logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೆಮಾಳದಲ್ಲಿ ಆಯೋಜಿಸಲಾಗಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಯಾವುದೇ ಕುಟುಂಬದ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಪಾತ್ರ ಅಮೂಲ್ಯವಾದದ್ದು ಎಂದು ತಿಳಿಸಿದರು. ಕುಟುಂಬದಲ್ಲಿ ಹಲವಾರು ಸಮಸ್ಯೆಗಳಿರುವುದು ಸಹಜವಾದರೂ, ಅವುಗಳನ್ನು ನಿವಾರಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುವ ಮಹಿಳೆಯರ ಪಾತ್ರ ಅತಿ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಸಂತೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಾಗ ಯಶಸ್ಸು ಖಂಡಿತ ಎಂಬುದಕ್ಕೆ ಹಾಡ್ಲಿ ಸಂಜೀವಿನಿ ಮಾಸಿಕ ಸಂತೆ ಸಾಕ್ಷಿಯಾಗಿದೆ ಎಂದ ಇಒ ಶ್ರೀನಿವಾಸ್, ಮುಂದಿನ ದಿನಗಳಲ್ಲಿ ಸಮನ್ವಯ ಕೊರತೆಯನ್ನು ಸರಿಪಡಿಸಿ ಇನ್ನಷ್ಟು ಉತ್ತಮಗೊಳಿಸುವುದಾಗಿ ಭರವಸೆ ನೀಡಿದರು. ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಪಾಲು ಇರುತ್ತದೆ. ಇಂತಹ ಮಹಿಳೆಯರಿಗೆ ಸಂಜೀವಿನಿ ಬೆನ್ನೆಲುಬಾಗಿ ನಿಲ್ಲುತ್ತಿದೆ. ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬದ ಒಬ್ಬ ಮಹಿಳೆ ಸಂಜೀವಿನಿ ಸದಸ್ಯರಾಗಬೇಕು ಎಂದು ಕರೆ ನೀಡಿದರು. ಅಂತಹ ಮಹಿಳೆಯರಿಗೆ ಸರ್ಕಾರದ ಸೂಕ್ತ ಸೌಲಭ್ಯದ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ದಲ್ಲಾಳಿಗಳನ್ನು ಹೊರಗಿಟ್ಟು ಸ್ಥಳೀಯವಾಗಿ ನೇರ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ತಾಲ್ಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರಿಗೆ ಕಲಬೆರಕೆ ಎಣ್ಣೆಗೆ ಮಾರುಹೋಗದೆ, ನಮ್ಮ ಮಹಿಳೆಯರೇ ಉತ್ಪಾದಿಸಿದ ಗಾಣದ ಎಣ್ಣೆಯನ್ನು ಬಳಸಲು ಹಾಗೂ ನಮ್ಮ ಮಹಿಳೆಯರು ಉತ್ಪಾದಿಸುವ ದಿನಬಳಕೆಯ ವಸ್ತುಗಳನ್ನು ಪರಸ್ಪರ ಖರೀದಿಸುವ ಮೂಲಕ ಅಕ್ಕಪಕ್ಕದ ಪರಿಚಿತ ಕುಟುಂಬಗಳಿಗೂ ತಿಳಿಸುವಂತೆ ಅವರು ಮನವಿ ಮಾಡಿದರು. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ, ಕೃಷಿಯೇತರ ಚಟುವಟಿಕೆಯ ತಾಲ್ಲೂಕು ವ್ಯವಸ್ಥಾಪಕಿ ಸೌಮ್ಯ ಅವರು ಒಂದು ವಾರದಿಂದಲೇ ವಿಶೇಷ ಆಸಕ್ತಿ ವಹಿಸಿ ಪೂರ್ವನಿಯೋಜಿತ ರೂಪರೇಷೆಗಳೊಂದಿಗೆ ಸಂತೆಯ ಸಿದ್ಧತೆಯನ್ನು ನಡೆಸಿದ್ದರು. ಮಳಿಗೆ ಹಂಚಿಕೆ, ವ್ಯಾಪಕ ಪ್ರಚಾರ ಮತ್ತು ಗ್ರಾಹಕರನ್ನು ಸೆಳೆಯುವ ತಂತ್ರಗಳೊಂದಿಗೆ ಸಂತೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಅವರು ಶ್ರಮಿಸಿದರು. ಗುರುವಾರ ಹಾಡ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ 28ಕ್ಕೂ ಹೆಚ್ಚು ಮಳಿಗೆಗಳು ತೆರೆದುಕೊಂಡಿದ್ದವು. ಸಿರಿಧಾನ್ಯ ಖಾದ್ಯಗಳು, ಮಸಾಲೆ ಪುಡಿಗಳು, ಉಪ್ಪಿನಕಾಯಿ, ಕೈಮಗ್ಗ ವಸ್ತ್ರಗಳು, ಟೆರಾಕೋಟಾ ಆಭರಣಗಳು, ಸಾವಯವ ತರಕಾರಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಮಾರಾಟವಾದವು. ಯತ್ತಂಬಾಡಿ ಸ್ವಸಹಾಯ ಸಂಘದ ಸಾವಯವ ರಾಗಿಹುರಿ ಹಿಟ್ಟಿನ ಜೊತೆಗೆ ಕರಿಬೇವು, ನುಗ್ಗೆಸೊಪ್ಪು ಮತ್ತು ಬೇವಿನಸೊಪ್ಪಿನ ಪುಡಿಗಳು ಮಕ್ಕಳು ಮತ್ತು ಹಿರಿಯರ ಗಮನ ಸೆಳೆದವು. ಆರೋಗ್ಯಕರ ಆಹಾರಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ಈ ಪುಡಿಗಳು ನಿಮಿಷಗಳಲ್ಲಿ ಖಾಲಿಯಾದವು. ಸುಜ್ಜಲೂರು ಚಾಮುಂಡೇಶ್ವರಿ ಸ್ವಸಹಾಯ ಸಂಘದ ಬಜ್ಜಿ, ಬೋಂಡಾ, ವಡೆ ಮತ್ತು ಹಪ್ಪಳಕ್ಕೆ ಜನ ಮುಗಿಬಿದ್ದರು. ಬಿಸಿ ಬಿಸಿ ತಿಂಡಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಸಂಜೆಯೊಳಗೆ ಎಲ್ಲವೂ ಖಾಲಿಯಾಗಿ ಭರ್ಜರಿ ವಹಿವಾಟು ನಡೆಯಿತು. ಸಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇಒ ಶ್ರೀನಿವಾಸ್ ಅವರು ಸ್ಥಳದಲ್ಲಿದ್ದ ಕಸದ ರಾಶಿಯನ್ನು ಕಂಡು, ಕೂಡಲೇ ಅದನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಹಾಡ್ಲಿ ಗ್ರಾ.ಪಂ. ಪಿಡಿಒ ಲಿಂಗರಾಜು, ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಸವಿತಾ, ಖಜಾಂಚಿ ಲಕ್ಷ್ಮಿ, ವ್ಯವಸ್ಥಾಪಕ ಮಹದೇವಸ್ವಾಮಿ, ಕೃಷಿ ಆಧಾರಿತ ಚಟುವಟಿಕೆ ವ್ಯವಸ್ಥಾಪಕ ಕೃಷ್ಣ, ಶೋಭಾ, ಒಕ್ಕೂಟದ ಮಧುಶ್ರೀ, ಗಿರಿಜಾ, ಪ್ರೇಮಾ, ರತ್ನಮ್ಮ, ಮಮತಾ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.

10 hrs ago
user_ಮಾಗನೂರು ಎಂ ಶಿವಕುಮಾರ್
ಮಾಗನೂರು ಎಂ ಶಿವಕುಮಾರ್
Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
10 hrs ago

ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೆಮಾಳದಲ್ಲಿ ಆಯೋಜಿಸಲಾಗಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಯಾವುದೇ ಕುಟುಂಬದ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಪಾತ್ರ ಅಮೂಲ್ಯವಾದದ್ದು ಎಂದು ತಿಳಿಸಿದರು. ಕುಟುಂಬದಲ್ಲಿ ಹಲವಾರು ಸಮಸ್ಯೆಗಳಿರುವುದು ಸಹಜವಾದರೂ, ಅವುಗಳನ್ನು ನಿವಾರಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುವ ಮಹಿಳೆಯರ ಪಾತ್ರ ಅತಿ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಸಂತೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಾಗ ಯಶಸ್ಸು ಖಂಡಿತ ಎಂಬುದಕ್ಕೆ ಹಾಡ್ಲಿ ಸಂಜೀವಿನಿ ಮಾಸಿಕ ಸಂತೆ ಸಾಕ್ಷಿಯಾಗಿದೆ ಎಂದ ಇಒ ಶ್ರೀನಿವಾಸ್, ಮುಂದಿನ ದಿನಗಳಲ್ಲಿ ಸಮನ್ವಯ ಕೊರತೆಯನ್ನು ಸರಿಪಡಿಸಿ ಇನ್ನಷ್ಟು ಉತ್ತಮಗೊಳಿಸುವುದಾಗಿ ಭರವಸೆ ನೀಡಿದರು. ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಪಾಲು ಇರುತ್ತದೆ. ಇಂತಹ ಮಹಿಳೆಯರಿಗೆ ಸಂಜೀವಿನಿ ಬೆನ್ನೆಲುಬಾಗಿ ನಿಲ್ಲುತ್ತಿದೆ. ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬದ ಒಬ್ಬ ಮಹಿಳೆ ಸಂಜೀವಿನಿ ಸದಸ್ಯರಾಗಬೇಕು ಎಂದು ಕರೆ ನೀಡಿದರು. ಅಂತಹ ಮಹಿಳೆಯರಿಗೆ ಸರ್ಕಾರದ ಸೂಕ್ತ ಸೌಲಭ್ಯದ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ದಲ್ಲಾಳಿಗಳನ್ನು ಹೊರಗಿಟ್ಟು ಸ್ಥಳೀಯವಾಗಿ ನೇರ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ತಾಲ್ಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರಿಗೆ ಕಲಬೆರಕೆ ಎಣ್ಣೆಗೆ ಮಾರುಹೋಗದೆ, ನಮ್ಮ ಮಹಿಳೆಯರೇ ಉತ್ಪಾದಿಸಿದ ಗಾಣದ ಎಣ್ಣೆಯನ್ನು ಬಳಸಲು ಹಾಗೂ ನಮ್ಮ ಮಹಿಳೆಯರು ಉತ್ಪಾದಿಸುವ ದಿನಬಳಕೆಯ ವಸ್ತುಗಳನ್ನು ಪರಸ್ಪರ ಖರೀದಿಸುವ ಮೂಲಕ ಅಕ್ಕಪಕ್ಕದ ಪರಿಚಿತ ಕುಟುಂಬಗಳಿಗೂ ತಿಳಿಸುವಂತೆ ಅವರು ಮನವಿ ಮಾಡಿದರು. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ, ಕೃಷಿಯೇತರ ಚಟುವಟಿಕೆಯ ತಾಲ್ಲೂಕು ವ್ಯವಸ್ಥಾಪಕಿ ಸೌಮ್ಯ ಅವರು ಒಂದು ವಾರದಿಂದಲೇ ವಿಶೇಷ ಆಸಕ್ತಿ ವಹಿಸಿ ಪೂರ್ವನಿಯೋಜಿತ ರೂಪರೇಷೆಗಳೊಂದಿಗೆ ಸಂತೆಯ ಸಿದ್ಧತೆಯನ್ನು ನಡೆಸಿದ್ದರು. ಮಳಿಗೆ ಹಂಚಿಕೆ, ವ್ಯಾಪಕ ಪ್ರಚಾರ ಮತ್ತು ಗ್ರಾಹಕರನ್ನು ಸೆಳೆಯುವ ತಂತ್ರಗಳೊಂದಿಗೆ ಸಂತೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಅವರು ಶ್ರಮಿಸಿದರು. ಗುರುವಾರ ಹಾಡ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ 28ಕ್ಕೂ ಹೆಚ್ಚು ಮಳಿಗೆಗಳು ತೆರೆದುಕೊಂಡಿದ್ದವು. ಸಿರಿಧಾನ್ಯ ಖಾದ್ಯಗಳು, ಮಸಾಲೆ ಪುಡಿಗಳು, ಉಪ್ಪಿನಕಾಯಿ, ಕೈಮಗ್ಗ ವಸ್ತ್ರಗಳು, ಟೆರಾಕೋಟಾ ಆಭರಣಗಳು, ಸಾವಯವ ತರಕಾರಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಮಾರಾಟವಾದವು. ಯತ್ತಂಬಾಡಿ ಸ್ವಸಹಾಯ ಸಂಘದ ಸಾವಯವ ರಾಗಿಹುರಿ ಹಿಟ್ಟಿನ ಜೊತೆಗೆ ಕರಿಬೇವು, ನುಗ್ಗೆಸೊಪ್ಪು ಮತ್ತು ಬೇವಿನಸೊಪ್ಪಿನ ಪುಡಿಗಳು ಮಕ್ಕಳು ಮತ್ತು ಹಿರಿಯರ ಗಮನ ಸೆಳೆದವು. ಆರೋಗ್ಯಕರ ಆಹಾರಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ಈ ಪುಡಿಗಳು ನಿಮಿಷಗಳಲ್ಲಿ ಖಾಲಿಯಾದವು. ಸುಜ್ಜಲೂರು ಚಾಮುಂಡೇಶ್ವರಿ ಸ್ವಸಹಾಯ ಸಂಘದ ಬಜ್ಜಿ, ಬೋಂಡಾ, ವಡೆ ಮತ್ತು ಹಪ್ಪಳಕ್ಕೆ ಜನ ಮುಗಿಬಿದ್ದರು. ಬಿಸಿ ಬಿಸಿ ತಿಂಡಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಸಂಜೆಯೊಳಗೆ ಎಲ್ಲವೂ ಖಾಲಿಯಾಗಿ ಭರ್ಜರಿ ವಹಿವಾಟು ನಡೆಯಿತು. ಸಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇಒ ಶ್ರೀನಿವಾಸ್ ಅವರು ಸ್ಥಳದಲ್ಲಿದ್ದ ಕಸದ ರಾಶಿಯನ್ನು ಕಂಡು, ಕೂಡಲೇ ಅದನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಹಾಡ್ಲಿ ಗ್ರಾ.ಪಂ. ಪಿಡಿಒ ಲಿಂಗರಾಜು, ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಸವಿತಾ, ಖಜಾಂಚಿ ಲಕ್ಷ್ಮಿ, ವ್ಯವಸ್ಥಾಪಕ ಮಹದೇವಸ್ವಾಮಿ, ಕೃಷಿ ಆಧಾರಿತ ಚಟುವಟಿಕೆ ವ್ಯವಸ್ಥಾಪಕ ಕೃಷ್ಣ, ಶೋಭಾ, ಒಕ್ಕೂಟದ ಮಧುಶ್ರೀ, ಗಿರಿಜಾ, ಪ್ರೇಮಾ, ರತ್ನಮ್ಮ, ಮಮತಾ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.

More news from ಕರ್ನಾಟಕ and nearby areas
  • ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೆಮಾಳದಲ್ಲಿ ಆಯೋಜಿಸಲಾಗಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಯಾವುದೇ ಕುಟುಂಬದ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಪಾತ್ರ ಅಮೂಲ್ಯವಾದದ್ದು ಎಂದು ತಿಳಿಸಿದರು. ಕುಟುಂಬದಲ್ಲಿ ಹಲವಾರು ಸಮಸ್ಯೆಗಳಿರುವುದು ಸಹಜವಾದರೂ, ಅವುಗಳನ್ನು ನಿವಾರಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುವ ಮಹಿಳೆಯರ ಪಾತ್ರ ಅತಿ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಸಂತೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಾಗ ಯಶಸ್ಸು ಖಂಡಿತ ಎಂಬುದಕ್ಕೆ ಹಾಡ್ಲಿ ಸಂಜೀವಿನಿ ಮಾಸಿಕ ಸಂತೆ ಸಾಕ್ಷಿಯಾಗಿದೆ ಎಂದ ಇಒ ಶ್ರೀನಿವಾಸ್, ಮುಂದಿನ ದಿನಗಳಲ್ಲಿ ಸಮನ್ವಯ ಕೊರತೆಯನ್ನು ಸರಿಪಡಿಸಿ ಇನ್ನಷ್ಟು ಉತ್ತಮಗೊಳಿಸುವುದಾಗಿ ಭರವಸೆ ನೀಡಿದರು. ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಪಾಲು ಇರುತ್ತದೆ. ಇಂತಹ ಮಹಿಳೆಯರಿಗೆ ಸಂಜೀವಿನಿ ಬೆನ್ನೆಲುಬಾಗಿ ನಿಲ್ಲುತ್ತಿದೆ. ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬದ ಒಬ್ಬ ಮಹಿಳೆ ಸಂಜೀವಿನಿ ಸದಸ್ಯರಾಗಬೇಕು ಎಂದು ಕರೆ ನೀಡಿದರು. ಅಂತಹ ಮಹಿಳೆಯರಿಗೆ ಸರ್ಕಾರದ ಸೂಕ್ತ ಸೌಲಭ್ಯದ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ದಲ್ಲಾಳಿಗಳನ್ನು ಹೊರಗಿಟ್ಟು ಸ್ಥಳೀಯವಾಗಿ ನೇರ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ತಾಲ್ಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರಿಗೆ ಕಲಬೆರಕೆ ಎಣ್ಣೆಗೆ ಮಾರುಹೋಗದೆ, ನಮ್ಮ ಮಹಿಳೆಯರೇ ಉತ್ಪಾದಿಸಿದ ಗಾಣದ ಎಣ್ಣೆಯನ್ನು ಬಳಸಲು ಹಾಗೂ ನಮ್ಮ ಮಹಿಳೆಯರು ಉತ್ಪಾದಿಸುವ ದಿನಬಳಕೆಯ ವಸ್ತುಗಳನ್ನು ಪರಸ್ಪರ ಖರೀದಿಸುವ ಮೂಲಕ ಅಕ್ಕಪಕ್ಕದ ಪರಿಚಿತ ಕುಟುಂಬಗಳಿಗೂ ತಿಳಿಸುವಂತೆ ಅವರು ಮನವಿ ಮಾಡಿದರು. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ, ಕೃಷಿಯೇತರ ಚಟುವಟಿಕೆಯ ತಾಲ್ಲೂಕು ವ್ಯವಸ್ಥಾಪಕಿ ಸೌಮ್ಯ ಅವರು ಒಂದು ವಾರದಿಂದಲೇ ವಿಶೇಷ ಆಸಕ್ತಿ ವಹಿಸಿ ಪೂರ್ವನಿಯೋಜಿತ ರೂಪರೇಷೆಗಳೊಂದಿಗೆ ಸಂತೆಯ ಸಿದ್ಧತೆಯನ್ನು ನಡೆಸಿದ್ದರು. ಮಳಿಗೆ ಹಂಚಿಕೆ, ವ್ಯಾಪಕ ಪ್ರಚಾರ ಮತ್ತು ಗ್ರಾಹಕರನ್ನು ಸೆಳೆಯುವ ತಂತ್ರಗಳೊಂದಿಗೆ ಸಂತೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಅವರು ಶ್ರಮಿಸಿದರು. ಗುರುವಾರ ಹಾಡ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ 28ಕ್ಕೂ ಹೆಚ್ಚು ಮಳಿಗೆಗಳು ತೆರೆದುಕೊಂಡಿದ್ದವು. ಸಿರಿಧಾನ್ಯ ಖಾದ್ಯಗಳು, ಮಸಾಲೆ ಪುಡಿಗಳು, ಉಪ್ಪಿನಕಾಯಿ, ಕೈಮಗ್ಗ ವಸ್ತ್ರಗಳು, ಟೆರಾಕೋಟಾ ಆಭರಣಗಳು, ಸಾವಯವ ತರಕಾರಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಮಾರಾಟವಾದವು. ಯತ್ತಂಬಾಡಿ ಸ್ವಸಹಾಯ ಸಂಘದ ಸಾವಯವ ರಾಗಿಹುರಿ ಹಿಟ್ಟಿನ ಜೊತೆಗೆ ಕರಿಬೇವು, ನುಗ್ಗೆಸೊಪ್ಪು ಮತ್ತು ಬೇವಿನಸೊಪ್ಪಿನ ಪುಡಿಗಳು ಮಕ್ಕಳು ಮತ್ತು ಹಿರಿಯರ ಗಮನ ಸೆಳೆದವು. ಆರೋಗ್ಯಕರ ಆಹಾರಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ಈ ಪುಡಿಗಳು ನಿಮಿಷಗಳಲ್ಲಿ ಖಾಲಿಯಾದವು. ಸುಜ್ಜಲೂರು ಚಾಮುಂಡೇಶ್ವರಿ ಸ್ವಸಹಾಯ ಸಂಘದ ಬಜ್ಜಿ, ಬೋಂಡಾ, ವಡೆ ಮತ್ತು ಹಪ್ಪಳಕ್ಕೆ ಜನ ಮುಗಿಬಿದ್ದರು. ಬಿಸಿ ಬಿಸಿ ತಿಂಡಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಸಂಜೆಯೊಳಗೆ ಎಲ್ಲವೂ ಖಾಲಿಯಾಗಿ ಭರ್ಜರಿ ವಹಿವಾಟು ನಡೆಯಿತು. ಸಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇಒ ಶ್ರೀನಿವಾಸ್ ಅವರು ಸ್ಥಳದಲ್ಲಿದ್ದ ಕಸದ ರಾಶಿಯನ್ನು ಕಂಡು, ಕೂಡಲೇ ಅದನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಹಾಡ್ಲಿ ಗ್ರಾ.ಪಂ. ಪಿಡಿಒ ಲಿಂಗರಾಜು, ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಸವಿತಾ, ಖಜಾಂಚಿ ಲಕ್ಷ್ಮಿ, ವ್ಯವಸ್ಥಾಪಕ ಮಹದೇವಸ್ವಾಮಿ, ಕೃಷಿ ಆಧಾರಿತ ಚಟುವಟಿಕೆ ವ್ಯವಸ್ಥಾಪಕ ಕೃಷ್ಣ, ಶೋಭಾ, ಒಕ್ಕೂಟದ ಮಧುಶ್ರೀ, ಗಿರಿಜಾ, ಪ್ರೇಮಾ, ರತ್ನಮ್ಮ, ಮಮತಾ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.
    1
    ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೆಮಾಳದಲ್ಲಿ ಆಯೋಜಿಸಲಾಗಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಯಾವುದೇ ಕುಟುಂಬದ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಪಾತ್ರ ಅಮೂಲ್ಯವಾದದ್ದು ಎಂದು ತಿಳಿಸಿದರು. ಕುಟುಂಬದಲ್ಲಿ ಹಲವಾರು ಸಮಸ್ಯೆಗಳಿರುವುದು ಸಹಜವಾದರೂ, ಅವುಗಳನ್ನು ನಿವಾರಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುವ ಮಹಿಳೆಯರ ಪಾತ್ರ ಅತಿ ಮುಖ್ಯ ಎಂದು ಅವರು ಒತ್ತಿ ಹೇಳಿದರು.

ಸಂತೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಾಗ ಯಶಸ್ಸು ಖಂಡಿತ ಎಂಬುದಕ್ಕೆ ಹಾಡ್ಲಿ ಸಂಜೀವಿನಿ ಮಾಸಿಕ ಸಂತೆ ಸಾಕ್ಷಿಯಾಗಿದೆ ಎಂದ ಇಒ ಶ್ರೀನಿವಾಸ್, ಮುಂದಿನ ದಿನಗಳಲ್ಲಿ ಸಮನ್ವಯ ಕೊರತೆಯನ್ನು ಸರಿಪಡಿಸಿ ಇನ್ನಷ್ಟು ಉತ್ತಮಗೊಳಿಸುವುದಾಗಿ ಭರವಸೆ ನೀಡಿದರು. ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಪಾಲು ಇರುತ್ತದೆ. ಇಂತಹ ಮಹಿಳೆಯರಿಗೆ ಸಂಜೀವಿನಿ ಬೆನ್ನೆಲುಬಾಗಿ ನಿಲ್ಲುತ್ತಿದೆ. ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬದ ಒಬ್ಬ ಮಹಿಳೆ ಸಂಜೀವಿನಿ ಸದಸ್ಯರಾಗಬೇಕು ಎಂದು ಕರೆ ನೀಡಿದರು. ಅಂತಹ ಮಹಿಳೆಯರಿಗೆ ಸರ್ಕಾರದ ಸೂಕ್ತ ಸೌಲಭ್ಯದ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ದಲ್ಲಾಳಿಗಳನ್ನು ಹೊರಗಿಟ್ಟು ಸ್ಥಳೀಯವಾಗಿ ನೇರ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ತಾಲ್ಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರಿಗೆ ಕಲಬೆರಕೆ ಎಣ್ಣೆಗೆ ಮಾರುಹೋಗದೆ, ನಮ್ಮ ಮಹಿಳೆಯರೇ ಉತ್ಪಾದಿಸಿದ ಗಾಣದ ಎಣ್ಣೆಯನ್ನು ಬಳಸಲು ಹಾಗೂ ನಮ್ಮ ಮಹಿಳೆಯರು ಉತ್ಪಾದಿಸುವ ದಿನಬಳಕೆಯ ವಸ್ತುಗಳನ್ನು ಪರಸ್ಪರ ಖರೀದಿಸುವ ಮೂಲಕ ಅಕ್ಕಪಕ್ಕದ ಪರಿಚಿತ ಕುಟುಂಬಗಳಿಗೂ ತಿಳಿಸುವಂತೆ ಅವರು ಮನವಿ ಮಾಡಿದರು.

ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ, ಕೃಷಿಯೇತರ ಚಟುವಟಿಕೆಯ ತಾಲ್ಲೂಕು ವ್ಯವಸ್ಥಾಪಕಿ ಸೌಮ್ಯ ಅವರು ಒಂದು ವಾರದಿಂದಲೇ ವಿಶೇಷ ಆಸಕ್ತಿ ವಹಿಸಿ ಪೂರ್ವನಿಯೋಜಿತ ರೂಪರೇಷೆಗಳೊಂದಿಗೆ ಸಂತೆಯ ಸಿದ್ಧತೆಯನ್ನು ನಡೆಸಿದ್ದರು. ಮಳಿಗೆ ಹಂಚಿಕೆ, ವ್ಯಾಪಕ ಪ್ರಚಾರ ಮತ್ತು ಗ್ರಾಹಕರನ್ನು ಸೆಳೆಯುವ ತಂತ್ರಗಳೊಂದಿಗೆ ಸಂತೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಅವರು ಶ್ರಮಿಸಿದರು. ಗುರುವಾರ ಹಾಡ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ 28ಕ್ಕೂ ಹೆಚ್ಚು ಮಳಿಗೆಗಳು ತೆರೆದುಕೊಂಡಿದ್ದವು. ಸಿರಿಧಾನ್ಯ ಖಾದ್ಯಗಳು, ಮಸಾಲೆ ಪುಡಿಗಳು, ಉಪ್ಪಿನಕಾಯಿ, ಕೈಮಗ್ಗ ವಸ್ತ್ರಗಳು, ಟೆರಾಕೋಟಾ ಆಭರಣಗಳು, ಸಾವಯವ ತರಕಾರಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಮಾರಾಟವಾದವು.

ಯತ್ತಂಬಾಡಿ ಸ್ವಸಹಾಯ ಸಂಘದ ಸಾವಯವ ರಾಗಿಹುರಿ ಹಿಟ್ಟಿನ ಜೊತೆಗೆ ಕರಿಬೇವು, ನುಗ್ಗೆಸೊಪ್ಪು ಮತ್ತು ಬೇವಿನಸೊಪ್ಪಿನ ಪುಡಿಗಳು ಮಕ್ಕಳು ಮತ್ತು ಹಿರಿಯರ ಗಮನ ಸೆಳೆದವು. ಆರೋಗ್ಯಕರ ಆಹಾರಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ಈ ಪುಡಿಗಳು ನಿಮಿಷಗಳಲ್ಲಿ ಖಾಲಿಯಾದವು. ಸುಜ್ಜಲೂರು ಚಾಮುಂಡೇಶ್ವರಿ ಸ್ವಸಹಾಯ ಸಂಘದ ಬಜ್ಜಿ, ಬೋಂಡಾ, ವಡೆ ಮತ್ತು ಹಪ್ಪಳಕ್ಕೆ ಜನ ಮುಗಿಬಿದ್ದರು. ಬಿಸಿ ಬಿಸಿ ತಿಂಡಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಸಂಜೆಯೊಳಗೆ ಎಲ್ಲವೂ ಖಾಲಿಯಾಗಿ ಭರ್ಜರಿ ವಹಿವಾಟು ನಡೆಯಿತು.

ಸಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇಒ ಶ್ರೀನಿವಾಸ್ ಅವರು ಸ್ಥಳದಲ್ಲಿದ್ದ ಕಸದ ರಾಶಿಯನ್ನು ಕಂಡು, ಕೂಡಲೇ ಅದನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಹಾಡ್ಲಿ ಗ್ರಾ.ಪಂ. ಪಿಡಿಒ ಲಿಂಗರಾಜು, ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಸವಿತಾ, ಖಜಾಂಚಿ ಲಕ್ಷ್ಮಿ, ವ್ಯವಸ್ಥಾಪಕ ಮಹದೇವಸ್ವಾಮಿ, ಕೃಷಿ ಆಧಾರಿತ ಚಟುವಟಿಕೆ ವ್ಯವಸ್ಥಾಪಕ ಕೃಷ್ಣ, ಶೋಭಾ, ಒಕ್ಕೂಟದ ಮಧುಶ್ರೀ, ಗಿರಿಜಾ, ಪ್ರೇಮಾ, ರತ್ನಮ್ಮ, ಮಮತಾ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    10 hrs ago
  • ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಫಾರಿಯಲ್ಲಿ ಪ್ರವಾಸಿಗರಿಗೆ ರೋಮಾಂಚಕ ಅನುಭವ ದೊರೆತಿದೆ. ಸಫಾರಿಯ ಸಂದರ್ಭದಲ್ಲಿ ಒಂದೆಡೆ ಹುಲಿಯ ದರ್ಶನವಾದರೆ, ಮತ್ತೊಂದು ಕಡೆ ಕರಡಿಗಳ ದರ್ಶನವಾಗಿದೆ. ಈ ಅಪರೂಪದ ಮತ್ತು ಅತ್ಯಂತ ಸಂತಸದ ಕ್ಷಣಗಳನ್ನು ಕಂಡ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬಂಡೀಪುರ ಸಫಾರಿಯಲ್ಲಿ ಹುಲಿ ಮತ್ತು ಕರಡಿಗಳ ಏಕಕಾಲಿಕ ದರ್ಶನದಿಂದ ಪ್ರವಾಸಿಗರು ಅತ್ಯಂತ ಸಂತೋಷಗೊಂಡಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
    2
    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಫಾರಿಯಲ್ಲಿ ಪ್ರವಾಸಿಗರಿಗೆ ರೋಮಾಂಚಕ ಅನುಭವ ದೊರೆತಿದೆ. ಸಫಾರಿಯ ಸಂದರ್ಭದಲ್ಲಿ ಒಂದೆಡೆ ಹುಲಿಯ ದರ್ಶನವಾದರೆ, ಮತ್ತೊಂದು ಕಡೆ ಕರಡಿಗಳ ದರ್ಶನವಾಗಿದೆ. ಈ ಅಪರೂಪದ ಮತ್ತು ಅತ್ಯಂತ ಸಂತಸದ ಕ್ಷಣಗಳನ್ನು ಕಂಡ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬಂಡೀಪುರ ಸಫಾರಿಯಲ್ಲಿ ಹುಲಿ ಮತ್ತು ಕರಡಿಗಳ ಏಕಕಾಲಿಕ ದರ್ಶನದಿಂದ ಪ್ರವಾಸಿಗರು ಅತ್ಯಂತ ಸಂತೋಷಗೊಂಡಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    16 hrs ago
  • ಮೈಸೂರು ನಗರದಲ್ಲಿರುವ ವಿದ್ವಾಂಸರಿಗೆ ಒಂದು ವಿನಮ್ರ ಮನವಿ ಮಾಡಲಾಗಿದ್ದು, ಸ್ಥಳೀಯ ರಾಜಕಾರಣಿಗಳ ಬಲೆಗೆ ಬೀಳದಂತೆ ಕೇಳಿಕೊಳ್ಳಲಾಗಿದೆ. ಈ ಕ್ರಮವು "ನಮ್ಮ..." (ನಮ್ಮ...) ವಿರುದ್ಧವಾಗಿದೆ ಎಂದು ಮೂಲವು ತಿಳಿಸಿದೆ. "ಭಾರತದಲ್ಲಿ ವೈರಲ್" ಆಗಿರುವ ಈ ಸಂದೇಶದಲ್ಲಿ, ವಿದ್ವಾಂಸರು ರಾಜಕಾರಣಿಗಳಿಂದ ದೂರವಿರಬೇಕೆಂದು ಕೋರಲಾಗಿದೆ.
    1
    ಮೈಸೂರು ನಗರದಲ್ಲಿರುವ ವಿದ್ವಾಂಸರಿಗೆ ಒಂದು ವಿನಮ್ರ ಮನವಿ ಮಾಡಲಾಗಿದ್ದು, ಸ್ಥಳೀಯ ರಾಜಕಾರಣಿಗಳ ಬಲೆಗೆ ಬೀಳದಂತೆ ಕೇಳಿಕೊಳ್ಳಲಾಗಿದೆ. ಈ ಕ್ರಮವು "ನಮ್ಮ..." (ನಮ್ಮ...) ವಿರುದ್ಧವಾಗಿದೆ ಎಂದು ಮೂಲವು ತಿಳಿಸಿದೆ. "ಭಾರತದಲ್ಲಿ ವೈರಲ್" ಆಗಿರುವ ಈ ಸಂದೇಶದಲ್ಲಿ, ವಿದ್ವಾಂಸರು ರಾಜಕಾರಣಿಗಳಿಂದ ದೂರವಿರಬೇಕೆಂದು ಕೋರಲಾಗಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    40 min ago
  • ಮತದಾರರ ಪಟ್ಟಿಯಲ್ಲಿ ಗೊಂದಲವಿದ್ದರೆ ಅಥವಾ ನಿಮ್ಮ ಹೆಸರು ಇಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಮಾಹಿತಿ ಸ್ಪಷ್ಟಪಡಿಸಿದೆ. ಅಂತಹ ಸಂದರ್ಭಗಳಲ್ಲಿ, ಮತದಾರರ ಪಟ್ಟಿಯನ್ನು ಸರಿಪಡಿಸಿಕೊಳ್ಳಲು ನಿಮ್ಮ BLO (ಬೂತ್ ಮಟ್ಟದ ಅಧಿಕಾರಿ) ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಯನ್ನು ಅಪ್‌ಡೇಟ್ ಮಾಡಲು ಮತ್ತು ವೋಟರ್ ಲಿಸ್ಟ್‌ನಲ್ಲಿ ಹೆಸರು ಇಲ್ಲದಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.
    1
    ಮತದಾರರ ಪಟ್ಟಿಯಲ್ಲಿ ಗೊಂದಲವಿದ್ದರೆ ಅಥವಾ ನಿಮ್ಮ ಹೆಸರು ಇಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಮಾಹಿತಿ ಸ್ಪಷ್ಟಪಡಿಸಿದೆ. ಅಂತಹ ಸಂದರ್ಭಗಳಲ್ಲಿ, ಮತದಾರರ ಪಟ್ಟಿಯನ್ನು ಸರಿಪಡಿಸಿಕೊಳ್ಳಲು ನಿಮ್ಮ BLO (ಬೂತ್ ಮಟ್ಟದ ಅಧಿಕಾರಿ) ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಯನ್ನು ಅಪ್‌ಡೇಟ್ ಮಾಡಲು ಮತ್ತು ವೋಟರ್ ಲಿಸ್ಟ್‌ನಲ್ಲಿ ಹೆಸರು ಇಲ್ಲದಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಕರ್ನಾಟಕದಲ್ಲಿ ಮುಂಬರುವ ಸಂಪುಟ ಸಚಿವರ ರಚನೆಗೆ ಸಂಬಂಧಿಸಿದಂತೆ ಸೈಯದ್ ಅಸೀಮ್ ಸಾಹೇಬ್ ಅವರು ಹೇಳಿಕೆ ನೀಡಿದ್ದಾರೆ.
    1
    ಕರ್ನಾಟಕದಲ್ಲಿ ಮುಂಬರುವ ಸಂಪುಟ ಸಚಿವರ ರಚನೆಗೆ ಸಂಬಂಧಿಸಿದಂತೆ ಸೈಯದ್ ಅಸೀಮ್ ಸಾಹೇಬ್ ಅವರು ಹೇಳಿಕೆ ನೀಡಿದ್ದಾರೆ.
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    ಪತ್ರಕರ್ತ ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿ ವತಿಯಿಂದ ಜೂನ್ 12ರಿಂದ 19ರವರೆಗೆ ವಿಶೇಷ ಸಹಸ್ರ ಕಲಶ ಪೂಜೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕಾಗಿ ನಡೆಸಲಾಗುತ್ತಿರುವ ಈ ಧಾರ್ಮಿಕ ಮಹೋತ್ಸವದಲ್ಲಿ ಪ್ರತಿದಿನ ವಿಶೇಷ ಪೂಜೆ, ಅಭಿಷೇಕ, ಅರ್ಚನೆ, ಭಜನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರ ಸಂಕಷ್ಟ ನಿವಾರಣೆ, ಆರೋಗ್ಯ, ಐಶ್ವರ್ಯ ಹಾಗೂ ಲೋಕಕ್ಷೇಮಕ್ಕಾಗಿ ನಡೆಸಲಾಗುವ ಈ ಪವಿತ್ರ ಆಚರಣೆಯಲ್ಲಿ ಸಾವಿರ ಕಲಶಗಳ ಸ್ಥಾಪನೆ, ವೇದಮಂತ್ರಗಳ ಪಠಣ, ವಿಶೇಷ ಅಲಂಕಾರ ಮತ್ತು ತೀರ್ಥಪ್ರಸಾದ ವಿತರಣೆ ಸೇರಿವೆ. ಮೈಸೂರು ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಪೂಜಾ ಸಮಿತಿಯು ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಶ್ರೀ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಕಾರ್ಯದರ್ಶಿ ಹರಿದಾಸ್ ಅವರು, ಜೂನ್ 12ರಿಂದ 19ರವರೆಗೆ ನಡೆಯುವ ಸಹಸ್ರ ಕಲಶ ಪೂಜೆಯಲ್ಲಿ ಅಯ್ಯಪ್ಪ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಅವಧಿಯಲ್ಲಿ ನಡೆಯುವ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು ಹಾಗೂ ಪ್ರಸಾದ ವಿತರಣೆಯ ಸದುಪಯೋಗವನ್ನು ಎಲ್ಲರೂ ಕುಟುಂಬ ಸಮೇತರಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಜೂನ್ 19ರಂದು ಮಹಾಪೂಜೆ, ಸಹಸ್ರ ಕಲಶ ಪೂಜೆಯ ಸಮಾರೋಪ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಈ ಪವಿತ್ರ ವಾತಾವರಣದಲ್ಲಿ ನಡೆಯುತ್ತಿರುವ ಧಾರ್ಮಿಕ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಹೆಚ್ಚಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಯ ಸಂದೇಶವನ್ನು ಸಾರಲಿದೆ. ಶ್ರೀ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಈ ಧಾರ್ಮಿಕ ಸೇವಾಕಾರ್ಯಕ್ಕೆ ಭಕ್ತರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
    2
    ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿ ವತಿಯಿಂದ ಜೂನ್ 12ರಿಂದ 19ರವರೆಗೆ ವಿಶೇಷ ಸಹಸ್ರ ಕಲಶ ಪೂಜೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕಾಗಿ ನಡೆಸಲಾಗುತ್ತಿರುವ ಈ ಧಾರ್ಮಿಕ ಮಹೋತ್ಸವದಲ್ಲಿ ಪ್ರತಿದಿನ ವಿಶೇಷ ಪೂಜೆ, ಅಭಿಷೇಕ, ಅರ್ಚನೆ, ಭಜನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.

ಭಕ್ತರ ಸಂಕಷ್ಟ ನಿವಾರಣೆ, ಆರೋಗ್ಯ, ಐಶ್ವರ್ಯ ಹಾಗೂ ಲೋಕಕ್ಷೇಮಕ್ಕಾಗಿ ನಡೆಸಲಾಗುವ ಈ ಪವಿತ್ರ ಆಚರಣೆಯಲ್ಲಿ ಸಾವಿರ ಕಲಶಗಳ ಸ್ಥಾಪನೆ, ವೇದಮಂತ್ರಗಳ ಪಠಣ, ವಿಶೇಷ ಅಲಂಕಾರ ಮತ್ತು ತೀರ್ಥಪ್ರಸಾದ ವಿತರಣೆ ಸೇರಿವೆ. ಮೈಸೂರು ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಪೂಜಾ ಸಮಿತಿಯು ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ.

ಶ್ರೀ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಕಾರ್ಯದರ್ಶಿ ಹರಿದಾಸ್ ಅವರು, ಜೂನ್ 12ರಿಂದ 19ರವರೆಗೆ ನಡೆಯುವ ಸಹಸ್ರ ಕಲಶ ಪೂಜೆಯಲ್ಲಿ ಅಯ್ಯಪ್ಪ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಅವಧಿಯಲ್ಲಿ ನಡೆಯುವ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು ಹಾಗೂ ಪ್ರಸಾದ ವಿತರಣೆಯ ಸದುಪಯೋಗವನ್ನು ಎಲ್ಲರೂ ಕುಟುಂಬ ಸಮೇತರಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಜೂನ್ 19ರಂದು ಮಹಾಪೂಜೆ, ಸಹಸ್ರ ಕಲಶ ಪೂಜೆಯ ಸಮಾರೋಪ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಈ ಪವಿತ್ರ ವಾತಾವರಣದಲ್ಲಿ ನಡೆಯುತ್ತಿರುವ ಧಾರ್ಮಿಕ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಹೆಚ್ಚಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಯ ಸಂದೇಶವನ್ನು ಸಾರಲಿದೆ. ಶ್ರೀ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಈ ಧಾರ್ಮಿಕ ಸೇವಾಕಾರ್ಯಕ್ಕೆ ಭಕ್ತರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Chamarajanagar, Chamarajanagara•
    1 hr ago
  • ಚಾಮರಾಜನಗರ ಜಿಲ್ಲೆಯ ಮಸಣಾಪುರದಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯು ಇತ್ತೀಚೆಗೆ ಸುರಿದ ಮಳೆಗೆ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಮತ್ತು ಶಾಲಾ ಮಕ್ಕಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಆದಾಗ್ಯೂ, ಈ ಘಟನೆಯಿಂದ ಮಕ್ಕಳಲ್ಲಿ ಆತಂಕ ಮನೆಮಾಡಿದೆ.
    3
    ಚಾಮರಾಜನಗರ ಜಿಲ್ಲೆಯ ಮಸಣಾಪುರದಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯು ಇತ್ತೀಚೆಗೆ ಸುರಿದ ಮಳೆಗೆ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಮತ್ತು ಶಾಲಾ ಮಕ್ಕಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಆದಾಗ್ಯೂ, ಈ ಘಟನೆಯಿಂದ ಮಕ್ಕಳಲ್ಲಿ ಆತಂಕ ಮನೆಮಾಡಿದೆ.
    user_ಶಿವಕುಮಾರ ಎನ್ ಚಾಟೀಪುರ
    ಶಿವಕುಮಾರ ಎನ್ ಚಾಟೀಪುರ
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    19 hrs ago
  • ಮಳವಳ್ಳಿ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಇದರ ಬೆನ್ನಲ್ಲೇ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲೇ ಹಲಗೂರು ವೃತ್ತದ ಕಂದಾಯ ನಿರೀಕ್ಷಕ ಮದುಸೂದನ್ ಅವರು ಶುಕ್ರವಾರ ಸಂಜೆ ಖಾತೆ ಮಾಡಿಕೊಡಲು ₹10,000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಬಿದ್ದಿದ್ದಾರೆ. ಕೇವಲ ಒಂದು ವಾರದ ಹಿಂದೆ ಗ್ರಾಮಾಂತರ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಘಟನೆ ಮಾಸುವ ಮುನ್ನವೇ ಈ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದಳವಾಯಿಕೋಡಿಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬುವರು ತಮ್ಮ ತಾಯಿಯ ಹೆಸರಿನಲ್ಲಿದ್ದ 12 ಗುಂಟೆ ಹಾಗೂ ಸ.ನಂ. 72 ರಲ್ಲಿದ್ದ 5.28 ಎಕರೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಕಂದಾಯ ನಿರೀಕ್ಷಕ ಮದುಸೂದನ್ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ನಂಜುಂಡಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಪೂರ್ವ ನಿಯೋಜನೆಯಂತೆ, ತಾಲೂಕು ಆಡಳಿತ ಸೌಧದ ಬಳಿ ನಂಜುಂಡಸ್ವಾಮಿಯಿಂದ ಲಂಚ ಸ್ವೀಕರಿಸುತ್ತಿದ್ದ ಮದುಸೂದನ್‌ರನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತು ತಂಡ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ತಹಸೀಲ್ದಾರ್ ಡಾ. ಎಸ್.ವಿ. ಲೋಕೇಶ್ ಅವರ ಸಮಕ್ಷಮದಲ್ಲಿ ಮಹಜರು ನಡೆಸಿ ವಿಚಾರಣೆ ಮುಂದುವರೆಸಿದ್ದಾರೆ. ಲೋಕಾಯುಕ್ತ ಎಸ್.ಪಿ. ಎಸ್. ಸುರೇಶ್‌ಬಾಬು ಅವರ ನೇತೃತ್ವದಲ್ಲಿ, ಡಿವೈಎಸ್ಪಿ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ರವಿಕುಮಾರ್, ಬ್ಯಾಟರಾಯಗೌಡ, ಸಿಬ್ಬಂದಿಗಳಾದ ಶಂಕರ್, ಸಿದ್ದಲಿಂಗಸ್ವಾಮಿ, ಶರತ್, ಮಹದೇವ್, ಮಾನಸ ಮತ್ತು ಶ್ರೀದೇವಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಎಂಬುವರು, ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾರಕ್ಕೊಮ್ಮೆ ಇಂತಹ ದಾಳಿಗಳು ನಡೆಯಬೇಕು, ಅಧಿಕಾರಿಗಳು ಲಂಚಕ್ಕೆ ಹೆದರಿ ಜನಸಾಮಾನ್ಯರಿಗೆ ಪ್ರಮಾಣಿಕ ಸೇವೆ ನೀಡಬೇಕು ಎಂದು ಆಗ್ರಹಿಸಿದರು. ತಾವೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ ಒಂದು ದಾಖಲಾತಿ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ, ಹಣ ನೀಡಿದರೂ ಕೆಲಸ ವಿಳಂಬ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿ, ತಾಲೂಕು ಕಚೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದರು.
    1
    ಮಳವಳ್ಳಿ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಇದರ ಬೆನ್ನಲ್ಲೇ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲೇ ಹಲಗೂರು ವೃತ್ತದ ಕಂದಾಯ ನಿರೀಕ್ಷಕ ಮದುಸೂದನ್ ಅವರು ಶುಕ್ರವಾರ ಸಂಜೆ ಖಾತೆ ಮಾಡಿಕೊಡಲು ₹10,000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಬಿದ್ದಿದ್ದಾರೆ. ಕೇವಲ ಒಂದು ವಾರದ ಹಿಂದೆ ಗ್ರಾಮಾಂತರ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಘಟನೆ ಮಾಸುವ ಮುನ್ನವೇ ಈ ಹೊಸ ಪ್ರಕರಣ ಬೆಳಕಿಗೆ ಬಂದಿದೆ.

ದಳವಾಯಿಕೋಡಿಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬುವರು ತಮ್ಮ ತಾಯಿಯ ಹೆಸರಿನಲ್ಲಿದ್ದ 12 ಗುಂಟೆ ಹಾಗೂ ಸ.ನಂ. 72 ರಲ್ಲಿದ್ದ 5.28 ಎಕರೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಕಂದಾಯ ನಿರೀಕ್ಷಕ ಮದುಸೂದನ್ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ನಂಜುಂಡಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಪೂರ್ವ ನಿಯೋಜನೆಯಂತೆ, ತಾಲೂಕು ಆಡಳಿತ ಸೌಧದ ಬಳಿ ನಂಜುಂಡಸ್ವಾಮಿಯಿಂದ ಲಂಚ ಸ್ವೀಕರಿಸುತ್ತಿದ್ದ ಮದುಸೂದನ್‌ರನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತು ತಂಡ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ತಹಸೀಲ್ದಾರ್ ಡಾ. ಎಸ್.ವಿ. ಲೋಕೇಶ್ ಅವರ ಸಮಕ್ಷಮದಲ್ಲಿ ಮಹಜರು ನಡೆಸಿ ವಿಚಾರಣೆ ಮುಂದುವರೆಸಿದ್ದಾರೆ.

ಲೋಕಾಯುಕ್ತ ಎಸ್.ಪಿ. ಎಸ್. ಸುರೇಶ್‌ಬಾಬು ಅವರ ನೇತೃತ್ವದಲ್ಲಿ, ಡಿವೈಎಸ್ಪಿ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ರವಿಕುಮಾರ್, ಬ್ಯಾಟರಾಯಗೌಡ, ಸಿಬ್ಬಂದಿಗಳಾದ ಶಂಕರ್, ಸಿದ್ದಲಿಂಗಸ್ವಾಮಿ, ಶರತ್, ಮಹದೇವ್, ಮಾನಸ ಮತ್ತು ಶ್ರೀದೇವಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಎಂಬುವರು, ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾರಕ್ಕೊಮ್ಮೆ ಇಂತಹ ದಾಳಿಗಳು ನಡೆಯಬೇಕು, ಅಧಿಕಾರಿಗಳು ಲಂಚಕ್ಕೆ ಹೆದರಿ ಜನಸಾಮಾನ್ಯರಿಗೆ ಪ್ರಮಾಣಿಕ ಸೇವೆ ನೀಡಬೇಕು ಎಂದು ಆಗ್ರಹಿಸಿದರು. ತಾವೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ ಒಂದು ದಾಖಲಾತಿ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ, ಹಣ ನೀಡಿದರೂ ಕೆಲಸ ವಿಳಂಬ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿ, ತಾಲೂಕು ಕಚೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.