Shuru
Apke Nagar Ki App…
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ ಬೊಲೆರೊ ವಾಹನದಲ್ಲಿ ಬಂದ ಕಳ್ಳರು ಎರಡು ಹಸು ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ #ಕಲಬುರಗಿ #ಚಿಂಚೋಳಿ #ಕಳವು #ಸಿಸಿಟಿವಿ
Anand Kumar
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ ಬೊಲೆರೊ ವಾಹನದಲ್ಲಿ ಬಂದ ಕಳ್ಳರು ಎರಡು ಹಸು ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ #ಕಲಬುರಗಿ #ಚಿಂಚೋಳಿ #ಕಳವು #ಸಿಸಿಟಿವಿ
More news from ಕರ್ನಾಟಕ and nearby areas
- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ ಬೊಲೆರೊ ವಾಹನದಲ್ಲಿ ಬಂದ ಕಳ್ಳರು ಎರಡು ಹಸು ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ #ಕಲಬುರಗಿ #ಚಿಂಚೋಳಿ #ಕಳವು #ಸಿಸಿಟಿವಿ1
- BIG BREAKING NEWS || ಗುರುಶಿಣಗಿ ಬ್ಯಾರೇಜ್ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್ನ ಒಟ್ಟು 20 ಗೇಟ್ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ. #BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates BIG BREAKING NEWS || ಗುರುಶಿಣಗಿ ಬ್ಯಾರೇಜ್ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್ನ ಒಟ್ಟು 20 ಗೇಟ್ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ. #BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates1
- "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ ಉಮೇಶ ಕೆ. ಮುದ್ನಾಳ್" 'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ' ಕಲ್ಯಾಣ ವಾರ್ತೆ -ಯಾದಗಿರಿ ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ. ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು. ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಪ್ರಶ್ನಿಸಿದರು. ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.1
- ಗುರುಮಠಕಲ್ ಪಟ್ಟಣದ ಜೆ.ಪಿ. (ಪನ್ನಲಾಲ್) ಕಲ್ಯಾಣ ಮಂಟಪದಲ್ಲಿ ನಡೆದ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಕೆಪಿಎಸ್ ಪ್ರೌಢ ವಿಭಾಗ, ಗಾಜರಕೋಟದ ಶಿಕ್ಷಕಿ ಶ್ರೀಮತಿ ಶೈಲಜಾ ಬೇಲಿ ಅವರನ್ನು ಪೂಜ್ಯಶ್ರೀಗಳು ಇದ್ದರೂ. ಗುರುಮಠಕಲ್: ಶಿಕ್ಷಕರ ಸೇವೆ ಎಂದರೆ ಕೇವಲ ಪಾಠ ಬೋಧನೆಗೆ ಸೀಮಿತವಲ್ಲ ಉತ್ತಮ ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿಯಾಗಿದೆ ಎಂದು ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಹೈದರಾಬಾದ್ ರಸ್ತೆಯ ಜೆ.ಪಿ. (ಪನ್ನಲಾಲ್) ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರೌಢ ವಿಭಾಗ, ಗಾಜರಕೋಟದ ವೃತ್ತಿ ಶಿಕ್ಷಕಿ ಶ್ರೀಮತಿ ಶೈಲಜಾ ಬೇಲಿ ಅವರ ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ನೆರಡಗಂ ಪಶ್ಚಿಮಾದ್ರಿಮಠದ ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ನಿವೃತ್ತಿ ಎಂಬುದು ಸೇವೆಯ ಅಂತ್ಯವಲ್ಲ ಜೀವನದ ಅನುಭವವನ್ನು ಸಮಾಜದ ಹಿತಕ್ಕಾಗಿ ಹಂಚಿಕೊಳ್ಳುವ ಹೊಸ ಪಯಣದ ಆರಂಭವಾಗಿದೆ ಎಂದು ಹೇಳಿದರು. ನಿವೃತ್ತ ಉಪನ್ಯಾಸಕ ಅಖಂಡೇಶ್ವರ ಸ್ವಾಮಿ ಹಿರೇಮಠ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಸರ್ಕಾರಿ ಪ್ರೌಢ ಶಾಲೆ (ಬಾಲಕೀಯರ ಉರ್ದು) ಮುಖ್ಯಗುರು ಹಣಮಂತರಾವ ಗೊಂಗ್ಲೆ, ಕೆಪಿಎಸ್ ಗಾಜರಕೋಟದ ಮುಖ್ಯಗುರು ಶರಣಪ್ಪ ಪಾಂಚಾಳ, ಶೈಲಜಾ ಬೇಲಿ ಅವರ ಶಿಸ್ತು, ಕರ್ತವ್ಯನಿಷ್ಠೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಮತ್ತು ಗುಣಮಟ್ಟದ ಬೋಧನಾ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ಈ ವೇಳೆ ಶೈಲಜಾ ಬೇಲಿ ಅವರಿಗೆ ಶಾಲು ಹೊದಿಸಿ, ಫಲಕ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಶಿಕ್ಷಕ ಸಂಘಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಕುಟುಂಬ ಸದಸ್ಯರು ಸೇರಿದಂತೆ ಇತರರು ಇದ್ದರೂ.2
- ಲಂಚಕ್ಕೆ ಬೇಡಿಕೆ ಭ್ರಷ್ಟ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾ ಬಲೆಗೆ ಆಸ್ತಿ ವಿಷಯಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಹೊರವಲಯದ ಹಾಗರಗಾ ಗ್ರಾಮದಲ್ಲಿ ನಡೆದಿದೆ.ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕ ಗ್ರಾಪಂ ಕಾರ್ಯದರ್ಶಿ ವೇದಾಂಗ. ಅಜಾದಪೂರ ಗ್ರಾಮದ ನಿವಾಸಿ ದಸ್ಮಾಬಾಯಿ ಅವರಿಗೆ ಗಂಡನ ನಿವೇಶನ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು.ಈ ವರ್ಗಾವಣೆ ಸಂಬಂಧ ಕೇಳಲು ಹೋದ ಆಕೆಯ ಅಳಿಯನಿಗೆ ಲಂಚ ಬೇಡಿದ ಗ್ರಾಪಂ ಕಾರ್ಯದರ್ಶಿ, ಅಳಿಯ ಸಂಜೀವ್, ನೀಡಿದ ದೂರು ಆಧರಿಸಿ ಲೋಕಾಯುಕ್ತರ ಮಿಂಚಿನ ಕಾರ್ಯಾಚರಣೆನಡೆಸಿ, ಸಂಜಿವ್ ನ ಬಳಿ 9950 ರೂಪಾಯಿ ನಗದು ಹಣ ಲಂಚದ ರೂಪದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರಾಪ್ ಮಾಡಲಾಗಿದೆ. ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್- ರವಿ. ಪವಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು1
- ಆಶ್ಲೇಷೆ ಮಳೆ ಆರಂಭ: ರೈತರಲ್ಲಿ ಹೊಸ ನಿರೀಕ್ಷೆ : ಜೋಳ, ತೊಗರಿ, ಸೋಯಾಬೀನ್ ಬೆಳೆಗಳಿಗೆ ಲಾಭ ಚಿಂಚೋಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಶ್ಲೇಷೆ ನಕ್ಷತ್ರದ ಅವಧಿ ಆರಂಭವಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಶ್ಲೇಷೆ ಮಳೆ ಸುರಿದರೆ ಜೋಳ, ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ದೊರೆಯಲಿದ್ದು, ಬೆಳೆಗಳ ಬೆಳವಣಿಗೆ ವೇಗ ಪಡೆಯುವ ಸಾಧ್ಯತೆ ಇದೆ. ಆಶ್ಲೇಷೆ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಕೃಷಿಕರು ತಿಳಿಸಿದ್ದಾರೆ1
- ಪೋತ್ನಾಳದಲ್ಲಿ ಭೀಕರ ಅಗ್ನಿ ಅವಘಡ ಸಂಜನಾ ಫೋಟೋ ಸ್ಟುಡಿಯೋ' ಭಸ್ಮ, ಲಕ್ಷಾಂತರ ರೂ. ನಷ್ಟ!4