*ಶ್ರೇಷ್ಠ ಶರಣರ ಸಾಮಾಜಿಕ ಕ್ರಾಂತಿ ವಿಶ್ವಕ್ಕೆ ಮಾದರಿ - ಪ್ರೊ. ದಯಾನಂದ* *ಶಹಾಪುರ:* ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಸಾಮಾಜಿಕ, ವೈಚಾರಿಕ ಕ್ರಾಂತಿ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲಾ ಕಾಯಕ ಸಮುದಾಯಗಳನ್ನು ತನ್ನ ತೆಕ್ಕೆಯಲ್ಲಿ ಹಾಕಿಕೊಂಡ ಬಸವಣ್ಣನವರು ಎಲ್ಲಾ ಕಾಯಕಗಳು ಒಂದೇ ಮತ್ತು ಸಮಾಜಕ್ಕೆ ತುಂಬಾ ಉಪಯುಕ್ತವಾಗಿವೆ ಎಂದು ಕಾಯಕ ತತ್ವದ ಜೀವಪರ ಸಂದೇಶಗಳನ್ನು ಮನುಕುಲಕ್ಕೆ ಸಾರಿದರು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ದಯಾನಂದ ಅಗಸರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕನ್ನಡ ಭವನದಲ್ಲಿ ಶಹಾಪುರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಮಡಿವಾಳ ಮಾಚಿದೇವ ಸಂಘ ಶಹಾಪುರ ವತಿಯಿಂದ ಆಯೋಜಿಸಿದ " ವಚನ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆಗಳು ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು ಕಲ್ಯಾಣ ಕ್ರಾಂತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ವೀರಶರಣ ಮಡಿವಾಳ ಮಾಚಿದೇವರು ಎಲ್ಲಾ ಶರಣರ ವಚನಗಳ ಕಟ್ಟುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ಮಹತ್ವದ ಕಾರ್ಯ ನಿರ್ವಹಿಸಿದರು. ಕೇವಲ ಅವುಗಳನ್ನು ಸಂರಕ್ಷಣೆ ಮಾಡದೇ ವಚನಗಳಲ್ಲಿನ ಮನುಷ್ಯಪರ, ಮಾನವೀಯಪರ ಚಿಂತನೆಗಳನ್ನು ಪ್ರಚುರಪಡಿಸಿ ಎಲ್ಲಾ ಶರಣರ ಅಪಾರ ಪ್ರೀತಿ, ವಿಶ್ವಾಸಕ್ಕೆ, ಮೆಚ್ಚುಗೆಗೆ ಪಾತ್ರರಾದ ಶ್ರೇಷ್ಠ ಶರಣರಾಗಿ, ವಚನಕಾರರಾಗಿ ಶರಣ ಸಂಸ್ಕೃತಿ ಪರಂಪರೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸಾಮಾಜಿಕ ಸಮಾನತೆಯ ಭಧ್ರ ಬುನಾದಿಯ ಮೇಲೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಮೇಲೆ ಮಡಿವಾಳ ಸಮುದಾಯ ಸೇರಿದಂತೆ ಎಲ್ಲಾ ತಳ ಸಮುದಾಯಗಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಬೇಕು ಎಂದು ಹೇಳಿದ ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸೃಜನಾತ್ಮಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಶರಣ ಸಾಹಿತಿ ಶಿವಣ್ಣ ಇಜೇರಿ ಅವರು ಬಸವಾದಿ ಶರಣರ ಶ್ರೇಷ್ಠ ವಚನಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಡಿವಾಳ ಮಾಚಿದೇವ ತಮ್ಮ ವಚನಗಳ ಮೂಲಕ ಮನುಷ್ಯನ ಅಂತರಂಗ ಬಹಿರಂಗ ಶುದ್ದತೆಯನ್ನು ಸಾರಿದರು. ಬಸವಣ್ಣ, ಚೆನ್ನಬಸವಣ್ಣ, ಸೊಲ್ಲಾಪುರದ ಸಿದ್ದರಾಮೇಶ್ವರ ಮುಂತಾದ ಶರಣರು ತಮ್ಮ ವಚನಗಳಲ್ಲಿ ಮಾಚಿದೇವನ ಶ್ರೇಷ್ಠ ವ್ಯಕ್ತಿತ್ವವನ್ನು ಕುರಿತು ಬಣ್ಣಿಸಿದ್ದಾರೆ. ಎಲ್ಲಾ ಶರಣರು ಜಾತಿ, ಮತ, ಪಂಥ, ಪಂಗಡಗಳನ್ನು ಮೀರಿ ಉದಾತ್ತ ಚಿಂತನೆಗಳನ್ನು ನೀಡಿದ್ದಾರೆ ಎಂದು ಹಲವು ನಿರ್ಧೇಶನಗಳ ಮೂಲಕ ತಿಳಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮಲ್ಲಣ್ಣ ಮಡಿವಾಳ ಅವರು ಶರಣ ಮಡಿವಾಳ ಮಾಚಿದೇವರ ಬದುಕು ಮತ್ತು ಚಿಂತನೆಗಳು ಹಾಗೂ ಮಡಿವಾಳ ಸಮುದಾಯದ ಅಭಿವೃದ್ಧಿಯ ಕುರಿತು ಮಾತನಾಡಿದರು. ನಗರ ಸಭೆಯ ಎ.ಇ.ಇ ಅಧಿಕಾರಿ ನಾನಾಸಾಹೇಬ ಮಡಿವಾಳ ಅವರು ಮಾಚಿದೇವರ ವಚನಗಳಲ್ಲಿನ ಸಾಮಾಜಿಕ ಕಾಳಜಿ ಕುರಿತು ತಿಳಿಸಿದರು. ಮಡಿವಾಳೇಶ್ವರ ಮಠದ ಪೂಜ್ಯರಾದ ಶೇಖಪ್ಪ ಸಾಧು ಅವರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕ.ಸಾ.ಪ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅವರು ಸಾಹಿತ್ಯ ಪರಿಷತ್ತು ಹಲವಾರು ವಿಚಾರ ಸಂಕಿರಣಗಳು, ವಿಶೇಷ ಉಪನ್ಯಾಸಗಳ ಮೂಲಕ ಹೊಸತನಗಳಿಗೆ ತೆರೆದುಕೊಳ್ಳುತ್ತಿದೆ. ಜನಸಮುದಾಯಗಳಲ್ಲಿ ಸಾಹಿತ್ಯಿಕ ಚಿಂತನೆಗಳ ಮೂಲಕ ಸಾಂಸ್ಕೃತಿಕ ಕಾಳಜಿ ಮತ್ತು ವೈಚಾರಿಕತೆಯನ್ನು ಮೂಡಿಸುತ್ತಿದೆ ಎಂದು ಪರಿಷತ್ತಿನ ರಚನಾತ್ಮಕ ಚಟುವಟಿಕೆಗಳ ಕುರಿತು ತಿಳಿಸಿದರು. ಶಿಕ್ಷಕಿ ಕಾವೇರಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳಕರ್ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಮಡಿವಾಳಪ್ಪ ಬಿಜಾಸಪೂರ, ತಾಲೂಕು ಅಧ್ಯಕ್ಷ ಭೀಮರಾಯ ಗುತ್ತಿಪೇಟ ಮುಖಂಡರಾದ ಸಣ್ಣನಿಂಗಪ್ಪ ನಾಯ್ಕೋಡಿ, ಸಾಯಬಣ್ಣ ಮಡಿವಾಳ, ಮಹೇಶ ಮಡಿವಾಳ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಬೀ.ಗುಡಿ ವಲಯ ಕ.ಸಾ.ಪ ಅಧ್ಯಕ್ಷ ಶರಣಬಸವ, ಶಿರವಾಳ ವಲಯ ಕ.ಸಾ.ಪ ಅಧ್ಯಕ್ಷ ಮಲ್ಲಣ್ಣ ಹೊಸ್ಮನಿ, ಸಗರ ವಲು ಅಧ್ಯಕ್ಷ ದೇವಿಂದ್ರಪ್ಪ ಹಡಪದ, ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ, ಡಾ. ರಾಘವೇಂದ್ರ ಹಾರಣಗೇರಾ, ಮಹಿಳಾ ಪ್ರತಿನಿಧಿ ನಿರ್ಮಲಾ ತುಂಬಗಿ, ಬಿ.ಎಮ್ ಪೂಜಾರಿ, ಸೈಯದ್ ಚಾಂದಪಾಶ್, ದೇವಿಂದ್ರಪ್ರ ವಿಶ್ವಕರ್ಮ, ಮಹಾದೇವಪ್ಪ ಸಗರ, ಸಂಗಣ್ಣ ದಿಗ್ಗಿ, ಭೀಮಣ್ಣ ಅಂಚೆಸೂಗೂರ, ಭೀಮಣ್ಣ ಪಿರಾಪುರ, ಕಾಶಿನಾಥ ಮಡಿವಾಳ, ಈಶ್ವರ ಗೋನಾಳ, ಶಿವಾನಂದ ದೋರನಹಳ್ಳಿ, ನಿಂಗಣ್ಣ ಬಳಬಟ್ಟಿ, ಶರಣಪ್ಪ ಅನ್ವಾರ, ಮಲ್ಲು ಪೋಲಿಸ್, ಅನುಸುಯಾ, ಮಲ್ಲಿಕಾರ್ಜುನ, ಸಾಬರಡ್ಡಿ, ಮಂಜುನಾಥ, ಶ್ರೀಶೈಲ ಮುಡಬೂಳ, ಮಲ್ಲಿಕಾರ್ಜುನ ಯಡಿಯಾಪುರ, ನಾಗು ಸಗರ, ವೀರಘಂಟೆಪ್ಪ ಸಗರ, ಮುಂತಾದವರು ಉಪಸ್ಥಿತರಿದ್ದರು. ಕು. ಅಕ್ಷಯ ವಚನ ವಾಚನದ ಮೂಲಕ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
*ಶ್ರೇಷ್ಠ ಶರಣರ ಸಾಮಾಜಿಕ ಕ್ರಾಂತಿ ವಿಶ್ವಕ್ಕೆ ಮಾದರಿ - ಪ್ರೊ. ದಯಾನಂದ* *ಶಹಾಪುರ:* ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಸಾಮಾಜಿಕ, ವೈಚಾರಿಕ ಕ್ರಾಂತಿ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲಾ ಕಾಯಕ ಸಮುದಾಯಗಳನ್ನು ತನ್ನ ತೆಕ್ಕೆಯಲ್ಲಿ ಹಾಕಿಕೊಂಡ ಬಸವಣ್ಣನವರು ಎಲ್ಲಾ ಕಾಯಕಗಳು ಒಂದೇ ಮತ್ತು ಸಮಾಜಕ್ಕೆ ತುಂಬಾ ಉಪಯುಕ್ತವಾಗಿವೆ ಎಂದು ಕಾಯಕ ತತ್ವದ ಜೀವಪರ ಸಂದೇಶಗಳನ್ನು ಮನುಕುಲಕ್ಕೆ ಸಾರಿದರು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ದಯಾನಂದ ಅಗಸರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕನ್ನಡ ಭವನದಲ್ಲಿ ಶಹಾಪುರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಮಡಿವಾಳ ಮಾಚಿದೇವ ಸಂಘ ಶಹಾಪುರ ವತಿಯಿಂದ ಆಯೋಜಿಸಿದ " ವಚನ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆಗಳು ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು ಕಲ್ಯಾಣ ಕ್ರಾಂತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ವೀರಶರಣ ಮಡಿವಾಳ ಮಾಚಿದೇವರು ಎಲ್ಲಾ ಶರಣರ ವಚನಗಳ ಕಟ್ಟುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ಮಹತ್ವದ ಕಾರ್ಯ ನಿರ್ವಹಿಸಿದರು. ಕೇವಲ ಅವುಗಳನ್ನು ಸಂರಕ್ಷಣೆ ಮಾಡದೇ ವಚನಗಳಲ್ಲಿನ ಮನುಷ್ಯಪರ, ಮಾನವೀಯಪರ ಚಿಂತನೆಗಳನ್ನು ಪ್ರಚುರಪಡಿಸಿ ಎಲ್ಲಾ ಶರಣರ ಅಪಾರ ಪ್ರೀತಿ, ವಿಶ್ವಾಸಕ್ಕೆ, ಮೆಚ್ಚುಗೆಗೆ ಪಾತ್ರರಾದ ಶ್ರೇಷ್ಠ ಶರಣರಾಗಿ, ವಚನಕಾರರಾಗಿ ಶರಣ ಸಂಸ್ಕೃತಿ ಪರಂಪರೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸಾಮಾಜಿಕ ಸಮಾನತೆಯ ಭಧ್ರ ಬುನಾದಿಯ ಮೇಲೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಮೇಲೆ ಮಡಿವಾಳ ಸಮುದಾಯ ಸೇರಿದಂತೆ ಎಲ್ಲಾ ತಳ ಸಮುದಾಯಗಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಬೇಕು ಎಂದು ಹೇಳಿದ ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸೃಜನಾತ್ಮಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಶರಣ ಸಾಹಿತಿ ಶಿವಣ್ಣ ಇಜೇರಿ ಅವರು ಬಸವಾದಿ ಶರಣರ ಶ್ರೇಷ್ಠ ವಚನಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಡಿವಾಳ ಮಾಚಿದೇವ ತಮ್ಮ ವಚನಗಳ ಮೂಲಕ ಮನುಷ್ಯನ ಅಂತರಂಗ ಬಹಿರಂಗ ಶುದ್ದತೆಯನ್ನು ಸಾರಿದರು. ಬಸವಣ್ಣ, ಚೆನ್ನಬಸವಣ್ಣ, ಸೊಲ್ಲಾಪುರದ ಸಿದ್ದರಾಮೇಶ್ವರ ಮುಂತಾದ ಶರಣರು ತಮ್ಮ ವಚನಗಳಲ್ಲಿ ಮಾಚಿದೇವನ ಶ್ರೇಷ್ಠ ವ್ಯಕ್ತಿತ್ವವನ್ನು ಕುರಿತು ಬಣ್ಣಿಸಿದ್ದಾರೆ. ಎಲ್ಲಾ ಶರಣರು ಜಾತಿ, ಮತ, ಪಂಥ, ಪಂಗಡಗಳನ್ನು ಮೀರಿ ಉದಾತ್ತ ಚಿಂತನೆಗಳನ್ನು ನೀಡಿದ್ದಾರೆ ಎಂದು ಹಲವು ನಿರ್ಧೇಶನಗಳ ಮೂಲಕ ತಿಳಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮಲ್ಲಣ್ಣ ಮಡಿವಾಳ ಅವರು ಶರಣ ಮಡಿವಾಳ ಮಾಚಿದೇವರ ಬದುಕು ಮತ್ತು ಚಿಂತನೆಗಳು ಹಾಗೂ ಮಡಿವಾಳ ಸಮುದಾಯದ ಅಭಿವೃದ್ಧಿಯ ಕುರಿತು ಮಾತನಾಡಿದರು. ನಗರ ಸಭೆಯ ಎ.ಇ.ಇ ಅಧಿಕಾರಿ ನಾನಾಸಾಹೇಬ ಮಡಿವಾಳ ಅವರು ಮಾಚಿದೇವರ ವಚನಗಳಲ್ಲಿನ ಸಾಮಾಜಿಕ ಕಾಳಜಿ ಕುರಿತು ತಿಳಿಸಿದರು. ಮಡಿವಾಳೇಶ್ವರ ಮಠದ ಪೂಜ್ಯರಾದ ಶೇಖಪ್ಪ ಸಾಧು ಅವರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕ.ಸಾ.ಪ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅವರು ಸಾಹಿತ್ಯ ಪರಿಷತ್ತು ಹಲವಾರು ವಿಚಾರ ಸಂಕಿರಣಗಳು, ವಿಶೇಷ ಉಪನ್ಯಾಸಗಳ ಮೂಲಕ ಹೊಸತನಗಳಿಗೆ ತೆರೆದುಕೊಳ್ಳುತ್ತಿದೆ. ಜನಸಮುದಾಯಗಳಲ್ಲಿ ಸಾಹಿತ್ಯಿಕ ಚಿಂತನೆಗಳ ಮೂಲಕ ಸಾಂಸ್ಕೃತಿಕ ಕಾಳಜಿ ಮತ್ತು ವೈಚಾರಿಕತೆಯನ್ನು ಮೂಡಿಸುತ್ತಿದೆ ಎಂದು ಪರಿಷತ್ತಿನ ರಚನಾತ್ಮಕ ಚಟುವಟಿಕೆಗಳ ಕುರಿತು ತಿಳಿಸಿದರು. ಶಿಕ್ಷಕಿ ಕಾವೇರಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳಕರ್ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಮಡಿವಾಳಪ್ಪ ಬಿಜಾಸಪೂರ, ತಾಲೂಕು ಅಧ್ಯಕ್ಷ ಭೀಮರಾಯ ಗುತ್ತಿಪೇಟ ಮುಖಂಡರಾದ ಸಣ್ಣನಿಂಗಪ್ಪ ನಾಯ್ಕೋಡಿ, ಸಾಯಬಣ್ಣ ಮಡಿವಾಳ, ಮಹೇಶ ಮಡಿವಾಳ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಬೀ.ಗುಡಿ ವಲಯ ಕ.ಸಾ.ಪ ಅಧ್ಯಕ್ಷ ಶರಣಬಸವ, ಶಿರವಾಳ ವಲಯ ಕ.ಸಾ.ಪ ಅಧ್ಯಕ್ಷ ಮಲ್ಲಣ್ಣ ಹೊಸ್ಮನಿ, ಸಗರ ವಲು ಅಧ್ಯಕ್ಷ ದೇವಿಂದ್ರಪ್ಪ ಹಡಪದ, ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ, ಡಾ. ರಾಘವೇಂದ್ರ ಹಾರಣಗೇರಾ, ಮಹಿಳಾ ಪ್ರತಿನಿಧಿ ನಿರ್ಮಲಾ ತುಂಬಗಿ, ಬಿ.ಎಮ್ ಪೂಜಾರಿ, ಸೈಯದ್ ಚಾಂದಪಾಶ್, ದೇವಿಂದ್ರಪ್ರ ವಿಶ್ವಕರ್ಮ, ಮಹಾದೇವಪ್ಪ ಸಗರ, ಸಂಗಣ್ಣ ದಿಗ್ಗಿ, ಭೀಮಣ್ಣ ಅಂಚೆಸೂಗೂರ, ಭೀಮಣ್ಣ ಪಿರಾಪುರ, ಕಾಶಿನಾಥ ಮಡಿವಾಳ, ಈಶ್ವರ ಗೋನಾಳ, ಶಿವಾನಂದ ದೋರನಹಳ್ಳಿ, ನಿಂಗಣ್ಣ ಬಳಬಟ್ಟಿ, ಶರಣಪ್ಪ ಅನ್ವಾರ, ಮಲ್ಲು ಪೋಲಿಸ್, ಅನುಸುಯಾ, ಮಲ್ಲಿಕಾರ್ಜುನ, ಸಾಬರಡ್ಡಿ, ಮಂಜುನಾಥ, ಶ್ರೀಶೈಲ ಮುಡಬೂಳ, ಮಲ್ಲಿಕಾರ್ಜುನ ಯಡಿಯಾಪುರ, ನಾಗು ಸಗರ, ವೀರಘಂಟೆಪ್ಪ ಸಗರ, ಮುಂತಾದವರು ಉಪಸ್ಥಿತರಿದ್ದರು. ಕು. ಅಕ್ಷಯ ವಚನ ವಾಚನದ ಮೂಲಕ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
- ಕಾಮಗಾರಿ ಮಾಡದೆ ಹಣ ಲಪ್ಟಾಯಿಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರಗಿಸಿ: ಉಮೇಶ್ ಮುದ್ನಾಳ ಕಾಮಗಾರಿ ಮಾಡದೆ ಹಣ ಲಪ್ಟಾಯಿಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಹೋರಾಟದ ಎಚ್ಚರಿಕೆಗೆ 7 ತಿಂಗಳ ನಂತರ ಜಿ.ಪಂ. ಪಿ.ಡಿ. ಸಿ.ಬಿ. ದೇವರಮನಿ ತಳಕ ಗ್ರಾಮಕ್ಕೆ ಬೇಟಿ ನೀಡಿದರು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ದೂರಿಗೆ 7 ತಿಂಗಳ ನಂತರ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿದಸಿದ ಜಿ.ಪಂ. ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ ಸಂಪೂರ್ಣ ವರದಿ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಸಲ್ಲಿಸುವ ಭರವಸೆ. ಯಾದಗಿರಿ : ತಾಲೂಕಿನ ತಳಕ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಬಸವನ ಗುಡಿಯಿಂದ ಹಳ್ಳದ ವರೆಗೆ ಸಿ.ಸಿ. ಚರಂಡಿ ನಿಮಾರ್ಣ ಬಿಲ್ ನಂ. 309 ಹಣ 42560/- ಮತ್ತು ಬಿಲ್ 35155 ನಂ. 41440/- 2021-22ನೇ ಸಾಲಿನಲ್ಲಿ ಬಸವನ ಕಟ್ಟಿ ಹತ್ತಿರ ದನಕರಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಬಿಲ್ ನಂ. 310 ಹಣ 24610/- ಮತ್ತು ಬಿಲ್, 3516 ಹಣ 7817/- ಈ ಎರಡು ಕಾಮಗಾರಿಗಳನ್ನು ಮಾಡದೇ ಸಂಪೂರ್ಣ ಹಣ ಲೂಟಿ ಮಾಡಿದ ಹಿಂದಿನ ಪಿ.ಡಿ.ಸಿ ಬೂಪ ನೀಲಕಂಠ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಸರ್ಕಾರಕ್ಕೆ ಭೊಕ್ಕಸಕ್ಕೆ ಹಣ ತುಂಬಿಸಬೇಕೆAದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರ ಹೋರಾಟದ ಎಚ್ಚರಿಕೆ ನೀಡಿದರು. ಅದರ ಬೆನ್ನಲ್ಲೇ ಜಿಲ್ಲಾ ಪಂಚಾಯತ ಪಿಡಿ ಸಿ.ಬಿ. ದೇವರಮನಿ ಅವರು ಮಂಗಳವಾರ 7 ತಿಂಗಳ ನಂತರ ಗ್ರಾಮಕ್ಕೆ ಬೇಟಿ ನೀಡಿ ಪರಿಶಿಲಿಸಿ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ನಂತರ ಸ್ಥಳದಲ್ಲಿದ ಕೆÀಳಮಟ್ಟದ ಅಧಿಕಾರಿಗಳಿಗೆ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿ ಬ್ಲಿಚಿಂಗ್ ಪೌಡರ್ ಫಾಗಿಂಗ್ ಮಾಡಿ ಸಾರ್ವಜನಿರಕಿಗೆ ರೋಗ ರೂಜನೆ ಬರದಂತೆ ನೋಡಿಕೊಳ್ಳಿಎಂದು ಸೂಚಿದರು. ಸಿಸಿ ಚರಂಡಿ ಇಲ್ಲದ ಸ್ಥಳದಲ್ಲಿ ಸಿಸಿ ಚರಂಡಿ ಇಲ್ಲದ ಸ್ಥಳಗಳನ್ನು ಗುರುತಿಸಿ ಅಂದಾಜು ಪಟ್ಟಿ ಜಿಲ್ಲಾಪಂಚಾಯತಿಗೆ ಸಲ್ಲಿಸುವಂತೆ ತಿಳಿಸಿದರು. ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಅಕ್ರಮ ವೆಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳದೇ 7 ತಿಂಗಳ ನಂತರ ನಾಮಕೆ ವಾಸ್ತೆ ಗ್ರಾಮಕ್ಕೆ ಬೇಟಿ ನೀಡುತ್ತಿರುವುದು ದೂರದುಷ್ಟಕರ ಸಂಗತಿ ಎಂದರು. ಇದಲ್ಲದೇ ಮುದ್ನಾಳ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಅನುವು ಮಾಡಿ ಕೊಡದಲ್ಲದೇ ಗ್ರಂಥಾಲಯದ ಶೆಡ್ಡ ನಿರ್ಮಾಣ ಅವ್ಯವಾಹರ ನಡೆದಿದ್ದರು ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥೆ ಮಾಡದೆ ಹಣ ಲಪ್ಟಾಯಿಸಿದ್ದು ರೈತರ ಗೋದಾಮು ನಿರ್ಮಾಣ ಮಾಡದೇ ಒಂದೇ ದಿನ ಹಣ ಡ್ರಾ ಮಾಡಿದರು. ಇಂತ ವ್ಯಕ್ತಿಗೆ ಅಮಾನತ್ತು ಗೊಳಿಸಿ ಮನೆಗೆ ಕಳಿಸಬೇಕಾಗಿತ್ತು ಆದರೆ ನಿಮ್ಮ ಜಿಲ್ಲಾ ಪಂಚಾಯತಿಯಲ್ಲಿ ಇಂತವರಿಗೆ ರಾಜಾ ಮರಾದಿ ನೀಡುತ್ತಿರುವುದು ನಾಚಿಗೇಡಿನ ಸಂಗತಿ ಈ ಅಕ್ರಮ ಎಸಗಿದವರ ಜೊತೆ ಅವರ ಕೊಡತಕ್ಕಂತ ಲಂಚಕ್ಕೆ ಕೈವಡ್ಡಿ ತಾ.ಪಂ. ಜಿ.ಪಂ.ಯಲ್ಲಿ ಕೆಲವು ಅಧಿಕಾರಿಗಳು ಇವರ ಜೊತೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಇದರ ಸಂಪೂರ್ಣ ಪಿಕ್ಚರ್ ರೆಡಿಯಾಗಿದೆ ಮುಂದಿನ ದಿನಗಳಲ್ಲಿ ಇಡಿ ರಾಜ್ಯದ ಜನ ನೋಡಿ ಕ್ಯಾಕರ್ಸಿ ಉಗುಳುವ ಕಾಲ ಅತ್ರ ಬಂದಿದೆ ಆಮೇಲೆ ಸತ್ಯಾ ಅಸತ್ಯತೆ ಯಾರು ಸಾಚಾ ಯಾರು ಸರ್ಕಾರಿ ಹಣ ದುರಬಳಕೆ ಮಾಡಿದ್ದಾರೆಂಬುವುದು ಸದ್ಯದಲ್ಲೇ ತಿಳಿಯಲಿದೆ ಎಂದು ಹೇಳಿದರು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ದಾಳ ಅವರು ಆರೋಪಿಸಿದ್ದಾರೆ ಗ್ರಾಮಕ್ಕೆ ಭೇಟಿ ಸುತ್ತಾಡಿದ ನಂತರ ಮಾತನಾಡಿದ ಅವರು ಗ್ರಾಮದ ಎರಡು ಕಡೆ ಕಾಮಗಾರಿ ಆಗದೆ 1) ಗ್ರಾಮದಲ್ಲಿ ಪರಿಸ್ಥಿತಿ ಹದಗೆಡಲು ಪಿಡಿಒ ಬೇಜವಾಬ್ದಾರಿಯೇ ಕಾರಣ ಕ್ರಮಕೈಗೊಳ್ಳದಿದ್ದರೆ ಉಮೇಶ ಕೆ. ಮುದ್ದಾಳ ಅವರು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು ಚರಂಡಿ ನೀರು ದುರ್ವಾಸನೆ ಬೀರುತ್ತಿರುವ ಪರಿಣಾಮ: ಸೊಳ್ಳೆಗಳ ಕಾಟ ಅಧಿಕವಾಗಿದೆ. ಮಲೇರಿಯಾ ಸೇರಿದಂತೆ ಆನೇಕ ಸಾಂಕ್ರಾಮಿಕ ರೋಗಗಳು ಹರಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಹಳ್ಳಿಗೆ ಭೇಟಿ ನೀಡಿ, ಅಗತ್ಯ ಕ್ರಮಕೈಗೊಳ್ಳಬೇಕಿದೆ ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಗ್ರಾಮಸ್ಥರೊಂದಿಗೆ ಉಮೇಶ ಕೆ ಮುನ್ನಾಳ ಎಚ್ಚರಿಕೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಠಾಣಗುಂದಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಜೆಇ ಗಂಗಣ್ಣ, ಚಂದಪ್ಪ, ದೇವಪ್ಪ, ಆನಂದ, ಮರೆಪ್ಪ ಪವನ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ತಳಕ ಪ್ರಮುಖ ಬಿದಿಗಳಲ್ಲಿ ಒಳ ಚರಂಡಿ ನೀರು ರಸ್ತೆ ಮೇಲೆ ನೀರು ಹರಿದು ಸಮರ್ಪಕವಾಗಿ ರಸ್ತೆ ಮತ್ತು ಒಳಚರಂಡಿ ಇಲ್ಲದ ಕಾರಣ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರ ಗೋಳು ಕೇಳೋರು ಯಾರು ಎಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ ನಾಳೆಯಿಂದ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಪ್ರಾರಂಭವಾಗಲಿದೆ. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.2
- ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ದೂತರಾದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಸ್ಮರಿಸಲು ಆಚರಿಸುವ ಪವಿತ್ರ ದಿನವಾಗಿದೆ ಗೋಗಿ ಎಲ್ಲಿ ಪಥಸಂಚಲನ ನಡೆಯಿತು ಸ್ಥಳೀಯ ಪೊಲೀಸರು, ಮಹಿಳಾ ಸಿಬ್ಬಂದಿ, ಕೆಎಸ್ಆರ್ಪಿ (KSRP) ತುಕಡಿಗಳು ಮತ್ತು ಗೃಹ ರಕ್ಷಕ ದಳದವರು.ಮಾರ್ಗ: ಊರಿನ ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಮತ್ತು ಸಂವೇದನಾಶೀಲ ಪ್ರದೇಶಗಳ ಮೂಲಕ ಸಾಗುತ್ತದೆ1
- ದೇವದುರ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ ಸಂಭ್ರಮ ಆಚರಣೆ ಮಾಡಲಾಯಿತು1
- ಈದ್ ಮಿಲಾದ್ ಸಂಭ್ರಮದ ಆಚರಣೆ ದೇವದುರ್ಗದ ಮುಖ್ಯ ರಸ್ತೆ ಮೂಲಕ ಮೆಕ್ಕಾ ಮದೀನಾ ಸ್ಥಬ್ದ ಚಿತ್ರಗಳ ಮೆರವಣಿಗೆ1
- ಮದರಕಲ್ ಗ್ರಾಮದಲ್ಲಿ ಹಿರಿಯ ನಾಗರಿಕರ ಕುಂದು ಕೊರತೆ ಆಲಿಸಿದ ಪಿಎಸ್ಐ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದರಕಲ್ ಗ್ರಾಮದಲ್ಲಿ ಜಾಲಹಳ್ಳಿ ಪಿಎಸ್ಐ ಅವರು “ಆಸರೆ ಯೋಜನೆ” ಅಡಿಯಲ್ಲಿ ಒಂಟಿ ಮನೆಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರನ್ನು ಭೇಟಿ ಮಾಡಿ, ಅವರ ಕುಂದು ಕೊರತೆಗಳನ್ನು ಆಲಿಸಿದರು. ಹಿರಿಯ ನಾಗರಿಕರ ಆರೋಗ್ಯ, ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಿದರು. ಒಂಟಿಯಾಗಿ ವಾಸಿಸುವ ಹಿರಿಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಸದಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಈ ವೇಳೆ ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಂಡರು.1
- ಕಾಳಗಿಯಲ್ಲಿ ಕ್ರಾಪ್ ಕಟಿಂಗ್ನಲ್ಲಿ ಲೋಪ ದೋಷ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಹುಲಸಗುಡ್ ಗ್ರಾಮದಲ್ಲಿ ರೈತರ ಹಾಗೂ ರೈತನ ಮುಖಂಡರು ಗೆರಾವ್–ಪ್ರತಿಭಟನೆ. ಕ್ರಾಪ್ ಕಟಿಂಗ್ನಲ್ಲಿ ಲೋಪ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಾರ್ಟಿಕಲ್ಚರ್ ಅಧಿಕಾರಿಗಳು, ಬೆಳೆ ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ವಿರುದ್ಧ ಹುಲಸಗುಡ್ ಗ್ರಾಮದ ರೈತರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಗೆರಾವ್ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಸರಿಯಾದ ಕ್ರಾಪ್ ಕಟಿಂಗ್ ಮಾಡದೆ ಇರುವುದರಿಂದ ಬೆಳೆ ವಿಮೆ ಹಾಗೂ ಪರಿಹಾರ ಪಡೆಯುವಲ್ಲಿ ರೈತರಿಗೆ ಅನ್ಯಾಯವಾಗುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಹೋದ ವರ್ಷ ಅತಿವೃಷ್ಟಿಯಾಗಿ ಹಾಳಾಗಿರ್ತಕ್ಕಂತ ಬೆಳೆ ಇನ್ಸೂರೆನ್ಸ್ ಸರಿಯಾಗಿ ಬರದೇ ರೈತ ಸಂಕಷ್ಟದಲ್ಲಿದ್ದಾನೆ. ಈ ವರ್ಷ ಮಳೆ ಇಲ್ಲದೆ ಬೆಳೆದೆ ಬೆಳೆ ಇಲ್ಲದೆ ರೈತ ಕಷ್ಟದಲ್ಲಿದ್ದಾನೆ ಬರದ ಛಾಯ ಮೂಡಿದೆ. ಹೀಗಿರುವಾಗ ಮತ್ತೆ ಇನ್ಸೂರೆನ್ಸ್ ಕಂಪನಿ ದವರು ಅದೇ ರಾಗ ಅದೇ ಹಾಡು ಹಾಡುತ್ತಿದ್ದಾರೆ. ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಆಗಮಿಸಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿದರು. ಸರಿಯಾದ ರೀತಿಯಲ್ಲಿ ಕ್ರಾಪ್ ಕಟಿಂಗ್ ಮಾಡದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಹಸೀಲ್ದಾರ್ ಅವರ ಭರವಸೆ ಹಾಗೂ ಅಧಿಕಾರಿಗಳಿಂದ ಸಮಸ್ಯೆ ಪರಿಶೀಲಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದರು. ರೈತರ ಬೆಳೆ ವಿಮೆ ಮತ್ತು ಬೆಳೆ ಪರಿಹಾರದಲ್ಲಿ ಯಾವುದೇ ರೀತಿಯ ತಾರತಮ್ಯವಾಗಬಾರದು. ಸರಿಯಾದ ಕ್ರಾಪ್ ಕಟಿಂಗ್ ನಡೆಸಿ ಅರ್ಹ ಪ್ರತಿಯೊಬ್ಬ ರೈತನಿಗೂ ನ್ಯಾಯ ಒದಗಿಸಬೇಕು ಎಂದು ಹುಲಸಗುಡ್ ಗ್ರಾಮದ ರೈತರು ಹಾಗೂ ಸುಂಟಾಣ್ಣ ಗ್ರಾಮದ ರೈತರು, ರೈತ ಸೇನೆ ಮುಖಂಡರು ಆಗ್ರಹಿಸಿದ್ದಾರೆ. “ರೈತರ ಬೆವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ರೈತ ನಾಯಕ ವೀರಣ್ಣ ಗಂಗಾಣಿ ಎಚ್ಚರಿಕೆ ನೀಡಿದ್ದಾರೆ. ತಾಲೂಕ ದಂಡಾಧಿಕಾರಿಗಳಾದ ಪೃಥ್ವಿರಾಜ್ ಪಾಟೀಲ್ ರವರು ಎರಡು ಮೂರು ದಿವಸಗಳಲ್ಲಿ ಮುಖಂಡರನ್ನು ಕರೆದು ಸಭೆ ಮಾಡಿ ನಂತರ ಖುದ್ದಾಗಿ ನಾವೇ ಬಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಇಒ ಬಸಲಿಂಗಪ್ಪ ಡಿಗ್ಗಿ, ಆರ್ಟಿಕಲ್ಚರ್ ಅಧಿಕಾರಿ ನಸ್ಸೀರ್ ಹೊಸಳ್ಳಿ, ಇನ್ಸೂರೆನ್ಸ್ ಕಂಪನಿ ಅಧಿಕಾರಿ ಯುವರಾಜ್, ರೈತರದ ಸಂತೋಷ್ ನಾಯ್ಕೋಡಿ,ಶಿವಶರಣಪ್ಪ ನಿಗದಳಿ, ವಿಠಲ ಸನದಿ, ಪಾಂಡುರಂಗ ರುಮ್ಮನಗೂಡ. ಸೈದಪ್ಪ ಕೊಡಡೂರ, ಸಜೀದಾಪಟೇಲ್ ಬಿರಾದಾರ್, ಸಿದಪ್ಪ ಕಂದಗುಳ, ಶಿವಪ್ಪ ಸನದಿ, ನಾಮದೇವ ರಾಠೋಡ್, ಉದಯ ಸನದಿ, ನಾಗೇಶ್ ಸನದಿ, ವಿಠ್ಠಲ್ ರೂಮನಗುಡ, ಸಂತೋಷ ಮಠಪತಿ, ಪೀರಪ್ಪ ಯಾದವ, ನಾಗಪ್ಪ ಜಡಗಿ, ಅನೇಕ ರೈತರು ಉಪಸ್ಥಿತರಿದ್ದರು1
- ಕಾಲುವೆ ನೀರಿಗಾಗಿ ರೈತರಿಂದ ಸಿರವಾರ ಬಂದ್ ಗೆ ನೀರಸ ಪ್ರತಿಕ್ರಿಯೆ. ನೀರಿಗಾಗಿ ರೈತರಿಂದ ಸಿರವಾರ ಬಂದ್ ನೀರಸ ಪ್ರತಿಕ್ರಿಯೆ. ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ರೈತರಿಂದ ಸಿರವಾರ ಪಟ್ಟಣ ಬಂದ್ ಗೆ ಕರೆಕೊಡಲಾಗಿತ್ತು. ಬಂದ್ ಕರೆಗೆ ಪಟ್ಟಣದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನು ಕೆಲ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ಪ್ರಕ್ರಿಯೆಗಳು ನಡೆಸಿದ್ದರು.1
- ಜಯರಾಜ್ ಅಧ್ಯಕ್ಷರು ರಕ್ಷಣಾ ವೇದಿಕೆ ದೇವದುರ್ಗ ನಗರದಲ್ಲಿ ನೂತನ ಲ್ಯಾಂಡ್ರಿ ಶಾಪ್ ಪ್ರಾರಂಭ1