Shuru
Apke Nagar Ki App…
ರಸ್ತೆಯಲ್ಲಿ ಬಿದ್ದ ಮಣ್ಣು ತೆರವಿಗಾಗಿ ಕಿರಿಕ್...ಮೂವರ ಮೇಲೆ ಹಲ್ಲೆ...ದಂಪತಿ ವಿರುದ್ದ FIR... ಮೈಸೂರು; ರಸ್ತೆಯಲ್ಲಿ ಬಿದ್ದ ಮಣ್ಣನ್ನ ತೇರುವುಗೊಳಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡ ಘಟನೆ ಹುಣಸೂರಿನಲ್ಲಿ ನಡೆದಿದೆ.ಈ ಸಂಬಂಧ ಹಲ್ಲೆ ನಡೆಸಿದ ದಂಪತಿ ವಿರುದ್ದ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಣಸೂರು ಟೌನ್ ಹತ್ತಿಮರ ಬೀದಿ ನಿವಾಸಿಗಳಾದ ಸಾಕಮ್ಮ,ರಮೇಶ್ ನಾಯಕ ಹಾಗೂ ಶ್ರೀನಿವಾಸ್ ಹಲ್ಲೆಗೆ ಒಳಗಾದವರು.ಹಾಲಿನ ಡೈರಿ ಸೆಕ್ರೆಟರಿ ವಿದ್ಯಾ ಹಾಗೂ ಪತಿ ಶಿವಕುಮಾರಗ ವಿರುದ್ದ ಪ್ರಕರಣ ದಾಖಲಾಗಿದೆ. ಸಾಕಮ್ಮ ರವರಿಗೆ ಸೇರಿದ ಖಾಲಿ ಸೈಟಿನಲ್ಲಿ ಮಣ್ಣು ಸುರಿಯಲಾಗಿತ್ತು.ಇದರಲ್ಲಿ ಸ್ವಲ್ಪ ಮಣ್ಣು ರಸ್ತೆಯಲ್ಲಿ ಹರಡಿತ್ತು.ಇದನ್ನ ತೆರವುಗೊಳಿಸುವಂತೆ ಶಿವಕುಮಾರ್ ಹಾಗೂ ವಿದ್ಯ ಕಿರಿಕ್ ತೆಗೆದಿದ್ದರು.ಈ ಸಂಬಂಧ ಶುರುವಾದ ಗಲಾಟೆಯಲ್ಲಿ ಸಾಕಮ್ಮ,ಶ್ರೀನಿವಾಸ ಹಾಗೂ ರಮೇಶ್ ನಾಯಕ ಮೇಲೆ ಹಲ್ಲೆ ನಡೆದಿದೆ.ಶಿವಕುಮಾರ್ ಹಾಗೂ ವಿದ್ಯಾ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ...
Mysore update
ರಸ್ತೆಯಲ್ಲಿ ಬಿದ್ದ ಮಣ್ಣು ತೆರವಿಗಾಗಿ ಕಿರಿಕ್...ಮೂವರ ಮೇಲೆ ಹಲ್ಲೆ...ದಂಪತಿ ವಿರುದ್ದ FIR... ಮೈಸೂರು; ರಸ್ತೆಯಲ್ಲಿ ಬಿದ್ದ ಮಣ್ಣನ್ನ ತೇರುವುಗೊಳಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡ ಘಟನೆ ಹುಣಸೂರಿನಲ್ಲಿ ನಡೆದಿದೆ.ಈ ಸಂಬಂಧ ಹಲ್ಲೆ ನಡೆಸಿದ ದಂಪತಿ ವಿರುದ್ದ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಣಸೂರು ಟೌನ್ ಹತ್ತಿಮರ ಬೀದಿ ನಿವಾಸಿಗಳಾದ ಸಾಕಮ್ಮ,ರಮೇಶ್ ನಾಯಕ ಹಾಗೂ ಶ್ರೀನಿವಾಸ್ ಹಲ್ಲೆಗೆ ಒಳಗಾದವರು.ಹಾಲಿನ ಡೈರಿ ಸೆಕ್ರೆಟರಿ ವಿದ್ಯಾ ಹಾಗೂ ಪತಿ ಶಿವಕುಮಾರಗ ವಿರುದ್ದ ಪ್ರಕರಣ ದಾಖಲಾಗಿದೆ. ಸಾಕಮ್ಮ ರವರಿಗೆ ಸೇರಿದ ಖಾಲಿ ಸೈಟಿನಲ್ಲಿ ಮಣ್ಣು ಸುರಿಯಲಾಗಿತ್ತು.ಇದರಲ್ಲಿ ಸ್ವಲ್ಪ ಮಣ್ಣು ರಸ್ತೆಯಲ್ಲಿ ಹರಡಿತ್ತು.ಇದನ್ನ ತೆರವುಗೊಳಿಸುವಂತೆ ಶಿವಕುಮಾರ್ ಹಾಗೂ ವಿದ್ಯ ಕಿರಿಕ್ ತೆಗೆದಿದ್ದರು.ಈ ಸಂಬಂಧ ಶುರುವಾದ ಗಲಾಟೆಯಲ್ಲಿ ಸಾಕಮ್ಮ,ಶ್ರೀನಿವಾಸ ಹಾಗೂ ರಮೇಶ್ ನಾಯಕ ಮೇಲೆ ಹಲ್ಲೆ ನಡೆದಿದೆ.ಶಿವಕುಮಾರ್ ಹಾಗೂ ವಿದ್ಯಾ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ...
More news from ಕರ್ನಾಟಕ and nearby areas
- *ಭಾರತ ನಲ್ಲಿ ವೈರಲ್*1
- KRS PARTY & KANNADA RAKSHANA VEDIKE LEADERS SUBMITTED A MEMORANDUM AT DC OFFICE REGARDING THE UN LIMITED CHILDREN'S DEATHS AT MYSORE CHELUVEMBA HOSPITAL1
- ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ರಾಜು ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ಫಸಲು ನೆಲ ಕಚ್ಚಿದೆ. ಕಾಂಚಳ್ಳಿ ಗ್ರಾಮದ ಸರ್ವೇ ನಂ 764 ರಾಜು ಬಿನ್ ಮುತ್ತೇಗೌಡ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ಫಸಲು ನೆನ್ನೆ ಸುರಿದ ಮಳೆ,ಗಾಳಿಗೆ ನೆಲೆ ಕಚ್ಚಿದೆ.ಬಾಳೆ ಗಿಡಗಳು ಬಿದ್ದಾಗ ರೈತನ ಒಂದು ವರ್ಷದ ಶ್ರಮ ಕ್ಷಣಾರ್ಧದಲ್ಲಿ ಮಣ್ಣು ಪಾಲಾಗುತ್ತದೆ. ಸಾಲ ಮಾಡಿ ಬೆಳೆ ಬೆಳೆದ ರೈತರು ಫಸಲು ನಾಶವಾದಾಗ ಸಾಲ ತೀರಿಸಲಾಗದೆ ಕಂಗಾಲಾಗುತ್ತಾರೆ.ಇದರಿಂದ ರೈತ ಸಂಕಷ್ಟಕಿಡಾದ್ದಾರೆ.ಸರ್ಕಾರ ಸೂಕ್ತವಾದ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.2
- ಮಳವಳ್ಳಿ ಪಟ್ಟಣದ ಉದ್ಯಮಿಗಳಾದ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ರವರು ನೂತನವಾಗಿ ನಿರ್ಮಿಸಿರುವ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಶ್ರೀಗಳ ಆಗಮನ ಅಪಾರ ಭಕ್ತರಿಂದ ಭಕ್ತಿ ಸಮರ್ಪಣೆ ಮಳವಳ್ಳಿ ಪಟ್ಟಣದ ಎನ್ಎಸ್ ಬಡಾವಣೆಯಲ್ಲಿ ಶ್ರೀಮತಿ ಗೀತಾ ಮತ್ತು ಎಸ್ ಬಿ ಶಿವಸ್ವಾಮಿ ರವರ ಸಹೋದರ ಉದ್ಯಮಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ದಂಪತಿಗಳು ನೂತನವಾಗಿ ನಿರ್ಮಿಸಿರುವ ಜಯಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸಿ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಆಗಮಿಸಿ ಕುಟುಂಬಕ್ಕೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ಕುಟುಂಬಸ್ಥರಿಂದ ಅರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪರಮಪೂಜ್ಯರಿಗೆ ದಿವ್ಯ ಪಾದಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು ಈ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನ ಹರ ಗುರು ಚರಮೂರ್ತಿಗಳು ತಾಲೂಕಿನ ಉದ್ಯಮಿಗಳು ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಆಗಮಿಸಿ ನೂತನ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ದಂಪತಿಗಳಿಗೆ ಆಶೀರ್ವದಿಸಿ ಶುಭ ಕೋರಿದರು1
- ತಾಳಬೆಟ್ಟದ ಬಳಿ ಭೀಕರ ಬಸ್ ಅಪಘಾತ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - ಆಂಬುಲೆನ್ಸ್ ಕೊರತೆ ವಿರುದ್ಧ ಸಾರ್ವಜನಿಕರ ಆಕ್ರೋಶ ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯ ತಾಳಬೆಟ್ಟದ ಸಮೀಪ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಹತ್ತಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಘಟನೆಯ ವಿವರ: ಮಲೆ ಮಹದೇಶ್ವರ ಬೆಟ್ಟದಿಂದ ಹೊರಟಿದ್ದ ಸಾರಿಗೆ ಬಸ್, ತಾಳಬೆಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದು, ಹಲವರಿಗೆ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌಲಭ್ಯಗಳ ಕೊರತೆಗೆ ಆಕ್ರೋಶ: ಘಟನೆಯ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಾಗದ ಕಾರಣ ಸಾರ್ವಜನಿಕರು ಹಾಗೂ ಗಾಯಾಳುಗಳ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಷ್ಟು ಪ್ರಸಿದ್ಧ ಯಾತ್ರಾ ಸ್ಥಳಕ್ಕೆ ಹೋಗುವ ಮುಖ್ಯರಸ್ತೆಯಲ್ಲೇ ತುರ್ತು ವೈದ್ಯಕೀಯ ಸೇವೆ ಇಲ್ಲದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ" ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ವಿಜಯಸೇನೆ ಸಂಘಟನೆಯ ಎಚ್ಚರಿಕೆ: ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನಮ್ಮ ಕನ್ನಡಿಗರ ವಿಜಯಸೇನೆ ಸಂಘಟನೆಯು, ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಆಂಬುಲೆನ್ಸ್ ವ್ಯವಸ್ಥೆ ಇಲ್ಲದಿರುವುದನ್ನು ತೀವ್ರವಾಗಿ ಖಂಡಿಸಿದೆ. "ಕ್ಷೇತ್ರದ ಭಕ್ತರ ಮತ್ತು ಸಾರ್ವಜನಿಕರ ಜೀವದ ಜೊತೆ ಸರ್ಕಾರ ಆಟವಾಡುತ್ತಿದೆ. ಕೂಡಲೇ ಈ ಭಾಗದಲ್ಲಿ ಸುಸಜ್ಜಿತ ಆಂಬುಲೆನ್ಸ್ ಮತ್ತು ವೈದ್ಯಕೀಯ ಘಟಕಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು," ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.1
- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾರ್ಗದ ತಾಳುಬೆಟ್ಟದ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶುಕ್ರವಾರ ನಡೆದಿದೆ. ಮಾದಪ್ಪನ ಬೆಟ್ಟದಿಂದ ವಾಪಾಸ್ ಆಗುತ್ತಿದ್ದ ಬಸ್, ತಾಳುಬೆಟ್ಟ ಸಮೀಪದ ಆಲದ ಮರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಮಾದಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದರು. ತಿರುವು ಪ್ರದೇಶದಲ್ಲಿ ಸಂಭವಿಸಿದ ಈ ಅವಘಡದಿಂದ ಚಾಲಕ ನಿರ್ವಾಹಕ ಸೇರಿ ಸುಮಾರು 30ಂಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು: ಮಹಿಳೆ ನಿರ್ವಾಹಕರಾದ. ಪದ್ಮಾವತಿಗೆ ತಲೆಗೆ ಪೆಟ್ಟಾಗಿದೆ ಪ್ರಯಾಣಿಕರಾದ ಹೆಚ್ ಡಿಕೋಟೆ ಶಿವನಂಜ ಶ್ಯೆಲಜಾ ಕಿರಗಸೂರು ಮೇಘನಾ ರಾಜಶೇಖರ್ ಮೈಸೂರು ಮೂಲದ ದ್ರಾಕ್ಷಾಯಿಣಿ ಬಸವರಾಜು ಮಧುವನಳ್ಳಿ ಗ್ರಾಮದ ದ್ರಾಕ್ಷಾಯಿಣಿ ಸಿದ್ದಯ್ಯನಪುರದ ಸುಂದ್ರಮ್ಮ ಸೇರಿದಂತೆ ಹಲವರಿಗೆ ಹೆಚ್ಚಾಗಿ ಪೆಟ್ಟಾಗಿದ್ದರೆ 30ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದೆ ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದ್ದರೂ, ಆರಂಭದಲ್ಲಿ ಆಂಬುಲೆನ್ಸ್ ಸೌಲಭ್ಯ ಲಭ್ಯವಾಗದೆ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.ನಂತರ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಪ್ರಯಾಣಿಕರು ಬಸ್ ಚಾಲಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಹನೂರು ಆಸ್ಪತ್ರೆಗೆ ತಹೀಸಿಲ್ದಾರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಪರಿಶೀಲಿಸಿದರು ಈ ಸಂಬಂಧ ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- ನಂಜನಗೂಡು: ರಾತ್ರಿ ಸುರಿದ ಗಾಳಿ ಮಳೆಗೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹಾಕಿದ್ದ ಶಾಮಿಯಾನ ನೆಲಕಚ್ಚಿದೆ. ಬಿಸಿಲು ಹೆಚ್ಚಾಗಿದ್ದರಿಂದ ಭಕ್ತರಿಗೆ ನೆರಳಿಗಾಗಿ ಹಾಕಿದ್ದ ಶಾಮಿಯಾನ ಹಾಕಲಾಗಿತ್ತು. ದೇವಸ್ಥಾನದ ಒಳಗಡೆ ತೆರಳಲು ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ಭಕ್ತರಿಗೆ ನೆರಳು ನೀಡಲು ಶಾಮಿಯಾನ ಅಳವಡಿಸಲಾಗಿತ್ತು. ತಡರಾತ್ರಿ ಸುರಿದ ಗಾಳಿ ಮಳೆಗೆ ಶಾಮಿಯಾನ ನೆಲಕ್ಕುರುಳಿದೆ. ಇದೀಗ ಶಾಮಿಯಾನವನ್ನು ಸರಿಪಡಿಸಲು ಸಿಬ್ಬಂದಿಗಳು ನಿರತರಾಗಿದ್ದಾರೆ.3
- *ಭಾರತ ನಲ್ಲಿ ವೈರಲ್*1
- KRS PARTY & KANNADA RAKSHANA VEDIKE LEADERS SUBMITTED A MEMORANDUM AT DC OFFICE REGARDING THE UN LIMITED CHILDREN'S DEATHS AT MYSORE CHELUVEMBA HOSPITAL1