Shuru
Apke Nagar Ki App…
ನಗರದ ಅಲ್-ಫತಾಹ ಶಿಕ್ಷಣ ಸಂಸ್ಥೆಯಲ್ಲಿ ಅಂಜುಮನ್-ಎ-ಇಸ್ಲಾಂ ಕಮಿಟಿಯ ವತಿಯಿಂದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
@april14news
ನಗರದ ಅಲ್-ಫತಾಹ ಶಿಕ್ಷಣ ಸಂಸ್ಥೆಯಲ್ಲಿ ಅಂಜುಮನ್-ಎ-ಇಸ್ಲಾಂ ಕಮಿಟಿಯ ವತಿಯಿಂದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
More news from ಕರ್ನಾಟಕ and nearby areas
- ನಗರದ ಅಲ್-ಫತಾಹ ಶಿಕ್ಷಣ ಸಂಸ್ಥೆಯಲ್ಲಿ ಅಂಜುಮನ್-ಎ-ಇಸ್ಲಾಂ ಕಮಿಟಿಯ ವತಿಯಿಂದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.1
- ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರ ಅಧ್ಯಕ್ಷತೆಯಲ್ಲಿ ಅಥಣಿ ನಗರದ ಭೋಜರಾಜ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ಸುಂದರ ಕ್ಷಣಗಳು1
- 77th REPUBLIC DAY1
- अब ये Business आपको कमा कर देगा #tranding #marketkibaat #sadarbazar #business1
- "ಜೈ ಭೀಮ್ ಯುವ ಘರ್ಜನೆ ಸಂಘಟನೇಯ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ " ಬಾಗಲಕೋಟೆ ಜಿಲ್ಲೆಯಲ್ಲಿ ಮಂಜುನಾಥ್ ಆರ್ ಮಾದರ ಅವರ ನೇತೃತ್ವದಲ್ಲಿ ನೆರವೇರಿತು.1
- ಬೀಳಗಿ ತಾಲೂಕಿನ ಬಿಳಗಿ ಪಟ್ಟಣದಲ್ಲಿ ಜನವರಿ 24 ರಂದು ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್, ಬೀಳಗಿ ತಾಲೂಕಾ ಘಟಕದ ವತಿಯಿಂದ ಭೀಮ ಕೋರೆಗಾವ್ ವಿಜಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.1
- Post by Manohar megeri1
- ಸಂವಿಧಾನ ಆಶಯಗಳನ್ನು ಗೌರವಿಸುವ ಮೂಲಕ ನಾವೆಲ್ಲ ಭಾರತ ದೇಶದ ಕಾನೂನು ಪಾಲಿಸೋಣ : ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅಥಣಿ : ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಸಮಾನತೆಯ ಬಾಳನ್ನು ನೀಡಿದ ಸಂವಿಧಾನ ಜಾರಿಗೆ ಬಂದ ದಿನವಾಗಿದೆ ನಾವೆಲ್ಲ ಸಂವಿಧಾನ ಆಶಯ ಗಳನ್ನು ಗೌರವಿಸುವ ಮೂಲಕ ನಾವೆಲ್ಲ ಭಾರತ ದೇಶದ ಕಾನೂನು ಪಾಲಿಸೋಣ ಎಂದು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಅಥಣಿ ತಾಲೂಕು ಆಡಳಿತದಿಂದ ಜರುಗಿದ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಶ್ವರತ್ನ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ದಿನ.ವಿಶ್ವದಲ್ಲಿ ಸ್ವತಂತ್ರ ಸ್ವಾವಲಂಬಿ ವಾಕ್ ಸ್ವತಂತ್ರ ಹಕ್ಕು, ಸಮಾನತೆ ಐಕ್ಯತೆ ನಮ್ಮ ಸಂವಿಧಾನದಲ್ಲಿ ಇದೆ. ದೇಶದ ಸ್ವಾತಂತ್ರಕ್ಕೆ ಹಾಗೂ ಘನತೆಗೆ ಶ್ರಮಿಸಿದ ಎಲ್ಲ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು. ಅಥಣಿ ಕ್ಷೇತ್ರವನ್ನು ಮಾದರಿಯಾಗಿಸಲು ನಿರಂತರವಾಗಿ ಎಲ್ಲ ಅಧಿಕಾರಿಗಳ ಸಹಕಾರದೊಂದಿಗೆ ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಅಥಣಿಯನ್ನು ಸುಂದರ ವನ್ನಾಗಿ ಮಾಡಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ.ಜೋಡು ಕೆರೆ ಅಭಿವೃದ್ಧಿಗೆ 25 ಕೋಟಿ, ಭಾಗೀರಥಿ ನಾಲಾ ಅಭಿವೃದ್ಧಿಗೆ 10ಕೋಟಿ ಮಂಜೂರಾಗಿಸುವ ಜೊತೆಗೆ ಕಾಮಗಾರಿ ಪ್ರಾರಂಭವಾಗಿದೆ.ಬೈ ಪಾಸ್ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ,ಅಥಣಿ ಪಟ್ಟಣಕ್ಕೆ 24/7 ಕುಡಿಯುವ ನೀರು ಪೂರೈಸಲು ಕ್ರಮ. ಪುಣೆಯ ಮಹಾನಗರ ಪಾಲಿಕೆಯಷ್ಟು ಹಳೆಯದಾದ ಅಥಣಿ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲದರ್ಜೆಗೆ ಏರಿಸಿದ ಮುಖ್ಯ ಮಂತ್ರಿಗಳಿಗೆ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಹಣೆ ಪಟ್ಟಿ ಹೋಗಲುಗೋವಿಂದ್ ರಾಜ ಸಮಿತಿ ಮೂಲಕ ವರದಿ ಸಲ್ಲಿಸಲಾಗಿದೆ. 50 ಕೋಟಿ ರೂ ವೆಚ್ಚದಲ್ಲಿ ತಂತಿ ರಹಿತ ವಿದ್ಯುತ್ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತಿ ದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪಟ್ಟಣದಲ್ಲಿ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಿದ್ದೇವೆ,ನಮ್ಮ ಪಶು ವೈದ್ಯಕಿಯ ಮಹಾವಿದ್ಯಾಲಯ ಕಟ್ಟಡ ಕೇಂದ್ರ ತಂಡದಿಂದ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ಕೃಷಿ ಕಾಲೇಜು, ಅರಟಾಳ ನಂದಗಾಂವದಲ್ಲಿ ಎರಡು ಪಶು ಆಸ್ಪತ್ರೆ ಮಂಜೂರು, ಉತ್ತಮ ಶಿಕ್ಷಣಕ್ಕೆ 9 ಶಾಲೆಗಳಿಗೆ ಕಟ್ಟಡ ಮಂಜೂರು, ಮೂರು ಕೆಪಿಎಸ್ ಶಾಲೆಗಳು ಸತ್ತಿ, ಕೋಹಳ್ಳಿ, ಕೊಕಟನೂರ್, ಏಕಕಾಲದಲ್ಲಿ ಅಥಣಿ ಪಟ್ಟಣದಲ್ಲಿ ಎರಡು ಸರ್ಕಾರಿ ಪ್ರಾಢಶಾಲೆ ಮಂಜೂರು, ಅರಟಾಳ, ಸಪ್ತಸಾಗರ, ಕೀಲಾರದೊಡ್ಡಿ ಸೇರಿದಂತೆ ಗ್ರಾಮೀಣ ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂದು ಈ ಶಾಲೆಗಳ ಸ್ಥಾಪನೆ ಮಾಡಲಾಗಿದೆ.ಅಲ್ಲದೇ ಒಂಬತ್ತು ಕೆರೆಗೆ ನೀರು ತುಂಬಿ ಸಣ್ಣ ನೀರಾವರಿ ಇಲಾಖೆ ಮಂತ್ರಿಗಳ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದ್ದೇವೆ. ಕೊಟ್ಟಲಗಿ ಅಮ್ಮಾಜೇಶ್ವರಿ, ಬಸವೆಶ್ವರ ನೀರಾವರಿ ಯೋಜನೆ ಬರುವ ಹಂಗಮಿನಲ್ಲಿ ಆರಂಭವಾಗಲಿವೆ. ಅಥಣಿ ತಾಲೂಕಿನಲ್ಲಿ 76 ಲಕ್ಷ ಟನ್ ರಾಜ್ಯದಲ್ಲಿಯೇ ಅತಿಹೆಚ್ಚು ಕಬ್ಬು ಬೆಳೆ ಬೆಳೆಯಲಾಗುತ್ತದೆ. ಜೊತೆಗೆ ಕೊಟ್ಟಲಗಿ ಅಮ್ಮಾಜೇಶ್ವರಿ, ಬಸವೆಶ್ವರ ಯೋಜನೆ ಜಾರಿ ನಂತರ ಒಂದು ಕೋಟಿ ಟನ್ ಕಬ್ಬು ಬೆಳೆ ಹೆಚ್ಚಾಗಲಿದೆ. ತಾಲೂಕಿನಲ್ಲಿ ಗುಣಮಟ್ಟದ ವಿದ್ಯುತ್ ಗಾಗಿ ನಾಲ್ಕು 110 ಕೆ ವಿ ಕೇಂದ್ರ ಸ್ಥಾಪನೆ ಮಾಡುತ್ತಿದ್ದೇವೆ. ಯಲ್ಲಡಗಿಯಲ್ಲಿ 32 ಕೋಟಿ ವೆಚ್ಚದಲ್ಲಿ ಸವದಿ, ತೆಲಸಂಗ, ಸಂಕೋನಟ್ಟಿಯಲ್ಲಿ ಕೂಡ ಈ ಕೇಂದ್ರಗಳನ್ನು ಆರಂಭಿಸಲಾಗುವುದು. ಕೋಕಟನೂರ ಯಲ್ಲಡಗಿಯಲ್ಲಿ ಸೌರ್ ವಿದ್ಯುತ್ ಕೇಂದ್ರಗಳ ಸ್ಥಾಪನೆ ವಿದ್ಯುತ್ ಸ್ವಾವಲಂಬಿ ತಾಲೂಕು ಮಾಡಲು ಪ್ರಯತ್ನ. ವಿಶಿಷ್ಟ ತಾಲೂಕಿನ ರಚನೆ ಯೋಜನೆ ನಮ್ಮ ಕನಸು, 36 ಕೋಟಿ ರೂಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಸತ್ತಿ ರಸ್ತೆಯಲ್ಲಿ ವಸತಿ ಶಾಲೆ ಸ್ಥಾಪನೆ,2 ಸಾವಿರ ಇಸ್ವಿಯಿಂದ ಪ್ರಯತ್ನ ಪಟ್ಟು ಸಂಕಿರ್ಣ ಶಾಲೆ ಯಲ್ಲಿ 60ಲಕ್ಷ ಖರ್ಚು ಮಾಡಿ ಎಲ್ಲ ಅಭಿವೃದ್ಧಿ ಮಾಡಿದ್ದೇವೆ.ಹಿಪ್ಪರಗಿ ಬ್ಯಾರೇಜ್ 22 ಗೆಟ್ ಕಿತ್ತು ಹೋಗಿ 2.5 ಟಿ ಎಂ ಸಿ ಹರಿದು ಹೋಗಿದೆ. 35 ಕೋಟಿ ವೆಚ್ಚದಲ್ಲಿ ಹೊಸದಾಗಿ ಗೆಟಗಳನ್ನು ಕೂಡಿಸಲಾಗುವುದು. ಬರುವ ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ಮಹಾರಾಷ್ಟ್ರದಿಂದ 2 ಟಿ ಎಂ ಸಿ 8 ಕೋಟಿ ನೀಡಿಯಾದರೂ ನೀರು ತರಲು ನಮ್ಮ ಜಲಸಂಪನ್ಮೂಲ ಸಚಿವ ಉಪಮುಖ್ಯಮಂತ್ರಿ ಡಿ ಕೆ ಶಿವುಕುಮಾರ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಉತ್ತಮ ಅಧಿಕಾರಿಗಳು ನಮ್ಮ ಜೊತೆಗೆ ಕೈ ಜೋಡಿಸುತ್ತಿದ್ದೂ ಕಾರ್ಯ ಪ್ರಗತಿ ಗೆ ಸಹಕಾರಿಯಾಗಿದೆ. ಹಲವಾರು ಅಭಿವೃದ್ಧಿ ಕಾರ್ಯದ ಮೂಲಕ ಅಥಣಿ ನಾಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಸಂಪೂರ್ಣ ಅಥಣಿ ತಾಲೂಕಿನ ಅಭಿವೃದ್ಧಿಗೆ ಬದ್ದವಿದ್ದು ಅಥಣಿ ಸರ್ವಾoಗಿಣ ಅಭಿವೃದ್ಧಿಗೆ ಸರ್ವನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಅಥಣಿ ತಹಸೀಲ್ದಾರ್ ಸಿದ್ರಾಯ ಭೋಸಗಿ ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ ರವರಿಂದ ಪೊಲೀಸ್ ಗೌರವ ಗೌರವವಂದನೆ ಸ್ವೀಕರಿಸಿ ದ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವದ ನುಡಿಗಳನಾಡುತ್ತ ಭಾರತ ಬಹುದೊಡ್ಡ ಗಣರಾಜ್ಯವಾಗಿದೆ. ಬಹುದೊಡ್ಡ ಸಂವಿಧಾನ ಹೊಂದಿರುವ ದೇಶ. ಇಂದು ಪೂರ್ಣ ಸ್ವರಾಜ್ಯ್ ದಿನ. ಡಾ. ಬಿ ಆರ್ ಅಂಬೇಡ್ಕರ್ ಜಗತ್ತಿನ ಮಾದರಿ ಸಂವಿಧಾನ ರಚಿಸಿದರು. ವೈವಿಧ್ಯತೆಯಲ್ಲಿ ಏಕತೆ ತೋರಿಸುವ ದಿನ. ದೇಶದ ಏಳ್ಗೆಯಲ್ಲಿ ಶ್ರಮಿಸಿದ ಶ್ರಮಿಸುತ್ತಿರುವ ಎಲ್ಲರಿಗೂ ನಮನ ಸಲ್ಲಿಸಿದರು.. ಪುರಸಭೆ ಅಧ್ಯಕ್ಷರಾದ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕoಚಿ,ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ದಾರ್ಥ ಸಿಂಗೆ ವೇದಿಕೆಯಲ್ಲಿದ್ದರು. ತಾಪ ಆಡಳಿತ ಅಧಿಕಾರಿಗಳಾದ ಬಸವರಾಜ ಹೆಗ್ಗನಾಯಕ ಮಾತನಾಡಿದರು. ಈ ವೇಳೆ ವಿವಿಧ ಶಾಲಾ ಮಕ್ಕಳಿಂದ ಗಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ,ಡಿವೈಎಸ್ಪಿ ಪ್ರಶಾಂತ ಜಿ ಮುನ್ನೊಳಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ,ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ ,ದತ್ತಾ ವಾಸ್ಟರ್, ಗ್ರೇಡ್ 2 ತಹಸಿಲ್ದಾರ ಬಿ ವೈ ಹೊಸಕೇರಿ,ಉಪ ತಹಶೀಲ್ದಾರ ಮಹಾದೇವ ಬಿರಾದಾರ, ಅಭಿಯಂತರ್ ವೀರಣ್ಣ ವಾಲಿ, ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಮಲ್ಲಿಕಾರ್ಜುನ ಮಗದುಮ್, ನಿಂಗನಗೌಡ ಬಿರಾದಾರ,ಎ ಆರ್ ಪಾಟೀಲ್ ಮಾಜಿ ಸೈನಿಕರು, ಸಿ ಪಿ ಐ ಸಂತೋಷ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ , , ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ವೆಂಕಟೇಶ್ ಕುಲಕರ್ಣಿ. ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ,ನೀರಾವರಿ ಇಲಾಖೆ ಅಭಿಯಂತ ಪ್ರವೀಣ ಹುಣಸಿಕಟ್ಟಿ ಎಂ.ಡಿ ನಾಮದಾರ, ಪುರಸಭೆಯ ಸರ್ವಸದಸ್ಯರು ತಾಲೂಕು ಪಂಚಾಯತ್ ಸದಸ್ಯರು ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಪೊಲೀಸ್ ಇಲಾಖೆ, ವಿವಿಧ ಸಂಘಟನೆಯ ಪದಾಧಿಕಾರಿಗಳು ಶಾಲಾ ಶಿಕ್ಷಕರು, ಭಾರತ ಸೇವಾ ದಳ, ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಸಾರ್ವಜನಿಕರು ಉಪಸ್ಥಿತರಿದ್ದರು.2