Shuru
Apke Nagar Ki App…
ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ
Md mansoor
ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ
More news from Karnataka and nearby areas
- KOLAR KI.AWAAZ KOUSAR NEWS1
- EID MILAD UN NABI MUBARAK FOR KOLAR PEOPLES.1501 CELEBRATE eid mubarak Kolar fous dr athif Pasha to coming in rally1
- *ಮಕ್ಕಳ ವಿದ್ಯಾಭ್ಯಾಸಕ್ಕೆ ಸೌಲಭ್ಯಗಳನ್ನು ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ನಿರಂತರ ಪ್ರೋತ್ಸಾಹ ನೀಡಲಾಗುವುದು : ಸಮಾಜ ಸೇವಕ ಲಕ್ಷ್ಮಣಗೌಡ* ಕೋಲಾರ : ಆರ್ಥಿಕವಾಗಿ ಹಿಂದುಳಿದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ನೆರವು ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ನಿರಂತರ ಪ್ರೋತ್ಸಾಹ ನೀಡಲಾಗುವುದು ಎಂದು ಸಮಾಜ ಸೇವಕ ಎಲ್.ಜಿ. ಫೌಂಡೇಶನ್ ಅಧ್ಯಕ್ಷ ದೊಡ್ಡವಲ್ಲಬ್ಬಿ ಕರುಣಾಮಯಿ ಲಕ್ಷ್ಮಣಗೌಡ ಹೇಳಿದರು. ತಾಲೂಕಿನ ದಿಂಬ ಗೇಟ್ನಲ್ಲಿರುವ ಡಾ. ರಾಧಾಕೃಷ್ಣ ವಿದ್ಯಾಭಿವೃದ್ಧಿ ಅನುದಾನಿತ ಶಾಲೆಯ ಹೊಸ ಕಟ್ಟಡದ ಎರಡನೇ ಮಹಡಿ ನಿರ್ಮಾಣಕ್ಕೆ ಅವರು ಕಾಂಕ್ರೀಟ್ ಮೋಲ್ಡ್ ವ್ಯವಸ್ಥೆ ಕಲ್ಪಿಸಿ ಮಾತನಾಡಿ ವಿದ್ಯಾರ್ಥಿಗಳು ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ವಿ. ಶಂಕರಪ್ಪ ಮಾತನಾಡಿ ಸಮಾಜ ಸೇವಕರಾದ ದೊಡ್ಡವಲ್ಲಬ್ಬಿ ಲಕ್ಷ್ಮಣಗೌಡರು ಶಾಲೆಗೆ ಅಗತ್ಯವಾಗಿದ್ದ ಸುಮಾರು 100 ಅಡಿ ಉದ್ದ ಹಾಗೂ 30 ಅಡಿ ಅಗಲದ ಎರಡನೇ ಮಹಡಿ ನಿರ್ಮಾಣಕ್ಕೆ ಅಗತ್ಯವಿರುವ ಕಾಂಕ್ರೀಟ್ ಮೋಲ್ಡ್ ವ್ಯವಸ್ಥೆಯನ್ನು ಅವರು ಕೇಳಿದ ತಕ್ಷಣ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು. ಶಾಲೆಯು ಅನುದಾನಿತವಾಗಿದ್ದು, ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಶಾಲೆಯ ಅಭಿವೃದ್ಧಿಗೆ ದಾನಿಗಳ ಸಹಕಾರ ಅತ್ಯಗತ್ಯ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಬಲವರ್ಧನೆಯಾಗಲು ದಾನಿಯ ಸಹಕಾರದ ಜೊತೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ರಾಧಾಕೃಷ್ಣ ವಿದ್ಯಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಿ.ವಿ. ರಾಮಚಂದ್ರಪ್ಪ, ಕಾರ್ಯದರ್ಶಿ ಡಿ.ಆರ್. ವಿವೇಕ್, ಸದಸ್ಯ ಹಾಗೂ ವಕೀಲ ಸುಧಾಕರ್, ಮುಖ್ಯ ಶಿಕ್ಷಕ ಬಿ. ರವಿ, ಸಹ ಶಿಕ್ಷಕರಾದ ಬಸವರಾಜ್, ಪ್ರಮೋದ್ ರೆಡ್ಡಿ, ಬಿ.ಎಂ. ಮಂಜುನಾಥ್ ಸೇರಿದಂತೆ ಶಾಲೆಯ ಸಿಬ್ಬಂದಿ ಇದ್ದರು.3
- ಕೆಲವು ಶಿಕ್ಷಕರ ನಡವಳಿಕೆ ಗೂಂಡಾಗಳಿಗಿಂತ ಕಡೆ; ಅಧಿವೇಶನ ನಡೆದಿದ್ದರೆ ಶಿಕ್ಷಕರ ಬಟ್ಟೆ ಬಿಚ್ಚುತ್ತಿದ್ದೆ: ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಆಕ್ರೋಶ ಮುಳಬಾಗಿಲು: ತಾಲ್ಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಬೆರೆಸಿ, ಗುಂಪುಗಾರಿಕೆ ಮಾಡುತ್ತಿರುವ ಕೆಲವು ಶಿಕ್ಷಕರ ವಿರುದ್ಧ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ತೀವ್ರ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದಾರೆ. "ವಿಧಾನಸಭಾ ಅಧಿವೇಶನ ನಡೆದಿದ್ದರೆ ಅಂತಹ ಶಿಕ್ಷಕರ ಬಟ್ಟೆ ಬಿಚ್ಚುವ ಕೆಲಸ ಮಾಡುತ್ತಿದ್ದೆ" ಎಂದು ಗುಡುಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಶಿಕ್ಷಕರ ನಡುವೆ ವಿಷಬೀಜ ಬಿತ್ತಿ ಗೂಂಡಾಗಳಂತೆ ವರ್ತಿಸುತ್ತಿರುವ ಕೆಲವರಿಂದ ಇಡೀ ಶಿಕ್ಷಕ ಸಮುದಾಯ ಹಾಗೂ ತಾಲ್ಲೂಕು ಆಡಳಿತಕ್ಕೆ ಅಗೌರವ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 'ಅಭಿವೃದ್ಧಿಗೆ ಎಲ್ಲರ ಜತೆಗೂ ಸೌಹಾರ್ದತೆ': "ಕ್ಷೇತ್ರದ ಅಭಿವೃದ್ಧಿಗಾಗಿ ನಾನು ವಿರೋಧ ಪಕ್ಷದ ನಾಯಕ ಜಿ. ಕೊತ್ತೂರು ಮಂಜುನಾಥ್ ಹಾಗೂ ನನ್ನ ವಿರುದ್ಧ ಸ್ಪರ್ಧಿಸಿ ಸೋತ ಆದಿನಾರಾಯಣ ಅವರೊಂದಿಗೆ ಮುಕ್ತವಾಗಿ ಪ್ರೀತಿಯಿಂದ ಮಾತನಾಡುತ್ತೇನೆ. ಆದರೆ ತಾಲ್ಲೂಕಿನ ಕೆಲ ಶಿಕ್ಷಕರು ಮಾತ್ರ ಎರಡು ಗುಂಪುಗಳಾಗಿ ಹೊಲಸು ರಾಜಕೀಯ ಮಾಡುತ್ತಿದ್ದಾರೆ. ಇವರ ವರ್ತನೆಯಿಂದ ನನಗೆ ತೀವ್ರ ನೋವುಂಟಾಗಿದೆ," ಎಂದರು. 'ಜಾತಿವಾದಿ ಪಟ್ಟ ಕಟ್ಟಿದರು': "ರಾಜ್ಯದ 224 ಕ್ಷೇತ್ರಗಳಲ್ಲಿ ನಡೆಯದ ಸಂಧಾನವನ್ನು ನಾನು ಮಾಡಿದ್ದೆ. ಶಿಕ್ಷಕರ ಸಂಘಟನೆಯಲ್ಲಿ ಚುನಾವಣೆ ನಡೆದು ಭಿನ್ನಾಭಿಪ್ರಾಯ ಮೂಡಬಾರದು ಎಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲರ ಕೈ-ಕಾಲು ಹಿಡಿದು ಸ್ಥಾನ ಹಂಚಿಕೆ ಮಾಡಿದ್ದೆ. ಆದರೆ, ಆ ಶಿಕ್ಷಕರು ನನ್ನನ್ನೇ 'ಜಾತಿವಾದಿ' ಎಂದು ಬಿರುದು ಕೊಟ್ಟರು. ಬಿಇಒ (BEO) ಹುದ್ದೆಗಳ ನಿಯೋಜನೆಯಲ್ಲೂ ಅರ್ಹತೆ ಮತ್ತು ಹಿರಿತನ ನೋಡಿ ಜವಾಬ್ದಾರಿ ನೀಡಿದರೆ, ಅದಕ್ಕೂ ಜಾತಿಯ ಲೇಪ ಹಚ್ಚಿ ಅವಮಾನ ಮಾಡಿದರು," ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. 'ಹಾಜರಾತಿ ತಂಬ್ ಕೊಟ್ಟು ಹೋಗುವ ಶಿಕ್ಷಕರ ಮಾಹಿತಿ ನನಗಿದೆ': "ತಾಲ್ಲೂಕಿಗೆ ಬಂದ ಅಧಿಕಾರಿಗಳನ್ನು ಹೆದರಿಸಲಾಗುತ್ತಿದೆ. ಶಿಕ್ಷಕರು ಬೆಳಗ್ಗೆ ಬಂದು ಕೇವಲ ಬಯೋಮೆಟ್ರಿಕ್ ತಂಬ್ (Thumb) ಕೊಟ್ಟು ಹೊರಟುಹೋಗಿ, ಮತ್ತೆ ಸಂಜೆ ಬಂದು ತಂಬ್ ನೀಡುತ್ತಿದ್ದಾರೆ. ಯಾವ ಶಿಕ್ಷಕರು ಎಲ್ಲೆಲ್ಲಿ ಹೋಗಿ ಏನು ಮಾಡುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನಗೂ ಹಾಗೂ ಬಿಇಒ ಅವರಿಗೂ ತಿಳಿದಿದೆ. ಶಿಕ್ಷಕರ ದಿನಾಚರಣೆ ಅಥವಾ ಯಾವುದೇ ಕಾರ್ಯಕ್ರಮವಿರಲಿ, ತಾರತಮ್ಯ ಮಾಡದೆ ಶಿಕ್ಷಕರ ಗೌರವ ಕಾಪಾಡಲು ತಾಲ್ಲೂಕು ಆಡಳಿತ ಸದಾ ಬದ್ಧವಾಗಿದೆ. ಆದರೆ ಶಾಸಕರಿಗೆ ಅವಮಾನ ಮಾಡುವ, ರಾಜಕೀಯ ಮಾಡುವ ಗೂಂಡಾ ಪ್ರವೃತ್ತಿಯನ್ನು ಸಹಿಸುವುದಿಲ್ಲ," ಎಂದು ಎಚ್ಚರಿಕೆ ನೀಡಿದರು1
- ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಚಿವ ನಾಗೇಂದ್ರ ಬಿಜೆಪಿ ಪಾದಯಾತ್ರೆ ವಿಚಾರ. ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ. ದೇವನಹಳ್ಲಿ ಏರ್ಪೋರ್ಟ್. ಬಿಜೆಪಿ ಪಾದಯಾತ್ರೆ ವಿಚಾರ. ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ. ಇದೆಲ್ಲಾ ಒಂದು ಕುತಂತ್ರದಿಂದ ಮಾಡಿರುವತಂದ್ದು. ನಾನು ದಲಿತನೇ ನಾನು. ಈ ಮನುವಾದಿಗಳ ಹತ್ತಿರ ಜಗಳ ಆಡಬೇಕು ಅಂದರೆ ದಲಿತರ ಪರವಾಗಿ ಇವತ್ತಲ್ಲಾ ಅನಾದಿಕಾಲದಿಂದಲೂ ಬಂದಿದೆ. ಏರ್ಪೋರ್ಟ್ ನಲ್ಲಿ ಸಚಿವ ನಾಗೇಂದ್ರ ಹೇಳಿಕೆ2
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಅಧಿಕಾರಿಗಳು ಜಮೀನು ಮಂಜೂರು ಮಾಡಿಲ್ಲ ಮಾಜಿ ಸೈನಿಕ ಶಿವಾನಂದರೆಡ್ಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ1
- ನಂಜನಗೂಡು :ತಂಗಿ ಚುಡಾಯಿಸಿದ ಪುಡಾರಿ ಯುವಕ. ಪ್ರಶ್ನಿಸಿದ ಅಣ್ಣನಿಗೆ ಹಿಗ್ಗಾಮುಗ್ಗಾ ಥಳಿತ. ನೊಂದ ಯುವಕ ಆ*ತ್ಮಹ*ತ್ಯೆ.!2