Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- *ಭಾರತ ನಲ್ಲಿ ವೈರಲ್*1
- WAKE UP INDIA FOUNDATION @ SRI RAMAKRISHNA SEVA KENDRA TRUST IN TAAYI MADILU OLDAGE HOME YACHENAHALLI VILLAGE BANNUR HOBALI T NARSIPUR TALUK MYSURU DIST WITH SRI NADANANDANATHA SWAMI JI1
- 893 Rd jagadguru basaveshwara jayanti celeberated BY KARNATAKA RASHTRA SAMITTHI PAKSHA AT MYSORE1
- ಹನೂರು :ತಾಲೂಕಿನ ಅಜ್ಜೀಪುರ ಹಾಗೂ ದೊಮ್ಮನಗದ್ದೆ ಮಾರ್ಗ ಮದ್ಯೆ ಇರುವ ಶ್ರೀ ಜಡೇಸ್ವಾಮಿ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಅದ್ದೂರಿಯಿಂದ ನೆರವೇರಿತು. ಕಳೆದ ಬಾರಿ 2014ರಲ್ಲಿ ಕೊಂಡೋತ್ಸವವನ್ನು ನಡೆಸಲಾಯಿತು. ಅದಾದ ನಂತರ ಕೊಂಡೋತ್ಸವ ಆಚರಣೆ ನಡೆದಿರಲಿಲ್ಲ. ಇದೀಗ 12 ವರ್ಷಗಳ ನಂತರ ಅಜ್ಜೀಪುರ, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಶ್ರೀ ಜಡೇಸ್ವಾಮಿ ಕೊಂಡೋತ್ಸವ ಆಚರಣೆಯನ್ನು ಸಾಂಪ್ರದಾಯಿಕವಾಗಿ ನೇರವೇರಿಸಲಾಯಿತು. ಸೋಮವಾರ ಶ್ರೀಜಡೇಸ್ವಾಮಿ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿಯ ದೇವಾಲಯದ ಬಳಿ ಶ್ರೀ ಜಡೇಸ್ವಾಮಿ ಸ್ವಾಮಿಯ ಗಂಡುಗೋರಲಿ , ಸತ್ತಿಗೆ, ಸೂರಪಾನಿಗಳಿಗೆ ಹೂಗಳಿಂದ ಅಲಂಕರಿಸಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ತಮಟೆ ವಾದ್ಯ ಮೇಳಗಳೊಂದಿಗೆ ಶ್ರೀ ಜಡೇಸ್ವಾಮಿ ದೇವರ ಜೊತೆ , ಸತ್ತಿಗೆ, ಸೂರಪನಿ, ಹಾಲಾರವಿ ನೇರವೇರೀಸಲಾಯಿತು. ಶ್ರೀ ಜಡೇಸ್ವಾಮಿ ದೇವಾಲಯದ ಆವರಣದಲ್ಲಿ ದೇವರುಗಳು, ಸತ್ತಿಗೆ, ಸೂರಪನಿ, ಬಸವನಿಗೆ ವಿವಿಧ ಪೂಜಾ ಕೈಂಕರ್ಯಗಳು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು. ನಂತರ 6 ಗಂಟೆಯ ವೇಳೆಯಲ್ಲಿ ಅರ್ಚಕರು ಸೇರಿದಂತೆ ಹರಕೆ ಹೊತ್ತ ಭಕ್ತಾದಿಗಳು ಕೊಂಡ ಹಾಯ್ದರು ಕೊಂಡವೋತ್ಸವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಅನ್ನ ಸಂತರ್ಪಣೆ:-ಶ್ರೀ ಜಡೇಸ್ವಾಮಿ ದೇವರ ಕೊಂಡೋತ್ಸವ ಹಿನ್ನೆಲೆಯಲ್ಲಿ ಬರುವಂಥ ಭಕ್ತಾದಿಗಳಿಗೆ ಮುದ್ದೆ, ಅನ್ನ, ದ್ವಿದಳ ದಾನ್ಯದ ಸಾಂಬಾರು, ಪಾಯಸ, ಪಲ್ಯ ಸೇರಿದಂತೆ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ವೇಳೆಯಲ್ಲಿ ಅರ್ಚಕರಾದ ಚಿನ್ನು, ನಾಗರಾಜ್,ಮುನಿರಾಜು,ರಾಜೇಂದ್ರ, ಚಂದು, ಗಾವಳಿ ಪಚ್ಚಮ್ಮಲ್ಲೇಗೌಡ,ಶಂಕರ್,ರಾಜೇಶ್, ಯಜಮಾನರಾದ ರಾಮೇಗೌಡ, ಮುತ್ತೇಗೌಡ,ಕುಪ್ಪೆಗೌಡ, ಸೇರಿದಂತೆ ಸಾವಿರಾರು ಭಕ್ತರು ಇದ್ದರು.4
- ಹನೂರು: ಉಡುತೊರೆಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿಕೊಂಡು ಪಾರಾದ ಕಾಡಾನೆ ಅಸ್ವಸ್ಥಗೊಂಡು ಮೇಲಕ್ಕೆ ಏಳಲಾಗದೆ ಸಂಕಷ್ಟದಲ್ಲಿದೆ. ಮಲೆ ಮಹದೇಶ್ವರ ವನ್ಯಧಾಮದಿಂದ ನೀರಿಗಾಗಿ ಬಂದ ಮೂರು ಆನೆಗಳಲ್ಲಿ ಎರಡು ಸುರಕ್ಷಿತವಾಗಿ ಕಾಡು ಸೇರಿದ್ದರೆ, ಮತ್ತೊಂದು ಆನೆ ದಡ ಸೇರಿದ್ದರೂ ಮೆಲಕ್ಕೆ ಏಳಲಾಗದೆ ದುರ್ಬಲಗೊಂಡಿದೆ. ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಸಾಕಾನೆ ‘ಮಹೇಂದ್ರ’ ಸಹಾಯದಿಂದ ಮೇಲಕ್ಕೆತ್ತಲು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. .1
- ಕರಬೂಜ ಹಣ್ಣಿನ ಜ್ಯೂಸ್ (Muskmelon Juice)*ಹಬ್ಬಗಳಲ್ಲಿ ಮಾಡುವಂತಹ ನಿಮಿಷದಲ್ಲಿ ಈ ಕರ್ಬೂಜ ಹಣ್ಣಿನ ಜೂಸ್ ಮಾಡಿ ಕುಡಿಯಿರಿ | #ಕರ್ಬೂಜ #Milk #ಖರಬೂಜ #ಹಣ್ಣಿನಜ್ಯೂಸು | #KharbujaJuice recipe | #MuskMelonJuic ಬೇಸಿಗೆಯ ಅತ್ಯಂತ ತಂಪಾದ ಮತ್ತು ಆರೋಗ್ಯಕರ ಪಾನೀಯವಾಗಿದೆ. ಇದನ್ನು ಸುಲಭವಾಗಿ ಮಾಡಲು ಕರಬೂಜದ ತಿರುಳು, ಹಾಲು ಅಥವಾ ನೀರು, ಸಕ್ಕರೆ/ಜೇನುತುಪ್ಪ ಮತ್ತು ಐಸ್ ಕ್ಯೂಬ್ಗಳನ್ನು ಬ್ಲೆಂಡರ್ನಲ್ಲಿ ನುಣ್ಣಗೆ ರುಬ್ಬಿ, ತಕ್ಷಣವೇ ಸೇವಿಸಿ. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಬಿಪಿ ಕಂಟ್ರೋಲ್ ಮಾಡಲು ಸಹಕಾರಿಯಾಗಿದೆ.1
- ಹನೂರು: "12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ, ಸಹೋದರತೆ ಮತ್ತು ಕಾಯಕ ನಿಷ್ಠೆಯ ಆದರ್ಶಗಳನ್ನು ಸಾರಿದ್ದಾರೆ. ಅಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ," ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಸ್ವಾರ್ಥ ಬಿಡಿ, ಕಾಯಕ ನಂಬಿ: ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವು ನಂತರ ಅದನ್ನು ಮರೆಯುತ್ತಿದ್ದೇವೆ. ಸ್ವಾರ್ಥ ಮತ್ತು 'ನಾನು' ಎಂಬ ಅಹಂಭಾವವನ್ನು ಬಿಟ್ಟು, 'ಕಾಯಕವೇ ಕೈಲಾಸ' ಎಂಬ ತತ್ವದಡಿ ನಡೆದರೆ ಸಮಾಜ ಸುಧಾರಣೆ ಸಾಧ್ಯ. ಮುಂದಿನ ಪೀಳಿಗೆಗೆ ಮಾದರಿಯಾಗಿ: ಇಂದು ನಾವು ಮಾಡುವ ಕೆಲಸಗಳನ್ನು ನಮ್ಮ ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಪೋಷಕರು ಮತ್ತು ಹಿರಿಯರು ಮಹನೀಯರ ತತ್ವಗಳನ್ನು ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಪ್ರತಿಮೆ ನಿರ್ಮಾಣಕ್ಕೆ ಭರವಸೆ: ಪಟ್ಟಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡುವಂತೆ ಕೋರಿದ ಶಾಸಕರು, ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. "ಮಹನೀಯರ ಜಯಂತಿಗಳು ಒಂದು ದಿನದ ಆಚರಣೆಯಾಗಬಾರದು. ಅವರ ಸಿದ್ದಾಂತಗಳು ನಮ್ಮ ಬದುಕಿನ ಭಾಗವಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ." — ಎಂ.ಆರ್. ಮಂಜುನಾಥ್, ಶಾಸಕರು. ಗಣ್ಯರ ಉಪಸ್ಥಿತಿ:ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರೇಖಾ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಪ್ರತಿಮ ಮಹದೇವ್ ಉಪಸ್ಥಿತರಿದ್ದರು. ಅಲ್ಲದೆ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ನಿರ್ದೇಶಕ ಬಸವರಾಜು, ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ಟಿ. ಸದಾಶಿವ ಮೂರ್ತಿ, ಡಿ.ಕೆ ರಾಜು, ಉದ್ದನೂರು ಗಿರೀಶ್, ಪ್ರಮೋದ್, ವಿನೋದ್, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ವರದಿ ಉಸ್ಮಾನ್ ಖಾನ್3
- *ಭಾರತ ನಲ್ಲಿ ವೈರಲ್*1