುಂಜಾನೆ ದೇವಸ್ಥಾನದಲ್ಲಿ ಅರ್ಚಕ ರಾಜು ರಾವ್ ಅವರ ಸಮ್ಮುಖದಲ್ಲಿ ವಿಶೇಷ ಪೂಜೆಗಳು ನೆರವೇರಿಸಲಾಯಿತು. ನಂತರ ಮೂರು ಕವಲಿನ ಕಂಬದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದ್ದ ಅಗ್ನಿಕುಂಡವನ್ನು ಸಂಪ್ರದಾಯದಂತೆ ಮೇಲಕ್ಕೆ ಎತ್ತಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವ ವಿಧಿ ವಿಧಾನ ಕಾರ್ಯಕ್ರಮ ನೆಡೆಯಿತು ಈ ಸಂದರ್ಭದಲ್ಲಿ ಭಕ್ತರು ದೇವಿಗೆ ಹರಕೆ ಸಲ್ಲಿಸಿ ಜಯಘೋಷಗಳೊಂದಿಗೆ ಭಕ್ತಿಭಾವದಿಂದ ಪಾಲ್ಗೊಂಡರು. ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಭಾಗಿಯಾದ ಯುವಕರು ರಾತ್ರಿ ಪೂರ್ತಿ ಕುಣಿದು ಕುಪ್ಪಳಿಸಿ ಹಬ್ಬದ ವಾತಾವರಣವನ್ನು ಇನ್ನಷ್ಟು ಕಂಗೊಳಿಸಿದರು.1
- ಹನೂರು: ತಾಲ್ಲೂಕಿನ ರಾಮನ ಗುಡ್ಡೆ ಕೆರೆಯಿಂದ ಮಣಗಳ್ಳಿ ಗ್ರಾಮಕ್ಕೆ ಕಾವೇರಿ ನೀರು ಬರುತ್ತಿರುವುದು ಗ್ರಾಮೀಣ ರೈತರ ಮುಖದಲ್ಲಿ ಸಂತೋಷ ಮೂಡಿದೆ ಕಳೆದ ಎರಡು ತಿಂಗಳ ಹಿಂದೆ ಕಾವೇರಿ ನೀರು ರಾಮನಗುಡ್ಡೆ ಕೆರೆಗೆ ನೀರು ಹನೂರು ವಿಧಾನಸಭಾಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ಚಾಲನೆ ನೀಡಿದ್ದರು, ಈಗ ಅಲ್ಲಿಂದ ಕಾವೇರಿ ನೀರು ಮಣಗಳ್ಳಿ ಗ್ರಾಮದ ಹಳ್ಳಕ್ಕೆ ನೀರು ಬರುತ್ತಿದೆ.2
- Post by SUDHUR CHAULANI NEWS1
- ಸ್ವಂತ ಸೋದರಮಾವನನ್ನು 14 ವರ್ಷಗಳ ಹಿಂದೆ ಮದುವೆಯಾಗಿದ್ದ ಶಾಲಿನಿ ಹರೀಶ್ ಎಂಬುವನೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಳು, ಅರ್ಚಕ ವೃತ್ತಿಯ ಗಂಡ ಸಿದ್ದಲಿಂಗಪ್ಪನಿಗೆ ವಿಷಯ ತಿಳಿದಮೇಲೆ ಅವನನ್ನೇ ಮುಗಿಸಲು ಸಂಚು ಮಾಡಿದ್ದ ಸತಿ ಶಾಲಿನಿ ಹರೀಶನಿಗೆ ಸುಳಿವು ನೀಡಿ ಕೊಲೆ ಮಾಡಿಸಿ ಶವ ಕೆರೆಗೆ ಎಸೆದು ಅಪಘಾತ ಎಂಬಂತೆ ಬಿಂಬಿಸಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ, ಇವಳೊಂದಿಗೆ ಅವಳ ಅನೈತಿಕ ಗೆಳೆಯ ಮತ್ತು ಇಬ್ಬರು ಕಿಲ್ಲರ್ ಗಳು ಸೆರೆಮನೆಗೆ ತಲುಪಿದ್ದಾರೆ...1
- KOLAR.........KOLAR KI.AWAAZ KOUSAR NEWS1