ಸಡಗರ ಸಂಭ್ರಮದಿಂದ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಬಾಗೇಪಲ್ಲಿ:- ತಾಲ್ಲೂಕಿನ ಪಾತಪಾಳ್ಯ ಗ್ರಾಮದ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು. ಪಾತಪಾಳ್ಯ ಗ್ರಾಮದ ಪಿ.ಆರ್.ರಾಧಕೃಷ್ಣ ಹಾಗೂ ಗ್ರಾಮದ ಪ್ರಮುಖರು ಹಾಗೂ ಪ್ರಧಾನ ಅರ್ಚಕರಾದ ಎಂ.ಎಸ್.ಶ್ರೀರಾಮನ್ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಧವನ, ಹೂವು, ಬಾಳೆಹಣ್ಣನ್ನು ಎಸೆದ ಭಕ್ತಾದಿಗಳು ಹರಕೆ ತೀರಿಸಿಕೊಂಡರು. ರಥೋತ್ಸವ ಸಲುವಾಗಿ ಗುರುವಾರ ಬೆಳಿಗ್ಗೆಯಿಂದಲೇ ಕೋದಂಡ ರಾಮಸ್ವಾಮಿ ಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಹೋಮ, ವೇದ, ಉಪನಿಷತ್ತುಗಳ ಮಂತ್ರಗಳ ಘೋಷಣೆ ಮೊಳಗಿದವು. ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ್ದ ಕೋದಂಡ ರಾಮಸ್ವಾಮಿ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ರಥಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಿಕ್ಕಿರಿದು ನೆರದಿದ್ದ ಭಕ್ತರು ಹೂ, ಬಾಳೆ ಹಣ್ಣನ್ನು ರಥಕ್ಕೆ ಎಸೆದು ಧನ್ಯರಾದರು. ಸ್ಥಳೀಯ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಸಂಘ–ಸಂಸ್ಥೆಗಳಿಂದ ಭಕ್ತಾದಿಗಳಿಗಾಗಿ ಕೋಸಂಬರಿ, ಮಜ್ಜಿಗೆ, ಪಾನಕ, ನೀರಿನ ಪಾಕೆಟ್, ಪ್ರಸಾದ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ, ವೆಂಕಟೇಶ, ಎಸ್.ಎನ್.ರಾಮರೆಡ್ಡಿ,ಎಂ.ಗೋಪಾಲ್,ಮದ್ದಿರೆಡ್ಡಿ,ಭೈಯಪ್ಪ ರೆಡ್ಡಿ, ಸಿ.ಎನ್.ಭಾರತಿ,ಹರೀಶ್, ಮಂಜುನಾಥ್, ರಾಮನಾಥ, ಪವನ್ ಕುಮಾರ್, ಹಾಗೂ ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.
ಸಡಗರ ಸಂಭ್ರಮದಿಂದ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಬಾಗೇಪಲ್ಲಿ:- ತಾಲ್ಲೂಕಿನ ಪಾತಪಾಳ್ಯ ಗ್ರಾಮದ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು. ಪಾತಪಾಳ್ಯ ಗ್ರಾಮದ ಪಿ.ಆರ್.ರಾಧಕೃಷ್ಣ ಹಾಗೂ ಗ್ರಾಮದ ಪ್ರಮುಖರು ಹಾಗೂ ಪ್ರಧಾನ ಅರ್ಚಕರಾದ ಎಂ.ಎಸ್.ಶ್ರೀರಾಮನ್ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಧವನ, ಹೂವು, ಬಾಳೆಹಣ್ಣನ್ನು ಎಸೆದ ಭಕ್ತಾದಿಗಳು ಹರಕೆ ತೀರಿಸಿಕೊಂಡರು. ರಥೋತ್ಸವ ಸಲುವಾಗಿ ಗುರುವಾರ ಬೆಳಿಗ್ಗೆಯಿಂದಲೇ ಕೋದಂಡ ರಾಮಸ್ವಾಮಿ ಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಹೋಮ, ವೇದ, ಉಪನಿಷತ್ತುಗಳ ಮಂತ್ರಗಳ ಘೋಷಣೆ ಮೊಳಗಿದವು. ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ್ದ ಕೋದಂಡ ರಾಮಸ್ವಾಮಿ
ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ರಥಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಿಕ್ಕಿರಿದು ನೆರದಿದ್ದ ಭಕ್ತರು ಹೂ, ಬಾಳೆ ಹಣ್ಣನ್ನು ರಥಕ್ಕೆ ಎಸೆದು ಧನ್ಯರಾದರು. ಸ್ಥಳೀಯ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಸಂಘ–ಸಂಸ್ಥೆಗಳಿಂದ ಭಕ್ತಾದಿಗಳಿಗಾಗಿ ಕೋಸಂಬರಿ, ಮಜ್ಜಿಗೆ, ಪಾನಕ, ನೀರಿನ ಪಾಕೆಟ್, ಪ್ರಸಾದ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ, ವೆಂಕಟೇಶ, ಎಸ್.ಎನ್.ರಾಮರೆಡ್ಡಿ,ಎಂ.ಗೋಪಾಲ್,ಮದ್ದಿರೆಡ್ಡಿ,ಭೈಯಪ್ಪ ರೆಡ್ಡಿ, ಸಿ.ಎನ್.ಭಾರತಿ,ಹರೀಶ್, ಮಂಜುನಾಥ್, ರಾಮನಾಥ, ಪವನ್ ಕುಮಾರ್, ಹಾಗೂ ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.
- ಸಡಗರ ಸಂಭ್ರಮದಿಂದ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಬಾಗೇಪಲ್ಲಿ:- ತಾಲ್ಲೂಕಿನ ಪಾತಪಾಳ್ಯ ಗ್ರಾಮದ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು. ಪಾತಪಾಳ್ಯ ಗ್ರಾಮದ ಪಿ.ಆರ್.ರಾಧಕೃಷ್ಣ ಹಾಗೂ ಗ್ರಾಮದ ಪ್ರಮುಖರು ಹಾಗೂ ಪ್ರಧಾನ ಅರ್ಚಕರಾದ ಎಂ.ಎಸ್.ಶ್ರೀರಾಮನ್ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಧವನ, ಹೂವು, ಬಾಳೆಹಣ್ಣನ್ನು ಎಸೆದ ಭಕ್ತಾದಿಗಳು ಹರಕೆ ತೀರಿಸಿಕೊಂಡರು. ರಥೋತ್ಸವ ಸಲುವಾಗಿ ಗುರುವಾರ ಬೆಳಿಗ್ಗೆಯಿಂದಲೇ ಕೋದಂಡ ರಾಮಸ್ವಾಮಿ ಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಹೋಮ, ವೇದ, ಉಪನಿಷತ್ತುಗಳ ಮಂತ್ರಗಳ ಘೋಷಣೆ ಮೊಳಗಿದವು. ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ್ದ ಕೋದಂಡ ರಾಮಸ್ವಾಮಿ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ರಥಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಿಕ್ಕಿರಿದು ನೆರದಿದ್ದ ಭಕ್ತರು ಹೂ, ಬಾಳೆ ಹಣ್ಣನ್ನು ರಥಕ್ಕೆ ಎಸೆದು ಧನ್ಯರಾದರು. ಸ್ಥಳೀಯ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಸಂಘ–ಸಂಸ್ಥೆಗಳಿಂದ ಭಕ್ತಾದಿಗಳಿಗಾಗಿ ಕೋಸಂಬರಿ, ಮಜ್ಜಿಗೆ, ಪಾನಕ, ನೀರಿನ ಪಾಕೆಟ್, ಪ್ರಸಾದ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ, ವೆಂಕಟೇಶ, ಎಸ್.ಎನ್.ರಾಮರೆಡ್ಡಿ,ಎಂ.ಗೋಪಾಲ್,ಮದ್ದಿರೆಡ್ಡಿ,ಭೈಯಪ್ಪ ರೆಡ್ಡಿ, ಸಿ.ಎನ್.ಭಾರತಿ,ಹರೀಶ್, ಮಂಜುನಾಥ್, ರಾಮನಾಥ, ಪವನ್ ಕುಮಾರ್, ಹಾಗೂ ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.2
- ಪೋಲೀಸರಿಂದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್1
- ಬೂರಗಮಾಕಲಹಳ್ಳಿಯ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದ ತಾಯಿ-ಮಗನಿಗೆ ಕಾದಿತ್ತು ಘೋರ ವಿಪತ್ತು! ಹೌದು, ದೈವದ ದರ್ಶನಕ್ಕೆಂದು ಭಕ್ತಿಯಿಂದ ಬೈಕ್ನಲ್ಲಿ ತೆರಳುತ್ತಿದ್ದ ಸವಾರರಿಗೆ ಮೃತ್ಯುರೂಪಿಯಾಗಿ ಬಂದಿದೆ ಈ ಜಿ ಇ ಎಫ್ ಆಸ್ಪತ್ರೆಯ ಸ್ವಿಫ್ಟ್ ಕಾರ್! ನಡೆದಿದ್ದೇನು ಗೊತ್ತಾ? ಬೂರಗಮಾಕಲಹಳ್ಳಿಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಜಿ ಇ ಎಫ್ ಆಸ್ಪತ್ರೆಯ ಸ್ವಿಫ್ಟ್ ಕಾರ್ ತಿರುಗುತ್ತಿದ್ದ ವೇಳೆ, ಅತಿ ವೇಗವಾಗಿ ಬಂದ ಬೈಕ್ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಕಿಶನ್ ಯಾದವ್ ಹಾಗೂ ಅವರ ತಾಯಿ ಗಾಯತ್ರಮ್ಮ ಅವರಿಗೆ ತೀವ್ರ ಗಾಯಗಳಾಗಿದ್ದು, ಕಾರಿನ ಮುಂಭಾಗ ಕೂಡ ಸಂಪೂರ್ಣವಾಗಿ ಜಖಂಗೊಂಡಿದೆ. ಸದ್ಯ ಗಾಯಾಳುಗಳಿಗೆ ಪಕ್ಕದಲ್ಲೇ ಇರುವ ಜಿ ಇ ಎಫ್ ಕಣ್ಣಿನ ಆಸ್ಪತ್ರೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಬೂರಗಮಾಕಲಹಳ್ಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಅಪಘಾತಗಳು ಮಿತಿಮೀರುತ್ತಿವೆ. ಅತಿ ವೇಗದ ಚಾಲನೆಯೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ. ಈ ಘಟನೆಯಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು ಮತ್ತು ಸ್ಥಳೀಯರು, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆಯು ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.2
- *ಚಿಂತಾಮಣಿ:-ಬೂರಗಮಾಕಲಹಳ್ಳಿಯ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದ ತಾಯಿ-ಮಗನಿಗೆ ಕಾದಿತ್ತು ಘೋರ ವಿಪತ್ತು!* *ಹೌದು, ದೈವದ ದರ್ಶನಕ್ಕೆಂದು ಭಕ್ತಿಯಿಂದ ಬೈಕ್ನಲ್ಲಿ ತೆರಳುತ್ತಿದ್ದ ಸವಾರರಿಗೆ ಮೃತ್ಯುರೂಪಿಯಾಗಿ ಬಂದಿದೆ ಈ ಜಿ ಇ ಎಫ್ ಆಸ್ಪತ್ರೆಯ ಸ್ವಿಫ್ಟ್ ಕಾರ್!* *ನಡೆದಿದ್ದೇನು ಗೊತ್ತಾ?* ಬೂರಗಮಾಕಲಹಳ್ಳಿಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಜಿ ಇ ಎಫ್ ಆಸ್ಪತ್ರೆಯ ಸ್ವಿಫ್ಟ್ ಕಾರ್ ತಿರುಗುತ್ತಿದ್ದ ವೇಳೆ, ಅತಿ ವೇಗವಾಗಿ ಬಂದ ಬೈಕ್ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಕಿಶನ್ ಯಾದವ್ ಹಾಗೂ ಅವರ ತಾಯಿ ಗಾಯತ್ರಮ್ಮ ಅವರಿಗೆ ತೀವ್ರ ಗಾಯಗಳಾಗಿದ್ದು, ಕಾರಿನ ಮುಂಭಾಗ ಕೂಡ ಸಂಪೂರ್ಣವಾಗಿ ಜಖಂಗೊಂಡಿದೆ. ಸದ್ಯ ಗಾಯಾಳುಗಳಿಗೆ ಪಕ್ಕದಲ್ಲೇ ಇರುವ ಜಿ ಇ ಎಫ್ ಕಣ್ಣಿನ ಆಸ್ಪತ್ರೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಬೂರಗಮಾಕಲಹಳ್ಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಅಪಘಾತಗಳು ಮಿತಿಮೀರುತ್ತಿವೆ. ಅತಿ ವೇಗದ ಚಾಲನೆಯೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ. ಈ ಘಟನೆಯಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು ಮತ್ತು ಸ್ಥಳೀಯರು, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆಯು ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವರದಿ:-ಸೀನ. ಟಿ ಚಿಂತಾಮಣಿ4
- ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟಿನಲ್ಲಿ ಪ್ರಯಾಣಿಕರ ಪರದಾಟ. ನೆನ್ನೆ ಬೆಂಗಳೂರಿನಿಂದ ಚನೈಗೆ ತೆರಳಲು ಬಂದಿದ್ದ ಪ್ರಯಾಣಿಕರು ಅತಂತ್ರ. ಸ್ಪೈಸ್ ಜೆಟ್ ಸಂಸ್ಥೆಯ ಕೊರೆಂಡನ್ ಏರ್ ಲೈನ್ಸ್ ವಿಮಾನದಲ್ಲಿ ಅವ್ಯವಸ್ಥೆ. ಒಂದು ಗಂಟೆ ರನ್ ವೇ ನಲ್ಲಿ ಸುತ್ತಾಡಿಸಿ ಆಮೇಲೆ ಫ್ಲೈಟ್ ಕ್ಯಾನ್ಸಲ್ ಸಂದೇಶ. ವಿಮಾನ ಟೇಕ್ ಆಫ್ ಆಗಲು ಪರ್ಮಿಷನ್ ಸಿಗದ ಹಿನ್ನಲೆ ರನ್ ವೇನಲ್ಲೇ ಸುತ್ತಾಟ. ಫ್ಲೈಟ್ ಕ್ಯಾನ್ಸಲ್ ಹಿನ್ನೆಲೆ ಏರ್ಲೈನ್ಸ್ ಸಿಬ್ಬಂದಿ ನಡುವೆ ಪ್ರಯಾಣಿಕರ ವಾಗ್ವಾದ. ಬದಲಿ ವಿಮಾನ ಏರ್ಪಾಡು ಮಾಡುವಂತೆ ಸಿಬ್ಬಂದಿ ವಿರುದ್ಧ ಆಕ್ರೋಶ. ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದ ಪ್ರಯಾಣಿಕರು. ಪೊಲೀಸರ ಮದ್ಯಪ್ರವೇಶದಿಂದ ತಿಳಿಯಾದ ಸಮಸ್ಯೆ. ಟಿಕೆಟ್ ಪ್ರೈಸ್ ಮರುಪಾವತಿ ಮಾಡಲು ಒಪ್ಪಿಕೊಂಡ ಕಾರಣ ಪ್ರಯಾಣಿಕರು ಕೂಲ್. ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘಟನೆ.4
- सहेली के साथ संबंध बनाने का दबाव! बेंगलुरु में थाने पहुंचा पीड़ित पति, बोला- पत्नी की 'एक्स्ट्रा डिमांड' से तंग हूं बेंगलुरु के अमृतहल्ली इलाके से एक चौंकाने वाला कानूनी मामला सामने आया है. आमतौर पर महिलाओं की ओर से दर्ज कराए जाने वाले प्रताड़ना के मामलों के उलट, यहां एक पति ने अपनी पत्नी पर यौन शोषण और गंभीर मानसिक क्रूरता के आरोप लगाते हुए पुलिस का दरवाजा खटखटाया है. बेंगलुरु के अमृतहल्ली पुलिस स्टेशन में एक ऐसा मामला दर्ज हुआ है, जिसे कानूनी जानकार 'रेयर' मान रहे हैं. एक शख्स ने अपनी पत्नी के खिलाफ शिकायत दर्ज कराते हुए आरोप लगाया है कि वह लंबे समय से यौन और मानसिक क्रूरता का शिकार हो रहा है. पति का दावा है कि उसकी पत्नी उसे अप्राकृतिक यौन कृत्यों के लिए मजबूर करती थी और विरोध करने पर उसे प्रताड़ित किया जाता था. अश्लील वीडियो और 'यूनिक' डिमांड्स अमृतहल्ली पुलिस स्टेशन में दर्ज शिकायत के अनुसार, पीड़ित पति ने आरोप लगाया कि उसकी पत्नी उसे अक्सर अश्लील वीडियो भेजती थी और उन वीडियो में दिखाए गए कृत्यों को दोहराने के लिए दबाव डालती थी. इतना ही नहीं, पति का दावा है कि पत्नी उसे अपनी सहेलियों के साथ शारीरिक संबंध बनाने के लिए भी मजबूर करती थी और अपनी 'इंटिमेट यादें' दोस्तों के साथ साझा करने पर जोर देती थी. एक्स्ट्रा-मैरिटल अफेयर का विवाद शिकायतकर्ता ने आरोप लगाया कि उसकी पत्नी ने खुलेआम स्वीकार किया है कि उसके पुराने और वर्तमान में अन्य पुरुषों के साथ संबंध हैं. पत्नी का कहना है कि पति की आर्थिक स्थिति उसकी 'हाई-फाई लाइफस्टाइल' को सपोर्ट नहीं कर सकती. पति ने पत्नी पर शराब की लत और दोस्तों के साथ घंटों समय बिताने का भी आरोप लगाया है.1
- ಚಿಂತಾಮಣಿ ಗ್ರಾಮಾಂತರ ಠಾಣೆಯ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಕರ್ತವ್ಯಕ್ಕೆ ಹೋಗುವ ವೇಳೆ ಅಪಘಾತ ಸಂಭವಿಸಿದೆ..!!1
- ಡಾ. ಹೇಮಾವತಿ ವಿ ಹೆಗ್ಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಿಗೆ ಹಣ್ಣು ಹಂಪಲು ವಿತರಣೆ ಬಾಗೇಪಲ್ಲಿ:-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಾಗೇಪಲ್ಲಿ ತಾಲ್ಲೂಕು ಯೋಜನಾ ಕಚೇರಿ ವ್ಯಾಪ್ತಿಯ ವಾಸ್ತಲ್ಯ ಮಾಶಾಸನ ಪಡೆಯುತ್ತಿರುವ 71 ಫಲಾನುಭವಿ ಕುಟುಂಬಗಳಿಗೆ ಡಾ. ಹೇಮಾವತಿ ಹೆಗ್ಡೆಯವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಬಾಗೇಪಲ್ಲಿ ತಾಲ್ಲೂಕು ವಲಯದಲ್ಲಿ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಾದ ಅಂಜನಮ್ಮ,ನಾಗರತ್ನಮ್ಮ,ನಜರೀನಾ ಅವರಿಗೆ ಹಣ್ಣು ಹಂಪಲು ನೀಡಿ ಯೋಗ ಕ್ಷೇಮವನ್ನು ವಿಚಾರಿಸಿದ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ 75 ನೇ ಹುಟ್ಟಿದ ಹಬ್ಬದ ಪ್ರಯುಕ್ತ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಾದ ಬಾಗೇಪಲ್ಲಿ ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿಸಿ ಟ್ರಸ್ಟ್ ಬಾಗೇಪಲ್ಲಿ ಕ್ಷೇತ್ರದ ವ್ಯಾಪ್ತಿಯ ಸುಮಾರು 71 ಸದಸ್ಯರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಹೇಮಾವತಿ ವಿ. ಹೆಗ್ಗಡೆ ಅವರು ಅಬಲೆಯರನ್ನು ಸಬಲರನ್ನಾಗಿ" ಸುವ, ಸೌಲಭ್ಯವಂಚಿತರಿಗಾಗಿ, ಬಡಮಹಿಳೆಯರಿಗಾಗಿ ಮನ ಮಿಡಿಯುವ, ದುರ್ಬಲ ವರ್ಗದ ಮಹಿಳೆಯರನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಲವಾರು ಸಂಘ-ಸಂಸ್ಥೆಗಳನ್ನು ರಚಿಸುವ ಮೂಲಕ ನಾಡಿನಾದ್ಯಂತ ಸಾಮಾಜಿಕ, ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನ್ನಣೆ ಗಳಿಸಿದ ಸಾಕಾರಮೂತಿ೯ ಶ್ರೀಮತಿ ಹೇಮಾವತಿ ಅಮ್ಮನವರ ಜನ್ಮದಿನ ಪ್ರಯುಕ್ತ ಇಂದು ಸುಮಾರು71 ಸದಸ್ಯರಿಗೆ ಹಣ್ಣು ಹಂಪಲು ನೀಡಿ ಅವರ ಹುಟ್ಟಿದ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಎಂದು ಹೇಳಿದರು. ಈ ಸಂಧರ್ಭ ಜ್ಞಾನವಿಕಾಸ ಸಮನ್ವಯಧಿಕಾರಿ ಇಂದಿರಾ ಸೇವಾಪ್ರತಿನಿಧಿ ಲಕ್ಷ್ಮೀನರಸಮ್ಮ ರವರು ಉಪಸ್ಥಿತರಿದ್ದರು2