ಶಿಕಾರಿಪುರ ಅನಧಿಕೃತವಾಗಿ ಯೂರಿಯ ರಸಗೊಬ್ಬರವನ್ನು ದಾಸ್ತಾನು ಮಾಡಿರುತ್ತಾರೆಂದು ದೂರು ನೀಡಲಾಗಿದೆ. ಅನಾಮಧೇಯ ವ್ಯಕ್ತಿಯು ಕೃಷಿ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಶಿಕಾರಿಪುರದಿಂದ ಉಡುಗಣಿ ಗ್ರಾಮಕ್ಕೆ ಮುಂಚಿತವಾಗಿ ಪೂರ್ವ ಭಾಗದಲ್ಲಿ ಅನಧೀಕೃತವಾಗಿ ಯೂರಿಯಾ ರಸಗೊಬ್ಬರವನ್ನು ದಾಸ್ತಾನು ಮಾಡಿರುತ್ತಾರೆಂದು ದೂರು ನೀಡಿರುತ್ತಾರೆ. ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಸ್ಥಳ ತನಿಖೆ ನೆಡೆಸಲು ಸೂಚಿಸಿರುತ್ತಾರೆ. ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಂ: 74/2ರಲ್ಲಿ ಅನಧೀಕೃತವಾಗಿ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿರುವುದು ಧೃಡಪಟ್ಟಿರುತ್ತದೆ. ಜಮೀನಿಗೆ ಸಂಬಂಧಿಸಿದ ರೈತರನ್ನು ವಿಚಾರಿಸಲಾಗಿ, ಯಾವುದೇ ರೀತಿ ಕೃಷಿ ಚಟುವಟಿಕೆ ಕೈಗೊಳ್ಳದೇ ಇರುವ ಜಮೀನಿನಲ್ಲಿ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿರುವುದು ತಮಗೆ ತಿಳಿದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಈ ಅನಧೀಕೃತವಾಗಿ ದಾಸ್ತಾನು ಮಾಡಿರುವ ಯೂರಿಯಾ ರಸಗೊಬ್ಬರವನ್ನು ಪರಿಶೀಲಿಸಲಾಗಿ, 45ಕೆಜಿ ತೂಕದ 425 ಯೂರಿಯಾ ರಸಗೊಬ್ಬರ ಚೀಲಗಳು, (19.125ಟನ್ ಮತ್ತು 1.13ಲಕ್ಷ ಮೌಲ್ಯ ) ಇರುವುದಾಗಿ ಕಂಡುಬಂದಿರುತ್ತದೆ. ರಸಗೊಬ್ಬರ ನಿಯಂತ್ರಣ ಆದೇಶ 1985ರ ನಿಯಮ 7 ಮತ್ತು ಅಗತ್ಯ ವಸ್ತುಗಳ ಕಾಯ್ದೆ 1955ರ ನಿಯಮ 3 ರ ಅನ್ವಯ ಯೂರಿಯಾ ರಸಗೊಬ್ಬರವನ್ನು ಅಧೀಕೃತ ಮಾರಾಟಗಾರರ ಗೋದಾಮಿನಲ್ಲಿ ಶೇಖರಣೆ ಮಾಡಬಹುದು ಮತ್ತು ಯೂರಿಯಾ ರಸಗೊಬ್ಬರವನ್ನು ಖರೀದಿಸಿದ್ದಲ್ಲಿ ಖರೀದಿ ಬಿಲ್ ನ್ನು ಹಾಜರುಪಡಿಸಬೇಕಾಗಿರುತ್ತದೆ ಮತ್ತು ಅದನ್ನು ಉಪಯೋಗಿಸಲು ಬೆಳೆಯನ್ನು ಬೆಳೆದಿರುವ ಜಮೀನನ್ನು ಸಹ ಹೊಂದಿರಬೇಕಾಗಿರುತ್ತದೆ.ಈ ಪ್ರಕರಣದಲ್ಲಿ ಅನಧೀಕೃತವಾಗಿ ದಾಸ್ತಾನು ಮಾಡಿರುವುದು ಕಂಡುಬಂದಿರುತ್ತದೆ. ಈ ಯೂರಿಯಾ ರಸಗೊಬ್ಬರವನ್ನು ಕಾನೂನಾತ್ಮಕವಾಗಿ ಇಲಾಖೆಯ ವಶಕ್ಕೆ ಪಡೆದುಕೊಂಡು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಈ ಯೂರಿಯಾ ರಸಗೊಬ್ಬರವನ್ನು ಶಿರಾಳಕೊಪ್ಪ ಟೌನ್ ನಲ್ಲಿರುವ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರ ಸುಪರ್ದಿಗೆ ಕೊಡಲಾಗಿದೆ. ಈ ಸಂಬಂಧ ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಪಡೆದು ರೈತರಿಗೆ ಗರಿಷ್ಠ ಮಾರಾಟದ ಬೆಲೆಗೆ ವಿತರಿಸಲಾಗುವುದು. ಆದ್ದರಿಂದ ಈ ರೀತಿಯಾಗಿ ಅನಧೀಕೃತವಾಗಿ ಯೂರಿಯಾ ರಸಗೊಬ್ಬರವನ್ನು ಅವಶ್ಯಕತೆಗಿಂದ ಹೆಚ್ಚಿನದಾಗಿ ಖರೀದಿಸಿ ದಾಸ್ತಾನು ಮಾಡಿ, ಇತರೆ ಚಟುವಟಿಕೆಗಳಿಗೆ ಬಳಕೆ ಮಾಡುವುದರ ಬಗ್ಗೆ ಕಂಡುಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅವಶ್ಯಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಅಧೀಕೃತ ಮಾರಾಟಗಾರರಿಂದಲೇ, ಅವರ ಬೆಳೆಗೆ ನಿರ್ಧರಿಸಿರುವ ಪ್ರಮಾಣವನ್ನು ಮಾತ್ರ ಖರೀದಿಸತಕ್ಕದ್ದು. ಮುಂದಿನ ದಿನಗಳಲ್ಲಿ ಪ್ರೂಟ್ಸ ಐಡಿಗೆ ಲಿಂಕ್ ಆಗಿರುವ ಜಮೀನಿನ ಮಾಹಿತಿ ಮೇರೆಗೆ ಯೂರಿಯಾ ರಸಗೊಬ್ಬರವನ್ನು ರೈತರಿಗೆ ವಿತರಿಸಲು ಈಗಾಗಲೇ ಕೇಂದ್ರ ಕಚೇರಿ ಅಧಿಕಾರಿಗಳು ಸಾಪ್ಟವೇರ್ ಸಿದ್ದಪಡಿಸಿರುತ್ತಾರೆ. ಪ್ರಸಕ್ತ ಈ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆ ಜಾರಿಗೆ ಬರಲಿದೆ.
ಶಿಕಾರಿಪುರ ಅನಧಿಕೃತವಾಗಿ ಯೂರಿಯ ರಸಗೊಬ್ಬರವನ್ನು ದಾಸ್ತಾನು ಮಾಡಿರುತ್ತಾರೆಂದು ದೂರು ನೀಡಲಾಗಿದೆ. ಅನಾಮಧೇಯ ವ್ಯಕ್ತಿಯು ಕೃಷಿ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಶಿಕಾರಿಪುರದಿಂದ ಉಡುಗಣಿ ಗ್ರಾಮಕ್ಕೆ ಮುಂಚಿತವಾಗಿ ಪೂರ್ವ ಭಾಗದಲ್ಲಿ ಅನಧೀಕೃತವಾಗಿ ಯೂರಿಯಾ ರಸಗೊಬ್ಬರವನ್ನು ದಾಸ್ತಾನು ಮಾಡಿರುತ್ತಾರೆಂದು ದೂರು ನೀಡಿರುತ್ತಾರೆ. ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಸ್ಥಳ ತನಿಖೆ ನೆಡೆಸಲು ಸೂಚಿಸಿರುತ್ತಾರೆ. ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಂ: 74/2ರಲ್ಲಿ ಅನಧೀಕೃತವಾಗಿ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿರುವುದು ಧೃಡಪಟ್ಟಿರುತ್ತದೆ. ಜಮೀನಿಗೆ ಸಂಬಂಧಿಸಿದ ರೈತರನ್ನು ವಿಚಾರಿಸಲಾಗಿ, ಯಾವುದೇ ರೀತಿ ಕೃಷಿ ಚಟುವಟಿಕೆ ಕೈಗೊಳ್ಳದೇ ಇರುವ ಜಮೀನಿನಲ್ಲಿ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿರುವುದು ತಮಗೆ ತಿಳಿದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಈ ಅನಧೀಕೃತವಾಗಿ ದಾಸ್ತಾನು ಮಾಡಿರುವ ಯೂರಿಯಾ ರಸಗೊಬ್ಬರವನ್ನು ಪರಿಶೀಲಿಸಲಾಗಿ, 45ಕೆಜಿ ತೂಕದ 425 ಯೂರಿಯಾ ರಸಗೊಬ್ಬರ ಚೀಲಗಳು, (19.125ಟನ್ ಮತ್ತು 1.13ಲಕ್ಷ ಮೌಲ್ಯ ) ಇರುವುದಾಗಿ ಕಂಡುಬಂದಿರುತ್ತದೆ. ರಸಗೊಬ್ಬರ ನಿಯಂತ್ರಣ ಆದೇಶ 1985ರ ನಿಯಮ 7 ಮತ್ತು ಅಗತ್ಯ ವಸ್ತುಗಳ ಕಾಯ್ದೆ 1955ರ ನಿಯಮ 3 ರ ಅನ್ವಯ ಯೂರಿಯಾ ರಸಗೊಬ್ಬರವನ್ನು ಅಧೀಕೃತ ಮಾರಾಟಗಾರರ ಗೋದಾಮಿನಲ್ಲಿ ಶೇಖರಣೆ ಮಾಡಬಹುದು ಮತ್ತು ಯೂರಿಯಾ ರಸಗೊಬ್ಬರವನ್ನು ಖರೀದಿಸಿದ್ದಲ್ಲಿ ಖರೀದಿ ಬಿಲ್ ನ್ನು
ಹಾಜರುಪಡಿಸಬೇಕಾಗಿರುತ್ತದೆ ಮತ್ತು ಅದನ್ನು ಉಪಯೋಗಿಸಲು ಬೆಳೆಯನ್ನು ಬೆಳೆದಿರುವ ಜಮೀನನ್ನು ಸಹ ಹೊಂದಿರಬೇಕಾಗಿರುತ್ತದೆ.ಈ ಪ್ರಕರಣದಲ್ಲಿ ಅನಧೀಕೃತವಾಗಿ ದಾಸ್ತಾನು ಮಾಡಿರುವುದು ಕಂಡುಬಂದಿರುತ್ತದೆ. ಈ ಯೂರಿಯಾ ರಸಗೊಬ್ಬರವನ್ನು ಕಾನೂನಾತ್ಮಕವಾಗಿ ಇಲಾಖೆಯ ವಶಕ್ಕೆ ಪಡೆದುಕೊಂಡು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಈ ಯೂರಿಯಾ ರಸಗೊಬ್ಬರವನ್ನು ಶಿರಾಳಕೊಪ್ಪ ಟೌನ್ ನಲ್ಲಿರುವ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರ ಸುಪರ್ದಿಗೆ ಕೊಡಲಾಗಿದೆ. ಈ ಸಂಬಂಧ ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಪಡೆದು ರೈತರಿಗೆ ಗರಿಷ್ಠ ಮಾರಾಟದ ಬೆಲೆಗೆ ವಿತರಿಸಲಾಗುವುದು. ಆದ್ದರಿಂದ ಈ ರೀತಿಯಾಗಿ ಅನಧೀಕೃತವಾಗಿ ಯೂರಿಯಾ ರಸಗೊಬ್ಬರವನ್ನು ಅವಶ್ಯಕತೆಗಿಂದ ಹೆಚ್ಚಿನದಾಗಿ ಖರೀದಿಸಿ ದಾಸ್ತಾನು ಮಾಡಿ, ಇತರೆ ಚಟುವಟಿಕೆಗಳಿಗೆ ಬಳಕೆ ಮಾಡುವುದರ ಬಗ್ಗೆ ಕಂಡುಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅವಶ್ಯಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಅಧೀಕೃತ ಮಾರಾಟಗಾರರಿಂದಲೇ, ಅವರ ಬೆಳೆಗೆ ನಿರ್ಧರಿಸಿರುವ ಪ್ರಮಾಣವನ್ನು ಮಾತ್ರ ಖರೀದಿಸತಕ್ಕದ್ದು. ಮುಂದಿನ ದಿನಗಳಲ್ಲಿ ಪ್ರೂಟ್ಸ ಐಡಿಗೆ ಲಿಂಕ್ ಆಗಿರುವ ಜಮೀನಿನ ಮಾಹಿತಿ ಮೇರೆಗೆ ಯೂರಿಯಾ ರಸಗೊಬ್ಬರವನ್ನು ರೈತರಿಗೆ ವಿತರಿಸಲು ಈಗಾಗಲೇ ಕೇಂದ್ರ ಕಚೇರಿ ಅಧಿಕಾರಿಗಳು ಸಾಪ್ಟವೇರ್ ಸಿದ್ದಪಡಿಸಿರುತ್ತಾರೆ. ಪ್ರಸಕ್ತ ಈ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆ ಜಾರಿಗೆ ಬರಲಿದೆ.
- Post by Mayur TV Hangal YouTube c1
- ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಶ್ರೀರಾಮುಲು, ಹದಡಿ ಹಾಗೂ ಹೂಸನಾಯಕನಹಳ್ಳಿ ,ಕೈದಾಳ ಗ್ರಾಮದಲ್ಲಿ ಅದ್ದೂರಿ ಪ್ರಚಾರ ಆರಂಭಿಸಿದರು. ಈ ವೇಳೆ ಸ್ಥಳಿಯರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ನವರನ್ನು ಹಾಗೂ ಆರ್ ಅಶೋಕ್ ಶ್ರೀರಾಮುಲು ರವರಿಗೆ ಬೃಹತ್ ಗಾತ್ರದ ಆಪಲ್ ಆರ್ ಹಾಕುವ ಮೂಲಕ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಶುಭವಾಗಲಿ ಎಂದು ಹಾರೈಸಿದರು... ಈ ಸಂದರ್ಭದಲ್ಲಿ ಹರಿಹರದ ಶಾಸಕ ಬಿಪಿ ಹರೀಶ್ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಸಿಮೆಂಟ್ ರವಿಕುಮಾರ್, ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಯಶವಂತ ರಾವ್ ಜಾಧವ್ , ಬಿ, ರಾಜನಹಳ್ಳಿ ಶಿವಕುಮಾರ್, ಬಿಜಿ ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಕೊಳೆನಹಳ್ಳಿ ಸತೀಶ್ ಜಿ.ಬಿ ವಿನಯ್ ಕುಮಾರ್, ಎಸ್, , ಶಿವನಹಳ್ಳಿ ರಮೇಶ್ ,ಸೇರಿದಂತೆ. ಜೆಡಿಎಸ್ ಜಿಲ್ಲಾ ಬಿಜೆಪಿ ನಾಯಕರು ವಾರ್ಡ್ ಸದಸ್ಯರ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರು. ಬಿಜೆಪಿ ಮುಖಂಡರು ಸದಸ್ಯರು ಸ್ಥಳಿಯರು ಇದ್ದರೂ1
- ಶಿಗ್ಗಾವಿ: ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕಾದರೆ ಕ್ರೀಡೆಯಲ್ಲಿ ಸೋಲು, ಗೆಲುವುಗಳು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾಜಪ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಭರತ ಬೊಮ್ಮಾಯಿ ಕ್ರಿಕೆಟ್ ಟ್ರೋಫಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು ದುಶ್ಚಟಗಳಿಗೆ ಬಲಿಯಾಗದೇ ಯುವಕರನ್ನು ಕ್ರೀಡೆಗಳತ್ತ ಸೆಳೆದು ಸದೃಢ ಆರೋಗ್ಯ ಹೊಂದಲು ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಲು ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಭರತ ಬೊಮ್ಮಾಯಿ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಸ್ತಿಕ ಕ್ರಿಕೇಟ್ ಕ್ಲಬ್ ಶಿಗ್ಗಾವಿ ತಂಡಕ್ಕೆ ೭೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ವನಹಳ್ಳಿ ಅಪ್ಪು ಬಾಯ್ಸ್ ಕ್ರಿಕೆಟ್ ಕ್ಲಬ್ ತಂಡಕ್ಕೆ ೪೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಅಲ್ಲದೇ ವೈಯಕ್ತಿಕ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ. ಸಂಕನೂರ, ವಿಶ್ವನಾಥ ಹರವಿ, ಅನಿಲ ಸಾತಣ್ಣವರ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಸಚಿನ ಮಡಿವಾಳರ, ಚೇತನ ಕಲಾಲ, ಸಂತೋಷ ಸುಭೇದಾರ ಸೇರಿದಂತೆ ಕ್ರೀಡಾಭಿಮಾನಿಗಳು, ಭರತ ಬೊಮ್ಮಾಯಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.1
- Post by Suresh Belagere1
- ಬಂಡಾಯ ಅಭ್ಯರ್ಥಿಗಳಿಗೆ ಪಠಾಣ್ ಶಾಕ್? ಸಮರ್ಥ್ ಶಾಮನೂರು ಗೆಲುವು ಫಿಕ್ಸ್? | Yasir Khan Pathan Speech in DavanagereKeywords (ಟ್ಯಾಗ್ಗಳು / ಕೀವರ್ಡ್ಗಳು) ಈ ಕೀವರ್ಡ್ಗಳನ್ನು ನಿಮ್ಮ ವೀಡಿಯೋ ಡಿಸ್ಕ್ರಿಪ್ಶನ್ ಮತ್ತು ಟ್ಯಾಗ್ ಸೆಕ್ಷನ್ನಲ್ಲಿ ಬಳಸಿ: ಪ್ರಮುಖ ವ್ಯಕ್ತಿಗಳು: Yasir Khan Pathan, Samarth Shamanur, Shamanur Shivashankarapur, SS Mallikarjun, Basavaraj Bommai. ಸ್ಥಳ ಮತ್ತು ಚುನಾವಣೆ: Davanagere South Byelection 2026, Davanagere Politics, Karnataka Byelection 2026, ದಾವಣಗೆರೆ ಉಪಚುನಾವಣೆ. ಪಕ್ಷಗಳು: Congress Campaign Davanagere, INC Karnataka, BJP vs Congress Davanagere. ವಿಷಯಗಳು: Yasir Pathan Speech, Muslim Votes in Davanagere, Samarth Shamanur Campaign, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ. Video Description (ಸಣ್ಣ ವಿವರಣೆ) "ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಪರವಾಗಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಬಗ್ಗೆ ಅವರು ನೀಡಿದ ರೋಚಕ ಹೇಳಿಕೆಗಳು ಇಲ್ಲಿವೆ." Hashtags: #DavanagereByelection #YasirKhanPathan #SamarthShamanur #CongressKarnataka #DavanagerePolitics #KarnatakaNews #ByElection20262
- ದಿನಾಂಕ 04.04.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಕುಡುಪು ಫೀಡರ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕುಡುಪು, ರಥಬೀದಿ, ಮುಂಡ್ರೆಲ್ಲಾ, ಪಿಲಿಕುಮೇರು, ಕುಡುಪು ನಡುಮನೆ, ಕುಡುಪು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.1
- SSLC ಪರೀಕ್ಷೆ ಮುಕ್ತಾಯ ಮಕ್ಕಳು, ಪೋಷಕರು ನಿರಾಳ | ಸುದ್ದಿ ಪಾಯಿಂಟ್ 📢 #suddipoint #sslc #SSLCEXAMCLOSE #exames1
- ಚಳ್ಳಕೆರೆ ನಗರದ ಬೆಂಗಳೂರು ರಸ್ತೆ ಪಾವಗಡ ರಸ್ತೆ ಹಾಗೂ ಮಹದೇವಿ ರಸ್ತೆಗಳಲ್ಲಿ ನಗರಸಭೆಗೆ ಸೇರಿದ ಸುಮಾರು 94 ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ನ ಹೊಡೆದು ಹಾಕಲಾಗಿದ್ದು ಮಳಿಗೆಗಳ ಅವಶೇಷಗಳ ಕೆಳಗೆ ಬಿದ್ದಿರುವಂತಹ ಕಬ್ಬಿಣವನ್ನು ಆರಿಸಲು ಇಲ್ಲಿ ನಾಗರಿಕರು ಪರದಾಡುತ್ತಿರುವಂತಹ ದೃಶ್ಯ ಕಂಡು ಬಂತು..1