ಚಿಂತಾಮಣಿಯಲ್ಲಿ ಮಕ್ಕಳ ಕಳ್ಳರ ಭೀತಿ: ಪೋಷಕರೇ ಎಚ್ಚರ.. ಎಚ್ಚರ! ಚಿಂತಾಮಣಿಯಲ್ಲಿ ಮಕ್ಕಳ ಕಳ್ಳರ ಭೀತಿ: ಪೋಷಕರೇ ಎಚ್ಚರ.. ಎಚ್ಚರ! ಎನ್.ಆರ್. ಬಡಾವಣೆಯಲ್ಲಿ ಮಗು ಅಪಹರಣಕ್ಕೆ ಯತ್ನ: ಕಿರುಚಾಡಿದ ಮನೆಯವರು, ಪರಾರಿಯಾದ ಕಳ್ಳರು! ಚಿಂತಾಮಣಿ ನಗರದ ಜನರೇ ಸ್ವಲ್ಪ ಇತ್ತ ಗಮನಿಸಿ. ನಗರದಲ್ಲಿ ಈಗ ಮಕ್ಕಳ ಕಳ್ಳರ ಆತಂಕ ಶುರುವಾಗಿದೆ. ಹೌದು, ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಎನ್.ಆರ್. ಬಡಾವಣೆಯಲ್ಲಿ ನಡುಹಗಲಲ್ಲೇ ಮಗುವನ್ನು ಅಪಹರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್.ಆರ್. ಬಡಾವಣೆಯ ರಾಮಮಂದಿರದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಕಳ್ಳತನ ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಈ ವೇಳೆ ಮಗುವಿನ ಮನೆಯವರು ಸಮಯಪ್ರಜ್ಞೆ ಮೆರೆದು ಜೋರಾಗಿ ಕಿರುಚಾಡಿದ್ದಾರೆ. ಮನೆಯವರ ಕಿರುಚಾಟ ಮತ್ತು ಅಕ್ಕಪಕ್ಕದವರು ಓಡಿಬರುವುದನ್ನು ಕಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಸಾರ್ವಜನಿಕರು 112 ಪೊಲೀಸ್ ತುರ್ತು ವಾಹನಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮಗುವಿನ ಪೋಷಕರಿಗೆ "ಯಾವುದೇ ತರಹದ ಆತಂಕ ಪಡಬೇಡಿ, ನಾವು ಸದಾ ನಿಗಾದಲ್ಲಿ ಇರುತ್ತೇವೆ" ಎಂದು ಧೈರ್ಯ ತುಂಬಿದ್ದಾರೆ. ಈಗ ಬೇಸಿಗೆ ರಜೆ ಇರುವುದರಿಂದ ಮಕ್ಕಳು ದಿನವಿಡೀ ಮನೆಯ ಹೊರಗೆ, ರಸ್ತೆಗಳಲ್ಲಿ ಆಟವಾಡುತ್ತಿರುತ್ತಾರೆ. ಪೋಷಕರೇ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ನಿಮ್ಮ ಮಗು ಎಲ್ಲಿದೆ? ಯಾರ ಜೊತೆ ಆಟವಾಡುತ್ತಿದೆ ಎಂಬ ಬಗ್ಗೆ ಸದಾ ನಿಗಾ ಇರಲಿ. ಅಪರಿಚಿತರು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇನ್ನು ಎನ್.ಆರ್. ಬಡಾವಣೆ ಸೇರಿದಂತೆ ನಗರದ ಹಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ಮತ್ತು ಸರಗಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರಿಂದಾಗಿ ಸಾರ್ವಜನಿಕರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಪೊಲೀಸರು ಕೇವಲ ಬಂದು ಪರಿಶೀಲನೆ ನಡೆಸಿದರೆ ಸಾಲದು, ರಾತ್ರಿ ಹಾಗೂ ಹಗಲು ವೇಳೆ ಪೊಲೀಸ್ ಗಸ್ತನ್ನು ಚುರುಕುಗೊಳಿಸಬೇಕು, ಇಂತಹ ಕಳ್ಳರನ್ನು ಬೇಗನೇ ಪತ್ತೆಹಚ್ಚಿ ಅರೆಸ್ಟ್ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದ ಬಲವಾದ ಒತ್ತಾಯವಾಗಿದೆ ವರದಿ:-ಸೀನ. ಟಿ ಚಿಂತಾಮಣಿ
ಚಿಂತಾಮಣಿಯಲ್ಲಿ ಮಕ್ಕಳ ಕಳ್ಳರ ಭೀತಿ: ಪೋಷಕರೇ ಎಚ್ಚರ.. ಎಚ್ಚರ! ಚಿಂತಾಮಣಿಯಲ್ಲಿ ಮಕ್ಕಳ ಕಳ್ಳರ ಭೀತಿ: ಪೋಷಕರೇ ಎಚ್ಚರ.. ಎಚ್ಚರ! ಎನ್.ಆರ್. ಬಡಾವಣೆಯಲ್ಲಿ ಮಗು ಅಪಹರಣಕ್ಕೆ ಯತ್ನ: ಕಿರುಚಾಡಿದ ಮನೆಯವರು, ಪರಾರಿಯಾದ ಕಳ್ಳರು! ಚಿಂತಾಮಣಿ ನಗರದ ಜನರೇ ಸ್ವಲ್ಪ ಇತ್ತ ಗಮನಿಸಿ. ನಗರದಲ್ಲಿ ಈಗ ಮಕ್ಕಳ ಕಳ್ಳರ ಆತಂಕ ಶುರುವಾಗಿದೆ. ಹೌದು, ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಎನ್.ಆರ್. ಬಡಾವಣೆಯಲ್ಲಿ ನಡುಹಗಲಲ್ಲೇ ಮಗುವನ್ನು ಅಪಹರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್.ಆರ್. ಬಡಾವಣೆಯ ರಾಮಮಂದಿರದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಕಳ್ಳತನ ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಈ ವೇಳೆ ಮಗುವಿನ ಮನೆಯವರು ಸಮಯಪ್ರಜ್ಞೆ ಮೆರೆದು ಜೋರಾಗಿ ಕಿರುಚಾಡಿದ್ದಾರೆ. ಮನೆಯವರ ಕಿರುಚಾಟ ಮತ್ತು ಅಕ್ಕಪಕ್ಕದವರು ಓಡಿಬರುವುದನ್ನು ಕಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಸಾರ್ವಜನಿಕರು 112 ಪೊಲೀಸ್ ತುರ್ತು ವಾಹನಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ
ನಡೆಸಿದ್ದಾರೆ. ಈ ವೇಳೆ ಪೊಲೀಸರು ಮಗುವಿನ ಪೋಷಕರಿಗೆ "ಯಾವುದೇ ತರಹದ ಆತಂಕ ಪಡಬೇಡಿ, ನಾವು ಸದಾ ನಿಗಾದಲ್ಲಿ ಇರುತ್ತೇವೆ" ಎಂದು ಧೈರ್ಯ ತುಂಬಿದ್ದಾರೆ. ಈಗ ಬೇಸಿಗೆ ರಜೆ ಇರುವುದರಿಂದ ಮಕ್ಕಳು ದಿನವಿಡೀ ಮನೆಯ ಹೊರಗೆ, ರಸ್ತೆಗಳಲ್ಲಿ ಆಟವಾಡುತ್ತಿರುತ್ತಾರೆ. ಪೋಷಕರೇ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ನಿಮ್ಮ ಮಗು ಎಲ್ಲಿದೆ? ಯಾರ ಜೊತೆ ಆಟವಾಡುತ್ತಿದೆ ಎಂಬ ಬಗ್ಗೆ ಸದಾ ನಿಗಾ ಇರಲಿ. ಅಪರಿಚಿತರು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇನ್ನು ಎನ್.ಆರ್. ಬಡಾವಣೆ ಸೇರಿದಂತೆ ನಗರದ ಹಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ಮತ್ತು ಸರಗಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರಿಂದಾಗಿ ಸಾರ್ವಜನಿಕರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಪೊಲೀಸರು ಕೇವಲ ಬಂದು ಪರಿಶೀಲನೆ ನಡೆಸಿದರೆ ಸಾಲದು, ರಾತ್ರಿ ಹಾಗೂ ಹಗಲು ವೇಳೆ ಪೊಲೀಸ್ ಗಸ್ತನ್ನು ಚುರುಕುಗೊಳಿಸಬೇಕು, ಇಂತಹ ಕಳ್ಳರನ್ನು ಬೇಗನೇ ಪತ್ತೆಹಚ್ಚಿ ಅರೆಸ್ಟ್ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದ ಬಲವಾದ ಒತ್ತಾಯವಾಗಿದೆ ವರದಿ:-ಸೀನ. ಟಿ ಚಿಂತಾಮಣಿ
- MBSS..KOLAR KI.AWAAZ KOUSAR NEWS1
- ನಾಗಸಂದ್ರ ಮೆಟ್ರೋ ಬಳಿ ಬೈಕ್ ಕಳ್ಳತನ ನಕಲಿ ಕೀ ಬಳಸಿ ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ1
- *ಕಳ್ಳತನ ಮಾಡುವುದು ಕಂಡರೆ daily 112* ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಭಾಗ "ಶೂ" ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ಕಳ್ಳತನ ಮಾಡಿಕೋಂಡು ಹೋಗುವ ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಸರ್ 🤝 #Theft #Robbery #Burglary #Stealing #CrimeNews #BreakingNews #CCTV #CCTVFootage #CaughtOnCamera #CaughtOnCCTV #BikeTheft (ಬೈಕ್ ಕಳ್ಳತನ), #GoldTheft (ಚಿನ್ನದ ಕಳ್ಳತನ), #ChainSnatching (: #PoliceInvestigation #KarnatakaPolice Be careful while parking your vehicles near a Electric Transformers1
- ಮಳವಳ್ಳಿ ಪಟ್ಟಣದ ಉದ್ಯಮಿಗಳಾದ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ರವರು ನೂತನವಾಗಿ ನಿರ್ಮಿಸಿರುವ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಶ್ರೀಗಳ ಆಗಮನ ಅಪಾರ ಭಕ್ತರಿಂದ ಭಕ್ತಿ ಸಮರ್ಪಣೆ ಮಳವಳ್ಳಿ ಪಟ್ಟಣದ ಎನ್ಎಸ್ ಬಡಾವಣೆಯಲ್ಲಿ ಶ್ರೀಮತಿ ಗೀತಾ ಮತ್ತು ಎಸ್ ಬಿ ಶಿವಸ್ವಾಮಿ ರವರ ಸಹೋದರ ಉದ್ಯಮಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ದಂಪತಿಗಳು ನೂತನವಾಗಿ ನಿರ್ಮಿಸಿರುವ ಜಯಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸಿ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಆಗಮಿಸಿ ಕುಟುಂಬಕ್ಕೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ಕುಟುಂಬಸ್ಥರಿಂದ ಅರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪರಮಪೂಜ್ಯರಿಗೆ ದಿವ್ಯ ಪಾದಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು ಈ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನ ಹರ ಗುರು ಚರಮೂರ್ತಿಗಳು ತಾಲೂಕಿನ ಉದ್ಯಮಿಗಳು ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಆಗಮಿಸಿ ನೂತನ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ದಂಪತಿಗಳಿಗೆ ಆಶೀರ್ವದಿಸಿ ಶುಭ ಕೋರಿದರು1
- ಬೆಳತ್ತೂರು, ಉದ್ದನೂರು ಕೆರೆಗಳ ಸಂರಕ್ಷಣೆಗೆ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ: ಗಡಿ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ಹನೂರು: ತಾಲೂಕಿನ ಬೆಳತ್ತೂರು ಹಾಗೂ ಉದ್ದನೂರು ಗ್ರಾಮಗಳ ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಹತ್ವದ ಪರಿಶೀಲನೆ ನಡೆಸಿದರು. ಕೆರೆಗಳ ಒತ್ತುವರಿ ತಡೆಗಟ್ಟಲು ಮತ್ತು ಜಲಮೂಲಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶಾಸಕರು ಈ ಭೇಟಿ ನೀಡಿದ್ದು, ಸ್ಥಳದಲ್ಲಿದ್ದ ಸರ್ವೆ ಅಧಿಕಾರಿಗಳಿಗೆ ಪ್ರಮುಖ ನಿರ್ದೇಶನಗಳನ್ನು ನೀಡಿದರು. ವರದಿಯ ಮುಖ್ಯಾಂಶಗಳು: ಗಡಿ ಗುರುತಿಸಲು ಸೂಚನೆ: ಕೆರೆ ಅಂಗಳದ ಜಾಗವನ್ನು ನಿಖರವಾಗಿ ಗುರುತಿಸಿ, ಕೆರೆಯ ಗಡಿಯನ್ನು ನಿಗದಿಪಡಿಸಲು ಶಾಸಕರು ಸರ್ವೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆಯ ಜಾಗವನ್ನು ಪ್ರತ್ಯೇಕವಾಗಿ ಕಾಯ್ದಿರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಬಂಡ್ ಅಗಲೀಕರಣ: ಮುಂದಿನ ದಿನಗಳಲ್ಲಿ ಕೆರೆಯ ಏರಿಯನ್ನು (ಬಂಡ್) ಅಗಲೀಕರಣಗೊಳಿಸಿ, ಕೆರೆಯ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ನೀರು ತುಂಬಿಸುವ ಯೋಜನೆ: ಮಳೆಗಾಲದಲ್ಲಿ ಅಥವಾ ಲಭ್ಯವಿರುವ ಮೂಲಗಳಿಂದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರಿ ಮಟ್ಟದಲ್ಲಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. "ನಮ್ಮ ಹಳ್ಳಿಗಳ ಜೀವನಾಡಿಯಾಗಿರುವ ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ಕೆರೆಯ ಜಾಗ ಒತ್ತುವರಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕೆರೆ ಅಭಿವೃದ್ಧಿಯಾದರೆ ಸುತ್ತಮುತ್ತಲ ರೈತರಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗಲಿದೆ." — ಎಂ.ಆರ್. ಮಂಜುನಾಥ್, ಶಾಸಕರು, ಹನೂರು ಕ್ಷೇತ್ರ. ಈ ಸಂದರ್ಭದಲ್ಲಿ ಸ್ಥಳೀಯ ಸರ್ವೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಬೆಳತ್ತೂರು ಮತ್ತು ಉದ್ದನೂರು ಗ್ರಾಮಗಳ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ಶಾಸಕರ ಈ ಜನಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.4
- ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಾಳವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ನಡುವೆ ವಿಜಂಭಣೆಯಿಂದ ಜರುಗಿತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಟ್ಟದ ಉದ್ದಗಲಕ್ಕೂ ಸಂಭ್ರಮ, ಸಡಗರ, ಭಕ್ತರ ಕಲರವ ಕಂಡು ಬಂತು. ಬಿರು ಬಿಸಿಲಿನಲ್ಲೂ ಉತ್ಸಾಹ ಕುಂದಲಿಲ್ಲ. ರಥಕ್ಕೆ ಚಾಲನೆ ಕೊಡುತ್ತಿದ್ದಂತೆ ಉಘೇ.. ಉಘೇ ರಂಗಪ್ಪ ಹರ್ಷೋದ್ಗಾರ ಮೊಳಗಿತು. ಗುರುವಾರ ಮುಂಜಾನೆಯಿಂದಲೇ ಬಿಳಿಗಿರಿರಂಗನಾಥಸ್ವಾಮಿ, ಅಲಮೇಲು ರಂಗನಾಯಕಿ ಅಮ್ಮನವರ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದ ಬಳಿಕ ಬಿಳಿಗಿರಿರಂಗನ ಮೂರ್ತಿಯನ್ನು ರತ್ನ ಖಚಿತ ಚಿನ್ನದ ಕೀರಿಟ, ಚಿನ್ನಾಭರಣ ತುಳಸಿ, ಸುಗಂಧರಾಜ , ಗುಲಾಬಿ, ಮಲ್ಲಿಗೆ, ಸಂಪಿಗೆ ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು. 5ಕ್ಕೆ ಕಲ್ಯಾಣೋತ್ಸವ, 7 ಗಂಟೆಗೆ ಪ್ರಸ್ಥಾನ ಮಂಟಪೋತ್ಸವ ನಡೆಯಿತು. ನಂತರ ಹೂನಿಂದ ಅಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ, ಅಲುಮೇಲು ರಂಗನಾಯಕಿ ಉತ್ಸವ ಮೂರ್ತಿ ಇರಿಸಿ, ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮತ್ತು ರಾಜ ಬೀದಿಯಲ್ಲಿ ಮೆರವಣಿಗೆ ಮಾಡಿದ ಬಳಿಕ ಧ್ವಜ ಪತಾಕೆಗಳಿಂದ ಸಿಂಗರಿಸಿದ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ಕಲ್ಯಾ ಣೋತ್ಸೋವ, ಮುಯ್ಯಿ ಸಮರ್ಪಿ ಸಲಾಯಿತು. ಬೆಳಗ್ಗೆ 10.13 ರಿಂದ 10.27 ರೊಳಗಿನ ಶುಭ ಮಿಥುನ ಲಗ್ನದ ಮೀನಗುರು ನವಾಂಶದ ಶುಭ ಮೂಹರ್ತದಲ್ಲಿ ಪೂಜೆ ಸಲ್ಲಿಸಿದ ನಂತರ ರಥಕ್ಕೆ ಶಾಸಕರ ಎ ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ಗೋವಿಂದ ಜೈಕಾರ ಹಾಕುತ್ತ, ಶಂಖು, ಜಾಗಟೆ ಭಾರಿಸುತ್ತ ರಥ ಎಳೆದ ಭಕ್ತರು ಸಂತೃಪ್ತಭಾವ ಅನುಭವಿಸಿದರು. ಸೋಲಿಗರ ಸಂಭ್ರಮ: ಬಿಳಿಗಿರಿರಂಗನ ಬೆಟ್ಟದ ಪುರಾಣಿ, ಹೊಸ ಜೀರಿಗೆ, ಗದ್ಯ, ಮಂಜಿಗುಡ್ಡೆ, ಬಂಗ್ಲೆಪೋಡುಗಳು, ಗೊಂಬೆಗಲ್ಲು, ದೊಡ್ಡಸಂಪಿಗೆ ಇತರೆ ಹಾಡಿಯ ಸೋಲಿಗರು ರಂಗಪ್ಪನ ತೇರು ನೋಡಲು ಪರಿವಾರ ಸಮೇತ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತೇರಿಗೆ ನವ ವಿವಾಹಿತರು ಹಣ್ಣು , ಧವನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ರೈತರು ಬೆಳೆದ ರಾಗಿ, ಭತ್ತ, ಜೋಳ, ಕಬ್ಬು, ಅವರೆ,ಅಲಸಂದೆ, ಹುರಳಿ, ಹೆಸರು, ನವಣೆ ಇತರೆ ಧಾನ್ಯಗಳನ್ನು ರಥಕ್ಕೆ ಸಲ್ಲಿಸಿ ಹರಕೆ ಪೂರೈಸಿದರು. ಹಳ್ಳಿಗಳಿಂದ ಬಂದಿದ್ದ ಭಕ್ತರು ಅಕ್ಕಿ, ಬೆಲ್ಲ,ಕಾಯಿ, ಹಸಿಕಡ್ಲೆಯನ್ನು ನೀರಿನಲ್ಲಿ ನೆನೆಸಿ ಜತೆಗೆ ಕಜ್ಜಾಯ ಬೆರೆಸಿ (ಬ್ಯಾಟಮಣೆ) ಪ್ರಸಾದವಾಗಿ ಸ್ವೀಕರಿಸಿದರು. ವರದಿ. ಎಸ್.ಪುಟ್ಟಸ್ವಾಮಿಹೊನ್ನೂರು3
- ರೀಲ್ಸ್ಗೆ ಸ್ಫೋಟ ಸ್ಟಂಟ್, ನಂತರ ಕ್ಷಮೆ ರಜತ್ ಕಿಶನ್ ವಿವರಣೆ, ವಿಡಿಯೋ ವೈರಲ್1
- *ಕಳ್ಳತನ ಮಾಡುವುದು ಕಂಡರೆ daily 112* ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಭಾಗ "ಶೂ" ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ಕಳ್ಳತನ ಮಾಡಿಕೋಂಡು ಹೋಗುವ ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಸರ್ 🤝 #Theft #Robbery #Burglary #Stealing #CrimeNews #BreakingNews #CCTV #CCTVFootage #CaughtOnCamera #CaughtOnCCTV #BikeTheft (ಬೈಕ್ ಕಳ್ಳತನ), #GoldTheft (ಚಿನ್ನದ ಕಳ್ಳತನ), #ChainSnatching (: #PoliceInvestigation #KarnatakaPolice Be careful while parking your vehicles near a Electric Transformers1
- ಮಳವಳ್ಳಿ ತಾಲೂಕಿನ ಡಿ ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಬಿಲ್ವಾ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ವಿಮಾನ ಗೋಪುರ ಕಳಸಾರೋಣ ಕನಕಪುರ ಮತ್ತು ಸಿದ್ದಗಂಗಾ ಶ್ರೀಗಳಿಂದ ವಿದ್ಯುಕ್ತ ಚಾಲನೆ ಮಳವಳ್ಳಿ ತಾಲೂಕಿನ ಡಿ ಹಲಸಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಬಿಲ್ಲುವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ನೂತನವಾಗಿ ನಿರ್ಮಿಸಿರುವ ರಾಜಗೋಪುರದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದ್ದು ವಿಮಾನ ಗೋಪುರದ ಕಳಸರೋಹಣ ಕಾರ್ಯಕ್ರಮ ಅಪಾರ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸದಸ್ಯರ ಗವಿಮಠದ ಶ್ರೀ ಷಡಕ್ಷರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಂಪ್ರದಾಯ ಬದ್ಧವಾಗಿ ಬುದವಾರ ಜರಗಿತು. ಗುರುವಾರ ಸಿದ್ದಗಂಗಾ ಮಠದ ಕಿವಿಯ ಶ್ರೀಗಳು ಆಗಮಿಸಿ ವಿಮಾನ ಗೋಪುರದ ಕಳಶರೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಹರ ಗುರು ಚರ ಮೂರ್ತಿಗಳಿಗೂ ಗಣ್ಯರಿಗೂ ಷಡಕ್ಷರ ಗವಿಮಠದ ವತಿಯಿಂದ ಅಭಿನಂದಿಸಲಾಯಿತು. ವಿಮಾನ ಗೋಪುರದ ಕಳಸಾರವನ ಕಾರ್ಯಕ್ರಮದ ದೃಶ್ಯವನ್ನು ದ್ರೋಣ ಕ್ಯಾಮರದಲ್ಲಿ ಸರಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು ಬನ್ನಿ ನಾವು ನೋಡೋಣ ಕಳಸಾರೋಣ ಕಾರ್ಯಕ್ರಮದ ವಿಶೇಷ ದೃಶ್ಯವನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗೋಣ ಗುರು ಕೃಪೆಗೆ ಪಾತ್ರರಾಗೋಣ1