ಸಚಿವ ಸಂಪುಟ ವಿಸ್ತರಣೆ: ಎಂ.ಬಿ. ಪಾಟೀಲ್ ವಿರುದ್ಧ 'ಬೆಡ್ರೂಮ್ ಬಾಡಿಗೆ' ಕುರಿತು ಹೇಳಿಕೆ ನೀಡಿದ ಶಾಸಕ ಯತ್ನಾಳ ಕಾಂಗ್ರೆಸ್ ಸಚಿವ ಸಂಪುಟ 'ಗುಂಡಾಗಳ ಗೂಡು'; ರಾಜೀನಾಮೆ ನಾಟಕ' – ಯತ್ನಾಳ್ ವಾಗ್ದಾಳಿ" ರಾಜ್ಯ ಸಚಿವ ಸಂಪುಟ ವಿಸ್ತರಣೆ, ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆಳವಣಿಗೆ ಹಾಗೂ ವಿಜಯಪುರ ಜಿಲ್ಲೆಗೆ ಎರಡನೇ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಸಂಪುಟವನ್ನು ಟೀಕಿಸಿದ ಯತ್ನಾಳ್, "ಇದು ಗುಂಡಾಗಳ ಗೂಡಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖರು ಪ್ರಾಮಾಣಿಕರನ್ನು ಕಡೆಗಣಿಸಿ ಕ್ರಿಮಿನಲ್ ಹಿನ್ನೆಲೆಯವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ರಾಜ್ಯಕ್ಕೆ ತಪ್ಪು ಸಂದೇಶ ನೀಡುವ ಸಚಿವ ಸಂಪುಟವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಭ್ರಷ್ಟಾಚಾರ ಹಾಗೂ ಗುಂಡಾಗಿರಿ ಪ್ರಕರಣಗಳಲ್ಲಿ ಆರೋಪ ಎದುರಿಸಿದವರೇ ಇದ್ದಾರೆ” ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ರಾಜೀನಾಮೆ ಕೊಡುವುದೆಲ್ಲ ನಾಟಕ. ಶಾಸಕ ಸ್ಥಾನ ಸುಲಭವಾಗಿ ಸಿಗುವುದಿಲ್ಲ. ಎರಡು ದಿನಗಳಲ್ಲಿ ಹೈಕಮಾಂಡ್ ಮನವೊಲಿಸಿ ಎಲ್ಲರೂ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಒಬ್ಬರೂ ರಾಜೀನಾಮೆ ಕೊಡುವುದಿಲ್ಲ, ಯಾರಿಗೂ ಆ ತಾಕತ್ತು ಇಲ್ಲ” ಎಂದು ಹೇಳಿದರು. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ತಪ್ಪಿದ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲರ ಕುರಿತು ಮಾತನಾಡಿದ ಯತ್ನಾಳ್, "ಎಂ.ಬಿ. ಪಾಟೀಲ ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕರು. ಅವರು ಹೈಕಮಾಂಡ್ನಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಸಚಿವರಾಗಿದ್ದಾರೆ. ಶಿವಾನಂದ ಪಾಟೀಲ ಹಾಗೂ ಯಶವಂತ ರಾಯಗೌಡ ಪಾಟೀಲರಿಗೂ ಸಚಿವರಾಗುವ ಅವಕಾಶವಿದ್ದರೂ ಅದು ಸಾಧ್ಯವಾಗಿಲ್ಲ” ಎಂದು ಹೇಳಿದರು. ಬಿಜೆಪಿಯ ಹಿಂದಿನ ಸಚಿವ ಸಂಪುಟ ರಚನೆ ಕುರಿತು ಕೂಡ ಯತ್ನಾಳ್ ಆರೋಪ ಮಾಡಿದರು. "ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬದಲಾಗಿತ್ತು. ರಾತ್ರೋರಾತ್ರಿ ಹಣದ ಪ್ರಭಾವದಿಂದ ಕೆಲವರು ಸಚಿವರಾಗಿದ್ದರು. ಯಡಿಯೂರಪ್ಪ ಅವಧಿಯಲ್ಲೂ ಹಣದ ವ್ಯವಹಾರ ನಡೆದಿದೆ" ಎಂದು ದೂರಿದರು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿದ ಅವರು, “ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ಇದ್ದರೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕು” ಎಂದರು.
ಸಚಿವ ಸಂಪುಟ ವಿಸ್ತರಣೆ: ಎಂ.ಬಿ. ಪಾಟೀಲ್ ವಿರುದ್ಧ 'ಬೆಡ್ರೂಮ್ ಬಾಡಿಗೆ' ಕುರಿತು ಹೇಳಿಕೆ ನೀಡಿದ ಶಾಸಕ ಯತ್ನಾಳ ಕಾಂಗ್ರೆಸ್ ಸಚಿವ ಸಂಪುಟ 'ಗುಂಡಾಗಳ ಗೂಡು'; ರಾಜೀನಾಮೆ ನಾಟಕ' – ಯತ್ನಾಳ್ ವಾಗ್ದಾಳಿ" ರಾಜ್ಯ ಸಚಿವ ಸಂಪುಟ ವಿಸ್ತರಣೆ, ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆಳವಣಿಗೆ ಹಾಗೂ ವಿಜಯಪುರ ಜಿಲ್ಲೆಗೆ ಎರಡನೇ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಸಂಪುಟವನ್ನು ಟೀಕಿಸಿದ ಯತ್ನಾಳ್, "ಇದು ಗುಂಡಾಗಳ ಗೂಡಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖರು ಪ್ರಾಮಾಣಿಕರನ್ನು ಕಡೆಗಣಿಸಿ ಕ್ರಿಮಿನಲ್ ಹಿನ್ನೆಲೆಯವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ರಾಜ್ಯಕ್ಕೆ ತಪ್ಪು ಸಂದೇಶ ನೀಡುವ ಸಚಿವ ಸಂಪುಟವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಭ್ರಷ್ಟಾಚಾರ ಹಾಗೂ ಗುಂಡಾಗಿರಿ ಪ್ರಕರಣಗಳಲ್ಲಿ ಆರೋಪ ಎದುರಿಸಿದವರೇ ಇದ್ದಾರೆ” ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ರಾಜೀನಾಮೆ ಕೊಡುವುದೆಲ್ಲ ನಾಟಕ. ಶಾಸಕ ಸ್ಥಾನ ಸುಲಭವಾಗಿ ಸಿಗುವುದಿಲ್ಲ. ಎರಡು ದಿನಗಳಲ್ಲಿ ಹೈಕಮಾಂಡ್ ಮನವೊಲಿಸಿ ಎಲ್ಲರೂ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಒಬ್ಬರೂ ರಾಜೀನಾಮೆ ಕೊಡುವುದಿಲ್ಲ, ಯಾರಿಗೂ ಆ ತಾಕತ್ತು ಇಲ್ಲ” ಎಂದು ಹೇಳಿದರು. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ತಪ್ಪಿದ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲರ ಕುರಿತು ಮಾತನಾಡಿದ ಯತ್ನಾಳ್, "ಎಂ.ಬಿ. ಪಾಟೀಲ ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕರು. ಅವರು ಹೈಕಮಾಂಡ್ನಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಸಚಿವರಾಗಿದ್ದಾರೆ. ಶಿವಾನಂದ ಪಾಟೀಲ ಹಾಗೂ ಯಶವಂತ ರಾಯಗೌಡ ಪಾಟೀಲರಿಗೂ ಸಚಿವರಾಗುವ ಅವಕಾಶವಿದ್ದರೂ ಅದು ಸಾಧ್ಯವಾಗಿಲ್ಲ” ಎಂದು ಹೇಳಿದರು. ಬಿಜೆಪಿಯ ಹಿಂದಿನ ಸಚಿವ ಸಂಪುಟ ರಚನೆ ಕುರಿತು ಕೂಡ ಯತ್ನಾಳ್ ಆರೋಪ ಮಾಡಿದರು. "ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬದಲಾಗಿತ್ತು. ರಾತ್ರೋರಾತ್ರಿ ಹಣದ ಪ್ರಭಾವದಿಂದ ಕೆಲವರು ಸಚಿವರಾಗಿದ್ದರು. ಯಡಿಯೂರಪ್ಪ ಅವಧಿಯಲ್ಲೂ ಹಣದ ವ್ಯವಹಾರ ನಡೆದಿದೆ" ಎಂದು ದೂರಿದರು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿದ ಅವರು, “ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ಇದ್ದರೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕು” ಎಂದರು.
- *ಗ್ರಾಮೀಣ ಪ್ರದೇಶಗಳ ಕೋಳಿ ಆಟದ ದೃಶ್ಯ* #KoliAata #riyagowda @riyagowda #riyamshee_yogeshagowda #vajrakattepalya ಕೋಳಿಗಳೊಂದಿಗೆ ಮಕ್ಕಳ ಆಟ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಮತ್ತು ನೈಸರ್ಗಿಕವಾದ ದೃಶ್ಯವಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲಿ *ಗ್ರಾಮೀಣ ಪ್ರದೇಶಗಳ ಕೋಳಿ ಆಟದ ದೃಶ್ಯ* #KoliAata #riyagowda @riyagowda #riyamshee_yogeshagowda #vajrakattepalya ಕೋಳಿಗಳೊಂದಿಗೆ ಮಕ್ಕಳ ಆಟ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಮತ್ತು ನೈಸರ್ಗಿಕವಾದ ದೃಶ್ಯವಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲಿ1
- ಮಾಜಿ ಸಚಿವ ಆರ್.ಬಿ. ತಿಮ್ಮಾಪುರ–ಎಸ್.ಜಿ. ನಂಜನಮಠ ಅವರದ್ದೆನ್ನಲಾದ ಆಡಿಯೋ ವೈರಲ್ ! ಇಳಕಲ್ನಲ್ಲಿ ನೂತನ ಸಚಿವ ವಿಜಯಾನಂದ ಕಾಶಪ್ಪನವರ ತಿರುಗೇಟು1
- ಬೀಳಗಿಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಘಟಕದ ವತಿಯಿಂದ ಪ್ರತಿಕಾ ದಿನಾಚರಣೆ ಬೀಳಗಿ:ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷ ಡಾ.ಸೈಯದ ಹೆಚ್.ನದಾಫ (ಶಿಲೇದಾರ) ಅವರ ನೇತೃತ್ವದಲ್ಲಿ ಜಿಲ್ಲಾ ಘಟಕ ಬಾಗಲಕೋಟೆಇವರಿಂದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಸನ್ಮಾನ ಸಮಾರಂಭ, ಪಟ್ಟಣದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆ,ಸಾನಿಧ್ಯವನ್ನು ಬೀಳಗಿ-ಹಲಗಲಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಜೀ ವಹಿಸಿದರು.1
- ಸಹಜ ಹೆರಿಗೆ ಮಾಡಿಸುವ ಮೂಲಕ ಉತ್ತರ ಕರ್ನಾಟಕದ ಭಾಗದ ಬಡ ರೋಗಿಗಳ ಆಶಾಕಿರಣ ವಾಗಿರುವ ವಿಜಯಪುರದ ಜಿಲ್ಲಾ ಆಸ್ಪತ್ರೆಯ ರಾಜ್ಯದಲ್ಲಿ ಎರಡನೇ ಸರ್ಕಾರಿ ಆಸ್ಪತ್ರೆಯ ರಾಜ್ಯದಲ್ಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ1
- ಸಿಆರ್ಪಿಎಫ್ ಕಮಾಂಡೆಂಟ್ ಎಂದು ವಂಚನೆ; ಪತ್ರಕರ್ತರಿಗೆ 41,500 ರೂ ಪಂಗನಾಮ ಮುಧೋಳ: ಸಿಆರ್ಪಿಎಫ್ ಕಮಾಂಡೆಂಟ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು, ವರ್ಗಾವಣೆಯ ನೆಪದಲ್ಲಿ ಮನೆಯ ಗೃಹೋಪಯೋಗಿ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಪತ್ರಕರ್ತರೊಬ್ಬರಿಗೆ 41,500 ರೂವಂಚಿಸಿರುವ ವಂಚಕನ ಕರಾಳ ಮುಖ ಮುಧೋಳ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ. ಸಿಆರ್ಪಿಎಫ್ ಕಮಾಂಡೆಂಟ್ ಎಂದು ವಂಚನೆ; ಪತ್ರಕರ್ತರಿಗೆ 41,500 ರೂ ಪಂಗನಾಮ ಮುಧೋಳ: ಸಿಆರ್ಪಿಎಫ್ ಕಮಾಂಡೆಂಟ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು, ವರ್ಗಾವಣೆಯ ನೆಪದಲ್ಲಿ ಮನೆಯ ಗೃಹೋಪಯೋಗಿ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಪತ್ರಕರ್ತರೊಬ್ಬರಿಗೆ 41,500 ರೂವಂಚಿಸಿರುವ ವಂಚಕನ ಕರಾಳ ಮುಖ ಮುಧೋಳ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ.1
- ಸುತಗಟ್ಟಿ ಗ್ರಾಮಸ್ಥರಲ್ಲಿ ನೆಮ್ಮದಿ: ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ, ಬೋನಿಗೆ ಬಿದ್ದ ಚಿರತೆ ಬೆಳಗಾವಿ:ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಸುತಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯನ್ನು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿ ಬೋನಿನಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಕಾಕತಿ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಸುತಗಟ್ಟಿ ಗ್ರಾಮದ ಅರಣ್ಯ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿರತೆಯೊಂದು ಸಂಚರಿಸುತ್ತಿರುವುದು ಗ್ರಾಮಸ್ಥರು ಹಾಗೂ ವಾಹನ ಸವಾರರ ಕಣ್ಣಿಗೆ ಬಿದ್ದಿತ್ತು. ವಾಹನ ಸವಾರರೊಬ್ಬರು ಚಿರತೆ ಸಂಚರಿಸುವ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ ಸುತಗಟ್ಟಿ ಗ್ರಾಮಸ್ಥರು ತಕ್ಷಣವೇ ಎಚ್ಚೆತ್ತುಕೊಂಡು ಕಾಕತಿ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಅರಣ್ಯ ಇಲಾಖೆಯ ಕಾರ್ಯಾಚರಣೆ: ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಯು ಆ ಪ್ರದೇಶದಲ್ಲಿ ಗಸ್ತು ಕಾರ್ಯವನ್ನು ಹೆಚ್ಚಿಸಿ, ಚಿರತೆಯ ಚಲನವಲನದ ಮೇಲೆ ತೀವ್ರ ನಿಗಾ ವಹಿಸಿತ್ತು. ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನನ್ನು ಅಳವಡಿಸಲಾಗಿತ್ತು. ಆಹಾರ ಹುಡುಕಿಕೊಂಡು ಬಂದ ಚಿರತೆಯು ಬುಧವಾರ ಬೆಳಿಗ್ಗೆ ಕೊನೆಗೂ ಬೋನಿಗೆ ಬಿದ್ದಿದೆ. ಬಳಿಕ ಬೋನಿನಲ್ಲಿದ್ದ ಚಿರತೆಯನ್ನು ವಾಹನದ ಮೂಲಕ ಕಾಕತಿಯ ರಕ್ಷಣಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಮುಂದಿನ ಹಂತದಲ್ಲಿ ಈ ಚಿರತೆಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ಅಥವಾ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಶಸ್ವಿ ತಂಡದ ವಿವರ: ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾಕತಿ ಆರ್.ಎಫ್.ಒ. ಬಿ.ಎಲ್. ಸನದಿ, ಹುಕ್ಕೇರಿ ಆರ್.ಎಫ್.ಒ. ಶಿವಕುಮಾರ ಮಾಳಿ, ಡಿ.ಆರ್.ಎಫ್.ಒ.ಗಳಾದ ಬಸವರಾಜ ಹನಗಂಡಿ, ಪ್ರಭು ತಂಗಡಿ, ರಾಕೇಶ ಮುರಾರಿ, ಮುತಿಗೇಕರ ಹಾಗೂ ಕಾಕತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಗ್ರಾಮಸ್ಥರಿಂದ ನಿಟ್ಟುಸಿರು: ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸುತಗಟ್ಟಿ ಗ್ರಾಮಸ್ಥರು ಪೂರ್ಣ ಸಹಕಾರ ನೀಡಿದ್ದು, ಚಿರತೆ ಸೆರೆಯಾದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ವಾಹನ ಸವಾರರು ನಿಟ್ಟುಸಿರು ಬಿಟ್ಟು ನೆಮ್ಮದಿ ವ್ಯಕ್ತಪಡಿಸಿದ್ದಾರೆ.2
- ವಿಜಯಪುರದಲ್ಲಿ ಯತ್ನಾಳ್ ಭವಿಷ್ಯ ಹೇಳಿಕೆ ಯಶವಂತರಾಯಗೌಡ ಪಾಟೀಲ್, ಎಂಬಿ ಪಾಟೀಲ್ ಒಂದಾಗ್ತಾರೆ ವಿಜಯಪುರದಲ್ಲಿ ಯತ್ನಾಳ್ ಭವಿಷ್ಯ ಹೇಳಿಕೆ ಯಶವಂತರಾಯಗೌಡ ಪಾಟೀಲ್, ಎಂಬಿ ಪಾಟೀಲ್ ಒಂದಾಗ್ತಾರೆ1
- ಸಚಿವ ಸಂಪುಟ ವಿಸ್ತರಣೆಗಿಂತ ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿ: ಬೆಳೆ ವಿಮೆಗಾಗಿ ರೈತ ಸಂಘದ ಆಗ್ರಹ"1
- ಬಿಜಾಪುರದ ನಗರದಲ್ಲಿ ಮತ್ತೊಂದು ಅವಘಡ ಇಟಗಿ ಪೆಟ್ರೋಲ್ ಪಂಪ್ ಹತ್ತಿರ ಅಥಣಿ ರಸ್ತೆಯಲ್ಲಿ ಬಳಿಯ ಮೆಡಿಕಲ್ ಶಾಪಿನಲ್ಲಿ ಬೆಂಕಿ ಅವಗಡ ನಿನ್ನೆ ತಡ ರಾತ್ರಿ ನಡೆದಿದೆ1