ಬಿ. ಆರ್. ಅಂಬೇಡ್ಕರ್ ಅವರು ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಮಾಗಡಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕನ್ನು ಕಟ್ಟಿಕೊಟ್ಟಿದ್ದರೆ ಮತ್ತು ಬಾಬು ಜಗಜೀವನ್ ರಾಮ್ ಅವರು ಅಸಿವನ್ನು ನೀಗಿಸಿದ್ದಾರೆ ಇವರು ಈ ದೇಶದ ಎರಡು ದೊಡ್ಡ ಶಕ್ತಿಗಳು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟರು. ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀನರಾಂ ಅವರು ಈ ದೇಶದ ಮಹಾಚೈತನ್ಯ ಪುರುಷರು ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯ. ಜಗಜೀವನ ರಾಂ ಅವರು ಕೇಂದ್ರ ಕೃಷಿ ಸಚಿವರಾಗಿದ್ದಾಗ ಜಾರಿಗೆ ತಂದ ಕೃಷಿಪರ ಯೋಜನೆಗಳು ದೇಶದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿವೆ. ಅಂಬೇಡ್ಕರ್ ಅವರಿಂದ ನಮಗೆಲ್ಲರಿಗೂ ಅಧಿಕಾರ ಸಿಕ್ಕಿದೆ, ಜಾತಿ ಪದ್ದತಿ ಇನ್ನೂ ತಾಂಡವಾಡುತ್ತಿದೆ ಸಮ ಸಮಾಜದ ನಿರ್ಮಾಣದ ಕೆಲಸ ದೇಶದಲ್ಲಿ ಆರಂಭವಾಗಿದೆ ಇದಕ್ಕೆ ಅಂಬೇಡ್ಕರ್ ಬುನಾಧಿ ಹಾಕಿದ್ದಾರೆ. ಸಂವಿಧಾನ ರಚನೆಗೆ ಡಾ.ಬಿ.ಆರ್. ಅಂಬೇಡ್ಕರ್ ಗೆ ಯಜಮಾನಿಕೆ ಹಾಗೂ ಮೊದಲ ಕಾನೂನು ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ, ಅವರ ತತ್ವ, ಸಿದ್ದಾಂತವನ್ನು ಅನುಷ್ಠಾನಗೊಳಿಸುತ್ತಿರುವುದು ಕಾಂಗ್ರೆಸ್ ಪಕ್ಷ ನೆಹರು, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅಂತಹ ನಾಯಕರು ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಉಚಿತ ವಿದ್ಯುತ್, 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೋಳಿಸಿದ್ದು ಕಾಂಗ್ರೆಸ್ ಪಕ್ಷ, ಇದನ್ನು ಟೀಕೆ ಮಾಡುವವರು ಮೊದಲು ನಿಂತು ಗ್ಯಾರಂಟಿ ಪಡೆಯುತ್ತಾರೆ ಬಿಜೆಪಿ ಪಕ್ಷದವರು 10 ವರ್ಷ ರಾಜ್ಯವನ್ನು ಆಳ್ವಿಕೆ ಮಾಡಿ ಏನನ್ನು ನೀಡಿದ್ದಾರೆ ಜಾತಿ-ಜಾತಿ ನಡುವೆ ವಿಷ ಜೀಜ ಬಿತ್ತಿ ಮತಹಾಕಿಸಿಕೊಳ್ಳುವುದು ಅವರ ಕಾಯಕವಾಗಿದೆ ಎಂದು ಲೇವಡಿ ಮಾಡಿದರು. ತಹಸೀಲ್ದಾರ್ ಶರತ್ ಕುಮಾರು ಮಾತನಾಡಿ, ಅಂಬೇಡ್ಕರ್ ಅವರು ಶೋಷಣೆಯನ್ನು ಮೆಟ್ಟಿ ನಿಂತು ಸದೃಢ ಭಾರತಕ್ಕೆ ಅಡಿಪಾಯ ಹಾಕಿದ ರೀತಿ ಇಂದಿನ ಪೀಳಿಗೆಗೆ ಮಾದರಿ ಎಂದರು. ಕಪ್ಪು ಬಾವುಟದ ಎಚ್ಚರಿಕೆ : ದಲಿತ ಮುಖಂಡ ಚಿಕ್ಕರಾಜು ಮಾತನಾಡಿ, 6 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿರುವ ಶಾಸಕರ ಕೆಲಸಕ್ಕೆ ಅಡ್ಡಿಪಡಿಸುವವರಿಗೆ ದಲಿತ ಕೇರಿಗಳಲ್ಲಿ ಪ್ರವೇಶವಿಲ್ಲ. ಅಂತಹ ರಾಜಕಾರಣಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು. ತಾ.ಪಂ. ಇ.ಓ ಜೈಪಾಲ್, ಬಿಇಓ ಚಂದ್ರಶೇಖರ್, ಸಿಡಿಪಿಓ ಸುರೇಂದ್ರ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಜಾನಿಗೆರೆ ರವೀಶ್, ಬಿಎಂಆರ್ಡಿಎ ಅಧ್ಯಕ್ಷ ಪ್ರಕಾಶ್, ನಿರ್ದೆಶಕ ದೀಪು, ಕಲ್ಕೆರೆ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿ.ಜಿ. ವೆಂಕಟೇಶ್, ವನಜ, ಗೋಪಾಲ್, ಬೆಂಕಿ ಮಹದೇವ್, ಹರೀಶ್, ರಾಜು ಇತರರು ಇದ್ದರು.
ಬಿ. ಆರ್. ಅಂಬೇಡ್ಕರ್ ಅವರು ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಮಾಗಡಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕನ್ನು ಕಟ್ಟಿಕೊಟ್ಟಿದ್ದರೆ ಮತ್ತು ಬಾಬು ಜಗಜೀವನ್ ರಾಮ್ ಅವರು ಅಸಿವನ್ನು ನೀಗಿಸಿದ್ದಾರೆ ಇವರು ಈ ದೇಶದ ಎರಡು ದೊಡ್ಡ ಶಕ್ತಿಗಳು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟರು. ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀನರಾಂ ಅವರು ಈ ದೇಶದ ಮಹಾಚೈತನ್ಯ ಪುರುಷರು ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯ. ಜಗಜೀವನ ರಾಂ ಅವರು ಕೇಂದ್ರ ಕೃಷಿ ಸಚಿವರಾಗಿದ್ದಾಗ ಜಾರಿಗೆ ತಂದ ಕೃಷಿಪರ ಯೋಜನೆಗಳು ದೇಶದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿವೆ. ಅಂಬೇಡ್ಕರ್ ಅವರಿಂದ ನಮಗೆಲ್ಲರಿಗೂ ಅಧಿಕಾರ ಸಿಕ್ಕಿದೆ, ಜಾತಿ ಪದ್ದತಿ ಇನ್ನೂ ತಾಂಡವಾಡುತ್ತಿದೆ ಸಮ ಸಮಾಜದ ನಿರ್ಮಾಣದ ಕೆಲಸ ದೇಶದಲ್ಲಿ ಆರಂಭವಾಗಿದೆ ಇದಕ್ಕೆ ಅಂಬೇಡ್ಕರ್ ಬುನಾಧಿ ಹಾಕಿದ್ದಾರೆ. ಸಂವಿಧಾನ ರಚನೆಗೆ ಡಾ.ಬಿ.ಆರ್. ಅಂಬೇಡ್ಕರ್ ಗೆ ಯಜಮಾನಿಕೆ ಹಾಗೂ ಮೊದಲ ಕಾನೂನು ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ, ಅವರ ತತ್ವ, ಸಿದ್ದಾಂತವನ್ನು ಅನುಷ್ಠಾನಗೊಳಿಸುತ್ತಿರುವುದು ಕಾಂಗ್ರೆಸ್ ಪಕ್ಷ ನೆಹರು, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅಂತಹ ನಾಯಕರು ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಉಚಿತ ವಿದ್ಯುತ್, 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೋಳಿಸಿದ್ದು ಕಾಂಗ್ರೆಸ್ ಪಕ್ಷ, ಇದನ್ನು ಟೀಕೆ ಮಾಡುವವರು ಮೊದಲು ನಿಂತು ಗ್ಯಾರಂಟಿ ಪಡೆಯುತ್ತಾರೆ ಬಿಜೆಪಿ ಪಕ್ಷದವರು 10 ವರ್ಷ ರಾಜ್ಯವನ್ನು ಆಳ್ವಿಕೆ ಮಾಡಿ ಏನನ್ನು ನೀಡಿದ್ದಾರೆ ಜಾತಿ-ಜಾತಿ ನಡುವೆ ವಿಷ ಜೀಜ ಬಿತ್ತಿ ಮತಹಾಕಿಸಿಕೊಳ್ಳುವುದು ಅವರ ಕಾಯಕವಾಗಿದೆ ಎಂದು ಲೇವಡಿ ಮಾಡಿದರು. ತಹಸೀಲ್ದಾರ್ ಶರತ್ ಕುಮಾರು ಮಾತನಾಡಿ, ಅಂಬೇಡ್ಕರ್ ಅವರು ಶೋಷಣೆಯನ್ನು ಮೆಟ್ಟಿ ನಿಂತು ಸದೃಢ ಭಾರತಕ್ಕೆ ಅಡಿಪಾಯ ಹಾಕಿದ ರೀತಿ ಇಂದಿನ ಪೀಳಿಗೆಗೆ ಮಾದರಿ ಎಂದರು. ಕಪ್ಪು ಬಾವುಟದ ಎಚ್ಚರಿಕೆ : ದಲಿತ ಮುಖಂಡ ಚಿಕ್ಕರಾಜು ಮಾತನಾಡಿ, 6 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿರುವ ಶಾಸಕರ ಕೆಲಸಕ್ಕೆ ಅಡ್ಡಿಪಡಿಸುವವರಿಗೆ ದಲಿತ ಕೇರಿಗಳಲ್ಲಿ ಪ್ರವೇಶವಿಲ್ಲ. ಅಂತಹ ರಾಜಕಾರಣಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು. ತಾ.ಪಂ. ಇ.ಓ ಜೈಪಾಲ್, ಬಿಇಓ ಚಂದ್ರಶೇಖರ್, ಸಿಡಿಪಿಓ ಸುರೇಂದ್ರ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಜಾನಿಗೆರೆ ರವೀಶ್, ಬಿಎಂಆರ್ಡಿಎ ಅಧ್ಯಕ್ಷ ಪ್ರಕಾಶ್, ನಿರ್ದೆಶಕ ದೀಪು, ಕಲ್ಕೆರೆ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿ.ಜಿ. ವೆಂಕಟೇಶ್, ವನಜ, ಗೋಪಾಲ್, ಬೆಂಕಿ ಮಹದೇವ್, ಹರೀಶ್, ರಾಜು ಇತರರು ಇದ್ದರು.
- ಮಾಗಡಿ : ಡಿಕೆ.ಶಿವಕುಮಾರು ಯಾಗಾಗ ಮುಖ್ಯಮಂತ್ರಿ ಆಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಅದನ್ನೆ ಕೇಳಲು ದೆಹಲಿಗೆ ಹೋಗುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಉತ್ತರಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಈಗಾಗಲೇ ತೆರಳಿದ್ದಾರೆ ಅವರ ಜೊತೆಗೆ ನಾನು ತೆರಳಬೇಕಿತ್ತು ಕ್ಷೇತ್ರದಲ್ಲಿ ಅಂಬೇಡ್ಕರ್ ಜಯಂತಿ ಇರುವುದರಿಂದ ಮುಗಿಸಿದ ನಂತರ ಬರುವುದಾಗಿ ತಿರ್ಮಾನಿಸಲಾಗುವುದು ಎಂದು ಹೇಳಿದ್ದೆ ಅದೇ ರೀತಿ ಏಪ್ರಿಲ್ 15 ರಂದು ದೆಹಲಿಗೆ ತೆರಳುವ ಸಂದರ್ಭ ಬರಲಿದೆ. ಸಚಿವ ಸಂಪುಟದಲ್ಲಿ ಈಗಾಗಲೇ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ, ಹಿರಿಯ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟು ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಗೊಂದಲಕ್ಕೆ ಇತಿಶ್ರೀ ಹಾಡುವಂತೆ ಪಕ್ಷದ ಹೈಕಮಾಂಡ್ನಲ್ಲಿ ಕೇಳುತ್ತೇವೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಆಹಮದ್ ಬೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ, ಈ ವಿಚಾರವಾಗಿ ತಿಳಿದು ಮಾತನಾಡುವುದಾಗಿ ಸ್ವಷ್ಟಪಡಿಸಿದರು. ಸಿಎಂ ಅಪ್ತ ಸಲಹೆಗಾರರ ತಲೆದಂಡ : ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ ಪಕ್ಷ ವಿರೋಧಿ ಕೆಲಸಮಾಡಿದರೆ ಅದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರು ಆಗಲಿ ನಾನಾಗಲಿ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ತಲೆದಂಡವಾಗಲಿದೆ ಎಂದರು. ಎರಡು ಕ್ಷೇತ್ರದ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ, ಮುಸ್ಲಿಂನ ಎಲ್ಲಾ ನಾಯಕರು ಚುನಾವಣೆ ಮಾಡಿದ್ದಾರೆ 10 ಪರ್ಸೆಟ್ ಏರುಪೇರಾಗಲಿದೆ ಈ ಬಗ್ಗೆ ಮತ ಪೆಟ್ಟಿ ತೆರೆದಮೇಲೆ ಗೊತ್ತಾಗಲಿದೆ ಎಂದರು. ಕೇರಳ ಮತ್ತು ಕರ್ನಾಟಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ ಕೇರಳದಲ್ಲಿ ಬಡವರು, ನರ್ಸ್ಗಳು, ಪೌರಕಾರ್ಮಿಕರು ಚುನಾವಣೆಗೆ ಸ್ಪಂದಿಸುತ್ತಾರೆ ಆ ರೀತಿ ಕರ್ನಾಟಕದಲ್ಲಿ ಸಾಧ್ಯವೆ. ನಾನು ಪ್ರಚಾರಕ್ಕೆ ಹೋದ ವ್ಯಕ್ತಿಯನ್ನು 2 ಭಾರಿ ಗೆಲ್ಲಿಸಿದ್ದಾರೆ ಅವರು ಇಂದಿಗೂ ಚಿಕ್ಕಮನೆಯಲ್ಲಿ ಇದ್ದಾರೆ ಅಲ್ಲಿಯ ಚುನಾವಣೆ ವೆಚ್ಚ 2 ಕೋಟಿ ಇಲ್ಲಿನ ವೆಚ್ಚ ಹತ್ತು ಪಟ್ಟು ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅವರಿಂದ ಸಹಾಯ ಪಡೆದ ಜೆಡಿಎಸ್ ಮುಖಂಡರೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಈ ಬಗ್ಗೆ ಅವರ ಬಗ್ಗೆ ಏಕೆ ಮಾತನಾಡುತ್ತಾರ ಎಂದು ತಿಳಿಸಿದ್ದೇನೆ ಆದರೂ ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ ಈ ವೇಳೆ ನನ್ನ ವಯಕ್ತಿಕವಾಗಿ ಮಾತನಾಡಿರುವ ಬಗ್ಗೆ ಚರ್ಚೆಮಾಡುತ್ತೇನೆ ದಾಖಲೆ ಪ್ರದರ್ಶಿಸಲಿ ಇಲ್ದಿದ್ದರೆ ತಪ್ಪನ್ನು ಒಪ್ಪಿಕೊಂಡು ಈ ರೀತಿ ಆರೋಪಿಸುವುದನ್ನು ಬಿಡಲಿ ಈ ವೇಳೆ ಗಲಭೆಯಾದರೆ ಚರ್ಚೆಗೆ ಮೂಲಭೂತವಾಗಿ ಕಾರಣವಾದವರ ವಿರುದ್ದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಬಿಎಂಆರ್ಡಿಎ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೆಶಕ ದೀಪು, ತಾ.ಪಂ. ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್,ದೊಡ್ಡಿ ಲೋಕೇಶ್, ಚಿಕ್ಕರಾಜು, ಬೆಂಕಿ ಮಹದೇವ್, ಚಿಕ್ಕಮುದಿಗೆರೆ ಸುರೇಶ್, ರಾಜು, ಬೆಳ್ಳಿಯಪ್ಪ , ಕುದೂರು ಲೋಕೇಶ್, ಚಿಲಿಪಿಲಿ ರಾಜಣ್ಣ ಇತರರು ಇದ್ದರು.1
- ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಮಂಗಳವಾರ ದೆಹಲಿ ನೋಂದಣಿ ಸಂಖ್ಯೆಯ ಬೈಕ್ನ್ನು ರಸ್ತೆಯ ಮಧ್ಯೆ ನಿಲ್ಲಿಸಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ವೈರಲ್ ಆಗಿದೆ. ಉತ್ತರ ಭಾರತದ ವ್ಯಕ್ತಿಯೊಬ್ಬರು ಬೈಕ್ನ್ನು ಸಂಚಾರದ ಮಧ್ಯೆ ನಿಲ್ಲಿಸಿ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಬೈಕ್ ತೆರವುಗೊಳಿಸುವಂತೆ ಕೇಳಿದಾಗ, ಆತ ಸ್ಥಳೀಯರೊಂದಿಗೆ ಉದ್ಧಟವಾಗಿ ವರ್ತಿಸಿ ವಾಗ್ವಾದಕ್ಕಿಳಿದಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.1
- ತುಮಕೂರಿನ ಅಮಾನಿಕೆರೆಯಲ್ಲಿ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಬೋಟ್ ಪೆರೇಡ್ ಜನರ ಕಣ್ಣನ್ನು ತಂಪು ಗೊಳಿಸಿದೆ1
- ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಭಾರತ ಕರ್ನಾಟಕ ಜನತೆಗೆ ಆರ್ಥಿಕ ಶುಭಾಶಯಗಳು ಎಲ್ಲಾ ಜನತೆ ಸೇರಿಸಿ ಒಗ್ಗಟ್ಟಾಗಿ ಜಯಂತಿ ಮಾಡೋಣ ಆ ಜಾತಿ ಈ ಜಾತಿ ಜಾತಿ ಇಲ್ಲ ಒಂದೇ ಜಾತಿ ಮಾನವ ಜಾತಿ ಎಲ್ಲರಿಗೂ ಜೈ ಭೀಮ್ ಜೈ ಭೀಮ್ 💐💐❤️❤️💐💐👍1
- ಹೊಸಕೋಟೆ ಮನೆ ಆವರಣದಲ್ಲೇ ವ್ಯಕ್ತಿಯ ಬರ್ಬರ ಕೊಲೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು. ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಘಟನೆ. ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಘಟನೆ ನಿನ್ನೆ ರಾತ್ರಿ ನಡೆದಿರುವ ಘಟನೆ, ಇಂದು ಮುಂಜಾನೆ ಬೆಳಕಿಗೆ. ಅದೇ ಗ್ರಾಮದ ಶಿವಶಂಕರ್ (40) ಮೃತ ದುರ್ದೈವಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಭೇಟಿ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮ3
- Post by Venu Gopal1
- SCARCITY OF LPG IN MYSURU HUNDREDS OF AUTO DRIVER'S ARE WAITING FOR THEIR TERM #kvnews #lpgshortage #autos #driver1
- ಮಾಧ್ಯಮದವರ ಮೇಲೆ ಗೂಂಡಾ ವರ್ತನೆ ತೋರಿದ ರಾಮಮೂರ್ತಿನಗರ ಪೊಲೀಸ್ ಠಾಣಾ ಎಎಸ್ಐ ಶಿವಕುಮಾರ್1