ಮಕ್ಕಳಲ್ಲಿ ಚೈತನ್ಯ ಮೂಡಿಸಲು ಬೇಸಿಗೆ ಶಿಬಿರ ಸಹಕಾರ; ಉಚಿತ ಬೇಸಿಗೆ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ; ಬಿಇಓ ಎನ್ ವೆಂಕಟೇಶಪ್ಪ ಉಚಿತವಾಗಿ ನಡೆಸುತ್ತಿರುವ 10 ದಿನಗಳ ಬೇಸಿಗೆ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು. ಬೇಸಿಗೆ ಶಿಬಿರದಲ್ಲಿ ದೊರೆಯುವ ವಿವಿಧ ಕೌಶಲಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಹೇಳಿದರು. ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 10 ದಿನಗಳ ಕಾಲದ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಷ್ಟು ದಿನ ಶಾಲೆಯಲ್ಲಿ ಬೆಳಿಗ್ಗೆ ಯಿಂದ ಸಂಜೆ ವರೆಗೆ ತರಗತಿಗೆ ಸಂಬಂಧಿಸಿದ ಪಾಠವನ್ನು ಕಲಿಯುತ್ತಿದ್ದರು. ಆಟದಿಂದ ಪರಿಸರ ಸಂರಕ್ಷಣೆವರೆಗೆ... ನಾಟಕ, ನೃತ್ಯ, ಗಾಯನ, ಚಿತ್ರಕಲೆ, ಆಟಗಳು, ಕೃತಕ ಗೋಡೆ ಹತ್ತುವುದು, ಕರಾಟೆ, ಕುಂಗ್ಫೂ ಮೊದಲಾದ ಸಾಹಸ ಕ್ರೀಡೆಗಳು, ಸ್ವಿಮ್ಮಿಂಗ್, ಮಕ್ಕಳಿಗೆ ಅನುಕೂಲವಾಗುವ ಪ್ರವಾಸಿ ತಾಣಗಳ ವೀಕ್ಷಣೆ, ಬೊಂಬೆಗಳ ತಯಾರಿಕೆ, ಮಣ್ಣಿನ ಕಲಾಕೃತಿಗಳ ರಚನೆ, ಕಸೂತಿ, ಪ್ರದರ್ಶನ ಕಲೆಗಳು, ಲಲಿತಕಲೆ, ಸಂಗೀತ, ಮ್ಯಾಜಿಕ್, ಪರಿಸರ ಸಂರಕ್ಷಣೆಯ ಅರಿವು... ಹೀಗೆ ಹಲವು 15 ಕ್ಕೂ ಹೆಚ್ಚು ವಿವಿಧ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ಕಲಿಸುತ್ತಾರೆ ಎಂದು ಹೇಳಿದರು. ನೀವು ಕಲಿಯಿರಿ ನಿಮ್ಮ ಸ್ನೇಹಿತರನ್ನು ಶಿಬಿರಕ್ಕೆ ಕರೆತನ್ನಿ. ಪಿ.ಎಂ ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಗೇಪಲ್ಲಿ ಶಾಲೆ ಆಯ್ಕೆ ಮಾಡಿಕೊಂಡಿದ್ದೇವೆ. ನುರಿತ ಶಿಕ್ಷಕರು ತರಬೇತಿ ನೀಡುತ್ತಾರೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ ದೈಹಿಕ ಶಿಕ್ಷಣ ಶಿಕ್ಷಕರು, ಹಾಗೂ ನುರಿತ ಶಿಕ್ಷಕರು ಹಾಜರಿದ್ದರು.
ಮಕ್ಕಳಲ್ಲಿ ಚೈತನ್ಯ ಮೂಡಿಸಲು ಬೇಸಿಗೆ ಶಿಬಿರ ಸಹಕಾರ; ಉಚಿತ ಬೇಸಿಗೆ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ; ಬಿಇಓ ಎನ್ ವೆಂಕಟೇಶಪ್ಪ ಉಚಿತವಾಗಿ ನಡೆಸುತ್ತಿರುವ 10 ದಿನಗಳ ಬೇಸಿಗೆ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು. ಬೇಸಿಗೆ ಶಿಬಿರದಲ್ಲಿ ದೊರೆಯುವ ವಿವಿಧ ಕೌಶಲಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಹೇಳಿದರು. ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 10 ದಿನಗಳ ಕಾಲದ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ
ನೀಡಿ ಮಾತನಾಡಿದ ಅವರು, ಇಷ್ಟು ದಿನ ಶಾಲೆಯಲ್ಲಿ ಬೆಳಿಗ್ಗೆ ಯಿಂದ ಸಂಜೆ ವರೆಗೆ ತರಗತಿಗೆ ಸಂಬಂಧಿಸಿದ ಪಾಠವನ್ನು ಕಲಿಯುತ್ತಿದ್ದರು. ಆಟದಿಂದ ಪರಿಸರ ಸಂರಕ್ಷಣೆವರೆಗೆ... ನಾಟಕ, ನೃತ್ಯ, ಗಾಯನ, ಚಿತ್ರಕಲೆ, ಆಟಗಳು, ಕೃತಕ ಗೋಡೆ ಹತ್ತುವುದು, ಕರಾಟೆ, ಕುಂಗ್ಫೂ ಮೊದಲಾದ ಸಾಹಸ ಕ್ರೀಡೆಗಳು, ಸ್ವಿಮ್ಮಿಂಗ್, ಮಕ್ಕಳಿಗೆ ಅನುಕೂಲವಾಗುವ ಪ್ರವಾಸಿ ತಾಣಗಳ ವೀಕ್ಷಣೆ, ಬೊಂಬೆಗಳ ತಯಾರಿಕೆ, ಮಣ್ಣಿನ ಕಲಾಕೃತಿಗಳ ರಚನೆ, ಕಸೂತಿ, ಪ್ರದರ್ಶನ ಕಲೆಗಳು, ಲಲಿತಕಲೆ, ಸಂಗೀತ, ಮ್ಯಾಜಿಕ್, ಪರಿಸರ ಸಂರಕ್ಷಣೆಯ ಅರಿವು... ಹೀಗೆ
ಹಲವು 15 ಕ್ಕೂ ಹೆಚ್ಚು ವಿವಿಧ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ಕಲಿಸುತ್ತಾರೆ ಎಂದು ಹೇಳಿದರು. ನೀವು ಕಲಿಯಿರಿ ನಿಮ್ಮ ಸ್ನೇಹಿತರನ್ನು ಶಿಬಿರಕ್ಕೆ ಕರೆತನ್ನಿ. ಪಿ.ಎಂ ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಗೇಪಲ್ಲಿ ಶಾಲೆ ಆಯ್ಕೆ ಮಾಡಿಕೊಂಡಿದ್ದೇವೆ. ನುರಿತ ಶಿಕ್ಷಕರು ತರಬೇತಿ ನೀಡುತ್ತಾರೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ ದೈಹಿಕ ಶಿಕ್ಷಣ ಶಿಕ್ಷಕರು, ಹಾಗೂ ನುರಿತ ಶಿಕ್ಷಕರು ಹಾಜರಿದ್ದರು.
- Post by Chand Pasha1
- KOLAR KI.AWAAZ KOUSAR NEWS1
- #ನಾನು ಏ.4ಕ್ಕೆ ಯುವ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್1
- *ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿಕೆ* ಯಾರೆಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೆ ಅವರ ವಿರುದ್ದ ಕ್ರಮ ಆಗುತ್ತಿದೆ ಕಾಂಗ್ರೆಸ್ ಬೆಳಿಬೇಕು ಕಾಂಗ್ರೆಸ್ ನಿಂದ ಬಡವರಿಗೆ ಅನುಕೂಲ ಆಗಬೇಕು ಎನ್ನುವವರಿಗೆ ಇಂಥದ್ದೆಲ್ಲ ಆಗ್ತಿದೆ *ಸಿಎಂ ಇಂಥ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ತಿಲ್ಲ**ಅವರು ಗಟ್ಟಿಯಾಗಿ ನಿಲ್ತಿಲ್ಲ ಎನ್ನವುದು ನಮಗೂ ಬೇಸರ* *ಸಿಎಂಗೆ ಯಾವ ಯೋಚನೆ ಇದೆಯೋ ಗೊತ್ತಿಲ್ಲ**ಸಿಎಂ ಸಿದ್ದರಾಮಯ್ಯ ರಿಂದ ಇಂಥ ಅಸಹಾಯಕತೆಯನ್ನು ನಿರೀಕ್ಷೆ ಮಾಡಿರಲಿಲ್ಲ* *ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ**ಸಿದ್ದರಾಮಯ್ಯಗೆ ಕಂಪಲ್ಶನ್ ಇದಾವೆ ಗೊತ್ತಿಲ್ಲ* ಅವರು ಹೇಳಿದರೆ ನಮಗೂ ತಿಳಿಯಬೇಕು *ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ* *ಧ್ವನಿ ಕುಗ್ಗಿದಾಗ ಅಸಹಾಯಕತೆ ಆಗುತ್ತದೆ* *ಸಿದ್ದರಾಮಯ್ಯ ಪರ ಇರುವವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅಂತ ಜನ ಮಾತಾಡ್ತಾ ಇದ್ದಾರೆ*ದೊರೆ ಮಾಡಿದ್ದಕ್ಕೆ ದಂಡ ಇಲ್ಲ1
- Post by Suresh Belagere1
- ಹಸೆ ಮಣೆ ಹೇರಲು ವಾರ ಬಾಕಿ ಇರುವಾಗಲೇ ಸಿದ್ದಾಪುರ ಗ್ರಾಮದಲ್ಲಿ ಬಿರುಗಾಳಿಗೆ ಯುವತಿಯ ಕನಸು ಚೂರಾಗಿದೆ. ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬೀಸಿದ ಬಿರುಗಾಳಿಯಿಂದ ದುರ್ಘಟನೆ ಸಂಭವಿಸಿದೆ.1
- ಸಿಎಂ-ಡಿಸಿಎಂ ನಡುವೆ ಭಿನ್ನತೆ ಇಲ್ಲ ಎಂದ ಡಿಕೆಶಿ ಮಾಧ್ಯಮಗಳೇ ಗುಂಪು ಕಥೆ ಸೃಷ್ಟಿಸುತ್ತಿವೆ ಕಿಡಿ1
- KOLAR KI.AWAAZ KOUSAR NEWS1
- Post by Chand Pasha1