logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ..! ಮಂಗಳೂರು:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪವೊಂದು ಬೆಳಕಿಗೆ ಬಂದಿದೆ. ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರನ್ನು ಚುನಾವಣಾ ಆಯೋಗದ ದಾಖಲೆಗಳಲ್ಲಿ ತಪ್ಪಾಗಿ ‘ಮೃತ’ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿಯಾಗಿರುವ ಡೊನಾಲ್ಡ್ ಜೋಸೆಫ್ ರೇಗೊ, ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ, ಅವರ ಹೆಸರನ್ನು Absent, Shifted, Duplicate, Dead and Others – ASDDO ಪಟ್ಟಿಯಲ್ಲಿರುವ ‘ಮೃತ’ ವಿಭಾಗಕ್ಕೆ ಸೇರಿಸಿರುವುದು ತಿಳಿದುಬಂದಿದೆ. ಜೀವಂತವಾಗಿರುವ ಮತದಾರನನ್ನೇ ಮೃತ ಎಂದು ಗುರುತಿಸಿರುವುದು ಇದೀಗ ಚುನಾವಣಾ ಆಯೋಗದ ಮತದಾರರ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

7 hrs ago
user_UMAPRASAD
UMAPRASAD
ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
7 hrs ago

ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ..! ಮಂಗಳೂರು:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪವೊಂದು ಬೆಳಕಿಗೆ ಬಂದಿದೆ. ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರನ್ನು ಚುನಾವಣಾ ಆಯೋಗದ ದಾಖಲೆಗಳಲ್ಲಿ ತಪ್ಪಾಗಿ ‘ಮೃತ’ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿಯಾಗಿರುವ ಡೊನಾಲ್ಡ್ ಜೋಸೆಫ್ ರೇಗೊ, ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ, ಅವರ ಹೆಸರನ್ನು Absent, Shifted, Duplicate, Dead and Others – ASDDO ಪಟ್ಟಿಯಲ್ಲಿರುವ ‘ಮೃತ’ ವಿಭಾಗಕ್ಕೆ ಸೇರಿಸಿರುವುದು ತಿಳಿದುಬಂದಿದೆ. ಜೀವಂತವಾಗಿರುವ ಮತದಾರನನ್ನೇ ಮೃತ ಎಂದು ಗುರುತಿಸಿರುವುದು ಇದೀಗ ಚುನಾವಣಾ ಆಯೋಗದ ಮತದಾರರ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

More news from ಕರ್ನಾಟಕ and nearby areas
  • ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ..! ಮಂಗಳೂರು:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪವೊಂದು ಬೆಳಕಿಗೆ ಬಂದಿದೆ. ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರನ್ನು ಚುನಾವಣಾ ಆಯೋಗದ ದಾಖಲೆಗಳಲ್ಲಿ ತಪ್ಪಾಗಿ ‘ಮೃತ’ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿಯಾಗಿರುವ ಡೊನಾಲ್ಡ್ ಜೋಸೆಫ್ ರೇಗೊ, ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ, ಅವರ ಹೆಸರನ್ನು Absent, Shifted, Duplicate, Dead and Others – ASDDO ಪಟ್ಟಿಯಲ್ಲಿರುವ ‘ಮೃತ’ ವಿಭಾಗಕ್ಕೆ ಸೇರಿಸಿರುವುದು ತಿಳಿದುಬಂದಿದೆ. ಜೀವಂತವಾಗಿರುವ ಮತದಾರನನ್ನೇ ಮೃತ ಎಂದು ಗುರುತಿಸಿರುವುದು ಇದೀಗ ಚುನಾವಣಾ ಆಯೋಗದ ಮತದಾರರ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
    1
    ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ..!
ಮಂಗಳೂರು:ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪವೊಂದು ಬೆಳಕಿಗೆ ಬಂದಿದೆ.
ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರನ್ನು ಚುನಾವಣಾ ಆಯೋಗದ ದಾಖಲೆಗಳಲ್ಲಿ ತಪ್ಪಾಗಿ ‘ಮೃತ’ ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿಯಾಗಿರುವ ಡೊನಾಲ್ಡ್ ಜೋಸೆಫ್ ರೇಗೊ, ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ.
ಬಳಿಕ ಪರಿಶೀಲಿಸಿದಾಗ, ಅವರ ಹೆಸರನ್ನು Absent, Shifted, Duplicate, Dead and Others – ASDDO ಪಟ್ಟಿಯಲ್ಲಿರುವ ‘ಮೃತ’ ವಿಭಾಗಕ್ಕೆ ಸೇರಿಸಿರುವುದು ತಿಳಿದುಬಂದಿದೆ.
ಜೀವಂತವಾಗಿರುವ ಮತದಾರನನ್ನೇ ಮೃತ ಎಂದು ಗುರುತಿಸಿರುವುದು ಇದೀಗ ಚುನಾವಣಾ ಆಯೋಗದ ಮತದಾರರ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
    user_UMAPRASAD
    UMAPRASAD
    ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    7 hrs ago
  • ಚಿಕ್ಕನಾಯಕನಹಳ್ಳಿ 18 ವರ್ಷಗಳ ಕನಸು ನನಸಾದ ಸುಂದರ ಕ್ಷಣ… ರೈತರ ಬದುಕಿಗೆ ಹೊಸ ಭರವಸೆ ರೈತರಲ್ಲಿ. ಹರ್ಷೋದ್ಗಾರ ಮೂಡಿಸಿದ ಶಾಸಕ ಸಿ ಬಿ ಸುರೇಶ್ ಬಾಬು 18 ವರ್ಷಗಳ ಕನಸು ನನಸಾದ ಸುಂದರ ಕ್ಷಣ… ರೈತರ ಬದುಕಿಗೆ ಹೊಸ ಭರವಸೆ! ದಬ್ಬೇಘಟ್ಟ ಹಾಗೂ ಸುತ್ತಮುತ್ತಲಿನ ರೈತರಿಗೆ ಹೇಮಾವತಿ ನೀರು ಹರಿದು ಬಂದಿರುವ ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯ ಕಾರಣಕರ್ತರು ಹಾಗೂ ಹೇಮಾವತಿ ಹರಿಕಾರರು ನಮ್ಮ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಯುತ ಸಿ.ಬಿ. ಸುರೇಶ್ ಬಾಬು ಅವರು. 2011ರಿಂದ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ರೈತರ ದಶಕಗಳ ಕನಸು ನನಸಾಗಿದೆ. ಇದು ಕೇವಲ ನೀರು ಹರಿದ ಕ್ಷಣವಲ್ಲ… ಇದು ಅನ್ನದಾತನ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾದ ಕ್ಷಣ. ಹಿಂದಿನ ಕಷ್ಟದ ದಿನಗಳು ಹನಿ ನೀರಿಗಾಗಿ ಆಕಾಶವನ್ನೇ ನೋಡುತ್ತಿದ್ದ ಕಣ್ಣುಗಳು… ಒಂದಿಷ್ಟು ನೀರು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಾವಿರಾರು ಅಡಿ ಆಳಕ್ಕೆ ಕೊರೆದು, ಕೊನೆಗೆ ಬತ್ತಿ ಹೋದ ಬೋರ್‌ವೆಲ್‌ಗಳು… ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರಿಟ್ಟ ಅನ್ನದಾತನ ಬದುಕು… ಇಂತಹ ನೋವು-ಯಾತನೆಗಳನ್ನು ಹಲವು ದಶಕಗಳಿಂದ ದಬ್ಬೇಘಟ್ಟ ನವಿಲೆ ಹಾಗೂ ಸುತ್ತಮುತ್ತಲಿನ ರೈತರು ಅನುಭವಿಸಿದ್ದರು. ಇಂದು ಬದಲಾದ ಚಿತ್ರಣ ಆದರೆ ಇಂದು ಈ ಕ್ಷೇತ್ರದ ಶಾಸಕರು ಶ್ರೀ ಸುರೇಶ್ ಬಾಬು ಅವರು ಹೊರಾಟ ಮಾಡಿ ಆ ಎಲ್ಲಾ ನೋವುಗಳಿಗೆ ಮುಕ್ತಿ ಸಿಕ್ಕಿದೆ. ದಶಕಗಳ ಕನಸನ್ನು ನನಸಾಗಿಸಿದ ಹೇಮಾವತಿ ಹರಿಕಾರರು ಹಾಗೂ JDLP ನಾಯಕರಾದ ಸನ್ಮಾನ್ಯ ಶ್ರೀ ಸಿ.ಬಿ. ಸುರೇಶ್ ಬಾಬು ಅವರ ನಿರಂತರ ಹೋರಾಟದ ಫಲವಾಗಿ, ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹೇಮಾವತಿಯ ಜೀವಜಲ ದಬ್ಬೇಘಟ್ಟ ಕೆರೆಯನ್ನು ಮುದ್ದಾಡಿದೆ. ಕೆರೆ ತುಂಬಿ ತುಳುಕುತ್ತಿದೆ… ಇಂದು ದಬ್ಬೇಘಟ್ಟ ಕೆರೆ ಕೊಡಿ ಹೋಗಿದೆ ಇನ್ನ ಕೆಲವು ದಿನಗಳಲ್ಲಿ ಮೇಲನಹಳ್ಳಿ ಕೆರೆ ತುಂಬಿ ನವಿಲೆ ಕೆರೆ ತಲುಪುತ್ತದೆ. ರೈತರ ಬದುಕಿಗೆ ಹೊಸ ಭರವಸೆ ನೀರಿಲ್ಲದೆ ಬತ್ತಿ ಹೋಗಿದ್ದ ನೂರಾರು ಬೋರ್‌ವೆಲ್‌ಗಳಿಗೆ ಈಗ ಮರುಜೀವ ಬಂದಿದೆ. ಸಾಲದ ಸುಳಿಯಲ್ಲಿ ನಲುಗಿದ್ದ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದೆ. ಈ ಒಂದು ಕೆರೆಯ ನೀರಿನಿಂದ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಗೆ ಹಸಿರಿನ ಆಸರೆ ದೊರೆತಂತಾಗಿದೆ. ಹೇಮಾವತಿಯ ತಂಪಾದ ಅಲೆಗಳು ದಬ್ಬೇಘಟ್ಟ ಮಣ್ಣನ್ನು ಮಾತ್ರವಲ್ಲ, ಇಲ್ಲಿನ ರೈತರ ಬದುಕನ್ನೇ ಹಸನು ಮಾಡಿವೆ. ನಮ್ಮ ರೈತರು ಇಂದು ನೆಮ್ಮದಿಯಿಂದ ಕಣ್ಣು ತುಂಬ ನಿದ್ದೆ ಮಾಡುವಷ್ಟು ಸಂತೋಷವನ್ನು ಈ ಹೇಮಾವತಿ ನೀರು ತಂದಿದೆ. ನನ್ನ ಕ್ಷೇತ್ರದ ರೈತರೇ ನನ್ನ ಉಸಿರು. ರೈತ ಬಾಂಧವರೇ, ನಿಮ್ಮ ಸಂತೋಷವೇ ನನ್ನ ಸಂತೋಷ. ನಿಮ್ಮ ಕಷ್ಟ-ಸುಖಗಳಲ್ಲಿ ಸದಾ ನಿಮ್ಮೊಂದಿಗೆ, ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ. 2011ರಿಂದ ನಡೆದ ಹೋರಾಟಕ್ಕೆ ಇಂದು ಸಾರ್ಥಕ ಪ್ರತಿಫಲ. ಹೇಮಾವತಿ ನೀರು – ರೈತರ ಬದುಕಿಗೆ ಹೊಸ ಜೀವ. ಅನ್ನದಾತನ ನಗುವೇ ನಮ್ಮ ಹೋರಾಟದ ನಿಜವಾದ ಗೆಲುವು
    3
    ಚಿಕ್ಕನಾಯಕನಹಳ್ಳಿ  18 ವರ್ಷಗಳ ಕನಸು ನನಸಾದ ಸುಂದರ ಕ್ಷಣ… ರೈತರ ಬದುಕಿಗೆ ಹೊಸ ಭರವಸೆ ರೈತರಲ್ಲಿ. ಹರ್ಷೋದ್ಗಾರ  ಮೂಡಿಸಿದ ಶಾಸಕ ಸಿ ಬಿ ಸುರೇಶ್ ಬಾಬು 
18 ವರ್ಷಗಳ ಕನಸು ನನಸಾದ ಸುಂದರ ಕ್ಷಣ… ರೈತರ ಬದುಕಿಗೆ ಹೊಸ ಭರವಸೆ! 
ದಬ್ಬೇಘಟ್ಟ ಹಾಗೂ ಸುತ್ತಮುತ್ತಲಿನ ರೈತರಿಗೆ ಹೇಮಾವತಿ ನೀರು ಹರಿದು ಬಂದಿರುವ ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯ ಕಾರಣಕರ್ತರು ಹಾಗೂ ಹೇಮಾವತಿ ಹರಿಕಾರರು ನಮ್ಮ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಯುತ ಸಿ.ಬಿ. ಸುರೇಶ್ ಬಾಬು ಅವರು.
2011ರಿಂದ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ.
ರೈತರ ದಶಕಗಳ ಕನಸು ನನಸಾಗಿದೆ.
ಇದು ಕೇವಲ ನೀರು ಹರಿದ ಕ್ಷಣವಲ್ಲ… ಇದು ಅನ್ನದಾತನ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾದ ಕ್ಷಣ.
ಹಿಂದಿನ ಕಷ್ಟದ ದಿನಗಳು
ಹನಿ ನೀರಿಗಾಗಿ ಆಕಾಶವನ್ನೇ ನೋಡುತ್ತಿದ್ದ ಕಣ್ಣುಗಳು…
ಒಂದಿಷ್ಟು ನೀರು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಾವಿರಾರು ಅಡಿ ಆಳಕ್ಕೆ ಕೊರೆದು, ಕೊನೆಗೆ ಬತ್ತಿ ಹೋದ ಬೋರ್‌ವೆಲ್‌ಗಳು…
ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರಿಟ್ಟ ಅನ್ನದಾತನ ಬದುಕು…
ಇಂತಹ ನೋವು-ಯಾತನೆಗಳನ್ನು ಹಲವು ದಶಕಗಳಿಂದ ದಬ್ಬೇಘಟ್ಟ ನವಿಲೆ ಹಾಗೂ ಸುತ್ತಮುತ್ತಲಿನ ರೈತರು ಅನುಭವಿಸಿದ್ದರು.
ಇಂದು ಬದಲಾದ ಚಿತ್ರಣ
ಆದರೆ ಇಂದು ಈ ಕ್ಷೇತ್ರದ ಶಾಸಕರು ಶ್ರೀ ಸುರೇಶ್ ಬಾಬು ಅವರು ಹೊರಾಟ ಮಾಡಿ ಆ ಎಲ್ಲಾ ನೋವುಗಳಿಗೆ ಮುಕ್ತಿ ಸಿಕ್ಕಿದೆ.
ದಶಕಗಳ ಕನಸನ್ನು ನನಸಾಗಿಸಿದ ಹೇಮಾವತಿ ಹರಿಕಾರರು ಹಾಗೂ JDLP ನಾಯಕರಾದ ಸನ್ಮಾನ್ಯ ಶ್ರೀ ಸಿ.ಬಿ. ಸುರೇಶ್ ಬಾಬು ಅವರ ನಿರಂತರ ಹೋರಾಟದ ಫಲವಾಗಿ, ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹೇಮಾವತಿಯ ಜೀವಜಲ ದಬ್ಬೇಘಟ್ಟ ಕೆರೆಯನ್ನು ಮುದ್ದಾಡಿದೆ.
ಕೆರೆ ತುಂಬಿ ತುಳುಕುತ್ತಿದೆ…
ಇಂದು ದಬ್ಬೇಘಟ್ಟ ಕೆರೆ ಕೊಡಿ ಹೋಗಿದೆ ಇನ್ನ ಕೆಲವು ದಿನಗಳಲ್ಲಿ ಮೇಲನಹಳ್ಳಿ ಕೆರೆ ತುಂಬಿ ನವಿಲೆ ಕೆರೆ ತಲುಪುತ್ತದೆ.
ರೈತರ ಬದುಕಿಗೆ ಹೊಸ ಭರವಸೆ
ನೀರಿಲ್ಲದೆ ಬತ್ತಿ ಹೋಗಿದ್ದ ನೂರಾರು ಬೋರ್‌ವೆಲ್‌ಗಳಿಗೆ ಈಗ ಮರುಜೀವ ಬಂದಿದೆ.
ಸಾಲದ ಸುಳಿಯಲ್ಲಿ ನಲುಗಿದ್ದ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದೆ.
ಈ ಒಂದು ಕೆರೆಯ ನೀರಿನಿಂದ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಗೆ ಹಸಿರಿನ ಆಸರೆ ದೊರೆತಂತಾಗಿದೆ.
ಹೇಮಾವತಿಯ ತಂಪಾದ ಅಲೆಗಳು ದಬ್ಬೇಘಟ್ಟ ಮಣ್ಣನ್ನು ಮಾತ್ರವಲ್ಲ, ಇಲ್ಲಿನ ರೈತರ ಬದುಕನ್ನೇ ಹಸನು ಮಾಡಿವೆ. 
ನಮ್ಮ ರೈತರು ಇಂದು ನೆಮ್ಮದಿಯಿಂದ ಕಣ್ಣು ತುಂಬ ನಿದ್ದೆ ಮಾಡುವಷ್ಟು ಸಂತೋಷವನ್ನು ಈ ಹೇಮಾವತಿ ನೀರು ತಂದಿದೆ.
ನನ್ನ ಕ್ಷೇತ್ರದ ರೈತರೇ ನನ್ನ ಉಸಿರು. 
ರೈತ ಬಾಂಧವರೇ, ನಿಮ್ಮ ಸಂತೋಷವೇ ನನ್ನ ಸಂತೋಷ.
ನಿಮ್ಮ ಕಷ್ಟ-ಸುಖಗಳಲ್ಲಿ ಸದಾ ನಿಮ್ಮೊಂದಿಗೆ, ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ.
2011ರಿಂದ ನಡೆದ ಹೋರಾಟಕ್ಕೆ ಇಂದು ಸಾರ್ಥಕ ಪ್ರತಿಫಲ.
ಹೇಮಾವತಿ ನೀರು – ರೈತರ ಬದುಕಿಗೆ ಹೊಸ ಜೀವ.
ಅನ್ನದಾತನ ನಗುವೇ ನಮ್ಮ ಹೋರಾಟದ ನಿಜವಾದ ಗೆಲುವು
    user_ಶಿವಕುಮಾರ್.ಎಸ್ ಸೋರಲಮಾವು
    ಶಿವಕುಮಾರ್.ಎಸ್ ಸೋರಲಮಾವು
    Local News Reporter ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    2 hrs ago
  • All About,Adv sharing his experience of visiting #WaqfBoard office in #Telangana *ಭಾರತ ನಲ್ಲಿ ವೈರಲ್*
    1
    All About,Adv sharing his experience of visiting #WaqfBoard office in #Telangana 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    42 min ago
  • ನಂಜನಗೂಡು ತಾಲ್ಲೂಕಿನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಪರಿಶೀಲನೆ ನಂಜನಗೂಡು ತಾಲ್ಲೂಕಿನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಪರಿಶೀಲನೆ ನಂಜನಗೂಡು: ತಾಲ್ಲೂಕಿನ ಚಿಕ್ಕ ಕವಲಂದೆ, ದೊಡ್ಡ ಕವಲಂದೆ ಹಾಗೂ ಗಟ್ಟವಾಡಿ ಗ್ರಾಮಗಳಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ರೈತರ ಜಮೀನುಗಳಿಗೆ ತೆರಳಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಉಪಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು. ಗಟ್ಟವಾಡಿ ಗ್ರಾಮದ ರೈತ ಮಹದೇವಪ್ಪ ಮತ್ತು ಶಿವಬಸಪ್ಪ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ಡಾ.ಜಿ. ಪರಮೇಶ್ವರ್ ಅವರು, ನಂಜನಗೂಡು ತಾಲೂಕಿನಲ್ಲಿ ಬರ ವೀಕ್ಷಣೆಗೆ ಬಂದಿದ್ದೇನೆ. ಮಳೆಯ ಕೊರತೆಯಿಂದ ಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಒಣಗಿ ನಾಶವಾಗಿವೆ ಎಂದು ಹೇಳಿದರು. ರೈತರು ಸಾಲ ಮಾಡಿಕೊಂಡು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ ಮಳೆ ಇಲ್ಲದೆ ಬೆಳೆಗಳು ನಾಶವಾಗಿರುವುದರಿಂದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದೊಡ್ಡ ಕವಲಂದೆ ಭಾಗಕ್ಕೆ ನೀರಾವರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೆಲಸ ಮಾಡಲಿದ್ದಾರೆ ಎಂದರು. ರೈತರ ಅಸಮಾಧಾನ ಇದೇ ವೇಳೆ ಪತ್ರಕರ್ತರು ಸ್ಮಶಾನ ಭೂಮಿ ಸಮಸ್ಯೆ ಕುರಿತು ಕಂದಾಯ ಸಚಿವರ ಗಮನ ಸೆಳೆಯಲು ಪ್ರಯತ್ನಿಸಿದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದುವರಿದರು. ಬರ ಪರಿಶೀಲನಾ ಪ್ರವಾಸವು ಕೇವಲ ಕೆಲವೇ ನಿಮಿಷಗಳಿಗೆ ಸೀಮಿತವಾಗಿದ್ದು, ರೈತರಿಗೆ ತಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ವಿವರಿಸಲು ಅವಕಾಶ ದೊರೆಯಲಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ರೈತರನ್ನು ಉಪಮುಖ್ಯಮಂತ್ರಿಗಳ ಬಳಿ ತೆರಳಿ ಸಮಸ್ಯೆ ಹೇಳಲು ಅವಕಾಶ ನೀಡಲಿಲ್ಲ ಎಂಬ ಆರೋಪವೂ ರೈತರಿಂದ ಕೇಳಿಬಂದಿದೆ. “ಬರ ಪ್ರವಾಸವು ಕೇವಲ ನಾಮಕಾವಸ್ಥೆಗೆ ಮಾತ್ರ ಸೀಮಿತವಾಗಿದೆಯೇ?” ಎಂಬ ಪ್ರಶ್ನೆಯನ್ನು ರೈತರು ವ್ಯಕ್ತಪಡಿಸಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ತಹಶೀಲ್ದಾರ್ ಡಾ. ಸ್ಮಿತಾ ರಾಮು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ, ಸಹಾಯಕ ಕೃಷಿ ನಿರ್ದೇಶಕ ರವಿ, ಕವಲಂದೆ ಉಪ ತಹಶೀಲ್ದಾರ್ ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಡಾ.ಜಿ. ಪರಮೇಶ್ವರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ. ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
    4
    ನಂಜನಗೂಡು ತಾಲ್ಲೂಕಿನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಪರಿಶೀಲನೆ
ನಂಜನಗೂಡು ತಾಲ್ಲೂಕಿನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಪರಿಶೀಲನೆ
ನಂಜನಗೂಡು: ತಾಲ್ಲೂಕಿನ ಚಿಕ್ಕ ಕವಲಂದೆ, ದೊಡ್ಡ ಕವಲಂದೆ ಹಾಗೂ ಗಟ್ಟವಾಡಿ ಗ್ರಾಮಗಳಲ್ಲಿ ಉಪಮುಖ್ಯಮಂತ್ರಿ  ಡಾ.ಜಿ. ಪರಮೇಶ್ವರ್ ಅವರು ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ರೈತರ ಜಮೀನುಗಳಿಗೆ ತೆರಳಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಉಪಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.
ಗಟ್ಟವಾಡಿ ಗ್ರಾಮದ ರೈತ ಮಹದೇವಪ್ಪ ಮತ್ತು ಶಿವಬಸಪ್ಪ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ಡಾ.ಜಿ. ಪರಮೇಶ್ವರ್ ಅವರು, ನಂಜನಗೂಡು ತಾಲೂಕಿನಲ್ಲಿ ಬರ ವೀಕ್ಷಣೆಗೆ ಬಂದಿದ್ದೇನೆ. ಮಳೆಯ ಕೊರತೆಯಿಂದ ಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಒಣಗಿ ನಾಶವಾಗಿವೆ ಎಂದು ಹೇಳಿದರು.
ರೈತರು ಸಾಲ ಮಾಡಿಕೊಂಡು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ ಮಳೆ ಇಲ್ಲದೆ ಬೆಳೆಗಳು ನಾಶವಾಗಿರುವುದರಿಂದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೊಡ್ಡ ಕವಲಂದೆ ಭಾಗಕ್ಕೆ ನೀರಾವರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೆಲಸ ಮಾಡಲಿದ್ದಾರೆ ಎಂದರು.
ರೈತರ ಅಸಮಾಧಾನ
ಇದೇ ವೇಳೆ ಪತ್ರಕರ್ತರು ಸ್ಮಶಾನ ಭೂಮಿ ಸಮಸ್ಯೆ ಕುರಿತು ಕಂದಾಯ ಸಚಿವರ ಗಮನ ಸೆಳೆಯಲು ಪ್ರಯತ್ನಿಸಿದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದುವರಿದರು.
ಬರ ಪರಿಶೀಲನಾ ಪ್ರವಾಸವು ಕೇವಲ ಕೆಲವೇ ನಿಮಿಷಗಳಿಗೆ ಸೀಮಿತವಾಗಿದ್ದು, ರೈತರಿಗೆ ತಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ವಿವರಿಸಲು ಅವಕಾಶ ದೊರೆಯಲಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ರೈತರನ್ನು ಉಪಮುಖ್ಯಮಂತ್ರಿಗಳ ಬಳಿ ತೆರಳಿ ಸಮಸ್ಯೆ ಹೇಳಲು ಅವಕಾಶ ನೀಡಲಿಲ್ಲ ಎಂಬ ಆರೋಪವೂ ರೈತರಿಂದ ಕೇಳಿಬಂದಿದೆ.
“ಬರ ಪ್ರವಾಸವು ಕೇವಲ ನಾಮಕಾವಸ್ಥೆಗೆ ಮಾತ್ರ ಸೀಮಿತವಾಗಿದೆಯೇ?” ಎಂಬ ಪ್ರಶ್ನೆಯನ್ನು ರೈತರು ವ್ಯಕ್ತಪಡಿಸಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ತಹಶೀಲ್ದಾರ್ ಡಾ. ಸ್ಮಿತಾ ರಾಮು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ, ಸಹಾಯಕ ಕೃಷಿ ನಿರ್ದೇಶಕ ರವಿ, ಕವಲಂದೆ ಉಪ ತಹಶೀಲ್ದಾರ್ ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಡಾ.ಜಿ. ಪರಮೇಶ್ವರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ. ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
    user_Mysore update
    Mysore update
    Voice of people Mysuru, Karnataka•
    7 hrs ago
  • ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಒತ್ತಾಯ ಮಾಡಿದ್ದಾರೆ ಮೈಸೂರು: ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಮೈಸೂರು ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಪಿರಿಯಾಪಟ್ಟಣ ತಾಲೂಕನ್ನು ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಡಾ. ಅರುಣ್ ಕುಮಾರ್ ಆರೋಪಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ಈಗಾಗಲೇ ಸಮರ್ಪಕ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಪ್ರದೇಶವಾಗಿದೆ. ಮಳೆ ಕೊರತೆಯಿಂದಾಗಿ ರೈತರು ಬೆಳೆ ಬೆಳೆಯಲು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಟ್ಟಿರುವುದು ರೈತರ ಬಾಯಿಗೆ ಮಣ್ಣು ಎರಚಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ನಿರ್ಧಾರವು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತಾಗಿದೆ. ಬರದ ಪರಿಣಾಮದಿಂದ ಸಂಕಷ್ಟದಲ್ಲಿರುವ ಪಿರಿಯಾಪಟ್ಟಣದ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ. ವೆಂಕಟೇಶ್ ಅವರು ಈ ವಿಚಾರವನ್ನು ಪುನರ್ ಪರಿಶೀಲಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಪಿರಿಯಾಪಟ್ಟಣ ತಾಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಡಾ. ಅರುಣ್ ಕುಮಾರ್ ಆಗ್ರಹಿಸಿದರು.
    1
    ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಒತ್ತಾಯ ಮಾಡಿದ್ದಾರೆ 

ಮೈಸೂರು: ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಮೈಸೂರು ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಪಿರಿಯಾಪಟ್ಟಣ ತಾಲೂಕನ್ನು ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಡಾ. ಅರುಣ್ ಕುಮಾರ್ ಆರೋಪಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಈಗಾಗಲೇ ಸಮರ್ಪಕ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಪ್ರದೇಶವಾಗಿದೆ. ಮಳೆ ಕೊರತೆಯಿಂದಾಗಿ ರೈತರು ಬೆಳೆ ಬೆಳೆಯಲು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಟ್ಟಿರುವುದು ರೈತರ ಬಾಯಿಗೆ ಮಣ್ಣು ಎರಚಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಈ ನಿರ್ಧಾರವು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತಾಗಿದೆ. ಬರದ ಪರಿಣಾಮದಿಂದ ಸಂಕಷ್ಟದಲ್ಲಿರುವ ಪಿರಿಯಾಪಟ್ಟಣದ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ. ವೆಂಕಟೇಶ್ ಅವರು ಈ ವಿಚಾರವನ್ನು ಪುನರ್ ಪರಿಶೀಲಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಪಿರಿಯಾಪಟ್ಟಣ ತಾಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಡಾ. ಅರುಣ್ ಕುಮಾರ್ ಆಗ್ರಹಿಸಿದರು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    2 hrs ago
  • ಮನೆ ಮೇಲೆ ಮನೆ ಅಕ್ಕ ಪಕ್ಕ ಪಕ್ಷಿಗಳಿಗೆ ನೀರು ಕಾಳು ಇಡುವ ಮೂಲಕ ಪಕ್ಷಿ ಸಂಕುಲ ಉಳಿಸಿ.
    1
    ಮನೆ ಮೇಲೆ ಮನೆ ಅಕ್ಕ ಪಕ್ಕ ಪಕ್ಷಿಗಳಿಗೆ ನೀರು ಕಾಳು ಇಡುವ ಮೂಲಕ ಪಕ್ಷಿ ಸಂಕುಲ ಉಳಿಸಿ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಮಂಗಳೂರು ನಗರದ ಹೊರವಲಯದ ಕುತ್ತಾರ್ ನಲ್ಲಿ ಕೊರಗಜ್ಜ ಸರ್ಕ ಲೋಕಾರ್ಪಣೆ ಮಂಗಳೂರು ನಗರದ ಹೊರವಲಯದ ಕುತ್ತಾರ್ ನಲ್ಲಿ ಕೊರಗಜ್ಜ ಸರ್ಕ ಲೋಕಾರ್ಪಣೆ
    1
    ಮಂಗಳೂರು ನಗರದ ಹೊರವಲಯದ ಕುತ್ತಾರ್ ನಲ್ಲಿ ಕೊರಗಜ್ಜ ಸರ್ಕ ಲೋಕಾರ್ಪಣೆ
ಮಂಗಳೂರು ನಗರದ ಹೊರವಲಯದ ಕುತ್ತಾರ್ ನಲ್ಲಿ ಕೊರಗಜ್ಜ ಸರ್ಕ ಲೋಕಾರ್ಪಣೆ
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    3 hrs ago
  • All About,Irregularities & One Man 5 Post by highly influential person in #DistrictWaqfAdvisoryCommittee #Mysuru *ಭಾರತ ನಲ್ಲಿ ವೈರಲ್*
    1
    All About,Irregularities & One Man 5 Post by highly influential person in #DistrictWaqfAdvisoryCommittee #Mysuru 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಕೇಂದ್ರ ಸರ್ಕಾರದ ದ್ವೇಶ ರಾಜಕೀಯಾ ರಾಹುಲ್ ವಿರುದ್ದ FIR -ಕಾಂಗ್ರೆಸ್ ಆಕ್ರೋಶ ಮಂಡ್ಯ- ರಹುಲ್ ಗಾಂದಿ ವಿರುದ್ದ ದ್ವೇಶ ರಾಜಕೀಯ ಮಾಡುತ್ತಿರು ಕೇಂದ್ರ ಸರ್ಕಾರ ಸುಳ್ಳು FIR ದಾಖಲಿಸಿದ್ದು,ಕೂಡಲೆ ಅದನ್ನ ಹಿಂದೆ‌ಪಡೆಯಬೇಕು ಅಂತ‌ಆಗ್ರಹಿಸಿ ಕಾಂಗ್ರೆಸ‌್ ಮಂಡ್ಯಲ್ಲಿ‌ ಪ್ರತಿಭಟನೆ ನಡೆಸಿತು.
    1
    ಕೇಂದ್ರ ಸರ್ಕಾರದ ದ್ವೇಶ ರಾಜಕೀಯಾ ರಾಹುಲ್ ವಿರುದ್ದ FIR -ಕಾಂಗ್ರೆಸ್ ಆಕ್ರೋಶ
ಮಂಡ್ಯ- ರಹುಲ್ ಗಾಂದಿ ವಿರುದ್ದ ದ್ವೇಶ ರಾಜಕೀಯ ಮಾಡುತ್ತಿರು ಕೇಂದ್ರ ಸರ್ಕಾರ ಸುಳ್ಳು  FIR ದಾಖಲಿಸಿದ್ದು,ಕೂಡಲೆ ಅದನ್ನ ಹಿಂದೆ‌ಪಡೆಯಬೇಕು ಅಂತ‌ಆಗ್ರಹಿಸಿ ಕಾಂಗ್ರೆಸ‌್ ಮಂಡ್ಯಲ್ಲಿ‌ ಪ್ರತಿಭಟನೆ ನಡೆಸಿತು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.