ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ರವರು ನಿಜಕ್ಕೂ ಜನಶಕ್ತಿಯ ಮಹತ್ವ ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ತೆರೆದಿರುವ TVK ಪಕ್ಷದ ಮುಖ್ಯಸ್ಥ *ದಳಪತಿ ವಿಜಯ್* ರವರ ಗೆಲುವು ನಿಜಕ್ಕೂ ಜನಶಕ್ತಿಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೊಡ್ಡ ಕುಟುಂಬಗಳು, ವಂಶಪಾರಂಪರ್ಯ ರಾಜಕೀಯಗಳಿಗಿಂತ ಜನರ ನಡುವೆ ಹುಟ್ಟಿದ ನಾಯಕತ್ವವೇ ನಿಜವಾದ ಜನನಾಯಕತ್ವ ಎಂಬ ಸಂದೇಶವನ್ನು ಅವರು ತಮ್ಮ ಜಯದ ಮೂಲಕ ಸ್ಪಷ್ಟವಾಗಿ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತು ಜನರೊಂದಿಗೆ ಬೆರೆತು, ಅವರ ನೋವು-ನಲಿವುಗಳನ್ನು ಅರಿತು, ಅವರ ಆಸೆಗಳ ಪ್ರತಿಬಿಂಬವಾಗುವ ನಾಯಕನೇ ಜನ-ಮನ ಗೆಲ್ಲುತ್ತಾನೆ. ಅದೇ ರೀತಿಯಲ್ಲಿ ವಿಜಯ್ ಅವರು ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೆ, ಜನರ ವಿಶ್ವಾಸವನ್ನು ಮುಖ್ಯವೆಂದು ತೆಗೆದುಕೊಂಡು ನಡೆದುಕೊಂಡಿರುವುದು ವಿಶೇಷ. ಮುಖ್ಯಮಂತ್ರಿ ಸ್ಥಾನಗಳ ಭರವಸೆಗಳಂತಹ ಆಕರ್ಷಣೆಗಳಿಗಿಂತ, ತಮ್ಮನ್ನು ನಂಬಿದ ಜನರ ವಿಶ್ವಾಸವೇ ಮುಖ್ಯ ಎಂಬ ಗಟ್ಟಿತನವನ್ನು ಅವರು ಪ್ರದರ್ಶಿಸಿದ್ದಾರೆ. ವೈಯಕ್ತಿಕವಾಗಿ ಎಷ್ಟೇ ಅಪಪ್ರಚಾರಗಳು ನಡೆದರೂ, ಜನಸೇವೆಯ ಸ್ಪಷ್ಟ ದೃಷ್ಟಿಕೋನ ಮತ್ತು ನಿಷ್ಠೆ ಇದ್ದರೆ ಜನರು ಯಾವಾಗಲೂ ಸತ್ಯದ ಪರ ನಿಂತೇ ತೀರುತ್ತಾರೆ ಎಂಬುದನ್ನು ತಮಿಳುನಾಡಿನ ಜನತೆ ತೋರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ನಿಜವಾದ ಗೆಲುವು. ಪಕ್ಷಭೇದವಿಲ್ಲದೆ, ದೇಶದ ಅಭಿವೃದ್ಧಿಗೆ ಸಹಾಯ ಮಾಡುವ ಯಾವುದೇ ಉತ್ತಮ ನಡೆಗಳನ್ನು ನಾವು ಸ್ವಾಗತಿಸಬೇಕು ಎಂಬ ಪಾಠವನ್ನು ಈ ಘಟನೆ ನೀಡುತ್ತದೆ. ಈ ರೀತಿಯ ರಾಜಕೀಯವು ಸಮಾಜಕ್ಕೆ ಹೊಸ ದಿಕ್ಕನ್ನು ನೀಡುತ್ತದೆ. ಜನರ ನಂಬಿಕೆಯನ್ನು ಗೆದ್ದು, ಸತ್ಯದ ನಡೆಯಿಂದ ಸೇವೆ ಮಾಡುವ ನಾಯಕರು ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಪಕ್ಷಗಳಲ್ಲಿ ಬೆಳೆಯಬೇಕು ಎಂಬ ಆಶಯ ಸಹಜ. ವಿಜಯ್ ಅವರ ಈ ಜಯವು ಭವಿಷ್ಯದ ರಾಜಕೀಯಕ್ಕೆ ಹೊಸ ದಾರಿ.
ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ರವರು ನಿಜಕ್ಕೂ ಜನಶಕ್ತಿಯ ಮಹತ್ವ ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ತೆರೆದಿರುವ TVK ಪಕ್ಷದ ಮುಖ್ಯಸ್ಥ *ದಳಪತಿ ವಿಜಯ್* ರವರ ಗೆಲುವು ನಿಜಕ್ಕೂ ಜನಶಕ್ತಿಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೊಡ್ಡ ಕುಟುಂಬಗಳು, ವಂಶಪಾರಂಪರ್ಯ ರಾಜಕೀಯಗಳಿಗಿಂತ ಜನರ ನಡುವೆ ಹುಟ್ಟಿದ ನಾಯಕತ್ವವೇ ನಿಜವಾದ ಜನನಾಯಕತ್ವ ಎಂಬ ಸಂದೇಶವನ್ನು ಅವರು ತಮ್ಮ ಜಯದ ಮೂಲಕ ಸ್ಪಷ್ಟವಾಗಿ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತು ಜನರೊಂದಿಗೆ ಬೆರೆತು,
ಅವರ ನೋವು-ನಲಿವುಗಳನ್ನು ಅರಿತು, ಅವರ ಆಸೆಗಳ ಪ್ರತಿಬಿಂಬವಾಗುವ ನಾಯಕನೇ ಜನ-ಮನ ಗೆಲ್ಲುತ್ತಾನೆ. ಅದೇ ರೀತಿಯಲ್ಲಿ ವಿಜಯ್ ಅವರು ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೆ, ಜನರ ವಿಶ್ವಾಸವನ್ನು ಮುಖ್ಯವೆಂದು ತೆಗೆದುಕೊಂಡು ನಡೆದುಕೊಂಡಿರುವುದು ವಿಶೇಷ. ಮುಖ್ಯಮಂತ್ರಿ ಸ್ಥಾನಗಳ ಭರವಸೆಗಳಂತಹ ಆಕರ್ಷಣೆಗಳಿಗಿಂತ, ತಮ್ಮನ್ನು ನಂಬಿದ ಜನರ ವಿಶ್ವಾಸವೇ ಮುಖ್ಯ ಎಂಬ ಗಟ್ಟಿತನವನ್ನು ಅವರು ಪ್ರದರ್ಶಿಸಿದ್ದಾರೆ. ವೈಯಕ್ತಿಕವಾಗಿ ಎಷ್ಟೇ ಅಪಪ್ರಚಾರಗಳು ನಡೆದರೂ, ಜನಸೇವೆಯ ಸ್ಪಷ್ಟ ದೃಷ್ಟಿಕೋನ ಮತ್ತು ನಿಷ್ಠೆ ಇದ್ದರೆ ಜನರು ಯಾವಾಗಲೂ ಸತ್ಯದ ಪರ ನಿಂತೇ ತೀರುತ್ತಾರೆ
ಎಂಬುದನ್ನು ತಮಿಳುನಾಡಿನ ಜನತೆ ತೋರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ನಿಜವಾದ ಗೆಲುವು. ಪಕ್ಷಭೇದವಿಲ್ಲದೆ, ದೇಶದ ಅಭಿವೃದ್ಧಿಗೆ ಸಹಾಯ ಮಾಡುವ ಯಾವುದೇ ಉತ್ತಮ ನಡೆಗಳನ್ನು ನಾವು ಸ್ವಾಗತಿಸಬೇಕು ಎಂಬ ಪಾಠವನ್ನು ಈ ಘಟನೆ ನೀಡುತ್ತದೆ. ಈ ರೀತಿಯ ರಾಜಕೀಯವು ಸಮಾಜಕ್ಕೆ ಹೊಸ ದಿಕ್ಕನ್ನು ನೀಡುತ್ತದೆ. ಜನರ ನಂಬಿಕೆಯನ್ನು ಗೆದ್ದು, ಸತ್ಯದ ನಡೆಯಿಂದ ಸೇವೆ ಮಾಡುವ ನಾಯಕರು ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಪಕ್ಷಗಳಲ್ಲಿ ಬೆಳೆಯಬೇಕು ಎಂಬ ಆಶಯ ಸಹಜ. ವಿಜಯ್ ಅವರ ಈ ಜಯವು ಭವಿಷ್ಯದ ರಾಜಕೀಯಕ್ಕೆ ಹೊಸ ದಾರಿ.
- ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿದ ಕೋಟಿ ಮಟ್ಟದ ಹಣಕಾಸು ಅವ್ಯವಹಾರ ಶಂಕೆ! ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೊಂದರಲ್ಲಿ ನಡೆದ ಆಂತರಿಕ ಆಡಿಟ್ ವೇಳೆ ಸುಮಾರು ₹4 ಕೋಟಿ ರೂಪಾಯಿ ಮಟ್ಟದ ಹಣಕಾಸು ವ್ಯತ್ಯಾಸ ಪತ್ತೆಯಾದ ಹಿನ್ನೆಲೆಯಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ. ಅಕೌಂಟ್ಸ್ ವಿಭಾಗದ ಒಬ್ಬ ಮಹಿಳೆ ಸೇರಿ ನಾಲ್ವರು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ಲೆಕ್ಕಪತ್ರ ತಿದ್ದುಪಡಿ ಹಾಗೂ ಡಿಜಿಟಲ್ ಡೇಟಾ ಅಳಿಸುವ ಮೂಲಕ ಅವ್ಯವಹಾರ ಮುಚ್ಚಿಹಾಕಲು ಯತ್ನಿಸಿದ್ದರೆಂಬ ಶಂಕೆ ಮೂಡಿದೆ. ಈ ಬೆಳವಣಿಗೆಯಿಂದ ಆಸ್ಪತ್ರೆ ಆಡಳಿತ ಮಂಡಳಿಯಲ್ಲಿ ತುರ್ತು ಚಟುವಟಿಕೆಗಳು ಆರಂಭವಾಗಿದ್ದು, ಸೈಬರ್ ತಜ್ಞರ ಸಹಾಯದಿಂದ ಡಿಲೀಟ್ ಮಾಡಲಾದ ದಾಖಲೆಗಳನ್ನು ಮರುಪಡೆಯುವ ಕಾರ್ಯವೂ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಪೊಲೀಸ್ ದೂರು ದಾಖಲಾಗುವ ಸಾಧ್ಯತೆ ಇದ್ದು, ಅಧಿಕೃತ ತನಿಖೆಯ ನಂತರ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.ಈ ಘಟನೆ ಆರೋಗ್ಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, “ಪ್ರತಿಷ್ಠಿತ ಆಸ್ಪತ್ರೆಯೊಳಗೆ ಇಷ್ಟೊಂದು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.1
- ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ದಿಢೀರ್ ಉಪ್ಪಿನಕಾಯಿಯನ್ನು ಮಾಡಿದ ತಕ್ಷಣವೇ ಅಥವಾ ಒಂದೆರಡು ಗಂಟೆಗಳ ನಂತರ ಅನ್ನ, ದೋಸೆ ಮತ್ತು ಚಪಾತಿ ಜೊತೆ ಸವಿಯಬಹುದು. ಮನೆಯಲ್ಲಿ ಕೇವಲ 2 ಮಾವಿನಕಾಯಿಗಳಿದ್ದರೆ, ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.1
- ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕರಗುದರಿ ಗ್ರಾಮದ ಮದುವೆ ಸಮಾರಂಭಕ್ಕೆ ಭೇಟಿ ನೀಡಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.1
- ಶಿಗ್ಗಾವಿ ತಾಲ್ಲೂಕಿನ ಹಲವೆಡೆ ಮಳೆಯಾಗಿ ಬಿಸಿಲಿನಿಂದ ಬಳಲಿದ್ದ ಜನರಿಗೆ ವರುಣದೇವ ತಂಪು ನೀಡಿದ್ದಾನೆ. ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ.3
- ಪ್ರಧಾನಿ ಮೋದಿ ಅವರ ಸಲಹೆಗಳನ್ನು ಪಾಲಿಸದಿದ್ದರೆ ದೇಶವು ಇಂಧನ ಬಿಕ್ಕಟ್ಟಿನ ಭಾರೀ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರುದ್ರಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಸರ್ಕಾರಿ ಕ್ರಮಗಳ ಬಗ್ಗೆ ಕುತೂಹಲ ಮೂಡಿಸಿದೆ.1
- ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್ನೊಂದಿಗೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ದೇವಾಲಯದ ಸುತ್ತಲೂ ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.1
- ಕರ್ನಾಟಕ ಸಚಿವರಾದ ಡಿ.ಸುಧಾಕರ್ಗ ಅಂತಿಮ ವಿದಾಯಕ್ಕೆ ಗಾಳಿಯಲ್ಲಿ ಗುಂಡು1
- ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಆರೋಗೊಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಗೊಲ್ಲರ್ (38) ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.1