Shuru
Apke Nagar Ki App…
ಬಾಗಲಕೋಟ:ಹೋಳಿ ಹಬ್ಬದ ಕ್ಷುಲ್ಲಕ ಜಗಳ:ತೇರದಾಳ ಕೊಲೆ ಅಂತ್ಯ: ಸಿಸಿಟಿವಿ ದೃಶ್ಯಾವಳಿ ವೈರಲ್ ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
PKBagalkot
ಬಾಗಲಕೋಟ:ಹೋಳಿ ಹಬ್ಬದ ಕ್ಷುಲ್ಲಕ ಜಗಳ:ತೇರದಾಳ ಕೊಲೆ ಅಂತ್ಯ: ಸಿಸಿಟಿವಿ ದೃಶ್ಯಾವಳಿ ವೈರಲ್ ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
More news from Bagalkote and nearby areas
- ಸಂತಪೂರ ಪೊಲೀಸರ ದಾಳಿ: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 38 ಕೆ.ಜಿ ಗಾಂಜಾ ವಶ. #JB_News_Kannada1
- ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.1
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಿನ್ನಲೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಪಾಲ್ಗೊಳ್ಳಲಿದ್ದು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದ್ದು. ಸಾಯಂಕಾಲ ಎಸ್.ಆರ್.ಕಂಠಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಮುಖಂಡರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದ್ದಾರೆ. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ1
- Post by Rahuldev singh1
- ವಿಜಯಪುರ: ಕಾಂಗ್ರೆಸ ವಿರುದ್ಧ ಕಿಡಿಕಾರಿದ ಬಿಜೆಪಿವಕ್ತಾರ ಎನ. ಚಂದ್ರಶೇಖರ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಸುಳಿಯಲ್ಲಿ ತಳ್ಳಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ ಎಂದರು. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದರು.1
- ಗೋಕಾಕ : ಮನೆ ಮುಂದೆ ನಿಲ್ಲಿಸಿದ, ,ಅಂಗಡಿ ಮುಂದೆ ನಿಲ್ಲಿಸಿದ ಅಥವಾ ಜನನಿ ಬಿಡದಲ್ಲಿ ನಿಲ್ಲಿಸಿದ ಮೊಟರ ಸೈಕಲಗಳನ್ನು ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೀರಿ ಅಂತವರಿಗೆ ಪೋಲಿಸ್ ಇಲಾಖೆ ಜೈಲಿನ ರುಚಿ ತೊರಿಸಿದ್ದನ್ನು ನೋಡಿದ್ದೀರಿ ಕೇಳಿದ್ದರಿ. ಆದರೆ ಯಾರಿಗೆ ಯಾವ ಗಾಡಿ ಬೇಕೊ ಅದೆ ಕಂಪನಿಯ ಮೊಟರ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡುತಿದ್ದರು ಈ ಐನಾತಿ ಕಳ್ಳರು, ಒಂದು ದಿನ ಮೊದಲು ಅಡ್ವಾನ್ಸ್ ಕೊಟ್ಟರೆ ಸಾಕು ಈ ಐನಾತಿ ಕಳ್ಳರು ಅದೆ ಕಂಪನಿಯ ಮೊಟರ ಸೈಕಲ್ ಎಲ್ಲೆ ಇರಲಿ ಅಂತದನ್ನೆ ಕಳ್ಳತನ ಮಾಡುತಿದ್ದ ಐನಾತಿ ಕಳ್ಳರನ್ನು ಹಿಡಿದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ ಗೋಕಾಕ ನಗರ ಪೋಲಿಸರು. ಹೌದು ದಿನಾಂಕ 5/2/2026 ರಂದು ಗೋಕಾಕ ನಗರದ ಠಾಣೆಯಲ್ಲಿ ಮರಡಿಮಠದ ಪ್ರಕಾಶ ಬಸವಣ್ಣಿ ಕಡೋಲಿ ಇವರು ನಗರದ ರಿಲಾಯನ್ಸ್ ಮಾಲ್ಸ್ ಮುಂಬಾಗದಲ್ಲಿ ನಿಲ್ಲಿಸಿದ್ದ ತಮ್ಮ ಮೊಟರ ಸೈಕಲ್ ಕಳೆದುಕೊಂಡಿದ್ದ ಪ್ರಕರಣ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು. ಬೆಳಗಾವಿ ಎಸ್ಪಿ ಕೆ,ರಾಮರಾಜನ್ ಡಿವೈಎಸ್ಪಿ. ರವಿ ನಾಯಕ , ಸಿಪಿಐ ಸುರೇಶಬಾಬು ಮಾರ್ಗದರ್ಶನದಲ್ಲಿ ಪಿಎಸ್ಐ. ಕಿರಣ ಮೊಹಿತೆ ನೇತೃತ್ವದ ಸಿಬ್ಬಂದಿಗಳ ತಂಡ ರಚಿಸಿ ಕೊನೆಗೆ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಲ್ಲಿ ಗೋಕಾಕ ನಗರ ಪೋಲಿಸರು ಯಶಸ್ವಿಯಾದರು. ಇನ್ನು ಬೈಕ್ ಕಳ್ಳತನ ಪ್ರಕರಣದಲ್ಲಿ ಗೋಕಾಕ ಪೊಲೀಸ್ರಿಂದ ಬಂಧಿತರಾದ ಕುಂದರಗಿ ಗ್ರಾಮದವರಾದ ಪರಶುರಾಮ ಯಲ್ಲಪ್ಪಾ ಹಣಬರಟ್ಟಿ ಮತ್ತು ಲಗಮಣ್ಣಾ ಮಾರುತಿ ಮಲ್ಲನ್ನವರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಗೋಕಾಕ ಶಹರದಿಂದ 6 ಮೊಟರ ಸೈಕಲ್,ಯಮಕನಮರಡಿ,ಹುಕ್ಕೇರಿ,ನೆಸರಗಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 9 ಮೊಟರ ಸೈಕಲ್ ಕಳವು ಮಾಡಿದ್ದು ಒಟ್ಟು 5,45,000/ ರೂ ಕಿಮ್ಮತ್ತಿನ ಒಟ್ಟು 15 ಮೊಟರ ಸೈಕಲಗಳನ್ನು ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದು, ಅವರಿಂದ ಜಪ್ತಮಾಡಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದಾರೆ. ಇನ್ನು ಈ ಪ್ರಕರಣ ಬೇದಿಸಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ ಸಿಪಿಆಯ್ ಸುರೇಶಬಾಬು,ಪಿಎಸ್ಐ ಕಿರಣ ಮೊಹಿತೆ ಹಾಗೂ ಸಿಬ್ಬಂದಿಗಳಾದ ಕೆ,ಎನ್ ,ಇಳಿಗೇರ, ಬಿ,ಎಸ್,ಸಿದ್ನಾಳ ,ಎಮ್,ಹುಚ್ಚಗೌಡರ ಸೇರಿದಂತೆ ಇನ್ನೂಳಿದವರ ಕಾರ್ಯವನ್ನು ಎಸ್,ಪಿ, ಕೆ ರಾಮರಾಜನ್ ಶ್ಲ್ಯಾಘಿಸಿರುತ್ತಾರೆ.4
- ಮೇಡಮ್ ಬರ್ತಾವ್ರೆ ತುಮಕೂರಿಗೆ1
- ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ)ದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಘನಶ್ಯಾಮ ಭಾಂಡಗೆ ಗಂಭೀರ ಆರೋಪ ಮಾಡಿದ್ದಾರೆ. ಇ-ಖಾತಾ ಆನ್ಲೈನ್ ಸಮಸ್ಯೆಯಿಂದ ಸಾವಿರಾರು ಮುಳುಗಡೆ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.1